ವಿಷಯಕ್ಕೆ ಹೋಗಿ

ಕೆಂಕೆರೆಯಲ್ಲಿ ಶ್ರದ್ಧಾಭಕ್ತಿಯಿಂದ ಕಾರಬ್ಬ ಆಚರಣೆ

          ಮಾಡಿದ ಆರಂಭ ಕೈ ಹತ್ತಲು,ಬಿತ್ತಿದ ಬೆಳೆ ಕೈಸೇರಲು ರೈತಾಪಿ ವರ್ಗದಲ್ಲಿ ಹಿಂದಿನಿಂದ ಅನೇಕ ಆಚರಣೆಗಳು ಜಾರಿಯಲ್ಲಿದ್ದು ಅದರಲೊಂದು ಈ ಕಾರಹಬ್ಬ. ಮುಂಗಾರಿನಲ್ಲಿ ರಾಗಿ,ಹುರುಳಿ,ತೊಗರಿ ಬೆಳೆ ಬಿತ್ತನೆಗೂ ಮುಂಚೆ ಕಾರಬ್ಬವನ್ನು ಆಚರಿಸುವ ಪರಿಪಾಟವಿದ್ದು ಈ ಬಾರಿ ತಾವು ಯಾವ ಬೆಳೆ ಬಿತ್ತಿದರೆ ಕೈ ಹತ್ತಲಿದೆ, ಹೆಚ್ಚು ಫಸಲು ದೊರೆಯಲಿದೆ ಹಾಗೂ ಈ ವರ್ಷ ಯಾವ ಫಸಲು (ಬೆಳೆ) ಅಧಿಕವಾಗಿ ಬೆಳೆದು ತಮ್ಮ ಕೈಸೇರಲಿದೆ ಎಂಬುದನ್ನು ನಂಬಿಕೆಯ ಆಧಾರದಲ್ಲಿ ತಿಳಿಯಲ್ಪಡಲು ಸಮೀಪದ ಕೆಂಕೆರೆ ಗ್ರಾಮದಲ್ಲಿ ಕಾರಬ್ಬವನ್ನು ಗ್ರಾಮದ ಹಿರಿಯರ ಸಮ್ಮುಖದಲ್ಲಿ ಗುರುವಾರ ಸಂಜೆ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದಲ್ಲಿ ಕಾರಬ್ಬದ ಅಂಗವಾಗಿ ಊರಿನ ಕಾರೆಕಲ್ಲಿನ ಹತ್ತಿರ ಧಾನ್ಯಗಳನ್ನು ತುಂಬಿದ ಮಡಿಕೆಯನ್ನು ಹೊಡೆಯುತ್ತಿರುವುದು.
   ಆಚರಣೆ ಹೇಗೆ: ಗ್ರಾಮದ ಶ್ರೀರಂಗನಾಥಸ್ವಾಮಿ ದೇವಾಲಯದ ಬಳಿ ಇರುವ ಕಾರೇಕಲ್ಲನ್ನು ಗ್ರಾಮದ ಹಿರಿಯ ಮಾರ್ಗದರ್ಶನದಲ್ಲಿ ಯುವಕರು ಶುಚಿಗೊಳಿಸಿ ಸುಣ್ಣ ಹಾಗೂ ಕೆಂಪು ಬಣ್ಣಹಚ್ಚಿ ನಂತರ ಬೇವಿನ ಸೊಪ್ಪು ಮತ್ತು ಅಂಬಳ್ಳಿಯನ್ನು ಬಿಗಿಯಾಗಿ ಬಿಗಿದು ಕಟ್ಟಿ ಪೂಜೆಗೆ ಸಿದ್ದತೆ ಮಾಡಿರುತ್ತಾರೆ. ಗ್ರಾಮದ ಸಮೀಪವಿರುವ ಗ್ಯಾರಳ್ಳದ ಸದಾಶಿವಣ್ಣ ಎಂಬುವರ ಮನೆಯಿಂದ ತರಲಾಗುವ ಅರಿಶಿನ ಅನ್ನದ ನೈವೇದ್ಯ(ಕಿಚುಡಿ)ದ ಜೊತೆಗೆ ಒಂದು ಮಣ್ಣಿನ ಮಡಿಕೆಯಲ್ಲಿ ನೀರುಹಾಕಿ ತಾವು ಬೆಳೆಯುವ ಧಾನ್ಯಗಳನ್ನೂ ಒಂದೊಂದು ಹಿಡಿಯಷ್ಟು ತುಂಬಲಾಗುತ್ತದೆ. ಆ ಮಡಿಕೆಗೆ ಅಂಗುನೂಲು, ಅಕ್ಷತೆಗಳನ್ನಿಟ್ಟು ಕೊಂಡು ಊರಿನ ಕಾರೆಕಲ್ಲಿನ ಹತ್ತಿರ ತಂದಿಟ್ಟು ಪೂಜೆಸಲ್ಲಿಸಿದ ನಂತರ ಗ್ರಾಮಸ್ಥರ ಒಪ್ಪಿಗೆ ಪಡೆದು ಮೆಡ್ಡೆಗೋಲಿನ ಸಹಾಯದಿಂದ ಆ ಮಡಿಕೆಯನ್ನು ಹೊಡೆಯುತ್ತಾರೆ. ಹಾಗೆ ಹೊಡೆದ ರಭಸಕ್ಕೆ ಮಡಿಕೆ ಒಳಗಿನ ಧಾನ್ಯಗಳೆಲ್ಲಾ ಮಡಿಕೆಯಲ್ಲಿದ್ದ ನೀರಿನೊಂದಿಗೆ ಹೊರಬಂದು ಹರಿಯುತ್ತವೆ. ಹೀಗೆ ಧಾನ್ಯಗಳಲ್ಲಿ ಯಾವ ಧಾನ್ಯ ಎಲ್ಲಕ್ಕಿಂತ ಮುಂದೆ ಹರಿದಿರುತ್ತದೆಯೋ ಆ ಧಾನ್ಯ ಈ ವರ್ಷ ಉತ್ತಮ ಫಸಲು ಕೊಡುತ್ತದೆಂದು ನಂಬುತ್ತಾರೆ. ಅಲ್ಲದೆ ಮುಂಗಾರು ಹಾಗೂ ಹಿಂಗಾರು ಬೆಳೆಗಳಲ್ಲಿ ಯಾವುದು ಹೆಚ್ಚು ದೊರೆಯುತ್ತದೆ ಎಂಬುದನ್ನೂ ಸಹ ಈ ಆಚರಣೆಯಲ್ಲಿ ತಿಳಿದು ಬರುತ್ತದೆ.
          ಗ್ರಾಮದ ಹಿರಿಯ ಸದಾಶಿವಯ್ಯ ಹೇಳುವಂತೆ ಅನಾದಿಕಾಲದಿಂದಲೂ ಈ ಆಚರಣೆ ಜಾರಿಯಲ್ಲಿದ್ದು ರಾಸುಗಳಿಗೆ ಯಾವುದೇ ರೋಗರುಜನೆ ಬಾರದಂತೆ ಹಾಗೂ ಉತ್ತಮ ಫಸಲು ಸಿಗಲಿ ಎಂಬ ನಂಬಿಕೆಯಿಂದ ನೇಗಿಲು,ನೊಗ,ಕುಂಟೆ,ಕೂರಿಗೆ ಸೇರಿದಂತೆ ಇತರ ಕೃಷಿ ಉಪಕರಣ ಶುಚಿಗೊಳಿಸಿಕೊಂಡು ತಾವು ಸಾಕಿದ ದನಗಳ ಮೈತೊಳೆದು ಅವುಗಳ ಕೊಂಬಿಗೆ ನೀಲಿ,ಕೆಂಪು ಬಣ್ಣ ಹಚ್ಚಿ ಹೂಗಳಿಂದ ಸಿಂಗರಿಸಿ, ಪೂಜಿಸಿದ ನಂತರ ನೈವೇದ್ಯ ಇಟ್ಟು ಊರಿನ ದೇವಾಲಯದಲ್ಲಿಗೆ ತೆರಳಿ ಪೂಜೆಸಲ್ಲಿಸಿ ಈ ಬಾರಿ ಉತ್ತಮ ಬೆಳೆ ಬರಲಿ ಎಂದು ಪ್ರಾರ್ಥಿಸಿಕೊಳ್ಳುವ ಮೂಲಕ ಹಬ್ಬ ಕೊನೆಗೊಳಿಸಲಾಯಿತು.

