ಬಾಣಂತಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ ದಬ್ಬಗುಂಟೆಯ ಗ್ರಾಮಸ್ಥರು ಹಾಗೂ ಆಕೆಯ ಕುಟುಂಬದವರು ಗುರುವಾರ ಮಧ್ಯಾಹ್ನ ಪಟ್ಟಣದ ಸ್ಪಂದನ ನರ್ಸಿಂಗ್ ಹೋ ನಲ್ಲಿ ಬಾಣಂತಿಯ ಶವವಿಟ್ಟು ಪ್ರತಿಭಟಿಸಿದ್ದಾರೆ.
ವಿವರ: ಸೌಂದರ್ಯ (20) ಎಂಬಾಕೆಯನ್ನು ಹೆರಿಗೆಂದು ಕಳೆದ 6 ರ ಬುಧವಾರ ರಾತ್ರಿ ಹತ್ತಿರದ ದಬ್ಬಗುಂಟೆ ಗ್ರಾಮದಿಂದ ಪಟ್ಟಣದ ಸ್ಪಂದನ ನರ್ಸಿಂಗ್ ಹೋಂ ಗೆ ಕರೆತರಲಾಗಿತ್ತು . ಹೆರಿಗೆ ನೋವುಬಾರದೆ ಹೆರಿಗೆ ಮಾಡುವುದಿಲ್ಲ ಎಂದು ಹೇಳಿದ ವೈದ್ಯರು ಗುರುವಾರ ಬೆಳಗಿನ ಜಾವ ಶಸ್ತ್ರಚಿಕಿತ್ಸೆ ಮೂಲಕ ಡಿಲಿವರಿ ಮಾಡಿ, ಹೆಣ್ಣುಮಗು ಹಾಗೂ ಬಾಣಂತಿಯನ್ನು ಆರು ದಿನಗಳಕಾಲ ನರ್ಸಿಂಗ್ ಹೋಂ ನಲ್ಲಿ ಇರಬೇಕೆಂದು ಹೇಳಿ ದಾಖಲು ಮಾಡಿಕೊಂಡು ಚಿಕಿತ್ಸೆ ಮುಂದುವರಿಸಿದ್ದಾರೆ. ಆದರೆ ಮೂರ್ನಾಲ್ಕು ದಿನದ ತರುವಾರ ಬಾಣಂತಿಗೆ ಸ್ಪಲ್ಪ ಕೆಮ್ಮು ಕಾಣಿಸಿಕೊಂಡಾಗ ಕಫಕಟ್ಟಿಕೊಂಡಿದೆ ಇದೇನು ಸಮಸ್ಯೆಯಲ್ಲ ಎಂದು ಹೇಳಿದ್ದಾರೆ. ಆದರೆ ನಿನ್ನೆ ಬುಧವಾರ ಬೆಳಿಗ್ಗೆ ಆಕೆಯ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಕೂಡಲೇ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿ ಖುದ್ದಾಗೆ ತಾವೆ ಅಂಬ್ಯೂಲೆನ್ಸ್ ವ್ಯವಸ್ಥೆ ಮಾಡಿ ಬೆಂಗಳೂರಿಗೆ ಕಳುಹಿಸಿದ್ದಾರೆ. ವಾಣಿವಿಲಾಸ ಆಸ್ಪತ್ರೆಯಲ್ಲಿ ಈಗಾಗಲೇ ತಡವಾಗಿದೆ ಎಂದು ವಾಪಸ್ಸ್ ಕಳುಹಿಸಿದ್ದರಿಂದ ಕೂಡಲೇ ದಾಸರಹಳ್ಳಿ ಖಾಸಗಿ ನರ್ಸಿಂಗ್ ಹೋಂಗೆ ದಾಖಲು ಮಾಡಿತಾದರೂ ಮುಂಜಾನೆ ವೇಳೆಗೆ ಬಾಣಂತಿ ಅಸುನೀಗಿದ್ದಾರೆ.
