ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆಗಸ್ಟ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕೋಡಿಪಾಳ್ಯದಲ್ಲಿ : ಮೈಲಾರಲಿಂಗೇಶ್ವರಸ್ವಾಮಿ ದೇವರ ದೋಣಿ ಸೇವೆ ------------------ ಹುಳಿಯಾರು : ಹೋಬಳಿ ಕೋಡಿಪಾಳ್ಯದ ಮೈಲಾರಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ಕೆಂಕೆರೆ ಕಾಳಮ್ಮ ದೇವಿಯ ಸಮ್ಮುಖದಲ್ಲಿ ಭಾನುವಾರ ವಿಶೇಷವಾಗಿ ದೋಣಿಸೇವೆ ಹಾಗೂ ಎಡೆಸೇವೆ ಶ್ರದ್ಧಾಭಕ್ತಿಯಿಂದ ನಡೆಯಿತು. ನಿಂಗರಾಜು ಮತ್ತು ಮೈಲಾರಪ್ಪನವರ ಸೇವಾರ್ಥದಲ್ಲಿ ನಡೆದ ದೋಣಿ ಸೇವೆಯ ಅಂಗವಾಗಿ ಶನಿವಾರ ಸಂಜೆ ಕಾಳಮ್ಮ ದೇವಿಯನ್ನು ಕರೆದುಕೊಂಡು ಬಂದು ಊರಿನ ಗೌಡರ ಮನೆಯಲ್ಲಿ ನಂದಾದೀಪ ಹಚ್ಚಿ ಪೂಜಿಸಿದ್ದಲ್ಲದೆ, ದೇವಾಲಯದಲ್ಲಿ ಕಥೆ ಓದಿಸುವ ಕಾರ್ಯ ನಡೆಸಲಾಗಿತ್ತು. ಭಾನುವಾರ ಬೆಳಿಗ್ಗೆ ದೇವರುಗಳ ಜೊತೆ ಡಮರುಗ, ಕಂಬಳಿ ಹೊದ್ದ ಗೊರವಯ್ಯಗಳನ್ನು ಸಕಲವಾದ್ಯಗಳೊಂದಿಗೆ ದೇವಾಲಯದಲ್ಲಿಗೆ ಕರೆದೊಯ್ಯಲಾಯಿತು. ಗೊರವಯ್ಯಗಳನ್ನು ಸಾಕ್ಷಾತ್ ಮೈಲಾರಲಿಂಗೇಶ್ವರನ ಪ್ರತಿರೂಪವೆಂದೆ ನಂಬಿರುವ ಭಕ್ತ ಸಮೂಹ ಗೊರಪ್ಪಗಳ ದೋಣಿಗೆ ಬಾಳೆಹಣ್ಣಿನ ರಸಾಯಾನ ತುಂಬಿಸುವ ಸೇವೆ ಜರುಗಿಸಿದರು. ಮೈಲಾರದೇವರು ಅವಾಹನೆಯಾದ ಗೊರಪ್ಪಗಳು ದೇವಾಲಯದ ಪ್ರಾಂಗಣದಲ್ಲಿ ಕುಪ್ಪಳಿಸುತ್ತಿದ್ದಿದ್ದು ನೆರೆದಿದ್ದವರಲ್ಲಿ ಭಕ್ತಿಭಾವವನ್ನುಂಟುಮಾಡಿ ಮುಂದೇನಾಗುತ್ತದೆ ಎಂದು ತದೇಕಚಿತ್ತದಿಂದ ನೋಡುವಂತಾಗಿತ್ತು . ಪೂಜೆ ಮುಗಿದ ನಂತರ ಬಾಳೆಹಣ್ಣಿನ ಪ್ರಸಾದವನ್ನು ಆಗಮಿಸಿದ್ದ ಭಕ್ತರಿಗೆ ವಿತರಿಸಲಾಯಿತು. ದೇವಾಲಯ ಸಮಿತಿಯವರಾದ ನಿಂಗಪ್ಪ,ದುರ್ಗಪ್ಪ,ಬಸವರಾಜು,ವಿಜಯ್ ಕುಮಾರ್, ರಘುನಾಥ್,ನಾಗರಾಜು ಸೇರಿದಂತೆ ಕೋಡಿಪಾಳ್ಯ, ಲಿಂಗಪ್ಪನಪಾಳ್ಯದ ಭಕ್ತರು ಆಗಮಿಸಿ ದೋಣಿ ಸೇವ್ಯಲ್ಲಿ ಪಾಲ್ಗೊಂಡು ಸ್ವಾಮಿಯ ಅಶೀರ್ವಾದಕ್ಕೆ ಭಾಜನರಾದರು.

          ಹುಳಿಯಾರು  ಹೋಬಳಿ ಕೋಡಿಪಾಳ್ಯದ ಮೈಲಾರಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ಕೆಂಕೆರೆ ಕಾಳಮ್ಮ ದೇವಿಯ ಸಮ್ಮುಖದಲ್ಲಿ ಭಾನುವಾರ ವಿಶೇಷವಾಗಿ ದೋಣಿಸೇವೆ ಹಾಗೂ ಎಡೆಸೇವೆ ಶ್ರದ್ಧಾಭಕ್ತಿಯಿಂದ ನಡೆಯಿತು. ಹುಳಿಯಾರು ಸಮೀಪದ ಕೋಡಿಪಾಳ್ಯದ ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಏಳುಕೋಟಿ ಮೈಲಾರಲಿಂಗೇಶ್ವರನ ದೊಣೆನ ಸೇವೆ ಮತ್ತು ಎಡೆಸೇವೆ ನಡೆಯಿತು.               ನಿಂಗರಾಜು ಮತ್ತು ಮೈಲಾರಪ್ಪನವರ ಸೇವಾರ್ಥದಲ್ಲಿ ನಡೆದ ದೋಣಿ ಸೇವೆಯ ಅಂಗವಾಗಿ ಶನಿವಾರ ಸಂಜೆ ಕಾಳಮ್ಮ ದೇವಿಯನ್ನು ಕರೆದುಕೊಂಡು ಬಂದು ಊರಿನ ಗೌಡರ ಮನೆಯಲ್ಲಿ ನಂದಾದೀಪ ಹಚ್ಚಿ ಪೂಜಿಸಿದ್ದಲ್ಲದೆ, ದೇವಾಲಯದಲ್ಲಿ ಕಥೆ ಓದಿಸುವ ಕಾರ್ಯ ನಡೆಸಲಾಗಿತ್ತು. ಭಾನುವಾರ ಬೆಳಿಗ್ಗೆ ದೇವರುಗಳ ಜೊತೆ ಡಮರುಗ, ಕಂಬಳಿ ಹೊದ್ದ ಗೊರವಯ್ಯಗಳನ್ನು ಸಕಲವಾದ್ಯಗಳೊಂದಿಗೆ ದೇವಾಲಯದಲ್ಲಿಗೆ ಕರೆದೊಯ್ಯಲಾಯಿತು. ಗೊರವಯ್ಯಗಳನ್ನು ಸಾಕ್ಷಾತ್ ಮೈಲಾರಲಿಂಗೇಶ್ವರನ ಪ್ರತಿರೂಪವೆಂದೆ ನಂಬಿರುವ ಭಕ್ತ ಸಮೂಹ ಗೊರಪ್ಪಗಳ ದೋಣಿಗೆ ಬಾಳೆಹಣ್ಣಿನ ರಸಾಯಾನ ತುಂಬಿಸುವ ಸೇವೆ ಜರುಗಿಸಿದರು. ಮೈಲಾರದೇವರು ಅವಾಹನೆಯಾದ ಗೊರಪ್ಪಗಳು ದೇವಾಲಯದ ಪ್ರಾಂಗಣದಲ್ಲಿ ಕುಪ್ಪಳಿಸುತ್ತಿದ್ದಿದ್ದು ನೆರೆದಿದ್ದವರಲ್ಲಿ ಭಕ್ತಿಭಾವವನ್ನುಂಟುಮಾಡಿ ಮುಂದೇನಾಗುತ್ತದೆ ಎಂದು ತದೇಕಚಿತ್ತದಿಂದ ನೋಡುವಂತಾಗಿತ್ತು .              ಪೂಜೆ ಮುಗಿದ ನಂತರ ಬಾಳೆಹಣ್ಣಿನ ಪ್ರಸಾದವನ್ನು ಆಗಮಿಸಿದ್ದ ಭಕ್ತರಿಗೆ ವಿತರಿಸಲ

ಹುಳಿಯಾರು ಆಸ್ಪತ್ರೇಲಿ ಖಾಯಂ ವೈದ್ಯರಿಲ್ಲದೆ ರೋಗಿಗಳಿಗೆ ನಿತ್ಯ ನರಕಯಾತನೆ

              ಇಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ಆಸ್ಪತ್ರೆಗೆ ಬರುವ ರೋಗಿಗಳು ನಿತ್ಯ ಪರದಾಡುವಂತ ಸ್ಥಿತಿ ಇನ್ನೂ ಸಹ ಮುಂದುವರೆಯುತ್ತಲೇ ಸಾಗಿದ್ದು, ಭಾನುವಾರದಂದು ಆಸ್ಪತ್ರೆಗೆ ಬಂದಿದ್ದದವರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ಯಾವೊಬ್ಬ ವೈದ್ಯರಿಲ್ಲದ್ದನ್ನು ಕಂಡ ಗ್ರಾ.ಪಂ. ಸದಸ್ಯರಾದ ಅಶೋಕ್ ಬಾಬು ಹಾಗೂ ಹೇಮಂತ್ ಅಕ್ರೋಶಿತರಾಗಿ ಅಸ್ಪತ್ರೆಯ ಮುಖ್ಯದ್ವಾರದಲ್ಲಿ ಕುಳಿತು ಪ್ರತಿಭಟಿಸಿದರು. ವೈದ್ಯರಿಲ್ಲದ ಹುಳಿಯಾರು ಆಸ್ಪತ್ರೆಯ ಮುಂದೆ ಗ್ರಾ.ಪಂ.ಸದಸ್ಯರು ಪ್ರತಿಭಟಿಸಿದರು.                ಇಂದು ಬೆಳಿಗ್ಗೆ ಗಾಯಾಳು ಒಬ್ಬರಿಗೆ ತುರ್ತಾಗಿ ಚಿಕಿತ್ಸೆ ಕೊಡಿಸಲು ಕರೆದುಕೊಂಡು ಬಂದಾಗ ಆಸ್ಪತ್ರೆಯಲ್ಲಿ ವೈದ್ಯರ ಗೈರಿನಿಂದಾಗಿ ಚಿಕಿತ್ಸೆ ಸಿಗದೆ ಪರದಾಡುವಂತಾಯಿತು. ವೈದ್ಯರಿಲ್ಲವೆಂದು ಸಿಬ್ಬಂದಿಯವರೂ ಕೂಡ ಬಾರದೆ ಇದ್ದುದ್ದು ಪ್ರತಿಭಟನೆಗೆ ಕಾರಣವಾಯಿತು.              ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾ.ಪಂ.ಸದಸ್ಯ ಅಶೋಕ್ ಬಾಬು ಹುಳಿಯಾರು ಆಸ್ಪತ್ರೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಅದರಲ್ಲಿ ಪ್ರಮುಖ ಸಮಸ್ಯೆ ಎಂದರೆ ಖಾಯಂ ವೈದ್ಯರಿಲ್ಲದೆ ಇರುವುದು, ಈ ಬಗ್ಗೆ ಟಿ.ಎಚ್.ಓ, ಡಿ.ಎಚ್.ಓ, ಶಾಸಕರು ಸೇರಿದಂತೆ ಅರೋಗ್ಯ ಮಂತ್ರಿಯಗಳ ವರೆಗೆ ಮನವಿ ಸಲ್ಲಿಸಿ, ಈ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವಂತೆ ಸಾಕಷ್ಟು ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು

ನಾಗಪ್ಪನಿಗೆ ಕಿಚುಡಿ, ಹುಳ್ಸೊಪ್ಪು ಸಾರು ನೈವೇದ್ಯ

ನಾಗಪ್ಪನಿಗೆ ಕಿಚುಡಿ, ಹುಳ್ಸೊಪ್ಪು ಸಾರು ನೈವೇದ್ಯ                                                          ------------------- ಯಾರೊಬ್ಬರು ತಪ್ಪಿಸದ ನಾಗರು ಆಚರಣೆ                                                             -------- ಗ್ರಾಮೀಣ ಭಾಗದಲ್ಲಿ ವರ್ಷವಿಡಿ ಅನೇಕ ರೀತಿಯ ಹಬ್ಬಗಳ ಆಚರಣೆ ರೂಢಿಯಲಿದ್ದು ಇಲ್ಲಿ ಯಾವುದೇ ಹಬ್ಬವನ್ನು ಆಚರಿಸದಿದ್ದರೂ ಸಹ ನಾಗರು ಪೂಜೆಯನ್ನು ಕಡ್ಡಾಯವಾಗಿ ಆಚರಿಸುವುದು ರೂಢಿಯಲ್ಲಿದೆ. ಅಂದು ಕುಟುಂಬದವರು ಎಲ್ಲೆ ಇದ್ದರೂ ಸಹ ತಮ್ಮ ಸ್ವಸ್ಥಳಗಳಿಗೆ ಆಗಮಿಸಿ ಕುಟುಂಬದವರೆಲ್ಲಾ ಒಟ್ಟಾಗಿ ಗಣೇಶ ಚತುರ್ಥಿಯಂದು ನಾಗರು ಹಬ್ಬವನ್ನು ತಲೆತಲಾಂತರದಿಂದ ಆಚರಿಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ. ಗಣೇಶನ ಹಬ್ಬದಂದು ವಿನಾಯಕ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದರ ಜೊತೆಜೊತೆಗೆ ಮಡಿಯಲ್ಲಿ ನಾಗಪ್ಪ ಅಂದರೆ ನಾಗರಕಲ್ಲಿಗೆ ಹಾಲನ್ನೆರೆದು ಪೂಜಿಸುವುದು ಹುಳಿಯಾರು ಪಟ್ಟಣ ಸೇರಿದಂತೆ ಸುತ್ತಮುತ್ತಲ್ಲ ಹಳ್ಳಿಗಳಲ್ಲಿ ತಲೆತಲಾಂತರದಿಂದ ನಡೆದುಕೊಂಡು ಬಂದಿದೆ. ನಾಗಪ್ಪನ ಪೂಜೆ : ನಾಗಪ್ಪ ಎಂದರೆ ಎಲ್ಲರಲ್ಲೂ ಭಯ, ಭಕ್ತಿ ಹೆಚ್ಚಿದ್ದು ಮಡಿಯಿಂದ ನಾಗಪ್ಪನ ಪೂಜೆ ಮಾಡುವುದು ಇಂದಿಗೂ ನಡೆದುಕೊಂಡು ಬರುತ್ತಿದೆ. ನಾಗಪ್ಪನ ಪೂಜೆಯಲ್ಲಿ ಹಲವು ಬಗೆಬಳಿದ್ದು ಕೆಲವರು ಚೌತಿ ನಾಗರು ಎಂದು ಪೂಜಿಸಿದರೆ, ಮತ್ತೆಕೆಲವರು ಕೂಳೆ ನಾಗರು ಎಂದು

ಹುಳಿಯಾರಿನನಲ್ಲಿ ಸಂಭ್ರಮದ ಗಣೇಶ ಚತುರ್ಥಿ

ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಗಣೇಶ ಚತುರ್ಥಿಯ ಅಂಗವಾಗಿ ಗಣಪತಿಯ ಪ್ರತಿಷ್ಠಾಪನೆ ವಿಧ್ಯುಕ್ತವಾಗಿ ನಡೆಯಿತು. ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆದರೆ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಬಡಾವಣೆಗಳಲ್ಲಿ ಗಣೇಶನನ್ನು ಸ್ಥಾಪಿಸುವ ಸಂಭ್ರಮ ಮೇರೆ ಮೀರಿತ್ತು. ಪೆಂಡಾಲ್ ಹಾಕಿ, ಧ್ವನಿ ವರ್ಧಕ ವ್ಯವಸ್ಥೆ ಮಾಡಿ ದೊಡ್ಡಗಣಪತಿ ಮೂರ್ತಿಗಳನ್ನು ಕೂರಿಸಿ ಹರಿಕಥೆ,ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಯೋಜಿಸಿದ್ದಾರೆ. ಹುಳಿಯಾರಿನ ಮನೆಯೊಂದರಲ್ಲಿ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಿ ಶ್ರದ್ಧಾಭಕ್ತಿಯಿಂದ ಪೂಜಿಸುತ್ತಿರುವುದು . ಮನೆಗಳಲ್ಲೂ ಸಹ ಗಣಪತಿ ಪ್ರತಿಷ್ಠಾಪಿಸಿ ಮೊದಕ,ಕರಿಗಡುಬಿನ ನೈವೇದ್ಯ ಸಮರ್ಪಿಸಿ ಪೂಜೆ ಸಲ್ಲಿಸಲಾಯಿತು. ಕನಿಷ್ಠ 21 ಗಣಪನನ್ನು ನೋಡಿದರೆ ವಿಘ್ನ ನಿವಾರಣೆಯಾಗುವುದೆಂಬ ವಾಡಿಕೆ ಹಿನ್ನಲೆಯಲ್ಲಿ ಸಂಜೆ ಮಕ್ಕಳುಗಳು ಹಾಗೂ ಮಹಿಳೆಯರು ಮನೆಮನೆಗೆ ತೆರಳಿ ಸಿದ್ದವಿನಾಯಕನ ದರ್ಶನ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವರು ಗಣೇಶನ ಪೂಜೆಯ ನಂತರ ಹಿಂದಿನಿಂದ ನಡೆಸಿಕೊಂಡು ಬಂದಂತೆ ಕುಟುಂಬದವರೆಲ್ಲಾ ಒಟ್ಟಾಗಿ ಸೇರಿ ನಾಗರಕಲ್ಲಿಗೆ ಅಥವಾ ಹುತ್ತಕ್ಕೆ ಪೂಜೆ ಸಲ್ಲಿಸಿ ಹಾಲನ್ನೆರೆಯುವ ಮೂಲಕ ಹಬ್ಬದ ಆಚರಣೆ ನಡೆಸಿದರು. ಹೆಚ್ಚಿನ ಜನ ಸಂಜೆ ಪೂಜೆ ನಂತರ ತಿರುಮಲಾಪುರ,ದೊಡ್ಡಬಿದರೆ ಸೇರಿದಂತೆ ಇತರ ಕೆರೆ-ಕಟ್ಟೆಗಳಿಗೆ ತೆರಳಿ ಗಣಪತಿ ವಿಸರ್ಜಿಸಿದರು.

ಕೆಂಕೆರೆ ಗಣಪತಿ ದೇವಾಲಯದಲ್ಲಿ ಗಣಪತಿ ಪ್ರತಿಷ್ಠಾಪನೆ

ಹುಳಿಯಾರು ಹೋಬಳಿ ಕೆಂಕೆರೆ ತೇರುಬೀದಿಯ ಗಣೇಶ ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ. ಹೋಬಳಿ ಕೆಂಕೆರೆ ತೇರುಬೀದಿಯ ಗಣೇಶ ದೇವಾಲಯದಲ್ಲಿ ಶ್ರೀಸರ್ವಸಿದ್ದಿವಿನಾಯಕ ಭಕ್ತಮಂಡಳಿ ಹಾಗೂ ಟ್ರಸ್ಟ್ ವತಿಯಿಂದ 36 ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಭವ್ಯವಾದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. . ಗಣೇಶ ಚತುರ್ಥಿಯ ಬೆಳಿಗ್ಗೆ ಮೂಲ ವಿಗ್ರಹಕ್ಕೆ ಅಭಿಷೇಕ, ಅರ್ಚನೆ ನಡೆಸಿ ನಂತರ ಗಣಪತಿ ಮೂರ್ತಿಗೆ ಪುಣ್ಯಾಹ ಮಾಡಿ ಮುದ್ದುಮಲ್ಲೇಗೌಡರ ಶಿವಣ್ಣ,ಪುಟ್ಟಯ್ಯ,ಕರಿಸಿದ್ದಪ್ಪನವರ ಸೇವಾರ್ಥದಲ್ಲಿ ಪ್ರತಿಷ್ಠಾಪಿಸಿ ಬಿಲ್ವಾರ್ಚನೆ, ಸಹಸ್ರನಾಮಾರ್ಚನೆ ಮಾಡಲಾಯಿತು. ಇದೇ ದಿನ ಸಂಜೆ ಸದಾಶಿವಣ್ಣ ಹಾಗೂ ಶಿಕ್ಷಕ ಕೆ.ವಿ.ರಮೇಶ್ ಅವರಿಂದ ಪುರಾಣ ಪಠಣದ ನಂತರ ಮಹಾಮಂಗಳಾರತಿ ನಡೆದು ಪನಿವಾರ ವಿತರಿಸಲಾಯಿತು.ಈ ಸಂಧರ್ಭದಲ್ಲಿ ದೇವಾಲಯ ಸಮಿತಿಯವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಹುಳಿಯಾರಿನಲ್ಲಿ ನಂದಿರೂಢ ಬಾಲಗಣಪ ಪ್ರತಿಷ್ಠಾಪನೆ

ಪಟ್ಟಣದ ಶ್ರೀಪಸನ್ನ ಗಣಪತಿ ದೇವಾಲಯದಲ್ಲಿ 64 ನೇ ವರ್ಷದ ಗಣೇಶೋತ್ಸವದ ಅಂಗವಾಗಿ ವಿಶೇಷ ನಂದಿರೂಢ ಬಾಲಗಣಪನನ್ನು ಪ್ರತಿಷ್ಠಾಪಿಸಲಾಗಿದೆ. ಮುಂದಿನ ಒಟ್ಟು 27 ದಿನವಸಗಳ ಕಾಲ ಸ್ವಾಮಿಯವರಿಗೆ ನಿತ್ಯ ವಿಶೇಷ ಪೂಜೆ,ಅಭಿಷೇಕ,ಅರ್ಚನೆ ನಡೆಯಲಿದ್ದು, ಸುಗಮ ಸಂಗೀತ,ಹರಿಕಥೆ, ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕಕಾರ್ಯಕ್ರಮಗಳನ್ನು ಸಹ ಅಯೋಜಿಸಲಾಗಿದೆ. ಸೆ.11ರಂದು ತುಮಕೂರಿನ ಆಶಾ ಮೆಲೋಡಿಸ್ ಅವರಿಂದ ರಸಮಂಜರಿ ಕಾರ್ಯಕ್ರಮ, ಸೆ.18 ರಂದು ಅರಸೀಕೆರೆ ಶೋಭಾರಾಣಿ ತಂಡದವರಿಂದ ಡ್ಯಾನ್ಸ್ ಡ್ಯಾನ್ಸ್ , ಸೆ.24 ರಂದು ಹೋಮ,ಸೆ.25 ರಂದು ಗಣಪತಿಯ ರಾಜಬೀದಿ ಉತ್ಸವ ವಿವಿಧ ಜಾನಪದ ಕಲಾತಂಡಗಳೊಂದಿಗೆ ನಡೆಯಲಿದೆ. ಸೆ.26 ರಂದು ಸ್ವಾಮಿಯ ಗಂಗಾಪ್ರವೇಶ ಕಾರ್ಯ ನಡೆಯಲಿದೆ. ಈ ಬಾರಿಯ ವಿಶೇಷವಾಗಿ ಸೆ.11 ರಂದು ಹೋಬಳಿಯ ಛಾಯಾಚಿತ್ರಗ್ರಾಹಕ ಸಂಘದಿಂದ ಒಂದರಿಂದ ಐದು ವರ್ಷದೊಳಗಿನ ಮಕ್ಕಳ ಭಾವಚಿತ್ರ ಸ್ಪರ್ಧೆ ಹಾಗೂ ಪ್ರದರ್ಶನ ನಡೆಯಲಿದೆ. ಹುಳಿಯಾರಿನ ಪ್ರಸನ್ನಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವ ನಂದಿರೂಢ ಬಾಲಗಣಪ .  

