ವಿಷಯಕ್ಕೆ ಹೋಗಿ

ಹುಳಿಯಾರಿನಲ್ಲಿ ಕಸದ್ದೇ ಕಾರುಬಾರು

ಜಿಲ್ಲೆಯಲ್ಲೇ ಅತಿ ದೊಡ್ಡ ಹೋಬಳಿ ಕೇಂದ್ರವಾಗಿರುವ, ತಾಲ್ಲೂಕಿನ ಅರ್ಹತೆ ಹೊಂದಿದ್ದರೂ ಪಟ್ಟಣವಾಗೇ ಉಳಿದಿರುವ, ಜಿಲ್ಲೆಯಲ್ಲಿಯೇ 33 ಸದಸ್ಯರನ್ನು ಹೊಂದಿರುವ ಅತಿ ದೊಡ್ಡ ಪಂಚಾಯ್ತಿಯಾಗಿರುವ ಹುಳಿಯಾರಿನಲ್ಲಿ ಕಸದ್ದೇ ಕಾರುಬಾರಾಗಿದ್ದು , ಪಟ್ಟಣದ ತುಂಬೆಲ್ಲಾ ಕಸದ ರಾಶಿ ರಾಶಿ ರಾರಾಜಿಸುತ್ತಿದ್ದು, ಜನತೆ ಅಸಹ್ಯಪಟ್ಟುಕೊಂಡು ಓಡಾಡುವಂತಾಗಿದೆ.
ಆಸ್ಪತ್ರೆಯ ಪ್ರವೇಶದ್ವಾರದಲ್ಲೆ ಕಾಣಸಿಗುವ ಕಸದ ರಾಶಿ.


ಹೌದು .ಹದಿಮೂರು ವಾರ್ಡ್ ಗಳನ್ನು ಹೊಂದಿ ಸರಿಸುಮಾರು 17 ಸಾವಿರ ಜನ ಸಂಖ್ಯೆಯನ್ನು ಮೀರಿರುವ ಪಟ್ಟಣದಲ್ಲಿ ಕಸವಿಲೇವಾರಿಯದ್ದೇ ದೊಡ್ಡ ಸಮಸ್ಯೆಯಾಗಿದೆ. ಪ್ರತಿ ವಾರ್ಡ್ ನಲ್ಲೂ ಕಸ ಶೇಖರಣೆಗೆ ಸೂಕ್ತ ವ್ಯವಸ್ಥೆಯಿಲ್ಲದ ಕಾರಣ ಗುಂಡಿಗಳು,ಚರಂಡಿ ಬದಿ ಹಾಗೂ ಖಾಲಿ ನಿವೇಶನಗಳೇ ಕಸ ಸಂಗ್ರಹಗಾರವಾಗಿ ನಿವಾಸಿಗಳು ಎಲ್ಲೆಂದರಲ್ಲಿ ಎಸೆಯುವ ತ್ಯಾಜ್ಯದಿಂದ ಅನೈರ್ಮಲ್ಯಕ್ಕೆ ಕಾರಣವಾಗಿದೆ.
ಕಸದ ಸಂಗ್ರಹಗಾರವಾಗಿರುವ ಕೆರೆ ಅಂಗಳ

ಪಟ್ಟಣದ ಬಸ್ ನಿಲ್ದಾದ ಅಂಗಡಿಗಳ ಬಳಿ , ರಾಜ್ ಕುಮಾರ್ ರಸ್ತೆಯ ಆಸ್ಪತ್ರೆ ಕಾಂಪೌಡ್ ಬಳಿ, ಹುಳಿಯಾರಮ್ಮದೇವಿ ವೃತ್ತ,ಅಜಾದ್ ನಗರ,ಕೆಂಚಾಂಬ ನಗರ,ರಾಂಗೋಪಾಲ್ ಸರ್ಕಲ್, ಕೆಇಬಿ ಕಚೇರಿಯ ಕಾಂಪೌಡ್ ಬಳಿ , ಹುಳಿಯಾರು ಅಮಾನಿಕೆರೆ ಏರಿಯ ಪಕ್ಕ ಸೇರಿದಂತೆ ಎಲ್ಲಾ ವಾರ್ಡ್ ಗಳ ಗಲ್ಲಿಯೂ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದರೂ ಸಹ ಕಂಡರು ಕಾಣದಂತೆ ಜನ ಇಲ್ಲಿಯೇ ಸಂಚರಿಸುತ್ತಿದ್ದಾರೆ.
ಮಾರುತಿ ನಗರದ ನಿವೇಶನವೊಂದರಲ್ಲಿ ಸುರಿದಿರುವ ಕಸದ ರಾಶಿ


