ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೇ, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮಾರುತಿ ಯುವಕರ ಸಂಘದವತಿಯಿಂದ ದೇಣಿಗೆ

ಹುಳಿಯಾರು ಹೋಬಳಿಯ ದೊಡ್ಡಬೆಳವಾಡಿಯಲ್ಲಿನ ಚೌಡೇಶ್ವರಿದೇವಿ ಜಾತ್ರಾಮಹೋತ್ಸವದ ಸಂದರ್ಭದಲ್ಲಿ ಚೌಡೇಶ್ವರಿದೇವಿ ದೇವಸ್ಥಾನ ನಿರ್ಮಾಣಕಾಗಿ ಸಿ.ಬಿ.ಎಸ್ ಮಾರುತಿ ಯುವಕರ ಸಂಘದವತಿಯಿಂದ ಐದು ಸಾವಿರ ರೂ.ಗಳನ್ನು ದೇಣಿಗೆ ನೀಡಲಾಯಿತು. ಸಿ.ಬಿ.ಎಸ್ ಮಾರುತಿ ಯುವಕರ ಸಂಘದ ಅಧ್ಯಕ್ಷ ಕುಮಾರ ಸ್ವಾಮಿ, ಖಜಾಂಚಿ ರಾಜಣ್ಣ ,ಪೂಜಾರ್ ಲಂಕೇಪ್ಪ ,ಗುಡಿಗೌಡ ಗಿರೀಶ್, ನಿಂಗರಾಜು, ಚೇತನ್, ಪುರುಷೋತ್ತಮ, ಪರಮೇಶ್ ಮುಂತಾದವರಿದ್ದಾರೆ.

ಹುಳಿಯಾರು ಭುವನಾಗೆ ಶೇ.೯೫ ಅಂಕ

ಹುಳಿಯಾರು:ಪಟ್ಟಣದ ವಿನಾಯಕ ಆಯಿಲ್ ಮಿಲ್ ನ ಸುಧೀರ್ ಅವರ ಪುತ್ರಿ ಭುವನ ಎಲ್.ಎಸ್.ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ೬೦೦ಕ್ಕೆ ೫೬೮ ಹಾಗೂ ಗಣಿತದಲ್ಲಿ ನೂರಕ್ಕೆ ನೂರು ಕ್ಕೆ ಅಂಕಗಳಿಸಿವ ಮೂಲಕ ಶೇ.೯೫ ಅಂಕಗಳಿಸಿದ್ದು ಈಕೆಯನ್ನು ಹುಳಿಯಾರು ಆರ್ಯವೈಶ್ಯ ಸಮಾಜದ ಅಧ್ಯಕ್ಷ ಎಂ.ಎಸ್.ನಟರಾಜು,ಕಾರ್ಯದರ್ಶಿ ಎಲ್.ಆರ್.ಚಂದ್ರಶೇಖರ್ ಸೇರಿದಂತೆ ಸಮಾಜ ಬಾಂಧವರು ಅಭಿನಂದಿಸಿದ್ದಾರೆ.

ಹುಳಿಯಾರಿನ ಪ್ರಮೋದ್ ಪಾಲ್ ಗೆ ಪಿಸಿಎಂಬಿಯಲ್ಲಿ ನೂರಕ್ಕೆ ನೂರು ಅಂಕ

        ಹುಳಿಯಾರಿನ ಪ್ರಮೋದ್ ಪಾಲ್ ಬುಧವಾರದಂದು ಪ್ರಕಟವಾದ ಪಿಯುಸಿ ಫಲಿತಾಂಶದಲ್ಲಿ ಗ್ರಾಮೀಣ ಪ್ರದೇಶದಿಂದ ಬಂದಂತಹ ವಿದ್ಯಾರ್ಥಿ ಪ್ರಮೋದ್ ಪಾಲ್ ಪಿ.ಸಿ.ಎಂ.ಬಿ.ಯ ಪ್ರತಿ ವಿಷಯದಲ್ಲೂ ನೂರಕ್ಕೆ ನೂರು ಅಂಕಗಳಿಸುವ ಮೂಲಕ ಅದ್ವಿತೀಯ ಸಾಧನೆಗೈದಿದ್ದಾನೆ.        ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಯಾದ ಈತ ಭೌತಶಾಸ್ತ್ರ ,ರಸಾಯನಶಾಸ್ತ್ರ ,ಗಣಿತ ಹಾಗೂ ಜೀವಶಾಸ್ತ್ರ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳಿಸಿದ್ದು ಇದು ಕಾಲೇಜಿನ ಇತಿಹಾಸದಲ್ಲೆ ಪ್ರಥಮವಾಗಿದೆ. ಕನ್ನಡ ದಲ್ಲಿ ೯೫ ಅಂಕ ಹಾಗೂ ಇಂಗ್ಲೀಷ್ ನಲ್ಲಿ ೭೧ ಅಂಕ ಗಳಿಸಿದ್ದು ಒಟ್ಟಾರೆ 566/600 ಅಂಕಗಳಿಸಿದ್ದು ಶೇ94.33 ಗಳಿಸಿರುತ್ತಾನೆ.          ಈತ ಹುಳಿಯಾರು ಸಮೀಪದ ಯಳನಾಡು ಗ್ರಾಮಪಂಚಾಯ್ತಿ ವ್ಯಾಪ್ಯಿಯ ಸಿಂಗಾಪುರ ಗ್ರಾಮದವನಾಗಿದ್ದು ಪೋಷಕರಾದ ದೇವರಾಜು ಹಾಗೂ ಪೇಮಲೀಲಾ ಕೃಷಿಕ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ.ತನ್ನ ಹಳ್ಳಿಯಿಂದ ಸೈಕಲ್ ಮೂಲಕ ಮೂರು ಕಿಮೀ ದೂರದ ಯಳನಾಡುವಿಗೆ ಬಂದು ಅಲ್ಲಿಂದ ಸರ್ಕಾರಿ ಬಸ್ ನಲ್ಲಿ ಹುಳಿಯಾರಿಗೆ ಬರುತ್ತಿದ್ದ ಈತ ಕಾಲೇಜಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿ ಹೆಸರಾಗಿದ್ದ.ಪ್ರಾಥಮಿಕ ಶಿಕ್ಷಣವನ್ನು ಸಿಂಗಾಪುರ ಗ್ರಾಮದಲ್ಲಿ ,ಪ್ರೌಢಶಿಕ್ಷಣವನ್ನು ಹುಳಿಯಾರಿನ ವಾಸವಿ ಶಾಲೆಯಲ್ಲಿ ಪೂರೈಸಿದ್ದ ಈತ ಹಳ್ಳಿಗಾಡಿನಿಂದ ದೂರದ ಹುಳಿಯಾರಿನ ಸರ್ಕಾರಿ ಕಾಲೇಜಿಗೆ ಓಡಾಡಿಕೊಂಡು ಯಾವುದೇ ಮನೆಪಾಠದ ಸಹಾ

ಯಳನಾಡು ಜಾತ್ರೆಯಲ್ಲಿನ ವಿವಾದ ಬಗೆಹರಿಸಲು ಎಲ್ಲರ ಸಹಕಾರ ಅಗತ್ಯ; ಶ್ರೀಈಶ್ವರಾನಂದಪುರಿ ಸ್ವಾಮೀಜಿ

ಹುಳಿಯಾರು: ಹೋಬಳಿಯ ಯಳನಾಡು ಗ್ರಾಮದ ಶ್ರೀಗುರುಸಿದ್ಧರಾಮೇಶ್ವ ಸ್ವಾಮಿಯ ದೊಡ್ಡ ಜಾತ್ರ ಮಹೋತ್ಸವದಲ್ಲಿ ಸ್ವಾಮಿಯನ್ನು ಮಹಾದ್ವಾರದ ಕೆಳಗೆ ಕರೆದೊಯ್ಯಲು ನಿರಾಕರಿಸಿ ವಿವಾದಕ್ಕೀಡುಮಾಡಿರುವುದು ಉತ್ತಮ ಬೆಳವಣಿಗೆಯಲ್ಲ ,ಎರಡು ಕಡೆಯವರು ಈ ವಿಚಾರವನ್ನು ಪ್ರತಿಷ್ಟೆಯಾಗಿ ಪರಿಗಣಿಸಿದ್ದರಿಂದ ಜಾತ್ರೆ ಅರ್ಧಕ್ಕೆ ನಿಲ್ಲುವಂತಾಯಿತು ಎಂದು ಹೊಸದುರ್ಗ ಕನಕ ಶಾಖಾ ಮಠದ ಶ್ರೀಈಶ್ವರಾನಂದಪುರಿ ಸ್ವಾಮೀಜಿಯವರು ಅಸಮಧಾನ ವ್ಯಕ್ತಪಡಿಸಿದರು.           ಇದೇ ವಿಚಾರವಾಗಿ ಯಳನಾಡುವಿನ ರೇವಣಸಿದ್ದೇಶ್ವರ ಸ್ವಾಮಿ ಮಠದಲ್ಲಿ ಬುಧವಾರ ಸಂಜೆ ಕರೆಯಲಾಗಿದ್ದ ಜನಾಂಗದ ಸಭೆಯಲ್ಲಿ ಮಾತನಾಡಿದ ಅವರು ಈ ಬಗ್ಗೆ ಎರಡು ಸಮುದಾಯದವರಲ್ಲೂ ಮುಕ್ತ ಚರ್ಚೆಯಾಗಿ ಮನಸ್ಸು ತಿಳಿಗೊಳಿಸಿಕೊಂಡು ದೇವರ ಕಾರ್ಯವನ್ನು ಹಿಂದಿನ ಸಂಪ್ರದಾಯದಂತೆ ಮುಂದುವರಿಸಿಕೊಂಡು ಹೋಗಬೇಕೆಂದು ಮನವಿ ಮಾಡಿದರು.       ಸಮಾಜ ಮುಖಂಡರ ಜೊತೆ ಜಾತ್ರಾ ಸಮಯದಲ್ಲಿ ಆದ ಬೆಳವಣಿಗೆ ಬಗ್ಗೆ ಮಾಹಿತಿ ಪಡೆದ ಅವರು ಕರಿಯಮ್ಮ ದೇವಿಯ ದ್ವಾರದ ಕೆಳಗೆ ಸಿದ್ದರಾಮೇಶ್ವರ ಸ್ವಾಮಿ ಹೋಗಬಾರದು ಎಂದು ಕೆಲವರು ಪಟ್ಟುಹಿಡಿದು ಹಿಂದಿನ ಪರಂಪರೆಗೆ ಅಡ್ಡಿಮಾಡಿರುವುದು ಒಳ್ಳೆಯ ಬೆಳವಣಿಗೆಯಲ್ಲ.ಜಾತ್ರೆಯಲ್ಲಾಗಿರುವ ಅಡಚಣೆ ಬಗ್ಗೆ ಎರಡು ಸಮಾಜದವರು ಸೇರಿಕೊಂಡು ಸೌಹಾರ್ದವಾಗಿ ಸಮಸ್ಯೆ ಬಗೆಹರಿಸಿಕೊಂಡು ಹಿಂದಿನ ಸಂಪ್ರದಾಯಕ ಆಚರಣೆಗೆ ತೊಡಕಾಗದಂತೆ ಮುಂದುವರಿಸೋಣ ಎಂಬ ಆಶಯ ವ್ಯಕ್ತಪಡಿಸಿದರು.    

ಹುಳಿಯಾರು ಕಾಲೇಜಿನ ವಾಣಿಜ್ಯ ವಿಭಾಗಕ್ಕೆ ಶೇ.೭೬% ಫಲಿತಾಂಶ

ಹುಳಿಯಾರು:ಪಟ್ಟಣದ ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ೨೦೧೬ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ವಾಣಿಜ್ಯ ವಿಭಾಗಕ್ಕೆ ಶೇ.೭೬ ಫಲಿತಾಂಶ ಬಂದಿದೆ.೯೮ ವಿದ್ಯಾರ್ಥಿಗಳ ಪೈಕಿ ೭೫ ವಿದ್ಯಾರ್ಥಿಗಳು ಪಾಸಾಗಿದ್ದು ಮಂಜುಳ.ಆರ್ ೫೩೭ ಹಾಗೂ ಎಲ್.ಆರ್.ಕಿರಣ್ ೫೧೭ ಅಂಕಗಳಿಸಿ ವಾಣಿಜ್ಯ ವಿಭಾಗಕ್ಕೆ ಮುಂದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ೩೭ ವಿದ್ಯಾರ್ಥಿಗಳ ಪೈಕಿ ೨೦ ವಿದ್ಯಾರ್ಥಿಗಳು ಪಾಸಾಗಿದ್ದು ಶೇ.೫೪ರಷ್ಟು ಫಲಿತಾಂಶ ಬಂದಿದೆ.ಪ್ರಮೋದ್ ಪಾಲ್ ೫೬೬ ಅಂಕಗಳಿಸಿದರೆ ಹೆಚ್.ವೈ.ಕಮಲ ೫೧೬ ಅಂಕಗಳನ್ನು ಗಳಿಸಿದ್ದಾರೆ. ಕಲಾ ವಿಭಾಗದಿಂದ ೮೩ ವಿದ್ಯಾರ್ಥಿಗಳ ಪೈಕಿ ೪೨ ವಿದ್ಯಾರ್ಥಿಗಳು ಪಾಸಾಗಿದ್ದು ಶೇ.೫೦ ರಷ್ಟು ಫಲಿತಾಂಶ ಬಂದಿದೆ.ವಾಣಿ ೫೧೮ ಅಂಕಗಳನ್ನು ಗಳಿಸಿ ಮೊದಲಿಗರಾಗಿದ್ದಾರೆ. ವಿಜ್ಞಾನ ವಿಭಾಗದ ವಿದ್ಯಾರ್ಥಿ ಪ್ರಮೋದ್ ಪಾಲ್ ೫೬೬ಗಳಿಸುವ ಮುಖಾಂತರ ಕಾಲೇಜಿಗೆ ಪ್ರಥಮ ಎನ್ನಿಸಿದ್ದಾನೆ.

ಪ್ರಮೋದ್ ಗೆ ಪ್ರಶಂಸೆ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾದ ಪಿ.ಸಿ.ಎಂ.ಬಿ.ಯ ಪ್ರತಿ ವಿಷಯದಲ್ಲೂ ನೂರಕ್ಕೆ ನೂರು ಅಂಕಗಳಿಸಿ ಅದ್ವಿತೀಯ ಸಾಧನೆಗೈದಿದ್ದು ಈತನ ಅಂಕ ಕೇಳಿ ಹರ್ಷ ವ್ಯಕ್ತಪಡಿಸಿದ ಹುಳಿಯಾರು ಸ್ಪಂದನ ನರ್ಸಿಂಗ್ ಹೋಂ ನ ಡಾ.ನಾಗರಾಜ್ ಹತ್ತು ಸಾವಿರ ರೂಪಾಯಿ ನೀಡಿ ಈತನ ಸಾಧನೆಯನ್ನು ಪ್ರಶಂಸಿದ್ದಾರೆ.