ಹಬ್ಬದ ದಿನವೇ ಬಸ್ ಅಪಘಾತ : ಒಂದು ಸಾವು

ಹುಳಿಯಾರು : ಪಟ್ಟಣ ಬಳ್ಳೆಕಟ್ಟೆ ಸಮೀಪ ರಾಜ್ಯಹೆದ್ದಾರಿ ಬದಿಯ ಬೇವಿನಮರಕ್ಕೆ ಖಾಸಗಿ ಬಸ್ಸೊಂದು ಅಪ್ಪಳಿಸಿ ವ್ಯಕ್ತಿಯೊಬ್ಬ ಸಾವನಪ್ಪಿರುವ ದುರ್ಘಟನೆ ಗುರುವಾರ ರಾತ್ರಿ ಗೌರಿ ಹಬ್ಬದ ದಿನವೇ ಘಟಿಸಿದೆ. ಕಡೂರು ತಾಲ್ಲೂಕಿನ ಪಂಚನಹಳ್ಳಿ ಸಮೀಪದ ಚೌಡಿಪಾಳ್ಯದ ಚನ್ನಬಸವಯ್ಯ(38) ಎಂಬಾತ ಮೃತಪಟ್ಟ ವ್ಯಕ್ತಿ. ಇವರು ಕುಟುಂಬ ಸಮೇತ ಹಬ್ಬಕ್ಕೆಂದು ಬೆಂಗಳೂರಿನಿಂದ ಪ್ರಕಾಶ ಬಸ್ ನಲ್ಲಿ ಊರಿಗೆ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ಬೇವಿನ ಮರಕ್ಕೆ ಅಪ್ಪಳಿಸಿದ್ದರ ಪರಿಣಾಮ ತೀವ್ರ ಗಾಯಗೊಂಡ ಈತನನ್ನು ಅಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತ ಪಟ್ಟಿದ್ದಾನೆ. ಮುಂಭಾಗದ ಸೀಟ್ ನಲ್ಲಿ ಈತನ ಜೊತೆಯಲ್ಲಿ ಕುಳಿತಿದ್ದ ಹೆಂಡತಿ ಹಾಗೂ ಇಬ್ಬರು ಮಕ್ಕಳಿಗೆ ಕೂಡ ತೀವ್ರಗಾಯಗಳಾಗಿದ್ದು , ಮತ್ತೊಬ್ಬ ವ್ಯಕ್ತಿಯ ಕೈ ಮುರಿದಿದೆ. ಖಾಸಗಿ ಬಸ್ ಬೆಂಗಳೂರಿನಿಂದ-ಹುಳಿಯಾರು ಮಾರ್ಗವಾಗಿ ಯಗಟಿಗೆ ಹೋಗುತಿದ್ದ ವೇಳೆ ಹುಳಿಯಾರಿನ ವಿದ್ಯಾವಾರಿಧಿ ಸ್ಕೂಲ್ ಬಳಿ ಅಪಘಾತ ಸಂಭವಿಸಿದೆ. ಅಪ್ಪಳಿಸಿದ ರಭಸಕ್ಕೆ ಬಸ್ ನ ಮುಂಭಾಗದ ಎಡಭಾಗ ನಜ್ಜುಗುಜ್ಜಾಗಿದ್ದು ,ಮುಂಭಾಗದಲ್ಲಿದ್ದವರು ಅಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ಹುಳಿಯಾರು ಠಾಣೆಯ ಪಿಎಸೈ ಘೋರ್ಪಡೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹುಳಿಯಾರು : ಕಳೆದೆರಡು ದಿನದಿಂದ ಮಳೆ ರಸ್ತೆ ಬದಿ ಗುಂಡಿಗೊಟರಲ್ಲಿ ನೀರು

           ಹೋಬಳಿ ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಿಂದ ಮಳೆಯಾಗುತ್ತಿದ್ದು, ಬುಧವಾರ ರಾತ್ರಿ ಉತ್ತಮ ಹದಮಳೆಯಾಗಿದೆ. ಕಳೆದ ಎರಡು ತಿಂಗಳಿಂದ ಮಳೆಯ ಅವಕೃಪೆಯಿಂದಾಗಿ ರೈತರು ಬಿತ್ತನೆಗಾಗಿ ಪರದಾಡುವಂಥ ಸ್ಥಿತಿ ನಿರ್ಮಾಣವಾಗಿತ್ತು. ಹುಳಿಯಾರು ಹೋಬಳಿ ವ್ಯಾಪಿಯಲ್ಲಿ ಕಳೆದೆರಡು ದಿನದಿಂದ ಬಿದ್ದ ಮಳೆಯಿಂದಾಗಿ ಹೊಯ್ಸಳಕಟ್ಟೆ ಸಮೀಪ ರಸ್ತೆ ಬದಿಯಲ್ಲಿ ನೀರು ನಿಂತಿರುವುದು.            ಕಳೆದೆರಡು ದಿನಗಳಿಂದ ಮಳೆ ಸಿಂಚನವಾಗುತ್ತಿದೆ ಆದರೆ ಈಗಾಗಲೇ ರಾಗಿ ಮತ್ತಿತರ ಧಾನ್ಯಗಳ ಬಿತ್ತನೆ ಸಮಯವಾಗಿದ್ದು , ಈಗಾಗಲೇ ಸೋನೆ ಮಳೆಗೆ ಬಿತ್ತನೆ ಮಾಡಿದ್ದ ರಾಗಿ ಮತ್ತಿತರ ಪೈರುಗಳಿಗೆ ಜೀವಬಂದಂತಾಗಿದೆ. ಬಿತ್ತನೆ ಮಾಡದೆ ಉಳಿದಿರುವ ರೈತರು ಈಗ ಬಂದಿರುವ ಮಳೆಗೆ ಬಿತ್ತನೆ ಮಾಡಬೇಕೆ ಬೇಡವೇ ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ. ಕೆಲ ಅನುಭವದ ರೈತರ ಪ್ರಕಾರ ಉತ್ತರೆ ಮಳೆಯವರೆಗೂ ಸಹ ಬಿತ್ತನೆ ಮಾಡಬಹುದು. ಆದರೆ ಹಿಂಗಾರಿನಲ್ಲಿ ಮಳೆ ನಡೆಸಬೇಕು ಎಂದು ಅಭಿಪ್ರಾಯ ಪಡುತ್ತಾರೆ. ಕಳೆದ ಎರಡು ತಿಂಗಳಿಂದ ಮಳೆಯಿಲ್ಲದೆ ಭೂಮಿಯ ಕಾವು ಹೆಚ್ಚಾಗಿದ್ದು, ಈಗ ಬಂದ ಮಳೆಗೆ ಭೂಮಿ ಸ್ವಲ್ಪಮಟ್ಟಿಗೆ ತಂಪಾಗಿದೆ.             ಬುಧವಾರ ರಾತ್ರಿ ಉತ್ತಮ ಮಳೆಯಾಗಿದ್ದು ಹೋಬಳಿಯ ಹೊಯ್ಸಳಕಟ್ಟೆ ಭಾಗದಲ್ಲಿ 67.6 ಮೀ.ಮೀ. ಹುಳಿಯಾರು ಭಾಗದಲ್ಲಿ 64.4 ಮೀ.ಮೀ , ಸಿಂಗದಹಳ್ಳಿ ಭಾಗದಲ್ಲಿ 12.6 ಮೀಮೀ ಮಳೆಯಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರ

ಆರಣ್ಯ ಇಲಾಖೆಯವರ ನಿರ್ಲಕ್ಷವೇ ಕರಡಿ ದಾಳಿಗೆ ಕಾರಣ : ಸ್ಥಳಿಯರ ದೂರು

                   ಹುಳಿಯಾರುಹೋಬಳಿ ಕೆಂಕೆರೆ ಗ್ರಾಮದ ಹೊನ್ನಯ್ಯನಪಾಳ್ಯದ ಉಮಾಶಂಕರ್ ಕರಡಿ ದಾಳಿಗೆ ಬಲಿಯಾಗುವುದಕ್ಕೆ ಆರಣ್ಯ ಇಲಾಖೆಯವರ ನಿರ್ಲಕ್ಷವೇ ಕಾರಣವೆಂದು ಸ್ಥಳಿಯರು ದೂರಿದ್ದಾರೆ.                ಕಳೆದ ತಿಂಗಳು ಹೊನ್ನಯ್ಯನ ಪಾಳ್ಯದ ತೋಟವೊಂದರ ಪಂಪ್ ಹೌಸ್ ಗುಂಡಿಗೆ ಕರಡಿ ಹಾಗೂ ಎರಡು ಕರಡಿ ಮರಿ ಬಿದಿದ್ದು , ಅವುಗಳನ್ನು ಹಿಡಿದು ಆರಣ್ಯಕ್ಕೆ ಬಿಡುವಂತೆ ಆರಣ್ಯ ಇಲಾಖೆಯವರಿಗೆ ತಿಳಿಸಿದ್ದರೂ ಸಹ ಅವುಗಳನ್ನು ಹಿಡಿಯದೆ ಗುಂಡಿಯಿಂದ ಹೊರಗಡೆ ಓಡಿಸಿದ್ದರು ಅಷ್ಟೆ. ಅದಾದ ಒಂದು ವಾರದೊಳಗಾಗಿ ಅವೇ ಕರಡಿಗಳು ಇದೇ ಊರಿನ ಸ್ವಾಮಿ ಎಂಬಾತನನ್ನು ಪರಚಿ ಗಾಯಗೊಳಿಸಿದ್ದವು. ಆಗ ಇಲಾಖೆಯವರಿಗೆ ತಿಳಿಸಿದಾಗ ಕರಡಿಯನ್ನು ಹಿಡಿಯುವುದಾಗಿ ತಿಳಿಸಿ ಒಂದು ಬೋನ್ ತಂದಿಟ್ಟಿದ್ದರು. ಅದರಲ್ಲಿ ದೊಡ್ಡ ಕರಡಿ ಬೀಳುವ ಬದಲು ಮರಿಕರಡಿ ಬಿದ್ದಿತ್ತು. ಆದರೆ ತಾಯಿ ಕರಡಿ ಮಾತ್ರ ಬಿದ್ದಿರಲಿಲ್ಲ. ಬೋನಿಗೆ ಬಿದ್ದಿದ್ದ ಮರಿಕರಡಿಯನ್ನು ಇಲ್ಲಿಂದ ತೆಗೆದುಕೊಂಡು ಹೋಗಿದ್ದನ್ನು ಬಿಟ್ಟರೆ ಮತ್ತೆ ಇದುವರೆಗೂ ಬೋನು ತಂದಿಟ್ಟಿಲ್ಲ. ತಾಯಿ ಕರಡಿ ಮರಿಯನ್ನು ಕಳೆದು ಕೊಂಡು ಗಾಸಿಯಾಗಿದ್ದು ಸಿಕ್ಕಿದವರ ಮೇಲೆ ದಾಳಿ ಮಾಡುತ್ತಿದೆ ಇದಕ್ಕೆಲ್ಲಾ ಆರಣ್ಯ ಇಲಾಕೆಯವರ ನಿರ್ಲಕ್ಷವೇ ಕಾರಣವೆಂದು ಚಿದಾನಂದ್ ಆರೋಪಿಸಿದರು. ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಹೊನ್ನಯ್ಯನ ಪಾಳ್ಯದ ತೋಟದಲ್ಲಿ ಕರಡಿ ದಾಳಿ ಬಲಿಯಾದ ಉಮಾಶಂಕರ್ ಪತ್ನಿ ಬಸಮ್ಮ ಅವರಿಗೆ ಸರ್ಕಾದವತಿಯಿಂ

