ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆಯಲು ಸಂಘಟಿತ ಹೋರಾಟ ಅಗತ್ಯವೆಂದು ರಾಜ್ಯ ರೈತ ಸಂಘದ ಸಂಚಾಲಕ ಕೆಂಕೆರೆ ಸತೀಶ್ ತಿಳಿಸಿದರು.
ಹುಳಿಯಾರಿನ ಡಾ.ರಾಜ್ ಕುಮಾರ್ ರಸ್ತೆಯಲ್ಲಿ ಬಾಲಾಜಿ ಕ್ಯಾಶ್ ಬಜಾರ್ ನ ಕಟ್ಟಡಲ್ಲಿ ಭಾನುವಾರದಂದು ಉದ್ಘಾಟನೆಯಾದ ದೀನದಲಿತರ ಸೇವಾ ಚಾರಿಟಬಲ್ ಟ್ರಸ್ಟ್ ನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸರ್ಕಾರ ರೂಪಿಸುವ ಯಾವುದೇ ಯೋಜನೆಗಳು ನೇರವಾಗಿ ಫಲಾನುಭವಿಗಳಿಗೆ ದೊರೆಯದೇ ಮಧ್ಯವರ್ತಿಗಳ ಕೈಗೆ ಸಿಕ್ಕಿ ಅದರ ಸಂಪೂರ್ಣ ಪ್ರಯೋಜನ ಫಲಾನುಭವಿಗೆ ಲಭಿಸದಂತಾಗಿದೆ. ಅದಕ್ಕಾಗಿ ನಮಗೆ ದೊರೆಯ ಬೇಕಾದ ಸೌಲಭ್ಯಗಳನ್ನು ಹೋರಾಟದ ಮುಖಾಂತರವೇ ಪಡೆಯುವಂತೆ ಸ್ಥಿತಿ ನಿರ್ಮಾಣವಾಗಿದೆ ಅದಕ್ಕಾಗಿ ಸದಾ ಸಿದ್ದರಿರಬೇಕು ಎಂದರು. ರೈತರು ಹಾಗೂ ದಲಿತರು ಹೋರಾಟದ ಕಿಚ್ಚನ್ನು ಹೆಚ್ಚಿಸಿಕೊಳ್ಳುವುದರ ಜತೆಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವ ಮೂಲಕ ಶಿಕ್ಷಣ ಕೊಡಿಸಿ,ಅವರನ್ನು ಶಿಕ್ಷಿತರನ್ನಾಗಿಸುವಂತೆ ಸಲಹೆ ನೀಡಿದರು. ಹುಳಿಯಾರಿನಲ್ಲಿ ಇಂತಹ ಟ್ರಸ್ಪ್ ಸ್ಥಾಪನೆಯಾಗಿರುವುದು ಹೆಮ್ಮೆಯ ವಿಷಯವಾಗಿದ್ದು ದೀನದಲಿತರು ಇದರಲ್ಲಿ ಸೇರಿಕೊಂಡು ಸಂಘಟಿತರಾಗುವಂತೆ ತಿಳಿಸಿದರು.
ಎಎಸ್ ಐ ಕೃಷ್ಣಮೂರ್ತಾಚಾರ್,ಪಂಡಿತ್ ಬಸವರಾಜು ಮಾತನಾಡಿದರು. ಅಂಗನವಾಡಿ ಮಕ್ಕಳಿಂದ ಟ್ರಸ್ಟ್ ಕಚೇರಿ ಉದ್ಘಾಟಿಸಲಾಯಿತು. ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ,ಟ್ರಸ್ಟ್ ನ ಅಧ್ಯಕ್ಷ ಶಿವರಾಜ್,ಉಪಾಧ್ಯಕ್ಷ ಪ್ರಭಾಕರ್ ಪದಾಧಿಕಾರಿಗಳಾದ ಬಸವರಾಜು,ಮೋಹನ್,ಪರಮೇಶ್,ಲೋಕೇಶ್,ರಾಜಣ್ಣ,ಮಂಜನಾಯ್ಕ,ಧನಂಜಯ,ಮಾರುತಿ,ಮಲ್ಲಿಕಣ್ಣ ಇತರರು ಉಪಸ್ಥಿತರಿದ್ದರು.
