ಹುಳಿಯಾರು: ಪಟ್ಟಣದ ಸೀತಾರಾಮ ಪ್ರತಿಷ್ಠಾನ ಟ್ರಸ್ಟ್ ಹಾಗೂ ವಿಪ್ರ ಮಹಿಳಾ ಸಂಘದಿಂದ ಗಾಯತ್ರಿ ಪತ್ತಿನ ಸಹಕಾರ ಸಂಘದಲ್ಲಿ ಶಂಕರರ ಜಯಂತಿಯನ್ನು ಆಚರಿಸಲಾಯಿತು. ಶಂಕರ ಭಗವತ್ಪಾದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರೀ ಶಂಕರ ವಿರಚಿತ ಶಿವಾನಂದ ಲಹರಿ ಹಾಗೂ ಸೌಂದರ್ಯ ಲಹರಿ ಪಠಣ ಮಾಡಲಾಯಿತು. ಶ್ರೀ ಆದಿಶಂಕರಾಚಾರ್ಯರ ಬಗ್ಗೆ ಉಪನ್ಯಾಸ ನೀಡಲಾಯಿತು.
ತಾಲ್ಲೂಕ್ ವಿಪ್ರ ಸಮಾಜದ ಅಧ್ಯಕ್ಷ ನರೇಂದ್ರಬಾಬು,ಹುಳಿಯಾರು ಸೀತರಾಮ ಪ್ರತಿಷ್ಠಾನದ ಕಾರ್ಯದರ್ಶಿ ಹು.ಕೃ.ವಿಶ್ವನಾಥ್,ಗಾಯತ್ರಿ ಪತ್ತಿನ ಸಂಘದ ನಿರ್ದೇಶಕ ರಂಗನಾಥ್ ಪ್ರಸಾದ್, ಸಹಕಾರ ಸಂಘದ ಕಾರ್ಯದರ್ಶಿ ಮುಂಜುನಾಥ್,ಪರಮೇಶ್ವರಯ್ಯ, ರಘುನಾಥ್, ಲಕ್ಷ್ಮೀ ನರಸಿಂಹಯ್ಯ, ಅಶ್ವತ್ಥಣ್ಣ,ಗಣೇಶ್,ನಾರಾಯಣಪ್ಪ.ವಿಪ್ರ ಭಜನಾಮಂಡಳಿಯ ಅಧ್ಯಕ್ಷೆ ಶೈಲಾ ರಮೇಶ್,ವಸಂತ ರಘುನಾಥ್,ಶಶಿಕಲಾ ಸೇರಿದಂತೆ ಸಮಾಜ ಭಾಂದವರು ಭಾಗವಹಿಸಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