ವಿಜೃಂಭಣೆಯ ದುರ್ಗಮ್ಮನ ತಿಂಗಳ ಬಾನ

ಹುಳಿಯಾರು ಪಟ್ಟಣದ ಗ್ರಾಮದೇವತೆ ಶ್ರೀ ದುರ್ಗಮ್ಮನವರ ತಿಂಗಳ ಬಾನವನ್ನು ಮಂಗಳವಾರದಂದು ನೂರಾರು ಭಕ್ತಾಧಿಗಳು ಸೇರಿ ಶ್ರದ್ಧಾಭಕ್ತಿಯಿಂದ ನೆರವೇರಿಸಿದರು.                     ಪ್ರತಿ ವರ್ಷದಂತೆ ಗ್ರಾಮದೇವತೆ ದುರ್ಗಾಪರಮೇಶ್ವರಿ ಅಮ್ಮನವರ ಬ್ರಹ್ಮರಥೋತ್ಸವ ನಡೆದ ಒಂದು ತಿಂಗಳ ತರವಾಯ ತಿಂಗಳ ಬಾನ ನೈವೇದ್ಯ ಕಾರ್ಯಕ್ರಮ ಸಂಪ್ರದಾಯದಂತೆ ಆಚರಿಸಲಾಗುತ್ತಿದ್ದು ಬಾನದ ಪ್ರಯುಕ್ತ ಅಮ್ಮನವರ ಮೂಲಸ್ಥಾನ ಹಾಗೂ ಉತ್ಸವ ಮೂರ್ತಿಗೆ ವಿಶೇಷ ಪೂಜೆ,ಅಭಿಷೇಕ ನೆರವೇರಿತು.             ಸಂಜೆ ಸೋಮನನ್ನು ಮೆರವಣಿಗೆ ಮೂಲಕ ಹೊರಡಿಸಿ ಘಟೆ ಉಕ್ಕಿಸಲಾಯಿತು. ಮುಂಜಾನೆಯಿಂದಲೆ ದೇವಾಲಯಕ್ಕೆ ಆಗಮಿಸುತ್ತಿದ್ದ ಮಹಿಳೆಯರು ಮೂಲಸ್ಥಾನದ ದುರ್ಗಮ್ಮನಿಗೆ ತಂಬಿಟ್ಟಿನ ಆರತಿ ಎತ್ತಿ ಬಾನದ ನೈವೇದ್ಯ ಅರ್ಪಿಸಿದರು.                 ಅಮ್ಮನವರ ತಿಂಗಳ ಬಾನ ಹಾಗೂ ಅಂಬೇಡ್ಕರ ಜಯಂತಿ ಪ್ರಯುಕ್ತ ಹೊಸಹಳ್ಳಿ ಮಾರುತಿ ಕಲಾ ಬಳಗದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕುರುಕ್ಷೇತ್ರ ನಾಟಕ ಪ್ರದರ್ಶಿಸಲಾಯಿತು.ಹಿರಿಯ ರಂಗಭೂಮಿ ಕಲಾವಿದ ಶಂಕರಪ್ಪನವರನ್ನು ಸನ್ಮಾನಿಸಲಾಯಿತು.

ಬರಗೀಹಳ್ಳಿ ಬೆಟ್ಟದಲ್ಲಿ ನರಸಿಂಹ ಜಯಂತಿ ಆಚರಣೆ

                  ಹುಳಿಯಾರು ಸಮೀಪದ ಬರಗೀಹಳ್ಳಿ ಬೆಟ್ಟದಲ್ಲಿ ನರಸಿಂಹ ಜಯಂತಿ ಸಂದರ್ಭದಲ್ಲಿ ಜಿಲ್ಲಾಪಂಚಾಯ್ತಿ ಸದಸ್ಯ ವೈ.ಸಿ.ಸಿದ್ಧರಾಮಣ್ಣ ಅವರನ್ನು ಸಮಿತಿಯಿಂದ ಅಭಿನಂದಿಸಲಾಯಿತು. ಹುಳಿಯಾರು ಸಮೀಪದ ಬರಗೀಹಳ್ಳಿ ಬೆಟ್ಟದ ಶ್ರೀ ಲಕ್ಷ್ಮಿನರಸಿಂಹಸ್ಚಾಮಿ ದೇವಾಲಯದಲ್ಲಿ ಎರಡು ದಿನಗಳಕಾಲ ಲಕ್ಷ್ಮಿನರಸಿಂಹಸ್ವಾಮಿಯ ೪೯ನೇ ವರ್ಷದ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.                ಜಯಂತಿ ಅಂಗವಾಗಿ ಸ್ವಾಮಿಗೆ ಪಂಚಾಮೃತಾಭಿಷೇಕ, ಸಹಸ್ರನಾಮಾರ್ಚನೆ, ಕುಂಕುಮಾರ್ಚನೆ ನಡೆದವಲ್ಲದೆ ನಂತರ ವಸಂತ ಸೇವೆ ಹಾಗೂ ಪಾನಕ ಪನಿವಾರದ ಪ್ರಸಾದ ವಿತರಿಸಲಾಯಿತು.ಸುಮಂಗಲಿಯರಿಂದ ನರಸಿಂಹದೇವರ ಸ್ತೋತ್ರ ಪಠಿಸಲಾಯಿತು.ಮಹಾ ನೈವೇದ್ಯದ ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಶ್ರೀಲಕ್ಷ್ಮಿನರಸಿಂಹಸ್ವಾಮಿ ಸೇವಾ ಟ್ರಸ್ಟ್ ನ ಅತಿ ಹಿರಿಯ ಸದಸ್ಯ ೧೦೪ ವರ್ಷದ ವಿಶ್ವನಾಥ್ ರಾವ್ ಅವರನ್ನು ಸನ್ಮಾನಿಸಲಾಯಿತು.            ಈ ವೇಳೆ ಶ್ರೀಲಕ್ಷ್ಮಿನರಸಿಂಹಸ್ವಾಮಿ ಸೇವಾ ಟ್ರಸ್ಟ್ ನ ರಂಗನಾಥರಾವ್, ಅರ್ಚಕ ಭಾಸ್ಕರ್ ,ಜಿಲ್ಲಾಪಂಚಾಯ್ತಿ ಸದಸ್ಯ ವೈ.ಸಿ.ಸಿದ್ಧರಾಮಣ್ಣ,ಕಾಂಗ್ರೆಸ್ ಮುಖಂಡ ಅಶೋಕ್,ಗಾಯತ್ರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎ.ಲೋಕೇಶ್,ದುರ್ಗಾಪರಮೇಶ್ವರಿ ದೇವಾಲಯದ ಕನ್ವೀನರ್ ಹು.ಕೃ.ವಿಶ್ವನಾಥ್ ಸೇರಿದಂತೆ ಸುತ್ತಮುತ್ತಲ ಹತ್ತಾರು ಹಳ್ಳಿಯ ಗ್ರಾಮಸ್ಥರು ಆಗಮಿಸಿದ್ದು ಸ್ವಾಮಿಯ ದರ್ಶನ ಪಡೆದರು.

ಹುಳಿಯಾರು ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹುಣ್ಣಿಮೆ ಪೂಜೆ

ಹುಳಿಯಾರು ಆಂಜನೇಯ ಸ್ವಾಮಿ  ಹುಳಿಯಾರು:ಪಟ್ಟಣದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹುಣ್ಣಿಮೆ ಅಂಗವಾಗಿ ಶನಿವಾರ ಸಂಜೆ ವಿಶೇಷ ಪೂಜೆ ನಡೆಯಿತು.ಸ್ವಾಮಿಗೆ ಗಂಧದ ಅಲಂಕಾರ,ಅರ್ಚನೆ ಹಾಗೂ ಅಭಿಷೇಕಾಧಿ ಪೂಜೆಗಳು ನೆರವೇರಿತು. ದೇವಾಲಯದಲ್ಲಿ ಹುಣ್ಣಿಮೆ ಪೂಜೆಯ ಅನ್ನಸಂತರ್ಪಣೆ ಶುರುವಾಗಿ ಒಂದು ವರ್ಷವಾಗಿರುವ ಪ್ರಯುಕ್ತ ಸೇವಾಕರ್ತರಿಂದ ಹೋಳಿಗೆ ಊಟದ ಸಂತರ್ಪಣೆ ನಡೆಯಿತು. ಸೇವಾಕರ್ತರಾದ ದೇವಾಲಯದ ಗೌರವಾಧ್ಯಕ್ಷ ಟಿ.ಆರ್.ಶ್ರೀನಿವಾಸ ಶೆಟ್ರು ,ಅಧ್ಯಕ್ಷರಾದ ರಾಮನಾಥ್ ಶೆಟ್ರು ,ಗ್ರಾಪಂ ಸದಸ್ಯರಾದ ಜಯಮ್ಮಟ್ರಾಕ್ಟರ್ ಮಂಜಣ್ಣ ದಂಪತಿಗಳು,ಹಾಲಮ್ಮ ,ಕಂಪನಹಳ್ಳಿ ಅಡುಗೆ ಮರುಳಯ್ಯ,ಡೈರಿ ಬಸವರಾಜು,ಡಾ.ಶೀಲಾಚಂದ್ರಪ್ಪ ಹಾಜರಿದ್ದರು. ಇತರೆಡೆ: ಹುಣ್ಣಿಮೆ ಅಂಗವಾಗಿ ಕೆಂಕೆರೆ ಪುರದಮಠದಲ್ಲಿ ವಿಶೇಷಪೂಜೆ ಹಾಗೂ ಅನ್ನಸಂತರ್ಪಣೆ ನಡೆದರೆ ಬೋರನಕಣಿವೆಯ ಶ್ರೀ ಸಾಯಿಬಾಬಾ ಮಂದಿರದಲ್ಲಿ ,ಹುಳಿಯಾರಿನ ಬನಶಂಕರಿ ದೇವಾಲಯದಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ ಹಮ್ಮಿಕೊಳ್ಳಲಾಗಿತ್ತು.

ಕೆರೆಕಟ್ಟೆ ಕಟ್ಟಿದ ಸಿದ್ಧರಾಮರು ನಾಡು ಕಂಡಿರುವ ಶ್ರೇಷ್ಟ ಕಾಯಕ ಯೋಗಿ:ಬಿಎಸ್ ವೈ

ಹುಳಿಯಾರು ಸಮೀಪದ ಯಳನಾಡು ಗ್ರಾಮದಲ್ಲಿ ಶ್ರೀಸಿದ್ಧರಾಮೇಶ್ವರಸ್ವಾಮಿಯವರ ದೊಡ್ಡಜಾತ್ರೆಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪನವರನ್ನು ಜಾತ್ರಾಸಮಿತಿಯವರು ಸ್ವಾಗತಿಸಿದರು. ಯಳನಾಡು-ಅರಸೀಕೆರೆ ಮಹಾಸಂಸ್ಥಾನದ ಶ್ರೀ ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಮಹಾಸ್ವಾಮೀಜಿಯವರು ಹಾಜರಿದ್ದರು.  ಹುಳಿಯಾರು : ನಮ್ಮ ನಾಡಿನ ಪರಂಪರೆಯಲ್ಲಿ ಭಕ್ತಿಗೆ ಬಸವಣ್ಣ, ಆಧ್ಯಾತ್ಮಕ್ಕೆ ಅಲ್ಲಮಪ್ರಭು, ವೈರಾಗ್ಯಕ್ಕೆ ಅಕ್ಕಮಹಾದೇವಿ, ಕಾಯಕತತ್ವಕ್ಕೆ ಸಿದ್ಧರಾಮರು ಎಂಬ ನಂಬಿಕೆ ಮನೆ ಮಾಡಿದ್ದು ಅದರಂತೆ ಸಿದ್ಧರಾಮರು ಕರುನಾಡು ಕಂಡಿರುವ ಶ್ರೇಷ್ಟ ಕಾಯಕ ಯೋಗಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಿದ್ಧರಾಮರ ಗುಣಗಾನ ಮಾಡಿದರು.                 ಹುಳಿಯಾರು ಸಮೀಪದ ಯಳನಾಡು ಗ್ರಾಮದಲ್ಲಿ ಶ್ರೀಸಿದ್ಧರಾಮೇಶ್ವರಸ್ವಾಮಿಯವರ ದೊಡ್ಡಜಾತ್ರೆಯ ಅಂಗವಾಗಿ ಈಚೆಗೆ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.                  ಕಾಯಕವೇ ಕೈಲಾಸ ಎಂದು ನಂಬಿದ್ದ ಸಿದ್ಧರಾಮರು ಸಂಚರಿಸಿದ ಕಡೆಯೆಲ್ಲಾ ಕೆರೆಕಟ್ಟೆ ಕಟ್ಟಿ ಕಾಯಕ ತತ್ವ, ರೈತ ನಿಷ್ಠೆ ಹಾಗೂ ಸಾಮಾಜಿಕ ಕಳಕಳಿಗೆ ನಿದರ್ಶನರಾಗಿದ್ದಾರೆ.ಸಿದ್ಧರಾಮರು ಆಚಾರದಿಂದ ಶರಣರಾದವರು. ಯಳನಾಡುವಿನ ಅವರ ಈ ಪುಣ್ಯಕ್ಷೇತ್ರಕ್ಕೆ ಭಕ್ತಸಾಗರವೇ ಹರಿದು ಬರುತ್ತಿದ್ದು ಸಿದ್ಧರಾಮರ ಮಠಮಂದಿರಗಳನ್ನು ಅಭಿವೃದ್ಧಿ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ

ಬಲ್ಲಪ್ಪನಹಟ್ಟಿಯಲ್ಲಿ ಶಾಲಾ ದಾಖಲಾತಿ ಆಂದೋಲನ

ಹುಳಿಯಾರು : ೨೦೧೬- ೧೭ ನೇ ಸಾಲಿಗೆ ಸೇರ್ಪಡೆಯಾಗುವ ಮಕ್ಕಳನ್ನು ಗುರುತಿಸುವ ವಿಶೇಷ ದಾಖಲಾತಿ ಆಂದೋಲನ ಜಾಥಾವನ್ನು ಹುಳಿಯಾರು ಹೋಬಳಿ ಬಲ್ಲಪ್ಪನಹಟ್ಟಿಯಲ್ಲಿ ನಡೆಸಲಾಯಿತು.  ಹುಳಿಯಾರು ಹೋಬಳಿ ಬಲ್ಲಪ್ಪನಹಟ್ಟಿಯಲ್ಲಿ ೨೦೧೬- ೧೭ ನೇ ಸಾಲಿಗೆ ಸೇರ್ಪಡೆಯಾಗುವ ಮಕ್ಕಳನ್ನು ಗುರುತಿಸುವ ವಿಶೇಷ ದಾಖಲಾತಿ ಆಂದೋಲನ ಜಾಥಾ ನಡೆಸಲಾಯಿತು. ಶಿಕ್ಷಣ ಮಕ್ಕಳ ಮೂಲಭೂತ ಹಕ್ಕಾಗಿದ್ದು ೫ ವರ್ಷ ತುಂಬಿದ ಎಲ್ಲಾ ಮಕ್ಕಳನ್ನು ಕಡ್ಡಾಯವಾಗಿ ದಾಖಲಾತಿ ಮಾಡುವಂತೆ ತಾ.ಪಂ. ಸದಸ್ಯ ಪ್ರಸನ್ನಕುಮಾರ್ ಪೋಷಕರಲ್ಲಿ ಮನವಿ ಮಾಡಿದರು. ಗ್ರಾಮದಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸಿ ವಿದ್ಯಾವಂತರನ್ನಾಗಿಸುವುದು ನಮ್ಮ ಗುರಿ ಎಂದರು. ಎಸ್.ಡಿ.ಎಂ.ಸಿ. ಅದ್ಯಕ್ಷ ಚಿತ್ತಪ್ಪ ಶಾಲೆಗೆ ದಾಖಲಾಗುವ ಪೋಷಕರ ಮನೆಗೆ ಕರೆದೊಯ್ದು ಮಕ್ಕಳನ್ನು ಗುರುತಿಸಿ ಕಡ್ಡಾಯವಾಗಿ ಶಾಲೆಗೆ ಸೇರಿಸುವಂತೆ ಪ್ರೇರೇಪಿಸಿದರು. ಊರಿನ ಪ್ರಮುಖ ಬೀದಿಗಳಲ್ಲಿ ನಡೆದ ಜಾಥಾದಲ್ಲಿ ದಬ್ಬಗುಂಟೆ ಶಾಲೆಯ ಈರಸಿದ್ದಯ್ಯ, ದಸೂಡಿ ಕ್ಲಸ್ಟರ್ ಸಿ.ಆರ್.ಪಿ. ರಘುನಂದನ್, ದೈ. ಶಿಕ್ಷಕ ರಾಜಣ್ಣ, ಸಹ ಶಿಕ್ಷಕ ಮೃತ್ಯುಂಜಯ, ಪ್ರಬಾರಿ ಮು.ಶಿ.ಚಂದ್ರಶೇಖರ್, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.

