ಜಿಲ್ಲೆಯಲ್ಲೇ ಅತಿ ದೊಡ್ಡ ಹೋಬಳಿ ಕೇಂದ್ರವಾಗಿರುವ, ತಾಲ್ಲೂಕಿನ ಅರ್ಹತೆ ಹೊಂದಿದ್ದರೂ ಪಟ್ಟಣವಾಗೇ ಉಳಿದಿರುವ, ಜಿಲ್ಲೆಯಲ್ಲಿಯೇ 33 ಸದಸ್ಯರನ್ನು ಹೊಂದಿರುವ ಅತಿ ದೊಡ್ಡ ಪಂಚಾಯ್ತಿಯಾಗಿರುವ ಹುಳಿಯಾರಿನಲ್ಲಿ ಕಸದ್ದೇ ಕಾರುಬಾರಾಗಿದ್ದು , ಪಟ್ಟಣದ ತುಂಬೆಲ್ಲಾ ಕಸದ ರಾಶಿ ರಾಶಿ ರಾರಾಜಿಸುತ್ತಿದ್ದು, ಜನತೆ ಅಸಹ್ಯಪಟ್ಟುಕೊಂಡು ಓಡಾಡುವಂತಾಗಿದೆ.
ಹೌದು .ಹದಿಮೂರು ವಾರ್ಡ್ ಗಳನ್ನು ಹೊಂದಿ ಸರಿಸುಮಾರು 17 ಸಾವಿರ ಜನ ಸಂಖ್ಯೆಯನ್ನು ಮೀರಿರುವ ಪಟ್ಟಣದಲ್ಲಿ ಕಸವಿಲೇವಾರಿಯದ್ದೇ ದೊಡ್ಡ ಸಮಸ್ಯೆಯಾಗಿದೆ. ಪ್ರತಿ ವಾರ್ಡ್ ನಲ್ಲೂ ಕಸ ಶೇಖರಣೆಗೆ ಸೂಕ್ತ ವ್ಯವಸ್ಥೆಯಿಲ್ಲದ ಕಾರಣ ಗುಂಡಿಗಳು,ಚರಂಡಿ ಬದಿ ಹಾಗೂ ಖಾಲಿ ನಿವೇಶನಗಳೇ ಕಸ ಸಂಗ್ರಹಗಾರವಾಗಿ ನಿವಾಸಿಗಳು ಎಲ್ಲೆಂದರಲ್ಲಿ ಎಸೆಯುವ ತ್ಯಾಜ್ಯದಿಂದ ಅನೈರ್ಮಲ್ಯಕ್ಕೆ ಕಾರಣವಾಗಿದೆ.
ಪಟ್ಟಣದ ಬಸ್ ನಿಲ್ದಾದ ಅಂಗಡಿಗಳ ಬಳಿ , ರಾಜ್ ಕುಮಾರ್ ರಸ್ತೆಯ ಆಸ್ಪತ್ರೆ ಕಾಂಪೌಡ್ ಬಳಿ, ಹುಳಿಯಾರಮ್ಮದೇವಿ ವೃತ್ತ,ಅಜಾದ್ ನಗರ,ಕೆಂಚಾಂಬ ನಗರ,ರಾಂಗೋಪಾಲ್ ಸರ್ಕಲ್, ಕೆಇಬಿ ಕಚೇರಿಯ ಕಾಂಪೌಡ್ ಬಳಿ , ಹುಳಿಯಾರು ಅಮಾನಿಕೆರೆ ಏರಿಯ ಪಕ್ಕ ಸೇರಿದಂತೆ ಎಲ್ಲಾ ವಾರ್ಡ್ ಗಳ ಗಲ್ಲಿಯೂ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದರೂ ಸಹ ಕಂಡರು ಕಾಣದಂತೆ ಜನ ಇಲ್ಲಿಯೇ ಸಂಚರಿಸುತ್ತಿದ್ದಾರೆ.