ಕರಡಿ ದಾಳಿಗೆ ಬಲಿಯಾದ ವ್ಯಕ್ತಿ

ಹುಳಿಯಾರು  ಹೋಬಳಿ ಕೆಂಕೆರೆ ಗ್ರಾಮದ ಹೊನ್ನಯ್ಯನಪಾಳ್ಯದ ತೋಟದಲ್ಲಿ ವ್ಯಕ್ತಿಯೊಬ್ಬ ಕರಡಿ ಬಾಯಿಗೆ ತುತ್ತಾದ ದುರ್ಘಟನೆ ಗುರುವಾರ ಬೆಳಿಗ್ಗೆ 8.30 ರ ಸಮಯದಲ್ಲಿ ಜರುಗಿದೆ. ಅಲ್ಲದೆ ಇದಕ್ಕೂ ಮೊದಲು ಸಮೀಪದ ಬರದಲೇಪಾಳ್ಯದ ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿ ಅವರನ್ನೂ ಸಹ ಗಾಯಗೊಳಿಸಿದೆ. ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಹೊನ್ನಯ್ಯನ ಪಾಳ್ಯದ ತೋಟದಲ್ಲಿ ಕರಡಿ ದಾಳಿಗೆ ಬಲಿಯಾದ ಉಮಾಶಂಕರ್   ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಹೊನ್ನಯ್ಯನ ಪಾಳ್ಯದ ತೋಟದಲ್ಲಿ ಕರಡಿ ದಾಳಿ ನಡೆದ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸಿ.ಬಿ.ಸುರೇಶ್ ಬಾಬು, ಡಿಎಫ್.ಓ ಅಮರ್ ನಾಥ್ ಮೃತರ ಕುಟುಂಬದವರಿಗೆ ಸಾಂತ್ವಾನ ಹೇಳಿದರು.                         ಹೊನ್ನಯ್ಯನಪಾಳ್ಯದ ಉಮಾಶಂಕರ್ (45) ಕರಡಿ ಕೈಗೆ ಸಿಕ್ಕಿ ಸಾವನಪ್ಪಿದ ವ್ಯಕ್ತಿ. ಈತ ಎಂದಿನಂತೆ ಮನೆಯ ಸಮೀಪದ ತೋಟಕ್ಕೆ ಹೋಗಿ ಕಡ್ಡಿ ಸಿಗಿಯುವಾಗ ಬರದಲೇ ಪಾಳ್ಯದ ಕಡೆಯಿಂದ ಬಂದ ಕರಡಿ ಇತನ ಮೇಲೆ ದಾಳಿ ಮಾಡಿದ್ದು, ಮುಖ,ಪಕ್ಕೆಲುಬು,ಎದೆ,ತಲೆಯ ಭಾಗವನ್ನು ಕಿತ್ತುಹಾಕಿದ್ದು, ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದೇ ದಿನ ಬೆಳಿಗ್ಗೆ ಬರದಲೇ ಪಾಳ್ಯದ ನಿವೃತ್ತ ಶಿಕ್ಷಕ ಚನ್ನಪ್ಪ ಎಂಬುವರ ಮೇಲೆಯೂ ಸಹ ದಾಳಿ ಮಾಡಿ ಅವರ ತಲೆಯ ಭಾಗವನ್ನು ಪರಚಿ ಗಾಯಗೊಳಿಸಿದೆ ನಂತರ ಅಲ್ಲೇಯಿದ್ದ ರೈತರು ಕರಡಿ ಕೈಯಿಂದ ಅವರನ್ನು ಬಿಡಿಸಿ ಕರಡಿಯನ್ನು ಗುಡ್ಡದಕಡೆ ಅಟ್ಟಿದ್ದಾರೆ, ಗಾಬರಿಗೊಂಡಿದ್ದ ಕರಡಿ ಹೊ

ಒತ್ತಾಯಕ್ಕೆ ಆಚರಿಸಿದ ದೇವರಾಜು ಜಯಂತಿ

            ಇಲ್ಲಿನ ಗ್ರಾ.ಪಂ.ಯಲ್ಲಿ ಸಾರ್ವಜನಿಕರ ಒತ್ತಾಯದ ನಂತರ ಡಿ.ದೇವರಾಜು ಅರಸು ಜಯಂತಿಯನ್ನು ಮಧ್ಯಾಹ್ನದ ನಂತರ ಆಚರಿಸಲಾಯಿತು. ಡಿ.ದೇವರಾಜು ಅರಸು ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮ ಹೌದೋ ಅಲ್ಲವೋ ಎಂಬ ಗೊಂದಲದಲ್ಲಿದ್ದ ಗ್ರಾ.ಪಂ.ಯವರು ಆಚರಣೆಗೆ ಮುಂದಾಗಿರಲಿಲ್ಲ. ಆದರೆ ಕೆಲ ಸಂಘ ಸಂಸ್ಥೆಯವರು ಹಾಗೂ ಸಾರ್ವಜನಿಕರು ಅರಸು ಜಯಂತಿಯನ್ನು ಆಚರಿಸದಿರುವ ಬಗ್ಗೆ ಆಕ್ಷೇಪಿಸಿದ ನಂತರ ಅಧ್ಯಕ್ಷೆ ಕಾಳಮ್ಮನವರು ಇದ್ದ ಮೂವರು ಸಿಬ್ಬಂದಿಯವರೊಂದಿಗೆ ಅರಸುರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಆಚರಿಸಿದರು. ಹುಳಿಯಾರು ಗ್ರಾ.ಪಂ.ಯಲ್ಲಿ ಆಚರಿಸಲಾದ ಅರಸು ಜಯಂತಿಯಲ್ಲಿ ಅಧ್ಯಕ್ಷೆ ಕಾಳಮ್ಮ ಹಾಗೂ ಸಿಬ್ಬಂದಿಯವರು.           ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಪಿಡಿಓ ಕಛೇರಿ ಕಾರ್ಯ ನಿಮಿತ್ತ ತಾವು ಕೋರ್ಟ್ ಗೆ ಹಾಜರಾಗಿದ್ದು ಸಿಬ್ಬಂದಿಗೆ ಆಚರಿಸುವಂತೆ ಸೂಚಿಸಿದ್ದೆ . ನನ್ನ ಗೈರು ಹಾಜರಿಯಲ್ಲಿ ಆಚರಣೆಗೆ ಮುಂದಾಗದಿರುವುದೆ ಸಮಸ್ಯೆಗೆ ಕಾರಣವಾಗಿದೆ ಎಂದರು. ಗ್ರಾ.ಪಂ.ಸದಸ್ಯ ಗಂಗಾಧರ್ ಮಾತನಾಡಿ ಎಲ್ಲಾ ನೇತಾರರ ಹಬ್ಬ ಹರಿದಿನಗಳನ್ನು ಆಚರಿಸುವಂತೆ ಸೂಚನೆ ನೀಡಲಾಗಿದ್ದರೂ ಈ ಬಗ್ಗೆ ಯಾರೊಬ್ಬರೂ ಗಮನ ಹರಿಸಿಲ್ಲ ಮುಂದಿನ ದಿನಗಳಲ್ಲಿ ಯಾವೊಂದು ಲೋಪವಾಗದಂತೆ ಎಚ್ಚರವಹಿಸುವುದಾಗಿ ತಿಳಿಸಿದರು.

ಫೋಟೋ ಗ್ರಾಫರ್ ಸಂಘದಿಂದ ವಿಶ್ವ ಛಾಯಾಗ್ರಾಹಕರ ದಿನಾಚರಣೆ

          ಹುಳಿಯಾರು  ಹೋಬಳಿ ಛಾಯಾಚಿತ್ರ ಸಂಘಕ್ಕೆ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದು , ಅಧ್ಯಕ್ಷರಾಗಿ ರಾಜೇಶ್ವರಿ ಸ್ಟುಡಿಯೋದ ಗಂಗಾಧರ್, ಗೌರವಾಧ್ಯಕ್ಷರಾಗಿ ಅಂಬಿಕಾ ಸ್ಟುಡಿಯೋದ ತಾಂಡವಾಚಾರ್, ಉಪಾಧ್ಯಕ್ಷರಾಗಿ ಭೈರವೇಶ್ವರ ಸ್ಟುಡಿಯೋದ ಚಂದ್ರಶೇಖರ್, ಕಾರ್ಯದರ್ಶಿಯಾಗಿ ಅಂಬಿಕಾ ಸ್ಟುಡಿಯೋದ ಸುದರ್ಶನಾಚಾರ್ , ಖಜಾಂಜಿಯಾಗಿ ಎಸ್.ಬಿ.ಸ್ಟುಡಿಯೋದ ದುರ್ಗರಾಜ್ ಆಯ್ಕೆಯಾಗಿದ್ದಾರೆ. ಹುಳಿಯಾರಿನ ಛಾಯಾಗ್ರಾಹಕರ ಸಂಘದವತಿಯಿಂದ ವಿಶ್ವಛಾಯಾಗ್ರಾಹಕ ದಿನದ ಅಂಗವಾಗಿ ಲಿಂಗಪ್ಪನ ಪಾಳ್ಯದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸಲಾಯಿತು.             ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗಂಗಾಧರ್ ಅವರ ನೇತೃತ್ವದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಪುಸ್ತಕವಿತರಿಸುವ ಮೂಲಕ ವಿಶ್ವಛಾಯಾಗ್ರಾಹಕದರ ದಿನವನ್ನು ಬುಧವಾರದಂದು ಆಚರಿಸಲಾಯಿತು. ಹೋಬಳಿಯ ಲಿಂಗಪ್ಪನ ಪಾಳ್ಯ ಹಾಗೂ ವಳಗೆರೆಹಳ್ಳಿಯ ಸರ್ಕಾರಿ ಶಾಲೆಯ 70ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೋಟ್ ಬುಕ್ ,ಪೆನ್ನು,ವಿತರಿಸಿದರು.ಈ ಸಂದರ್ಭದಲ್ಲಿ ರಘು,ರವಿ,ಮೋಹನ್,ಕೆಂಕೆರೆ ಮಂಜುನಾಥ,ಶಿವು,ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವೇಷಭೂಷಣ ಸ್ಪರ್ಧೆ

           ಹುಳಿಯಾರು  ಪಟ್ಟಣದ ವಾಸವಿ ವಿದ್ಯಾಸಂಸ್ಥೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಯುಕೆಜಿ ಹಾಗೂ ಎಲ್.ಕೆ.ಜಿ ಮಕ್ಕಳಿಗಾಗಿ ಗುರುವಾರದಂದು ವೇಷಭೂಷಣ ಸ್ಪರ್ಧೆ ನಡೆಸಿ, ಬಹುಮಾನ ವಿತರಿಸಲಾಯಿತು. ಹುಳಿಯಾರಿನ ವಾಸವಿ ಶಾಲೆಯಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿಯಲ್ಲಿ ಕೃಷ್ಣನ ವೇಷ ತೊಟ್ಟ ಚಿಣ್ಣರು.               ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಟಿ.ಆರ್.ಲಕ್ಷ್ಮಿಕಾಂತ್ ಮಾತನಾಡಿ , ಪ್ರತಿಯೊಂದು ಹಬ್ಬಕ್ಕು ಅದರದ್ದೇ ಆದ ಮಹತ್ವವಿದ್ದು ಅವುಗಳನ್ನು ಆಚರಿಸುವ ಮುಖಾಂತರ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಪರಿಚಯ ಮಾಡಿಕೊಡಬೇಕೆಂದರು. ಇಂತಹ ಆಚರಣೆಯಿಂದ ಮಕ್ಕಳಲ್ಲಿ ಆತ್ಮಸ್ಥರ್ಯ ವೃದ್ಧಿಸುತ್ತದೆ , ಎಲ್ಲಾ ಶಾಲೆಗಳಲ್ಲೂ ಇಂತಹ ಆಚರಣೆಗಳನ್ನು ನಡೆಸಬೇಕಿದೆ ಎಂದರು.           ಸ್ಪರ್ಧೆಯಲ್ಲಿ ಎಲ್.ಕೆ.ಜಿ ವಿಭಾಗದಲ್ಲಿ ಕೃಷ್ಣ ವೇಷದಲ್ಲಿ ನವ್ಯಶ್ರೀ ಪ್ರಥಮ, ಪೂಜಾಲಕ್ಷ್ಮಿ ದ್ವಿತೀಯ , ರಾಧೆ ವೇಷದಲ್ಲಿ ಖುಷಿ ಪ್ರಥಮ ,ಪ್ರಕೃತಿ ದ್ವಿತೀಯ ಸ್ಥಾನ ಪಡೆದರೆ,ಯುಕೆಜಿ ವಿಭಾಗದಲ್ಲಿ ಕೃಷ್ಣ ವೇಷದಲ್ಲಿ ನಾಗದರ್ಶನ ಪ್ರಥಮ, ಯಶವಂತ್ ದ್ವಿತೀಯ, ರಾಧೆ ವೇಷದಲ್ಲಿ ವರ್ಷಿಣಿ ಪ್ರಥಮ, ಇಂದುಶ್ರೀ ದ್ವಿತೀಯ ಸ್ಥಾನಪಡೆದಿದ್ದಾರೆ. ಸಂಸ್ಥೆಯ ಬಿ.ವಿ.ಶ್ರೀನಿವಾಸ್, ಎಂ.ಆರ್.ಗೋಪಾಲ್ ಮಾತನಾಡಿದರು. ನಾಗಲಕ್ಷ್ಮಿ,ಶೈಲಜಾ ರಮೇಶ್ ತೀರ್ಪುಗಾರರಾಗಿದ್ದು, ಮುಖ್ಯ ಶಿಕ್ಷಕರಾದ ರಮೇಶ್,ಮಹೇಶ್ ಉಪಸ್ಥಿತರಿದ್ದು, ಶಿಕ