ವಳಗೆರೆಹಳ್ಳಿಯಲ್ಲಿ ಶ್ರದ್ಧಾಭಕ್ತಿಯಿಂದ ನಡೆದ ಕುಂಭಾಭಿಷೇಕ

ಹುಳಿಯಾರು : ಸಮೀಪದ ವಳಗೆರೆಹಳ್ಳಿಯಲ್ಲಿ ಶ್ರೀ ಶನೇಶ್ವರ ಸ್ವಾಮಿಯವರ ೨೦ ನೇ ವರ್ಷದ ಕುಂಭಾಭಿಷೇಕ ಶನಿವಾರದಂದು  ಶ್ರದ್ಧಾಭಕ್ತಿಯಿಂದ  ನೆರವೇರಿತು.            ಶುಕ್ರವಾರ ಸಂಜೆಯಿದಲೇ ನೆರವೇರಿದ ಧಾರ್ಮಿಕ ಕಾರ್ಯದಲ್ಲಿ ದೇವಾಲಯದ ಮುಂಭಾಗ ಕಾಕವಾಹನ ಪ್ರತಿಷ್ಠಾಪನೆ ,ಪಂಚಕಳಸ ಸ್ಥಾಪನೆ,ನವಗ್ರಹ ಸ್ಥಾಪನೆ ಮಾಡಲಾಯಿತು.         ಶನಿವಾರ ಮುಂಜಾನೆ ಹೆಚ್.ಎಸ್.ಲಕ್ಷ್ಮೀನರಸಿಂಹಯ್ಯನವರ ನೇತೃತ್ವದಲ್ಲಿ ಪುಣ್ಯಾಹ, ದೇವನಾಂದಿ, ನವಗ್ರಹ ಹೋಮ,ಶನೈಶ್ವರ ಹೋಮ,ಮೃತ್ಯುಂಜಯ ಹೋಮ, ಪಂಚಾಮೃತ ಅಭಿಷೇಕ ಮತ್ತು ಸಹಸ್ರನಾಮ ಅರ್ಚನೆ ನೆರವೇರಿತು.ಪೂರ್ಣಾಹುತಿ ಅರ್ಪಿಸಿ ಮಹಾಮಂಗಳಾರತಿ ಮಾಡಿದ ನಂತರ ಗ್ರಾಮಸ್ಥರು ಹಾಗೂ ಭಕ್ತಾಧಿಗಳ ಸಮ್ಮುಖದಲ್ಲಿ ಮಂಗಳವಾದ್ಯದ ಹಿಮ್ಮೇಳದಲ್ಲಿ ಶ್ರೀ ಶನೇಶ್ವರಸ್ವಾಮಿಗೆ ಹಾಗೂ ಕಳಸಕ್ಕೆ ಕುಂಭಾಭಿಷೇಕ ನೆರವೇರಿಸಲಾಯಿತು.       ಸುತ್ತಮುತ್ತಲ ಹಳ್ಳಿಯ ಭಕ್ತಾಧಿಗಳು ಆಗಮಿಸಿದ್ದು ಸ್ವಾಮಿಯ ಕುಂಭಾಭಿಷೇಕವನ್ನು ಕಣ್ತುಂಬಿಕೊಂಡರು.ಆಗಮಿಸಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.ಸಂಜೆ ಶನಿಪ್ರಭಾವ ಪೌರಣಿಕ ನಾಟಕ ನಡೆಯಿತು.       ಈ ವೇಳೆ ಕುಲದ ಯಜಮಾನ ಲಕ್ಷ್ಮಣರಾವ್, ದೇವಾಲಯ ಸಮಿತಿಯ ಅಧ್ಯಕ್ಷ ಹನುಮಂತರಾವ್, ಪಾಂಡೋಜಿರಾವ್,ಪರಶುರಾಮ್,ಗಂಗಾಧರ್,ಗ್ರಾಪಂ ಸದಸ್ಯರುಗಳಾದ ಚಂದ್ರಶೇಖರ್ ರಾವ್,ಶಿವಾಜಿ ರಾವ್ ,ಸುಭದ್ರಭಾಯಿ ಭಾಪುರಾವ್ ಮತ್ತಿತರರು ಹಾಜರಿದ್ದರು.

ಹುಳಿಯಾರು:ಇಂದು ಮತ್ತೆ ನಾಳೆ ವೈದ್ಯಕೀಯ ತಪಾಸಣ ಶಿಬಿರ

ಹುಳಿಯಾರು ಪಟ್ಟಣದ ರೋಟರಿ ಸಂಸ್ಥೆ ಹಾಗೂ ಬಳ್ಳಾರಿಯ ಸತ್ಯ ಹೆಲ್ತ್ ಕೇರ್ ಟ್ರಸ್ಟ್ ಇವರುಗಳ ಸಂಯುಕ್ತಾಶ್ರಯದಲ್ಲಿ ಮೇ.೧೪ ರ ಶನಿವಾರ ಹಾಗೂ ಭಾನುವಾರದಂದು ವೈದ್ಯಕೀಯ ತಪಾಸಣ ಶಿಬಿರವನ್ನು ವಾಸವಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಮುಂಜಾನೆ ೭ ರಿಂದ ಪ್ರಾರಂಭವಾಗುವ ಶಿಬಿರದಲ್ಲಿ ರಕ್ತ,ಮೂತ್ರ,ಥೈರಾಯಿಡ್,ಲಿವರ್ ಗೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಲಾಗುವುದಿದ್ದು ಹೆಚ್ಚಿನ ವಿವರಗಳಿಗೆ ರೋಟರಿ ಅಧ್ಯಕ್ಷ ಮಂಜುನಾಥ್ ಗುಪ್ತಾ(೯೯೪೪೮೯೫೧೦೬೭),ದುರ್ಗರಾಜು(೯೪೪೮೬ ೫೯೫೬೬),ರವೀಶ್ (೯೪೪೮೫ ೩೩೯೭೬) ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.

ಇಂದು(ಮೇ.೧೪) ಶನೇಶ್ವರಸ್ವಾಮಿಯವರ ಕುಂಭಾಭಿಷೇಕ

ಹುಳಿಯಾರು ಸಮೀಪದ ವಳಗೆರೆಹಳ್ಳಿಯ ಶ್ರೀ ಶನೇಶ್ವರ ಸ್ವಾಮಿಯವರ ೨೦ ನೇ ವರ್ಷದ ಕುಂಭಾಭಿಷೇಕ ಮಹೋತ್ಸವದ ಅಂಗವಾಗಿ ಮೇ.೧೪ ರ ಶನಿವಾರ ಬೆಳಿಗ್ಗೆ ೭.೪೫ ಕ್ಕೆ ಪುಣ್ಯಾಹ, ದೇವನಾಂದಿ, ನವಗ್ರಹ ಹೋಮ,ಶನೈಶ್ವರ ಹೋಮ,ಮೃತ್ಯುಂಜಯ ಹೋಮ, ಪಂಚಾಮೃತ ಅಭಿಷೇಕ ಮತ್ತು ಸಹಸ್ರನಾಮ ಅರ್ಚನೆ ನಡೆಯಲಿದೆ. ಮ.೧೨.೪೫ ಕ್ಕೆ ಶನೇಶ್ವರ ಸ್ವಾಮಿಗೆ ಕುಂಭಾಭಿಷೇಕ ನಡೆದು ಮಧ್ಯಾಹ್ನ ೧.೩೦ ಕ್ಕೆ ಅನ್ನಸಂತರ್ಪಣೆ. ರಾತ್ರಿ ೧೦ ಕ್ಕೆ ಊರಿನ ಗ್ರಾಮಸ್ಥರಿಂದ ಶನಿಪ್ರಭಾವ ಪೌರಣಿಕ ನಾಟಕ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕೋರಲಾಗಿದೆ.

ಇಂದು(ಮೇ.೧೪) ಭೀಮಮ್ಮ ದೇವಿಯ ಕೆಂಡೋತ್ಸವ

ಹುಳಿಯಾರು ಪಟ್ಟಣದ ಶಿರಾ ಕ್ರಾಸ್ ಬಳಿಯಿರುವ ಶ್ರೀ ಠೋಕ್ರಿ ಬನ್ಕಿ(ಭೀಮಮ್ಮ)ದೇವಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ಮೇ.೧೪ರ ಶನಿವಾರದಂದು ಗಂಗಾಪೂಜೆ,ಹೊಳೆಸೇವೆ,ನಡೆಮುಡಿ, ಕೆಂಡೋತ್ಸವ,ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ೭ ಕ್ಕೆ ಧಾರ್ಮಿಕ ಸಭೆ ಹಾಗೂ ಆರ್ಕೇಸ್ಟ್ರಾ ಏರ್ಪಡಿಸಲಾಗಿದೆ.

ಶ್ರೀ ಶೈಲ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಪ್ರಾರಂಭೋತ್ಸವ

ಹುಳಿಯಾರು: ಸಮೀಪದ ಕೆಂಕೆರೆಯ ಎಂಜಿ ಪಾಳ್ಯದಲ್ಲಿ ಶ್ರೀ ಶೈಲ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಪ್ರಾರಂಭೋತ್ಸವ ಶುಕ್ರವಾರದಂದು ಷಡಸ್ಥಳದ ಧ್ವಜಾರೋಹಣದೊಂದಿಗೆ ಚಾಲನೆಗೊಂಡಿದ್ದು ಮೇ.೧೪ ಹಾಗೂ ೧೫ ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ. ಶನಿವಾರದಂದು ಸಂಜೆ ಕೆಂಕೆರೆಯ ಗ್ರಾಮದೇವತೆಗಳಾದ ಶ್ರೀ ಚನ್ನಬಸವೇಶ್ವರ ಸ್ವಾಮಿ ಹಾಗೂ ಕಾಳಮ್ಮನವರ ಆಗಮನ,ಪುಣ್ಯಾಹ,ಗಣಹೋಮ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ. ಭಾನುವಾರದಂದು ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿಗಳ ಅಮೃತಹಸ್ತದಿಂದ ನೂತನ ಆಲಯದ ಗೋಪುರದ ಕಳಸ ಸ್ಥಾಪನೆ ಹಾಗೂ ತತ್ಸಂಬಂಧ ಧಾರ್ಮಿಕ ಕಾರ್ಯಗಳು ನಡೆಯಲಿದೆ. ಮಧ್ಯಾಹ್ನ ೧೨ ಗಂಟೆಗೆ ಶ್ರೀ ಶೈಲಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಜನಜಾಗೃತಿ ಭಾವೈಕ್ಯ ಧರ್ಮ ಸಮಾರಂಭ ನಡೆಯಲಿದೆ.ಕರಿಸಿದ್ದೇಶ್ವರ ಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮಿಗಳು,ಕೆ.ಬಿದರೆ ದೊಡ್ಡಮಠದ ಪ್ರಭುಕುಮಾರ ಶಿವಾಚಾರ್ಯ ಸ್ವಾಮಿಗಳು, ಚನ್ನಗಿರಿ ತಾಲ್ಲೂಕ್ ತಾವರೆಕೆರೆ ಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು,ಮಾದಿಹಳ್ಳಿ ಹಿರೇಮಠದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು, ಬೆಲಗೂರಿನ ಶ್ರೀ ಬಿಂಧುಮಾಧವ ಸ್ವಾಮಿಗಳ ಉಪಸ್ಥಿತಿಯಲ್ಲಿ ನಡೆಯಲಿರುವ ಸಮಾರಂಭದ ಅಧ್ಯಕ್ಷತೆಯನ್ನು ಶಾಸ

ಆಕಸ್ಮಿಕ ಬೆಂಕಿ:ಲಕ್ಷಾಂತರ ರೂ.ನಷ್ಟ

ಹುಳಿಯಾರು: ವಾಸದ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗಲಿ ಲಕ್ಷಾಂತರ ರೂ ನಷ್ಟವಾಗಿರುವ ಘಟನೆ ಹುಳಿಯಾರಿನ ಶ್ರೀದುರ್ಗಾಪರಮೇಶ್ವರಿ ದೇವಾಲಯದ ಸಮೀಪದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ. ಸಣ್ಣಪುಟ್ಟ ಕೂಲಿ ಕೆಲಸ ಮತ್ತು ಹಳ್ಳಿಗಳ ಮೇಲೆ ಬಟ್ಟೆ ವ್ಯಾಪಾರವನ್ನು ಮಾಡಿಕೊಂಡು ಜೊತೆಗೆ ಟೈಲರ್ ಕೆಲಸವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಯಶೋದ ಬಾಯಿ ಎಂಬುವರ ನಿವಾಸದಲ್ಲಿ ಮನೆಯ ಕುಟುಂಬದವರೆಲ್ಲಾ ಊಟ ಮುಗಿಸಿ ಗುರುವಾರ ರಾತ್ರಿ ಮಲಗಿದ್ದಾಗ ಘಟನೆ ಜರುಗಿದೆ.            ಮಧ್ಯರಾತ್ರಿ ೨ಗಂಟೆಯ ಸಮಯದಲ್ಲಿ ಮನೆಯ ಒಳಗಡೆಯ ಕೋಣೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಮನೆಯವರೆಲ್ಲಾ ದಿಢೀರನೆ ಎದ್ದು ಜೋರಾಗಿ ಕೂಗಾಡಿದಾಗ ಅಕ್ಕಪಕ್ಕದ ಮನೆಯವರೆಲ್ಲಾ ಎದ್ದು ಬಂದು ಬೆಂಕಿ ಆರಿಸುವ ಪ್ರಯತ್ನ ನಡೆಸಿ ಬೆಂಕಿ ಆರಿಸಿದ್ದಾರೆ. ಅಷ್ಟರಲ್ಲಾಗಲೇ ಮನೆಯ ಮೇಲ್ಛಾವಣಿಯ ಮರದ ತೀರು, ವ್ಯಾಪಾರಕ್ಕೆಂದ್ದು ತಂದಿದ್ದ ಸೀರೆ, ಡ್ರಸ್ ಹಾಗೂ ಮದುವೆಗೆ ಹೊಲೆದು ಕೊಡುವಂತೆ ಜನರು ನೀಡಿದ್ದ ೩ ಹೊಸ ಬಟ್ಟೆಗಳು, ರೇಷ್ಮೆ ಬಟ್ಟೆಗಳು ಹಾಗೂ ೨ ಬಟ್ಟೆ ಹೊಲಿಯುವ ಯಂತ್ರಗಳು, ಮನೆಯಲ್ಲಿದ್ದ ಬೀರು ಸೇರಿದಂತೆ ಸುಮಾರು ೨ ಲಕ್ಷ ರೂ. ನಷ್ಟವಾಗಿದೆ.                      ಜೊತೆಗೆ ಬೀರುವಿನಲ್ಲಿದ್ದ ಹಣ, ರೇಷನ್ ಕಾರ್ಡ್, ಮನೆಯ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಪ್ರಮಾಣ ಪತ್ರಗಳು ಸೇರಿದಂತೆ ಎಲ್ಲಾ ದಾಖಲೆ ಪತ್ರಗಳು ಸುಟ್ಟುಭಸ್ಮವಾಗಿದೆ.