ಸಮಸ್ಯೆ ಏನು: ಪ್ರತಿ ಬೀದಿಯಲ್ಲಿ ಕಸ ಸಂಗ್ರಹಣೆಗೆ ತೊಟ್ಟಿಯಿಡದಿದ್ದು ಮನೆಯಲ್ಲಿನ ಕಸ ಎಲ್ಲಿ ಹಾಕುವುದೆಂಬ ಸಮಸ್ಯೆ ಪ್ರಮುಖವಾಗಿದೆ.ಇದರ ಜೊತೆಗೆ ತರಕಾರಿ ಅಂಗಡಿ, ಹತ್ತಾರೂ ಕೋಳಿ ಅಂಗಡಿ,ಹೋಟೆಲ್ ಸೇರಿದಂತೆ ನೂರಾರು ಅಂಗಡಿಗಳಿಂದ ಸಂಗ್ರಹವಾಗುವ ಟನ್ ಗಟ್ಟಲೆ ಕಸವನ್ನು ಎಲ್ಲಿ ಬೇಕೆಂದರಲ್ಲಿ ಸುರಿಯುವುದರಿಂದ ಸಮಸ್ಯೆ ಬಿಗಡಾಯಿಸಿದೆ.ಬಸ್ ನಿಲ್ದಾಣದ ಬಳಿ ಅತಿಹೆಚ್ಚು ಕಸ ಸಂಗ್ರಹವಾಗುತ್ತಿದ್ದು ಅದನ್ನು ಅಲ್ಲಿಯೆ ಬದಿಯಲ್ಲಿರುವ ಕೆರೆ ಅಂಗಳಕ್ಕೆ ಸುರಿಯುವುದರಿಂದ ಅದೆಲ್ಲ ಕೊಳೆತು ದುರ್ವಾಸನೆ ಬೀರುತ್ತಿದೆ.
ಕೊರತೆ : ಪಟ್ಟಣದಲ್ಲಿ ನಿತ್ಯ ಉತ್ಪತ್ತಿಯಾಗುವ ಕಸವನ್ನು ತೆರವು ಮಾಡಲು ಪೌರಕಾರ್ಮಿಕ ಕೊರತೆಯಿದೆ ಎನ್ನುತ್ತಾರೆ ಪಂಚಾಯ್ತಿಯ ಸಿಬ್ಬಂದಿ. 12 ಜನ ಲೆಖ್ಖದಲ್ಲಿದ್ದು 10 ಜನ ಮಾತ್ರ ಕೆಲಸ ಮಾಡುತ್ತಿದ್ದಾರೆ. ಅನಾರೋಗ್ಯದ ಕಾರಣ ,ನಿಗದಿತ ಸಮಯಕ್ಕೆ ವೇತನ ನೀಡದಿರುವ ನೆಪವೊಡ್ಡಿ ಅದರಲ್ಲೂ ಕೆಲವರು ಗೈರು ಆಗುತ್ತಾರೆ.ಇರುವ ಸಿಬ್ಬಂದಿಯಿಂದ ಪಟ್ಟಣದ ಕಸಗುಡಿಸಿ , ಇರುವ 145 ಚರಂಡಿಗಳನ್ನು ಸ್ವಚ್ಚಗೊಳಿಸಲು ಆಸಾಧ್ಯವಾಗಿದೆ.
ಪಟ್ಟಣದಲ್ಲಿ ನಿತ್ಯ ಉತ್ಪತ್ತಿಯಾಗುವ ಕಸವನ್ನು ಒಂದೆಡೆ ಸಂಗ್ರಹಿಸಲು ಪಂಚಾಯ್ತಿಯ ಯಾವುದೇ ಸ್ಥಳವಿಲ್ಲ, ಹಿಂದೆ ಪಟ್ಟಣದಿಂದ ಒಂದು ಕಿ.ಮೀ ದೂರದ ಲಿಂಗಪ್ಪನಪಾಳ್ಯದ ಬಳಿ ಇರುವ ಖಾಲಿ ಜಾಗದಲ್ಲಿ ಕಸ ಸಂಗ್ರಹಿಸಲು ಜಾಗ ಗುರ್ತಿಸಿದ್ದರೂ ಅದು ಇದುವರೆಗೂ ಮಂಜೂರಾಗಿಲ್ಲ. ಅಲ್ಲದೆ ಕಸ ತೆರವು ಮಾಡಲು ಪಂಚಾಯ್ತಿಯಲ್ಲಿ ಸ್ವಂತ ತಳ್ಳುವ ಗಾಡಿಯಾಗಲಿ,ಆಟೋವಾಗಲಿ, ಟ್ರ್ಯಾಕ್ಟರ್ ಇಲ್ಲದೆ ವಾರಕ್ಕೊಮ್ಮೆ ಬಾಡಿಗೆ ಟ್ರ್ಯಾಕ್ಟರ್ ಪಡೆದು ಇರುವ ಹತ್ತು ಪೌರಕಾರ್ಮಿಕರನ್ನೇ ಬಳಿಸಿ ಪಟ್ಟಣದ ವಿವಿಧ ರಸ್ತೆ, ಬಡಾವಣೆಗಳಲ್ಲಿ ಬಿದ್ದಿರುವ ಕಸವನ್ನು ಅದಷ್ಟೂ ತೆರವು ಮಾಡುತ್ತಿದ್ದೇವೆ ಆದರೂ ಸಹ ಕಸದ ಪ್ರಮಾಣ ಹೆಚ್ಚಾಗಿದೆ ಎನ್ನುತ್ತಾರೆ ಪಿಡಿಓ ಅಡವೀಶ್ ಕುಮಾರ್.
