ವಿಷಯಕ್ಕೆ ಹೋಗಿ

ಪುಸ್ತಕದ ಅಂಗಡಿಯಲ್ಲಿ ಮಕ್ಕಳ ದಟ್ಟಣೆ

 ವರದಿ: ಡಿ.ಆರ್.ನರೇಂದ್ರಬಾಬು     
    ಜೂನ್ ೧ ರಿಂದ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು ರಜೆ ಮಜಾ ಸವಿದ ಮಕ್ಕಳು ಈಗ ಶಾಲೆಯ ಮೆಟ್ಟಿಲೇರುತ್ತಿದ್ದು ಆಟದ ಮೋಜು ಕಳೆದು ವಿದ್ಯಾಭ್ಯಾಸದತ್ತ ಚಿತ್ತ ಹೊರಳಿದರೆ, ಮಕ್ಕಳಿಗೆ ಅಗತ್ಯವಾದ ಸ್ಕೂಲ್ ಬ್ಯಾಗ್, ನೋಟ್ ಪುಸ್ತಕಗಳು,ಲೇಖನ ಸಾಮಗ್ರಿ ಕೊಡಿಸುವತ್ತ ಪೋಷಕರ ಗಮನ ಹರಿದಿದೆ. ಹಾಗಾಗಿ ಪಟ್ಟಣದ ಅಂಗಡಿಗಳಲ್ಲಿ ಮಕ್ಕಳ ಸದ್ದೇ ಕೇಳಿ ಬರುತ್ತಿದ್ದು, ಪುಸ್ತಕ ಅಂಗಡಿಗಳೆಲ್ಲಾ ದಟ್ಟಣೆಯಿಂದ ಕೂಡಿದ್ದು ಶಾಲಾ ಸಾಮಗ್ರಿಗಳ ವ್ಯಾಪಾರ ಜೋರಾಗಿ ನಡೆದಿದ್ದು ಮಕ್ಕಳ ಬೇಡಿಕೆ ಪೋರೈಸುವಲ್ಲಿ ವ್ಯಾಪಾರಿಗಳು ಹೈರಾಣಾಗಿದ್ದಾರೆ.
              ಶಾಲೆಗಳಿಗೆ ಸರ್ಕಾರವೇ ಪಠ್ಯಪುಸ್ತಕ ಪೂರೈಸಲಿರುವುದರಿಂದ ಪಠ್ಯಪುಸ್ತಕದ ಸಮಸ್ಯೆ ಇಲ್ಲವಾಗಿದೆ. ಕೆಲವು ಖಾಸಗಿ ಶಾಲೆಗಳಲ್ಲಿ ಆಡಳಿತ ಮಂಡಳಿಯೇ ಪುಸ್ತಕ,ಸಮವಸ್ತ್ರಗಳನ್ನು, ಲೇಖನ ಸಾಮಗ್ರಿಗಳನ್ನು ಪೂರೈಸುತ್ತಾದ್ದರಿಂದ ಪಾಲಕರಿಗೆ ಅಷ್ಟರ ಮಟ್ಟಿನ ಹೊರೆ ಕಡಿಮೆಯಾಗಿದೆ. ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಶಾಲೆಗಳಿರುವುದರಿಂದ ಸಹಸ್ರಾರು ವಿದ್ಯಾರ್ಥಿಗಳ ಪಠ್ಯಪುಸ್ತಕ ಹೊರತು ಪಡಿಸಿ ಇನ್ನಿತರ ಶಾಲಾ ಸಾಮಗ್ರಿಗಳ ಬೇಡಿಕೆ ಪೂರೈಸುವ ಜವಬ್ದಾರಿ ಅಂಗಡಿಯವರದ್ದಾಗಿದೆ.