ಹುಳಿಯಾರಿನಲ್ಲಿ ಮಹರ್ಷಿ ಭಗಿರಥ ಜಯಂತಿ ಆಚರಣೆ

ಹುಳಿಯಾರು :ಮಹರ್ಷಿ ಭಗಿರಥ ಜಯಂತಿಯನ್ನು ಹುಳಿಯಾರಿನ ಪಂಚಾಯ್ತಿಯಲ್ಲಿ ಸರಳವಾಗಿ ಆಚರಿಸಲಾಯಿತು. ಗ್ರಾಪಂ ಅಧ್ಯಕ್ಷೆ ಗೀತಾಪ್ರದೀಪ್ ಭಗಿರಥರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ  ತನ್ನ ತಪಸ್ಸಿನ ಬಲದಿಂದ ಸ್ವರ್ಗದಲ್ಲಿದ್ದ ಗಂಗೆಯನ್ನುಭೂಮಿಗೆ ತಂದ ಮಹರ್ಷಿ ಭಗಿರಥರ ಜಯಂತಿಯನ್ನು ಆಚರಿಸಲು ಅವಕಾಶ ದೊರೆತಿರುವುದು ಸೌಭಾಗ್ಯ. ಉಪ್ಪಾರ ಬಂಧುಗಳ ಕುಲಪುರುಷರಾಗಿರುವ ಭಗೀರಥ ಮಹರ್ಷಿಗಳ ಜಯಂತಿಯನ್ನು ಪ್ರತಿ ವರ್ಷ ಸಮಾಜ ಬಂಧುಗಳ ಸಹಯೋಗದಲ್ಲಿ ಪಂಚಾಯ್ತಿಯಲ್ಲಿ ಆಚರಿಸಲಾಗುವುದು ಎಂದರು.          ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಚಂದ್ರಶೇಖರ್ ರಾವ್, ಕೋಳಿ ಶ್ರೀನಿವಾಸ್,ಪಿಡಿಒ ಸಿದ್ಧರಾಮಣ್ಣ,ಉಪ್ಪಾರ ಸಮಾಜದ ಮುಖಂಡರು,ಗ್ರಾಪಂ ಸಿಬ್ಬಂದಿ,ಸಂಘಸಂಸ್ಥೆಗಳ ಸದಸ್ಯರುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಯಳನಡು ಸಿದ್ದರಾಮೇಶ್ವರಸ್ವಾಮಿಯ ಜಾತ್ರಾಮಹೋತ್ಸವ ಶುರು

ಹನ್ನೆರಡು ವರ್ಷ ನಂತರದ ಸಿದ್ರಾಮಣ್ಣನ ದೊಡ್ಡಜಾತ್ರೆ -------- ಹುಳಿಯಾರು : ಹೋಬಳಿ ಯಳನಡು ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀ ಗುರುಸಿದ್ದರಾಮೇಶ್ವರ ಸ್ವಾಮಿಯ ವೈಭವಯುತ ಜಾತ್ರಾಮಹೋತ್ಸವ (ದೊಡ್ಡಜಾತ್ರೆ) ಇದೇ ಮೇ.೧೧ರ ಬುಧವಾರದಿಂದ ಪ್ರಾರಂಭವಾಗಿದ್ದು ಮೇ,೨೨ರ ವರೆಗೆ ೧೨ ದಿನಗಳ ಕಾಲ ನಡೆಯಲಿದೆ.              ವಾರ್ಷಿಕ ಜಾತ್ರೆ ಹೊರತಾಗಿ ಪ್ರತಿ ೧೨ ವರ್ಷಕ್ಕೊಮ್ಮೆ ಗುರುಸಿದ್ದರಾಮೇಶ್ವರ ಸ್ವಾಮಿಯ ದೊಡ್ಡಜಾತ್ರೆಯ ಸಂಪ್ರದಾಯವಿದ್ದು ಈ ಬಾರಿ ವಿಶೇಷವಾಗಿ ಮಾಜಿ ಪ್ರಧಾನಿ ದೇವೇಗೌಡರು, ಹಾಲಿ ಮುಖ್ಯಮಂತ್ರಿ ಸಿದ್ದರಾಮಣ್ಣನವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಭಾಗವಹಿಸಲಿದ್ದಾರೆ.                     ತಾ.೧೧ರ ಬುಧವಾರ ಸ್ವಾಮಿಯವರು ಮೂಲಸ್ಥಾನದಿಂದ ಬಂಗಾರದ ಪಲ್ಲಕ್ಕಿಯಲ್ಲಿ ದಯಮಾಡಿಸಿ,ತಾ.೧೨ರ ಗುರುವಾರ ಸ್ವಾಮಿ ಹಾಗೂ ವಿವಿಧ ದೇವರುಗಳೊಂದಿಗೆ ಸುಕ್ಷೇತ್ರ ದಶರಥ ರಾಮೇಶ್ವರ ವಜ್ರಕ್ಕೆ ತೆರಳಿದೆ,                 ಇಂದು ತಾ.೧೩ರ ಶುಕ್ರವಾರ ದಶರಾಮೇಶ್ವರ ವಜ್ರದಲ್ಲಿ ಗಂಗಾಸ್ನಾನ,ಸಹಸ್ರ ಬಿಲ್ವಾರ್ಚನೆ, ಪೂಜಾಫಲಹಾರ ಸೇವೆಯೊಂದಿಗೆ ಗುರುಪರುವು ನಡೆಯಲಿದೆ.                    ತಾ.೧೪ರ ಶನಿವಾರ ವಜ್ರದಿಂದ ಆಗಮಿಸಿದ ಸ್ವಾಮಿಗೆ ಆರತಿ ಮಹೋತ್ಸವ,ತಾ.೧೫ರ ಭಾನುವಾರ ಗಂಗಮ್ಮನ ಕೆರೆಯಲ್ಲಿ ಗಂಗಾಸ್ನಾನ,ಸಹಸ್ರ ಲಿಂಗಾರ್ಚನೆ,ತಪಸ್ಸಾಮ್ರಾಜ್ಯ ಫಲಹಾರಾಧಿಸೇವೆ ಹಾಗೂ ರಾತ್ರಿ ಸ್ವಾಮಿಯ ಬಂಗಾರದ ಅಡ್ಡಪಲ್ಲಕ್ಕಿ ಉತ್ಸ

ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ

ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಮೇ 11ರ ಬುಧವಾರ ನಡೆಯಿತು, ಚುನಾವಣೆಯಲ್ಲಿ ಜೆ.ಡಿ.ಎಸ್.ನ ಹೊನ್ನಮ್ಮ ಅಧ್ಯಕ್ಷರಾಗಿ ಹಾಗೂ ಟಿ.ಜಿ ತಿಮ್ಮಯ್ಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾಗಿ ಜೆ.ಡಿ.ಎಸ್.ನ ಹೊನ್ನಮ್ಮ ಹಾಗೂ ಉಪಾಧ್ಯಕ್ಷರಾಗಿ ಟಿ.ಜಿ ತಿಮ್ಮಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲ್ಲೂಕು ಪಂಚಾಯಿತಿಯಲ್ಲಿ ಒಟ್ಟು 19 ಸ್ಥಾನಗಳಲ್ಲಿ ಜೆ.ಡಿ.ಎಸ್ 11, ಬಿ.ಜೆ.ಪಿ 7, ಹಾಗೂ ಕಾಂಗ್ರೇಸ್ 1 ಸ್ಥಾನದಲ್ಲಿ ಜಯಗಳಿಸಿತ್ತು. ಜೆಡಿಎಸ್‍ ಗೆ ನಿಚ್ಚಳ ಬಹುಮತ ಇದ್ದುದ್ದರಿಂದ ಆಯ್ಕೆ ಪ್ರಕ್ರಿಯೆ ಸರಾಗವಾಯಿತು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿತ್ತು. ಜೆ.ಸಿ.ಪುರ ತಾ.ಪಂ ಕ್ಷೇತ್ರ ಹೊನ್ನಮ್ಮ, ಬರಗೂರು ಕ್ಷೇತ್ರದ ಚೇತನಾ, ಶೆಟ್ಟಿಕೆರೆ ಕ್ಷೇತ್ರದ ಜಯಮ್ಮ ಹಾಗೂ ಹಂದನಕೆರೆ ಕ್ಷೇತ್ರದ ಚಂದ್ರಕಲಾ ಹೆಸರುಗಳು ಕೇಳಿಬಂದವಾದರೂ ಅಂತಿಮವಾಗಿ ಹೊನ್ನಮ್ಮ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನ ಬಿಸಿಎಂ(ಎ)ಗೆ ಮೀಸಲಿದ್ದು ಮಾಳಿಗೆಹಳ್ಳಿ ಕ್ಷೇತ್ರ ಟಿ.ಜಿ.ತಿಮ್ಮಯ್ಯ ಹಾಗೂ ಯಳನಡು ಕ್ಷೇತ್ರದ ಯತೀಶ್ ಹೆಸರುಗಳು ಕೇಳಿಬಂದವು. ಅಂತಿಮವಾಗಿ ಟಿ.ಜಿ.ತಿಮ್ಮಯ್ಯ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ತಿಪಟೂರು ಉಪವಿಭಾಗಾಧಿಕಾರಿ ಪ್ರಜ್ಞಾಅಮ್ಮೆಂಬಳ ಕಾರ್ಯ ನಿರ್ವಹಿಸಿದರು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕ

ಪೆನುಗೊಂಡದಿಂದ ಮರಳಿದ ಕುಂಬಳದ ತಂಡ

      ಹುಳಿಯಾರು: ಹೋಬಳಿಯ ಯಳನಾಡುವಿನ ಶ್ರೀಗುರುಸಿದ್ಧರಾಮೇಶ್ವರ ಸ್ವಾಮಿಯವರ ಮಹಾರಥೋತ್ಸವದ ಅಂಗವಾಗಿ ನಡೆಯುವ ಹರಿಯಪ್ಪನ ಸೇವೆಗಾಗಿ ಆಂಧ್ರಪ್ರದೇಶದ ಪೆನುಗೊಂಡಕ್ಕೆ ದೇವರ ಬಸವನೊಂದಿಗೆ ಕಾಲ್ನಡಿಗೆಯಲ್ಲಿ ತೆರಳಿದ್ದ ಎಂಟುಜನರ ತಂಡ ಗುರುವಾರದಂದು ಹಿಂದಿರುಗಿ ಯಳನಾಡು ಸಮೀಪದ ತಮ್ಮಡಿಹಳ್ಳಿ ತಲುಪಿದ್ದಾರೆ. ಹುಳಿಯಾರು ಹೋಬಳಿಯ ಯಳನಾಡುವಿನ ಶ್ರೀಗುರುಸಿದ್ಧರಾಮೇಶ್ವರ ಸ್ವಾಮಿಯವರ ಮಹಾರಥೋತ್ಸವದ ಅಂಗವಾಗಿ ನಡೆಯುವ ಹರಿಯಪ್ಪನ ಸೇವೆಗಾಗಿ ಆಂಧ್ರಪ್ರದೇಶದ ಪೆನುಗೊಂಡಕ್ಕೆ ದೇವರ ಬಸವನೊಂದಿಗೆ ಕಾಲ್ನಡಿಗೆಯಲ್ಲಿ ತೆರಳಿ ಕುರಿಗಳೊಂದಿಗೆ ಹಿಂದಿರುಗಿದ ಎಂಟುಜನರ ತಂಡ.                ಯಳನಾಡುವಿನ ಶ್ರೀಗುರುಸಿದ್ಧರಾಮೇಶ್ವರ ಸ್ವಾಮಿಯವರ ವಿಶೇಷ ಜಾತ್ರಾ ಮಹೋತ್ಸವದ ಅಂಗವಾಗಿ ಸ್ವಾಮಿಯವರ ಸನ್ನಿಧಿಯಲ್ಲಿ ನಡೆಯುವ ಹರಿಯಪ್ಪನ ಸೇವೆ(ಕುಂಬಳ ಸೇವೆ)ಗಾಗಿ ಪೆನುಗೊಂಡದಿಂದ ಕುರಿ ತರುವ ಪ್ರತೀತಿಯಿದ್ದು ಇದಕ್ಕಾಗಿ ದೇವರ ಆಯ್ಕೆಯ ಎಂಟುಜನರ ತಂಡವನ್ನು ನಿಯುಕ್ತಿಗೊಳಿಸಲಾಗಿತ್ತು.                   ಯಾತ್ರೆಗೆ ತೆರಳುವ ತಂಡಕ್ಕೆ ಕೆಲವೊಂದು ಕಟ್ಟುಪಾಡುಗಳಿದ್ದು ಬಸವನ ಹಿಂದೆ ಕಾಲ್ನಡಿಗೆಯಲ್ಲಿ ಬಸವ ಸಂಚರಿಸುವ ಹಾದಿಯಲ್ಲಿ ನಡೆದು ಬಸವ ಎಲ್ಲೆಲ್ಲಿ ತಂಗುವುದೋ ಅಲ್ಲಿಯೇ ಅವರು ಠಿಕಾಣಿ ಹಾಕಿ ವಿಶ್ರಾಂತಿ ಪಡೆಯಬೇಕು.ಕಳೆದ ಏಪ್ರಿಲ್ ೨೮ರಂದು ಯಳನಾಡುವಿನಲ್ಲಿ ಅಪಾರ ಭಕ್ತಾಧಿಗಳ ಸಮ್ಮುಖದಲ್ಲಿ ಇದಕ್ಕಾಗಿಯೆ ನಡೆದ ವಿಶೇಷ ಪೂಜಾ ಕಾರ್ಯದಲ

