ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜೂನ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬೆಳೆ ವಿಮೆ : ಜುಲೈ 31 ರವರೆಗೆ ವಿಸ್ತರಣೆ

ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿಯಲ್ಲಿ ರೈತರು ಬೆಳೆ ವಿಮೆ ಪಾವತಿ ಮಾಡಲು ಕೊನೆಯ ದಿನಾಂಕವನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಭಾರ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಶಶಿಕುಮಾರ್ ತಿಳಿಸಿದ್ದಾರೆ.         2014 ನೇ ಸಾಲಿನ ಮುಂಗಾರು ಹಂಗಾಮಿನ ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ ವಿಮೆ ಪಾವತಿಸಲು ಇದೇ ಜೂನ್ 30 ಕೊನೆ ದಿನಾಂಕವಾಗಿತ್ತು. ರೈತ ಬಾಂಧವರಿಗೆ ಹೆಚ್ಚಿನ ಅನೂಕೂಲ ಕಲ್ಪಿಸುವ ನಿಟ್ಟಿನಲ್ಲಿ ಇದೇ ಜುಲೈ 31ರವರೆಗೆ ರಾಜ್ಯ ಸರ್ಕಾರ ವಿಸ್ತರಣೆ ಮಾಡಿದ್ದು ರೈತರು ಇದರ ಸದುಪಯೋಗ ಪಡೆಯಿರಿ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳೆ ನಿಮ್ಮ ಭವಿಷ್ಯವನ್ನು ಉತ್ತಮಪಡಿಸಿಕೊಳ್ಳಿ: ಬಡಗಿ ರಾಮಣ್ಣ

ಹುಳಿಯಾರು: ಕೈಗಾರಿಕ ತರಬೇತಿ ಪಡೆದ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉತ್ತಮಪಡಿಸಿಕೊಳ್ಳುವ ಮೂಲಕ ತಂದೆ ತಾಯಿಗಳಿಗೆ ನೆರವಾಗಬೇಕೆಂದು ಸಂಸ್ಥೆಯ ಕಾರ್ಯದರ್ಶಿ ಬಡಗಿ ರಾಮಣ್ಣ ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಯೋಗಿನಾರಾಯಣ ಕೈಗಾರಿಕಾ ತರಬೇತಿ ಶಾಲೆಯಲ್ಲಿ ನಡದ ವಿದ್ಯಾರ್ಥಿ ಬೀಳ್ಕೊಡುಗೆ ಸಮಾರಂಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಬಡಗಿ ರಾಮಣ್ಣ ಮಾತನಾಡುತ್ತಿರುವುದು ಪಟ್ಟಣದ ಯೋಗಿನಾರಾಯಣ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆದ ವಿದ್ಯಾರ್ಥಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಪಟ್ಟಣದಲ್ಲಿನ ಕೈಗಾರಿಕೆಗಳನ್ನು ಸೇರಲು ಇಲ್ಲಿ ಉತ್ತಮ ತಾಂತ್ರಿಕ ಕೌಶಲ್ಯದ ತರಬೇತಿ ನೀಡಲಾಗಿದ್ದು ಆ ಮೂಲಕ ಅವರುಗಳು ಕೌಶಲ್ಯಯುತ ಕಾರ್ಯಗಳಲ್ಲಿ ತೊಡಗಿಕೊಳ್ಳಬಹುದಾಗಿದೆ ಎಂದರು . ವಿದ್ಯಾರ್ಥಿ ಬೀಳ್ಕೊಡುಗೆ ಸಮಾರಂಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಸಣ್ಣವರದಯ್ಯ ಮಾತನಾಡಿದರು ಸಂಸ್ಥೆಯ ಉಪಾಧ್ಯಕ್ಷ ಸಣ್ಣವರದಯ್ಯ ಅಧ್ಯಕ್ಷತೆ ವಹಿಸಿದ್ದರು.ಪ್ರಾಂಶುಪಾಲ ಸಿ.ಎನ್ ಬಸವರಾಜು ಹಿತವಚನ ಹೇಳಿದರು.ನಿರ್ದೇಶಕ ಮೆಡಿಕಲ್ ಶ್ರೀನಿವಾಸ್, ತರಬೇತಿ ಅಧಿಕಾರಿಗಳಾದ ವಿಜಯ್ ಕುಮಾರ್,ಅತೀಕ್ ಸಾಬ್ ,ಸಾಗರ್,ರಮೇಶ್ ಇನ್ನಿತರರಿದ್ದರು.ವಿಧ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ನಿಧನ;ಗ್ರಾ.ಪಂ ಸದಸ್ಯ ಶ್ರೀನಿವಾಸ್

ಗ್ರಾಮಪಂಚಾಯ್ತಿ ಸದಸ್ಯರಾಗಿದ್ದ ಹೆಚ್.ವಿ.ಶ್ರೀನಿವಾಸ್ ಹೃದಯಾಘಾತದಿಂದ ಭಾನುವಾರ ಮಧ್ಯಾಹ್ನ ನಿಧನರಾದರು. ಕೆಲಸದ ನಿಮಿತ್ತ ತಿಪಟೂರಿಗೆ ತೆರಳಿದ್ದ ಅವರು ಅಲ್ಲಿಯೇ ಅಸ್ವಸ್ಥರಾಗುತ್ತಿದ್ದಂತಯೆ ಕೂಡಲೇ ಅಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಹುಳಿಯಾರಿನ ನಿವಾಸದಲ್ಲಿ ಮೃತರ ಅಂತಿಮ ದರ್ಶನ ಪಡೆದ ಶಾಸಕ ಸಿ.ಬಿ.ಸುರೇಶ್ ಬಾಬು ಕುಟುಂಬಕ್ಕೆ ಸಾಂತ್ವನ ಹೇಳಿದರು.ತಾಪಂ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್,ಗ್ರಾಪಂ ಅಧ್ಯಕ್ಷೆ ಕಾಳಮ್ಮ,ಸದಸ್ಯರುಗಳಾದ ಧನುಷ್ ರಂಗನಾಥ್,ಅಶೋಕ್ ಬಾಬು,ಗೀತಾಬಾಬು,ಪಟಾಕಿ ಶಿವಣ್ಣ,ಬಾಲರಾಜು,ರಾಘವೇಂದ್ರ,ಹೇಮಂತ,ಅಹ್ಮದ್ ಖಾನ್ ಸೇರಿದಂತೆ ಗ್ರಾಪಂ ಸದಸ್ಯರುಗಳು , ಸಿಬ್ಬಂದಿ ವರ್ಗದವರು ಮುಂತಾದವರು ಆಗಮಿಸಿ ಮೃತರ ಅಂತಿಮ ದರ್ಶನ ಪಡೆದರು.ಮೃತರ ಅಂತ್ಯಕ್ರಿಯೆ ಸೋಮವಾರ ನಡೆಯಲಿದೆ. 