             ಸೀಮಿತ ವ್ಯಾಪಾರ: ಪುಸ್ತಕದ ವ್ಯಾಪಾರ ಸೀಮಿತ ಅವಧಿಯದ್ದಾಗಿದ್ದು ಇದೇ ದಟ್ಟಣೆ ಇನ್ನು ಹದಿನೈದು ಮಾತ್ರ ಕಾಣಬಹುದಿದ್ದು ನಂತರ ಪುಸ್ತಕಗಳ ಖರೀದಿ ವಿರಳ ಎಂದು ಉಮಾಸ್ಟೋರ್ ನ ಮಾಲೀಕ ಭದ್ರೀಶ್ ಪ್ರತಿಕ್ರಿಯುಸುತ್ತಾರೆ. ತಾವು ಮೂವತ್ತು ವರ್ಷದಿಂದ ಇದೇ ವೃತ್ತಿಯಲ್ಲಿದ್ದು ಆಯಾ ಶೈಕ್ಷಣಿಕ ವರ್ಷದ ಆರಂಭದಲ್ಲಿ ಮಾತ್ರ ಪುಸ್ತಕಗಳ ಹಾಗೂ ಶಾಲಾ ಸಾಮಗ್ರಿಗಳ ಮಾರಾಟ ಜೋರಾಗಿರುತ್ತದೆ. ಇತ್ತೀಚೆಗೆ ಪಠ್ಯಪುಸ್ತಕ ಶಾಲೆಯಲ್ಲೇ ನೀಡುವುದರಿಂದ ನಮ್ಮಲ್ಲಿ ಕೇವಲ ಸ್ಕೂಲ್ ಬ್ಯಾಗ್,ನೋಟ್ ಪುಸ್ತಕ,ಲೇಖನ ಸಾಮಗ್ರಿ ಮುಂತಾದ ವಸ್ತುಗಳು ಖರೀದಿ ಮಾತ್ರ ನಡೆಯುತ್ತದೆ.
           ವಿದ್ಯಾರ್ಥಿಗಳ ಎಲ್ಲಾ ತರಹದ ಬೇಡಿಕೆಗಳನ್ನು ತೊಂದರೆಯಾಗದಂತೆ ತಾವು ಪೂರೈಸುತ್ತಿದ್ದು , ಉತ್ತಮ ಗುಣಮಟ್ಟ ಹಾಗೂ ಕಡಿಮೆ ಲಾಭಾಂಶವೇ ನಮ್ಮ ಅಂಗಡಿಯ ಹೆಗ್ಗಳಿಕೆ ಎನ್ನುತ್ತಾರೆ.
ಹುಳಿಯಾರಿನ ಉಮಾ ಸ್ಟೋರ್ ನಲ್ಲಿ ಶಾಲಾ ಮಕ್ಕಳಿಗಾಗಿ ಖರೀದಿಗಿಟ್ಟಿರುವ ವಿವಿಧ ರೀತಿಯ ಸ್ಕೂಲ್ ಬ್ಯಾಗ್ ಗಳು
           ಒಟ್ಟಾರೆ ಶೈಕ್ಷಣಿಕ ವರ್ಷ ಆರಂಭವಾಯಿತೆಂದರೆ ಸಾಕು, ಪಾಲಕರೊಂದಿಗೆ ತೆರಳುವ ಮಕ್ಕಳು ಸಾಕಷ್ಟು ಖರೀದಿ ನಡೆಸುತ್ತಿದ್ದು ಅಂಗಡಿದಾರರಿಗೆ ಮಾತನಾಡಲು ಪುರಸೊತ್ತಿಲ್ಲದಾಗಿದೆ. ಜೂನ್ ತಿಂಗಳ ಅಂತ್ಯದವರೆಗೆ ಮಾತ್ರ ಇದೇ ರೀತಿ ವ್ಯಾಪಾರ ಮುಂದುವರೆಯುತ್ತದೆ. ನಂತರ ಎಂದಿನಂತೆ ಅವರು ತಮ್ಮ ವ್ಯಾಪಾರ ನಡೆಸಬೇಕಾಗುತ್ತದೆ.