ರಾಗಿ ಕೇಂದ್ರದಿಂದ ಬಾರದ ಬಾಕಿ:ಎಪಿಎಂಸಿಗೆ ಎಡೆತಾಕುತ್ತಿರುವ ರೈತರು

ಹುಳಿಯಾರು: ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿ ಕೇಂದ್ರದ ಮೂಲಕ ಸರ್ಕಾರ ಖರೀದಿ ಮಾಡಿದ್ದ ರಾಗಿಗೆ ಎರಡು ತಿಂಗಳಾಗುತ್ತಾ ಬಂದರೂ ಹಣ ಪಾವತಿ ಮಾಡದಿರುವುದರಿಂದ ಕಂಗಾಲಾಗಿರುವ ರೈತರು ಬರದ ಇಂದಿನ ಪರಿಸ್ಥಿತಿಯಲ್ಲಿ ಕೈಯಲ್ಲಿ ಕಾಸಿಲ್ಲದೆ ಪರದಾಡುತ್ತಿದ್ದು ಖರೀದಿ ಕೇಂದ್ರಗಳ ಉಸಾಬರಿಯೇ ಬೇಡವೆಂದು ತೀರ್ಮಾನಿಸಿದ್ದಾರೆ.               ಖರೀದಿ ಕೇಂದ್ರ ಪ್ರಾರಂಭದಲ್ಲಿ ರಾಗಿ ಮಾರಿದ ವಾರದೊಳಗೆ ರೈತರ ಖಾತೆಗೆ ಹಣ ಪಾವತಿ ಮಾಡಲಾಗುವುದೆಂದು ಹೇಳಿದ್ದ ಇಲಾಖೆ ಇದೀಗ ತಿಂಗಳುಗಳುರುಳಿದರೂ ಪಾವತಿ ಮಾಡದೆ ಮುಗ್ಗುಮ್ಮಾಗಿ ಕುಳಿತಿರುವುದು ಸಮಸ್ಯೆಗೆ ಕಾರಣವಾಗಿದೆ. ತಿಂಗಳಾದರೂ ಇಲ್ಲ: ತೀವ್ರ ಕುಸಿತ ಕಂಡಿದ್ದ ರಾಗಿಗೆ ಬೆಂಬಲ ಬೆಲೆ ಘೋಷಿಸಿ ಹುಳಿಯಾರು ಹಾಗೂ ಚಿಕ್ಕನಾಯಕನಹಳ್ಳಿ ಎಪಿಎಂಸಿಯಲ್ಲಿ ರಾಗಿ ಖರೀದಿ ಕೇಂದ್ರವನ್ನು ತೆರೆದ ಸರ್ಕಾರ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮೂಲಕ ಪ್ರತಿ ಕ್ವಿಂಟಾಲ್‌ ರಾಗಿಗೆ ೨,೧೦೦ ರೂ. ಬೆಂಬಲ ಬೆಲೆಯಲ್ಲಿ ಖರೀದಿ ಮಾಡಿತ್ತು. ಜನವರಿ ೨೨ರಿಂದ ಮಾರ್ಚ್ ೨೯ ರವರೆಗೆ ಖರೀದಿ ನಡೆದಿದ್ದು ಹುಳಿಯಾರು ಕೇಂದ್ರದಲ್ಲಿ ಒಟ್ಟು ೨೩೩೩ ರೈತರುಗಳಿಂದ ೫೬೫೪೦ ಕ್ವಿಂಟಾಲ್ ರಾಗಿ ರೈತರಿಂದ ಕೊಳ್ಳಲಾಗಿತ್ತು. ಒಟ್ಟು ೧೧ಕೋಟಿ ೮೭ ಲಕ್ಷದ ೩೫ ಸಾವಿರ ರೂಪಾಯಿಗಳ ರಾಗಿ ಖರೀದಿ ಮಾಡಿದ ನಿಗಮ ಇದುವರೆಗೂ ಮೂರು ಹಂತದಲ್ಲಿ ಹಣ ಬಿಡುಗಡೆ ಮಾಡಿದೆ.ಕಡೆಯದಾಗಿ ಮಾರ್ಚ್ ೩ ರಿಂದ ೧೯ ರವರೆಗಿನ ಖರೀದಿಗಾಗಿ ಮೇ ೧೦ರಂದು ಹ

ಶಂಕರಭಗವತ್ಪಾದರು ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದ ಮಹಾದಾರ್ಶನಿಕರು

ಹುಳಿಯಾರು: ಅದ್ವೈತ ತತ್ವವನ್ನು ಪ್ರತಿಪಾದಿಸಿ ಸನಾತನ ಹಿಂದೂ ಧರ್ಮವನ್ನು ಜಗತ್ತಿಗೆ ಸಾರಿ ಹೇಳಿದ, ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದ ಮಹಾದಾರ್ಶನಿಕ ಶಂಕರಭಗವತ್ಪಾದರು ಎಂದು ಹು.ಲ.ವೆಂಕಟೇಶ್ ತಿಳಿಸಿದರು. ಹುಳಿಯಾರು ಗ್ರಾಮಪಂಚಾಯ್ತಿಯಲ್ಲಿ ಆಚರಿಸಲಾದ ಶಂಕರ ಜಯಂತಿಯ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಗೀತಾ ಪ್ರದೀಪ್ ,ಗ್ರಾಪಂ ಸದಸ್ಯ ಕೋಳಿ ಶ್ರೀನಿವಾಸ್,ಪಿಡಿಓ ಸಿದ್ದರಾಮಣ್ಣ.ಇಮ್ರಾಜ್ ,ಬಿ.ವಿ.ಶ್ರೀನಿವಾಸ್,ವಿಪ್ರಸಂಘದ ವಿಶ್ವನಾಥ್,ರಂಗನಾಥ್ ಪ್ರಸಾದ್ ಮುಂತಾದವರಿದ್ದರು.             ಪಟ್ಟಣದ ಗ್ರಾಮಪಂಚಾಯ್ತಿಯಲ್ಲಿ ಆಚರಿಸಲಾದ ಶಂಕರ ಜಯಂತಿಯಲ್ಲಿ ಶ್ರೀ ಶಂಕರರ ಬಗ್ಗೆ ಉಪನ್ಯಾಸ ನೀಡಿದ ಅವರು ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಶಂಕರಾಚಾರ್ಯರು ಜೀವಿತದ ಅಲ್ಪಾವಧಿಯಲ್ಲಿಯೇ ದೇಶದ ಮೂಲೆ ಮೂಲೆಗಳಿಗೆ ಸಂಚರಿಸಿ ಗೀತಾಚಾರ್ಯ ಶ್ರೀಕೃಷ್ಣನ ಸಿದ್ಧಾಂತವಾದ "ಅದ್ವೈತ" ತತ್ವವನ್ನು ಪ್ರತಿಪಾದಿಸಿ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನ ಗೊಳಿಸಿದರು ಎಂದರು.          ಶಂಕರ ಜಯಂತಿಯನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಪಂಚಮಿ ದಿನ ಆಚರಿಸುವುದಿದ್ದು ಆದಿ ಶಂಕರರು ಕೇರಳದ ಕಾಲಡಿ ಎಂಬ ಊರಲ್ಲಿ ಜನಿಸಿದ್ದು ಇವರ ಜೀವಿತದ ಅವಧಿ ಕೇವಲ ೩೨ ವರ್ಷವಾದರೂ ಸಹ ಇವರು ಮಾಡಿರುವ ಸಾಧನೆ ಅಪಾರ ಎಂದರು.          ಆದಿಶಂಕರರು ಬಾದರಾಯಣರ "ಬ್ರಹ್ಮಸೂತ್ರ"ಗಳಿಗೆ ಭಾಷ್ಯವನ್ನು ರಚಿಸಿದರಲ್ಲದೆ

ಹುಳಿಯಾರಿನಲ್ಲಿ ಶಂಕರಜಯಂತಿ ಆಚರಣೆ

ಹುಳಿಯಾರು: ಪಟ್ಟಣದ ಸೀತಾರಾಮ ಪ್ರತಿಷ್ಠಾನ ಟ್ರಸ್ಟ್ ಹಾಗೂ ವಿಪ್ರ ಮಹಿಳಾ ಸಂಘದಿಂದ ಗಾಯತ್ರಿ ಪತ್ತಿನ ಸಹಕಾರ ಸಂಘದಲ್ಲಿ ಶಂಕರರ ಜಯಂತಿಯನ್ನು ಆಚರಿಸಲಾಯಿತು. ಶಂಕರ ಭಗವತ್ಪಾದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರೀ ಶಂಕರ ವಿರಚಿತ ಶಿವಾನಂದ ಲಹರಿ ಹಾಗೂ ಸೌಂದರ್ಯ ಲಹರಿ ಪಠಣ ಮಾಡಲಾಯಿತು. ಶ್ರೀ ಆದಿಶಂಕರಾಚಾರ್ಯರ ಬಗ್ಗೆ ಉಪನ್ಯಾಸ ನೀಡಲಾಯಿತು.            ತಾಲ್ಲೂಕ್ ವಿಪ್ರ ಸಮಾಜದ ಅಧ್ಯಕ್ಷ ನರೇಂದ್ರಬಾಬು,ಹುಳಿಯಾರು ಸೀತರಾಮ ಪ್ರತಿಷ್ಠಾನದ ಕಾರ್ಯದರ್ಶಿ  ಹು.ಕೃ.ವಿಶ್ವನಾಥ್,ಗಾಯತ್ರಿ ಪತ್ತಿನ ಸಂಘದ ನಿರ್ದೇಶಕ ರಂಗನಾಥ್ ಪ್ರಸಾದ್,   ಸಹಕಾರ  ಸಂಘದ  ಕಾರ್ಯದರ್ಶಿ ಮುಂಜುನಾಥ್,ಪರಮೇಶ್ವರಯ್ಯ, ರಘುನಾಥ್, ಲಕ್ಷ್ಮೀ ನರಸಿಂಹಯ್ಯ, ಅಶ್ವತ್ಥಣ್ಣ,ಗಣೇಶ್,ನಾರಾಯಣಪ್ಪ.ವಿಪ್ರ ಭಜನಾಮಂಡಳಿಯ ಅಧ್ಯಕ್ಷೆ ಶೈಲಾ ರಮೇಶ್,ವಸಂತ ರಘುನಾಥ್,ಶಶಿಕಲಾ ಸೇರಿದಂತೆ ಸಮಾಜ ಭಾಂದವರು ಭಾಗವಹಿಸಿದ್ದರು.

ಮೇ.೧೨ರಿಂದ ಭೀಮಮ್ಮ ದೇವಿಯ ಜಾತ್ರಾ ಮಹೋತ್ಸವ ಶುರು

ಹುಳಿಯಾರು: ಪಟ್ಟಣದ ಶಿರಾ ಕ್ರಾಸ್ ಬಳಿಯಿರುವ ಬಳ್ಳೆಕಟ್ಟೆ ತಾಂಡ್ಯದ ಶ್ರೀ ಠೋಕ್ರಿ ಬನ್ಕಿ (ಭೀಮಮ್ಮ) ದೇವಿಯವರ ಜಾತ್ರಾ ಮಹೋತ್ಸವ ಮೇ.೧೨ ರ ಗುರುವಾರದಿಂದ ಮೇ.೧೫ರ ಭಾನುವಾರದವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ. ಮೇ.೧೨ರ ಗುರುವಾರದಂದು ದೇವಿಯವರ ಮೂಲಸ್ಥಾನದಲ್ಲಿ ಕಂಕಣಧಾರಣೆ,ಮಧುವಣಗಿತ್ತಿ ಶಾಸ್ತ್ರ ನಡೆಯಲಿದೆ. ಮೇ.೧೩ರ ಶುಕ್ರವಾರದಂದು ಯರೇಹಳ್ಳಿ ಕೆಂಪಮ್ಮ,ಮರಿಯಮ್ಮ,ಬರಕನಾಳ್ ತಾಂಡ್ಯದ ಸೇವಾಲಾಲ್ ಸ್ವಾಮಿ,ದೊಡ್ಡಎಣ್ಣೇಗೆರೆಯ ಭೀಮಾಸತಿ ದೇವರುಗಳ ಆಗಮನ, ಪುಣ್ಯಾಹ,ವಿಳೆದೆಲೆ ಸೇವೆ, ಕದ್ಲಿಸೇವೆ, ಮುತೈದೆ ಸೇವೆ ಜರುಗಲಿದೆ. ಮೇ.೧೪ರ ಶನಿವಾರದಂದು ಗಂಗಾಪೂಜೆ,ಹೊಳೆಸೇವೆ,ನಡೆಮುಡಿ,ಕೆಂಡೋತ್ಸವ,ಅನ್ನಸಂತರ್ಪಣೆ. ರಾತ್ರಿ ೭ ಕ್ಕೆ ಧಾರ್ಮಿಕ ಸಭೆ ಹಾಗೂ ಆರ್ಕೇಸ್ಟ್ರಾ ಏರ್ಪಡಿಸಲಾಗಿದೆ. ಮೇ.೧೫ ರ ಭಾನುವಾರ ಓಕಳಿಸೇವೆ ಹಾಗೂ ದೇವರುಗಳ ಬೀಳ್ಕೊಡುಗೆಯೊಂದಿಗೆ ಜಾತ್ರೆಗೆ ತೆರೆಬೀಳಲಿದೆ.

