ವಿಷಯಕ್ಕೆ ಹೋಗಿ

ಸೌಕರ್ಯ ವಂಚಿತ ಪುರದ ಮಠದ ಚನ್ನಬಸವಣ್ಣ ದೇಗುಲ

ಇಂದಿನ ಕೃತಿಕೋತ್ಸವಕ್ಕೆ ಹತ್ತುಸಾವಿರದಷ್ಟು ಜನ ಸೇರುವ ನಿರೀಕ್ಷೆ: ಕನಿಷ್ಟ ಸೌಲಭ್ಯ ಒದಗಿಸಲು ಕೂಡ ಬಾರದ ಮುಜರಾಯಿ ಇಲಾಖೆ


ಹುಳಿಯಾರು:ಈ ಭಾಗದಲ್ಲಿ ಪುರದ ಮಠ ಎಂದರೆ ತಕ್ಷಣ ಜ್ಞಾಪಕ ಬರುವುದು ಅಲ್ಲಿ ನಡೆಯುವ ಪುರಾಣಪ್ರಸಿದ್ದ ಚನ್ನಸವಣ್ಣನ ಕಡೇ ಕಾರ್ತೀಕದ ರಾಗಿ ಮುದ್ದೆ ಸಾರಿನ ಊಟ ಹಾಗೂ ಪ್ರತಿ ತಿಂಗಳು ನಡೆಯುವ ಹುಣ್ಣಿಮೆ ಪೂಜೆಯಾಗಿದ್ದು ಇದಕ್ಕಾಗಿ ಜಿಲ್ಲೆಯ ನಾನಾ ಭಾಗದಿಂದ ಭಕ್ತರು ಆಗಮಿಸುತ್ತಾರೆ.ಈ ದೇವಸ್ಥಾನ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದರೂ ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ.
           
