ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹುಳಿಯಾರು:ಬನಶಂಕರಿ ದೇವಾಲಯದಲ್ಲಿ ಸಂಭ್ರಮದ ಬನದ ಹುಣ್ಣಿಮೆ

ಹುಳಿಯಾರು: ದೇವಾಂಗ ಮಂಡಳಿ, ಬನದ ಹುಣ್ಣಿಮೆ ದೇವಾಂಗ ಯುವಕ ಸಂಘ, ಬನಶಂಕರಿ ದೇವಸ್ಥಾನ ಸಮಿತಿವತಿಯಿಂದ ೫ ನೇ ವರ್ಷದ ಬನದ ಹುಣ್ಣಿಮೆ ಕಾರ್ಯಕ್ರಮವು ಪಟ್ಟಣದ ಬನಶಂಕರಿ ಅಮ್ಮನವರ ದೇವಾಲಯದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ಅಮ್ಮನವರಿಗೆ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ನಡೆಯಿತು. ಹುಳಿಯಾರಿನ ಬನಶಂಕರಿ ದೇವಾಲಯದಲ್ಲಿ ಬನದಹುಣ್ಣಿಮೆ ಅಂಗವಾಗಿ ಭಜನಾಮಂಡಳಿಯಿಂದ ಭಜನೆ ನಡೆಯಿತು.         ಪುಷ್ಯಮಾಸದ ಹುಣ್ಣಿಮೆಯನ್ನು ಬನದ ಹುಣ್ಣಿಮೆ ಅಥವಾ ಬನಶಂಕರಿ ಹುಣ್ಣಿಮೆ ಎನ್ನಲಾಗುವುದಿದ್ದು ಪೂರ್ಣಾನಂದ ಪ್ರದಾಯಕಳಾದ ಬನಶಂಕರಿ ದೇವಿಯು ನಾಡಿಗೆ ಸುಭೀಕ್ಷೆ ಹಾಗೂ ಜೀವರಾಶಿಗಳಿಗೆ ಸಮೃದ್ಧಿಯನ್ನು ಪಾಲಿಸಿದ ಪ್ರತೀಕವಾಗಿ ಬನದ ಹುಣ್ಣಿಮೆ ಆಚರಿಸಲಾಗುತ್ತದೆ.             ಭಾನುವಾರ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಪಂಚದ್ರವ್ಯಗಳಿಂದ ಅಮ್ಮನವರಿಗೆ ಅಭಿಷೇಕ ನಡೆದು ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ಮಧ್ಯಾಹ್ನ ಮುತ್ತೈದೆಯರಿಗೆ ಹಾಗೂ ಕನ್ನಿಕೆಗೆ ಬಾಗಿನ ಕೊಟ್ಟು, ಅಮ್ಮನವರಿಗೆ ಆರತಿ ಸೇವೆ, ಮಡಿಲಕ್ಕಿ ಸೇವೆ ನಡೆಯಿತು.ಆಗಮಿಸಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.ಸಂಜೆ ವಿವಿಧ ಭಜನಾ ಮಂಡಳಿಯಿಂದ ಭಜನೆ,ಸೌಂದರ್ಯ ಲಹರಿ ಪಠಣ ಹಾಗೂ ಉಯ್ಯಾಲೋತ್ಸವ ನಡೆಯಿತು.                     ಈ ಸಂದರ್ಭದಲ್ಲಿ ಬನದಹುಣ್ಣಿಮೆ ಸಂಘದ ಅಧ್ಯಕ್ಷ ನವೀನ್ ಕುಮಾರ್, ಶಂಕರ್, ದೇವಾಂಗ ಮಂಡಳಿಯ ಅನಂತಕುಮಾರ್,ದಾಸಪ್ಪ,ಪುಟ್ಟರಾಜು, ಲೋಕೇಶ್

ವಾಸವಿ ಆಂಗ್ಲ ಶಾಲೆಯಲ್ಲಿ ಇಂದು ಸಾಂಸ್ಕೃತಿಕ ಸಂಜೆ

ಹುಳಿಯಾರು ಪಟ್ಟಣದ ವಾಸವಿ ಆಂಗ್ಲ ಶಾಲೆಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಇಂದು (ಜ.೨೩ರ ಶನಿವಾರದಂದು )ಸಾಂಸ್ಕೃತಿಕ ಸಂಜೆ ಏರ್ಪಡಿಸಲಾಗಿದೆ.ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಆರ್.ಲಕ್ಷ್ಮೀಕಾಂತ್ ಅಧ್ಯಕ್ಷತೆ ವಹಿಸಲಿದ್ದು ಜಿಲ್ಲಾ ಪಂಚಾಯ್ತಿ ಸದಸ್ಯೆ ಮಂಜುಳಾ ಗವಿರಂಗಯ್ಯ,ಗ್ರಾಪಂ ಅಧ್ಯಕ್ಷೆ ಗೀತಾ ಪ್ರದೀಪ್,ಸಂಸ್ಥೆಯ ಗೌರವಾಧ್ಯಕ್ಷ ಟಿ.ಆರ್.ಶ್ರೀನಿವಾಸ ಶ್ರೇಷ್ಠಿ,ಕಾರ್ಯದರ್ಶಿ ಟಿ.ಎಸ್.ರಾಮನಾಥ್,ಆರ್ಯವೈಶ್ಯ ಮಂಡಳಿ ಅಧ್ಯಕ್ಷ ನಟರಾಜಗುಪ್ತಾ, ಎಲ್.ಆರ್.ಚಂದ್ರಶೇಖರ್,ಬಿ.ವಿ.ಶ್ರೀನಿವಾಸಮೂರ್ತಿ ಮತ್ತಿತರರು ಭಾಗವಹಿಸಲಿದ್ದಾರೆ.

ಬನಶಂಕರಿ ಅಮ್ಮನವರ ಪುನರ್ ಚೈತನ್ಯ ಕಾರ್ಯಕ್ರಮಕ್ಕೆ ಚಾಲನೆ

        ಹುಳಿಯಾರು ಸಮೀಪದ ಕಾಮಶೆಟ್ಟಿಪಾಳ್ಯದಲ್ಲಿ ಬನಶಂಕರಿ ಅಮ್ಮನವರ ಪುನರ್ ಚೈತನ್ಯ ಜೀವಕಳಾ,ಕರಿಬಾಣಸಾಲು ಸ್ಥಾಪನೆ,ಬನದ ಹುಣ್ಣಿಮೆ ಮುಂತಾದ ಪೂಜಾ ಕಾರ್ಯಕ್ರಮಕ್ಕೆ ಶುಕ್ರವಾರ ಸಂಜೆ ಚಾಲನೆ ನೀಡಲಾಯಿತು.           ಕೆಂಕೆರ ಕಾಳಮ್ಮ ಹಾಗೂ ಹುಳಿಯಾರಿನ ಕೆಂಚಮ್ಮ ದೇವಿಯು ಆಗಮನದೊಂದಿಗೆ ಗಂಗಾಪೂಜೆ ನೆರವೇರಿಸಿ ದೇವಾಲಯ ಪ್ರವೇಶದೊಂದಿಗೆ ಪೂಜಾ ಕಾರ್ಯಕ್ರಮ ಪ್ರಾರಂಭವಾಯಿತು.             ಶನಿವಾರದಂದು ಬೆಳಿಗ್ಗೆ ಶ್ರೀ ಬಸವೇಶ್ವರ ಸ್ವಾಮಿ ಹಾಗೂ ಬನಶಂಕರಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ ನಡೆಯಲಿದೆ.ಸಂಜೆ ೬ ಗಂಟೆಗೆ ಕಲಶ ಸ್ಥಾಪನೆ,ಪೂಜೆ ಮತ್ತು ಕರಿಬಾಣಸಾಲು ಸ್ಥಾಪನೆ ಮುಂತಾದ ಧಾರ್ಮಿಕ ವಿಧಿವಿಧಾನಗಳು ನೆರವೇರಲಿದೆ.                ೨೪ರ ಭಾನುವಾರದಂದು ಕುಪ್ಪೂರು ತಮ್ಮಡಿಹಳ್ಳಿಯ ಶ್ರೀ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಬೆಳಿಗ್ಗೆ ಐದಕ್ಕೆ ಅಮ್ಮನವರಿಗೆ ಜೀವಕಳಾ ಚೈತನ್ಯ ಪೂರಕ ಮಂತ್ರಪಠನ,ರುದ್ರಾಭಿಷೇಕ,ಅಷ್ಟೋತ್ತರ ಪೂಜೆ,ಗಣಪತಿ ಹೋಮ,ವಾಸ್ತು ಹೋಮ,ನವಗ್ರಹ ಹೋಮ,ರುದ್ರ ಚಂಡೀಕಾ ದುರ್ಗಾ ಹೋಮ,ಪೂರ್ಣಾಹುತಿ ಮತ್ತು ನವ ಕನ್ನಿಕೆಯರಿಂದ ಅಮ್ಮನವರಿಗೆ ಕುಂಬಾಭಿಷೇಕ,ಕುಂಕುಮಾರ್ಚನೆ,ಮಹಾಮಂಗಳಾರತಿ ನಡೆದು ನಂತರ ಪ್ರಸಾದ ವಿನಿಯೋಗ ಮಾಡಲಾಗುತ್ತದೆ.ರಾತ್ರಿ ೮ ಗಂಟೆಯಿಂದ ಅನ್ನ ಸಂತರ್ಪಣೆ ನಡೆಯಲಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಾಯಿಯ ಕೃಪೆಗೆ ಪಾತ್ರರಾಗಬೇಕಾಗ

ಜ.23 : ಬೋರನಕಣಿವೆಯಲ್ಲಿ ಜ.೨೩ ರಿಂದ ಶೈಕ್ಷಣಿಕ ಸಮಾವೇಶ

                    ಬೋರನಕಣಿವೆಯ ಸುವರ್ಣ ವಿದ್ಯಾ ಚೇತನ, ಬೆಂಗಳೂರಿನ ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ, ಚಿಕ್ಕನಾಯಕನಹಳ್ಳಿ ಸೃಜನ ತಾಲ್ಲೂಕು ವಿಜ್ಞಾನ ಕೇಂದ್ರ, ಸರ್ಕಾರಿ ಪದವಿ ಪೂರ್ವಕಾಲೇಜು ಪ್ರೌಢಶಾಲಾ ವಿಭಾಗ ಹಾಗೂ ಐ.ಟಿ.ಐ. ವಿಭಾಗ, ಬೋರನಕಣಿವೆ ಇವರ ಸಂಯುಕ್ತಾಶ್ರಯದಲ್ಲಿ ಜನವರಿ ೨೩ ಮತ್ತು ೨೪ ರಂದು ಸರ್ಕಾರಿ ಶಾಲಾ ಕಾಲೇಜು ಉಳಿಸಿ ಅಭಿಯಾನದ ಅಂಗವಾಗಿ ಹುಳಿಯಾರು ಹೋಬಳಿ ಬೋರನ ಕಣಿವೆಯಲ್ಲಿ ಶೈಕ್ಷಣಿಕ ಸಮಾವೇಶ ಹಾಗೂ ಹಿರಿಯ ವಿದ್ಯಾರ್ಥಿಗಳ ಸಮಾವೇಶವನ್ನು ಏರ್ಪಡಿಸಲಾಗಿದೆ.                     ಜ.೨೩ ರಂದು ೧೦.೩೦ ಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹೆಚ್.ಎನ್. ಗೋಪಾಲಕೃಷ್ಣ ಅವರು ಶೈಕ್ಷಣಿಕ ಸಮಾವೇಶ ಉದ್ಘಾಟಿಸಲಿದ್ದು ಬೋರನಕಣಿವೆಯ ಸರ್ಕಾರಿ ಪದವಿ ಪೂರ್ವಕಾಲೇಜಿನ ಪ್ರಾಚಾರ್ಯರಾದ ಬಿ.ಎನ್.ಉಮಾ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಚಿ.ನಾ. ಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, ಎಸ್.ಡಿ.ಎಂ.ಸಿ.ಮಾಜಿ ಅಧ್ಯಕ್ಷ ತಿಮ್ಮರಾಯಪ್ಪ, ಉಪಾಧ್ಯಕ್ಷರಾದ ಜಯಲಿಂಗರಾಜು, ಪ್ರೌಢವಿಭಾಗ ಹಿರಿಯ ಸಹ ಶಿಕ್ಷಕರಾದ ಎಂ. ಮೈಲಾರಯ್ಯ, ಐ.ಟಿ.ಐ. ಉಪನ್ಯಾಸಕರಾದ ಎನ್. ಕೃಷ್ಣಪ್ಪ ಆಗಮಿಸುವರು.                   ಶಿಕ್ಷಣ ಹಾಗೂ ಸಂವಿಧಾನದ ಆಶ್ವಾಸನೆ ಕುರಿತು ಕರ್ನಾಟಕ ಜನಶಕ್ತಿಯ ಬೆಂಗಳೂರಿನ ಡಾ.ವಾಸು, ಶಿಕ್ಷಕರಿಗೆ ಸದಾ ಸ್ಪೂರ್ತಿ ಸಾವಿತ್ರಿಬಾಯಿ ಫುಲೆ ಕುರಿತು ಮಹಿಳಾ ಮುನ್ನಡೆಯ ಮಂಡ್ಯ ಮಲ್ಲಿಗೆ