ಕಡೆಗೂ ಎಚ್ಚೆತ್ತ ಆರೋಗ್ಯ ಇಲಾಖೆ : ರಂಗನಕೆರೆ ಗ್ರಾಮಕ್ಕೆ ತಾಲ್ಲೂಕು ವೈದ್ಯಾಧಿಕಾರಿ ಭೇಟಿ

ಕಳೆದ ಹದಿನೈದು ದಿನಗಳಿಂದ ಚಿಕೂನ್ ಗುನ್ಯಾ ಶಂಕೆಯಿಂದ ನರಳುತ್ತಿದ್ದ ಹೋಬಳಿಯ ರಂಗನಕೆರೆ ಗ್ರಾಮದ ಬಗ್ಗೆ ಪತ್ರಿಕೆಯಲ್ಲಿ ವರದಿ ನೋಡಿದ ಮೇಲೆ ಎಚ್ಚೆತ್ತ ಆರೋಗ್ಯ ಇಲಾಖೆಯ ತಾಲ್ಲೂಕು ವೈದ್ಯಾಧಿಕಾರಿ ಶಿವಕುಮಾರ್‌ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಚಿಕೂನ್ ಗುನ್ಯಾ ರೋಗ ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಗ್ರಾಮದಲ್ಲಿ ಸಂಚರಿಸಿ 25ಕ್ಕೂ ಹೆಚ್ಚು ಮಂದಿಗೆ ಮಂಡಿನೋವು,ಕೀಲುನೋವು ಕಾಣಿಸಿಕೊಂಡಿದ್ದ ರೋಗಪೀಡಿತರನ್ನು ಪರೀಕ್ಷಿಸಿದ ನಂತರ ಇಬ್ಬರಿಗೆ ಚಿಕುನ್ ಗುನ್ಯಾ ದೃಢಪಟ್ಟಿದೆ ಎಂದರು. ಗ್ರಾಮದಲ್ಲಿ ಸ್ವಚ್ಛತೆಯಿದ್ದು ಕುಡಿಯುವ ನೀರಿನ ಸಿಸ್ಟನ್ ಆಗಾಗ ಬ್ಲಿಚಿಂಗ್ ಪೌಡರ್ ಹಾಕಿ ಸ್ವಚ್ಛಗೊಳಿಸದ ಕಾರಣ ರೋಗ ಕಾಣಿಸಿಕೊಂಡಿರಬಹುದು ಎಂದ ಅವರು ಈ ಬಗ್ಗೆ ಗ್ರಾ.ಪಂ ಅಧಿಕಾರಿಗಳಿಗೆ ಕುಡಿಯುವ ನೀರಿನ ಘಟಕ ಸ್ವಚ್ಛಗೊಳಿಸುವಂತೆ ಹಾಗೂ ನೀರಿನ ಮಾದರಿ ಪರೀಕ್ಷೆ ಮಾಡಿಸುವಂತೆ ಸೂಚಿಸಿದರು. ಕಳೆದೊಂದು ವಾರದಿಂದ ಜ್ವರದ ಬಾಧೆಯಿಂದ ನರಳುತ್ತಿರುವ ಸಿಂಚನ ಎಂಬ ಐದು ವರ್ಷದ ಬಾಲಕಿಯ ರಕ್ತ ಪರೀಕ್ಷೆಗೆ ಕಳುಹಿಸಲಾಗಿದ್ದು ಸೋಮವಾರದಿಂದ ಗ್ರಾಮಕ್ಕೆ ಒಬ್ಬರು ವೈದ್ಯರನ್ನು ಕಳುಹಿಸುವ ಮೂಲಕ ಬಾಧಿತರಿಗೆ ಚಿಕಿತ್ಸೆ ನೀಡಲಾಗುವುದೆಂದರು. ಶನಿವಾರವಷ್ಟೆ ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಹಾಗೂ ಶಾಸಕ ಸಿ.ಬಿ.ಸುರೇಶ್ ಬಾಬು ಉಪಸ್ಥಿತಿಯಲ್ಲಿ ನಡೆದ ಆರೋಗ್ಯಸಭೆಯಲ್ಲಿ ದಸೂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ವೈದ್ಯರ ನೇಮಕ

ಪಹಣಿ ತಿದ್ದುಪಡಿ ಆಂದೋಲನದ ಪ್ರಯೋಜನ ಪಡೆದುಕೊಳ್ಳಿ : ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ

ಈ ಹಿಂದೆ ಪಹಣಿ ಸೇರಿದಂತೆ ಇತರ ದಾಖಲೆಗಳನ್ನು ಕೈಬರಹದಲ್ಲಿ ನೀಡುತ್ತಿದ್ದು ಆಗ ಸಾಕಷ್ಟು ತಪ್ಪಾಗಿವೆ ಹಾಗೂ ಕಂಪ್ಯೂಟರ್ ಗೆ ಪಹಣಿಗಳನ್ನು ಎಂಟ್ರಿ ಮಾಡುವಾಗಲೂ ಕೆಲ ದೋಷಗಳಾಗಿದ್ದು ಅವುಗಳನ್ನು ಸರಿ ಪಡಿಸುವ ನಿಟ್ಟಿನಲ್ಲಿ ಪಹಣಿ ತಿದ್ದುಪಡಿ ಆಂದೋಲನ ಹಮ್ಮಿಕೊಳ್ಳಲಾಗಿದ್ದು ಇದರ ಸದುಪಯೋಗವನ್ನು ಎಲ್ಲರೂ ಪಡೆಯುವಂತೆ ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ತಿಳಿಸಿದರು. ಪಹಣಿ ತಿದ್ದುಪಡಿ ಆಂದೋಲನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಮಾತನಾಡುತ್ತಿರುವುದು.              ಹುಳಿಯರು ಸಮೀಪದ ಹಂದನಕೆರೆಯಲ್ಲಿ ಶನಿವಾರ ನಡೆದ ಪಹಣಿ ತಿದ್ದುಪಡಿ ಆಂದೋಲನ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ಪಿಂಚಣಿ ಆದಾಲತ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಹಣಿ ತಿದ್ದುಪಡಿ ಆಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಸಾರ್ವಜನಿಕರು          ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರ ಆಸ್ತಿದಾಖಲೆ ಸೇರಿದಂತೆ ಇತರೆ ದಾಖಲೆಗಳಲ್ಲಿನ ದೋಷಗಳಿಂದ ಜನಸಾಮಾನ್ಯರು ಪರದಾಡುವಂತಾಗಿದ್ದು ತೊಂದರೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಯಲ್ಲಿನ ಎಲ್ಲಾ ದಾಖಲೆಗಳು ಕಂಪ್ಯೂಟರೀಕರಣ ಮಾಡಿದ್ದು ಇನ್ನು ಮುಂದೆ ಯಾವುದೇ ಕಾರಣಕ್ಕು ಜಮೀನು ದಾಖಲೆಪತ್ರಗಳಲ್ಲಿ ವ್ಯತ್ಯಾಸಗಳು ಉಂಟಾಗದಂತೆ ನೋಡಿಕೊಳ್ಳಲಾಗುವುದು ಎಂದರು. ಖಾತೆ ಬದಲಾವಣೆ ಮಾಡಿಕೊಳ್ಳುವಾಗಲೂ ಸಮಸ್ಯೆಗಳು ಕಂಡುಬರುತ್ತಿದ್ದು ಮುಂದಿನ ದಿನಗಳಲ್ಲಿ ಖಾತಾ ಬದಲಾವಣಾ ಆಂದೋಲ

