ಹುಳಿಯಾರು: ವಾಸದ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗಲಿ ಲಕ್ಷಾಂತರ ರೂ ನಷ್ಟವಾಗಿರುವ ಘಟನೆ ಹುಳಿಯಾರಿನ ಶ್ರೀದುರ್ಗಾಪರಮೇಶ್ವರಿ ದೇವಾಲಯದ ಸಮೀಪದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ. ಸಣ್ಣಪುಟ್ಟ ಕೂಲಿ ಕೆಲಸ ಮತ್ತು ಹಳ್ಳಿಗಳ ಮೇಲೆ ಬಟ್ಟೆ ವ್ಯಾಪಾರವನ್ನು ಮಾಡಿಕೊಂಡು ಜೊತೆಗೆ ಟೈಲರ್ ಕೆಲಸವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಯಶೋದ ಬಾಯಿ ಎಂಬುವರ ನಿವಾಸದಲ್ಲಿ ಮನೆಯ ಕುಟುಂಬದವರೆಲ್ಲಾ ಊಟ ಮುಗಿಸಿ ಗುರುವಾರ ರಾತ್ರಿ ಮಲಗಿದ್ದಾಗ ಘಟನೆ ಜರುಗಿದೆ.
ಮಧ್ಯರಾತ್ರಿ ೨ಗಂಟೆಯ ಸಮಯದಲ್ಲಿ ಮನೆಯ ಒಳಗಡೆಯ ಕೋಣೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಮನೆಯವರೆಲ್ಲಾ ದಿಢೀರನೆ ಎದ್ದು ಜೋರಾಗಿ ಕೂಗಾಡಿದಾಗ ಅಕ್ಕಪಕ್ಕದ ಮನೆಯವರೆಲ್ಲಾ ಎದ್ದು ಬಂದು ಬೆಂಕಿ ಆರಿಸುವ ಪ್ರಯತ್ನ ನಡೆಸಿ ಬೆಂಕಿ ಆರಿಸಿದ್ದಾರೆ. ಅಷ್ಟರಲ್ಲಾಗಲೇ ಮನೆಯ ಮೇಲ್ಛಾವಣಿಯ ಮರದ ತೀರು, ವ್ಯಾಪಾರಕ್ಕೆಂದ್ದು ತಂದಿದ್ದ ಸೀರೆ, ಡ್ರಸ್ ಹಾಗೂ ಮದುವೆಗೆ ಹೊಲೆದು ಕೊಡುವಂತೆ ಜನರು ನೀಡಿದ್ದ ೩ ಹೊಸ ಬಟ್ಟೆಗಳು, ರೇಷ್ಮೆ ಬಟ್ಟೆಗಳು ಹಾಗೂ ೨ ಬಟ್ಟೆ ಹೊಲಿಯುವ ಯಂತ್ರಗಳು, ಮನೆಯಲ್ಲಿದ್ದ ಬೀರು ಸೇರಿದಂತೆ ಸುಮಾರು ೨ ಲಕ್ಷ ರೂ. ನಷ್ಟವಾಗಿದೆ.
ಜೊತೆಗೆ ಬೀರುವಿನಲ್ಲಿದ್ದ ಹಣ, ರೇಷನ್ ಕಾರ್ಡ್, ಮನೆಯ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಪ್ರಮಾಣ ಪತ್ರಗಳು ಸೇರಿದಂತೆ ಎಲ್ಲಾ ದಾಖಲೆ ಪತ್ರಗಳು ಸುಟ್ಟುಭಸ್ಮವಾಗಿದೆ. ಸ್ಥಳಕ್ಕೆ ಎ.ಎಸ್.ಐ.ರಾಜಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಜಿಪಂ ಸದಸ್ಯ ಸಿದ್ಧರಾಮಣ್ಣ,ಹುಳಿಯಾರು ಗ್ರಾಪಂವತಿಯಿಂದ ಆಧ್ಯಕ್ಷೆ ಗೀತಾ ,ಸದಸ್ಯರಾದ ರಂಗನಾಥ್,ಶಂಕರ್ ಮತ್ತಿತರರು ಭೇಟಿ ನೀಡಿ ಸಾಂತ್ವಾನ ಹೇಳಿ ಪರಿಹಾರ ಧನ ನೀಡಿದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