ಸಮಸ್ಯೆ ಏನು: ಪ್ರತಿ ಬೀದಿಯಲ್ಲಿ ಕಸ ಸಂಗ್ರಹಣೆಗೆ ತೊಟ್ಟಿಯಿಡದಿದ್ದು ಮನೆಯಲ್ಲಿನ ಕಸ ಎಲ್ಲಿ ಹಾಕುವುದೆಂಬ ಸಮಸ್ಯೆ ಪ್ರಮುಖವಾಗಿದೆ.ಇದರ ಜೊತೆಗೆ ತರಕಾರಿ ಅಂಗಡಿ, ಹತ್ತಾರೂ ಕೋಳಿ ಅಂಗಡಿ,ಹೋಟೆಲ್ ಸೇರಿದಂತೆ ನೂರಾರು ಅಂಗಡಿಗಳಿಂದ ಸಂಗ್ರಹವಾಗುವ ಟನ್ ಗಟ್ಟಲೆ ಕಸವನ್ನು ಎಲ್ಲಿ ಬೇಕೆಂದರಲ್ಲಿ ಸುರಿಯುವುದರಿಂದ ಸಮಸ್ಯೆ ಬಿಗಡಾಯಿಸಿದೆ.ಬಸ್ ನಿಲ್ದಾಣದ ಬಳಿ ಅತಿಹೆಚ್ಚು ಕಸ ಸಂಗ್ರಹವಾಗುತ್ತಿದ್ದು ಅದನ್ನು ಅಲ್ಲಿಯೆ ಬದಿಯಲ್ಲಿರುವ ಕೆರೆ ಅಂಗಳಕ್ಕೆ ಸುರಿಯುವುದರಿಂದ ಅದೆಲ್ಲ ಕೊಳೆತು ದುರ್ವಾಸನೆ ಬೀರುತ್ತಿದೆ.
ಆಸ್ಪತ್ರೆಯ ಮತ್ತೊಂದು ದ್ವಾರದಲ್ಲೂ ಕಾಣಸಿಗುವ ಕಸದ ರಾಶಿ.

ಕೊರತೆ : ಪಟ್ಟಣದಲ್ಲಿ ನಿತ್ಯ ಉತ್ಪತ್ತಿಯಾಗುವ ಕಸವನ್ನು ತೆರವು ಮಾಡಲು ಪೌರಕಾರ್ಮಿಕ ಕೊರತೆಯಿದೆ ಎನ್ನುತ್ತಾರೆ ಪಂಚಾಯ್ತಿಯ ಸಿಬ್ಬಂದಿ. 12 ಜನ ಲೆಖ್ಖದಲ್ಲಿದ್ದು 10 ಜನ ಮಾತ್ರ ಕೆಲಸ ಮಾಡುತ್ತಿದ್ದಾರೆ. ಅನಾರೋಗ್ಯದ ಕಾರಣ ,ನಿಗದಿತ ಸಮಯಕ್ಕೆ ವೇತನ ನೀಡದಿರುವ ನೆಪವೊಡ್ಡಿ ಅದರಲ್ಲೂ ಕೆಲವರು ಗೈರು ಆಗುತ್ತಾರೆ.ಇರುವ ಸಿಬ್ಬಂದಿಯಿಂದ ಪಟ್ಟಣದ ಕಸಗುಡಿಸಿ , ಇರುವ 145 ಚರಂಡಿಗಳನ್ನು ಸ್ವಚ್ಚಗೊಳಿಸಲು ಆಸಾಧ್ಯವಾಗಿದೆ.
ಕೆ.ಇ.ಬಿ ಮುಂಭಾಗದಲ್ಲಿ ಕಾಣಸಿಗುವ ಕಸದ ರಾಶಿ.

