ಪಟ್ಟಣದ ಗ್ರಾ.ಪಂ.ನ ನೂತನ ಅಧ್ಯಕ್ಷರಾಗಿ ಜೆಡಿಎಸ್ ನ ಕಾಳಮ್ಮ ಗುರುವಾರದಂದು ತಹಶೀಲ್ದಾರ್ ಕಾಮಾಕ್ಷಮ್ಮ ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದೆ ಅಧ್ಯಕ್ಷೆಯಾಗಿದ್ದ ಪುಟ್ಟಿಬಾಯಿ ಅವರನ್ನು ಪಂಚಾಯ್ತಿ ಸದಸ್ಯರು ಅವಿಸ್ವಾಸ ನಿರ್ಣಯ ಮಂಡಿಸಿದ್ದರ ಫಲವಾಗಿ ಅವರು ಪದಚ್ಯುತಗೊಂಡಿದ್ದರಿಂದ ಅಧ್ಯಕ್ಷ ಸ್ಥಾನ ತೆರನಾಗಿತ್ತು. ಈ ಸಂಬಂಧ ಗುರುವಾರದಂದು ನಡೆದ ಚುನಾವಣೆಯಲ್ಲಿ ಪಂಚಾಯ್ತಿಯ ಒಟ್ಟು 33 ಸದಸ್ಯರ ಪೈಕಿ 30 ಮಂದಿ ಹಾಜರಿದ್ದು, ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಜೆಡಿಎಸ್ ಬೆಂಬಲಿತ ಕಾಳಮ್ಮ ನಾಮಪತ್ರ ಸಲ್ಲಿಸಿದ್ದು ಇತರೆ ಅಭ್ಯರ್ಥಿ ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಕಾಳಮ್ಮ ಅವರೇ ಅಧ್ಯಕ್ಷರಾಗಿ ಆಯ್ಕೆಯಾದರು.
ಅಧ್ಯಕ್ಷರಾಗಿ ಆಯ್ಕೆಯಾದ ಕಾಳಮ್ಮ ಈ ಸಂಧರ್ಭದಲ್ಲಿ ಮಾತನಾಡಿ, ಅನುಸೂಚಿತ ಜಾತಿಗೆ ಮೀಸಲಿರಿಸಿದ್ದ ಅಧ್ಯಕ್ಷ ಸ್ಥಾನಕ್ಕೆ ತನ್ನನ್ನು ಆಯ್ಕೆ ಮಾಡಿರುವ ಎಲ್ಲಾ ಸದಸ್ಯರಿಗೂ ಹಾಗೂ ಸಾಮಾಜಿಕ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ತಮ್ಮ ಬೆಂಬಲಕ್ಕೆ ಬಂದ ಶಾಸಕ ಸುರೇಶ್ ಬಾಬು ಅವರಿಗೆ ಕೃತಜ್ಞತೆ ಸಲ್ಲಿಸಿದರು. ಎಂದಿಗೂ ಈ ಸ್ಥಾನಕ್ಕೆ ಚ್ಯುತಿಬಾರದಂತೆ ಹಾಗೂ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದಲ್ಲಿ ಆಗಬೇಕಾಗಿರುವ ಅಭಿವೃದ್ದಿ ಕಾರ್ಯಗಳತ್ತ ಗಮನ ಕೊಡುವುದಾಗಿ ತಿಳಿಸಿದರು.
ಪ್ರವಾಸದಿಂದ ನೇರ ಚುನಾವಣೆಯಲ್ಲಿಗೆ: ಗ್ರಾ.ಪಂ. ಅಧ್ಯಕ್ಷರ ಚುನಾವಣೆಯನ್ನೆ ಪ್ರತಿಷ್ಠೆಯನ್ನಾಗಿಸಿಕೊಂಡಿದ್ದ ಸದಸ್ಯರು ಶಾಸಕ ಸುರೇಶ್ ಬಾಬು ಜೊತೆಗೂಡಿ ಕಳೆದ ಕೆಲ ದಿನಗಳಿಂದ ಪ್ರವಾಸಕ್ಕೆ ತೆರಳಿದ್ದ ಜೆಡಿಎಸ್ ಬೆಂಬಲಿತ 28 ಸದಸ್ಯರು ಭದ್ರ ಪ್ರಾಜಕ್ಟ್ ನ ಜಂಗಲ್ ರೆಸಾರ್ಟ್ ನಲ್ಲಿ ಬೀಡುಬಿಟ್ಟಿದ್ದು, ಗುರುವಾರದಂದು ನೇರವಾಗಿ ಚುನಾವಣೆ ನಡೆದ ಪಂಚಾಯ್ತಿ ಕಚೇರಿಗೆ ಆಗಮಿಸಿ, ಜೆಡಿಎಸ್ ನ ಕಾಳಮ್ಮ ಅವರಿಂದ ಉಮೇದುವಾರಿಕೆ ಸಲ್ಲಿಸಿದರು. ಆದರೆ ಉನ್ನುಳಿದ ಬಿಜೆಪಿಯ ಬೆಂಬಲಿತ ಕೆಲ ಸದಸ್ಯರು ಹಾಜರಿದ್ದರೂ ಸಹ ಯಾರು ನಾಮಪತ್ರ ಸಲ್ಲಿಸಲಿಲ್ಲ.