ದೀನ ದಲಿತ ಬಂಧು ಡಿ.ದೇವರಾಜ ಅರಸ್ : ಅಧ್ಯಕ್ಷ ರಾಮಣ್ಣ

          ಡಿ.ದೇವರಾಜ್ ಅರಸ್ ಅವರು ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ಸಮುದಾಯದವರ ಅಭಿವೃಧ್ದಿಗಾಗಿ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ರೂಪಿಸುವ ಮೂಲಕ ಹಿಂದುಳಿದ , ದೀನದಲಿತ ವರ್ಗಗಳನ್ನು ಸಮಾಜಮುಖಿಗೆ ಬರುವಂತೆ ಮಾಡಿದ ಮಹಾನ್ ವ್ಯಕ್ತಿ ಎಂದು ಡಿ.ದೇವರಾಜ್ ಅರಸ್ ಸಹಕಾರ ಸಂಘದ ಅಧ್ಯಕ್ಷ ಬಡಗಿ ರಾಮಣ್ಣ ತಿಳಿಸಿದರು. ಹುಳಿಯಾರಿನ ಡಿ.ದೇವರಾಜ ಅರಸು ಪತ್ತಿನ ಸಹಕಾರಸಂಘದಲ್ಲಿ ಗುರುವಾರದಂದು ಡಿ.ದೇವರಾಜ ಅರಸ್ ಅವರ 99ನೇ ಜನ್ಮ ದಿನಾಚರಣೆ ಆಚರಿಸಲಾಯಿತು.              ಪಟ್ಟಣದ ಡಿ.ದೇವರಾಜ ಅರಸು ಪತ್ತಿನ ಸಹಕಾರಸಂಘದಲ್ಲಿ ಗುರುವಾರದಂದು ಡಿ.ದೇವರಾಜ ಅರಸ್ ಅವರ 99ನೇ ಜನ್ಮ ದಿನೋತ್ಸವದಲ್ಲಿ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿ ಅವರು ಮಾತನಾಡಿದರು.ಅರಸುರವರು ಬಡವರ ಏಳ್ಗೆಯನ್ನೇ ಮುಖ್ಯವಾಗಿಸಿಕೊಂಡಿದ್ದ ಹಾಗೂ ಹಿಂದುಳಿದ ವರ್ಗಗಳಿಗೆ ಸಮಾಜದಲ್ಲಿ ಒಂದು ಉತ್ತಮ ಸ್ಥಾನ ಕಲ್ಪಿಸುವ ನಿಟ್ಟಿನಲ್ಲಿ ಸಾಗಿದವರಾಗಿದ್ದಾರೆ ಎಂದರು. ಅರಸುರವರ ಪರಿಕಲ್ಪನೆಯಡಿ ಹಿಂದುಳಿದ ವರ್ಗದವರಿಗೆ ಬಡವರಿಗೆ, ದೀನದಲಿತರಿಗೆ , ಬ್ಯಾಂಕ್ ಮೆಟ್ಟಿಲು ಹತ್ತದವರಿಗೆ ಸಹಕಾರ ನೀಡುವ ಉದ್ದೇಶದಿಂದ ಪಟ್ಟಣದಲ್ಲಿ ದೇವರಾಜ ಅರಸು ಪತ್ತಿನ ಸಹಕಾರಸಂಘ ಸ್ಥಾಪಿಸಲಾಗಿದ್ದು , ಎರಡು ವರ್ಷಗಳಿಂದ 35 ಲಕ್ಷ ರೂ ವಹಿವಾಟು ನಡೆಸಲಾಗಿದೆ ಹಾಗೂ ಸಾಲ ಸೌಲಭ್ಯ ಒದಗಿಸಲಾಗಿದೆ ಎಂದರು.          ಗ್ರಾ.ಪಂ.ಸದಸ್ಯ ಗಂಗಣ್ಣ ಮಾತನಾಡಿ , ಸರಳ,ಸಜ್ಜನಿಕೆಯ ವ

ಸ್ವಾತಂತ್ರ್ಯೋತ್ಸವ

ಹುಳಿಯಾರಿನ ಯೋಗಿನಾರಾಯಣ ಐಟಿಐ ಕಾಲೇಜಿನಲ್ಲಿ ಪ್ರಾಂಶುಪಾಲ ಬಸವರಾಜು ಅವರ ನೇತೃತ್ವದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಸಂಸ್ಥೆಯವರು ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.

ಅರಸ್ ಭಾವ ಚಿತ್ರಕ್ಕೆ ಇನ್ನಿಲ್ಲದ ಬೇಡಿಕೆ

          ಮಾಜಿ ಮುಖ್ಯಮಂತ್ರಿ ಪರಿವರ್ತನೆಯ ಹರಿಕಾರ ದಿ.ದೇವರಾಜ್ ಅರಸ್ ಅವರ 99ನೇ ಜನ್ಮದಿನ ಈ ಬಾರಿ ಎಲ್ಲಾ ಶಾಲಾಕಾಲೇಜ್ ಗಳಲ್ಲಿ ಆಚರಿಸಲಾಗುತ್ತಿದೆ.ಶಾಲಾ ಹಬ್ಬಗಳ ಆಚರಣೆ ಪಟ್ಟಿಯಲ್ಲಿ ಇದೇ ಪ್ರಥಮ ಬಾರಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ದೇವರಾಜ್ ಅರಸ್ ಅವರ ಜನ್ಮದಿನ ಆಚರಣೆ ಸೇರ್ಪಡೆಯಾಗಿದ್ದು ಮೊನ್ನೆಯಷ್ಟೆ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಮುಗಿದಿದ್ದು ನಾಳಿನ ಅರಸ್ ಅವರ ಜನ್ಮದಿನ ಆಚರಣೆಗೆ ಶಾಲಾ ಆಡಳಿತ ಮಂಡಳಿ ಸಜ್ಜಾಗುತ್ತಿದೆ. ನಿನ್ನೆಯಿಂದ ಅರಸ್ ಅವರ ಭಾವಚಿತ್ರಕ್ಕೆ ಬೇಡೆಕೆಯಿದ್ದು ಫೋಟೊ ಅಂಗಡಿಗಳ ಮುಂದೆ ಶಾಲಾಶಿಕ್ಷಕರೆ ತುಂಬಿದ್ದಾರೆ. ಹುಳಿಯಾರಿನ ಸಿದ್ದರಾಮೇಶ್ವರ ಫ್ರೇಮ್ ವರ್ಕ್ಸ್ ನಲ್ಲಿ ಭರದಿಂದ ವ್ಯಾಪಾರವಾಗುತ್ತಿರುವ ದೇವರಾಜ್ ಅರಸ್ ಭಾವಚಿತ್ರ             ಇದೇ ಮೊದಲ ಬಾರಿಯಾದ್ದರಿಂದ ಫೋಟೊ ಅಂಗಡಿಯಲ್ಲೂ ಭಾವಚಿತ್ರ ದೊರಕದೆ ಕಡೆಗೆ ಅಂತರ್ಜಾಲದಲ್ಲಿ ದೊರೆಕಿದ ಭಾವಚಿತ್ರವನ್ನು ಫೋಟೊ ಸ್ಟುಡಿಯೋದಲ್ಲಿ ಪ್ರಿಂಟ್ ಹಾಕಿಸುವ ಮೂಲಕ ಸಮಾಧಾನನದ ನಿಟ್ಟುಸಿರು ಬಿಡುತ್ತಿದ್ದಾರೆ.            ಇಲ್ಲಿನ ಸಿದ್ದರಾಮೇಶ್ವರ ಫ್ರೇಮ್ ವರ್ಕ್ಸ್ ನಲ್ಲಿ ರಾತ್ರಿಯವರೆಗೂ ಅರಸ್ ಅವರ ಭಾವಚಿತ್ರಕ್ಕೆ ಕಟ್ಟುಗ್ಲಾಸ್ ಹಾಕುವ ಕೆಲಸ ಬಿಡುವಿಲ್ಲದಂತೆ ಸಾಗಿದೆ.ಮುಂಜಾನೆಯಿಂದ ನೂರಕ್ಕೂ ಹೆಚ್ಚು ಫೋಟೊ ಮಾರಿರುವುದಾಗಿ ಹೇಳುತ್ತಾರೆ ಅಂಗಡಿ ಮಾಲೀಕ ನಾಗರಾಜು.ಮುಂಚಿತವಾಗಿ ಈ ಬಗ್ಗೆ ಹೆಚ್ಚಿನ ಮಾಹಿತಿಯಿದಿದ್ದರೆ ತಮುಳುನಾ

ರಾಗಿ ಬಿತ್ತನೆ ಕುಂಠಿತ : ಮಳೆಯ ಆಶಾಭಾವನೆಯಲ್ಲಿ ರೈತ

           ಹುಳಿಯಾರು  ಹೋಬಳಿಯಲ್ಲಿ ರಾಗಿ ಸಾಂಪ್ರದಾಯಿಕ ಬೆಳೆಯಾಗಿದ್ದು , ಬಹುತೇಕ ರೈತರಿಗೆ ಇದೇ ಜೀವನಾಧಾರವಾಗಿದ್ದು ಮಳೆಯ ಅಭಾವದಿಂದಾಗಿ ಶೇ.38 ರಷ್ಟು ಪ್ರದೇಶದಲ್ಲಿ ಮಾತ್ರ ರಾಗಿ ಬಿತ್ತನೆಯಾಗಿರುವುದು ಆತಂಕದ ಸಂಗತಿಯಾಗಿದೆ. ರೈತರಲ್ಲಿ ಬಿತ್ತನೆಯ ಉತ್ಸಾವೂ ಇಲ್ಲದೆ ಮಳೆಗಾಗಿ ಕಾದುಕೂರುವಂತ ಚಿಂತಾಜನಕ ಸ್ಥಿತಿಯಲ್ಲಿ ನೇಗಿಲಯೋಗಿ ಪರಿತಪಿಸುತ್ತಿದ್ದಾನೆ. ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಹೊಲವೊಂದರಲ್ಲಿ ಸಾಲು ಸಡ್ಡೆ ಮೂಲಕ ರಾಗಿ ಬಿತ್ತನೆಯಲ್ಲಿ ತೊಡಗಿರುವ ರೈತ.               ಸಹಜವಾಗಿ ಜುಲೈ ತಿಂಗಳಿನಿಂದ ಪ್ರಾರಂಭವಾಗುವ ಹಿಂಗಾರು ಆಗಸ್ಟ್ ಅಂತ್ಯದೊಳಗೆ ಹೆಚ್ಚು ಬಿತ್ತನೆಯಾಗಬೇಕು. ಆದರೆ ಹೋಬಳಿ ವ್ಯಾಪ್ತಿಯಲ್ಲಿ ಸಕಾಲದಲ್ಲಿ ಮಳೆಯಾಗದೆ ಹೋಗಿದ್ದರಿಂದ ಆಗಸ್ಟ್ ಅರ್ಧ ತಿಂಗಳು ಕಳೆದರೂ ಸಹ ಅರ್ಧದಷ್ಟು ಸಹ ರಾಗಿ ಬಿತ್ತನೆಯಾಗಿಲ್ಲ. ಕೆಲ ಭಾಗದಲ್ಲಿ ಚದುರಿದ ತುಂತುರು ಮಳೆಯಾಗಿದ್ದರಿಂದ ಆ ಭಾಗದ ರೈತರು ರಾಗಿ ಬಿತ್ತಿದ್ದರೆ , ಇನ್ನುಳಿದ ಭಾಗದಲ್ಲಿ ಹೊಲ ಹದಮಾಡಿಕೊಂಡು ರಾಗಿ ಬಿತ್ತನೆಗೆ ಕಾಯುತ್ತಿದ್ದಾರೆ.                ಕಳೆದ ಪೂರ್ವಮುಂಗಾರು ಪ್ರಾರಂಭದಲ್ಲಿ ಉತ್ತಮ ಮಳೆಯಾಗಿ ರೈತರಲ್ಲಿ ಉತ್ಸಾಹ ತುಂಬಿದ್ದ ಮಳೆ ನಂತರ ದಿನಗಳಲ್ಲಿ ಕೈಕೊಟ್ಟಿದ್ದರಿಂದ ಕೆಲಭಾಗಗಳಲ್ಲಿ ಮಾತ್ರ ಅಲ್ಪಸ್ವಲ್ಪ ಹೆಸರು ಬೆಳೆಯಾಗಿ ಉಳಿದಂತೆ ಬಿತ್ತಿದ ಬೀಜವೂ ಸಹ ದೊರೆಯದ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ನಷ್ಟ ಅನುಭವ