ಜನ ಹೋರಾಟಕ್ಕೆ ಮಣಿದ ಬೆಸ್ಕಾಂ

ಇಂದಿನಿಂದ ಆರುಗಂಟೆಗಳ ಕಾಲ ವಿದ್ಯುತ್ ಜಾರಿ ---------------------------- ಹುಳಿಯಾರು ಹೋಬಳಿಯ ದಸೂಡಿಯಲ್ಲಿ ಕಳೆದ ತಿಂಗಳು ನಡೆದ ಪ್ರತಿಭಟನಾ ಸಂದರ್ಭದಲ್ಲಿ ಕೆಪಿಟಿಸಿಎಲ್ ಅಧಿಕಾರಿಗಳು ನೀಡಿದ್ದ ಭರವಸೆಯಂತೆ ಶುಕ್ರವಾರದಿಂದ ಜಾರಿಗೆ ಬರುವಂತೆ ಹಗಲಿನ ವೇಳೆ ಒಂದು ಗಂಟೆ ಕಾಲ ವಿದ್ಯುತ್ ಸಮಯವನ್ನು ಹೆಚ್ಚಳಮಾಡಲಾಗಿದೆ.           ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಗ್ರಾಪಂ ಅಧ್ಯಕ್ಷ ದಬ್ಬಗುಂಟೆ ರವಿಕುಮಾರ್ ಗ್ರಾಮಾಂತರ ಪ್ರದೇಶದಲ್ಲಿ ಲೋಡ್ ಶೆಡ್ಡಿಂಗ್ ನೆಪದಲ್ಲಿ ಹಿಂದಿನಿಂದಲೂ ಪ್ರತಿದಿನ ಹಗಲಿನಲ್ಲಿ ಒಂದು ಗಂಟೆ ಹಾಗೂ ರಾತ್ರಿ ವೇಳೆಯಲ್ಲಿ ಮೂರುಗಂಟೆ ಕಾಲ ವಿದ್ಯುತ್ ನೀಡುತ್ತಿದ್ದರು.ರಾತ್ರಿಯ ಅವೇಳೆಯಲ್ಲಿ ಜಮೀನಿಗೆ ನೀರು ಕಟ್ಟುವ ಪರಿಸ್ಥಿತಿಯಿಂದ ಬೇಸತ್ತ ರೈತರು ಹಾಗೂ ಗ್ರಾಮಸ್ಥರು ಪ್ರತಿಭಟಿಸಿದ್ದರಿಂದ ಎಚ್ಚತ್ತ ಇಲಾಖೆಯವರು ಇಂದಿನಿಂದ ಹಗಲು ಹೊತ್ತು ಎರಡು ಗಂಟೆ ಹಾಗೂ ಸಂಜೆ ನಾಲ್ಕು ಗಂಟೆಗಳ ಕಾಲ ಒಟ್ಟು ಆರು ಗಂಟೆಗಳ ಕಾಲ ವಿದ್ಯುತ್ ಜಾರಿಮಾಡಿದ್ದಾರೆ ಎಂದರು.          ಗ್ರಾಮೀಣ ಭಾಗದ ಜನರ ಸಮಸ್ಯೆಗೆ ಸ್ಪಂದಿಸಿದ ಇಲಾಖೆಯವರ ಕ್ರಮಕ್ಕೆ ಗ್ರಾಮಸ್ಥರ ಪರವಾಗಿ ರವಿಕುಮಾರ್ ಅಭಿನಂದಿಸಿದ್ದಾರೆ

ಒಳ ಚರಂಡಿ ವ್ಯವಸ್ಥೆ ಕಲ್ಪಿಸಿ

          ಹುಳಿಯಾರು ಹೋಬಳಿಯ ತಾಲ್ಲೂಕು ಹೊಯ್ಸಳ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಲಕ್ಕೇನಹಳ್ಳಿ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸಿ ಎಂದು ಮುಖಂಡ ಲ.ಪು.ಕರಿಯಪ್ಪ ಒತ್ತಾಯಿಸಿದ್ದಾರೆ.               ಲಕ್ಕೇನಹಳ್ಳಿ ಗ್ರಾಮದ ಹೊಸೂರು ಬಡಾವಣೆಯಲ್ಲಿ ಸಾಕಷ್ಟು ತಿಂಗಳುಗಳಿಂದ ರಸ್ತೆ ಹದಗೆಟ್ಟಿದ್ದು, ಟ್ಯಾಂಕ್‌ನಿಂದ ಹರಿದು ಬರುವ ಕಲುಷಿತ ನೀರು ರಸ್ತೆಯಲ್ಲಿ ನಿಂತಿದ್ದು, ಆಳವಾದ ಗುಂಡಿಗಳು ಬಿದ್ದಿವೆ. ಪ್ರತಿನಿತ್ಯ ಟ್ಯಾಂಕರ್ ಇತ್ಯಾದಿ ವಾಹನಗಳು ಓಡಾಡುತ್ತಿದ್ದು, ರಸ್ತೆ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಜನ, ಜಾನುವಾರುಗಳು ಓಡಾಡಲೂ ತುಂಬಾ ತೊಂದರೆಯಾಗಿದೆ. ಗ್ರಾಮದಲ್ಲಿ ಒಳ ಚರಂಡಿ ವ್ಯವಸ್ಥೆ ಮಾಡಿಸಿದರೆ ಸಮಸ್ಯೆ ಬಗೆಹರಿಯಲಿದ್ದು ಸಂಬಂಧಿಸಿದವರು ಇತ್ತ ಗಮನಹರಿಸಬೇಕಿದೆ . 

ಸೊನೆ ಮಳೆ ,ರೈತರಿಗೆ ತಂತು ಆತಂಕ

------------- ಹುಳಿಯಾರು : ಪಟ್ಟಣ ಸೇರಿದಂತೆ ಹೋಬಳಿವ್ಯಾಪ್ತಿಯಲ್ಲಿ ಬುಧವಾರ ಮುಂಜಾನೆ ಸೊನೆ ಮಳೆಯಾಗಿದೆ .ಮಂಗಳವಾರದಿಂದಲೂ ಮೋಡದ ವಾತವರಣ ಕಂಡುಬಂದಿದ್ದು ಶೀತದ ವಾತಾವರಣ ನಿರ್ಮಾಣವಾಗಿ ಚಳಿ ಇಲ್ಲದಂತಾಗಿದೆ. ಹೋಬಳಿಯ ವಿವಿಧೆಡೆ ರೈತರು ರಾಗಿ,ಹುರುಳಿ,ಹುಚ್ಚೇಳು,ಅವರೆ ,ಜೋಳ ಕಟಾವು ಮಾಡಿದ್ದು ಅದರ ತರೆಗೆಲೆ ದನ ಕುರಿಗೆ ಮೇವಾಗುತ್ತಿದ್ದು ಮಳೆಯೀದಾಗಿ ಕೂಳೆ ಮೇವಿಗೆ ಗೆದ್ದಲು ಬೀಳುವ ಸಂಭವವಿದೆ.ರಾಗಿ ಒಕ್ಕಣೆ ಮಾಡುವ ಸಮಯದಲ್ಲಿ ಸೋನೆಮಳೆಯಾಗಿದ್ದು ಮತ್ತೆ ರಾಗಿ ಕಪ್ಪಾಗುವುದೆಂಬ ರೈತರಿಗೆ ಆತಂಕ ಉಂಟುಮಾಡಿದೆ. ಕಿತ್ತಿದ್ದು ಅದನ್ನು ಒಣಗಿಸಲು ಮುಂದಾಗಿದ್ದರಾದರೂ ಬಿಸಿಲಿಲ್ಲದ ಕಾರಣ ಕೈಕಟ್ಟಿಕೂರುವಂತಾಗಿ, ಹೀಗಾದರೆ ಹೆಸರನ್ನು ಯಾವರೀತಿ ಒಕ್ಕಣೆ ಮಾಡುವುದು, ಸೊನೆ ಮಳೆ ಅವರೆಕಾಯಿಗೆ ಅನುಕೂಲವಾದರೆ ದಾಳಿಂಬೆ ಬೆಳೆಗೆ ವೈರಸ್ ರೋಗಕ್ಕೆ ದಾರಿ ಮಾಡಕೊಡಲಿದೆ.

ಈಶ್ವರಿಯ ವಿಶ್ವವಿದ್ಯಾಲಯದಿಂದ ಸ್ಮೃತಿ ದಿನ ಆಚರಣೆ

ಹುಳಿಯಾರು: ಪಟ್ಟಣದ ಪ್ರಜಪಿತಾ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಈಶ್ವರೀಸ್‌ಸಂಸ್ಥಾಪಕರು ದೇಹ ತ್ಯಜಿಸಿದ ದಿನವನ್ನು ಸ್ಮೃತಿ ದಿನಾಚರಣೆಯಾಗಿ ಆಚರಿಸಲಾಯಿತು.                 ಆಧ್ಯಾತ್ಮ ಶಿಕ್ಷಕಿ ಗೀತಕ್ಕ ಮಾತನಾಡಿ ಈಶ್ವರಿಯಾ ವಿಶ್ವವಿದ್ಯಾಲಯ ೧೯೩೬ ನೇ ಇಸವಿಯಲ್ಲಿ ಕರಾಚಿಯಲ್ಲಿ ಸ್ಥಾಪನೆಗೊಂಡು ಈಗ ೧೪೦ ದೇಶಗಳಲ್ಲಿ ಸಾವಿರಾರು ಸೇವಾಕೇಂದ್ರಗಳನ್ನು ತೆರೆದು ಲಕ್ಷಾಂತರ ಜನರಿಗೆ ಉಚಿತವಾಗಿ ಆಧ್ಯಾತ್ಮಿಕವಾಗಿ ಶಿಕ್ಷಣ, ನೈತಿಕ ಮೌಲ್ಯ ಶಿಕ್ಷಣವನ್ನು ಬೋಧಿಸುತ್ತ ಬಂದಿದೆ. ಇದಕ್ಕೆ ಕಾರ್ಯಾತೀತರಾದ ದಾದಾಲೇಖರವರು ೧೯೩೬ ರಿಂದ ೧೯೬೯ ರವರೆಗೆ ಇದರಲ್ಲಿ ಸೇವೆ ಸಲ್ಲಿಸುತ್ತಾ ೧೯೬೯ ಜನವರಿ ೧೮ ರಂದು ತಮ್ಮ ಶರೀರವನ್ನು ತ್ಯಜಿಸಿದರು. ಆ ದಿನದ ಸ್ಮರಣಾರ್ಥವಾಗಿ ಈ. ವಿ. ವಿ. ಸೇವಾಕೇಂದ್ರದಲ್ಲಿ ಲಕ್ಷಾಂತರ ಪರಿವಾರದವರು ಈ ದಿನವನ್ನು ಬ್ರಹ್ಮ ಸ್ಮೃತಿ ದಿವಸವೆಂದು ಅಚರಣೆ ಮಾಡುತ್ತಾ ಬಂದಿದ್ದಾರೆ ಎಂದು ವಿವರಿಸಿದರು.              ಈ ಸಂದರ್ಭದಲ್ಲಿ ಟಿ.ಎಸ್. ರಾಮನಾಥ್ ,ವಿಜಯಮ್ಮ,ಜಿ.ಪಂ. ಮಾಜಿ ಸದಸ್ಯೆ ಲಕ್ಷ್ಮೀಅಂದಾನಪ್ಪ,  ಲಕ್ಷ್ಮೀ ರಾಜು, ನಿವೃತ್ತ ಶಿಕ್ಷಕ ತಿಮ್ಮಯ್ಯ, ಸುದರ್ಶನಾಚಾರ್ ಮತ್ತಿತರರು ಇದ್ದರು

ವಿವೇಕಾನಂದರ ಸಂದೇಶ ಸರ್ವಕಾಲಕ್ಕೂ ಅನ್ವಯ: ಕುಪ್ಪೂರು ಶ್ರೀ

ಹುಳಿಯಾರು : ವಿವೇಕಾನಂದರು ಸಾರಿದ ಸಂದೇಶಗಳು ಇಡೀ ವಿಶ್ವಕ್ಕೆ ಬೆಳಕಾಗಿದ್ದು ಅವರ ಆದರ್ಶಗಳು ಸರ್ವಕಾಲಕ್ಕೂ ಅನ್ವಯವಾಗಲಿವೆ, ಸ್ವಾಮಿ ವಿವೇಕಾನಂದರ ನುಡಿಮುತ್ತುಗಳು ಅಬ್ದುಲ್ ಕಲಾಂ, ಸಿದ್ಧಗಂಗಾ ಶ್ರೀಗಳು ಸೇರಿದಂತೆ ನೂರಾರು ಸಾಧಕರ ಸಾಧನೆಗೆ ಸ್ಪೂರ್ತಿ ನೀಡಿವೆ. ಸ್ವಾಮಿ ವಿವೇಕಾನಂದ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ, ಇಂತಹ ಅಭೂತ ಪೂರ್ವ ವ್ಯಕ್ತಿತ್ವ ಹೊಂದಿದ್ದ ಮಹಾನ್ ವ್ಯಕ್ತಿಯ ಜೀವನಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿರೆಂದು ಕುಪ್ಪೂರು ಮಠದ ಡಾ:ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಹುಳಿಯಾರಿನ ಕನಕದಾಸ ವಿದ್ಯಾಸಂಸ್ಥೆಯ ಆವರಣದಲ್ಲಿ ಎಬಿವಿಪಿ ಯಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮವನ್ನು ಡಾ: ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.               ಹುಳಿಯಾರಿನ ಕನಕದಾಸ ವಿದ್ಯಾಸಂಸ್ಥೆಯ ಆವರಣದಲ್ಲಿ ಎಬಿವಿಪಿಯಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.                     ಇಂದು ಆಧುನಿಕತೆಯ ಹೆಸರಿನಲ್ಲಿ ಯುವ ಜನಾಂಗ ದುಶ್ಚಟಗಳಿಗೆ ಮಾರುಹೋಗುತ್ತಿದ್ದು ಮಾನವೀಯ ಮೌಲ್ಯಗಳ ಅಧಃಪತನವಾಗುತ್ತಿದೆ. ಯುವ ಸಮೂಹಕ್ಕೆ ಮುಂದಿನ ದಿನಗಳಲ್ಲಿ ದೇಶ ಕಟ್ಟುವ ಹೊಣೆಗಾರಿಕೆಯಿದ್ದು ಇದನ್ನರಿತು ಸತ್ಪ್ರಜೆಯಾಗಿ ಹೊರಹೊಮ್ಮಬೇಕಿದೆ ಎಂದರು.                        ವಿದ್ಯಾರ್ಥಿಗಳು ಜನ ಸಂಪಾದನೆಗೆ ಹೆಚ್ಚು ಒತ್ತು ಕ