ಮುಜರಾಯಿ ಇಲಾಖೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಪುರದ ಶ್ರೀ ಚನ್ನಬಸವಣ್ಣ ದೇವಸ್ಥಾನ
 ಪುರದ ಶ್ರೀಚನ್ನಬಸವಣ್ಣನಿಗೆ ಅದರದ್ದೇ ಆದ ಇತಿಹಾಸವಿದ್ದು ಗೋಸಲ ಚನ್ನಬಸವಣ್ಣನವರು ಇಲ್ಲಿನ ಗವಿಯಲ್ಲಿ ತಪ್ಪಸ್ಸು ಕೂತಿದ್ದ ತಪೋಕ್ಷೇತ್ರವಾಗಿ ಹೆಸರಾಗಿದೆ.ಈತನ್ನನ್ನು ನಂಬಿದರೆ ಭಕ್ತರ ಸಕಲಸಮಸ್ಯೆಗಳು ಕಷ್ಟಕಾರ್ಪಣ್ಯಗಳು ಬಗೆಹರಿಯುತ್ತದೆ ಎನ್ನುವ ಅಪಾರವಾದ ನಂಬಿಕೆಯಿದೆ.ಸುತ್ತೇಳು ಗ್ರಾಮಗಳು ಸೇರಿದಂತೆ ನಾನಾ ಕಡೆಗಳಿಂದ ಅಪಾರ ಭಕ್ತರು ಸ್ವಾಮಿಯ ದರ್ಶನಕ್ಕೆ ಇಲ್ಲಿಗೆ ಆಗಮಿಸುತ್ತಾರೆ. ಹುಳಿಯಾರಿನಿಂದ ೮ ಕಿಮೀ ದೂರದಲ್ಲಿರುವ ಪುರದಮಠಕ್ಕೆ ನಿತ್ಯ ಭಕ್ತರ ಸಂಖ್ಯೆ ಅಷ್ಟಾಗಿರದಿದ್ದರೂ ಪ್ರತಿ ಸೋಮವಾರ ನಡೆಯುವ ಕ್ವಾರಣ್ಯ ಸೇವೆಗೆ ನೂರಾರು ಭಕ್ತರು ಆಗಮಿಸುತ್ತಾರೆ.ಪೂಜೆ ಮುಗಿಯುತ್ತಿದ್ದಂತೆಯೇ ರಾಗಿಮುದ್ದೆ ಕಾಳಿನ ಊಟವನ್ನು ಪ್ರಸಾದವಾಗಿ ಕೊಡಮಾಡುವ ವಾಡಿಕೆ ಕಳೆದ ಏಳೆಂಟು ದಶಕಗಳಿಂದಲೂ ನಡೆದು ಬಂದಿದೆ.
             ಮುಖ್ಯ ರಸ್ತೆಯಿಂದ ದೇವಾಲಯಕ್ಕೆ ಯಾವುದೇ ವಾಹನ ವ್ಯವಸ್ಥೆಯಿಲ್ಲ.ಸ್ವಂತ ವಾಹನಗಳಲ್ಲಿ ಬರುವವರು ಕಿರಿದಾದ ಗುಂಡಿ ಬಿದ್ದಿರುವ ರಸ್ತೆಯಲ್ಲಿ ಬರುವುದರೊಳಗೆ ಹೈರಾಣೆದ್ದು ಹೋಗುತ್ತಾರೆ.ಇಲ್ಲಿ ಉಳಿದಿಕೊಳ್ಳಲು ಸ್ವಲ್ಪ ಮಟ್ಟಿನ ವ್ಯವಸ್ಥೆ ಮಾಡಲಾಗುತ್ತದೆಯಾದರೂ ಸ್ನಾನಗೃಹ,ಶೌಚಾಲಯ ಸೇರಿದಂತೆ ಯಾವುದೇ ಮೂಲ ಸೌಕರ್ಯವಿಲ್ಲದೆ ಭಕ್ತರು ಪರದಾಡುವ ಸ್ಥಿತಿ ಇದೆ.
           ಇಂದು ಡಿ.೧೨ರಂದು ನಡೆಯಲಿರುವ ಕಾರ್ತಿಕ ಮಹೋತ್ಸವಕ್ಕೆ ಕನಿಷ್ಟ ಎಂಟರಿಂದ ಹತ್ತು ಸಾವಿರದಷ್ಟು ಭಕ್ತರು ಸೇರುವುದಿದ್ದು ಅದರಲ್ಲೂ ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಆಗಮಿಸುವುದಿದ್ದು ಅಗತ್ಯ ಸೌಲಭ್ಯಗಳು ಇಲ್ಲಿಲ್ಲ .ಕನಿಷ್ಟ ಶೌಚಕ್ಕೂ,ಮೂತ್ರಕ್ಕೂ ಕೂಡ ವ್ಯವಸ್ಥೆಯಿಲ್ಲದೆ ವಿಸರ್ಜನೆಗೆ ಬಯಲಿಗೆ ಹೋಗುವ ಅನಿವಾರ್ಯತೆಯಿದೆ.ಯಾವುದೇ ಸೌಕರ್ಯ ಕಲ್ಪಿಸದ ಮುಜರಾಯಿ ಇಲಾಖೆಗೆ ಭಕ್ತರು ಹಿಡಿ ಶಾಪ ಹಾಕುತ್ತಾ ತೆರಳುವುದು ಮಾಮೂಲಿಯಾಗಿದೆ.
