ಹುಳಿಯಾರು: ಹುಳಿಯಾರಿನ ಬೆಸ್ಕಾಂ ಕೇಂದ್ರವು ತಮ್ಮ ಗ್ರಾಹಕರಿಗೆ ವಿದ್ಯುತ್ ಬಿಲ್ಲನ್ನು ರದ್ದಾದ ೫೦೦-೧೦೦೦ ರೂ ಗಳನ್ನು ಮೂಲಕ ಪಾವತಿ ಮಾಡಲು ನ.೧೧ರ ಶುಕ್ರವಾರ ರಾತ್ರಿವರೆಗೂ ಅವಕಾಶ ಕಲ್ಪಿಸಿದ್ದರಿಂದ ಅಂದು ಮಧ್ಯಾಹ್ನದಿಂದ ರಾತ್ರಿ ಹತ್ತರವರೆಗೆ ಒಟ್ಟು ಎರಡು ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಹಣ ಜಮೆಯಾಗಿದೆ.
ಸರ್ಕಾರದ ಆದೇಶದಂತೆ ರದ್ದಾಗಿರುವ ೫೦೦ ಹಾಗೂ ೧೦೦ ಮುಖಬೆಲೆಯ ನೋಟುಗಳನ್ನು ಅಗತ್ಯದ ಉದ್ದೇಶಕ್ಕೆ ಬಳಕೆ ಮಾಡಲು ಮತ್ತೆ ಮೂರು ದಿನಗಳ ಕಾಲ ವಿಸ್ತರಿಸಿರುವುದರಿಂದ ಗ್ರಾಹಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿ ಎಸ್ ಓ ಉಮೇಶ್ ನಾಯಕ್ ಮನವಿ ಮಾಡಿದ್ದಾರೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