ರೈತರು ಹೆಚ್ಚು ಆದಾಯ ತರುವ ಬೆಳೆಗಳತ್ತ ಗಮನಹರಿಸಬೇಕಿದೆ : ಶಾಸಕ ಸಿ.ಬಿ.ಸುರೇಶ್ ಬಾಬು

ಹುಳಿಯಾರು: ಪ್ರಸ್ತುತದಲ್ಲಿ ಕೃಷಿಕರ ಜೀವನ ಸಂಕಷ್ಟದಲ್ಲಿದ್ದು ರೈತರು ಸಾಂಪ್ರದಾಯಿಕ ಬೆಳೆಗಳ ಜೊತೆಯಲ್ಲಿ ಹೆಚ್ಚು ಆದಾಯ ತರುವ ಬೆಳೆಗಳತ್ತ ಗಮನಹರಿಸಬೇಕಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಕಿವಿ ಮಾತು ಹೇಳಿದರು.                   ಪಟ್ಟಣದಲ್ಲಿ ಸೋಮವಾರದಂದು ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಗಳು ಆದಾಯ ಹೆಚ್ಚಿಸುವ ಬೆಳೆಗಳ ಬಗ್ಗೆ ರೈತರಿಗೆ ಮಾಹಿತಿ ಹಾಗೂ ತರಬೇತಿ ನೀಡಬೇಕಿದೆ ಎಂದರು.ಇಂದು ರೈತರು ಬೆಳೆಯುವ ರಾಗಿ ಜೋಳ ಮತ್ತೊಂದಕ್ಕೆ ಆದಾಯಕಿಂತ ಖರ್ಚೆ ಹೆಚ್ಚಾಗುತ್ತಿದ್ದು ಬೆಳೆಯುವ ಬದಲು ಕೊಂಡು ತಿನ್ನುವ ಪರಿಸ್ಥಿತಿ ಎದುರಾಗಿದೆ ಎಂದರು. ಹುಳಿಯಾರಿನ ರೈತ ಸಂಪರ್ಕ ಕೇಂದ್ರದ ಉದ್ಘಾಟನೆಯನ್ನು ಶಾಸಕ ಸುರೇಶ್ ಬಾಬು ನೆರವೇರಿಸಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ,ಜಿಪಂ ಸದಸ್ಯೆ ಮಂಜುಳಾ,ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಮ್ಮ, ಸದಸ್ಯೆ ಬೀಬಿಫಾತಿಮಾ ಇತರರಿದ್ದರು.              ತಾಲ್ಲೂಕಿನ ರೈತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಇಂದು ೩೮ ಲಕ್ಷ ರೂ ವೆಚ್ಚದ ಸುಸ್ಸಜಿತ ಕಟ್ಟಡವನ್ನು ಲೋಕಾರ್ಪಣೆ ಮಾಡಿದ್ದು ಇಲಾಖೆಯ ಎಲ್ಲಾ ಸವಲತ್ತುಗಳು ರೈತರಿಗೆ ದೊರೆಯಲಿದೆಯೆಂದರು.ಸರ್ಕಾರ ರೈತರಿಗೆ ಅನೇಕ ಯೋಜನೆಗಳು ಹಾಗೂ ಸವಲತ್ತುಗಳನ್ನು ಕಲ್ಪಿಸುವ ಮೂಲಕ ರೈತರ ಹಿತಕಾಯುತ್ತಿದ್ದು ಬೆಳೆಹಾನಿ ಸಂದರ್ಭದಲ್ಲಿ ಬೆಳೆ ವಿಮಾಯೋಜನೆ ಮೂಲ

ಪೋಲಿಯೋ ಲಸಿಕೆ ತಪ್ಪದೆ ಹಾಕಿಸಿ:ಗೀತಾ

ಹುಳಿಯಾರು: ಪೋಷಕರುಗಳು ಐದು ವರ್ಷದ ಒಳಗಿನ ತಮ್ಮ ಮಕ್ಕಳನ್ನು ಕರೆತಂದು ತಪ್ಪದೆ ಪೋಲಿಯೊ ಲಸಿಕೆಯನ್ನು ಹಾಕಿಸುವಂತೆ ಗ್ರಾಮಪಂಚಾಯ್ತಿ ಅಧ್ಯಕ್ಷೆ ಗೀತಾ ಮನವಿ ಮಾಡಿದರು. ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರದಂದು ಆರೊಗ್ಯ ಇಲಾಖೆ ಹಾಗೂ ರೋಟರಿ ಸಂಸ್ಥೆ ಹಮ್ಮಿಕೊಂಡಿದ್ದ ಹಮ್ಮಿಕೊಂಡಿದ್ದ ಪಲ್ಸ್‌ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪೋಲಿಯೋ ಒಂದು ಮಾರಕ ರೋಗವಾಗಿದ್ದು ಈಗಾಗಲೆ ನಿರ್ಮೂಲನೆಗೊಂಡಿದೆ ಎನ್ನಲಾಗಿದೆಯಾದರೂ ಪೋಷಕರು ಮಕ್ಕಳಿಗೆ ಕಾಲ ಕಾಲಕ್ಕೆ ಸರಿಯಾಗಿ ಪೋಲಿಯೊ ಲಸಿಕೆ ಹಾಕಿಸುವಂತೆ ತಿಳಿಸಿದರು. ಹುಳಿಯಾರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರದಂದು ಗ್ರಾಪಂ ಅಧ್ಯಕ್ಷೆ ಗೀತಾ ಪಲ್ಸ್‌ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ವೈದ್ಯಾಧಿಕಾರಿ ಡಾ.ಸದಾಶಿವಯ್ಯ,ಡಾ.ಶೋಭಾ,ಡಾ.ಚಂದನ ,ರೋಟರಿ ಕಾರ್ಯದರ್ಶಿ ರವೀಶ್ ಮತ್ತಿತರರಿದ್ದರು.  ರೋಟರಿ ಅಧ್ಯಕ್ಷ ಮಂಜುನಾಥ್ ಗುಪ್ತಾ ಮಾತನಾಡಿ ಪೋಲಿಯೋ ಲಸಿಕೆ ಹಾಕಿಸುವ ಕುರಿತಂತೆ ಪೋಷಕರುಗಳಲ್ಲಿ ಮಕ್ಕಳ ಜಾಥಾಮೂಲಕ ಅರಿವು ಮೂಡಿಸಲಾಗಿದ್ದು ಎಲ್ಲಾ ಮಕ್ಕಳಿಗೂ ತಪ್ಪದೆ ಪೋಲಿಯೊ ಲಸಿಕೆ ಹಾಕಿಸಬೇಕೆಂಬ ಇರಾದೆಯಿಂದ ಪಟ್ಟಣ ವ್ಯಾಪ್ತಿಯಲ್ಲಿ ಐದು ಘಟಕಗಳನ್ನು ತೆರೆಯಲಾಗಿದೆ ಎಂದರು. ಸಮಾರಂಭದಲ್ಲಿ ವೈದ್ಯಾಧಿಕಾರಿ ಡಾ.ಸದಾಶಿವಯ್ಯ,ಡಾ.ಶೋಭಾ,ಡಾ.ಚಂದನ ,ರೋಟರಿ ಕಾರ್ಯದರ್ಶಿ ರವೀಶ್,ದುರ್ಗರಾಜು,ಸುದರ್ಶನಚಾರ್ ಮತ್ತಿತರರಿದ್ದರು. ----------

ಇಂದು ಪಲ್ಸ್ ಪೋಲಿಯೋ

೫ ವರ್ಷದೊಳಗಿನ ಮಕ್ಕಳಿಗೆ ಮರೆಯದೇ ಪೋಲಿಯೋ ಲಸಿಕೆ ಹಾಕಿಸಿ ------------------------------------------ ಹುಳಿಯಾರು: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಜ.೧೭ರ ಬೆಳಗ್ಗೆ ೭.೩೦ಕ್ಕೆ ಮೊದಲನೇ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದ್ದು ಇದಕ್ಕಾಗಿ ಆರೋಗ್ಯ ಇಲಾಖೆಯೊಂದಿಗೆ ರೋಟರಿ ಸಂಸ್ಥೆ ಕೈಜೋಡಿಸುತ್ತಿದೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಮಂಜುನಾಥ್ ಗುಪ್ತಾ ತಿಳಿಸಿದರು.             ಪೋಲಿಯೋ ಲಸಿಕಾ ಕಾರ್ಯಕ್ರಮದ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಅವರು ಈ ವರ್ಷದ ಮೊದಲ ಸುತ್ತಿನ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ಇದಾಗಿದ್ದು ರಾಜ್ಯಾದ್ಯಂತ ಜ.೧೭ರಿಂದ ಜ.೨೦ರವರೆಗೆ ನಡೆಯಲಿದೆ ಎಂದರು.ಫೆ ೨೧ ರಿಂದ ಎರಡನೆ ಸುತ್ತಿನ ಲಸಿಕಾ ಕಾರ್ಯಕ್ರಮ ನಡೆಯಲಿದ್ದು ೫ ವರ್ಷದೊಳಗಿನ ಮಕ್ಕಳಿಗೆ ಮರೆಯದೇ ಪೋಲಿಯೋ ಲಸಿಕೆ ಹಾಕಿಸಬೇಕೆಂದರು.ಪೋಷಕರಿಗೆ ಈ ಬಗ್ಗೆ ಜಾಗೃತಿ ಉಂಟಮಾಡಲು ಶನಿವಾರದಂದು ಬಸವೇಶ್ವರ ಶಾಲೆ ಹಾಗೂ ವಾಸವಿ ಶಾಲಾ ಮಕ್ಕಳಿಂದ ಜಾಗೃತಿ ಜಾಥಾ ನಡೆಸಲಾಯಿತು ಎಂದರು..         ಪೋಲಿಯೋ ಲಸಿಕೆ ಹಾಕಲು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ,ಬಸ್ ನಿಲ್ದಾಣದಲ್ಲಿ,ಅಂಗನವಾಡಿಗಳಲ್ಲಿ ಬೂತ್‌ಗಳನ್ನು ತೆರೆಯಲಾಗುವುದಿದ್ದು, ಜ.೧೭ರ ಬಳಿಕ ಮೂರು ದಿನ ಮನೆ, ಮನೆಗೆ ಭೇಟಿ ನೀಡಿ ಲಸಿಕೆ ಹಾಕಿಸಿಕೊಳ್ಳದಿರುವ ಮಕ್ಕಳನ್ನು ಹುಡುಕಿ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗುವು

ಕ್ರೀಡೆಯಲ್ಲಿ ತೊಡಗಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ : ಕಿರಣ್ ಕುಮಾರ್

ಹುಳಿಯಾರು: ವಿದ್ಯಾರ್ಥಿಗಳು ಸರ್ವತೋಮುಖ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಿಸಿಕೊಳ್ಳಬೇಕು .ಕ್ರೀಡೆ ದೇಹ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವುದರಿಂದ ಪ್ರತಿಯೊಬ್ಬರು ಕ್ರೀಡೆಯಲ್ಲಿ ಭಾಗವಹಿಸಿ ಅಭ್ಯಾಸ ಮಾಡಬೇಕು.ಚಿಕ್ಕವಯಸ್ಸಿನಲ್ಲೇ ಯಾವುದಾದರೊಂದು ಕ್ರೀಡೆಯಲ್ಲಿ ತೊಡಗಿಕೊಂಡು ಆರೋಗ್ಯ ಕಾಪಾಡಿಕೊಳ್ಳುವುದು ಒಳಿತು ಎಂದು ಮಾಜಿ ಶಾಸಕ ಕೆ.ಎಸ್. ಕಿರಣ್‌ಕುಮಾರ್ ಕಿವಿ ಮಾತು ಹೇಳಿದರು. ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಶನಲ್ ಸ್ಕೂಲ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಕ್ರೀಡಾ ದಿನ-೨೦೧೬ ಕಾರ್ಯಕ್ರಮದಲ್ಲಿ ಎಎಸ್‌ಐ ಶಿವಪ್ಪ ಕ್ರೀಡಾಜ್ಯೋತಿ ಸ್ವೀಕರಿಸಿದರು.ಮಾಜಿ ಶಾಸಕ ಕೆ.ಎಸ್.ಕಿರಣ್‌ಕುಮಾರ್, ಕಾರ್ಯದರ್ಶಿ ಕವಿತಾಕಿರಣ್,ಪ್ರಾಚಾರ್ಯ ರವಿ ಇದ್ದಾರೆ. ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಶನಲ್ ಸ್ಕೂಲ್‌ನಲ್ಲಿ ಕ್ರೀಡಾ ದಿನ-೨೦೧೬ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕ್ರೀಡೆ ಆರೋಗ್ಯ ವೃದ್ಧಿಗೆ ಮಹತ್ವದ ಪಾತ್ರವಹಿಸುತ್ತದೆ. ದೈಹಿಕ ಹಾಗೂ ಮಾನಸಿಕ ಖಾಯಿಲೆಗೆ ಕ್ರೀಡೆ ಹಾಗೂ ಧ್ಯಾನ ರಾಮಬಾಣವಾಗಿದ್ದು ಬೆಳಿಗ್ಗೆ ಒಂದು ಗಂಟೆ ಆಟವಾಡಿದರೆ ಇಡೀ ದಿನ ಉತ್ಸಾಹದಿಂದ ಇರಬಹುದು. ಕ್ರೀಡಾ ಚಟುವಟಿಕೆಗಳನ್ನು ಮೈಗೂಡಿಸಿಕೊಂಡರೆ ವೈದ್ಯರಿಂದ ದೂರ ಉಳಿಯಬಹುದೆಂದು ಸಮೀಪಕ್ಷೆಗಳು ಹೇಳುತ್ತಿವೆ. ಹಾಗಾಗಿ ನಮ್ಮ ಆರೋಗ್ಯದ ದೃಷ್ಠಿಯಿಂದಾದರೂ ಕ್ರೀಡೆಯಲ್ಲಿ ತೊಡಗಬೇಕಿದೆ. ಈ ನಿಟ್ಟಿನಲ್ಲಿ ಪೋಷಕರು ಮಕ್