         ಈ ಸಂಧರ್ಭದಲ್ಲಿ ಪುರೋಹಿತರಾದ ಚನ್ನಬಸವಯ್ಯ,ಈಶ್ವರಯ್ಯ ಸೇರಿದಂತೆ ಚೇತನ,ಕುಮಾರಣ್ಣ,ಕೊಟ್ರೇಶ್,ಶ್ರೀಧರ್,ಚನ್ನಬಸವಯ್ಯ,ಬಾಬುರಾಜ್,ಶರತ್ ಸೇರಿದಂತೆ ಅಪಾರ ಸಂಖ್ಯೆಯ ಯುವಕರು ಕಾರೆಕಲ್ಲಿಗೆ ಕಟ್ಟಿದ್ದ ಅಂಬಳ್ಳಿ ಹಾಗೂ ಬೇವಿನ ಸೊಪ್ಪನ್ನು ಎಳೆಯುವಲ್ಲಿ ಪಾಲ್ಗೊಂಡಿದ್ದು, ತಮ್ಮ ಮನೆಗಳಿಗೆ ಈ ಕಾರೆಸೊಪ್ಪನ್ನು ತೆಗೆದು ಕೊಂಡು ಹೋಗುವ ಮೂಲಕ ಕಾರಬ್ಬವನ್ನು ಆಚರಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್...

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...