ವಳಗೆರೆಹಳ್ಳಿಯಲ್ಲಿ ಮೇ.14ರ ಶನಿವಾರದಂದು ಶನೈಶ್ವರ ಸ್ವಾಮಿಯ ಕುಂಭಾಭಿಷೇಕ

ಹುಳಿಯಾರು : ಸಮೀಪದ ವಳಗೆರೆಹಳ್ಳಿಯ ಶ್ರೀ ಶನೇಶ್ವರ ಸ್ವಾಮಿಯವರ 20 ನೇ ವರ್ಷದ ಕುಂಭಾಭಿಷೇಕ ಮಹೋತ್ಸವವು ಮೇ.13 ನೇ ಶುಕ್ರವಾರ ಹಾಗೂ ಮೇ.14 ನೇ ಶನಿವಾರದಂದು ನಡೆಯಲಿದೆ.                       13 ರ ಶುಕ್ರವಾರ ಸಂಜೆ 6 ಕ್ಕೆ ಶನೇಶ್ವರ ಸ್ವಾಮಿಯ ದೇವಸ್ಥಾನದ ಮುಂಭಾಗದಲ್ಲಿ ಕಾಕವಾಹನ ಪ್ರತಿಷ್ಠಾಪನೆ. ಸಂಜೆ 7 ಕ್ಕೆ ಪಂಚಕಳಶ ಸ್ಥಾಪನೆ ಮತ್ತು ನವಗ್ರಹಗಳ ಸ್ಥಾಪನೆ ಮತ್ತು ಸ್ಥಾನ ಶುದ್ದಿ ಮತ್ತಿತರ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ.                14 ರ ಶನಿವಾರ ಬೆಳಿಗ್ಗೆ 7.45 ಕ್ಕೆ ಪುಣ್ಯಾಹ, ದೇವನಾಂದಿ, ನವಗ್ರಹ ಹೋಮ,ಶನೈಶ್ವರ ಹೋಮ,ಮೃತ್ಯುಂಜಯ ಹೋಮ, ಪಂಚಾಮೃತ ಅಭಿಷೇಕ ಮತ್ತು ಸಹಸ್ರನಾಮ ಅರ್ಚನೆ. 12.45 ಕ್ಕೆ ಶನೇಶ್ವರ ಸ್ವಾಮಿಗೆ ಕುಂಭಾಭಿಷೇಕ ನಡೆದು ಮಧ್ಯಾಹ್ನ 1.30 ಕ್ಕೆ ಅನ್ನಸಂತರ್ಪಣೆ. ರಾತ್ರಿ 10 ಕ್ಕೆ ಊರಿನ ಗ್ರಾಮಸ್ಥರಿಂದ ಶನಿಪ್ರಭಾವ ಅಥವಾ ರಾಜ ವಿಕ್ರಮ ಎಂಬ ಪೌರಣಿಕ ನಾಟಕ ನಡೆಯಲಿದೆ.                       ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಸಂಸತ್ ಸದಸ್ಯ ಮುದ್ದಹನುಮೇಗೌಡ, ಶಾಸಕ ಸಿ.ಬಿ.ಸುರೇಶ್ ಬಾಬು, ಮಾಜಿ ಶಾಸಕರಾದ ಕೆ.ಎಸ್.ಕಿರಣ್ ಕುಮಾರ್, ಜೆ.ಸಿ.ಮಾಧುಸ್ವಾಮಿ, ಹುಳಿಯಾರು ಜಿ.ಪಂ. ಸದಸ್ಯರಾದ ವೈ.ಸಿ.ಸಿದ್ದರಾಮಯ್ಯ, ತಾ.ಪಂ ಸದಸ್ಯರಾದ ಹೆಚ್.ಎನ್.ಕುಮಾರ್, ಹುಳಿಯಾರು ಗ್ರಾ.ಪಂ. ಅಧ್ಯಕ್ಷರಾದ ಗೀತಾ ಪ್ರದೀಪ್, ಉಪಾಧ್ಯಕ್ಷ ಗಣೇಶ್ ಸೇರಿದಂತೆ ಹುಳಿಯಾರು

ತಿರುಮಲಾಪುರ ಪಂಚಾಯ್ತಿ: ಶೌಚಾಲಯಗಳ ಫಲಾನುಭವಿಗಳಿಗೆ ಹಣ ಬಿಡುಗಡೆ

ಆರೋಪದಲ್ಲಿ ಯಾವುದೇ ಹುರುಳಿಲ್ಲ :ಅಧ್ಯಕ್ಷ ದೇವರಾಜು ---------------------- ಹುಳಿಯಾರು:  ನಿರ್ಮಲ ಭಾರತ ಅಭಿಯಾನ ಯೋಜನೆಯಡಿ ತಿರುಮಲಾಪುರ ಗ್ರಾಮ ಪಂಚಾಯ್ತಿಗೆ ಶೌಚಾಲಯಗಳ ನಿರ್ಮಾಣಕ್ಕಾಗಿ ಒಟ್ಟು ೧೨ ಲಕ್ಷ ಅನುದಾನದಲ್ಲಿ ಸಧ್ಯ ೪ ಲಕ್ಷ ರೂ ಮಾತ್ರವೇ ಬಿಡುಗಡೆಯಾಗಿದ್ದು ಸಭೆಯಲ್ಲಿ ತೀರ್ಮಾನಿಸಿದಂತೆ ಫಲಾನುಭವಿಗಳಿಗೆ ಹಣ ಬಿಡುಗಡೆಮಾಡಲಾಗಿದ್ದು ಈ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿರುವುದು ಸತ್ಯಕ್ಕೆ ದೂರ ಎಂದು ತಿರುಮಲಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ದೇವರಾಜು ಸ್ಪಷ್ಟೀಕರಣ ನೀಡಿದ್ದಾರೆ. ಶೌಚಾಲಯದ ಹಣ ಬಿಡುಗಡೆಯಾಗಿರುವ ಬಗ್ಗೆ ಹುಳಿಯಾರು ಹೋಬಳಿ ತಿರುಮಲಾಪುರದ ಗ್ರಾಮ.ಪಂ.ಕಛೇರಿಯಲ್ಲಿ ಸ್ಪಷ್ಟಿಕರಣ ನೀಡಿದ ಅಧ್ಯಕ್ಷ ದೇವರಾಜು.ಉಪಾಧ್ಯಕ್ಷ ಮೋಹನ್ ಕುಮಾರ್,ಕಾರ್ಯದರ್ಶಿ ಗಂಗಾಧರಯ್ಯ ಇದ್ದಾರೆ.             ಹುಳಿಯಾರು ಹೋಬಳಿಯ ತಿರುಮಲಾಪುರ ಗ್ರಾಮ ಪಂಚಾಯ್ತಿಯಲ್ಲಿ ಮಂಗಳವಾರದಂದು ಸದಸ್ಯರುಗಳೊಡನೆ ಪತ್ರಿಕಾಗೋಷ್ಟಿ ನಡೆಸಿದ ಅವರು ಎರಡು ದಿನಗಳ ಹಿಂದೆ ಕೆಲವರು ಶೌಚಾಲಯ ಗಳನ್ನು ನಿರ್ಮಿಸಿದ ಹಣ ನೀಡಿಲ್ಲವೆಂದು ಆರೋಪಿಸಿ ಪಂಚಾಯ್ತಿಗೆ ಬೀಗ ಹಾಕಿದ ಘಟನೆ ದುರುದ್ದೇಶ ಪೂರಕ ಎಂದರು.                ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಅವರು ಯೋಜನೆ ಪ್ರಗತಿಯಲಿದ್ದು ಶೌಚಾಲ­ಯ ನಿರ್ಮಿಸಿಕೊಂಡಿರುವ ಫಲಾನುಭವಿಗಳಿಗೆ ಸದ್ಯ ನಾಲ್ಕು ಸಾವಿರ ರೂಗಳಂತೆ ಹಣ ಜಮಾ ಮಾಡಲಾಗಿದೆ ಎಂದರು.                 ಸರ್ಕಾ

ಕೆಂಕೆರೆ : ಅದ್ದೂರಿ ಚನ್ನಬಸವೇಶ್ವರ ಸ್ವಾಮಿ ರಥೋತ್ಸವ

ಹುಳಿಯಾರು ಸಮೀಪದ ಕೆಂಕೆರೆಯಲ್ಲಿ ಇತಿಹಾಸ ಪ್ರಸಿದ್ದ ಶ್ರೀಚನ್ನಬಸವೇಶ್ವರ ಸ್ವಾಮಿಯ ರಥೋತ್ಸವ ಸೋಮವಾರ ಮಧ್ಯಾಹ್ನ ಅಪಾರ ಸಂಖ್ಯೆಯ ಭಕ್ತರ ಜಯಘೋಷದೊಂದಿಗೆ ನಡೆಯಿತು. ಹುಳಿಯಾರು: ಸಮೀಪದ ಕೆಂಕೆರೆಯಲ್ಲಿ ಇತಿಹಾಸ ಪ್ರಸಿದ್ದ ಶ್ರೀಚನ್ನಬಸವೇಶ್ವರ ಸ್ವಾಮಿಯ ರಥೋತ್ಸವ ಸೋಮವಾರ ಮಧ್ಯಾಹ್ನ ಅಪಾರ ಸಂಖ್ಯೆಯ ಭಕ್ತರ ಜಯಘೋಷದೊಂದಿಗೆ ನಡೆಯುವುದರ ಮುಖಾಂತರ ಮೂರು ದಿನದ ಜಾತ್ರೆ ಸಂಪನ್ನಗೊಂಡಿತು.           ಕಳೆದ ಶನಿವಾರ ಸ್ವಾಮಿಯವರ ಧ್ವಜಾರೋಹಣದೊಂದಿಗೆ ಆರಂಭಗೊಂಡಿದ್ದ ಜಾತ್ರಾ ಮಹೋತ್ಸವದಲ್ಲಿ ಸ್ವಾಮಿಯ ಮೂಲಸ್ಥಾನವಾದ ಕೆಂಕೆರೆಯಿಂದ ಪುರದಮಠಕ್ಕೆ ಗ್ರಾಮದೇವತೆ ಲೋಕಮಾತೆ ಕಾಳಮ್ಮ ,ದಮ್ಮಡಿಹಟ್ಟಿ ಈರಬೊಮ್ಮಕ್ಕ ದೇವಿಯವರೊಂದಿಗೆ ಸ್ವಾಮಿಯವರನ್ನು ಕರತರಲಾಗಿತ್ತು.ಭಾನುವಾರದಮ್ದು ಬೆಳಗಿನ ಜಾವ ಸ್ವಾಮಿಯ ಗಂಗಾಪ್ರವೇಶ,ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾಕಾರ್ಯಗಳೊಂದಿಗೆ ಪ್ರಸಾದ ವಿನಿಯೋಗ ನಡೆದು,ದೇವರುಗಳನ್ನು ನಡೆಮುಡಿಯೊಂದಿಗೆ ಕೆಂಕೆರೆ ಗ್ರಾಮಕ್ಕೆ ವಾಪಸ್ಸು ಕರೆತರಲಾಗಿತ್ತು.            ಸೊಮವಾರದಂದು ಮುಂಜಾನೆ ಮಹದೇವಮ್ಮ , ಚನ್ನಬಸವಯ್ಯ ದಂಪತಿಗಳು ಹಾಗೂ ಈಶ್ವರಪ್ಪ ನವರಿಂದ ರಥಕ್ಕೆ ಪುಣ್ಯಾಹ ಕಾರ್ಯ ನಡೆಸಿ ಕಳಸ ಸ್ಥಾಪಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸ್ವಾಮಿಯವರನ್ನು ಮಂಗಳ ವಾದ್ಯ ,ಬಸವನ ಉತ್ಸವ ಹಾಗೂ ಧ್ವಜದ ಕುಣಿತದೊಂದಿಗೆ ರಥದ ಬಳಿ ಮೆರವಣಿಗೆಯಲ್ಲಿ ಕರೆತಂದು,ರಂಗುರಂಗಿನ ಬಾವುಟ,ಹೂ,ಹಾರಗಳಿಂದ ಶೃಂ

ಉಣ್ಣೆಬಸವಣ್ಣ ದೇವಾಲಯದಲ್ಲಿ ಬಸವ ಜಯಂತಿಹುಳಿಯಾರಿನ ಉಣ್ಣೆಬಸವಣ್ಣ ದೇವಾಲಯ ಹಾಗೂ ಬಸವ ಭವನದಲ್ಲಿ ಬಸವ ಜಯಂತಿ ಆಚರಿಸಿ ಭಕ್ತಾಧಿಗಳಿಗೆ ಪಾನಕ,ಉಸ್ಲಿ ವಿತರಿಸಲಾಯಿತು.ಹುಳಿಯಾರಿನ ಉಣ್ಣೆಬಸವಣ್ಣ ದೇವಾಲಯ ಹಾಗೂ ಬಸವ ಭವನದಲ್ಲಿ ಬಸವ ಜಯಂತಿ ಆಚರಿಸಿ ಭಕ್ತಾಧಿಗಳಿಗೆ ಪಾನಕ,ಉಸ್ಲಿ ವಿತರಿಸಲಾಯಿತು.ಹುಳಿಯಾರಿನ ಉಣ್ಣೆಬಸವಣ್ಣ ದೇವಾಲಯ ಹಾಗೂ ಬಸವ ಭವನದಲ್ಲಿ ಬಸವ ಜಯಂತಿ ಆಚರಿಸಿ ಭಕ್ತಾಧಿಗಳಿಗೆ ಪಾನಕ,ಉಸ್ಲಿ ವಿತರಿಸಲಾಯಿತು.

ಹುಳಿಯಾರಿನ ಉಣ್ಣೆಬಸವಣ್ಣ ದೇವಾಲಯ ಹಾಗೂ ಬಸವ ಭವನದಲ್ಲಿ ಬಸವ ಜಯಂತಿ ಆಚರಿಸಿ ಭಕ್ತಾಧಿಗಳಿಗೆ ಪಾನಕ,ಉಸ್ಲಿ ವಿತರಿಸಲಾಯಿತು.

ಬಸವ ಜಯಂತಿ ಆಚರಣೆ ಬಗ್ಗೆ ಪಂಚಾಯ್ತಿ ಸದಸ್ಯರ ನಿರಾಸಕ್ತಿ

ಬಸವ ಜಯಂತಿ ಆಚರಣೆ ಬಗ್ಗೆ ಪಂಚಾಯ್ತಿ ಸದಸ್ಯರ ನಿರಾಸಕ್ತಿ ----------------------------- ಹುಳಿಯಾರು: ಪ್ರತಿಯೊಂದು ಗ್ರಾಮಗಳ ಸರ್ಕಾರಿ ಕಛೇರಿಗಳಲ್ಲಿ ಹಾಗೂ ಗ್ರಾಮಪಂಚಾಯ್ತಿಗಳಲ್ಲಿ ಕೆಲವೊಂದು ದಾರ್ಶನಿಕರ ಜಯಂತಿ ಆಚರಣೆಗೆ ಸರ್ಕಾರ ಆದೇಶಿಸಿದ್ದರೂ ಸಹ ಇಲ್ಲಿನ ಗ್ರಾಮಪಂಚಾಯ್ತಿಯಲ್ಲಿ ಸದಸ್ಯರ ಸಹಭಾಗಿತ್ವ ಇಲ್ಲದೆ ಆಚರಣೆಗಳು ಸಾರ್ವಜನಿಕರಲ್ಲಿ ನಗೆಪಾಟಿಲೀಗಾಡಾಗುತ್ತಿದೆ.                ಇಂದು ನಾಡು ಕಂಡ ಮಹಾನ್ ಮಾನವತಾವಾದಿ ಬಸವಣ್ಣನವರ ಜಯಂತಿ ಆಚರಣೆಯಿದ್ದು ಜಿಲ್ಲೆಯ ಅತಿದೊಡ್ಡ ಪಂಚಾಯ್ತಿಯೆಂಬ ಹೆಗ್ಗಳಿಕೆಯಿರುವ ಹುಳಿಯಾರು ಗ್ರಾಮಪಂಚಾಯ್ತಿಯಲ್ಲಿ ಕೇವಲ ಬೆರಳೇಣಿಕೆಯಷ್ಟು ಮಂದಿ ಮಾತ್ರ ಹಾಜರಿದ್ದು ಆಚರಿಸಿದ ಸಂಗತಿ ಚರ್ಚೆಯ ವಿಷಯವಾಗಿದೆ. ಗ್ರಾಪಂ ಅಧ್ಯಕ್ಷೆ ಗೀತಾ,ಸದಸ್ಯೆ ಸಿದ್ದಗಂಗಮ್ಮ,ಕಾರ್ಯದರ್ಶಿ ಉಮಾಶಂಕರ್,ಬಿಲ್ ಕಲೆಕ್ಟರ್ ರಾಜಣ್ಣ,ಕೃಷ್ಣಮೂರ್ತಿ,ಸಾರ್ವಜನಿಕರ ಪೈಕಿ ಇಮ್ರಾಜ್ ಹೊರತುಪಡಿಸಿದರೆ ಪಿಡಿಓ ಸೇರಿದಂತೆ ಇನ್ನುಳಿದ ೩೭ ಸದಸ್ಯರು ಗೈರಾಗಿದ್ದು ಸದಸ್ಯರ ನಿರಾಸಕ್ತಿಗೆ ಹಿಡಿದ ಕನ್ನಡಿಯಾಗಿದೆ. ಹುಳಿಯಾರು ಗ್ರಾಮಪಂಚಾಯ್ತಿಯಲ್ಲಿ ಆಚರಿಸಲಾದ ಬಸವಜಯಂತಿಯಲ್ಲಿ ಹಾಜರಿರುವ ಬೆರಳೇಣಿಕೆಯ ಸದಸ್ಯರು ಹಾಗೂ ಸಿಬ್ಬಂದಿ.              ಕಳೆದೊಂದು ವರ್ಷದಿಂದ ಕನಕ ಜಯಂತಿ,ಮಹಾವೀರ ಜಯಂತಿ,ಶಿವಾಜಿ ಜಯಂತಿ,ವಾಲ್ಮೀಕಿ ಜಯಂತಿ,ಟಿಪ್ಪು ಜಯಂತಿ,ಸಿದ್ದರಾಮೇಶ್ವರ ಜಯಂತಿ,ಬಸವ ಜಯಂತಿ ಸೇರಿದಂತೆ ಹಲವಾರು ದಾರ್