ಸೀಗೆಬಾಗಿಯಲ್ಲಿ ಸಂಕ್ರಾಂತಿ ಜೋರು : ಮೊಲ ಬಿಡುವ ಮೂಲಕ ಸಂಕ್ರಾಂತಿಗೆ ತೆರೆ

ಹುಳಿಯಾರು :ಹೋಬಳಿಯ ಸೀಗೆಬಾಗಿ ಗ್ರಾಮದಲ್ಲಿ ಸುಗ್ಗಿಹಬ್ಬವಾದ ಸಂಕ್ರಾಂತಿಯನ್ನು ಎರಡು ದಿನಗಳಕಾಲ ವಿಜೃಂಭಣೆಯಿಂದ ನಡೆಸುತ್ತಾರೆ. ಈ ಗ್ರಾಮದಲ್ಲಿ ಸಂಕ್ರಾಂತಿಯನ್ನು ವಿಶೇಷವಾಗಿ ಆಚರಿಸುವುದಿದ್ದು ಅಂದು ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ವಿಶೇಷ ಅಡುಗೆ ಮಾಡಿಕೊಂಡು ವರದರಾಜಸ್ವಾಮಿ ದೇವಸ್ಥಾನಕ್ಕೆ ಅಡುಗೆಬುತ್ತಿಯನ್ನು ಹೊತ್ತು ತಂದು ಎಲ್ಲರು ಒಟ್ಟಾಗಿ ಹಂಚಿಕೊಂಡು ಊಟ ಮಾಡುವುದು ಇಲ್ಲಿನ ವಾಡಿಕೆಯಾಗಿದೆ. ಹುಳಿಯಾರು ಹೋಬಳಿ ಸೀಗೆಬಾಗಿಯಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ದೇವರುಗಳ ಸಮ್ಮುಖದಲ್ಲಿ ಮೊಲ ಹಿಡಿದುನಿಂತಿರುವ ಗ್ರಾಮಸ್ಥರು. ಈ ಗ್ರಾಮದ ವರದರಾಜಸ್ವಾಮಿ ಉದ್ಭವ ಮೂರ್ತಿಯಾಗಿದ್ದು ಇದೇ ದೇವಾಲಯದಲ್ಲಿ ಊರಿನಲ್ಲಿದ್ದ ಆಂಜನೇಯಸ್ವಾಮಿಯನ್ನು ಸಹ ಪ್ರತಿಷ್ಠಾಪಿಸಿ ಪೂಜಿಸಲು ಪ್ರಾರಂಭಿಸಿದ್ದರಿಂದ ವರದಾಂಜನೇಯಸ್ವಾಮಿ ಎಂದು ಪ್ರಸಿದ್ದಿಯಾಗಿದೆ. ಮೊಲ ಬಿಡುವುದು : ಮೊಲ ಹಿಡಿದು ಮತ್ತೆ ಕಾಡಿಗೆ ಬಿಡುವ ವಿಶಿಷ್ಠ ಪದ್ಧತಿ ಇಲ್ಲಿ ಆಚರಣೆಯಲ್ಲಿದೆ. ಜಾನಪದ ಹಿನ್ನಲೆಯ ಕಥೆಯಂತೆ ಸಂಕ್ರಾಂತಿಯಂದು ಲಕ್ಷ್ಮಿತವರಿಗೆ ಹೊರಟಿದ್ದರಿಂದ ಕೋಪಗೊಂಡ ವಿಷ್ಣುವು ಬೇಟೆ ಆಡುವ ನೆಪದಲ್ಲಿ ಕಾಡಿಗೆ ತೆರಳುತ್ತಾನೆ. ಗಂಡನನ್ನು ತಡೆಯಲು ಲಕ್ಷ್ಮಿಯು ಕಾಡಿನಲ್ಲಿ ಮೊಲವನ್ನು ಆತನ ದಾರಿಗೆ ಅಡ್ಡವಾಗಿ ಬರುವಂತೆ ಮಾಡಿದ್ದರಿಂದ ಮೊಲ ಅಡ್ಡ ಬಂದಿದ್ದು ಅಪಶಕುನ ಎಂದು ಭಾವಿಸಿದ ವಿಷ್ಣುವು ವಾಪಸ್ಸ್ ನಾಡಿಗೆ ತೆರಳುತ್ತಾನೆ.ಈ ಹಿನ್ನಲೆ

ಬೆಳಗುಲಿ ರಂಗನಾಥಸ್ವಾಮಿ ಸುಗ್ಗಿಜಾತ್ರೆ

ಹುಳಿಯಾರು : ಸಮೀಪದ ಬೆಳಗುಲಿ ಗುಡ್ಡದಲ್ಲಿ ಶ್ರೀಹೊನ್ನಮರಡಿ ರಂಗನಾಥಸ್ವಾಮಿಯ ಸುಗ್ಗಿ ಜಾತ್ರಾಮಹೋತ್ಸವ ವೈಭವಯುತವಾಗಿ ನಡೆಯಿತು.ಸುಮಾರು ಏಳು ನೂರು ವರ್ಷಗಳ ಇತಿಹಾಸ ಹೊಂದಿರುವ ,ಪ್ರತಿ ವರ್ಷ ಮಕರ ಸಂಕ್ರಾಂತಿಯಂದೆ ನಡೆಯುವ ಈ ಸುಗ್ಗಿಜಾತ್ರಾಮಹೋತ್ಸವಕ್ಕೆ ಅಪಾರ ಸಂಖ್ಯೆಯ ಭಕ್ತಾಧಿಗಳು ದೂರದೂರುಗಳಿಂದ ಆಗಮಿಸಿ ಸ್ವಾಮಿಯ ದರ್ಶನ ಪಡೆದು ಧನ್ಯತೆ ಹೊಂದಿದರು.                         ಬೆಳಗುಲಿ ಗುಡ್ಡದಲ್ಲಿ ಮಧ್ಯಾಹ್ನದ ಸಮಯದಲ್ಲಿ ನಡೆಯುವ ಜಾತ್ರೆಯಲ್ಲಿ ಹೊಸಕೆರೆಯ ಉಡುಸಲಮ್ಮ ದೇವಿ,ಕೆಂಚರಾಯಸ್ವಾಮಿ ,ಜಾಲಿಮರದಮ್ಮದೊಂದಿಗೆ ರಂಗನಾಥಸ್ವಾಮಿ ಉತ್ಸವ ಮೂರ್ತಿ ಆಗಮನದೊಂದಿಗೆ ವಿಶೇಷ ಪೂಜಾ ಕೈಂಕರ್ಯ ಹಾಗೂ ಮುಳ್ಳುಹಲಗೆ ,ಗಂಡುಗತ್ತರಿ ಸೇವೆ ನಡೆಯಿತು.                    ಕೇವಲ ಮೂರ್ನಾಲ್ಕು ಗಂಟೆ ನಡೆಯುವ ಜಾತ್ರಾ ಮಹೋತ್ಸವಕ್ಕೆ ರಂಗಾಪುರ, ಹೊಸಹಟ್ಟಿ, ಹಳೆಹಟ್ಟಿ, ಅವಳಗೆರೆ ಹಟ್ಟಿ, ಅವಳಗೆರೆ, ಪಾಪನಕೋಣ, ಹೊಸಕೆರೆ ಗ್ರಾಮಸ್ಥರು ಸೇರಿದಂತೆ ದೂರದೂರುಗಳಿಂದ ಸಹಸ್ರಾರು ಮಂದಿ ಭಕ್ತರು ಆಗಮಿಸಿದ್ದರು.ಸಂಜೆ ರಂಗನಾಥಸ್ವಾಮಿ ಬೆಳಗುಲಿ ಗ್ರಾಮಕ್ಕೆ ತೆರಳುತ್ತಿದ್ದಂತೆ ಜಾತ್ರೆಗೆ ತೆರೆ ಬಿದ್ದಿತು.ಸಂಜೆಯ ನಂತರ ಬೆಳಗುಲಿ ಗ್ರಾಮದಲ್ಲಿ ಉತ್ಸವ ವಿಜೃಂಭಣೆಯಿಂದ ನಡೆಯಿತು.

ಹುಳಿಯಾರಿನಲ್ಲಿ ಸಂಭ್ರಮದ ಸಂಕ್ರಾಂತಿ : ವಿವಿಧೆಡೆ ನಾಗರು ಆಚರಣೆ

ಹುಳಿಯಾರು : ಪಟ್ಟಣ ಸೇರಿದಂತೆ ಅಕ್ಕಪಕ್ಕದ ಹಳ್ಳಿಗಳಲ್ಲಿ ಸುಗ್ಗಿ ಹಬ್ಬ ಸಂಕ್ರಾಂತಿಯ ಆಚರಣೆ ಗರಿಗೆದರಿದ್ದು , ಬಗೆಬಗೆಯ ಅಡುಗೆಯ ಜೊತೆಗೆ ಎಳ್ಳು-ಸಕ್ಕರೆಅಚ್ಚು, ಎಳ್ಳು-ಬೆಲ್ಲದ ಕಂಪು ಹರಡಿದ್ದು ಕಂಡುಬಂತು. ಹುಳಿಯಾರಿನಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಎಳ್ಳು ಬೀರುತ್ತಿರುವ ಬಾಲಕಿ   ಹಬ್ಬದ ಅಂಗವಾಗಿ ಕೆಲವರು ಮನೆಯಲ್ಲೇ ದೇವರಿಗೆ ಪೂಜೆ ಸಲ್ಲಿಸಿ, ಎಳ್ಳುಬೆಲ್ಲವನ್ನು ನೈವೇದ್ಯ ಮಾಡಿದರೆ, ಮತ್ತೆ ಕೆಲವರು ದೇವಸ್ಥಾನಗಳಿಗೆ ತೆರಳಿ ಎಳ್ಳುಬೆಲ್ಲವನ್ನು ಹಂಚಿ ಪೂಜೆ ಸಲ್ಲಿಸಿದರು. ಹಬ್ಬದ ಅಂಗವಾಗಿ ಪಟ್ಟಣದ ಈಶ್ವರನ ದೇವಾಲಯ,ಆಂಜನೇಯಸ್ವಮಿ ದೇವಾಲಯ, ಗ್ರಾಮದೇವತೆ ಹುಳಿಯಾರಮ್ಮ,ದುರ್ಗಮ್ಮ ,ಕೆಂಚಮ್ಮನ ದೇವಾಲಯ ಹಾಗೂ ಬನಶಂಕರಿ ಸನ್ನಿಧಿಗೆ ಹೆಚ್ಚು ಸಂಖ್ಯೆಯಲ್ಲಿ ಜನರು ಆಗಮಿಸಿ ಪೂಜೆ ಮಾಡಿಸುತ್ತಿದ್ದು ಕಂಡುಬಂತು.ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಹಬ್ಬದ ಅಂಗವಾಗಿ ವಿಶೇಷ ಪೂಜೆ ನಡೆಯಿತು.ಸಂಕ್ರಾಂತಿ ಹಬ್ಬದಲ್ಲಿ ಎಳ್ಳು-ಸಕ್ಕರೆಅಚ್ಚು,ಕಬ್ಬು ಹಂಚುವ ವಾಡಿಕೆಯಿದ್ದು ಹೆಣ್ಣುಮಕ್ಕಳು ಬಗೆಬಗೆಯ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಎಳ್ಳು-ಬೆಲ್ಲ, ಕಬ್ಬನ್ನು ಅಕ್ಕಪಕ್ಕದ ಮನೆಯವರಿಗೆ, ಸ್ನೇಹಿತರಿಗೆ ಹಂಚುವ ಮೂಲಕ ಹಬ್ಬದ ಶುಭಾಷಯ ತಿಳಿಸುತ್ತಿದ್ದು ಸಾಮಾನ್ಯವಾಗಿತ್ತು. ಬಣವೆಗೆ ಮುಳ್ಳು: ರೈತರ ಸುಗ್ಗಿಕಾಲದ ಆಚರಣೆ ವಿಶಿಷ್ಟವಾಗಿದ್ದು ಸಂಕ್ರಾಂತಿಯ ಮರುದಿನದಿಂದ ಕಣಗೆಲಸ ಮಾಡುವುದು ಹಿಂದಿನಿಂದ ಆಚರಣೆಯಲ್ಲಿದೆ. ಹಬ್ಬದ ಮುನ್ನ

ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ರಕ್ಷಿತಾಗೆ ಪ್ರಶಸ್ತಿ

ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕ ಪಡೆದಿದ್ದ ಸಮೀಪದ ದೊಡ್ಡ ಎಣ್ಣೇಗೆರೆ ಗ್ರಾಮದ ಗವಿರಂಗನಾಥ ಸ್ವಾಮಿ ವಿದ್ಯಾಪೀಠ ಪ್ರೌಢಶಾಲೆ ವಿದ್ಯಾರ್ಥಿನಿಯಾಗಿದ್ದ ಜೆ.ರಕ್ಷಿತಾಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ೨೦೧೫ ಮತ್ತು ೧೬ ನೇ ಸಾಲಿನ ಕನ್ನಡ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ವಿಧಾನಸೌದ ಬ್ಯಾಂಕ್ಟೆಟ್ ಸಭಾಂಗಣದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿಮುಖ್ಯಮಂತ್ರಿ ಸಿದ್ದರಾಮಯ್ಯ ವಿದ್ಯಾರ್ಥಿನಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ಹತ್ತು ಸಾವಿರ ನಗದು, ಪ್ರಶಸ್ತಿ ಫಲಕ, ಕೈಗಡಿಯಾರ, ಶಾಲಾ ಬ್ಯಾಗ್, ಎರಡು ಕನ್ನಡ ಇಂಗ್ಲಿಷ್ ನಿಘಂಟು ವಿತರಿಸಿದರು. ಮುಖ್ಯ ಶಿಕ್ಷಕರಾದ ಎ.ಎಸ್. ಬಸವಲಿಂಗಯ್ಯ, ಕಾರ್ಯದರ್ಶಿ ಕಾಂತರಾಜು, ಅಧ್ಯಕ್ಷರಾದ ಲಿಂಗರಾಜು ಅರಸು ವಿದ್ಯಾರ್ಥಿನಿಯ ಸಾಧನೆಯನ್ನು ಪ್ರಶಂಸಿಸಿದ್ದಾರೆ.

ಹುಳಿಯಾರು ಅಯ್ಯಪ್ಪನ ಗುಡಿಯಲ್ಲಿ ಈ ವರ್ಷವೂ ಗರುಡ ದರ್ಶನ!