ಅಂಗಡಿಗೆ ನುಗ್ಗಿದ ಲಾರಿ

          ಹುಳಿಯಾರು ಪಟ್ಟಣದ ಯೂಸೂಫ್ ಖಾನ್ ಪೆಟ್ರೋಲ್ ಬಂಕ್ ಎದುರಿನ ರಸ್ತೆ ಬದಿ ನಿಲ್ಲಿಸಿದ್ದ ಲಾರಿಯೊಂದು ಚಲಿಸಿ ಪೆಟ್ಟಿಗೆ ಅಂಗಡಿಯೊಳಕ್ಕೆ ನುಗ್ಗಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಹುಳಿಯಾರಿನ ಯೂಸೂಫ್ ಖಾನ್ ಪೆಟ್ರೋಲ್ ಬಂಕ್ ಎದುರಿನ ಪಎಟ್ಟಿಗೆ ಅಂಗಡಿಗೆ ನುಗ್ಗಿರುವ ಲಾರಿ.             ಹಿರಿಯೂರು ಕಡೆಯಿಂದ ಬಂದ ಲಾರಿಯ ಚಾಲಕ ಟೀ ಕುಡಿಯುವ ಸಲುವಾಗಿ ರಸ್ತೆಯ ಬದಿಯಲ್ಲಿ ಲಾರಿ ನಿಲ್ಲಿಸಿ ಹೋದಾಗ ಈ ಘಟನೆ ಸಂಭವಿಸಿದೆ. ಹ್ಯಾಂಡ್ ಬ್ರೇಕ್ ಹಾಕದೆ ತೆರಳಿದ್ದೆ ಇದಕ್ಕೆ ಕಾರಣವಾಗಿದ್ದು ತಗ್ಗಿನಲ್ಲಿ ನಿಂತಿದ್ದ ಲಾರಿ ಮುಂದಕ್ಕೆ ಚಲಿಸಿದೆ ಕೂಡಲೇ ಗಮನಿಸಿದ ಚಾಲಕ ಲಾರಿಯನ್ನ ಹತ್ತಿ ನಿಯಂತ್ರಿಸುವಷ್ಟರಲ್ಲಿ ಲಾರಿ ಕಟಿಂಹ್ ಶಾಪ್ ನ ಉಜ್ಜಿಕೊಂಡು ಟೀ ಅಂಗಡಿಯ ಮುಂದಿನ ಚಪ್ಪರಕ್ಕೆ ತಾಕಿದೆ. ಅಷ್ಟರಲ್ಲಿ ಚಾಲಕ ನಿಯಂತ್ರಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಚಾಲಕನ ಅಜಾಗರೂಕತೆಯಿಂದ ಈ ಘಟನೆ ಸಂಭವಿಸಿದ್ದು ಯಾರಿಗಾದರು ಪ್ರಾಣಹಾಣಿಯಾಗಿದ್ದರೆ ಗತಿಯೇನು ಎಂದ ಅಂಗಡಿ ಮಾಲೀಕರು ಇದರ ನಷ್ಟ ಭರಿಸಬೇಕೆಂದು ಲಾರಿಯನ್ನು ಠಾಣೆಯಲ್ಲಿಗೆ ತಂದು ನಿಲ್ಲಿಸಿದ್ದಾರೆ.

ರಸ್ತೆ ತುಂಬಾ ಗುಂಡಿ : ದುಸ್ಥರವಾದ ಸಂಚಾರ

        ಹುಳಿಯಾರು ಪಟ್ಟಣದಲ್ಲಿ ಹಾದು ಹೋಗಿರುವ ರಸ್ತೆಗಳೆಲ್ಲಾ ಗುಂಡಿಬಿದ್ದು ವಾಹನಗಳ ಸಂಚಾರ ದುಸ್ಥರವಾಗಿದೆ. ಪಟ್ಟಣದಿಂದ ಶಿರಾ ರಸ್ತೆ, ತಿಪಟೂರು ರಸ್ತೆ, ಹೊಸದುರ್ಗ ರಸ್ತೆ, ಪಂಚನಹಳ್ಳಿ ರಸ್ತೆಗಳೆಲ್ಲಾ ಗುಂಡಿಬಿದ್ದು ಅವ್ಯವಸ್ಥೆಯಾಗಿದ್ದು ನಿತ್ಯ ಸಂಚಾರಕ್ಕೆ ಕಿರಿಕಿಯುಂಟಾಗಿವೆ. ಹುಳಿಯಾರು-ಹೊಸದುರ್ಗ ಮಾರ್ಗದಲ್ಲಿನ ಕೇಶವಾಪುರದ ಹತ್ತಿರ ರಸ್ತೆಯಲ್ಲಿ ಗುಂಡಿಬಿದ್ದಿರುವುದು.              ಕೇಶವಾಪುರ ತಿರುವಿನಲ್ಲಿ , ಬಿ,ಎಚ್,ರಸ್ತೆ ಹಳೆ ಪೋಸ್ಟ್ ಅಫೀಸ್ ಮುಂಭಾಗದಲ್ಲಿ, ಎಪಿಎಂಸಿ ಮುಭಾಗದ, ಮೀಸೆ ರಂಗಪ್ಪನ ಅಂಗಡಿ ಮುಂಭಾಗ, ಗಾಂಧಿಪೇಟೆ ತಿರುವಿನಲ್ಲಿ, ಕೆಂಚಮ್ಮನ ತೋಪಿನ ಬಳಿ, ಮಂಜುನಾಥ ಸಾಮಿಲ್ ಮುಂಭಾಗದಲ್ಲಿರುವ ಪ್ರಾಣಕಂಟಕವಾಗಿರುವ ಗುಂಡಿಯಲ್ಲದೆ , ಯೂಸೂಫ್ ಖಾನ್ ಪೆಟ್ರೋಲ್ ಬಂಕ್ ಮುಂಭಾಗ, ಒಣಕಾಲುವೆ , ಎಪಿಎಂಸಿ ಹೊಟೆಲ್ ನ ಮುಂಭಾಗದ ಸೇತುವೆ ಮೇಲಿನ ದಿಣ್ಣೆ ಆಪಾಯಕ್ಕೆ ಬಾಯ್ತೆರೆದು ನಿಂತಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಸಾಕು ಅನಾಹುತ ಕಟ್ಟಿಟ್ಟಬುತ್ತಿ ಎಂಬಂತಿದೆ.               ಈ ಗುಂಡಿಗಳು ವರ್ಷೊಂಭತ್ತು ಕಾಲವೂ ಇದ್ದೇಯಿದ್ದು ಪಿಡಬ್ಲ್ಯೂಡಿ ಇಲಾಖೆಯವರಾಗಲಿ ಸ್ಥಳೀಯ ಗ್ರಾ.ಪಂ.ನವರಾಗಲಿ ಕಡೆಗೆ ನಿತ್ಯ ಸಂಚರಿಸುವ ವಾಹನ ಸವಾರರೂ ಈ ಬಗ್ಗೆ ಗಮನಕೊಡದಿರುವುದು ಸೋಜಿಗದ ಸಂಗತಿಯಾಗಿದೆ. ರಸ್ತೆಗೆ ಹಾಕಿದ್ದ ಟಾರು ಸಂಪೂರ್ಣವಾಗಿ ಕಿತ್ತು ಹೋಗಿ ದಪ್ಪದಪ್ಪ ಜಲ್ಲಿಯಲ್ಲಾ ಮೇಲೆ ಬಂದಿರುವ ಜೊತೆಗೆ ದೊ

ಕುರಿ ಮೈತೊಳೆಯಲು ಹೋಗಿದ್ದ ಮೂವರು ನೀರು ಪಾಲು

           ಕುರಿ ಮೈತೊಳೆಯಲು ಹೋಗಿದ್ದ ಸಹೋದರರು ಹಾಗೂ ಚಿಕ್ಕಪ್ಪ ಸೇರಿ ಮೂರು ಮಂದಿಯೂ ನೀರುಪಾಲಾದ ದುರ್ಘಟನೆ ಸಮೀಪದ ದೊಡ್ಡಎಣ್ಣೆಗೆರೆಯಲ್ಲಿ ಸೋಮವಾರ ಬೆಳಿಗ್ಗೆ ಘಟಿಸಿದೆ. ಹುಳಿಯಾರು ಸಮೀಪದ ದೊಡ್ಡಎಣ್ಣೆಗೆರೆಯ ಗೌಡನಕಟ್ಟೆಯಲ್ಲಿ ಮುಳುಗಿ ಸಾವನಪ್ಪಿದ ನಾಗರಾಜು, ಪರಮೇಶ, ಮಲ್ಲೇಶ್ . ದುರ್ಘಟನೆ ನಡೆದ ಸ್ಥಳದಲ್ಲಿ ಸೇರಿರುವ ಮೃತರ ಕುಟುಂಬದವರು ಹಾಗೂ ಗ್ರಾಮಸ್ಥರು.             ಮಲ್ಲೇಶ್ (16) ಪರಮೇಶ (17), ದೊಡ್ಡಎಣ್ಣೆಗೆರೆಯ ನಾಗರಾಜು(40), ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಮಲ್ಲೇಶ್ ಹಾಗೂ ಪರಮೇಶ್ ಅಣ್ಣತಮ್ಮಂದಿರಾಗಿದ್ದು ಎಂದಿನಂತೆ ಬೆಳಗಿನಜಾವ ಊರಿನ ಪಕ್ಕದ ಗೌಡನಕಟ್ಟೆಯ ಗುಂಡಿಯೊಂದರಲ್ಲಿ ಕುರಿಗಳ ಮೈತೊಳೆಯಲೆಂದು ತಮ್ಮ 30ಕುರಿಗಳ ಹಿಂಡನ್ನು ಹೊಡೆದುಕೊಂಡು ಹೋಗಿದ್ದಾರೆ. ಕಟ್ಟೆಯಲ್ಲಿ ಇಳಿದು ಕುರಿಗಳ ಮೈತೊಳೆಯುವಾಗ ಮುಂದಕ್ಕೆ ಹೋದ ಕುರಿಯನ್ನು ಹಿಡಿಯಲು ಹೋಗಿ ಮೊದಲು ಮಲ್ಲೇಶ ಕೆಸರಿನಲ್ಲಿ ಸಿಕ್ಕಿಕೊಂಡಿದ್ದಾನೆ. ಅವನನ್ನು ಬಚಾವ್ ಮಾಡಲು ಹೋದ ಅಣ್ಣ ಪರಮೇಶ ನಂತರ ನಾಗರಾಜು ಕೂಡ ನೀರಿನಲ್ಲಿ ಸಿಕ್ಕಿಕೊಂಡಿದ್ದಾರೆ ಕೆಸರಿನ ನೀರಿನಿಂದ ಹೊರಬರಲಾಗದೆ ಮೂವರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ದುರಾದೃಷ್ಟವೆಂಬಂತೆ ಹತ್ತಿರದಲ್ಲಿ ಯಾರೊಬ್ಬರೂ ಇಲ್ಲದಿದ್ದಿದ್ದು ಹಾಗೂ ಈ ಮೂವರಲ್ಲಿ ಯಾರೊಬ್ಬರಿಗೂ ಈಜು ಬಾರದೆಯಿದ್ದಿದ್ದು ಈ ಅವಗಡಕ್ಕೆ ಕಾರಣವಾಗಿದೆ ಎನ್ನಲಾಗಿದೆ. ನಾಗರಾಜು ಎಂಬಾತನಿಗೆ ಹೆಂಡತಿ

ಸ್ವಾತಂತ್ರ್ಯೋತ್ಸವ

ಹುಳಿಯಾರು ಹೋಬಳಿ ಕೆಂಕೆರೆ ಗ್ರಾ.ಪಂ ನಲ್ಲಿ ಅಧ್ಯಕ್ಷೆ ಪೂರ್ಣಿಮಾ ಅವರು ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸಲ್ಲಿಸಿದರು. ಪಿಡಿಓ ಮೆಹಬೂಬ್ ಸಾಬ್, ಉಪಾಧ್ಯಕ್ಷೆ ರೇಣುಖಾ ಹಾಗೂ ಸದಸ್ಯರಿದ್ದಾರೆ. ಹುಳಿಯಾರು ಬಸ್ ನಿಲ್ದಾಣದ ವಂದೇಮಾತರಂ ಆಟೋ ಸ್ಟಾಂಡ್ ನಲ್ಲಿ ಆಟೋ ಚಾಲಕರು ಆಟೋಸ್ಟಾಂಡನ್ನು ಅಲ್ಲಂಕರಿಸಿ ವಿಜೃಂಭಣೆಯಿಂದ ಸ್ವಾತಂತ್ರ್ಯ ದಿನ ಆಚರಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸಿದರು. ಹುಳಿಯಾರಿನ ವಾಸವಿ ಶಾಲಾ ಮಕ್ಕಳು ಎಂಪಿಎಸ್ ಶಾಲಾವರಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜವಂದನೆ ಸಲ್ಲಿಸುತ್ತಿರುವುದು. 