ಪ್ರಬಾರ ಪಿಡಿಓ ಅಡವೀಶ್ ಕುಮಾರ್ ತಹಶಿಲ್ದಾರ್ ಅವರ ಸಮ್ಮುಖದಲ್ಲಿ ಬೆಳಿಗ್ಗೆ 9.30 ರಿಂದ ಪ್ರಾರಂಭಗೊಂಡ ಚುನಾವಣ ಪ್ರಕ್ರಿಯೆಯಲ್ಲಿ ನಾಮಪತ್ರ ಸಲ್ಲಿಕೆ, ನಾಮಪತ್ರಪರಿಶೀಲನೆ, ನಾಮಪತ್ರ ಹಿಂತೆಗೆದುಕೊಳ್ಳುವಿಕೆ ಹಾಗೂ ಮಧ್ಯಾಹ್ನ 12 ಕ್ಕೆ ಸಭೆ ನಡೆಸಲಾಯಿತು.ಈ ಸಂಧರ್ಭದಲ್ಲಿ ಗ್ರಾ.ಪಂ. ಉಅಪ್ಧ್ಯಕ್ಷೆ ಅಬಿದುನ್ನಿಸಾ,ಸದಸ್ಯರಾದ ಅಶೋಕ್ ಬಾಬು,ಗಂಗಣ್ಣ,ಜಹೀರ್ ಸಾಬ್, ಗೀತಾಬಾಬು,ಅನ್ಸರ್ ಅಲಿ,ಧನುಷ್ ರಂಗನಾಥ್, ಹೇಮಂತ್,ರಾಘವೇಂದ್ರ,ಪುಟ್ಟರಾಜು,ವೆಂಕಟಮ್ಮ,ಡಿಶ್ ಬಾಬು,ಬೈರೇಶ್ ಸೇರಿದಂತೆ ಇತರ ಸದಸ್ಯರು ಉಪಸ್ಥಿತರಿದ್ದರು.
ಈ ಹಿಂದೆ ಅಧ್ಯಕ್ಷೆಯಾಗಿದ್ದ ಪುಟ್ಟಿಬಾಯಿ ಅವರನ್ನು ಪಂಚಾಯ್ತಿ ಸದಸ್ಯರು ಅವಿಸ್ವಾಸ ನಿರ್ಣಯ ಮಂಡಿಸಿದ್ದರ ಫಲವಾಗಿ ಅವರು ಪದಚ್ಯುತಗೊಂಡಿದ್ದರಿಂದ ಅಧ್ಯಕ್ಷ ಸ್ಥಾನ ತೆರನಾಗಿತ್ತು. ಈ ಸಂಬಂಧ ಗುರುವಾರದಂದು ನಡೆದ ಚುನಾವಣೆಯಲ್ಲಿ ಪಂಚಾಯ್ತಿಯ ಒಟ್ಟು 33 ಸದಸ್ಯರ ಪೈಕಿ 30 ಮಂದಿ ಹಾಜರಿದ್ದು, ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಜೆಡಿಎಸ್ ಬೆಂಬಲಿತ ಕಾಳಮ್ಮ ನಾಮಪತ್ರ ಸಲ್ಲಿಸಿದ್ದು ಇತರೆ ಅಭ್ಯರ್ಥಿ ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಕಾಳಮ್ಮ ಅವರೇ ಅಧ್ಯಕ್ಷರಾಗಿ ಆಯ್ಕೆಯಾದರು.
ಹುಳಿಯಾರು ಗ್ರಾ.ಪಂ.ನ ನೂತನ ಅಧ್ಯಕ್ಷರಾಗಿ ಜೆಡಿಎಸ್ ನ ಕಾಳಮ್ಮ ಆವಿರೋಧವಾಗಿ ಆಯ್ಕೆಯಾಗಿದ್ದು,ಇತರ ಸದಸ್ಯರು ಅಭಿನಂದಿಸಿದರು. |
ಹುಳಿಯಾರು ಗ್ರಾ.ಪಂ.ಯ ಅಧ್ಯಕ್ಷರ ಆಯ್ಕೆಗಾಗಿ ಗುರುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಕಾಳಮ್ಮ ಒಬ್ಬರು ಮಾತ್ರ ತಹಶೀಲ್ದಾರ್ ಕಾಮಾಕ್ಷಮ್ಮ ಅವರಿಗೆ ನಾಮಪತ್ರ ಸಲ್ಲಿಸಿದರು. |
ಅಧ್ಯಕ್ಷರಾಗಿ ಆಯ್ಕೆಯಾದ ಕಾಳಮ್ಮ ಈ ಸಂಧರ್ಭದಲ್ಲಿ ಮಾತನಾಡಿ, ಅನುಸೂಚಿತ ಜಾತಿಗೆ ಮೀಸಲಿರಿಸಿದ್ದ ಅಧ್ಯಕ್ಷ ಸ್ಥಾನಕ್ಕೆ ತನ್ನನ್ನು ಆಯ್ಕೆ ಮಾಡಿರುವ ಎಲ್ಲಾ ಸದಸ್ಯರಿಗೂ ಹಾಗೂ ಸಾಮಾಜಿಕ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ತಮ್ಮ ಬೆಂಬಲಕ್ಕೆ ಬಂದ ಶಾಸಕ ಸುರೇಶ್ ಬಾಬು ಅವರಿಗೆ ಕೃತಜ್ಞತೆ ಸಲ್ಲಿಸಿದರು. ಎಂದಿಗೂ ಈ ಸ್ಥಾನಕ್ಕೆ ಚ್ಯುತಿಬಾರದಂತೆ ಹಾಗೂ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದಲ್ಲಿ ಆಗಬೇಕಾಗಿರುವ ಅಭಿವೃದ್ದಿ ಕಾರ್ಯಗಳತ್ತ ಗಮನ ಕೊಡುವುದಾಗಿ ತಿಳಿಸಿದರು.