ಹುಳಿಯಾರು:ಇಲ್ಲಿನ ಗಾಂಧೀಪೇಟೆಯಲ್ಲಿರುವ ಪ್ರಸಿದ್ದ ಶ್ರೀಅಯ್ಯಪ್ಪನ ಸನ್ನಿಧಿಯಲ್ಲಿ ಜ್ಯೋತಿಯಂದು ಮಧ್ಯಾಹ್ನ ಗರುಡಪಕ್ಷಿಯು ದರ್ಶನ ನೀಡಿದ್ದು, ಅಯ್ಯಪ್ಪನ ಭಕ್ತರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ.ಕಳೆದ ೭ ವರ್ಷದಿಂದ ಜ್ಯೋತಿಯ ದಿನ ಇಲ್ಲಿನ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಗರುಡ ದರ್ಶನ ನೀಡುವಂತೆ ಈ ವರ್ಷವೂ ಸಹ ಜನವರಿ 14 ರ ಗುರುವಾರ ಮಧ್ಯಾಹ್ನ ೧೨ಗಂಟೆಗೆ ದರ್ಶನ ನೀಡಿ ನೆರೆದಿದ್ದ ಭಕ್ತ ಸಮೂಹವನ್ನು ವಿಸ್ಮಯಕ್ಕೀಡೂಮಾಡಿತು. ಹುಳಿಯಾರು ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಿ           ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿಯ ಒಡವೆಯನ್ನು ಕಾಲ್ನಡಿಗೆಯ ಮೂಲಕ ಹೊತ್ತು ತರುವಾಗ ವಿಸ್ಮಯ ರೀತಿಯಲ್ಲಿ ಗರುಡವೊಂದು ಪ್ರತ್ಯಕ್ಷವಾಗಿ ದಾರಿಯುದ್ದಕ್ಕೂ ಆ ಒಡವೆಗಳಿಗೆ ಕಾವಲಾಗುತ್ತದೆ. ಅಂತೆಯೇ ಇಲ್ಲಿನ ಅಯ್ಯಪ್ಪ ಗುಡಿಯಲ್ಲಿಯೂ ಸಹ ಶಬರಿಮಲೆಯಲ್ಲಿ ಪ್ರತ್ಯಕ್ಷವಾಗುವ ದಿನ ತಪ್ಪದೆ ಗರುಡವೊಂದು ದೇವಸ್ಥಾನ ಮೇಲೆ ಗೋಚರಿಸಿ ಮಾಯವಾಗುವ ಮೂಲಕ ಭಕ್ತರಿಗೆ ಕುತೂಹಲ ಮೂಡಿಸುತ್ತಿದೆ.                           ಗರುಡ ದರ್ಶನ ಕಳೆದ ಏಳು ವರ್ಷಗಳಿಂದ ಚಾಚುತಪ್ಪದೆ ನಡೆಯುತ್ತಿದ್ದು ಇದನ್ನು ನೋಡಲು ಭಕ್ತರು ದೇವಸ್ಥಾನದ ಬಳಿ ಜಮಾಯಿಸಿ ಈ ವರ್ಷವೂ ಸಹ ಗರುಡ ದರ್ಶನ ಪಡೆದು ಪುನೀತರಾದರು. ಭಕ್ತಿಭಾವದಿಂದ ಗರುಡನೆಡೆಗೆ ಕೈ ಮುಗಿದು ನಮಿಸಿ, 'ಸ್ವಾಮಿಯೇ ಶರಣಂ ಅಯ್ಯಪ್ಪ' ಎಂದು ಮುಗಿಲು ಮುಟ್ಟುವ ಘೋಷಣೆ ಕೂಗಿ ಸಂಭ್ರಮಿಸಿದರು.

ಹುಳಿಯಾರು: ಸಂಕ್ರಾಂತಿ ಸಂಭ್ರಮ ಜೋರು

 ಬಸ್ ನಿಲ್ದಾಣದಲೆಲ್ಲಾ ಕಬ್ಬಿನ ರಾಶಿ                                                ------------------------- ಹುಳಿಯಾರು : ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಹಬ್ಬದ ಸ್ವಾಗತಿಸಲು ಜನತೆ ಸಿದ್ಧರಾಗಿದ್ದು ಪಟ್ಟಣದೆಲ್ಲೆಡೆ ಹಬ್ಬದ ಸಂಭ್ರ­ಮ ಕಂಡುಬಂತು. ಹಬ್ಬಕ್ಕಾಗಿ ಗುರುವಾರದಂದು ಸಂತೆ ಹಾಗೂ ಬಸ್ ನಿಲ್ದಾಣದಲ್ಲಿ ಅವರೆಕಾಯಿ, ಕಬ್ಬು, ಗೆಣಸು, ಕಡಲೆಕಾಯಿ, ಹೂವು ಹಣ್ಣುಗಳ ವ್ಯಾಪಾರದ ಭರಾಟೆ ಜೋರಾಗಿತ್ತು. ರಸ್ತೆಯಲೆಲ್ಲಾ ಕಬ್ಬು,ಅವರೆ ಮಾರಾಟವಾಗುತ್ತಿದ್ದು ಕೊಳ್ಳುಗರಿಂದ ಗಿಜಿಗುಡುತ್ತಿತ್ತು.                   ಎಳ್ಳು-ಬೆಲ್ಲ ತಯಾರಿ ಜೋರಾ­ಗಿದ್ದು ಮನೆಗಳಲ್ಲಿ ಹೆಣ್ಣು ಮಕ್ಕಳು ಹಬ್ಬದ ಸಿದ್ಧತೆಯಲ್ಲಿ ತೊಡಗಿದ್ದರು.          ಬೆಲೆ ಏರಿಕೆ ನಡುವೆ ಸಹ ಗ್ರಾಹಕರು ಖರೀದಿ ನಡೆಸಿದ್ದು ಸಂಕ್ರಾಂತಿಗಾಗಿ ಹಿಂದಿನ ದಿನವೇ ರಾಶಿ ರಾಶಿ ಕಬ್ಬು ಬಂದಿದೆ. ಕಬ್ಬು ಪ್ರತಿ ಜಲ್ಲೆಗೆ 20-30 ರೂ.ವರೆಗಿದ್ದರೆ,ಗೆಣಸಿಗೆ ಕೆಜಿ ೪೦ ರೂ ,ಅವರೆಕಾಯಿ ಕೆಜಿಗೆ 25-30 ರೂ ನಂತೆ ಮಾರಾಟ ನಡೆಯಿತು. ಹುಳಿಯಾರು ಬಸ್ ನಿಲ್ದಾಣದಲ್ಲಿ ಸಂಕ್ರಾಂತಿ ಹಬ್ಬಕ್ಕೆ ರಾಶಿರಾಶಿ ಕಬ್ಬು ತಂದು ವ್ಯಾಪಾರದಲ್ಲಿ ತೊಡಗಿರುವ ವರ್ತಕರು.              ಕಡಲೆಕಾಯಿ ಒಂದು ಸೇರಿಗೆ 30 ರೂ.ನಂತೆ ಮಾರಾಟವಾದರೆ ಎಳ್ಳು-ಬೆಲ್ಲ ೧೫೦ ರೂ.ನಿಂದ ೨೦೦ ರೂ.ವರೆಗೆ ಹಾಗೂ ಸಕ್ಕರೆ ಅಚ್ಚು ಕೆ.ಜಿ.ಗೆ 200 ರೂ.ವರೆಗೆ ಮಾರಾಟವಾಗುತ್ತಿತ್ತು.

ಪರಿಷತ್ತನ್ನು ಮತ್ತೆ ಸಾಂಸ್ಕೃತಿಕವಾಗಿ ಕಟ್ಟಲು ಸ್ಪರ್ಧಿಸಿರುವೆ:ಎಂ.ಎಸ್.ರವಿಕುಮಾರ್

ಹುಳಿಯಾರಿನ ಮೈಸ್ ಕಂಪ್ಯೂಟರ್ ಸೆಂಟರ್‌ನಲ್ಲಿ ಜಿಲ್ಲಾ ಕಸಾಪಕ್ಕೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಎಂ.ಎಸ್.ರವಿಕುಮಾರ್ ಪತ್ರಿಕಾ ಗೋಷ್ಠಿ ನಡೆಸಿದರು. ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘದ ನಿರೂಪ್ ರಾವತ್,ಸಂಗೊಳ್ಳಿ ರಾಯಣ್ಣ ಸಂಘದ ಅಧ್ಯಕ್ಷ ಸಿದ್ದು.ಜಿ.ಕೆರೆ ,ಕಸಾಪ ತಾಲ್ಲೂಕ್ ಸಂಚಾಲಕ ಹುಳಿಯಾರು ಷಬ್ಬೀರ್,ರಾಜಕುಮಾರ್ ಸಂಘದ ಸಿ.ಹೆಚ್.ರೂಪೇಶ್ ,ಹುಳಿಯಾರು ಘಟಕದ ಪ್ರದಾನ ಕಾರ್ಯದರ್ಶಿ ಶ್ರೇಯಸ್ ಇದ್ದಾರೆ. ಇಂದು ಸಾಹಿತ್ಯಪರಿಷತ್ ಅದರ ಮೂಲಉದ್ದೇಶದಿಂದ ವಿಮುಖವಾಗಿದ್ದು ,ಪ್ರಸ್ತುತ ಸಾಹಿತ್ಯ ಪರಿಷತ್ತು ನಡೆಯುತ್ತಿರುವ ಹಾದಿ ಪಂಡಿತರ ಹಾದಿಯಾಗಿದ್ದು ಜನಸಾಮಾನ್ಯರನ್ನು ಯುವ ಸಮುದಾಯದವರನ್ನು ದೂರವಿಡುವ ಕೆಲಸ ನಡೆದಿದೆ.ಕೇವಲ ಅಕ್ಷರ ಬಲ್ಲಂತ ಅಕ್ಷರ ಜೋಡಿಸುವಂತ ವ್ಯಕ್ತಿಗಳಿಗಷ್ಟೆ ಪರಿಷತ್ತು ಸೀಮಿತವಾಗಿದ್ದು ಅದನ್ನು ಹೋಗಲಾಡಿಸುವ ಚಳುವಳಿಯ ಭಾಗ ನಾನಾಗಿದ್ದು ಈ ನಿಟ್ಟಿನಲ್ಲಿ ನನ್ನದೆ ಆದ ಯೋಜನೆಗಳು ಹಾಗೂ ಆಲೋಚನೆಗಳಿದ್ದು ಸಾಂಸ್ಕೃತಿಕವಾಗಿ ಪರಿಷತ್ತನ್ನು ಕಟ್ಟಲು ಉತ್ಸುಕನಾಗಿದ್ದೇನೆ ಎಂದು ಚಿ.ನಾ.ಹಳ್ಳಿ ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ಎಸ್. ರವಿಕುಮಾರ್ ತಿಳಿಸಿದರು. ಹುಳಿಯಾರಿನ ಮೈಸ್ ಕಂಪ್ಯೂಟರ್ ಸೆಂಟರ್‌ನಲ್ಲಿ ಜಿಲ್ಲಾ ಕಸಾಪಕ್ಕೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕುರಿತು ಪತ್ರಿಕಾ ಗೋಷ್ಠಿ ನಡೆಸಿ ಅವರು ಮಾತನಾಡಿದರು. ಪರಿಷತ್ ಕೇವಲ ಅಕ್ಷರದಲ್ಲಾಡುವವರ ಸಂಸ್ಥೆಯಾಗದೆ ಆಟೋಚಾಲಕರಿಂದ ಹಿಡಿದು ಶ್ರೀ ಸಾಮಾನ್ಯರ

ಭಾಷಾ ಭೋದಕರ ಪುನಶ್ಚೇತನ ಕಾರ್ಯಗಾರ ಯಶಸ್ವಿ

ಹುಳಿಯಾರು:ಸಮೀಪದ ಕೆಂಕೆರೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲ್ಲೂಕ್ ಪ್ರೌಢಶಾಲಾ ಕನ್ನಡ ಭಾಷಾ ಭೋದಕರ ಪುನಶ್ಚೇತನ ಕಾರ್ಯಗಾರ ಹಾಗೂ ಸ್ವಾಮಿ ವಿವೇಕನಂದರ ೧೫೩ ನೇ ಜಯಂತಿ ಯಶಸ್ವಿಯಾಗಿ ಜರುಗಿತು.ಕಾರ್ಯಾಗಾರವನ್ನು ಉದ್ಘಾಟಿಸಿದ ಕನ್ನಡ ವಿಶ್ವ ಪರಿವೀಕ್ಷಣಾ ಉಪನಿರ್ದೇಶಕ ರಾಜು ಮಾತನಾಡಿ ಶಿಕ್ಷಕರು ಕರ್ತವ್ಯ ಮರೆತರೆ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗುತ್ತದೆ.                ಇಂದು ಶಿಕ್ಷಕರುಗಳು ಕೇವಲ ಪಠ್ಯಕ್ಕೆ ಸೀಮಿತರಾಗದೆ ಶಿಕ್ಷಕ ಕಾರ್ಯದಲ್ಲಿ ಸಮಾಜಮುಖಿ ವ್ಯಕ್ತಿತ್ವ ರೂಢಿಸಿಕೊಳ್ಳಬೇಕು. ಭವಿಷ್ಯದ ಪ್ರಜೆಗಳನ್ನು ರೂಪುಗೊಳಿಸುತ್ತಿರುವ ಅರಿವು ನಮ್ಮಲ್ಲಿರಬೇಕು ಎಂದರು. ನೀವುಗಳು ಕರ್ತವ್ಯ ನಿರ್ವಹಿಸಿದ ಶಾಲೆಯಲ್ಲಿ ನಿಮ್ಮಗಳ ಹೆಸರು ಅಚ್ಚಳಯದೆ ಉಳಿಯುವಂತೆ ಹೆಸರುಬರುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಎಂದು ಕಿವಿಮಾತು ಹೇಳಿದರು.            ಸಂಪನ್ಮೂಲ ವ್ಯಕ್ತಿ ತುರುವೇಕೆರೆ ತಾಲ್ಲೂಕಿನ ದಬ್ಬೇಘಟ್ಟ ಸರ್ಕಾರಿ ಪ್ರೌಡಶಾಲೆಯ ಕನ್ನಡ ಶಿಕ್ಷಕರಾದ ಮಂಜಯ್ಯಗೌಡ್ರು ಮಾತನಾಡಿ ಕನ್ನಡ ಕಲಿಯುವುದು ಎಂದರೆ ಸ್ಪಷ್ಟ ಓದು ಮತ್ತು ಬರಹ ಗುರಿಯಾಗಿರಬೇಕು.ಶಿಕ್ಷಕರು ಶಾಲಾ ಅಭಿವೃದ್ಧಿ ಬಗ್ಗೆ, ಶೈಕ್ಷಣಿಕ ಅಂಶಗಳ ಬಗ್ಗೆ ಹೆಚ್ಚಿನ ಆದ್ಯತೆ ಕೊಡಬೇಕು. ಜಿಲ್ಲೆಯಲ್ಲಿ ಕನ್ನಡ ಭಾಷೆಯಲ್ಲಿ ತುರುವೇಕೆರೆ ಪ್ರಥಮ ಸ್ಥಾನವಿದ್ದು ಚಿಕ್ಕನಾಯಕನಹಳ್ಳಿ ೩ನೇ ಸ್ಥಾನದಲ್ಲಿದೆ. ಪ್ರಥಮ ಸ್ಥಾನಕ್ಕೆ ಬರುವಂತೆ ಶಿಕ್ಷಕರು ಮಕ್ಕಳಿಗೆ ಬೋಧನೆ ಮಾಡಬೇಕಾ

