![]() |
ಹುಳಿಯಾರು ಸಮೀಪದ ಕೆಂಕೆರೆಯಲ್ಲಿ ಇತಿಹಾಸ ಪ್ರಸಿದ್ದ ಶ್ರೀಚನ್ನಬಸವೇಶ್ವರ ಸ್ವಾಮಿಯ ರಥೋತ್ಸವ ಸೋಮವಾರ ಮಧ್ಯಾಹ್ನ ಅಪಾರ ಸಂಖ್ಯೆಯ ಭಕ್ತರ ಜಯಘೋಷದೊಂದಿಗೆ ನಡೆಯಿತು. |
ಹುಳಿಯಾರು:ಸಮೀಪದ ಕೆಂಕೆರೆಯಲ್ಲಿ ಇತಿಹಾಸ ಪ್ರಸಿದ್ದ ಶ್ರೀಚನ್ನಬಸವೇಶ್ವರ ಸ್ವಾಮಿಯ ರಥೋತ್ಸವ ಸೋಮವಾರ ಮಧ್ಯಾಹ್ನ ಅಪಾರ ಸಂಖ್ಯೆಯ ಭಕ್ತರ ಜಯಘೋಷದೊಂದಿಗೆ ನಡೆಯುವುದರ ಮುಖಾಂತರ ಮೂರು ದಿನದ ಜಾತ್ರೆ ಸಂಪನ್ನಗೊಂಡಿತು.
ಕಳೆದ ಶನಿವಾರ ಸ್ವಾಮಿಯವರ ಧ್ವಜಾರೋಹಣದೊಂದಿಗೆ ಆರಂಭಗೊಂಡಿದ್ದ ಜಾತ್ರಾ ಮಹೋತ್ಸವದಲ್ಲಿ ಸ್ವಾಮಿಯ ಮೂಲಸ್ಥಾನವಾದ ಕೆಂಕೆರೆಯಿಂದ ಪುರದಮಠಕ್ಕೆ ಗ್ರಾಮದೇವತೆ ಲೋಕಮಾತೆ ಕಾಳಮ್ಮ ,ದಮ್ಮಡಿಹಟ್ಟಿ ಈರಬೊಮ್ಮಕ್ಕ ದೇವಿಯವರೊಂದಿಗೆ ಸ್ವಾಮಿಯವರನ್ನು ಕರತರಲಾಗಿತ್ತು.ಭಾನುವಾರದಮ್ದು ಬೆಳಗಿನ ಜಾವ ಸ್ವಾಮಿಯ ಗಂಗಾಪ್ರವೇಶ,ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾಕಾರ್ಯಗಳೊಂದಿಗೆ ಪ್ರಸಾದ ವಿನಿಯೋಗ ನಡೆದು,ದೇವರುಗಳನ್ನು ನಡೆಮುಡಿಯೊಂದಿಗೆ ಕೆಂಕೆರೆ ಗ್ರಾಮಕ್ಕೆ ವಾಪಸ್ಸು ಕರೆತರಲಾಗಿತ್ತು.
ಸೊಮವಾರದಂದು ಮುಂಜಾನೆ ಮಹದೇವಮ್ಮ , ಚನ್ನಬಸವಯ್ಯ ದಂಪತಿಗಳು ಹಾಗೂ ಈಶ್ವರಪ್ಪ ನವರಿಂದ ರಥಕ್ಕೆ ಪುಣ್ಯಾಹ ಕಾರ್ಯ ನಡೆಸಿ ಕಳಸ ಸ್ಥಾಪಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸ್ವಾಮಿಯವರನ್ನು ಮಂಗಳ ವಾದ್ಯ ,ಬಸವನ ಉತ್ಸವ ಹಾಗೂ ಧ್ವಜದ ಕುಣಿತದೊಂದಿಗೆ ರಥದ ಬಳಿ ಮೆರವಣಿಗೆಯಲ್ಲಿ ಕರೆತಂದು,ರಂಗುರಂಗಿನ ಬಾವುಟ,ಹೂ,ಹಾರಗಳಿಂದ ಶೃಂಗರಿಸಿದ್ದ ರಥಕ್ಕೆ ಕಾಳಿಕಾಂಬ ದೇವಿಯೊಂದಿಗೆ ಕುಳ್ಳಿರಿಸಲಾಯಿತು, ಅಪಾರ ಸಂಖ್ಯೆಯಲ್ಲಿ ಸೇರಿದ ಜನಸ್ತೋಮ ಸ್ವಾಮಿಯ ಜಯಘೋಷದೊಂದಿಗೆ ತೇರನ್ನೇಳೆದು ಸಂಭ್ರಮಿಸಿದರೆ, ಮಹಿಳೆಯರು ರಥದ ಗಾಲಿಗೆ ಕಾಯಿ ಹೊಡೆದು ಪೂಜೆ ಸಲ್ಲಿಸಿದರು.
ಜಾತ್ರೆಗೆ ಆಗಮಿಸಿದ್ದ ಭಕ್ತಾಧಿಗಳಿಗೆ ಮಜ್ಜಿಗೆ ಹಾಗೂ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