ಹುಳಿಯಾರು : ಹೋಬಳಿ ಕೆಂಕೆರೆ ಗ್ರಾಮದ ಪುರದಮಠದ ಚನ್ನಸವೇಶ್ವರಸ್ವಾಮಿಯ ವಿಗ್ರಹಕ್ಕೆ ಭಾನುವಾರದಂದು ತಿಪಟೂರು ಕೆರೆಗೋಡಿ ರಂಗಾಪುರ ಮಠದ ಶ್ರೀಗುರುಪರದೇಶೀಕೇಂದ್ರ ಸ್ವಾಮೀಜಿಯವರು ಗ್ರಾಮದೇವತೆ ಶ್ರೀಕಾಳಿಕಾಂಬದೇವಿ ಸಮ್ಮುಖದಲ್ಲಿ ಬೆಳ್ಳಿಕವಚ ಧಾರಣೆ ಮಾಡಿ
ದರು.
ಸ್ವಾಮಿಯ ಜಾತ್ರಾಮಹೋತ್ಸವದ ಅಂಗವಾಗಿ ಶನಿವಾರದಂದು ಕೆಂಕೆರೆಯಿಂದ ಶ್ರೀಗುರುಚನ್ನಬಸವೇಶ್ವರ ಸ್ವಾಮಿಯ ಉತ್ಸವಮೂರ್ತಿ ಹಾಗೂ ಕಾಳಿಕಾಂಬದೇವಿ, ದಮ್ಮಡಿಹಟ್ಟಿ ಈರಬೊಮ್ಮಕ್ಕದೇವಿ, ಬರದಲೇಪಾಳ್ಯದ ಅಂಬಿಕಾದೇವಿ ದೇವರುಗಳನ್ನು ಸ್ವಾಮಿಯ ಮೂಲಸ್ಥಾನ ಪುರದಮಠಕ್ಕೆ ಕರೆದೊಯ್ಯಲಾಗಿತ್ತು.
ಭಾನುವಾರ ಮುಂಜಾನೆ ಸ್ವಾಮಿಗೆ ಗಂಗಾಪೂಜೆ, ಪುಣ್ಯಾಹ, ನಾಂದಿ,ರುದ್ರಾಭಿಷೇಕ ಕಾರ್ಯ ನಡೆಸಲಾಯಿತು. ನಂತರ ಸ್ವಾಮಿಗೆ ಬೆಳ್ಳಿಕವಚ ಧಾರಣಾಕಾರ್ಯ ಜರುಗಿತು. ಕೆಂಕೆರೆ ಹಾಗೂ ಸುತ್ತ ಮುತ್ತಲ ಹಳ್ಳಿಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತಾಧಿಗಳು ಸ್ವಾಮಿಯ ದರ್ಶನ ಪಡೆದರು. ಆಗಮಿಸಿದ ಭಕ್ತಾಧಿಗಳಿಗಾಗಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