ಖರೀದಿ ಪ್ರಾರಂಭಿಸದ ರಾಗಿ ಖರೀದಿ ಕೇಂದ್ರ

                          ನಿಗಮದ ಅಸಡ್ಡೆ ಧೋರಣೆ ಬಗ್ಗೆ ರೈತರ ಅಸಮಾಧಾನ                               --------------------------------------- ವರದಿ: ಡಿ.ಆರ್.ನರೇಂದ್ರ ಬಾಬು ಹುಳಿಯಾರು : ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ರಾಗಿ ಖರೀದಿ ಕೇಂದ್ರ ಕಳೆದ ವಾರವೇ ಚಾಲನೆಗೊಂಡರೂ ಸಹ ಖರೀದಿ ಮಾತ್ರ ಪ್ರಾರಂಭವಾಗಿಲ್ಲ.ಶುಕ್ರವಾರವಷ್ಟೆ ಶಾಸಕರೂ ತರಾತುರಿಯಲ್ಲಿ ಹುಳಿಯಾರು ಹಾಗೂ ಚಿಕ್ಕನಾಯಕನಹಳ್ಳಿಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರಾಗಿ ಖರೀದಿ ಕೇಂದ್ರ ಉದ್ಘಾಟಿಸಿದರಾದರೂ ಟೋಕನ್ ನೀಡಲು ಕಂಪ್ಯೂಟರ್ ಕೊಟ್ಟಿಲ್ಲವೆಂಬ ಕಾರಣ ನೀಡಿ ಮುಂದೂಡಿರುವುದು ರೈತರ ಅಸಮಧಾನಕ್ಕೆ ಕಾರಣವಾಗಿದೆ. ಹುಳಿಯಾರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರಾಗಿ ಖರೀದಿ ಕೇಂದ್ರ ಉದ್ಘಾಟಿಸಿದ ಶಾಸಕ ಸಿ.ಬಿ.ಸುರೇಶ್ ಬಾಬು ಪ್ರಾರಂಭದ ದಿನವೇ ರೈತರ ಬಗ್ಗೆ ಅಸಡ್ಡೆಯಾಗಿ ವರ್ತಿಸಿದ ಇಲಾಖೆಯ ವರ್ತನೆ ಕೂಡ ಟೀಕೆಗೆ ಗುರಿಯಾಗಿದೆ.ಖರೀದಿ ಕೇಂದ್ರದ ಬಗ್ಗೆ ಪ್ರಚಾರವನ್ನು ಕೈಗೊಳ್ಳದೆ ರೈತರಿಗೆ ಮಾಹಿತಿಯೇ ನೀಡದ ನಿಗಮದವರು ಶಾಸಕರನ್ನು ಮಾತ್ರ ಕರೆಯಿಸಿ ಚಾಲನೆ ನೀಡಿದರು.ಆ ಸಂದರ್ಭದಲ್ಲೂ ಸಹ ಖರೀದಿ ಕೇಂದ್ರದ ಬಗ್ಗೆ ಯಾವುದೇ ಮಾಹಿತಿ ನೀಡದೆ ಕೇವಲ ಶಾಸಕರಿಂದ ಟೇಪ್ ಕತ್ತರಿಸಿ ಪೂಜಾ ಕಾರ್ಯಕ್ರಮ ನಡೆಸಿ ಸಭೆ ಸೀಮಿತಗೊಳಿಸಿ ಮುಗಿಸಿದ್ದು ಎಲ್ಲರ ಟೀಕೆಗೆ ಕಾರಣವಾಯಿತು.ತೀರಾ ಬೆಲೆ ಕುಸಿತವಾಗಿ ೧೨೦೦ ರ ಅಸುಪಾಸಿನಲ್ಲಿರುವ ರಾಗಿಗೆ ಬೆಂಬಲ

ವೈಭವಯುತ ಇರುಮುಡಿ ಉತ್ಸವ

ಹುಳಿಯಾರಿನಿಂದ ಶಬರಿಮಲೆಗೆ ಯಾತ್ರೆ ಹೊರಟ ಮಾಲಾಧಾರಿ ಸ್ವಾಮಿಗಳು ಇರುಮುಡಿ ಹೊತ್ತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಪಟ್ಟಣದ ಶ್ರೀಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಭಾನುವಾರ ಮುಂಜಾನೆಯಿಂದ ಇನ್ನೂರಕ್ಕೂ ಹೆಚ್ಚು ಮಾಲಾಧಾರಿ ಸ್ವಾಮಿಗಳಿಗೆ ಇರುಮುಡಿಕಟ್ಟಲಾಯಿತು. ನಂತರ ಅಯ್ಯಪ್ಪಸ್ವಾಮಿಯ ಇರುಮುಡಿ ಹೊತ್ತ ಮಾಲಾಧಾರಿಸ್ವಾಮಿಗಳ ಉತ್ಸವ ವಿಜೃಂಭಣೆಯಿಂದ ನಡೆದು ಅವರುಗಳನ್ನು ಕುಟುಂಬವರ್ಗವರು ಹಾಗೂ ಭಕ್ತ ವೃಂದದವರು ಶಬರಿಮಲೆಗೆ ಬೀಳ್ಕೊಟ್ಟರು. ಗುರುಸ್ವಾಮಿಗಳಾದ ಗೋಪಾಲರಾವ್ ಸ್ವಾಮಿ,ದಾನಿಸ್ವಾಮಿ, ರಮೇಶ್ ಸ್ವಾಮಿ,ಹೂವಿನ ತಿಮ್ಮಣ್ಣ ಸ್ವಾಮಿ,ಕುಮಾರ ಸ್ವಾಮಿ ಅವರುಗಳು ಅಯ್ಯಪ್ಪನ ಸನ್ನಿಧಾನದಲ್ಲಿ ೨೧೬ ಮಾಲಾಧಾರಿ ಸ್ವಾಮಿಗಳಿಗೆ ಇರುಮುಡಿಕಟ್ಟಿದರು. ಈ ವೇಳೆ ಮಾಲಾಧಾರಿ ಸ್ವಾಮಿಗಳ ಮನೆಯವರು ಸಂಬಂಧಿಕರು ಹಾಗೂ ಕುಟುಂಬವರ್ಗದವರು ಪಾಲ್ಗೊಂಡಿದ್ದು ಇರುಮುಡಿ ಚೀಲಕ್ಕೆ ತುಪ್ಪ ತುಂಬಿದ ಕಾಯಿ, ಅಕ್ಕಿ ಹಾಕಿದರು. ಸಂಜೆ ವೇಳೆಗೆ ಎಲ್ಲಾ ಮಾಲಾಧಾರಿಸ್ವಾಮಿಗಳು ಅಯ್ಯಪ್ಪನ ಸನ್ನಿದಿಯಿಂದ ಉತ್ಸವ ಪ್ರಾರಂಭಿಸಿ ಪಟ್ಟಣದ ಕೆಂಚಮ್ಮನ ದೇವಸ್ಥಾನ,ಹುಳಿಯಾರಮ್ಮ ದೇವಾಲಯದ ಮೂಲಕ ದುರ್ಗಾಪರಮೇಶ್ವರಿ ದೇವಾಲಯದಲ್ಲಿಗೆ ತೆರಳಿ ಈಡುಗಾಯಿ ಹೊಡೆದು ಪೂಜೆಸಲ್ಲಿಸಿ ಬಿಎಚ್ ರಸ್ತೆ ಮೂಲಕ ಆಂಜನೇಯಸ್ವಾಮಿ ದೇವಾಲಯಕ್ಕೆ ತೆರಳಿ ಆಂಜನೇಯಸ್ವಾಮಿಗೆ ಪೂಜೆಸಲ್ಲಿಸಿದರು. ನಂತರ ತಾವು ಯಾತ್ರೆಗೆ ಹೊರಡಲು ಸಿದ್ದ ಮಾಡಿದ್ದ ವಾಹನಗಳಿಗೆ ಗುರುಸ್ವಾಮಿಗ

ಸರ್ಕಾರಿ ಶಾಲಾ ಸೌಲಭ್ಯ್ಯಗಳಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವು

              ಹಂದನಕೆರೆ ಹೋಬಳಿ ಮಾದಾಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ವಜ್ರ ಮಹೋತ್ಸವವು ಇತ್ತೀಚೆಗೆ ಜರುಗಿತು.           ಚಿಕ್ಕನಾಯಕನಹಳ್ಳಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಮಾತನಾಡಿ, ಸರ್ಕಾರ ಸರ್ಕಾರಿ ಶಾಲೆಗಳಿಗೆ ಅನೇಕ ಸೌಲಭ್ಯ ಕೊಡುತ್ತಿದೆ. ಕೊಠಡಿಗಳು, ಶೌಚಾಲಯ, ನೀರಿನ ಸೌಲಭ್ಯ, ಬಿಸಿಯೂಟ, ಕ್ಷೀರಭಾಗ್ಯ, ಉಚಿತ ಸಮವಸ್ತ್ರ ಸೇರಿದಂತೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವಾಗಿದೆ. ನಾವೆಲ್ಲರೂ ಇದರ ಸದ್ಬಳಕೆ ಮಾಡಿಕೊಂಡು ಮಗುವಿನ ಶೈಕ್ಷಣಿಕ ಪ್ರಗತಿಗಾಗಿ ಮುಂದಾಗಬೇಕಿದೆ ಎಂದರು.                     ಮಕ್ಕಳ ಕಲಿಕೆಯ ಸಂಪೂರ್ಣ ಜವಾಬ್ದಾರಿಯನ್ನು ಶಿಕ್ಷಕರಿಗೆ ನೀಡದೆ ಪೋಷಕರು ಕಾಳಜಿ ವಹಿಸಬೇಕು. ಶಾಲೆಗೆ ಆಗಾಗ ಭೇಟಿ ನೀಡಿ ಮ ಕ್ಕಳ ಪ್ರಗತಿಯ ಬಗ್ಗೆ ಮಾಹಿತಿ ಪಡೆಯಬೇಕು. ಮಕ್ಕಳು ಓದುವ ಸಂದ‘ರ್ದಲ್ಲಿ ಪೋಷಕರು ಟಿವಿ ನೋಡುವುದ ಬಿಟ್ಟು ನೆರವಾಗಬೇಕು. ಶಾಲಾಭಿವೃದ್ಧಿ ಸಮಿತಿಯವರು ಶಾಲೆಯ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಬಗ್ಗೆ ಗಮನ ಹರಿಸಬೇಕು. ದಾನಿಗಳ ಸಹಕಾರ ಪಡೆದು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಕಾರ್ಯಕ್ರಮಗಳನ್ನು ಸಂಘಟಿಸಬೇಕು ಎಂದು ಹೇಳಿದರು.                       ತಾಲ್ಲೂಕು ಕರಾಪ್ರಾಶಾಶಿ ಸಂಘದ ಅಧ್ಯಕ್ಷರಾದ ಎಚ್.ಎಸ್.ಪ್ರಕಾಶ್ ಮಾತನಾಡಿ ಜನಪ್ರತಿನಿಧಿಗಳು ಸರ್ಕಾರಿ ಶಾಲೆಗಳೊಂದಿಗೆ ಸಂಪರ್ಕವಿಟ್ಟುಕೊಳ್ಳಬೇಕು. ಸರ್ಕಾರಿ ಶಾಲಾ ಶಿಕ್ಷಕರು ಸಿಇಟಿ ಬರೆದು ಬಂದಿರ

೧೨ಕ್ಕೆ ಭಾಷಾ ಭೋದಕರ ಪುನಶ್ಚೇತನ ಕಾರ್ಯಕ್ರಮ

ತಾಲ್ಲೂಕ್ ಪ್ರೌಢಶಾಲಾ ಕನ್ನಡ ಭಾಷಾ ಭೋದಕರ ಪುನಶ್ಚೇತನ ಕಾರ್ಯಕ್ರಮವನ್ನು ಕೆಂಕೆರೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಜ.೧೨ರಂದು.ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ೧೦.೩೦ರಿಂದ ೧.೩೦ರವರೆಗೆ ೧೦ನೇ ತರಗತಿಯ ವ್ಯಾಕರಣಾಂಶಗಳ ಬಗ್ಗೆ ಹಾಗೂ ಮಧ್ಯಾಹ್ನ ೨.೩೦ರಿಂದ ೪.೩೦ರವರೆಗೆ ಎಂಟು,ಒಂಬತ್ತನೆ ತರಗತಿಯ ನೀಲನಕ್ಷೆ ಪ್ರಶ್ನೆಪತ್ರಿಕೆ ತಯಾರಿಸುವ ಬಗ್ಗೆ ಕಾರ್ಯಾಗಾರ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಯಾಗಿ ತುರುವೇಕೆರೆ ತಾಲ್ಲೂಕಿನ ದಬ್ಬೇಘಟ್ಟ ಸರ್ಕಾರಿ ಪ್ರೌಡಶಾಲೆಯ ಕನ್ನಡ ಶಿಕ್ಷಕರಾದ ಮಂಜಯ್ಯಗೌಡ್ರು ಭಾಗವಹಿಸಲಿದ್ದು ತಾಲ್ಲೂಕಿನ ಎಲ್ಲಾ ಪ್ರೌಢಶಾಲೆಯ ಕನ್ನಡ ಭಾಷಾ ಭೋದಕರು ಕಡ್ಡಾಯವಾಗಿ ಕಾರ್ಯಾಗಾರಕ್ಕೆ ಹಾಜರಾಗಬೇಕು ಹಾಗೂ ಬರುವಾಗ ೮,೯ಮತ್ತು ೧೦ ನೇ ತರಗತಿಯ ಕನ್ನಡ ಪಠ್ಯಪುಸ್ತಕವನ್ನು ತರಬೇಕಾಗಿ ತಾಲ್ಲೂಕ್ ಪ್ರೌಢಶಾಲಾ ಕನ್ನಡ ಭಾಷಾ ಭೋದಕರ ಸಂಘದ ಅಧ್ಯಕ್ಷರಾದ ಕೆ.ವೀರಣ್ಣನವರು ಮನವಿ ಮಾಡಿದ್ದಾರೆ.