ಕಸಮುಕ್ತ ಪಟ್ಟಣಕ್ಕೆ ಪಂಚಾಯ್ತಿಸಿಬ್ಬಂದಿಯವರು ಸೂಕ್ತಕ್ರಮ ಕೈಗೊಂಡಲ್ಲಿಹಾಗೂ ಪಂಚಾಯ್ತಿ ಕಾರ್ಯ
ವೈಖರಿ ಬಗ್ಗೆ ಅಪಸ್ವರ ಎತ್ತುವ ನಾಗರೀಕರು ಸಹ ಎಲ್ಲೆಂದರಲ್ಲಿ ಕಸ ಎಸೆಯುವ ಚಾಳಿಯ ಬಗ್ಗೆ ಅರಿವು ಮೂಡಿಸಿಕೊಂಡು ಸಹಕರಿಸಿದಲ್ಲಿ ಮತ್ತು ಎಲ್ಲರೂ ತಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಕಾಳಜಿ ವಹಿಸಿದಲ್ಲಿ ಪಟ್ಟಣ ಸ್ವಚ್ಛತೆ ಕಾಪಾಡಬಹುದಾಗಿದೆ.
ಆಸ್ಪತ್ರೆಯ ಪ್ರವೇಶದ್ವಾರದಲ್ಲೆ ಕಾಣಸಿಗುವ ಕಸದ ರಾಶಿ. |
ಹೌದು .ಹದಿಮೂರು ವಾರ್ಡ್ ಗಳನ್ನು ಹೊಂದಿ ಸರಿಸುಮಾರು 17 ಸಾವಿರ ಜನ ಸಂಖ್ಯೆಯನ್ನು ಮೀರಿರುವ ಪಟ್ಟಣದಲ್ಲಿ ಕಸವಿಲೇವಾರಿಯದ್ದೇ ದೊಡ್ಡ ಸಮಸ್ಯೆಯಾಗಿದೆ. ಪ್ರತಿ ವಾರ್ಡ್ ನಲ್ಲೂ ಕಸ ಶೇಖರಣೆಗೆ ಸೂಕ್ತ ವ್ಯವಸ್ಥೆಯಿಲ್ಲದ ಕಾರಣ ಗುಂಡಿಗಳು,ಚರಂಡಿ ಬದಿ ಹಾಗೂ ಖಾಲಿ ನಿವೇಶನಗಳೇ ಕಸ ಸಂಗ್ರಹಗಾರವಾಗಿ ನಿವಾಸಿಗಳು ಎಲ್ಲೆಂದರಲ್ಲಿ ಎಸೆಯುವ ತ್ಯಾಜ್ಯದಿಂದ ಅನೈರ್ಮಲ್ಯಕ್ಕೆ ಕಾರಣವಾಗಿದೆ.