ಹುಳಿಯಾರಿನಲ್ಲಿ ಕಸದ್ದೇ ಕಾರುಬಾರು

ಜಿಲ್ಲೆಯಲ್ಲೇ ಅತಿ ದೊಡ್ಡ ಹೋಬಳಿ ಕೇಂದ್ರವಾಗಿರುವ, ತಾಲ್ಲೂಕಿನ ಅರ್ಹತೆ ಹೊಂದಿದ್ದರೂ  ಪಟ್ಟಣವಾಗೇ ಉಳಿದಿರುವ , ಜಿಲ್ಲೆಯಲ್ಲಿಯೇ 33 ಸದಸ್ಯರನ್ನು ಹೊಂದಿರುವ ಅತಿ ದೊಡ್ಡ ಪಂಚಾಯ್ತಿಯಾಗಿರುವ ಹುಳಿಯಾರಿನಲ್ಲಿ ಕಸದ್ದೇ ಕಾರುಬಾರಾಗಿದ್ದು , ಪಟ್ಟಣದ ತುಂಬೆಲ್ಲಾ ಕಸದ ರಾಶಿ ರಾಶಿ ರಾರಾಜಿಸುತ್ತಿದ್ದು, ಜನತೆ ಅಸಹ್ಯಪಟ್ಟುಕೊಂಡು ಓಡಾಡುವಂತಾಗಿದೆ. ಆಸ್ಪತ್ರೆಯ ಪ್ರವೇಶದ್ವಾರದಲ್ಲೆ ಕಾಣಸಿಗುವ ಕಸದ ರಾಶಿ . ಹೌದು .ಹದಿಮೂರು ವಾರ್ಡ್ ಗಳನ್ನು ಹೊಂದಿ ಸರಿಸುಮಾರು 17 ಸಾವಿರ ಜನ ಸಂಖ್ಯೆಯನ್ನು ಮೀರಿರುವ ಪಟ್ಟಣದಲ್ಲಿ ಕಸವಿಲೇವಾರಿಯದ್ದೇ ದೊಡ್ಡ ಸಮಸ್ಯೆಯಾಗಿದೆ. ಪ್ರತಿ ವಾರ್ಡ್ ನಲ್ಲೂ ಕಸ ಶೇಖರಣೆಗೆ ಸೂಕ್ತ ವ್ಯವಸ್ಥೆಯಿಲ್ಲದ ಕಾರಣ ಗುಂಡಿಗಳು,ಚರಂಡಿ ಬದಿ ಹಾಗೂ ಖಾಲಿ ನಿವೇಶನಗಳೇ ಕಸ ಸಂಗ್ರಹಗಾರವಾಗಿ ನಿವಾಸಿಗಳು ಎಲ್ಲೆಂದರಲ್ಲಿ ಎಸೆಯುವ ತ್ಯಾಜ್ಯದಿಂದ ಅನೈರ್ಮಲ್ಯಕ್ಕೆ ಕಾರಣವಾಗಿದೆ. ಕಸದ ಸಂಗ್ರಹಗಾರವಾಗಿರುವ ಕೆರೆ ಅಂಗಳ ಪಟ್ಟಣದ ಬಸ್ ನಿಲ್ದಾದ ಅಂಗಡಿಗಳ ಬಳಿ , ರಾಜ್ ಕುಮಾರ್ ರಸ್ತೆಯ ಆಸ್ಪತ್ರೆ ಕಾಂಪೌಡ್ ಬಳಿ, ಹುಳಿಯಾರಮ್ಮದೇವಿ ವೃತ್ತ,ಅಜಾದ್ ನಗರ,ಕೆಂಚಾಂಬ ನಗರ,ರಾಂಗೋಪಾಲ್ ಸರ್ಕಲ್, ಕೆಇಬಿ ಕಚೇರಿಯ ಕಾಂಪೌಡ್ ಬಳಿ , ಹುಳಿಯಾರು ಅಮಾನಿಕೆರೆ ಏರಿಯ ಪಕ್ಕ ಸೇರಿದಂತೆ ಎಲ್ಲಾ ವಾರ್ಡ್ ಗಳ ಗಲ್ಲಿಯೂ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದರೂ ಸಹ ಕಂಡರು ಕಾಣದಂತೆ ಜನ ಇಲ್ಲಿಯೇ ಸಂಚರಿಸುತ್ತಿದ್ದಾರೆ.

ಸಮಾಧಿ ಕಿತ್ತ ವಿವಾದ : ಗ್ರಾಮಸ್ಥರಿಂದ ಠಾಣೆ ಮುತ್ತಿಗೆ

           ಜಮೀನಿನಲಿದ್ದ ಸಮಾಧಿಯೊಂದನ್ನು ಕಿತ್ತು ಹಾಕಿರುವ ವಿಚಾರ ವಿವಾದಕ್ಕಿಡಾಗಿದ್ದು ಈ ಸಂಬಂಧ ಸಮಾಧಿ ಕಿತ್ತವರನ್ನು ಬಿಟ್ಟು 9 ಮಂದಿ ಅಮಾಯಕರ ಮೇಲೆ ಕೇಸು ದಾಖಲು ಮಾಡಿದ್ದಾರೆ ಎಂದು ಆರೋಪಿಸಿ ಬಡಕೆಗುಡ್ಲು ಗ್ರಾಮಸ್ಥರು ಗುರುವಾರ ಇಲ್ಲಿನ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಪ್ರಸಂಗ ನಡೆಯಿತು. ಸಮಾಧಿ ಕಿತ್ತ ವಿಷಯವಾಗಿ ಅಮಾಯಕರ ಮೇಲೆ ಕೇಸು ದಾಖಲಿಸಿದ್ದಾರೆಂದು ಆರೋಪಿಸಿ ಹುಳಿಯಾರು ಹೋಬಳಿ ಬಡಕೆಗುಡ್ಲು ಗ್ರಾಮಸ್ಥರು ಗುರುವಾರ ಪೊಲೀಸ್ ಠಾಣೆ ಆವರಣದಲ್ಲಿ ಜಮಾಯಿಸಿರುವುದು. ವಿವಾದ : ಪೊಲೀಸ್ ಸಬ್ ಇನ್ಸ್ ಸ್ಪೆಕ್ಟರ್ ಮುದ್ದವೀರಪ್ಪ ಎಂಬುವರು ಬಡಕೆಗುಡ್ಲು ಗ್ರಾಮದಲ್ಲಿ ಜಮೀನಿನನ್ನು ಕೊಂಡಿದ್ದು ಅವರು ನಿಧನದ ನಂತರ ಅಲ್ಲಿಯೇ ಅವರ ಪಾರ್ಥೀವ ಶರೀರವನ್ನು ಬಡಕೆಗುಡ್ಲು ಗ್ರಾಮದ ಜಮೀನಿನಲ್ಲಿ ಸಮಾಧಿ ಮಾಡಲಾಗಿತ್ತು. ಕಳೆದ ನಾಲ್ಕೈದು ದಿವಸಗಳ ಹಿಂದೆ ಈ ಸಮಾಧಿಯನ್ನು ಕಿತ್ತು ಹಾಕಿರುವುದು ವಿವಾದಕ್ಕೆ ಎಡೆ ಮಾಡಿದ್ದು, ಠಾಣೆ ಮೆಟ್ಟಿಲೇರಿದೆ.                   ಕಳೆದ 7 ವರ್ಷಗಳ ಹಿಂದೆ ನಿಧನ ಹೊಂದಿದ್ದ ತಮ್ಮ ತಂದೆಯ ಸಮಾಧಿಯನ್ನು ಕಳೆದ ನಾಲ್ಕೈದು ದಿವಸಗಳ ಹಿಂದೆ ಕೀಳಲಾಗಿದೆ ಎಂದು ಅವರ ಪುತ್ರ ಮೂಲತ: ತುಮಕೂರಿನ ವಾಸಿ ನಾಗರಾಜಗೌಡ ಅರೋಪಿಸಿದ್ದು ಬಡಕೆಗುಡ್ಲು ಗ್ರಾಮದ ಅನಂತಕುಮಾರ್, ರಾಜಪ್ಪ, ಬಿ.ಪಿ.ರಂಗಸ್ವಾಮಿ, ತಿಮ್ಮರಾಜು, ಬಿ.ಎ.ನಾಗರಾಜು, ಸಣ್ಣಕಾಮಯ್ಯ, ಬಿ.ಜಿ.ರಾಜಪ್ಪ, ಗೋವಿಂದರಾಜು, ಮುದ್ದಯ್ಯ ಎಂಬುವರ ಮ

ಸಾವಿರೂ ನಗದು ಹಾಗೂ ನೋಟ್ ಪುಸ್ತಕ ವಿತರಣೆ

ಆಟವಾಡುವಾಗ ಕೈಮುರಿದು ಕೊಂಡ ಎಂಪಿಎಸ್ ಶಾಲೆಯ ವಿದ್ಯಾರ್ಥಿಗೆ ಹುಳಿಯಾರಿನ ಕರ್ನಾಟಕ ರಕ್ಷಣಾ ವೇದಿಯವರು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರ ಜನ್ಮದಿನದ ಅಂಗವಾಗಿ ಸಾವಿರೂ ನಗದು ಹಾಗೂ ನೋಟ್ ಪುಸ್ತಕ ವಿತರಿಸಿದರು. ಅಧ್ಯಕ್ಷ ಕೋಳಿಶ್ರೀನಿವಾಸ್, ಚನ್ನಬಸವಯ್ಯ, ದಯಾನಂದ್,ಸಿದ್ದು,ಹರೀಶ್,ಮುರುಳಿ,ನವೀನ್ ಇತರರಿದ್ದಾರೆ.