ವೇಗದ ಚಾಲನೆಯಿಂದ ಜೀವಕ್ಕೆ ಅಪತ್ತು

ಹುಳಿಯಾರು: ಅಧಿಕ ವೇಗ ಹಾಗೂ ನಿರ್ಲಕ್ಷ್ಯದ ವಾಹನ ಚಾಲನೆ ಅಪಘಾತಕ್ಕೆ ಆಹ್ವಾನ ನೀಡಿದಂತೆ ಎಂದು ಪ್ರಾದೇಶಿಕ ಸಾರಿಗೆ ಇಲಾಖೆಯ ಮೋಟಾರುವಾಹನ ನಿರೀಕ್ಷಕ ಮಂಜುನಾಥ್ ಪ್ರಸಾದ್ ಎಚ್ಚರಿಸಿದರು. ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಯಲು ಆಲಯದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಅವರು ಮಾತನಾಡಿ ವಾಹನ ಚಲಾವಣೆಯಲ್ಲಿ ಜಾಗರೂಕತೆ ಅತಿ ಮುಖ್ಯವಾಗಿದ್ದು ಅತಿ ವೇಗವಾಗಿ ವಾಹನ ಚಲಾಯಿಸಿ ತಮ್ಮ ಜೀವಕ್ಕೆ ಆಪತ್ತು ತಂದುಕೊಳ್ಳಬಾರದು ಎಂದರು. ವಿದ್ಯಾರ್ಥಿಗಳಿಗೆ ರಸ್ತೆ ಸಪ್ತಾಹ ಮಾಸಾಚರಣೆ ಕುರಿತು ವಿವರಿಸಿ ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸಿದರು. ರಸ್ತೆ ಹೇಗೆ ದಾಟಬೇಕು. ಚಾಲಕರಿಗೆ ಪರವಾನಗಿ ಏಕೆ ಅಗತ್ಯ. ಇನ್ಸೂರೆನ್ಸ್ ಏಕೆ ಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.           ಅತಿಯಾದ ವೇಗದಿಂದಾಗುವ ಅಪಘಾತ,ಮದ್ಯಪಾನದಿಂದಾಗುವ ದುಷ್ಪರಿಣಾಮ ವಾಹನ ಚಲಾವಣೆ ಮಾಡುವಾಗ ಮೊಬೈಲ್ ಬಳಕೆಯಿಂಡಾಗುವ ಸಮಸ್ಯೆ ಕುರಿತು ಜಾಗೃತಿ ಮೂಡಿಸಿದರಲ್ಲದೆ ವಾಹನಗಳ ಹೆಡ್‌ಲೈಟ್, ರೆಡ್‌ಲೈಟ್, ಹಾರನ್, ಹ್ಯಾಂಡಲ್ ಲಾಕ್, ಟಯರ್ ಗಳು ಸುಸ್ಥಿತಿಯಲ್ಲಿರುವಂತೆ ಚಾಲಕರು, ಮಾಲಿಕರು ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು.                ಪ್ರಾಂಶುಪಾಲ ಬಿಳಿಗೆರೆ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಎನ್‌ಎಸ್‌ಎಸ್ ಅಧಿಕಾರಿಗಳಾದ ಇಬ್ರಾಹಿಂ, ಶಿವಯ್ಯ, ಆರ್. ಅಶೋಕ್, ಡಾ.ಬಾಳಪ್ಪ, ಚಿಕ್ಕನಾಯಕನಹಳ್ಳಿ ಡ್ರೆವಿಂಗ್ ಸ್ಕೂಲ್ ಬಸವರಾಜು, ಮ

ಹೊಯ್ಸಳಕಟ್ಟೆಯಲ್ಲಿ ಶುದ್ದ ಕುಡಿಯುವ ನೀರಿನ ಘಟಕಕ್ಕೆ ಚಾಲನೆ

ಶುದ್ದ ಕುಡಿಯುವ ನೀರನ್ನು ಬಳಸುವುದರಿಂದ ಸಾರ್ವಜನಿಕರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು. ಹುಳಿಯಾರು ಹೋಬಳಿಯ ಹೊಯ್ಸಳಕಟ್ಟೆಯಲ್ಲಿ ಗ್ರಾಪಂ ಹಾಗು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಸ್ಥಾಪಿಸಲಾದ ಸುಸ್ಥಿರ ಶುದ್ದ ಕುಡಿಯುವ ನೀರಿನ ಘಟಕವನ್ನು ಶಾಸಕ ಸುರೇಶ್ ಬಾಬು ಚಾಲನೆ ನೀಡಿದರು. ಹೊಯ್ಸಳಕಟ್ಟೆ ಗ್ರಾಮದಲ್ಲಿ ಗ್ರಾಪಂ ಹಾಗು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಸುಸ್ಥಿರ ಶುದ್ದ ಕುಡಿಯುವ ನೀರಿನ ಯೋಜನೆ ಉದ್ಘಾಟಿಸಿ ಅವರು ಮಾತನಾಡಿದರು. ಅಂತರ್ಜಲ ಕುಸಿತದಿಂದ ನೀರಿನಲ್ಲಿ ಪ್ಲೋರೈಡ್ ಅಂಶ ಹೆಚ್ಚಾಗಿದ್ದು ಆ ನೀರನ್ನು ಬಳಸುವುದರಿಂದ ಮನುಷ್ಯ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾನೆ.ಕೃಷಿಕರು ಕೃಷಿಹೊಂಡಗಳನ್ನು ತೋಟ ಹೊಲದಲ್ಲಿ ರಚಿಸಿಕೊಳ್ಳುವ ಮೂಖಾಂತರ ಅಂತರ್ಜಲ ರಕ್ಷಿಸಿ ಉತ್ತಮ ನೀರನ್ನು ಪಡೆಯಬಹುದು ಎಂದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೆಶಕ ದಿನೇಶ್ ಪೂಜಾರ್ ಮಾತನಾಡಿ ವೈಯಕ್ತಿಕ ಕುಟುಂಬ ಅಭಿವೃದ್ದಿ ದೃಷ್ಟಿಯಿಂದ ಶುದ್ದ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು. ಗ್ರಾಪಂ ಅಧ್ಯಕ್ಷೆ ಮಂಜುಳ.ತಾಲ್ಲೂಕು ಯೋಜನಾಧಿಕಾರಿ ರೊಹಿತಾಕ್ಷ.ಸುರೇಶ್.ಮುಖಂಡರಾದ ರಾಮದಾಸಪ್ಪ.ಜಯಲಿಂಗರಾಜು.ಯುವರಾಜು.ಮಲ್ಲೆಶಯ್ಯ.ಶಾಮಣ್ಣ ಗ್ರಾಪಂ ಸದಸ್ಯರಾದ ನಾಗರತ್ನಮ್ಮ. ಮಲ್ಲಣ್ಣ.ರಂಗನಾಥ್ ಇದ್ದರು.  

ಗ್ರಾಮಸಭೆಗೆ ನೀರಸ ಪ್ರತಿಕ್ರಿಯೆ

ಹುಳಿಯಾರು ಗ್ರಾಪಂ ಆವರಣದಲ್ಲಿ ನಡೆ ಗ್ರಾಮ ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಗೀತಾ ಪ್ರದೀಪ್,ಪಿಡಿಓ ಸಿದ್ದರಾಮಯ್ಯ,ದೇವರಾಜು,ದಯಾನಂದ್, ಉಮಾ ಮಹೇಶ್,ವೆಂಕಟೇಶ್ ಇದ್ದರು. ಹುಳಿಯಾರು: ವಸತಿ ಯೋಜನೆಯಡಿಯಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಗಳ ಫಲಾನುಭವಿಗಳ ಪಟ್ಟಿಮಾಡಲು ಹುಳಿಯಾರು ಗ್ರಾಮ ಪಂಚಾಯ್ತಿ ಆವರಣದಲ್ಲಿ ಕರೆಯಲಾಗಿದ್ದ ಗ್ರಾಮಸಭೆಗೆ ನೀರಸ ಪ್ರತಿಕ್ರಿಯ ಕಂಡುಬಂತು.           ವಸತಿ ಯೋಜನೆಯಲ್ಲದೆ ಐಪಿಪಿಇ-೨ ಮತ್ತು "ನಮ್ಮ ಗ್ರಾಮ ನಮ್ಮ ಯೋಜನೆ"ಯ ಬಗ್ಗೆ ಕೂಡ ಚರ್ಚಿಸಲು ಈ ಸಭೆ ಕರೆಯಲಾಗಿತ್ತು.                  ಆಹ್ವಾನ ಪತ್ರಿಕೆಯಲ್ಲಿ ಸಚಿವರು,ಸಂಸದರು,ವಿಧಾನ ಪರಿಷತ್ ಸದಸ್ಯರು,ಶಾಸಕರು ಹೀಗೆ ಹಲವಾರು ಮಂದಿ ಜನಪ್ರತಿನಿಧಿಗಳ ಸಾಲುಸಾಲು ಹೆಸರಿದ್ದರೂ ಕೂಡ ಅವೆಲ್ಲಾ ಕೇವಲ ಶಿಷ್ಟಾಚಾರ ಪಾಲಿಸುವ ಸಲುವಾಗಿಯಾದ್ದರಿಂದ ಸಭೆಗೆ ಯಾವೊಬ್ಬ ಜನಪ್ರತಿನಿಧಿಗಳ ಆಗಮಿಸಿರಲಿಲ್ಲಾ.ಶಾಸಕರು ಈ ಸಭೆಗೂ ಮುಂಚೆ ಅದೇ ವೇದಿಕೆಯಲ್ಲೇ ಬೇರೊಂದು ಕಾರ್ಯಕ್ರಮ ಉದ್ಘಾಟಿಸಿ ಭಾಷಣ ಮಾಡಿ ಬೇರೊಂದು ಕಾರ್ಯಕ್ರಮಕ್ಕೆ ತೆರಳಿದ್ದರಿಂದ ಅವರೊಂದಿಗೆ ಅವರ ಬೆಂಬಲಿಗರು ಕೂಡ ಹೋಗಿದ್ದರಿಂದ ಸಭೆಯಲ್ಲಿ ಗ್ರಾಪಂ ಸದಸ್ಯರ ಸಂಖ್ಯೆ ಕಡಿಮೆಯಿತ್ತು.ಅಲ್ಲದೆ ಇದು ಕೇವಲ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮಾತ್ರ ಸಿಮೀತವಾಗಿರುವುದರಿಂದ ಸಾರ್ವಜನಿಕರು ಹೆಚ್ಚಾಗಿ ಕಂಡುಬಾರದೆ ಕೇವಲ ಬೆರಳೇಣಿಕೆಯಷ್ಟು ಜನ ಕಂಡುಬಂತು.      

೮ ನೇ ಬ್ಲಾಕಿನಲ್ಲಿ ನೀರಿನ ಟ್ಯಾಂಕ್ ಗೆ ಚಾಲನೆ

ಹುಳಿಯಾರುಪಟ್ಟಣದ ೮ ನೇ ವಾರ್ಡಿನ ಗಜಾನನ ದೇವಸ್ಥಾನದ ಬಳಿ ಹೊಸದಾಗಿ ಬೊರೆವೆಲ್ ಕೊರೆಯಿಸಿ ಪೈಪ್‌ಲೈನ್ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಮಿನಿ ಟ್ಯಾಂಕಿಗೆ ಶಾಸಕ ಸಿ.ಬಿ.ಸುರೇಶ್ ಬಾಬು ಚಾಲನೆ ನೀಡಿದರು. ತೀರಾ ಹಿಂದುಳಿದಿರುವ ಆ ವಾರ್ಡಿನಲ್ಲಿ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಬರಪರಿಹಾರ ಅನುದಾನದಲ್ಲಿ ತುರ್ತಾಗಿ ಹೊಸ ಬೋರ್ ವೆಲ್ ಕೊರೆಯಿಸಿ ಮೋಟರ್ ಅಳವಡಿಸಲು ಸೂಚಿಸಿದ್ದರ ಮೇರೆಗೆ ಕಾಮಗಾರಿ ಕೈಗೊಳ್ಳಲಾಗಿತ್ತು.ಆ ವಾರ್ಡಿನ ಸದಸ್ಯರೊಡನೆ ಸಂಚರಿಸಿ  ಸದರಿ  ವಾರ್ಡಿನಲ್ಲಿ  ಅತಿ ಅವಶ್ಯವಿರುವ ಕಾಮಗಾರಿಗಳನ್ನು ಪರಿಶೀಲಿಸಿದ ಶಾಸಕರು ಗಜಾನನ ಯುವಕ ಸಂಘದವರ ಮನವಿ ಮೇರೆಗೆ ದೇವಾಲಯದ ಕಾಮಗಾರಿಗೆ ನೆರವು ನೀಡುವುದಾಗಿ ತಿಳಿಸಿದರು.  ಈ ಸಂದರ್ಭದಲ್ಲಿ ೮ ನೇ ಬ್ಲಾಕಿನ ಗ್ರಾಪಂಸದಸ್ಯರುಗಳಾದ ಎಸ್.ಪುಟ್ಟರಾಜು,ಕೆಂಪಮ್ಮ, ಮಾಮಾ ಜಿಗ್ಮಿ ಹಾಗೂ ಜಯಮ್ಮ ಮಂಜುನಾಥ್ ,ಗ್ರಾಪಂ ಅಧ್ಯಕ್ಷೆ ಗೀತಾ,ಜಿಪಂ ಸದಸ್ಯೆ ಮಂಜುಳಾ,ತಾಪಂ ಸದಸ್ಯೆ ಬೀಬಿ ಫಾತಿಮಾ,ಉಪಾಧ್ಯಕ್ಷ ಗಣೇಶ್, ವಾರ್ಡಿನ ಹಿರಿಯರು ಹಾಗೂ ಮುತುವಲ್ಲಿಗಳಾದ ಬೈಜುಸಾಬ್, ಜಬೀಸಾಬ್,ಸದಸ್ಯರುಗಳಾದ ಪುಟ್ಟಮ್ಮ,ಸಿದ್ದಗಂಗಮ್ಮ ಮುಂತಾದವರು ಉಪಸ್ಥಿತರಿದ್ದರು