ಕಸದ ಸಂಗ್ರಹಗಾರವಾಗಿರುವ ಕೆರೆ ಅಂಗಳ |
ಪಟ್ಟಣದ ಬಸ್ ನಿಲ್ದಾದ ಅಂಗಡಿಗಳ ಬಳಿ , ರಾಜ್ ಕುಮಾರ್ ರಸ್ತೆಯ ಆಸ್ಪತ್ರೆ ಕಾಂಪೌಡ್ ಬಳಿ, ಹುಳಿಯಾರಮ್ಮದೇವಿ ವೃತ್ತ,ಅಜಾದ್ ನಗರ,ಕೆಂಚಾಂಬ ನಗರ,ರಾಂಗೋಪಾಲ್ ಸರ್ಕಲ್, ಕೆಇಬಿ ಕಚೇರಿಯ ಕಾಂಪೌಡ್ ಬಳಿ , ಹುಳಿಯಾರು ಅಮಾನಿಕೆರೆ ಏರಿಯ ಪಕ್ಕ ಸೇರಿದಂತೆ ಎಲ್ಲಾ ವಾರ್ಡ್ ಗಳ ಗಲ್ಲಿಯೂ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದರೂ ಸಹ ಕಂಡರು ಕಾಣದಂತೆ ಜನ ಇಲ್ಲಿಯೇ ಸಂಚರಿಸುತ್ತಿದ್ದಾರೆ.
ಮಾರುತಿ ನಗರದ ನಿವೇಶನವೊಂದರಲ್ಲಿ ಸುರಿದಿರುವ ಕಸದ ರಾಶಿ |
ಸಮಸ್ಯೆ ಏನು: ಪ್ರತಿ ಬೀದಿಯಲ್ಲಿ ಕಸ ಸಂಗ್ರಹಣೆಗೆ ತೊಟ್ಟಿಯಿಡದಿದ್ದು ಮನೆಯಲ್ಲಿನ ಕಸ ಎಲ್ಲಿ ಹಾಕುವುದೆಂಬ ಸಮಸ್ಯೆ ಪ್ರಮುಖವಾಗಿದೆ.ಇದರ ಜೊತೆಗೆ ತರಕಾರಿ ಅಂಗಡಿ, ಹತ್ತಾರೂ ಕೋಳಿ ಅಂಗಡಿ,ಹೋಟೆಲ್ ಸೇರಿದಂತೆ ನೂರಾರು ಅಂಗಡಿಗಳಿಂದ ಸಂಗ್ರಹವಾಗುವ ಟನ್ ಗಟ್ಟಲೆ ಕಸವನ್ನು ಎಲ್ಲಿ ಬೇಕೆಂದರಲ್ಲಿ ಸುರಿಯುವುದರಿಂದ ಸಮಸ್ಯೆ ಬಿಗಡಾಯಿಸಿದೆ.ಬಸ್ ನಿಲ್ದಾಣದ ಬಳಿ ಅತಿಹೆಚ್ಚು ಕಸ ಸಂಗ್ರಹವಾಗುತ್ತಿದ್ದು ಅದನ್ನು ಅಲ್ಲಿಯೆ ಬದಿಯಲ್ಲಿರುವ ಕೆರೆ ಅಂಗಳಕ್ಕೆ ಸುರಿಯುವುದರಿಂದ ಅದೆಲ್ಲ ಕೊಳೆತು ದುರ್ವಾಸನೆ ಬೀರುತ್ತಿದೆ.
ಆಸ್ಪತ್ರೆಯ ಮತ್ತೊಂದು ದ್ವಾರದಲ್ಲೂ ಕಾಣಸಿಗುವ ಕಸದ ರಾಶಿ. |
ಕೊರತೆ : ಪಟ್ಟಣದಲ್ಲಿ ನಿತ್ಯ ಉತ್ಪತ್ತಿಯಾಗುವ ಕಸವನ್ನು ತೆರವು ಮಾಡಲು ಪೌರಕಾರ್ಮಿಕ ಕೊರತೆಯಿದೆ ಎನ್ನುತ್ತಾರೆ ಪಂಚಾಯ್ತಿಯ ಸಿಬ್ಬಂದಿ. 12 ಜನ ಲೆಖ್ಖದಲ್ಲಿದ್ದು 10 ಜನ ಮಾತ್ರ ಕೆಲಸ ಮಾಡುತ್ತಿದ್ದಾರೆ. ಅನಾರೋಗ್ಯದ ಕಾರಣ ,ನಿಗದಿತ ಸಮಯಕ್ಕೆ ವೇತನ ನೀಡದಿರುವ ನೆಪವೊಡ್ಡಿ ಅದರಲ್ಲೂ ಕೆಲವರು ಗೈರು ಆಗುತ್ತಾರೆ.ಇರುವ ಸಿಬ್ಬಂದಿಯಿಂದ ಪಟ್ಟಣದ ಕಸಗುಡಿಸಿ , ಇರುವ 145 ಚರಂಡಿಗಳನ್ನು ಸ್ವಚ್ಚಗೊಳಿಸಲು ಆಸಾಧ್ಯವಾಗಿದೆ.