ಕೈಗೆ ಬೆಳೆ ಬರುವಷ್ಟರಲ್ಲೇ ಹೆಸರು ಗಿಡಕ್ಕೆ ಕೀಟ ಬಾಧೆ : ಕಂಗಾಲಾದ ರೈತ

ವರದಿ: ಡಿ.ಆರ್.ನರೇಂದ್ರಬಾಬು           ಹುಳಿಯಾರು: ಪಟ್ಟಣದ ಸುತ್ತಮುತ್ತಲ ಕೆಲ ಗ್ರಾಮಗಳಲ್ಲಿ ರೈತರು ಬಿತ್ತನೆ ಮಾಡಿದ್ದ ಹೆಸರು ಸಮೃದ್ದವಾಗಿ ಬೆಳೆದು ಇನ್ನೇನು ಫಸಲು ಕೈಗೆ ಬರುವಂತ ಸಮಯದಲ್ಲಿ ಮಳೆ ಕೈಕೊಟ್ಟಿದಲ್ಲದೆ ಹೆಸರುಗಿಡಕ್ಕೆ ಕೊಂಬಿನಹುಳುಗಳು(ಸ್ಟಿಂಡಿಜ್ ಮಾಥ್) ಕಾಟ ತಗುಲಿದ್ದು ಹೊಲದಲ್ಲಿ ಅಚ್ಚಹಸಿರಾಗಿ ನಳನಳಿಸುತ್ತಿದ್ದ ಗಿಡಗಳು ಕೀಟದ ಬಾಯಿಗೆ ತುತ್ತಾಗಿ ರೈತರನ್ನು ಸಂಕಷ್ಟಕೀಡಾಗುವಂತೆ ಮಾಡಿವೆ. ಈಗಾಗಲೇ ಹೋಬಳಿಯ ದಸೂಡಿ,ದಬ್ಬಗುಂಟೆ,ಸೋಮನಹಳ್ಳಿ ಭಾಗಗಳಲ್ಲಿ ಪೂರ್ವಮುಂಗಾರು ಹಾಗೂ ಅಶ್ವಿನಿ ಮಳೆಗೆ ಹೆಸರು ಬಿತ್ತನೆ ಮಾಡಿದ್ದರಿಂದ ಹೆಸರಿಗೆ ಯಾವುದೇ ಕೀಟಬಾದೆಯಿಲ್ಲದೆ ಹುಲುಸಾಗಿ ಬೆಳೆದು ಇಲ್ಲಿನ ರೈತರಿಗೆ ಫಸಲು ಸಿಕ್ಕಿದ್ದು , ಕಳೆದ ಎರಡು ಮುರುದಿನಗಳಿಂದ ಹೆಸರುಗಿಡಗಳನ್ನು ಕಿತ್ತು ಕಾಳನ್ನು ಬೇರ್ಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಹುಳಿಯಾರು ಹೋಬಳಿ ದೊಡ್ಡಬಿದರೆ ಗ್ರಾಮದ ಹೊಲವೊಂದರಲ್ಲಿ ಕೊಂಬಿನಹುಳು ಬಾದೆಯಿಂದ ನಲುಗಿರುವ ಹೆಸರು.   ಒಳಚಿತ್ರದಲ್ಲಿ ಹೆಸರು ಗಿಡದಲ್ಲಿ ಕಂಡುಬಂದಿರುವ ಕೊಂಬಿನಹುಳು. ಹೋಬಳಿಯ ದೊಡ್ಡಬಿದರೆ ,ಚಿಕ್ಕಬಿದರೆ,ನಂದಿಹಳ್ಳಿ,ಗೂಬೆಹಳ್ಳಿ ಮತ್ತು ಕಂದಿಕೆರೆ ಹೋಬಳಿಯ ಕೆಲವು ಗ್ರಾಮಗಗಳಲ್ಲಿ ಮಳೆಯ ಕೊರತೆಯಿಂದಾಗಿ ಫಸಲಿನ ಇಳುವರಿ ಕಡಿಮೆಯಾಗಿ ಹೆಸರುಗಿಡಗಳೆಲ್ಲಾ ಒಣಗಿದ್ದು ಒಂದೆಡೆಯಾದರೆ, ಕೊಂಬಿನ ಹುಳುಗಳ ಕಾಟ ಕೂಡ ಹೆಚ್ಚಾಗಿ ಗಿಡದ ಎಲೆ,ಚಿಗುರನ್ನು ಭಕ್ಷ

ಉರಿಬಿಸಿಲಲ್ಲಿ ಪಹಣಿಗಾಗಿ ಪರದಾಟ

           ಹುಳಿಯಾರು ಮುಂಗಾರು ಬೆಳೆ ವಿಮೆ ಪರಿಹಾರ ಪಡೆಯುವ ಸಲುವಾಗಿ ಸಲ್ಲಿಸಬೇಕಾದ ದಾಖಲೆಗಳಲ್ಲಿ ಪಹಣಿಯು ಸಹ ಒಂದಾಗಿದ್ದು, ಅದನ್ನು ಪಡೆಯಲು ಗುರುವಾರದಂದು ಪಟ್ಟಣದ ನಾಢಕಚೇರಿಯ ಆಟಲ್ ಜನಸ್ನೇಹಿಕೇಂದ್ರದ ಎದುರು ಉರಿಬಿಸಿಲಿನಲ್ಲೇ ನಿಂತ ರೈತರು ಪಹಣಿಗಾಗಿ ಪರದಾಡುತ್ತಿದ್ದು ಕಂಡುಬಂತು. ಹುಳಿಯಾರಿನ ನಾಢಕಚೇರಿಯ ಆಟಲ್ ಜನ ಸ್ನೇಹಿಕೇಂದ್ರದ ಎದುರು ಉರಿಬಿಸಿಲಿನಲ್ಲೇ ಸರದಿಯಲ್ಲಿ ನಿಂತಿರುವ ರೈತರು.            ರಾಜ್ಯ ಸರಕಾರ ರೈತರಿಗೆ ಬೆಳೆವಿಮೆ ತುಂಬಲು ಜೂನ್‌ 30 ಅಂತಿಮ ದಿನ ನಿಗದಿಪಡಿಸಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆಗಳಲ್ಲಿ ಪಹಣಿಯು ಮುಖ್ಯವಾಗಿದ್ದು ಅದನ್ನು ಪಡೆಯಲು ರೈತರು ಒಮ್ಮೆಲೇ ಮುಗಿಬಿದಿದ್ದಾರೆ. ಎಲ್ಲರೂ ಒಮ್ಮೆಲೇ ಬಂದು ಪಹಣೆ ಪಡೆಯಲು ಮುಂದಾಗಿರುವುದರಿಂದ ನಾಢಕಚೇರಿ ಕೇಂದ್ರದ ಮುಂದೆ ನೂಕುನುಗ್ಗಲು ಉಂಟಾಗಿ ಒಬ್ಬರಿಗೊಬ್ಬರು ಜಗಳವಾಡುವ ಹಂತಕ್ಕೂ ಪರಿಸ್ಥಿತಿ ತಲುಪ್ಪಿತ್ತು.         ಎಲ್ಲಾ ಕಡೆ ಒಮ್ಮೆಲೇ ಪಹಣಿ ತೆಗೆಯುತ್ತಿರುವುದರಿಂದ ಸರ್ವರ್ ನಿಧಾನವಾಗಿರುವುದಲ್ಲದೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುವುದು ಸೇರಿದಂತೆ ಕೆಲ ತಾಂತ್ರಿಕ ತೊಂದರೆಗಳ ಹಿನ್ನಲೆಯಲ್ಲಿ ಪಹಣಿಗಳು ಬರುವುದು ಸಹ ನಿಧಾನವಾಗಿದೆ.ಇದರಿಂದಾಗಿ ಪಹಣಿ ಪಡೆಯಲು ಬೆಳಿಗ್ಗೆಯಿಂದ ಸಂಜೆವರೆಗೂ ಕಾದು ಪಹಣಿ ಪಡೆಯುವಂತಾಗಿದೆ.