ಶುದ್ಧಗಂಗಾ ಯೋಜನೆ ಸದುಪಯೋಗಪಡಿಸಿಕೊಳ್ಳಿ: ಶಾಸಕ ಸುರೇಶ್ ಬಾಬು

ತಾಲ್ಲೂಕಿನಾದ್ಯಂತ ಅಂತರ್ಜಲದ ಮಟ್ಟ ದಿನೆದಿನೆ ಕುಸಿಯುತ್ತಿದ್ದು ಕೊಳವೆ ಬಾವಿಗಳ ನೀರಿನಲ್ಲಿ ಅಗತ್ಯ ಪ್ರಮಾಣಕ್ಕಿಂತ ಹೆಚ್ಚು ಫ್ಲೋರೈಡ್, ನೈಟ್ರೇಟ್ ಅರ್ಸೆನಿಕ್ ಮತ್ತಿತರ ಅನುಪಯುಕ್ತ ಖನಿಜಗಳು ಸೇರಿ ನೀರು ಅಶುದ್ಧವಾಗಿದ್ದು ಜನ ಫ್ಲೋರೈಡ್ ನೀರು ಕುಡಿದು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮಪಂಚಾಯ್ತಿಯಲ್ಲಿ ಶುದ್ಧಗಂಗಾ ಯೋಜನೆ ಪ್ರಾರಂಭಿಸಿ, 20 ಲೀ. ಮಿನರಲ್ ನೀರಿಗೆ ಕೇವಲ ರು. 2 ಗೆ ಮಾರುವ ವ್ಯವಸ್ಥೆ ಕಲ್ಪಿಸಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ನುಡಿದರು. ಹುಳಿಯಾರಿನ ಗ್ರಾಮಪಂಚಾಯತಿ ಆವರಣದಲ್ಲಿ ನಡೆದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಶುದ್ದಗಂಗಾ ಕುಡಿಯುವ ನೀರಿನ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಸಿ.ಬಿ.ಸುರೇಶ್ ಬಾಬು ಮಾತನಾಡಿದರು.ರೋಹಿತಾಕ್ಷ,ಜಬೀಉಲ್ಲಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಜಿಲ್ಲಾ ನಿರ್ದೇಶಕ ಗಣೇಶ್,ಜಿಪಂ ಸದಸ್ಯೆ ಮಂಜುಳ,ಗ್ರಾಪಂ ಅಧ್ಯಕ್ಷೆ ಗೀತಾ,ಗ್ರಾಪಂಉಪಾಧ್ಯಕ್ಷ ಗಣೇಶ್ ಇದ್ದಾರೆ. ಅವರು ಪಟ್ಟಣದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಹಾಗೂ ಗ್ರಾಪಂ ಸಹಯೋಗದಲ್ಲಿ ಪಂಚಾಯ್ತಿ ಆವರಣದಲ್ಲಿ ಶುದ್ದಗಂಗಾ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಶುದ್ಧ ನೀರಿನ ಸೇವನೆಯಿಂದ ಮನುಷ್ಯ ಉತ್ತಮ ಆರೋಗ್ಯ ಪಡೆಯಬಲ್ಲ.ಈ ಹಿನ್ನೆ

ಇಂದು ಅಯ್ಯಪ್ಪಸ್ವಾಮಿ ಉತ್ಸವ

ಹುಳಿಯಾರು:ಪಟ್ಟಣದ ಅಯ್ಯಪ್ಪ ಸ್ವಾಮಿ ಸೇವಾಸಮಿತಿಯಿಂದ ಶ್ರೀ ಸ್ವಾಮಿಯವರ ೨೪ ನೇ ವರ್ಷದ ಉತ್ಸವವು ಮಂಗಳವಾರದಂದು ಸಂಜೆ ೬ ಗಂಟೆಯಿಂದ ನಡೆಯಲಿದೆ. ಅಯ್ಯಪ್ಪ ಸ್ವಾಮಿಯೊಂದಿಗೆ ಗ್ರಾಮದೇವತೆಗಳಾದ ಹುಳಿಯಾರಮ್ಮ ಹಾಗೂ ದುರ್ಗಮ್ಮನವರನ್ನು  ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಭಜನಾಮಂಡಳಿಗಳಿಂದ ಭಜನೆ, ಸ್ವಾಮಿಯ ಶರಣ ಘೋಷ ಹಾಗೂ ವಾದ್ಯಗೋಷ್ಟಿಯೊಂದಿಗೆ ರಾಜಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು. ಉತ್ಸವ ಕಾಲದಲ್ಲಿ ಜ್ಯೋತಿಯೊಂದಿಗೆ ಪಾಲ್ಗೊಳ್ಳುವ ಬಾಲಕಿಯರು ಸನ್ನಿಧಾನಕ್ಕೆ ತಟ್ಟೆ,ಲೋಟ ಹಾಗೂ ಪಂಚಾರತಿಯೊಂದಿಗೆ ಬರತಕ್ಕದ್ದು.ಉತ್ಸವದಲ್ಲಿ ಚಂಡೇವಾದ್ಯ,ಲಿಂಗದ ಬೀರರ ಸೇವೆ,ಗಾರುಡಿಗೊಂಬೆಯ ಯಕ್ಷಗಾನವಿದ್ದು ಶಾಸಕರ ಸೇವಾರ್ಥದಲ್ಲಿ ಅನ್ನಸಂತರ್ಪಣೆ ನಡೆಯುವುದು.

ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ಹುಳಿಯಾರು:ಪಟ್ಟಣದ ಕುವೆಂಪು ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ೭ ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯವರ ಸಹಯೋಗದಲ್ಲಿ ಹುಳಿಯಾರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಯಿತು. ಗ್ರಾಮಪಂಚಾಯ್ತಿ ಅಧ್ಯಕ್ಷೆ ಗೀತಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ಇಂದಿನ ದಿನದಲ್ಲಿ ಆರೋಗ್ಯಕಾಪಾಡಿಕೊಳ್ಳುವುದು ಬಹುಮುಖ್ಯ.ಹೃದಯ ಸಂಬಂಧಿ, ಮೂತ್ರ ಪಿಂಡದ ಸಮಸ್ಯೆ ಸೇರಿದಂತೆ ಇನ್ನಿತರ ಖಾಯಿಲೆಗಳಿಗೆ ಗ್ರಾಮೀಣ ಭಾಗದ ಜನ ಹೆಚ್ಚಿನ ಹಣ ಖರ್ಚುಮಾಡಲಾಗದ ಸ್ಥಿತಿಯಲ್ಲಿದ್ದು ಅವರುಗಳಿಗೆ ನೆರವಾಗುವ ದೃಷ್ಠಿಯಿಂದ ಈ ಉಚಿತ ಶಿಬಿರ ಆಯೋಜಿಸಲಾಗಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.ಜಿಪಂ ಸದಸ್ಯೆ ಮಂಜುಳಾ ಶಿಬಿರ ಕುರಿತು ಮಾತನಾಡಿದರು. ವೈದ್ಯಕೀಯ, ಶಸ್ತ್ರ ಚಿಕಿತ್ಸೆ, ಸ್ತ್ರೀರೋಗ, ಬಂಜೆತನ ನಿವಾರಣೆ, ಕೀಲು ಮತ್ತು ಮೂಳೆ, ಕಿವಿ ಮತ್ತು ಗಂಟಲು, ಸಕ್ಕರೆ ಕಾಯಿಲೆ, ಹೃದ್ರೋಗ, ನೇತ್ರ ಚಿಕಿತ್ಸೆ, ನರರೋಗ ಮತ್ತು ಮಾನಸಿಕ, ದಂತ, ಡಯಾಗ್ನಾಸ್ಟಿಕ್, ಮೂತ್ರಪಿಂಡ, ಚರ್ಮರೋಗ, ಮಕ್ಕಳ ವಿಭಾಗದ ತಜ್ಞ ವೈದ್ಯರು ಈ ಬೃಹತ್ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಬೆಳಿಗ್ಗೆಯಿಂದ ಪ್ರಾರಂಭವಾದ ಶಿಬಿರಕ್ಕೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಿಂದ ಆಗಮಿಸಿದ್ದ ೭೦೦ಕ್ಕೂ ಹೆಚ್ಚು ಮಂದಿಯನ್ನು ತಪಾಸಣೆಗೊಳಪಡಿಸಲಾಯಿತು. ಶಿಬಿರದಲ್ಲಿ

ಚಿತ್ರದುರ್ಗ ಜಿಲ್ಲಾಧಿಕಾರಿಗಳ ತಾಯಿ ನಿಧನ

ಚಿತ್ರದುರ್ಗ ಜಿಲ್ಲಾಧಿಕಾರಿಗಳ ತಾಯಿ ನಿಧನ: ಅಂತ್ಯಸಂಸ್ಕಾರದ ವೇಳೆ ಹೆಜ್ಜೇನು ದಾಳಿ                                                        --------------- ಚಿತ್ರದುರ್ಗ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯನವರ ತಾಯಿ ಶ್ರೀಮತಿ ಕರಿಯಮ್ಮ(೭೫) ಶನಿವಾರ ರಾತ್ರಿ ನಿಧನರಾಗಿದ್ಪ್ದು ಭಾನುವಾರ ಮಧ್ಯಾಹ್ನ ಅವರ ತೋಟದಲ್ಲಿ ಅಂತ್ಯಸಂಸ್ಕಾರ ನೆರವೇರಿತು.ಕಳೆದ ಹತ್ತುದಿನಗಳಿಂದ ಉಸಿರಾಟದ ತೊಂದರೆಯಿಂದಾಗಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹುಳಿಯಾರು ಹೋಬಳಿಯ ಹೆಚ್.ಮೇಲನಹಳ್ಳಿಯವರಾದ ಕರಿಯಮ್ಮನವರ ಅಂತ್ಯಸಂಸ್ಕಾರ ಅವರ ತೋಟದಲ್ಲಿ ಪುತ್ರ ಜಿಲ್ಲಾಧಿಕಾರಿ ಶ್ರೀರಂಗಯ್ಯನವರು ನೆರವೇರಿಸಿದರು.ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಆಂಜನೇಯ,ಹಿರಿಯೂರು ಶಾಸಕ ಸುಧಾಕರ್,ಹೊಸದುರ್ಗ ಶಾಸಕ ಗೋವಿಂದಪ್ಪ ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ಅಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಬಂಧುಬಳಗದವರು ಮೃತರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಹೆಜ್ಜೇನು ದಾಳಿ : ಅಂತ್ಯಸಂಸ್ಕಾರಕ್ಕೆ ಮೃತದೇಹ ಕೊಂಡೊಯ್ಯುವ ವೇಳೆ ನಡೆದ ಹೆಜ್ಜೇನುದಾಳಿಯಿಂದ ಜನ ಪರದಾಡುವಂತಾಯಿತು.ತೆಂಗಿನಮರದಲ್ಲಿದ್ದ ನೂರಾರು ಹೆಜ್ಜೇನುಗಳು ಉದುಕಡ್ಡಿ ಹೊಗೆಯಿಂದ ಕೆರಳಿ ದಾಳಿ ನಡೆಸಿದ್ದರಿಂದ ಜನ ದಿಕ್ಕಾಪಾಲಾಗಿ ಓಡುವಂತಾಯಿತು.ಹದಿನೈದಿಪ್ಪತ್ತು ಜನಕ್ಕೆ ಹೆಜ್ಜೇನು ಕಚ್ಚಿದ್ದರಿಂದ ಕೂಡಲೇ ಅವರನ್ನು ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡ

ಪುಟಾಣಿಗಳಿಗೆ ದಂತ ತಪಾಸಣೆ

ಹುಳಿಯಾರು ಪಟ್ಟಣದ ಕಿಡ್ ಜೀ ಶಾಲೆಯ ಪುಟಾಣಿಗಳಿಗೆ ಸ್ಪಂದನ ದಂತ ಚಿಕಿತ್ಸಾಕೇಂದ್ರದಿಂದ ಉಚಿತ ದಂತ ತಪಾಸಣೆ ಶಿಬಿರ ನಡೆಯಿತು. ಶಾಲೆಯ ಪ್ರತಿ ಮಗುವಿಗೂ ದಂತ ತಪಾಸಣೆ ನಡೆಸಿದ ದಂತವೈದ್ಯರಾದ ಡಾ||ವಿಜಯ್ ಗೌಡ ಮಕ್ಕಳಿಗೆ ಹಲ್ಲುಗಳ ಆರೋಗ್ಯ, ಅದರ ಸಂರಕ್ಷಣೆ ಹಾಗೂ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಿದರು. ಅಶೋಕ ಹಾರ್ಡ್ ವೇರ್ ಮಾಲೀಕರಾದ ಅಶೋಕ್ ರವರು ಮಕ್ಕಳಿಗೆ ದಂತ ಆರೋಗ್ಯದ ಬಗ್ಗೆ ಮಾತನಾಡಿ ಚಿಕ್ಕವಯಸ್ಸಿನ ಮಕ್ಕಳಿಗೆ ಬಾಧಿಸುವ ಹುಳುಕು ಹಲ್ಲಿನ ಸಮಸ್ಯೆ ಬಗ್ಗೆ ಕಾಳಜಿವಹಿಸಬೇಕೆಂದರು. ಶಿಬಿರದಲ್ಲಿ ಪ್ರಾಂಶುಪಾಲರಾದ ಅಶೋಕ್ ಚಂದ್ರ, ಸಂಯೋಜಕರಾದ ಮನು, ಸ್ಪಂದನ ನರ್ಸಿಂಗ್ ಹೋಂ ನ ಮುಖ್ಯಸ್ಥರಾದ ಡಾ|| ನಾಗರಾಜ್ ಹಾಗೂ ಜೀ ಲರ್ನ್ ಲಿಮಿಟೆಡ್ ನ ವಿಭಾಗೀಯ ಸಂಯೋಜಕರಾದ ವಿನಯ್ ರವರು ಉಪಸ್ಥಿತರಿದ್ದರು.