ಹುಳಿಯಾರಿನ ಡಾ.ರಾಜ್ ಕುಮಾರ್ ರಸ್ತೆಯಲ್ಲಿ ಬಾಲಾಜಿ ಕ್ಯಾಶ್ ಬಜಾರ್ ನ ಕಟ್ಟಡಲ್ಲಿ ಭಾನುವಾರದಂದು ಉದ್ಘಾಟನೆಯಾದ ದೀನದಲಿತರ ಸೇವಾ ಚಾರಿಟಬಲ್ ಟ್ರಸ್ಟ್ ನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸರ್ಕಾರ ರೂಪಿಸುವ ಯಾವುದೇ ಯೋಜನೆಗಳು ನೇರವಾಗಿ ಫಲಾನುಭವಿಗಳಿಗೆ ದೊರೆಯದೇ ಮಧ್ಯವರ್ತಿಗಳ ಕೈಗೆ ಸಿಕ್ಕಿ ಅದರ ಸಂಪೂರ್ಣ ಪ್ರಯೋಜನ ಫಲಾನುಭವಿಗೆ ಲಭಿಸದಂತಾಗಿದೆ. ಅದಕ್ಕಾಗಿ ನಮಗೆ ದೊರೆಯ ಬೇಕಾದ ಸೌಲಭ್ಯಗಳನ್ನು ಹೋರಾಟದ ಮುಖಾಂತರವೇ ಪಡೆಯುವಂತೆ ಸ್ಥಿತಿ ನಿರ್ಮಾಣವಾಗಿದೆ ಅದಕ್ಕಾಗಿ ಸದಾ ಸಿದ್ದರಿರಬೇಕು ಎಂದರು. ರೈತರು ಹಾಗೂ ದಲಿತರು ಹೋರಾಟದ ಕಿಚ್ಚನ್ನು ಹೆಚ್ಚಿಸಿಕೊಳ್ಳುವುದರ ಜತೆಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವ ಮೂಲಕ ಶಿಕ್ಷಣ ಕೊಡಿಸಿ,ಅವರನ್ನು ಶಿಕ್ಷಿತರನ್ನಾಗಿಸುವಂತೆ ಸಲಹೆ ನೀಡಿದರು. ಹುಳಿಯಾರಿನಲ್ಲಿ ಇಂತಹ ಟ್ರಸ್ಪ್ ಸ್ಥಾಪನೆಯಾಗಿರುವುದು ಹೆಮ್ಮೆಯ ವಿಷಯವಾಗಿದ್ದು ದೀನದಲಿತರು ಇದರಲ್ಲಿ ಸೇರಿಕೊಂಡು ಸಂಘಟಿತರಾಗುವಂತೆ ತಿಳಿಸಿದರು.
ಎಎಸ್ ಐ ಕೃಷ್ಣಮೂರ್ತಾಚಾರ್,ಪಂಡಿತ್ ಬಸವರಾಜು ಮಾತನಾಡಿದರು. ಅಂಗನವಾಡಿ ಮಕ್ಕಳಿಂದ ಟ್ರಸ್ಟ್ ಕಚೇರಿ ಉದ್ಘಾಟಿಸಲಾಯಿತು. ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ,ಟ್ರಸ್ಟ್ ನ ಅಧ್ಯಕ್ಷ ಶಿವರಾಜ್,ಉಪಾಧ್ಯಕ್ಷ ಪ್ರಭಾಕರ್ ಪದಾಧಿಕಾರಿಗಳಾದ ಬಸವರಾಜು,ಮೋಹನ್,ಪರಮೇಶ್,ಲೋಕೇಶ್,ರಾಜಣ್ಣ,ಮಂಜನಾಯ್ಕ,ಧನಂಜಯ,ಮಾರುತಿ,ಮಲ್ಲಿಕಣ್ಣ ಇತರರು ಉಪಸ್ಥಿತರಿದ್ದರು.
ಹುಳಿಯಾರು ಪಟ್ಟಣದಲ್ಲಿ ದೀನದಲಿತರ ಸೇವಾ ಚಾರಿಟಬಲ್ ಟ್ರಸ್ಟ್ ಅನ್ನು ಅಂಗನವಾಡಿ ಮಕ್ಕಳಿಂದ ಉದ್ಘಾಟಿಸಲಾಯಿತು. ಅಧ್ಯಕ್ಷ ಶಿವರಾಜ್,ಉಪಾಧ್ಯಕ್ಷ ಪ್ರಭಾಕರ್ ಪದಾಧಿಕಾರಿಗಳಾದ ಬಸವರಾಜು,ಮೋಹನ್ ಇತರರಿದ್ದಾರೆ. |
ಹುಳಿಯಾರಿನ ದೀನದಲಿತರ ಸೇವಾ ಚಾರಿಟಬಲ್ ಟ್ರಸ್ಟ್ ನ ಸಮಾರಂಭದಲ್ಲಿ ಎಎಸ್ ಐ ಕೃಷ್ಣಮೂರ್ತಾಚಾರ್ ಅಂಗನವಾಡಿ ಮಕ್ಕಳಿಗೆ ಸ್ಲೇಟ್,ಪುಸ್ತಕ ಸಾಮಗ್ರಿ ವಿತರಿಸಿದರು. |
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