ಕೆ.ಇ.ಬಿ ಮುಂಭಾಗದಲ್ಲಿ ಕಾಣಸಿಗುವ ಕಸದ ರಾಶಿ. |
ಪಟ್ಟಣದಲ್ಲಿ ನಿತ್ಯ ಉತ್ಪತ್ತಿಯಾಗುವ ಕಸವನ್ನು ಒಂದೆಡೆ ಸಂಗ್ರಹಿಸಲು ಪಂಚಾಯ್ತಿಯ ಯಾವುದೇ ಸ್ಥಳವಿಲ್ಲ, ಹಿಂದೆ ಪಟ್ಟಣದಿಂದ ಒಂದು ಕಿ.ಮೀ ದೂರದ ಲಿಂಗಪ್ಪನಪಾಳ್ಯದ ಬಳಿ ಇರುವ ಖಾಲಿ ಜಾಗದಲ್ಲಿ ಕಸ ಸಂಗ್ರಹಿಸಲು ಜಾಗ ಗುರ್ತಿಸಿದ್ದರೂ ಅದು ಇದುವರೆಗೂ ಮಂಜೂರಾಗಿಲ್ಲ. ಅಲ್ಲದೆ ಕಸ ತೆರವು ಮಾಡಲು ಪಂಚಾಯ್ತಿಯಲ್ಲಿ ಸ್ವಂತ ತಳ್ಳುವ ಗಾಡಿಯಾಗಲಿ,ಆಟೋವಾಗಲಿ, ಟ್ರ್ಯಾಕ್ಟರ್ ಇಲ್ಲದೆ ವಾರಕ್ಕೊಮ್ಮೆ ಬಾಡಿಗೆ ಟ್ರ್ಯಾಕ್ಟರ್ ಪಡೆದು ಇರುವ ಹತ್ತು ಪೌರಕಾರ್ಮಿಕರನ್ನೇ ಬಳಿಸಿ ಪಟ್ಟಣದ ವಿವಿಧ ರಸ್ತೆ, ಬಡಾವಣೆಗಳಲ್ಲಿ ಬಿದ್ದಿರುವ ಕಸವನ್ನು ಅದಷ್ಟೂ ತೆರವು ಮಾಡುತ್ತಿದ್ದೇವೆ ಆದರೂ ಸಹ ಕಸದ ಪ್ರಮಾಣ ಹೆಚ್ಚಾಗಿದೆ ಎನ್ನುತ್ತಾರೆ ಪಿಡಿಓ ಅಡವೀಶ್ ಕುಮಾರ್.
ಟ್ರಾಕ್ಟರ್ ಮಂಜಣ್ಣನ ಮನೆಮುಂಭಾಗದಲ್ಲಿ ಕಾಣಸಿಗುವ ಕಸದ ತಿಪ್ಪೆ. |
ವೈಖರಿ ಬಗ್ಗೆ ಅಪಸ್ವರ ಎತ್ತುವ ನಾಗರೀಕರು ಸಹ ಎಲ್ಲೆಂದರಲ್ಲಿ ಕಸ ಎಸೆಯುವ ಚಾಳಿಯ ಬಗ್ಗೆ ಅರಿವು ಮೂಡಿಸಿಕೊಂಡು ಸಹಕರಿಸಿದಲ್ಲಿ ಮತ್ತು ಎಲ್ಲರೂ ತಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಕಾಳಜಿ ವಹಿಸಿದಲ್ಲಿ ಪಟ್ಟಣ ಸ್ವಚ್ಛತೆ ಕಾಪಾಡಬಹುದಾಗಿದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