ಅಶ್ವತ್ಥಕಟ್ಟೆ ಮರಕ್ಕೆ ತಾಕುತ್ತಿರುವ ವಿದ್ಯುತ್ ವೈರ್

               ಹುಳಿಯಾರು  ಹೋಬಳಿ ಕೆಂಕೆರೆ ಗ್ರಾಮದ ತೇರು ಬೀದಿಯಲ್ಲಿನ ಗಣೇಶ ದೇವಾಲಯದ ಮುಂಭಾಗದ ಅಶ್ವಥಕಟ್ಟೆಯ ಮರಕ್ಕೆ ವಿದ್ಯುತ್ ತಂತಿ ತಾಕುತಿದ್ದರೂ ಸ್ಥಳೀಯ ಲೈನ್ ಮೆನ್ನಾಗಲಿ , ಬೆಸ್ಕಾಂ ಇಲಾಖೆಯವರಾಗಲಿ ಇತ್ತ ಗಮನಹರಿಸಿಲ್ಲವೆಂದು ಸ್ಥಳೀಯರು ದೂರಿದ್ದಾರೆ. ಹುಳಿಯಾರು ಹೋಬಳಿ ಕೆಂಕೆರೆ ತೇರುಬೀದಿಯಲ್ಲಿನ ಅಶ್ವತ್ಥಕಟ್ಟೆ ಮರಕ್ಕೆ ತಾಗುವಂತಿರುವ ವಿದ್ಯುತ್ ವೈರ್.              ಕೆಂಕೆರೆ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಟಿ.ಸಿ.ಗೆ ಹುಳಿಯಾರಿನಿಂದ ಎಳೆದಿರುವ 11 ಕೆ ಬಿ ಲೈನ್ ಈ ಅಶ್ವತ್ಥಕಟ್ಟೆಯ ಮರಕ್ಕೆ ತಾಗುವಂತಿದೆ ಸ್ವಲ್ಪ ಗಾಳಿ ಬೀಸಿದರೆ ಸಾಕು ವೈರ್ ಮರಕ್ಕೆ ತಾಕುತ್ತಿದೆ. ಈ ಮರದ ನೆರಳಲ್ಲಿ ನಿತ್ಯ ಮಕ್ಕಳು ಆಟವಾಡುವುದಲ್ಲದೆ, ದನಕರುಗಳನ್ನು ಕಟ್ಟುತ್ತಾರೆ ಜನರು ಸಹ ಬಂದು ಕೂರುತ್ತಾರೆ. ಅಲ್ಲದೆ ಮಹಿಳೆಯರು ನಿತ್ಯ ಈ ಅಶ್ವತ್ಥಕಟ್ಟೆಯ ಪೂಜೆಗೆ ಬರುತ್ತಾರೆ . ವಿದ್ಯುತ್ ತಂತಿ ಮರಕ್ಕೆ ತಾಗಿ ಕರೆಂಟ್ ಶಾರ್ಟ್ ಸರ್ಕ್ಯೂಟ್ ಉಂಟಾದರೆ ಹೆಚ್ಚು ಅಪಘಾತ ಸಂಭವಿಸುತ್ತದೆ. ಈ ಬಗ್ಗೆ ಇಲ್ಲಿನ ಲೈನ್ ಮ್ಯಾನ್ ಹಾಗು ಗ್ರಾ.ಪಂ.ನವರಿಗೆ ಸಾಕಷ್ಟು ಬಾರಿ ತಿಳಿಸಿದ್ದರೂ ಇತ್ತ ಗಮಕೊಟ್ಟಿಲ್ಲ ,ಬೆಸ್ಕಾಂನವರು ಶೀಘ್ರವೇ ಇಲ್ಲಿ ಹಾದುಹೋಗಿರುವ ಲೈನನ್ನು ಬೇರೆಕಡೆಗೆ ಸ್ಥಳಾಂತರಿಸಿ ಆಗುವ ಅನಾಹುತಗಳನ್ನು ತಪ್ಪಿಸಬೇಕಿದೆ ಎಂದು ಸ್ಥಳೀಯ ಮಹೇಶ್ ಕೋರುತ್ತಾರೆ.

ಕೃಷ್ಣ ಜನ್ಮಾಷ್ಟಮಿ

                  ಹುಳಿಯಾರು  ಹೋಬಳಿಯ ವಿವಿಧೆಡೆ ಕೃಷ್ಣ ಜನ್ಮಾಷ್ಟಮಿಯನ್ನು ಭಾನುವಾರದಂದು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಪಟ್ಟಣದ ಗ್ರಾ.ಪಂ.ಯಲ್ಲಿ ಅಧ್ಯಕ್ಷೆ ಕಾಳಮ್ಮ ಕೃಷ್ಣಜನ್ಮಾಷ್ಟಮಿಗೆ ಚಾಲನೆ ನೀಡಿ ಮಾತನಾಡಿ ಇಂದು ಲೋಕಕ್ಕೆ ಗೀತೆಯ ಬೆಳಕನ್ನು ನೀಡಿದ ಪರಮ ಪುರುಷ ಶ್ರೀಕೃಷ್ಣ ಹುಟ್ಟಿದ ದಿನವಾಗಿದ್ದು ಇದು ಎಲ್ಲರಿಗೂ ಪರಮ ಪವಿತ್ರ ದಿನ ಎಂದರು. ಪಿಡಿಓ ಅಡವೀಶ್ ಕುಮಾರ್ ಮಾತನಾಡಿ ಕೃಷ್ಣ ಜನ್ಮಾಷ್ಟಮಿಯನ್ನು ಇದೇ ಪ್ರಥಮ ಬಾರಿಗೆ ಸರ್ಕಾರಿ ಹಬ್ಬವಾಗಿ ಆಚರಿಸುತ್ತಿದ್ದು ಮುಂದಿನ ದಿನಗಳಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದರು. ಗ್ರಾ.ಪಂ.ಸದಸ್ಯರಾದ ಅಶೋಕ್ ಬಾಬು, ಗೀತಾಬಾಬು, ಧನುಷ್ ರಂಗನಾಥ್, ಪಟಾಕಿ ಶಿವಣ್ಣ ರಾಘವೇಂದ್ರ ಸೇರಿದಂತೆ ಸಿಬ್ಬಂದಿವರ್ಗದವರು ಹಾಜರಿದ್ದರು. ಹುಳಿಯಾರು ಗ್ರಾ.ಪಂ.ಯಲ್ಲಿ ಅಧ್ಯಕ್ಷೆ ಕಾಳಮ್ಮ ಅವರ ನೇತೃತ್ವದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಹುಳಿಯಾರು ಹೋಬಳಿ ಜೋಡಿ ತಿರುಮಲಾಪುರದ ವೇಣುಗೋಪಾಲ ದೇವಾಲಯದಲ್ಲಿ ಜನ್ಮಾಷ್ಟಮಿ ಅಂಗವಾಗಿ ಕೃಷ್ಣನನ್ನು ಅಲಂಕರಿಸಿರುವುದು.                  ಜೋಡಿ ತಿರುಮಲಾಪುರದ ವೇಣುಗೋಪಾಲ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿಶೇಷ ಪೂಜೆ ನಡೆಯಿತು. ಕೃಷ್ಣಶಾಸ್ತ್ರಿ , ಅರ್ಚಕ ಶ್ರೀಕಂಠ ನೇತೃತ್ವದಲ್ಲಿ ಮಹಾನ್ಯಾಸ ಪೂರಕ ರುದ್ರಾಭಿಷೇಕ , ಏಕಾವರ ರುದ್ರಾಭಿಷೇಕ,ಪಂಚಾಮೃತಾಭಿಷೇಕ, ಶೋಡಶೋಪಚಾರ ಪೂಜೆ ,ಅಷ್ಟೋತ್ತರ ಪೂಜೆ ನಡೆ

ತುರುವೇಕೆರೆ ಶಾಸಕರ ಹೇಳಿಕೆಗೆ ಖಂಡನೆ

                   ರಾಷ್ಟ್ರೀಯ ಹಬ್ಬವಾದ ಸ್ವಾತಂತ್ರ್ಯೋತ್ಸವದೊಂದು ತುರುವೇಕೆರೆಗೆ ಹೇಮಾವತಿ ನೀರು ಹರಿಸದಿದ್ದಲ್ಲಿ ನಾಲೆಯ ತೂಬು ಹೊಡೆದು ನೀರು ಹರಿಸುತ್ತೇನೆ ಎನ್ನುವಂತ ಆಕ್ರೋಶದ ಮಾತನಾಡಿರುವುದನ್ನು ತಾಲ್ಲೂಕು ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಬಿ.ಎನ್.ಲೋಕೇಶ್ ಖಂಡಿಸಿದ್ದಾರೆ.             ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹನೀಯರ ಸ್ಮರಿಸುವ ಬದಲು ನೀರಿನ ವಿಚಾರ ಪ್ರಸ್ತಾಪಿಸಿ ರೈತರನ್ನು ಉದ್ರೇಕಿಸುವಂತ ಪ್ರಚೋದಾತ್ಮಕವಾಗಿ ಮಾತನಾಡಿರುವ ಶಾಸಕ ಎಂ.ಟಿ.ಕೃಷ್ಣಪ್ಪನವರ ವರ್ತನೆ ಖಂಡನೀಯ. ಸ್ವಾತಂತ್ರ್ಯೋತ್ಸವ ಸಂದೇಶ ನೀಡುವ ಭರದಲ್ಲಿ ಕೇವಲ ನೀರಿನ ರಾಜಕೀಯ ವಿಷಯ ಪ್ರಸ್ತಾಪಿಸಿ ಜಿಲ್ಲಾ ಸಚಿವರ ವಿರುದ್ದ ಹರಿಹಾಯ್ದಿರುವುದು ಶಾಸಕರ ಸ್ಥಾನಕ್ಕೆ ತರವಲ್ಲ ಎಂದರು. ಜವಬ್ದಾರಿ ಸ್ಥಾನದಲ್ಲಿರುವ ನಾಯಕರ ಮಾತುಗಳು ಮತ್ತೊಬ್ಬರಿಗೆ ಮಾರ್ಗದರ್ಶಕವಾಗಿರಬೇಕೆ ಹೊರತು ಪ್ರಚೋದನಾತ್ಮಕವಾಗಿರಬಾರದು , ಹಬ್ಬ ಹರಿದಿನಗಳಲ್ಲಿ ಏನು ಮಾತನಾಡಬೇಕು ಎಂಬುದನ್ನು ಅರಿತು ಮಾತನಾಡಲಿ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹುಳಿಯಾರಿನ ವಿವಿಧಡೆ ಸ್ವಾತಂತ್ರ್ಯ ದಿನಾಚರಣೆ