               ಪಟ್ಟಣದಲ್ಲಿ ನಿತ್ಯ ಉತ್ಪತ್ತಿಯಾಗುವ ಕಸವನ್ನು ಒಂದೆಡೆ ಸಂಗ್ರಹಿಸಲು ಪಂಚಾಯ್ತಿಯ ಯಾವುದೇ ಸ್ಥಳವಿಲ್ಲ, ಹಿಂದೆ ಪಟ್ಟಣದಿಂದ ಒಂದು ಕಿ.ಮೀ ದೂರದ ಲಿಂಗಪ್ಪನಪಾಳ್ಯದ ಬಳಿ ಇರುವ ಖಾಲಿ ಜಾಗದಲ್ಲಿ ಕಸ ಸಂಗ್ರಹಿಸಲು ಜಾಗ ಗುರ್ತಿಸಿದ್ದರೂ ಅದು ಇದುವರೆಗೂ ಮಂಜೂರಾಗಿಲ್ಲ. ಅಲ್ಲದೆ ಕಸ ತೆರವು ಮಾಡಲು ಪಂಚಾಯ್ತಿಯಲ್ಲಿ ಸ್ವಂತ ತಳ್ಳುವ ಗಾಡಿಯಾಗಲಿ,ಆಟೋವಾಗಲಿ, ಟ್ರ್ಯಾಕ್ಟರ್ ಇಲ್ಲದೆ ವಾರಕ್ಕೊಮ್ಮೆ ಬಾಡಿಗೆ ಟ್ರ್ಯಾಕ್ಟರ್ ಪಡೆದು ಇರುವ ಹತ್ತು ಪೌರಕಾರ್ಮಿಕರನ್ನೇ ಬಳಿಸಿ ಪಟ್ಟಣದ ವಿವಿಧ ರಸ್ತೆ, ಬಡಾವಣೆಗಳಲ್ಲಿ ಬಿದ್ದಿರುವ ಕಸವನ್ನು ಅದಷ್ಟೂ ತೆರವು ಮಾಡುತ್ತಿದ್ದೇವೆ ಆದರೂ ಸಹ ಕಸದ ಪ್ರಮಾಣ ಹೆಚ್ಚಾಗಿದೆ ಎನ್ನುತ್ತಾರೆ ಪಿಡಿಓ ಅಡವೀಶ್ ಕುಮಾರ್.


ಟ್ರಾಕ್ಟರ್ ಮಂಜಣ್ಣನ ಮನೆಮುಂಭಾಗದಲ್ಲಿ ಕಾಣಸಿಗುವ ಕಸದ ತಿಪ್ಪೆ.
 ಕಸಮುಕ್ತ ಪಟ್ಟಣಕ್ಕೆ ಪಂಚಾಯ್ತಿಸಿಬ್ಬಂದಿಯವರು ಸೂಕ್ತಕ್ರಮ ಕೈಗೊಂಡಲ್ಲಿಹಾಗೂ ಪಂಚಾಯ್ತಿ ಕಾರ್ಯ

ವೈಖರಿ ಬಗ್ಗೆ ಅಪಸ್ವರ ಎತ್ತುವ ನಾಗರೀಕರು ಸಹ ಎಲ್ಲೆಂದರಲ್ಲಿ ಕಸ ಎಸೆಯುವ ಚಾಳಿಯ ಬಗ್ಗೆ ಅರಿವು ಮೂಡಿಸಿಕೊಂಡು ಸಹಕರಿಸಿದಲ್ಲಿ ಮತ್ತು ಎಲ್ಲರೂ ತಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಕಾಳಜಿ ವಹಿಸಿದಲ್ಲಿ ಪಟ್ಟಣ ಸ್ವಚ್ಛತೆ ಕಾಪಾಡಬಹುದಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.