ಈ ಹಿಂದೆ ಪಹಣಿ ಸೇರಿದಂತೆ ಇತರ ದಾಖಲೆಗಳನ್ನು ಕೈಬರಹದಲ್ಲಿ ನೀಡುತ್ತಿದ್ದು ಆಗ ಸಾಕಷ್ಟು ತಪ್ಪಾಗಿವೆ ಹಾಗೂ ಕಂಪ್ಯೂಟರ್ ಗೆ ಪಹಣಿಗಳನ್ನು ಎಂಟ್ರಿ ಮಾಡುವಾಗಲೂ ಕೆಲ ದೋಷಗಳಾಗಿದ್ದು ಅವುಗಳನ್ನು ಸರಿ ಪಡಿಸುವ ನಿಟ್ಟಿನಲ್ಲಿ ಪಹಣಿ ತಿದ್ದುಪಡಿ ಆಂದೋಲನ ಹಮ್ಮಿಕೊಳ್ಳಲಾಗಿದ್ದು ಇದರ ಸದುಪಯೋಗವನ್ನು ಎಲ್ಲರೂ ಪಡೆಯುವಂತೆ ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ತಿಳಿಸಿದರು.
ಹುಳಿಯರು ಸಮೀಪದ ಹಂದನಕೆರೆಯಲ್ಲಿ ಶನಿವಾರ ನಡೆದ ಪಹಣಿ ತಿದ್ದುಪಡಿ ಆಂದೋಲನ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ಪಿಂಚಣಿ ಆದಾಲತ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರ ಆಸ್ತಿದಾಖಲೆ ಸೇರಿದಂತೆ ಇತರೆ ದಾಖಲೆಗಳಲ್ಲಿನ ದೋಷಗಳಿಂದ ಜನಸಾಮಾನ್ಯರು ಪರದಾಡುವಂತಾಗಿದ್ದು ತೊಂದರೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಯಲ್ಲಿನ ಎಲ್ಲಾ ದಾಖಲೆಗಳು ಕಂಪ್ಯೂಟರೀಕರಣ ಮಾಡಿದ್ದು ಇನ್ನು ಮುಂದೆ ಯಾವುದೇ ಕಾರಣಕ್ಕು ಜಮೀನು ದಾಖಲೆಪತ್ರಗಳಲ್ಲಿ ವ್ಯತ್ಯಾಸಗಳು ಉಂಟಾಗದಂತೆ ನೋಡಿಕೊಳ್ಳಲಾಗುವುದು ಎಂದರು. ಖಾತೆ ಬದಲಾವಣೆ ಮಾಡಿಕೊಳ್ಳುವಾಗಲೂ ಸಮಸ್ಯೆಗಳು ಕಂಡುಬರುತ್ತಿದ್ದು ಮುಂದಿನ ದಿನಗಳಲ್ಲಿ ಖಾತಾ ಬದಲಾವಣಾ ಆಂದೋಲನವನ್ನು ಜಾರಿಗೆ ತಂದು ಆ ಸಮಸ್ಯೆಯನ್ನು ಕೂಡ ಬಗೆಹರಿಸುವುದಾಗಿ ತಿಳಿಸಿದರು.
ಜಮೀನು ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ ಗ್ರಾಮದ ಮುಖಂಡರ,ಜನಪ್ರತಿನಿಧಿಗಳ ಹಾಗೂ ಮತ್ತ್ಯಾರೋ ಹೇಳುವ ಮಾತಿಗೆ, ಆಮಿಷಕ್ಕೆ ಒಳಗಾಗಿ ತಿದ್ದುವಕಾರ್ಯ ಮಾಡಬೇಡಿ ಎಂದು ಕಂದಾಯ ಇಲಾಖೆ ಅಧಿಕಾರಿಗೆ ಎಚ್ಚರಿಕೆ ನೀಡಿದ ಅವರು ಹಾಗೇನಾದರೂ ಮಾಡಿದ್ದು ಕಂಡು ಬಂದಲ್ಲಿ ಅವರುಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ ಕಠಿಣಕ್ರಮ ಜರುಗಿಸಲಾಗುವುದು ಎಂದರು.
ಸಲಹೆ: ಇಂದು ಜಮೀನುಗಳಿಗೆ ಹೆಚ್ಚಿನ ಬೇಡಿಕೆಯಿದ್ದು ಅವುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಭದ್ರವಾಗಿಟ್ಟುಕೊಳ್ಳಿ ಹಾಗೂ ನಗರ ಪ್ರದೇಶದ ಜನ ಹಳ್ಳಿಗಳಿಗೆ ಬಂದು ಜಮೀನು ಖರೀದಿಸುತ್ತಿದ್ದು ಭೂ ಮಾಫಿಯಾ ಹೆಚ್ಚಾಗುತ್ತಿದ್ದು ಯಾವುದೇ ಕಾರಣಕ್ಕೂ ನಗರ ಪ್ರದೇಶದವರಿಗೆ ಮಾರಲು ಮುಂದಾಗಬೇಡಿ ಎಂದು ಸಲಹೆ ನೀಡಿದರು.