ಪ್ರವಾಸದಿಂದ ನೇರ ಚುನಾವಣೆಯಲ್ಲಿಗೆ: ಗ್ರಾ.ಪಂ. ಅಧ್ಯಕ್ಷರ ಚುನಾವಣೆಯನ್ನೆ ಪ್ರತಿಷ್ಠೆಯನ್ನಾಗಿಸಿಕೊಂಡಿದ್ದ ಸದಸ್ಯರು ಶಾಸಕ ಸುರೇಶ್ ಬಾಬು ಜೊತೆಗೂಡಿ ಕಳೆದ ಕೆಲ ದಿನಗಳಿಂದ ಪ್ರವಾಸಕ್ಕೆ ತೆರಳಿದ್ದ ಜೆಡಿಎಸ್ ಬೆಂಬಲಿತ 28 ಸದಸ್ಯರು ಭದ್ರ ಪ್ರಾಜಕ್ಟ್ ನ ಜಂಗಲ್ ರೆಸಾರ್ಟ್ ನಲ್ಲಿ ಬೀಡುಬಿಟ್ಟಿದ್ದು, ಗುರುವಾರದಂದು ನೇರವಾಗಿ ಚುನಾವಣೆ ನಡೆದ ಪಂಚಾಯ್ತಿ ಕಚೇರಿಗೆ ಆಗಮಿಸಿ, ಜೆಡಿಎಸ್ ನ ಕಾಳಮ್ಮ ಅವರಿಂದ ಉಮೇದುವಾರಿಕೆ ಸಲ್ಲಿಸಿದರು. ಆದರೆ ಉನ್ನುಳಿದ ಬಿಜೆಪಿಯ ಬೆಂಬಲಿತ ಕೆಲ ಸದಸ್ಯರು ಹಾಜರಿದ್ದರೂ ಸಹ ಯಾರು ನಾಮಪತ್ರ ಸಲ್ಲಿಸಲಿಲ್ಲ.
ಪ್ರಬಾರ ಪಿಡಿಓ ಅಡವೀಶ್ ಕುಮಾರ್ ತಹಶಿಲ್ದಾರ್ ಅವರ ಸಮ್ಮುಖದಲ್ಲಿ ಬೆಳಿಗ್ಗೆ 9.30 ರಿಂದ ಪ್ರಾರಂಭಗೊಂಡ ಚುನಾವಣ ಪ್ರಕ್ರಿಯೆಯಲ್ಲಿ ನಾಮಪತ್ರ ಸಲ್ಲಿಕೆ, ನಾಮಪತ್ರಪರಿಶೀಲನೆ, ನಾಮಪತ್ರ ಹಿಂತೆಗೆದುಕೊಳ್ಳುವಿಕೆ ಹಾಗೂ ಮಧ್ಯಾಹ್ನ 12 ಕ್ಕೆ ಸಭೆ ನಡೆಸಲಾಯಿತು.ಈ ಸಂಧರ್ಭದಲ್ಲಿ ಗ್ರಾ.ಪಂ. ಉಅಪ್ಧ್ಯಕ್ಷೆ ಅಬಿದುನ್ನಿಸಾ,ಸದಸ್ಯರಾದ ಅಶೋಕ್ ಬಾಬು,ಗಂಗಣ್ಣ,ಜಹೀರ್ ಸಾಬ್, ಗೀತಾಬಾಬು,ಅನ್ಸರ್ ಅಲಿ,ಧನುಷ್ ರಂಗನಾಥ್, ಹೇಮಂತ್,ರಾಘವೇಂದ್ರ,ಪುಟ್ಟರಾಜು,ವೆಂಕಟಮ್ಮ,ಡಿಶ್ ಬಾಬು,ಬೈರೇಶ್ ಸೇರಿದಂತೆ ಇತರ ಸದಸ್ಯರು ಉಪಸ್ಥಿತರಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