ರಂಗನಕೆರೆಯಲ್ಲಿ ಚಿಕುನ್ ಗುನ್ಯಾ ಉಲ್ಬಣ

          ಹುಳಿಯಾರು ಹೋಬಳಿಯ ಗಾಣಧಾಳು ಗ್ರಾ.ಪಂ ವ್ಯಾಪ್ತಿಯ ರಂಗನಕೆರೆ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಚಿಕುನ್ ಗುನ್ಯಾ ಕಾಯಿಲೆ ಕಾಣಿಸಿಕೊಂಡಿದ್ದು 20ಕ್ಕೂ ಹೆಚ್ಚು ಮಂದಿ ಕಾಯಿಲೆಗೆ ತುತ್ತಾಗಿದ್ದಾರೆ, ಶುರುವಿನಲ್ಲಿ ವಿಚಾರ ಅರಿತ ಆರೋಗ್ಯ ಇಲಾಖೆ ಸಹಾಯಕರು ರಕ್ತ ಪರೀಕ್ಷೆಗೆ ರಕ್ತ ಪಡೆದು ಹೋದವರು ಇದುವರೆಗು ತಿರುಗಿ ನೋಡಿಲ್ಲದಿರುವುದಕ್ಕೆ ಗ್ರಾಮಸ್ಥರು ಕಾಯಿಲೆ ಏನೆಂದು ಅರಿಯದೆ ಸರಿಯಾದ ಚಿಕಿತ್ಸೆ ದೊರೆಯದೆ ಪರಿತಪಿಸುತ್ತಿದ್ದಾರೆ.             ಸುಮಾರು 35 ಕುಟುಂಬಗಳಿರುವ ಈ ಗ್ರಾಮದಲ್ಲಿ ಪ್ರತಿ ಮನೆಯಲ್ಲೂ ಒಬ್ಬಿಬ್ಬರಿಗೆ ಮಂಡಿನೋವು, ಮೈಕೈನೋವು, ಜ್ವರ ಬಾಧೆಯಿಂದ ನರಳುತ್ತಿದ್ದಾರೆ. ಸಮೀಪದಲ್ಲೇ ಇರುವ ದಸೂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದ ವೈದ್ಯಾಧಿಕಾರಿ ಎಸ್.ಮಂಜುನಾಥ್ ವರ್ಗಾವಣೆಯಾದ ನಂತರ ಹೊಯ್ಸಳಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳನ್ನು ನಿಯೋಜಿಸಲಾದ್ದರೂ ಸಹ ವೈದ್ಯರ ಕೊರತೆ ಕಾಡುತ್ತಿದೆ. ವೈದ್ಯರಿಲ್ಲದೆ ಚಿಕಿತ್ಸೆಗೆ ಹೋಬಳಿ ಕೇಂದ್ರವಾದ ಹುಳಿಯಾರಿಗೆ ಬರುವ ಪರಿಸ್ಥಿತಿಯಿದೆ. ಬಸ್ ಸಂಚಾರವಿಲ್ಲದೆ ಈ ಊರಿಗೆ ಹುಳಿಯಾರಿತೆರಳಲು ದುಬಾರಿ ಹಣ ತೆತ್ತು ಆಟೋಗಳನ್ನು ಆಶ್ರಯಿಸಬೇಕಾಗಿದೆ. ಹಣವಿಲ್ಲದವರು ಚಿಕಿತ್ಸೆಯಿಲ್ಲದೆ ಮನೆಯಲ್ಲೇ ಕುಳಿತು ನರಳುವಂತಾಗಿದೆ.         ಸೊಳ್ಳೆ ಸಮಸ್ಯೆ: ಈ ಭಾಗದಲ್ಲಿ ಉತ್ತಮ ಮಳೆಯಾಗಿ ಕಳೆ ಹೆಚ್ಚಾದ್ದೇ ಸೊಳ್ಳೆಗಳ ಹೆಚ್ಚಳಕ್ಕೆ ಕಾರಣವಾಗಿ

ಕೆಂಕೆರೆಯಲ್ಲಿ ಶ್ರದ್ಧಾಭಕ್ತಿಯಿಂದ ಕಾರಬ್ಬ ಆಚರಣೆ

          ಮಾಡಿದ ಆರಂಭ ಕೈ ಹತ್ತಲು,ಬಿತ್ತಿದ ಬೆಳೆ ಕೈಸೇರಲು ರೈತಾಪಿ ವರ್ಗದಲ್ಲಿ ಹಿಂದಿನಿಂದ ಅನೇಕ ಆಚರಣೆಗಳು ಜಾರಿಯಲ್ಲಿದ್ದು ಅದರಲೊಂದು ಈ ಕಾರಹಬ್ಬ.  ಮುಂಗಾರಿನಲ್ಲಿ ರಾಗಿ,ಹುರುಳಿ,ತೊಗರಿ ಬೆಳೆ ಬಿತ್ತನೆಗೂ ಮುಂಚೆ ಕಾರಬ್ಬವನ್ನು ಆಚರಿಸುವ ಪರಿಪಾಟವಿದ್ದು ಈ ಬಾರಿ ತಾವು ಯಾವ ಬೆಳೆ ಬಿತ್ತಿದರೆ ಕೈ ಹತ್ತಲಿದೆ, ಹೆಚ್ಚು ಫಸಲು ದೊರೆಯಲಿದೆ ಹಾಗೂ ಈ ವರ್ಷ ಯಾವ ಫಸಲು (ಬೆಳೆ) ಅಧಿಕವಾಗಿ ಬೆಳೆದು ತಮ್ಮ ಕೈಸೇರಲಿದೆ ಎಂಬುದನ್ನು ನಂಬಿಕೆಯ ಆಧಾರದಲ್ಲಿ ತಿಳಿಯಲ್ಪಡಲು ಸಮೀಪದ ಕೆಂಕೆರೆ ಗ್ರಾಮದಲ್ಲಿ ಕಾರಬ್ಬವನ್ನು ಗ್ರಾಮದ ಹಿರಿಯರ ಸಮ್ಮುಖದಲ್ಲಿ ಗುರುವಾರ ಸಂಜೆ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದಲ್ಲಿ ಕಾರಬ್ಬದ ಅಂಗವಾಗಿ ಊರಿನ ಕಾರೆಕಲ್ಲಿನ ಹತ್ತಿರ ಧಾನ್ಯಗಳನ್ನು ತುಂಬಿದ ಮಡಿಕೆಯನ್ನು ಹೊಡೆಯುತ್ತಿರುವುದು.     ಆಚರಣೆ ಹೇಗೆ: ಗ್ರಾಮದ ಶ್ರೀರಂಗನಾಥಸ್ವಾಮಿ ದೇವಾಲಯದ ಬಳಿ ಇರುವ ಕಾರೇಕಲ್ಲನ್ನು ಗ್ರಾಮದ ಹಿರಿಯ ಮಾರ್ಗದರ್ಶನದಲ್ಲಿ ಯುವಕರು ಶುಚಿಗೊಳಿಸಿ ಸುಣ್ಣ ಹಾಗೂ ಕೆಂಪು ಬಣ್ಣಹಚ್ಚಿ ನಂತರ ಬೇವಿನ ಸೊಪ್ಪು ಮತ್ತು ಅಂಬಳ್ಳಿಯನ್ನು ಬಿಗಿಯಾಗಿ ಬಿಗಿದು ಕಟ್ಟಿ ಪೂಜೆಗೆ ಸಿದ್ದತೆ ಮಾಡಿರುತ್ತಾರೆ. ಗ್ರಾಮದ ಸಮೀಪವಿರುವ ಗ್ಯಾರಳ್ಳದ ಸದಾಶಿವಣ್ಣ ಎಂಬುವರ ಮನೆಯಿಂದ ತರಲಾಗುವ ಅರಿಶಿನ ಅನ್ನದ ನೈವೇದ್ಯ(ಕಿಚುಡಿ)ದ ಜೊತೆಗೆ ಒಂದು ಮಣ್ಣಿನ ಮಡಿಕೆಯಲ್ಲಿ ನೀರುಹಾಕಿ ತಾವು ಬೆಳೆಯುವ ಧಾನ