ಅಳಲು : ಮಗುವನ್ನು ಬಿಟ್ಟು ಮಡಿದ ಬಾಣಂತಿಯ ಸಾವಿಗೆ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು. ಚಿಕಿತ್ಸೆ ಸಾಧ್ಯವಿಲ್ಲವೆಂದು ಮುಂಚಿತವಾಗಿ ತಿಳಿಸಿದ್ದಲ್ಲಿ ಹೇಗಾದರು ಮಾಡಿ ಬದುಕಿಸಿಕೊಳ್ಳುತ್ತಿದ್ದೆವು. ಚಿಕಿತ್ಸೆಗೆ ನಿರ್ಲಕ್ಷ ತೋರಿದ ವೈದ್ಯರೇ ನನ್ನ ಮಗಳ ಸಾವಿಗೆ ಕಾರಣ ಎಂದು ಬಾಣಂತಿಯ ತಾಯಿ ಉಮಾದೇವಿ ಹಾಗೂ ಪತಿ ಮುನಿರಾಜ್ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದ ದೃಶ್ಯ ಮನಕರಗುವಂತಿತ್ತು .
ಆಕ್ರೋಶ : ಬಾಣಂತಿಗೆ ಸರಿಯಾಗಿ ಚಿಕಿತ್ಸೆ ನೀಡದೆ ಸುಮ್ಮನೆ ಹಣದಾಸೆಗಾಗಿ ಆಕೆಯನ್ನು ನರ್ಸಿಂಗ್ ಹೋಂನಲ್ಲಿ ಆಡ್ಮಿಟ್ ಮಾಡಿಕೊಂಡು ಕೊನೆಗಳಿಗೆಯಲ್ಲಿ ಈ ರೀತಿ ಬೇರೆಡೆಗೆ ಕಳುಹಿಸಿರುವುದು ವೈದ್ಯರ ಬೇಜವಬ್ದಾರಿಯನ್ನು ತೋರಿಸುತ್ತದೆ .ಈ ಸಾವಿಗೆ ನರ್ಸಿಂಗ್ ಹೋಂ ನ ವೈದ್ಯರೇ ಕಾರಣರಾಗಿದ್ದು ಅದರ ಹೊಣೆಯನ್ನು ಅವರೆ ಹೊರಬೇಕು ಹಾಗೂ ನಮಗೆ ನ್ಯಾಯ ಸಿಗಬೇಕೆಂದು ಬಾಣಂತಿಯ ಕುಟುಂಬದವರು ಸೇರಿದಂತೆ ಗ್ರಾಮಸ್ಥರು ಪಟ್ಟು ಹಿಡಿದು ನರ್ಸಿಂಗ್ ಹೋಂ ಒಳಗೆ ಬಾಣಂತಿಯ ಶವವನಿಟ್ಟು ಪ್ರತಿಭಟಿಸಿದರು.
ಇಷ್ಟೆಲ್ಲಾ ನಡೆಯುತ್ತಿದ್ದರೂ ಸಹ ನರ್ಸಿಂಗ್ ಹೋಂ ವೈದ್ಯರು ಬಾರದೆ ಜವಬ್ದಾರಿ ಉತ್ತರ ನೀಡುವವರೂ ಕಾಣದಿದ್ದು ಪ್ರತಿಭಟನಾಕಾರರನ್ನು ಕೆರಳುವಂತೆ ಮಾಡಿತ್ತು , ಸಂಜೆಯಾದರೂ ಗ್ರಾಮಸ್ಥರು ಅಲ್ಲಿಂದ ಕದಲದೆ ಅಲ್ಲೇ ಮೊಕ್ಕಾಂ ಹೂಡಿದ್ದು , ಗ್ರಾಮಗಳಿಂದ ತಂಡವಾಗಿ ಜನರು ಬರುತ್ತಲೇ ಇದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು ಹೆಚ್ಚಿನ ಯಾವುದೇ ರೀತಿಯ ಅನಾಹುತ ಸಂಭವಿಸದಂತೆ ನರ್ಸಿಂಗ್ ಹೋಂನ ಸುತ್ತಾ ಬಿಗಿ ಪೊಲೀಸ್ ಪಹರೆಯನ್ನು ಹಾಕಲಾಗಿದ್ದು , ಸಂಜೆಯಾದರೂ ಶವವನ್ನು ನರ್ಸಿಂಗ್ ಹೋಂ ನಲ್ಲೇ ಬಿಡಲಾಗಿದ್ದು ಪರಿಸ್ಥಿತಿ ಬಿಗಡಾಯಿಸಿದೆ.