ಪುರದಚನ್ನಬಸವಣ್ಣನಿಗೆ ಬೆಳ್ಳಿಕವಚ ಧಾರಣೆ

ಹುಳಿಯಾರು : ಹೋಬಳಿ ಕೆಂಕೆರೆ ಗ್ರಾಮದ ಪುರದಮಠದ ಚನ್ನಸವೇಶ್ವರಸ್ವಾಮಿಯ ವಿಗ್ರಹಕ್ಕೆ ಭಾನುವಾರದಂದು ತಿಪಟೂರು ಕೆರೆಗೋಡಿ ರಂಗಾಪುರ ಮಠದ ಶ್ರೀಗುರುಪರದೇಶೀಕೇಂದ್ರ ಸ್ವಾಮೀಜಿಯವರು ಗ್ರಾಮದೇವತೆ ಶ್ರೀಕಾಳಿಕಾಂಬದೇವಿ ಸಮ್ಮುಖದಲ್ಲಿ ಬೆಳ್ಳಿಕವಚ ಧಾರಣೆ ಮಾಡಿ ದರು.                   ಸ್ವಾಮಿಯ ಜಾತ್ರಾಮಹೋತ್ಸವದ ಅಂಗವಾಗಿ ಶನಿವಾರದಂದು ಕೆಂಕೆರೆಯಿಂದ ಶ್ರೀಗುರುಚನ್ನಬಸವೇಶ್ವರ ಸ್ವಾಮಿಯ ಉತ್ಸವಮೂರ್ತಿ ಹಾಗೂ ಕಾಳಿಕಾಂಬದೇವಿ, ದಮ್ಮಡಿಹಟ್ಟಿ ಈರಬೊಮ್ಮಕ್ಕದೇವಿ, ಬರದಲೇಪಾಳ್ಯದ ಅಂಬಿಕಾದೇವಿ ದೇವರುಗಳನ್ನು ಸ್ವಾಮಿಯ ಮೂಲಸ್ಥಾನ ಪುರದಮಠಕ್ಕೆ ಕರೆದೊಯ್ಯಲಾಗಿತ್ತು.                 ಭಾನುವಾರ ಮುಂಜಾನೆ ಸ್ವಾಮಿಗೆ ಗಂಗಾಪೂಜೆ, ಪುಣ್ಯಾಹ, ನಾಂದಿ,ರುದ್ರಾಭಿಷೇಕ ಕಾರ್ಯ ನಡೆಸಲಾಯಿತು. ನಂತರ ಸ್ವಾಮಿಗೆ ಬೆಳ್ಳಿಕವಚ ಧಾರಣಾಕಾರ್ಯ ಜರುಗಿತು. ಕೆಂಕೆರೆ ಹಾಗೂ ಸುತ್ತ ಮುತ್ತಲ ಹಳ್ಳಿಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತಾಧಿಗಳು ಸ್ವಾಮಿಯ ದರ್ಶನ ಪಡೆದರು. ಆಗಮಿಸಿದ ಭಕ್ತಾಧಿಗಳಿಗಾಗಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಇಂದಿನಿಂದ ಕೆಂಕೆರೆ ಚನ್ನಬಸವೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವ

         ಹುಳಿಯಾರು ಸಮೀಪದ ಕೆಂಕೆರೆಯಲ್ಲಿ ಇಂದಿನಿಂದ (ಮೇ.7 ರ ಶನಿವಾರದಿಂದ) ಮೇ.9.ರ ಸೋಮವಾರದವರೆಗೆ ಶ್ರೀ ಚನ್ನಬಸವೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವ ನಡೆಯಲಿದೆ.          ಇಂದು ಬೆಳಿಗ್ಗೆ ಮೂಲಸ್ಥಾನ ಪುರದ ಮಠಕ್ಕೆ ಶ್ರೀ ಚನ್ನಬಸವೇಶ್ವರ ಸ್ವಾಮಿ ಹಾಗೂ ಗ್ರಾಮದೇವತೆ ಕಾಳಮ್ಮನವರ ಆಗಮನ,ಗಂಗಾಪೂಜೆ,ಪುಣ್ಯಹ,ನಾಂದಿ ಕಳಸ ಸ್ಥಾಪನೆ ಹಾಗೂ ಸ್ವಾಮಿಯವರಿಗೆ ರುದ್ರಾಭಿಷೇಕ ನಡೆಯಲಿದೆ. ಕೆಂಕೆರೆಯ ಶ್ರೀ ಚನ್ನಬಸವೇಶ್ವರ ಸ್ವಾಮಿ              ಬೆ.9 ಗಂಟೆಗೆ ತಿಪಟೂರು ಕೆರೆಗೊಡಿ ರಂಗಾಪುರದ ಶ್ರೀ ಗುರು ಪರದೇಶಿಕೇಂದ್ರ ಸ್ವಾಮಿಜಿಯವರಿಂದ ಸ್ವಾಮಿಯವರಿಗೆ ಬೆಳ್ಳಿಕವಚ ಧಾರಣೆ.            10.30ಕ್ಕೆ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆದು ವಾಪಸ್ಸು ಕೆಂಕೆರೆಗೆ ದೇವರುಗಳು ದಯಮಾಡಿಸುವುದು. ಮ.3 ಕ್ಕೆ ಸ್ವಾಮಿಯ ಮೂಲ ಸ್ಥಾನ ಪುರದಮಠಕ್ಕೆ ದಯಮಾಡಿಸುವುದು. ಮೇ.8 ರ ಭಾನುವಾರ ಬೆ.5 ಗಂಟೆಗೆ ಗಂಗಾಪ್ರವೇಶ ನಂತರ ಪ್ರಸಾದ ವಿನಿಯೋಗ. ಮೇ.9 ರ ಸೋಮವಾರ ಮ.12ಕ್ಕೆ ಶ್ರೀಚನ್ನಬಸವೇಶ್ವರ ಸ್ವಾಮಿಯವರ ಮಹಾರಥೋತ್ಸವ ಜರುಗಲಿದೆ. ಮೇಲ್ಕಂಡ ಎಲ್ಲಾ ಕಾರ್ಯಕ್ರಮಗಳಿಗೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಸಮಿತಿಯವರು ಕೋರಿದ್ದಾರೆ.

ಇಂದಿನಿಂದ (ಮೇ. 7) ರಾಮಪ್ಪನಹಟ್ಟಿಯಲ್ಲಿ ನೂತನ ರಾಜಗೋಪುರ ಕಳಸ ಪ್ರತಿಷ್ಟಾಪನಾ ಮಹೋತ್ಸವ

ಹುಳಿಯಾರು ಸಮೀಪದ ಕಂದಿಕೆರೆ ಹೋಬಳಿಯ ರಾಮಪ್ಪನಹಟ್ಟಿಯಲ್ಲಿ ಶ್ರೀ ಕುಮಾರಸ್ವಾಮಿಯವರ ದೇವಾಲಯದ ನೂತನ ರಾಜಗೋಪುರ ಕಳಸ ಪ್ರತಿಷ್ಟಾಪನ ಮಹೋತ್ಸವವು ಇಂದು ಮೇ 7ರ ಶನಿವಾರದಂದು ಸಾಯಂಕಾಲ ಧ್ವಜಾರೋಹಣದ ಮೂಲಕ ಚಾಲನೆಗೊಳ್ಳಲಿದ್ದು ಮೇ.9ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಮೇ.8ರ ಭಾನುವಾರ ರಾತ್ರಿ ೮ಕ್ಕೆ ಸ್ವಾಮಿಯವರ ಹೊಳಸೇವೆ ನಡೆದು ರಾತ್ರಿ 12ರಿಂದ ಅಜ್ಜಪ್ಪಸ್ವಾಮಿ, ಜಡೇಗೊಂಡದೇವರು, ಬಾಲಕೃಷ್ಣಸ್ವಾಮಿ, ಮಾಳಮ್ಮದೇವಿ, ದೊಡ್ಡಬಾಲದೇವರಹಟ್ಟಿ, ಹೊನ್ನೆಮರೆದ ಈರಣ್ಣಸ್ವಾಮಿ, ತಿರುಮಲದೇವರು, ಕರಿಯಮ್ಮದೇವಿ, ಈರಬೊಮ್ಮನಕ್ಕದೇವಿಯವರ ಉತ್ಸವ ನಡೆಯಲಿದೆ. ಮೇ.9ರಂದು ಸೋಮವಾರ ಬೆಳಗ್ಗೆ ಅಜ್ಜಪ್ಪಸ್ವಾಮಿಯವರ ನೂತನ ರಾಜಗೋಪುರದ ಕಳಸ ಪ್ರತಿಷ್ಠಾಪನೆ, ಮಹಾಮಂಗಳಾರತಿ, ತೀರ್ಥಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ. ಅಂದು ಬೆಳಗ್ಗೆ 10.30ಕ್ಕೆ ಧಾರ್ಮಿಕ ಸಮಾರಂಭ ನಡೆಯಲಿದ್ದು ಯಾದವ ಸಂಸ್ಥಾನದ ಕೃಷ್ಣಯಾದವಾನಂದಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರಹೆಗ್ಗಡೆ ದಿವ್ಯಸಾನಿಧ್ಯ ವಹಿಸುವರು. ಶಾಸಕ ಸಿ.ಬಿ.ಸುರೇಶ್‍ ಬಾಬು ಅಧ್ಯಕ್ಷತೆ ವಹಿಸಲಿದ್ದು ಸಚಿವ ಟಿ.ಬಿ.ಜಯಚಂದ್ರ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು, ಮಾಜಿ ಶಾಸಕರುಗಳಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ ಕುಮಾರ್ ಮತ್ತಿತರರು ಉಪಸ್ಥಿತರಿರುವರು.

ಮುಕ್ತಿಧಾಮದ ಕಾರ್ಯ ಪ್ರಗತಿಯಲ್ಲಿ

ಹುಳಿಯಾರು : ಪಟ್ಟಣದ ಮುಕ್ತಿಧಾಮದ ಮೂಲಭೂತ ಅಭಿವೃದ್ದಿಗಾಗಿ ಹಾಗೂ ನೀರಿನ ವ್ಯವಸ್ಥೆಗೆಗಾಗಿ ೨.೫ ಲಕ್ಷ ಅನುದಾನದ ಕಾಮಗಾರಿ ಪ್ರಗತಿಯಲ್ಲಿದೆ. ಕಳೆದ ವಾರ ಜಿಲ್ಲಾಉಸ್ತುವಾರಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಮುಕ್ತಿಧಾಮದ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿ ತುರ್ತು ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದ ಹಿನ್ನಲೆಯಲ್ಲಿ ಅಭಿವೃದ್ದಿ ಕಾರ್ಯ ಭರದಿಂದ ಸಾಗಿದೆ.                 ಕಾಮಗಾಗಿ ಬಗ್ಗೆ ಮಾಹಿತಿ ನೀಡಿದ ಗ್ರಾ.ಪಂ.ಸದಸ್ಯ ಧನುಷ್ ರಂಗನಾಥ್ ಮುಕ್ತಿಧಾಮದ ಸುತ್ತಾ ಓಡಾಡಲು ಆಸಾಧ್ಯವಾಗುವಂತೆ ಬೆಳೆದು ನಿಂತಿದ್ದ ಜಾಲಿ ಗಿಡವನ್ನು ಈಗ ತೆಗೆದು ಹಾಕಿದ್ದು, ನೀರಿನ ವ್ಯವಸ್ಥೆಗೆ ಪೈಪ್ ಲೈನ್ ಮಾಡಿ ಸಿಸ್ಟನ್ ಕೂರಿಸಲು ಅನುಕೂಲ ಕಲ್ಪಿಸಲಾಗುವುದೆಂದರು. ಮುಕ್ತಿಧಾಮದ ಚಿತಾಗಾರದವರೆಗೆ ಕಚ್ಚಾರಸ್ತೆ ಮಾಡಲಾಗುವುದಿದ್ದು ನಂತರ ಎನ್.ಆರ್.ಇ.ಜಿ.ಯಲ್ಲಿ ಗಿಡನೆಟ್ಟು , ಕಾಂಪೌಂಡ್ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.                        ಮುಕ್ತಿಧಾಮ ಸಮಿತಿಯ ಹು.ಕೃ.ವಿಶ್ವನಾಥ್ ಮಾತನಾಡಿ ಜಿಲ್ಲಾ ಸಚಿವ ಜಯಚಂದ್ರ ಅವರು ಈಗಾಗಲೇ 15 ಲಕ್ಷ ರೂ. ಅನುದಾನವನ್ನು ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದು ಈ ಹಣದಲ್ಲಿ ಮುಕ್ತಿಧಾಮದ ಅಗತ್ಯ ಸೌಕರ್ಯ, ಚಿತಾಗಾರ ಹಾಗೂ ಶವ ಸಾಗಿಸಲು ವಾಹನಕ್ಕೆ ಬಳಕೆ ಮಾಡಿಕೊಳ್ಳುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮುಕ್ತಿಧಾಮ ಸಮಿತಿಯ ಅಧ್ಯಕ್ಷ ನ