ಎಂ.ಪಿ.ರಾಮಕೃಷ್ಣಶೆಟ್ಟಿ. ನಿಧನ

          ಹುಳಿಯಾರು ಪಟ್ಟಣದಲ್ಲಿ ಕೊಬ್ಬರಿ,ಜವಳಿ ವ್ಯಾಪಾರದ ಮೂಲಕ ಗಣ್ಯ ವರ್ತಕರಾಗಿ ಗುರುತಿಸಿಕೊಂಡಿದ್ದ ಎಂ.ಪಿ.ರಾಮಕೃಷ್ಣಶೆಟ್ಟಿಯವರು ಮಂಗಳವಾರ ಮಧ್ಯಾಹ್ನ ತಮ್ಮ ಸ್ವಗೃಹದಲ್ಲಿ ವಿಧಿವಶರಾದರು.85 ವರ್ಷ ಬಾಳ್ವೆ ನಡಿಸಿದ ಇವರು ಇಬ್ಬರು ಮಕ್ಕಳು ಹಾಗೂ ಮಗಳನ್ನು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.ಹುಳಿಯಾರು ಆರ್ಯವೈಶ್ಯಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರಿಗೆ ಇಲ್ಲಿನ ಆರ್ಯವೈಶ್ಯಮಂಡಳಿಗೆ 25ವರ್ಷ ತುಂಬಿದ ಸಂದರ್ಭದಲ್ಲಿ ನಡೆದ ಕುಂಭಾಭಿಷೇಕ ಸಮಾರಂಭದಲ್ಲಿ ಕಳೆದ ಹದಿನೈದು ದಿನಗಳ ಹಿಂದಷ್ಟೆ ಸನ್ಮಾನಿಸಲಾಗಿತ್ತು.ಮೃತರಿಗೆ ಇಲ್ಲಿನ ಆರ್ಯವೈಶ್ಯಮಂಡಳಿಯ ನಿರ್ದೇಶಕರುಗಳ ಪರವಾಗಿ ಎಲ್.ಆರ್.ಚಂದ್ರಶೇಖರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಮೃತರ ಅಂತ್ಯಕ್ರಿಯೆ ಇಲ್ಲಿನ ಮುಕ್ತಿಧಾಮದಲ್ಲಿ ಬುಧವಾರ ಬೆಳಿಗ್ಗೆ ನೆರವೇರಿತು. ಜನಪ್ರತಿನಿಧಿಗಳು, ಬಂಧು ಬಾಂಧವರು ಮೃತರ ಅಂತಿಮ ದರ್ಶನ ಪಡೆದರು. ಎಂ.ಪಿ.ರಾಮಕೃಷ್ಣಶೆಟ್ಟಿ.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಅಗತ್ಯ

           ಗ್ರಾಮೀಣ ಪ್ರದೇಶದಲ್ಲಿಯೂ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು ಅವರಿಗೂ ಉತ್ತಮ ಪ್ರೋತ್ಸಾಹ ಸಿಕ್ಕರೆ ದೇಶದ ಆಸ್ತಿಯಾಗುತ್ತಾರೆ ಎಂದು ನೀರಾವರಿ ಹೋರಾಟಗಾರ ಡಾ.ಪರಮೇಶ್ವರಪ್ಪ ಹೇಳಿದರು. ಹುಳಿಯಾರು ಹೋಬಳಿ ಗಾಣದಾಳು ಕ್ಲಸ್ಟರ್ ನ ಶಾಲೆಗಳ ಮಕ್ಕಳಿಗೆ ಶಾರದಜಯರಾಮಪ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ ನೋಟ್ ಪುಸ್ತಕ ವಿತರಿಸಲಾಯಿತು. ಡಾ.ಪರಮೇಶ್ವರಪ್ಪ, ಜಿ.ಎಸ್.ಶ್ರೀನಿವಾಸ್, ಸಾ.ಚಿ.ನಾಗೇಶ್ ಮುಂತಾದವರು ಇದ್ದರು. ಹೋಬಳಿಯ ಗಾಣದಾಳು ಗ್ರಾಮದಲ್ಲಿ ಶಾರದಜಯರಾಮಪ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ ಗಾಣದಾಳು, ಮೇಲನಹಳ್ಳಿ, ಗುರುವಾಪುರ, ಕಂಪನಹಳ್ಳಿ, ಯಗಚಿಹಳ್ಳಿ ಮುಂತಾದ ಗ್ರಾಮಗಳ ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿ ಮಾತನಾಡಿದರು. ದೇಶದ ಸಾರ್ವಜನಿಕ ಆಡಳಿತದಲ್ಲಿ ಉತ್ತಮ ಹೆಸರು ಗಳಿಸಿರುವ ಬಹುತೇಕರು ಸರ್ಕಾರಿ ಶಾಲೆಗಳಲ್ಲಿ ಕನ್ನಡ ಭಾಷೆಯಲ್ಲಿಯೇ ಅಭ್ಯಾಸ ಮಾಡಿದವರಾಗಿದ್ದಾರೆ. ಅಂತಹವರನ್ನು ಮಾದರಿಯಾಗಿಟ್ಟುಕೊಂಡು ಸಾದನೆ ಮಾಡುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಶಾರದಜಯರಾಮಪ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಬೇಕು ಎಂಬ ಉದ್ದೇಶದಿಂದ ಪ್ರತಿವರ್ಷ ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ಮಕ್ಕಳಿಗೂ ನೋಟ್ ಪುಸ್ತಕ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.                              ಗಾಣದಾಳು ಗ್ರಾಪಂ ಅಧ್ಯಕ್ಷ ಜಿ.ಎಸ್.ಶ್ರೀನಿವಾಸ್ ಮಾ