          ಈ ಬಾರಿ ಪಟ್ಟಣದೆಲ್ಲಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ ಕಂಡುಬಂತು ಶಾಲಾಮಕ್ಕಳಿಂದ ಹಿಡಿದು ಆಟೋಚಾಲಕರು , ಸಾರ್ವಜನಿಕರೂ ಸಹ ಹೆಚ್ಚಿನದಾಗಿ ಪಾಲ್ಗೊಂಡಿದ್ದರು. ಹುಳಿಯಾರು ಪಟ್ಟಣದ ಬಸ್ ನಿಲ್ದಾಣದ ವಂದೇಮಾತರಂ ಆಟೋ ಸ್ಟಾಂಡ್ ನ ಚಾಲಕರು ಸಂಭ್ರಮದಿಂದ ಸ್ವಾತಂತ್ರೋತ್ಸವ ಆಚರಿಸಿದರು.                ಪಟ್ಟಣದ ಗಾಂಧಿಭವದ ಆವರಣದಲ್ಲಿ ಬುಧವಾರ ಮಧ್ಯರಾತ್ರಿ ಡಾ|| ಯತೀಶ್ವರ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಧ್ವಜಾರೋಹಣ ನಡೆಯುವ ಮೂಲಕ ಚಾಲನೆ ಕಂಡು ಮುಂಜಾನೆ ಬೀದಿಬೀದಿಯಲ್ಲೂ ಆಚರಣೆ ಕಂಡುಬಂತು. ಬಸ್ ನಿಲ್ದಾಣದಲ್ಲಿ ವಂದೆಮಾತರಂ ಆಟೋ ಸ್ಟಾಂಡ್ , ಮ್ಯಾಕ್ಸಿಕ್ಯಾಬ್ ಚಾಲಕರ ಸಂಘ , ರಾಂಗೋಪಾಲ್ ಸರ್ಕಲ್ ನ ಹಾಗೂ ರಾಜ್ ಕುಮಾರ್ ರಸ್ತೆಯ ಆಟೋ ಸ್ಟಾಂಡ್, ವಿಜೃಂಭಣೆಯಿಂದ ಆಚರಿಸಿದರು . ಕರವೇಯಿಂದ ಕರವೇ ವೃತ್ತದಲ್ಲಿ, ಪೋಲಿಸ್ ಠಾಣೆಯಲ್ಲಿ , ಬೆಸ್ಕಾಂ,ಅಂಚೆಕಛೇರಿ, ಬ್ಯಾಂಕ್ , ಯೋಗಿನಾರಾಯಣ ಐಟಿಐ, ಆಂಜನೇಯಸ್ವಾಮಿ ದೇವಾಲಯ ಸರ್ಕಲ್ ನಲ್ಲಿ ಸೇರಿದಂತೆ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಅದ್ದೂರಿ ಆಚರಣೆ ನಡೆಯಿತು.              ಈ ಸಂದರ್ಭದಲ್ಲಿ ಕರವೇ ಘಟಕದಿಂದ ಜಿಲ್ಲಾಮಟ್ಟದ ಫಾಸ್ಟ್ ಸೈಕಲ್ ರೇಸ್ ನಡೆದರೆ ಕಾಮನಬಿಲ್ಲು ಫೌಂಡೇಶನ್ ವತಿಯಿಂದ ಆಸ್ಪತ್ರೆಯ ರೋಗಿಗಳಿಗೆ ಹಣ್ಣು.ಬ್ರೆಡ್ ವಿತರಿಸಲಾಯಿತು.

ಹುಳಿಯಾರು : ಕರವೇಯಿಂದ ಸೈಕಲ್ ರೇಸ್

    ಹುಳಿಯಾರು ಪಟ್ಟಣದ ಕರ್ನಾಟಕ ರಕ್ಷಣಾ ವೇದಿಕೆವತಿಯಿಂದ 68ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಆಯೋಜಿಸಿದ್ದ ಮೂರನೇ ವರ್ಷದ ಜಿಲ್ಲಾ ಮಟ್ಟದ ಸೈಕಲ್ ರೇಸ್ ಶುಕ್ರವಾರ ಯಶಸ್ವಿಯಾಗಿ ಜರುಗಿತು. ಹುಳಿಯಾರಿನ ಕರವೇವತಿಯಿಂದ ಆಯೋಜಿಸಿದ್ದ ಸೈಕಲ್ ರೇಸ್ ನಲ್ಲಿ ಪ್ರಥಮ ಸ್ಥಾನ ಪಡೆದ ಚಿ.ನಾ.ಹಳ್ಳಿ ಭರತ್ ಗೆ ಬಹುಮಾನವಾಗಿ ಸೈಕಲ್ ವಿತರಿಸಲಾಯಿತು. ಹುಳಿಯಾರಿನ ಕರವೇವತಿಯಿಂದ ಆಯೋಜಿಸಿದ್ದ ಸೈಕಲ್ ರೇಸ್ ನಲ್ಲಿ ದ್ವಿತೀಯ ಸ್ಥಾನಗಳಿಸಿ ಆಕರ್ಷಕ ಟ್ರೋಪಿ ಪಡೆದ ಶ್ರೀನಿವಾಸನಾಯ್ಕ ಮತ್ತು ಎಂ.ನಾಗೇಶ್ . ಹುಳಿಯಾರು ಪೋಲಿಸ್ ಠಾಣೆಯ ಸರ್ಕಲ್ ನಿಂದ ಪ್ರಾರಂಭವಾದ ಸೈಕಲ್ ರೇಸ್ ಗೆ ಕಿರುತೆರೆ ಕಲಾವಿದ ರಂಗನಾಥ್ ಚಾಲನೆ ನೀಡಿದರು. ರೇಸ್ ನಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು 20 ಕಿಮೀ ದೂರದ ಸಾಲ್ಕಟೆ ಕ್ರಾಸ್ ವರೆಗೆ ಹೋಗಿ ವಾಪಸ್ಸ್ ಪಟ್ಟಣದ ಕರವೇ ವೃತ್ತಕ್ಕೆ ಬರಬೇಕಾಗಿತ್ತು. ಒಟ್ಟು ಇಪ್ಪತ್ತು ಸ್ಪರ್ಧಿಗಳು ಸ್ಪರ್ಧಿಸಿದ್ದು 13 ಮಂದಿ ಮಾತ್ರ ಸ್ಪರ್ಧೆಯನ್ನು ಸಂಪೂರ್ಣವಾಗಿ ಮುಗಿಸಿ ಬಹುಮಾನಕ್ಕೆ ಬಾಜನರಾಗಿದ್ದಾರೆ..             ವಿಜೇತರಾದವರು : ಚಿ.ನಾ. ಹಳ್ಳಿ ಭರತ್ ಪ್ರಥಮ ಸ್ಥಾನಗಳಿಸಿ ಸೈಕಲನ್ನು ಬಹುಮಾನವಾಗಿ ಪಡೆದರೆ , ಹುಳಿಯಾರಿನ ಶ್ರೀನಿವಾಸನಾಯ್ಕ ಮತ್ತು ಎಂ.ನಾಗೇಶ್ ದ್ವಿತೀಯ ಹಾಗೂ ಸ್ವಾಮಿ ತೃತೀಯ ಸ್ಥಾನದೊಂದಿಗೆ ಆಕರ್ಷಕ ಟ್ರೋಪಿ ಪಡೆದಿದ್ದಾರೆ. ದಿನೇಶ್ ಗೆ 4 ನೇಬಹುಮಾನವಾಗಿ ಮೊಬೈಲ್ ಹ್ಯಾಂಡ್ ಸೆಟ್, ಡ್

ಅಂಗವಿಕಲನ ದೇಶಭಕ್ತಿ

ಹುಳಿಯಾರು ಪಟ್ಟಣದಲ್ಲಿ ಅಂಗವಿ ಕಲ ವ್ಯಕ್ತಿಯೊಬ್ಬ ತನ್ನ ತ್ರಿಚಕ್ರ ಸೈಕಲ್ ಗೆ ತ್ರಿವರ್ಣಧ್ವಜ ಕಟ್ಟಿಕೊಂಡು ಸ್ವಾತಂತ್ರ್ಯದಿನ ಸಂಭ್ರಮಿಸಿದ್ದು ಹೀಗೆ...........

ಇವರಿಗಿಲ್ಲವೇ ಸ್ವಾತಂತ್ರ್ಯ

ದೇಶದೆಲ್ಲೆಡೆ ಮುಂಜಾನೆ ಸ್ವಾತಂತ್ರ್ಯದಿನದ ಸಂಭ್ರಮದಲ್ಲಿದ್ದರೆ ಹುಳಿಯಾರಿನಲ್ಲಿ ಪೌರಕಾರ್ಮಿಕನೊಬ್ಬ ಇದರ ಪರಿವೇ ಇಲ್ಲದೆ ಎಂದಿನಂತೆ ತನ್ನ ಕಾಯದಲ್ಲಿ ತೊಡಗಿಕೊಂಡಿದ್ದು ಕಂಡುಬಂದಿದ್ದು ಹೀಗೆ.......

ಹುಳಿಯಾರು: ಅರೆಬೆತ್ತಲೆ ಪಂಜಿನ ಮೆರವಣಿಗೆ ಮೂಲಕ ಹಕ್ಕೊತ್ತಾಯ

          ಸ್ವತಂತ್ರ ಬಂದು 67 ವರ್ಷ ಕಳೆದರೂ ದಲಿತರಿಗೆ ಸಿಗಬೇಕಾದ ಸವಲತ್ತುಗಳು ಸರಿಯಾಗಿ ಅನುಷ್ಟಾನಗೊಳ್ಳದೆ ವಂಚಿತಗೊಳ್ಳುತಿದ್ದಾರೆಂದು ಎಂದು ದಲಿತ ಸಹಾಯವಾಣೆ ತಾಲ್ಲೂಕ್ ಅಧ್ಯಕ್ಷ ಹನುಮಂತಪ್ಪ ಆರೋಪಿಸಿದರು           ದಲಿತರ ಸಮಸ್ಯೆಗಳಿಗೆ ಜಿಲ್ಲಾ ಆಡಳಿತ ಹಾಗೂ ತಾಲೂಕು ಆಡಳಿತ ಸ್ಪಂದಿಸದೇ ಇರುವುದನ್ನು ಖಂಡಿಸಿ ಈ ಬಾರಿಯ ಸ್ವಾತಂತ್ರ್ಯೋತ್ಸವನ್ನು ಬಹಿಷ್ಕರಿಸಿ ಬುಧವಾರ ರಾತ್ರಿ ಅರೆಬೆತ್ತಲೆ ಹಾಗೂ ಪಂಜಿನ ಮೆರವಣಿಗೆ ಹಮ್ಮಿಕೊಂಡು ಅವರು ಮಾತನಾಡಿದರು. ದಲಿತ ಸಹಾಯವಾಣೆ ಹಾಗೂ ಅಲೆಮಾರಿ ಬುಡಕಟ್ಟು ಮಹಾಸಭಾದಿಂದ ಪಂಜಿನ ಮೆರವಣಿಗೆ ನಡೆಸಿ ಉಪತಹಸಿಲ್ದಾರ್ ಸತ್ಯನಾರಾಯಣ್ ಅವರಿಗೆ ಮನವಿ ಪತ್ರ ಸಲ್ಲಿಸಿದರು           ಶತಮಾನಗಳಿಂದಲೂ ಆರ್ಥಿಕವಾಗಿ ಶೋಷಣೆಗೊಳಗಾಗಿರುವ ದಲಿತ ಸಮುದಾಯಕ್ಕೆ ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಇದುವರೆವಿಗೂ ಪರಿಶಿಷ್ಟ ಜಾತಿ, ವರ್ಗದವರಿಗೂ ಸವಲತ್ತುಗಳನ್ನು ವಿತರಿಸುವಲ್ಲಿ ವಿಫಲವಾಗಿವೆ. ಇದುವರೆಗೂ ಸಹ ದಲಿತರ ಬದುಕು ಹಸನಾಗಿಲ್ಲ,ಅಲೆಮಾರಿ ಸಮುದಾಯಗಳಿಗೆ ನೆಲೆಸಿಕ್ಕಿಲ್ಲ,ದಲಿತ ವಿದ್ಯಾವಂತರು ಪದವಿ ಪಡೆದು ಉದ್ಯೋಗವಿಲ್ಲದೆ ಪಡುತ್ತಿರುವ ಯಾತನೆ ನಿಜಕ್ಕೂ ಸ್ವಾತಂತ್ರ್ಯದ ಬದುಕಿಗೆ ಹಿಡಿದ ಕನ್ನಡಿಯಾಗಿದೆ.ಅಂಬೇಡ್ಕರ್ ನಿಗಮದ ಗಂಗಾಕಲ್ಯಾಣ ಯೋಜನೆ ,ಸಾಲಯೋಜನೆಗಳು ಅರ್ಹ ಫಲಾನುಭವಿಗಳಿಗೆ ದಕ್ಕದೆ ಅನ್ಯರ ಪಾಲಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರದ ಕಣ್ಣು ತೆರೆಸುವ ಅಗತ್ಯವಿದೆ ಎಂ

ಕೆಂಕೆರೆ ಡೈರಿಯಲ್ಲಿ ಸ್ವಾತಂತ್ರ್ಯ ದಿನ

ಹುಳಿಯಾರು ಹೋಬಳಿ ಕೆಂಕೆರೆಯ ನಂದಿನಿ ಹಾಲುಉತ್ಪಾದಕರ ಸಂಘದ ಅಧ್ಯಕ್ಷ ಚನ್ನಬಸವಯ್ಯ ನೇತೃತ್ವದಲ್ಲಿ ಸ್ವಾತಂತ್ರ್ಯ ದಿನ ಆಚರಿಸಿದರು.