ಹುಳಿಯಾರು : ವ್ಯರ್ಥವಾಗುತ್ತಿದೆ ಜೀವಜಲ

ಹುಳಿಯಾರು : ರಾಜ್ಯದಾದ್ಯಂತ ಬರಗಾಲದ ಛಾಯೆ ಆವರಿಸಿದ್ದು ಹನಿ ನೀರಿಗಾಗಿ ಜನ ಪರಿತಪಿಸುತ್ತಿದ್ದಾರೆ ಆದರೆ ಪಟ್ಟಣದ ಹಲವೆಡೆ ಕೆಲವು ತಿಂಗಳುಗಳಿಂದ ನೀರು ವ್ಯರ್ಥವಾಗಿ ರಸ್ತೆಯಲ್ಲಿ ಹರಿಯುತ್ತಿದ್ದು ಜನರ ಬಳಕೆಗೆ ಬಾರದಂತಾಗಿರುವುದು ಪಂಚಾಯ್ತಿಯವರ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಹುಳಿಯಾರು ಪಟ್ಟಣದ ಮಲ್ಲಿಕಾರ್ಜುನ ಮೆಡಿಕಲ್ಸ್ ಪಕ್ಕದ ಬಾಲ್ ವಾಲ್ ನಲ್ಲಿ ನೀರು ವ್ಯರ್ಥವಾಗಿ ಹರಿದು ರಸ್ತೆ ಸೇರುತ್ತಿರುವುದು.            ಪಟ್ಟಣದ ಮೂರನೇ ಬ್ಲಾಕ್ ನ ಮಲ್ಲಿಕಾರ್ಜುನ ಮೆಡಿಕಲ್ ಪಕ್ಕದಲ್ಲಿ ಕಳೆದ ಐದಾರು ತಿಂಗಳಿಂದ ನೀರು ಹರಿಯುತ್ತಿದ್ದರೆ, ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯಕ್ಕೆ ನೀರಿನ ಸಂಪರ್ಕ ಕಲ್ಪಿಸಿರುವ ಪೈಪ್ ಒಡೆದಿದ್ದು ನೀರು ಪೋಲಾಗಿ ಕೆರೆ ಅಂಗಳಕ್ಕೆ ಹರಿಯುತ್ತಿದೆ. ಈ ಬಗ್ಗೆ ಹಲವಾರು ಪಂಚಾಯ್ತಿಯವರ ಗಮಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.          ಹುಳಿಯಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ನೀರು ಪೂರೈಸುವ ಹಿನ್ನಲೆಯಲ್ಲಿ ಪಕ್ಕದ ಬೋರನಕಣಿವೆ ಜಲಾಶಯದಿಂದ ಹಾಗೂ ಬೋರ್ ವೆಲ್ ಗಳಿಂದ ನೀರನ್ನು ಸರಬರಾಜು ಮಾಡುತ್ತಿದ್ದಾರೆ. ಈ ಬಾರಿ ಸಮರ್ಪಕವಾಗಿ ಮಳೆಯಾದ ಹಿನ್ನಲೆಯಲ್ಲಿ ಅಂತರ್ಜಲ ಕುಸಿತಕಂಡಿದ್ದು ಜಲಾಶಯ ಹಾಗೂ ಬೋರ್ ವೆಲ್ ಗಳಲ್ಲಿ ನೀರಿನ ಮಟ್ಟ ಕುಸಿದು ಇನ್ನೂ ಕೆಲವೇ ತಿಂಗಳಿಗೆ ಆಗುವಷ್ಟು ನೀರು ಮಾತ್ರ ಉಳಿದಿದೆ. ಹೀಗಿದ್ದಾಗ್ಯೂ ಸಹ ಸದ್

ಹುಳಿಯಾರಿನ ವಾಸವಿ ಸ್ಕೂಲ್ ನಲ್ಲಿ VSYತರಬೇತಿ

ಹುಳಿಯಾರಿನ ವಾಸವಿ ಸ್ಕೂಲ್ ನಲ್ಲಿ ತುಮಕೂರಿನ ವಿಶ್ವ ಸಂವೃದ್ಧಿ  ಸೇವಾ  ಸಂಸ್ಥೆಯ ಮುರುಳಿ ಮೋಹನ್ ಗುರೂಜಿಯವರ ವಿಶ್ವಸಂವೃದ್ಧಿ ಯೋಗದ ಬಗ್ಗೆ ನಾಳೆಯಿಂದ ಹದಿನೈದು ದಿನಗಳ ತರಗತಿ ಪ್ರಾರಂಭವಾಗಲಿದ್ದು.ಇಂದು ಸಂಜೆ (ಮೇ.4ರ ಬುಧವಾರ) 5.45ಕ್ಕೆ ಕಾರ್ಯಕ್ರಮದ ಪರಿಚಯ ತರಗತಿ ನಡೆಯಲಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಎಲ್.ಆರ್.ಚಂದ್ರಶೇಖರ್-9448033893, ಎಸ್.ಕೆ.ಮಲ್ಲಿಕಾರ್ಜುನಯ್ಯ 7022062156, ಮುರುಳಿ ಮೋಹನ್ ಗುರೂಜಿ -9900010024 , ಎಂ.ಎಸ್.ಆರ್. ನಟರಾಜು -9448779391 ಇವರುಗಳನ್ನು ಸಂಪರ್ಕಿಸಬಹುದಾಗಿದೆ.

ನಾಯಿದಾಳಿಗೆ ಸಿಕ್ಕು ಸಾವನ್ನಪ್ಪಿದ ನವಿಲು.

ಗಾಯಗೊಂಡ ನವಿಲಿಗೆ ದೊರೆಯದ ಚಿಕಿತ್ಸೆ: ಸಾವನ್ನಪ್ಪಿದ ರಾಷ್ಟ್ರ ಪಕ್ಷಿ -------------------------------------- ಹುಳಿಯಾರು:ಮುಂಜಾನೆಯ ತಂಗಾಳಿಯಲ್ಲಿ ಹುಣುಸೆಮರದಡಿಯಲ್ಲಿ ನರ್ತಿಸುತ್ತಿದ್ದ ನವಿಲಿನ ಮೇಲೆ ನಾಯಿಗಳು ಎರಗಿದ್ದರಿಂದ  ಗಾಯಗೊಂಡಿದ್ದ  ನವಿಲು ಸಾವನ್ನಪ್ಪಿರುವ ಘಟನೆ ಸಮೀಪದ ಬರಕನಾಳ್ ಗ್ರಾಮದಲ್ಲಿ ಜರುಗಿದೆ.                 ಮಂಗಳವಾರ ಮುಂಜಾನೆ ಬರಕನಾಳ್ ಗ್ರಾಮದ ತಿಮ್ಮಯ್ಯನವರ ಮನೆ ಮುಂಭಾಗದ ಹುಣುಸೆಮರದಡಿಯಲ್ಲಿ ನಾಯಿಗಳ ಬೊಗುಳುವಿಕೆ ಕೇಳಿ ಧಾವಿಸಿದ ತಿಮ್ಮಯ್ಯನವರಿಗೆ ನಾಯಿಗಳು ನವಿಲಿನ ಮೇಲೆರೆಗಿ ಬೊಗುಳುತ್ತಿದ್ದ ದೃಶ್ಯ ಕಂಡುಬಂದಿದೆ. ಕೂಡಲೆ ನಾಯಿಗಳನ್ನು ಓಡಿಸಿ ಗಾಯಗೊಂಡಿದ್ದ ನವಿಲನ್ನು ಚಿಕಿತ್ಸೆಗಾಗಿ ಹುಳಿಯಾರಿನ ಪಶುಆಸ್ಪತ್ರೆಗೆ ಕರೆತಂದಿದ್ದಾರೆ.             ಈ ಬಗ್ಗೆ ಸ್ಥಳಿಯ ಪೋಲಿಸ್ ಗೆ ಹಾಗೂ ಅರಣ್ಯ ಇಲಾಖೆತೆ ಮಾಹಿತಿ ನೀಡಿದ ಅವರು ವೈದ್ಯರಿಗೆ ಫೋನ್ ಮಾಡಿ ಕಾದಿದ್ದಾರೆ.ಸ್ಥಳಕ್ಕೆ ಅರಣ್ಯ ಇಲಾಖೆಯ ಬುಕ್ಕಾಪಟ್ಟಣ ರೇಂಜಿನ ದಸೂಡಿ ಗಸ್ತಿನ ಅರಣ್ಯ ವೀಕ್ಷಕ ರಂಗನಾಥಯ್ಯ ,ಇಮ್ರಾಜ್ ಹಾಗೂ ಗ್ರಾಪಂ ಸದಸ್ಯ ಚಂದ್ರಶೇಖರ್ ಆಗಮಿಸಿದ್ದು ಅವರುಗಳು ಕೂಡ ವೈದ್ಯರನ್ನು ಸಂಪರ್ಕಿಸಿದ್ದಾರೆ.              ಹುಳಿಯಾರಿನಲ್ಲಿ ಪಶು ಆಸ್ಪತ್ರೆಯ ವೈದ್ಯರು ಚಿಕ್ಕನಾಯಕನಹಳ್ಳಿಯಿಂದ ಬರಬೇಕಿದ್ದು ಇಂದು ಚಿಕ್ಕನಾಯಕನಹಳ್ಳಿಯಲ್ಲಿ ಮೀಟಿಂಗ್ ಇರುವುದರಿಂದ ಬರಲು ಸಾಧ್ಯವಿಲ್ಲವೆಂದಿದ್ದಾ

ಹುಚ್ಚುನಾಯಿ ಕಡಿತ:ಇಬ್ಬರಿಗೆ ಗಾಯ

ಹುಳಿಯಾರು: ಸಮೀಪದ ದೊಡ್ಡಬಿದರೆಯಲ್ಲಿ ಸೋಮವಾರದಂದು ಹುಚ್ಚುನಾಯಿ ಕಡಿತಕ್ಕೆ ಇಬ್ಬರು ವ್ಯಕ್ತಿಗಳು ಹಾಗೂ ೬ ಕರುಗಳು ಗಾಯಗೊಂಡಿರುವ ಘಟನೆ ಜರುಗಿದೆ.ಕೆರೆಯ ಬಳಿ  ಬಹಿರ್ದೆಸೆಗೆ ಹೋಗಿದ್ದ ಪುಟ್ಟಣನವರ ರಾಜಪ್ಪನವರ ಮೇಲೆ ಎರಗಿ ಗಾಯಗೊಳಿಸಿದ ನಾಯಿ ನಂತರ ಮನೆಯ ಮುಂದೆ ಮಲಗಿದ್ದ ೭೦ ವರ್ಷದ ವೃದ್ಧ ಮಾಣಕಿ ಚಿಗನಿಂಗಪ್ಪ ಎಂಬುವವರ ಕಾಲನ್ನು ಬಲವಾಗಿ ಕಚ್ಚಿದೆ.ತೀವ್ರ ರಕ್ರ ಸ್ರಾವವಾಗಿ ನಿತ್ರಾಣರಾಗಿದ್ದ ಚಿಗನಿಂಗಪ್ಪ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕನಾಯಕನಹಳ್ಳಿಗೆ ಕರೆದೊಯ್ಯಲಾಯಿತು..             ಈ ಮಧ್ಯೆ ಮನೆಯ ಆಚೆ ಕಟ್ಟಲಾಗಿದ್ದ ಹಸು ಹಾಗೂ ಎಮ್ಮೆಕರುಗಳನ್ನು ಕಡಿದ ನಾಯಿ ಸಂಜೆಯವರೆಗೂ ಊರತುಂಬಾ ಓಡಾಡಿ ಗ್ರಾಮದಲ್ಲಿ ಭಯದ ವಾತಾವರಣ ಉಂಟುಮಾಡಿತು.ಆಕ್ರೋಷಗೊಂಡ ಜನತೆ ಸಂಜೆ ನಾಯಿಯನ್ನು ದೊಣ್ಣೆಯಿಂದ ಬಡಿದು ಸಾಯಿಸಿದರು.

ರಾಮಪ್ಪನಹಟ್ಟಿಯ ಶ್ರೀ ಕುಮಾರಸ್ವಾಮಿಯವರ ದೇವಾಲಯದ ನೂತನ ರಾಜಗೋಪುರ ಕಳಸ ಪ್ರತಿಷ್ಟಾಪನ ಮಹೋತ್ಸವ

                            ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಂದಿಕೆರೆ ಹೋಬಳಿ ರಾಮಪ್ಪನಹಟ್ಟಿಯ ಶ್ರೀ ಕುಮಾರಸ್ವಾಮಿಯವರ ದೇವಾಲಯದ ನೂತನ ರಾಜಗೋಪುರ ಕಳಸ ಪ್ರತಿಷ್ಟಾಪನ ಮಹೋತ್ಸವವು ಮೇ 7ರಿಂದ 9ರವರೆಗೆ ನಡೆಯಲಿದೆ. ಮೇ 7ರ ಶನಿವಾರ ಸಾಯಂಕಾಲ ಧ್ವಜಾರೋಹಣದ ಮೂಲಕ ಚಾಲನೆಗೊಳ್ಳಲಿದೆ.               ಮೇ.8ರ ಭಾನುವಾರ ಸ್ವಾಮಿಯವರ ಹೊಳಸೇವೆ ಸಾಯಂಕಾಲ 8ಕ್ಕೆ ಅಜ್ಜಪ್ಪಸ್ವಾಮಿ, ಜಡೇಗೊಂಡದೇವರು, ಬಾಲಕೃಷ್ಣಸ್ವಾಮಿ, ಮಾಳಮ್ಮದೇವಿ, ದೊಡ್ಡಬಾಲದೇವರ ಹಟ್ಟಿ, ಹೊನ್ನೆಮರೆದ ಈರಣ್ಣಸ್ವಾಮಿ, ತಿರುಮಲದೇವರು, ಕರಿಯಮ್ಮದೇವಿ, ಈರಬೊಮ್ಮನಕ್ಕ ದೇವಿ, ಯವರ ಉತ್ಸವ ರಾತ್ರಿ 12ರಿಂದ 2ರವರೆಗೆ ನಡೆಯಲಿದೆ.              ಮೇ.9ರಂದು ಸೋಮವಾರ ಬೆಳಗ್ಗೆ ಅಜ್ಜಪ್ಪಸ್ವಾಮಿಯವರ ನೂತನ ರಾಜಗೋಪುರದ ಕಳಸ ಪ್ರತಿಷ್ಠಾಪನೆ, ಮಹಾಮಂಗಳಾರತಿ, ತೀರ್ಥಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ.                 ಅಂದು ಬೆಳಗ್ಗೆ 10.30ಕ್ಕೆ ಧಾರ್ಮಿಕ ಸಮಾರಂಭ ನಡೆಯಲಿದ್ದು ಯಾದವ ಸಂಸ್ಥಾನದ ಕೃಷ್ಣಯಾದವಾನಂದ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರಹೆಗ್ಗಡೆ ದಿವ್ಯ ಸಾನಿಧ್ಯ ವಹಿಸುವರು. ಶಾಸಕ ಸಿ.ಬಿ.ಸುರೇಶ್‍ ಬಾಬು ಅಧ್ಯಕ್ಷತೆ ವಹಿಸಲಿದ್ದು ಸಚಿವ ಟಿ.ಬಿ.ಜಯಚಂದ್ರ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು, ಮಾಜಿ ಶಾಸಕರುಗಳಾ