ಕ್ಷೇತ್ರದ ಋಣ ತೀರಿಸುವುದೇ ತನ್ನ ಗುರಿ : ಬಿ.ಎಸ್.ಎಂ

              ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಗುರ್ತಿಸಿ ಜಯಶೀಲರನ್ನಾಗಿ ಮಾಡಿರುವ ಈ ಕ್ಷೇತ್ರದ ಮತದಾರ ಋಣ ನನ್ನ ಮೇಲಿದ್ದು ಅದನ್ನು ತೀರಿಸುವ ನಿಟ್ಟಿನಲ್ಲಿ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುವುದೆ ನನ್ನ ಗುರಿಯಾಗಿದೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಸಂಸದ ಬಿ.ಎಸ್.ಮುದ್ದಹನುಮೇಗೌಡ ತಿಳಿಸಿದರು. ಹುಳಿಯಾರು ಸಮೀಪದ ಸೀಗೆಬಾಗಿ ಗೇಟ್ ನ ಶ್ರೀದುರ್ಗಾಪರಮೇಶ್ವರಿ ದೇವಾಲಯದ ಆವರಣದಲ್ಲಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಹುಳಿಯಾರು ಹೋಬಳಿ ಸೀಗೆಬಾಗಿ ಗೇಟ್ ನಲ್ಲಿ ನಡೆದ ಸಮಾರಂಭದಲ್ಲಿ ಸಂಸದ ಬಿ.ಎಸ್.ಮುದ್ದಹನುಮೇಗೌಡ ಮಾತನಾಡಿದರು. ರಾಷ್ಟ್ರಾದ್ಯಂತ ಬಿಜೆಪಿ ಅಲೆಯಿದ್ದರೂ ಸಹ ಅದನ್ನು ತುಮಕೂರು ಕ್ಷೇತ್ರಕ್ಕೆ ಬಿಟ್ಟುಕೊಳ್ಳದೇ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ನನ್ನನ್ನು ಚುನಾಯಿಸಿದ ತಮ್ಮೆಲ್ಲರಿಗೂ ಆಬಾರಿಯಾಗಿದ್ದೇನೆ. ಈಗಾಗಲೇ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಅರಿತಿದ್ದು ಅವುಗಳನ್ನು ಬಗೆಹರಿಸುವ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವುದರ ಜೊತೆಗೆ ಕ್ಷೇತ್ರದ ಹೆಚ್ಚಿನ ಅಭಿವೃದ್ದಿಗಾಗಿ ತಾವು ಪ್ರತಿಯೊಂದು ಗ್ರಾಮಗಳಿಗೂ ಭೇಟಿ ನೀಡುವ ಮೂಲಕ ಹೊಸ ಯೋಜನೆಗಳನ್ನು ರೂಪಿಸುವುದರ ಕಡೆ ಗಮನಗೊಡುವುದಾಗಿ ತಿಳಿಸಿದರು. ಗ್ರಾಮದ ಸಮಸ್ಯೆಗಳ ಬಗ್ಗೆ ಊರಿನಲ್ಲಿನ ನಮ್ಮ ಮುಖಂಡರುಗಳ ಅಥವಾ ತಮ್ಮ ಗಮನಕ್ಕೆ ತಂದು ಅವುಗಳನ್ನು ಬಗೆಹರಿ

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸಸಿ ವಿತರಣೆ

          ಇಲ್ಲಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಶುಕ್ರವಾರದಂದು ವಿಶ್ವಪರಿಸರ ದಿನಾಚರಣೆ ಆಚರಿಸಲಾಯಿತು. ಈ ಸಂಬಂಧ ಪಟ್ಟಣದ ವಿವಿಧ ಶಾಲಾ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಆಯೋಜಿಸಿದ್ದು ವಿಜೇತರಾದ ಮಕ್ಕಳಿಗೆ ಸಂಸ್ಥೆಯ ಕಾರ್ಯದರ್ಶಿ ಕವಿತಾಕಿರಣ್ ಕುಮಾರ್ ಬಹುಮಾನವಾಗಿ ಸಸಿಗಳನ್ನು ವಿತರಿಸಿದರು. ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ನಡೆಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕಾರ್ಯದರ್ಶಿ ಕವಿತಾಕಿರಣ್ ಕುಮಾರ್ ಬಹುಮಾನವಾಗಿ ಸಸಿಗಳನ್ನು ವಿತರಿಸಿದರು.            ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ಪಚ್ಚವಾಗಿಟ್ಟು ಕೊಳ್ಳುವುದರ ಜೊತೆಗೆ ನಮ್ಮ ಮನೆ,ಶಾಲೆ ಆವರಣದಲ್ಲಿ ಮರಗಿಡಗಳನ್ನು ನೆಟ್ಟು ಪೋಷಿಸ ಬೇಕೆಂದು ಅವರು ಕಿವಿಮಾತು ಹೇಳಿದರು.ಈ ಸಂದರ್ಭದಲ್ಲಿ ಪ್ರಾಂಶುಪಾಲ ಟಿ.ಎಸ್.ರವಿ ಸೇರಿದಂತೆ ವಿವಿಧ ಶಾಲೆಯ ಶಿಕ್ಷಕರುಗಳು ಉಪಸ್ಥಿತರಿದ್ದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿ ಸಂಘದಿಂದ ಪುರಸ್ಕಾರ

          ಪಟ್ಟಣದ ಕನಕದಾಸ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ಹಿರಿಯ ವಿದ್ಯಾರ್ಥಿ ಸಂಘದವತಿಯಿಂದ ನಡೆದ ಪ್ರತಿಭಾಪುರಸ್ಕಾರ ಸಮಾರಂಭದಲ್ಲಿ ಎಸ್ಸೆಸಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕನಕದಾಸ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.           ಈ ಸಂಧರ್ಭದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಲಾಜಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಪ್ರತಿಭೆಯಿದ್ದು ಅವಕಾಶ ಸಿಕ್ಕಾಗ ಅದನ್ನು ವ್ಯಕ್ತಪಡಿಸಬೇಕು ಎಂದರು. ವಿದ್ಯಾರ್ಥಿಗಳು ಓದುವ ವಯಸ್ಸಿನಲ್ಲಿ ಇತರ ಯಾವುದೇ ಚಟುವಟಿಕೆಗಳಿಗೆ ಗಮನಗೊಡದೆ ಶಿಕ್ಷಕರ ಮಾರ್ಗದರ್ಶನದಲ್ಲಿ ನಡೆಯುವ ಮೂಲಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿತರುವಂತೆ ಆಶಿಸಿದರು. ಓದು ಮುಗಿದು ಯಾವುದಾದರೊಂದು ಕೆಲಸಕ್ಕೆ    ಸೇರಿದ ನಂತರ ತಾವು ಓದಿದ ಶಾಲೆಯನ್ನು ಮರೆಯದೆ ಆ ಶಾಲೆಯಲ್ಲಿನ ಮಕ್ಕಳಿಗೆ ತಮ್ಮಿಂದಾಗುವ ಸಹಾಯವನ್ನು ಮಾಡುವ ಮೂಲಕ ಆ ಮಕ್ಕಳಲ್ಲೂ ಪ್ರೇರೇಪಿಸಬೇಕು ಎಂದರು. ಹಿರಿಯ ವಿದ್ಯಾರ್ಥಿ ಸಂಘವನ್ನು ಕಟ್ಟಿ ಬೆಳೆಸಲು ಸಹರಿಸಿದ ಎಲ್ಲಾ ಸದಸ್ಯರನ್ನು,ಅದಕ್ಕೆ ಪ್ರೋತ್ಸಾಹ ನೀಡಿದ ಸಂಸ್ಥೆಯ ಸಿಬ್ಬಂದಿಯವರಿಗೆ ಅಭಿನಂದನೆ ಸಲ್ಲಿಸಿದರು.           ಹಿರಿಯ ವಿದ್ಯಾರ್ಥಿ ಸಂಘದ ಶಂಕರ್ ಹಾಗೂ ರವಿ ಪ್ರತಿ ವರ್ಷ

ಸಂಕಷ್ಟಹರದ ಅಂಗವಾಗಿ ವಿಶೇಷ ಅಲಂಕಾರ

ಪಟ್ಟಣದ ಶ್ರೀ ಗಣಪತಿ ದೇವಾಲಯದಲ್ಲಿ ಸೋಮವಾರ ಸಂಕಷ್ಟಹರ ಪೂಜೆ ನಡೆಯಿತು.           ಅರ್ಚಕ ರಾಜಣ್ಣ ಹಾಗೂ ಸತ್ಯನಾರಾಯಣ ಅವರು ಗಣೇಶ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು. ಮಹಾಮಂಗಳಾರತಿ ನಂತರ ಆಗಮಿಸಿದ್ದ ಭಕ್ತಾಧಿಗಳಿಗೆ ಪ್ರಸಾದವಿನಿಯೋಗ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಾಲಯ ಸಮಿತಿಯವರು,ಭಕ್ತಾಧಿಗಳು ಉಪಸ್ಥಿತರಿದ್ದರು. ಹುಳಿಯಾರಿನ ಗಣಪತಿ ದೇವಾಲಯದಲ್ಲಿ ಸಂಕಷ್ಟಹರದ ಅಂಗವಾಗಿ ಗಣಪತಿ ಮೂರ್ತಿಗೆ ವಿಶೇಷ ಅಲಂಕಾರ ಮಾಡಿರುವುದು.

