ಪಟ್ಟಣದ ಕನಕದಾಸ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ಹಿರಿಯ ವಿದ್ಯಾರ್ಥಿ ಸಂಘದವತಿಯಿಂದ ನಡೆದ ಪ್ರತಿಭಾಪುರಸ್ಕಾರ ಸಮಾರಂಭದಲ್ಲಿ ಎಸ್ಸೆಸಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
![]() |
ಕನಕದಾಸ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. |

ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಿ, ತಮ್ಮ ವಿದ್ಯಾರ್ಥಿ ಜೀವನದ ಹೇಗಿತ್ತು ಹಾಗೂ ಈಗಿನ ವಿದ್ಯಾರ್ಥಿ ಜೀವನ ಯಾವರೀತಿಯಲ್ಲಿದೆ ಎಂಬುದನ್ನು ತಿಳಿಸಿದರಲ್ಲದೆ,ಓದು ಮುಗಿದ ನಂತರ ಮನೆಯಲ್ಲಿ ಕೂರುವುದಕ್ಕಿಂತ ಯಾವುದಾರು ಒಂದು ಸ್ವಉದ್ಯೋಗದಲ್ಲಿ ತೊಡಗಿಕೊಳ್ಳುವಂತೆ ಕಿವಿಮಾತು ಹೇಳಿದರು
ಸಂಸ್ಥೆಯ ಕಾರ್ಯದರ್ಶಿ ಶಿವಪ್ರಕಾಶ್, ಮುಖ್ಯಶಿಕ್ಷಕ ಕೃಷ್ಣಯ್ಯ,ಪ್ರಾಚಾರ್ಯ ದಯಾಂದ್, ಹಿರಿಯ ವಿದ್ಯಾರ್ಥಿ ಸಂಘದ ದುರ್ಗರಾಜ್, ಸುಭ್ರಮಣ್ಯ, ಪುಷ್ಪಲತಾ, ರಾಜೇಂದ್ರ, ಭೈರೇಶ್, ರಂಗನಾಥ್, ಕಿರುತೆರೆ ಕಲಾವಿದ ಗೌಡಿರಂಗನಾಥ್,ಪ್ರದೀಪ್,ಶಿವಣ್ಣ ಸೇರಿದಂತೆ ಶಾಲಾ ಸಿಬ್ಬಂದ್ದಿಯವರು ಉಪಸ್ಥಿತರಿದ್ದರು.
![]() |
ಹುಳಿಯಾರಿನ ಕನಕದಾಸ ಶಾಲೆಯ ಪ್ರೌಢಶಾಲಾ ವಿಭಾಗದ ಮಕ್ಕಳಿಗೆ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಶಂಕರ್ ಹಾಗೂ ರವಿ ಉಚಿತ ನೋಟ್ ಪುಸ್ತಕ ವಿತರಿಸಿದರು. |
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