ಪ್ರಸ್ತುತದಲ್ಲಿ ಪಡಿತರ ಕಾರ್ಡ್ ಸಮಸ್ಯೆ ಹೆಚ್ಚಾಗಿದ್ದು ಕೆಲ ಮನೆಗಳಲ್ಲಿ 2-3 ಕಾರ್ಡ್ ಗಳನ್ನು ಹೊಂದಿದ್ದಾರೆ. ಈಗಾಗಲೇ ಅವುಗಳ ಪರಿಶೀಲನೆ ನಡೆಯುತ್ತಿದ್ದು ಅದಕ್ಕೂ ಮುಂಚಿತವಾಗಿ ತಾವೇ ಖುದ್ದಾಗಿ ತಮ್ಮಲ್ಲಿನ ಹೆಚ್ಚುವರಿ ಕಾರ್ಡ್ ಗಳನ್ನು ಇಲಾಖೆಗೆ ಸಲ್ಲಿಸಿ. ಇಲ್ಲವಾದರೆ ಅಂತಹವರ ಮೇಲೆ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದರು.
ಶಾಸಕ ಸಿ.ಬಿ.ಸುರೇಶ್ ಬಾಬು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದು, ಉಪವಿಭಾಗಾಧಿಕಾರಿ ಬಿ.ಸಿಂಧು, ತಹಶೀಲ್ದಾರ್ ಕಾಮಾಕ್ಷಮ್ಮ, ಉಪತಶೀಲ್ದಾರ್ ಹನುಮಂತನಾಯ್ಕ, ಕಂದಾಯ ಇಲಾಖೆಯ ತಿಪ್ಪೇಸ್ವಾಮಿ, ಪಾಪಣ್ಣ, ಶ್ರೀನಿವಾಸ್, ಮಾಜಿ ಜಿ.ಪಂ.ಉಪಾಧ್ಯಕ್ಷೆ ಜಾನಮ್ಮ,ತಾ.ಪಂ.ಸದಸ್ಯರಾದ ಹೇಮಮಂಜುನಾಥ್,ಚೇತನ್ ಗಂಗಾಧರ್,ಗ್ರಾ.ಪಂ.ಸದಸ್ಯರಾದ ದೊರೆಸ್ವಾಮಿ , ಮಾಳಮ್ಮ ಸೇರಿದಂತೆ ಇತರರಿದ್ದ ಸಮಾರಂಭದಲ್ಲಿ ಶಿಕ್ಷಕ ಗಜೇಂದ್ರ ನಿರೂಪಿಸಿ,ಅನಂತಯ್ಯ ವಂದಿಸಿದರು.
ಪಹಣಿ ತಿದ್ದುಪಡಿ ಆಂದೋಲನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಮಾತನಾಡುತ್ತಿರುವುದು. |
ಹುಳಿಯರು ಸಮೀಪದ ಹಂದನಕೆರೆಯಲ್ಲಿ ಶನಿವಾರ ನಡೆದ ಪಹಣಿ ತಿದ್ದುಪಡಿ ಆಂದೋಲನ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ಪಿಂಚಣಿ ಆದಾಲತ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಹಣಿ ತಿದ್ದುಪಡಿ ಆಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಸಾರ್ವಜನಿಕರು |
ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರ ಆಸ್ತಿದಾಖಲೆ ಸೇರಿದಂತೆ ಇತರೆ ದಾಖಲೆಗಳಲ್ಲಿನ ದೋಷಗಳಿಂದ ಜನಸಾಮಾನ್ಯರು ಪರದಾಡುವಂತಾಗಿದ್ದು ತೊಂದರೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಯಲ್ಲಿನ ಎಲ್ಲಾ ದಾಖಲೆಗಳು ಕಂಪ್ಯೂಟರೀಕರಣ ಮಾಡಿದ್ದು ಇನ್ನು ಮುಂದೆ ಯಾವುದೇ ಕಾರಣಕ್ಕು ಜಮೀನು ದಾಖಲೆಪತ್ರಗಳಲ್ಲಿ ವ್ಯತ್ಯಾಸಗಳು ಉಂಟಾಗದಂತೆ ನೋಡಿಕೊಳ್ಳಲಾಗುವುದು ಎಂದರು. ಖಾತೆ ಬದಲಾವಣೆ ಮಾಡಿಕೊಳ್ಳುವಾಗಲೂ ಸಮಸ್ಯೆಗಳು ಕಂಡುಬರುತ್ತಿದ್ದು ಮುಂದಿನ ದಿನಗಳಲ್ಲಿ ಖಾತಾ ಬದಲಾವಣಾ ಆಂದೋಲನವನ್ನು ಜಾರಿಗೆ ತಂದು ಆ ಸಮಸ್ಯೆಯನ್ನು ಕೂಡ ಬಗೆಹರಿಸುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಅವರು ಸಾರ್ವಜನಿಕರಿಂದ ಅರ್ಜಿ ಪಡೆಯುತ್ತಿರುವುದು. |
ಜಮೀನು ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ ಗ್ರಾಮದ ಮುಖಂಡರ,ಜನಪ್ರತಿನಿಧಿಗಳ ಹಾಗೂ ಮತ್ತ್ಯಾರೋ ಹೇಳುವ ಮಾತಿಗೆ, ಆಮಿಷಕ್ಕೆ ಒಳಗಾಗಿ ತಿದ್ದುವಕಾರ್ಯ ಮಾಡಬೇಡಿ ಎಂದು ಕಂದಾಯ ಇಲಾಖೆ ಅಧಿಕಾರಿಗೆ ಎಚ್ಚರಿಕೆ ನೀಡಿದ ಅವರು ಹಾಗೇನಾದರೂ ಮಾಡಿದ್ದು ಕಂಡು ಬಂದಲ್ಲಿ ಅವರುಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ ಕಠಿಣಕ್ರಮ ಜರುಗಿಸಲಾಗುವುದು ಎಂದರು.