         ಇಲ್ಲಿನ ಭಕ್ತರೇ ಸೇರಿಕೊಂದು ಶಾಸಕರ ,ತಾಲ್ಲೂಕ್ ಪಂಚಾಯ್ತಿ ಅನುದಾನದಿಂದ ಸಮುದಾಯ ಭವನ ನಿರ್ಮಿಸಿದ್ದಾರೆ ಗ್ರಾಮಪಂಚಾಯ್ತಿ ಅನುದಾನದಿಂದ ನೀರಿನ ವ್ಯವಸ್ಥೆ ಮಾಡಿಕೊಂಡಿದೆ.ತದನಂತರದ ದಿನದಲ್ಲಿ ಸಮುದಾಯ ಭವನಕ್ಕೆ ಲಗ್ಗತ್ತಾಗಿ ಅಡುಗೆ ಕೋಣೆ ಮಾಡಿದ್ದು ಆ ಸಮಯದಲ್ಲಿ ಎರಡು ಸ್ನಾನಗೃಹ ನಿರ್ಮಿಸಲಾಗಿದೆ.ಅದಕ್ಕೆ ಹಾಕಿದ್ದ ಬಾಗಿಲು ಒಡೆದು ಐದಾರು ವರ್ಷಗಳೆ ಕಳೆದಿದ್ದು ಯಾರೊಬ್ಬರೂ ರಿಪೇರಿಗೆ ಮುಂದಾಗಿಲ್ಲ.
ಭಕ್ತಾಧಿಗಳಿಗೆ ನಿರ್ಮಿಸಲಾಗಿರುವ ನಿರುಪಯುಕ್ತ ಸ್ನಾನಗೃಹ
           ದೇವಾಲಯ ನಿರ್ವಹಣೆಗೆ ಸ್ಥಳಿಯ ಆಡಳಿತ ಮಂಡಳಿ ಇಲ್ಲಿಲ್ಲದ ಕಾರಣ ದೇವಾಲಯ ಸೇರಿದಂತೆ ಎಲ್ಲದರ ನಿರ್ವಹಣೆ ಸಮಸ್ಯೆಯಾಗಿದೆ.ಸಮಿತಿಯಾದರೂ ಇದ್ದಿದ್ದರೆ ಅಷ್ಟೊಇಷ್ಟೊ ಕೆಲಸ ಕಾರ್ಯಗಳು ನಡೆಯಬಹುದಿದ್ದು ತಹಸೀಲ್ದಾರ್ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಳ್ಳದ ಕಾರಣ ಸಮಿತಿಯ ಪ್ರಸ್ತಾಪ ನೆನೆಗುದಿಗೆ ಬಿದ್ದಿದ್ದೆ.ಇದರಿಂದ ಗ್ರಾಮಸ್ಥರು ಇಲಾಖೆ ವಿರುದ್ಧ ಭಕ್ತರು ಬೇಸರಗೊಂಡಿದ್ದಾರೆ.
            ಮುಜರಾಯಿ ದೇವಸ್ಥಾನ ಎಂದು ಗ್ರಾಮಸ್ಥರು ಕೂಡ ಅಷ್ಟಾಗಿ ತಲೆಕೆಡಿಸಿಕೊಳ್ಳದಿರುವುದರಿಂದ ಅಭಿವೃದ್ಧಿ ಕಾಣದಾಗಿದೆ.
           ಇಲ್ಲಿಗೆ ಬರುವ ಭಕ್ತರ ಅನುಕೂಲಕ್ಕಾಗಿ ಛತ್ರ,ಶೌಚಾಲಯ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ,ರಸ್ತೆ ಇತ್ಯಾದಿ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ.
------------------------------
ಮುಜರಾಯಿಗೆ ಒಳಪಟ್ಟಿದ್ದರೂ ಇದರ ಅಭಿವೃದ್ಧಿ ಮಾತ್ರ ನಾಸ್ತಿ.ಇಲ್ಲಿಗೆ ಕನಿಷ್ಟ ಮೂಲ ಸೌಕರ್ಯವನ್ನು ಒದಗಿಸದ ಇಲಾಖೆ ಪ್ರತಿ ಆರು ತಿಂಗಳಿಗೊಮ್ಮೆ ಮಾತ್ರ ಹುಂಡಿ ಹಣ ಎಣಿಕೆ ಮಾಡಿ ಕೊಂಡೊಯ್ಯುವುದನ್ನು ಮಾತ್ರ ಮರೆಯುವುದಿಲ್ಲ.ದೇವಾಲಯದ ಅರ್ಚಕರಿಗೆ ತಸ್ತಿಕ್ ಹಣ ಮಾತ್ರ ನೀಡುವ ಇಲಾಖೆ ಅಭಿವೃದ್ಧಿ ವಿಚಾರಕ್ಕೆ ಇತ್ತ ತಿರುಗಿ ನೋಡದಂತಿರುವುದು ಮಾತ್ರ ವಿಪರ್ಯಾಸ: ಜೆಸಿಬಿ ಬಸವರಾಜು,ಬಸವನಗುಡಿ

----------------------------

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.