      ಪೋಷಕರ ಅಳಲು: ಶಾಲೆ ಪ್ರಾರಂಭವಾಯಿತು ಎಂದರೆ ಮಕ್ಕಳ ಬೇಡಿಕೆಯನ್ನು ಪೂರೈಸುವುದೇ ಪೋಷಕರ ಕೆಲಸವಾಗಿದ್ದು , ಅವರು ಕೇಳುವ ಬ್ಯಾಗು,ನೋಟ್ ಪುಸ್ತಕಗಳನ್ನು ಪ್ರತಿವರ್ಷವೂ ಹೊಸದಾಗಿ ಕೊಡಿಸಬೇಕಾಗಿದೆ. ನೋಟ್ ಪುಸ್ತಕ, ಕಂಪಾಸ್ ಪಟ್ಟಿಗೆ, ಸಮವಸ್ತ್ರ, ಶೋ ಸೇರಿದಂತೆ ಶಾಲೆಗಳಲ್ಲಿ ನೀಡುವ ಇತರ ವಸ್ತುಗಳನ್ನು ಪಟ್ಟಿ ಹನುಂತನ ಬಾಲದಂತಿದ್ದು, ಮಕ್ಕಳು ಇವನ್ನೆಲ್ಲಾ ಕೊಡಿಸುವಂತೆ ಪಟ್ಟುಹಿಡಿಯುತ್ತಾರೆ. ಸರಿ ಕೊಡಿಸೋಣವೆಂದು ಮಾರುಕಟ್ಟೆಗೆ ಹೋದರೆ ಅಲ್ಲಿ ಬಗೆಬಗೆಯ ಬ್ಯಾಗ್,ಲೇಖನ ಸಾಮಗ್ರಿಗಳು ರಾರಾಜಿಸುತ್ತಿದ್ದು ಬೆಲೆಗಳೆಲ್ಲಾ ದುಪ್ಪಟ್ಟಾಗಿ ಪೋಷಕರ ಜೇಬು ಖಾಲಿಯಾಗುತ್ತಿದೆ, ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು ಹಿಂದಿನಂತೆ ಪೋಷಕರು ಮಕ್ಕಳು ಕೇಳಿದನ್ನೆಲ್ಲಾ ಕೊಡಿಸಲು ಸಾಧ್ಯವಿಲ್ಲವಾಗಿದೆ. ಹಿಂದೆ ಐದಾರುನೂರು ರೂ ಗಳಲ್ಲಿ ಮುಗಿಯುತ್ತಿದ್ದ ಮಕ್ಕಳ ಪುಸ್ತಕದ ಪಟ್ಟಿ ಇದೀಗ ಸಾವಿರವನ್ನು ದಾಟಿದೆ. ಮಾರುಕಟ್ಟೆಯಲ್ಲಿ ಆಕರ್ಷಣೀಯ ವಸ್ತುಗಳು ಹೆಚ್ಚಾಗಿರುವುದರಿಂದ ಮಕ್ಕಳಿಗೆ ಪ್ರತಿ ವರ್ಷವೂ ಹೊಸದಾಗೆ ಬ್ಯಾಗ್ ಹಾಗೂ ಇತರ ವಸ್ತುಗಳನ್ನು ಕೊಡಿಸುವ ಹೊರೆ ಪೋಷಕರ ಮೇಲೆ ಬಿದ್ದಿದೆ.

           ಮಕ್ಕಳು ಕೇಳುವ ವಸ್ತುಗಳನ್ನು ಕೊಡಿಸುವಷ್ಟರಲ್ಲಿ ಪೋಷಕರಿಗೆ ಸಾಕಪ್ಪ ಸಾಕು ಎನ್ನುವಂತಾದರೂ ಸಹ ಅವರೆಲ್ಲರ ಆಶಾಭಾವನೆ ಮಾತ್ರ ಒಂದೇ ಅದು ನಮ್ಮ ಮಕ್ಕಳು ಓದಿ ವಿದ್ಯಾವಂತರಾಗ ಬೇಕು ಎಂಬುದು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.