ಶಾಸಕ ಸುರೇಶ್ ಬಾಬು ಮಾತನಾಡುತ್ತಿರುವುದು. |
ಸಲಹೆ: ಇಂದು ಜಮೀನುಗಳಿಗೆ ಹೆಚ್ಚಿನ ಬೇಡಿಕೆಯಿದ್ದು ಅವುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಭದ್ರವಾಗಿಟ್ಟುಕೊಳ್ಳಿ ಹಾಗೂ ನಗರ ಪ್ರದೇಶದ ಜನ ಹಳ್ಳಿಗಳಿಗೆ ಬಂದು ಜಮೀನು ಖರೀದಿಸುತ್ತಿದ್ದು ಭೂ ಮಾಫಿಯಾ ಹೆಚ್ಚಾಗುತ್ತಿದ್ದು ಯಾವುದೇ ಕಾರಣಕ್ಕೂ ನಗರ ಪ್ರದೇಶದವರಿಗೆ ಮಾರಲು ಮುಂದಾಗಬೇಡಿ ಎಂದು ಸಲಹೆ ನೀಡಿದರು.
ಪ್ರಸ್ತುತದಲ್ಲಿ ಪಡಿತರ ಕಾರ್ಡ್ ಸಮಸ್ಯೆ ಹೆಚ್ಚಾಗಿದ್ದು ಕೆಲ ಮನೆಗಳಲ್ಲಿ 2-3 ಕಾರ್ಡ್ ಗಳನ್ನು ಹೊಂದಿದ್ದಾರೆ. ಈಗಾಗಲೇ ಅವುಗಳ ಪರಿಶೀಲನೆ ನಡೆಯುತ್ತಿದ್ದು ಅದಕ್ಕೂ ಮುಂಚಿತವಾಗಿ ತಾವೇ ಖುದ್ದಾಗಿ ತಮ್ಮಲ್ಲಿನ ಹೆಚ್ಚುವರಿ ಕಾರ್ಡ್ ಗಳನ್ನು ಇಲಾಖೆಗೆ ಸಲ್ಲಿಸಿ. ಇಲ್ಲವಾದರೆ ಅಂತಹವರ ಮೇಲೆ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದರು.
ಪಹಣಿ ತಿದ್ದುಪಡಿ ಆಂದೋಲನ ಕಾರ್ಯಕ್ರಮದಲ್ಲಿ ಅರ್ಜಿ ಸಲ್ಲಿಸುತ್ತಿರುವ ಸಾರ್ವಜನಿಕರು |
ಶಾಸಕ ಸಿ.ಬಿ.ಸುರೇಶ್ ಬಾಬು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದು, ಉಪವಿಭಾಗಾಧಿಕಾರಿ ಬಿ.ಸಿಂಧು, ತಹಶೀಲ್ದಾರ್ ಕಾಮಾಕ್ಷಮ್ಮ, ಉಪತಶೀಲ್ದಾರ್ ಹನುಮಂತನಾಯ್ಕ, ಕಂದಾಯ ಇಲಾಖೆಯ ತಿಪ್ಪೇಸ್ವಾಮಿ, ಪಾಪಣ್ಣ, ಶ್ರೀನಿವಾಸ್, ಮಾಜಿ ಜಿ.ಪಂ.ಉಪಾಧ್ಯಕ್ಷೆ ಜಾನಮ್ಮ,ತಾ.ಪಂ.ಸದಸ್ಯರಾದ ಹೇಮಮಂಜುನಾಥ್,ಚೇತನ್ ಗಂಗಾಧರ್,ಗ್ರಾ.ಪಂ.ಸದಸ್ಯರಾದ ದೊರೆಸ್ವಾಮಿ , ಮಾಳಮ್ಮ ಸೇರಿದಂತೆ ಇತರರಿದ್ದ ಸಮಾರಂಭದಲ್ಲಿ ಶಿಕ್ಷಕ ಗಜೇಂದ್ರ ನಿರೂಪಿಸಿ,ಅನಂತಯ್ಯ ವಂದಿಸಿದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