ಬಾಲಕಿಯರ ಹಾಸ್ಟೆಲ್ಪ್ ಎದುರು ರಾಶಿ ರಾಶಿ ಕಸ

ಪಟ್ಟಣದ ಗಾಂಧಿಪೇಟೆಯಲ್ಲಿರುವ ಸಾರ್ವಜನಿಕ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ಕಾಂಪೌಡ್ ಪಕ್ಕ ರಾಶಿರಾಶಿ ಕಸ ಬಿದ್ದಿದ್ದರೂ ಸಹ ಎದುರಲ್ಲೇ ಇರುವ ಪಂಚಾಯ್ತಿವರಾಗಲಿ, , ಹಾಸ್ಟೆಲ್ ಅಧಿಕಾರಿಗಳಾಗಲಿ ಇತ್ತ ಗಮನಕೊಡದೆ ನಿರ್ಲಕ್ಷಿಸಿದ್ದಾರೆ. ಹುಳಿಯಾರಿನ ಗಾಂಧಿಪೇಟೆಯಲ್ಲಿರುವ ಹಾಸ್ಟೆಲ್ ಮುಂಭಾಗ ಬಿದ್ದಿರುವ ತ್ಯಾಜ್ಯದ ರಾಶಿರಾಶಿ.        ಸಮಾಜಕಲ್ಯಾಣ ಇಲಾಖೆಯ ಸಾರ್ವಜನಿಕ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ಮುಖ್ಯದ್ವಾರದ ಕಾಂಪೌಂಡ್ ಬದಿಯ ಜಾಗ ತಿಪ್ಪೆಯಾಗಿ ಬಳಸುತ್ತಿದ್ದು, ಕಲ್ಲಿನ ರಾಶಿ,ಪ್ಲಾಸ್ಟಿಕ್ ಚೀಲ ,ಕಸ ಸೇರಿದಂತೆ ಇತರ ತ್ಯಾಜ್ಯಗಳನ್ನು ಇಲ್ಲಿ ತಂದು ಸುರಿಯುತ್ತಿದ್ದು ತಿರುಗಾಡುವುದು ಕಷ್ಟಕರವಾಗಿ ಪರಿಣಮಿಸಿದೆ. ಕಸದ ರಾಶಿಯನ್ನು ಶೀಘ್ರವೇ ತೆರವುಗೊಳಿಸದೇ ಹೋದಲ್ಲಿ ಮಳೆಬಂದಾಗ ಕೊಳೆತು ಸಾಂಕ್ರಾಮಿಕರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿದೆ. ಇದೇ ರಸ್ತೆಯಲ್ಲಿ ತಿರುಗಾಡುವ ಸ್ಥಳೀಯ ಗ್ರಾ.ಪಂ ಯವರು ಎಚ್ಚೆತ್ತು ಕಸದ ರಾಶಿಯನ್ನು ಶೀಘ್ರವೇ ತೆರವುಗೊಳಿಸುವಂತೆ ಸ್ಥಳಿಯರು ಒತ್ತಾಯಿಸಿದ್ದಾರೆ.

ಹುಳಿಯಾರು : ಕಾರ್ಯದರ್ಶಿಯಿಂದ ಹಣ ದುರುಪಯೋಗ - ಸದಸ್ಯರಿಂದ ಅರೋಪ

           ಇಲ್ಲಿನ ಗ್ರಾ.ಪಂ.ಯ ಕಾರ್ಯದರ್ಶಿ ಅಡವೀಶ್ ಕುಮಾರ್ ಪಂಚಾಯ್ತಿ ಸದಸ್ಯರ ಒಪ್ಪಿಗೆಯಿಲ್ಲದೆ ಲಕ್ಷಾಂತರ ರೂ ಹಣವನ್ನು ಡ್ರಾ ಮಾಡಿಕೊಂಡು ದುರುಪಯೋಗ ಮಾಡಿದ್ದಾರೆಂದು ಗ್ರಾ.ಪಂ.ಯ ಸದಸ್ಯರು ಆರೋಪಿಸಿದ್ದಾರೆ.                  ಪಂಚಾಯ್ತಿಯಲ್ಲಿ ಸೋಮವಾರದಂದು ನಡೆದ ಸದಸ್ಯರ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದ್ದು , ಪಂಚಾಯ್ತಿಯ ಸದಸ್ಯರ ಗಮನಕ್ಕೆ ತಾರದೇ ಸುಮಾರು ಲಕ್ಷಾಂತರ ರೂಗಳನ್ನು ಪಂಚಾಯ್ತಿ ಖಾತೆಯಿಂದ ಡ್ರಾ ಮಾಡಿರುವುದಾಗಿ ಇಓ ಕೃಷ್ಣನಾಯಕ್ ಅವರ ಸಮಕ್ಷಮದಲ್ಲಿ ಸದ್ಯಸ್ಯರು ದೂರಿದ್ದಾರೆ. ಈ ಹಿಂದೆಯಿದ್ದ ಅಧ್ಯಕ್ಷರು ಹಾಗೂ ಹಾಲಿ ಇರುವ ಕಾರ್ಯದರ್ಶಿ ಅವರು ಸಭೆ ಮುಂದೆ ಚರ್ಚೆಗಿಡದೆ ತಮಗೆ ಮನ ಬಂದಂತೆ ಪಂಚಾಯ್ತಿ ಖಾತೆಯಿಂದ ಹಣ ತೆಗೆದಿರುವುದಾಗಿ ಹಾಗೂ ಯಾವುದೇ ರೀತಿಯ ಬಿಲ್,ಓಚರ್ ಗಳನ್ನು ತಮಗೆ ತೋರಿಸದೆ, ದಿನವಹಿ ಪುಸ್ತಕದಲ್ಲೂ ಸರಿಯಾಗಿ ನಮೋದಿಸದೇ ಇರುವುದರಿಂದ ಹಣದ ದುರುಪಯೋಗ ಮಾಡಿರಬಹುದೆಂದು ಎಂದು ಸದಸ್ಯರು ಇಓ ಅವರಿಗೆ ತಿಳಿಸಿದರು.                        ಪಂಚಾಯ್ತಿಯ ಅಭಿವೃದ್ದಿ ಕಾರ್ಯಗಳಿಗೆ ನೆರವಾಗಲೆಂದು ಸರ್ಕಾರ ಅನುದಾನ ಬಿಡುಗಡೆ ಮಾಡಿದರೆ ಅದನ್ನು ಪಟ್ಟಣದ ಸಮಸ್ಯೆಗಳನ್ನು ಬಗೆ ಹರಿಸಲು ಬಳಸುವ ಬದಲು ತಮ್ಮಿಷ್ಟದಂತೆ ಖರ್ಚು ಮಾಡಿದ್ದಾರೆ. ಇದಕ್ಕೆ ಸರಿಯಾದ ಲೆಖ್ಖಪತ್ರವಿಟ್ಟಿಲ್ಲ, ಈರೀತಿ ಮಾಡುವುದರಿಂದ ಪಂಚಾಯ್ತಿಗೆ ತುಂಬಲಾರದ ನಷ್ಟವಾಗುವುದಲ್ಲದೆ, ಜನಪ್ರತಿನಿಧಿಗಳಾದ ನಾವು ಜನರ