ಬಾಣಂತಿ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣವೆಂದು ನರ್ಸಿಂಗ್ ಹೋಂ ಮುಂದೆ ಗ್ರಾಮಸ್ಥರು ಜಮಾಯಿಸಿರುವುದು. |
ವಿವರ: ಸೌಂದರ್ಯ (20) ಎಂಬಾಕೆಯನ್ನು ಹೆರಿಗೆಂದು ಕಳೆದ 6 ರ ಬುಧವಾರ ರಾತ್ರಿ ಹತ್ತಿರದ ದಬ್ಬಗುಂಟೆ ಗ್ರಾಮದಿಂದ ಪಟ್ಟಣದ ಸ್ಪಂದನ ನರ್ಸಿಂಗ್ ಹೋಂ ಗೆ ಕರೆತರಲಾಗಿತ್ತು . ಹೆರಿಗೆ ನೋವುಬಾರದೆ ಹೆರಿಗೆ ಮಾಡುವುದಿಲ್ಲ ಎಂದು ಹೇಳಿದ ವೈದ್ಯರು ಗುರುವಾರ ಬೆಳಗಿನ ಜಾವ ಶಸ್ತ್ರಚಿಕಿತ್ಸೆ ಮೂಲಕ ಡಿಲಿವರಿ ಮಾಡಿ, ಹೆಣ್ಣುಮಗು ಹಾಗೂ ಬಾಣಂತಿಯನ್ನು ಆರು ದಿನಗಳಕಾಲ ನರ್ಸಿಂಗ್ ಹೋಂ ನಲ್ಲಿ ಇರಬೇಕೆಂದು ಹೇಳಿ ದಾಖಲು ಮಾಡಿಕೊಂಡು ಚಿಕಿತ್ಸೆ ಮುಂದುವರಿಸಿದ್ದಾರೆ. ಆದರೆ ಮೂರ್ನಾಲ್ಕು ದಿನದ ತರುವಾರ ಬಾಣಂತಿಗೆ ಸ್ಪಲ್ಪ ಕೆಮ್ಮು ಕಾಣಿಸಿಕೊಂಡಾಗ ಕಫಕಟ್ಟಿಕೊಂಡಿದೆ ಇದೇನು ಸಮಸ್ಯೆಯಲ್ಲ ಎಂದು ಹೇಳಿದ್ದಾರೆ. ಆದರೆ ನಿನ್ನೆ ಬುಧವಾರ ಬೆಳಿಗ್ಗೆ ಆಕೆಯ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಕೂಡಲೇ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿ ಖುದ್ದಾಗೆ ತಾವೆ ಅಂಬ್ಯೂಲೆನ್ಸ್ ವ್ಯವಸ್ಥೆ ಮಾಡಿ ಬೆಂಗಳೂರಿಗೆ ಕಳುಹಿಸಿದ್ದಾರೆ. ವಾಣಿವಿಲಾಸ ಆಸ್ಪತ್ರೆಯಲ್ಲಿ ಈಗಾಗಲೇ ತಡವಾಗಿದೆ ಎಂದು ವಾಪಸ್ಸ್ ಕಳುಹಿಸಿದ್ದರಿಂದ ಕೂಡಲೇ ದಾಸರಹಳ್ಳಿ ಖಾಸಗಿ ನರ್ಸಿಂಗ್ ಹೋಂಗೆ ದಾಖಲು ಮಾಡಿತಾದರೂ ಮುಂಜಾನೆ ವೇಳೆಗೆ ಬಾಣಂತಿ ಅಸುನೀಗಿದ್ದಾರೆ.
ಅಳಲು : ಮಗುವನ್ನು ಬಿಟ್ಟು ಮಡಿದ ಬಾಣಂತಿಯ ಸಾವಿಗೆ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು. ಚಿಕಿತ್ಸೆ ಸಾಧ್ಯವಿಲ್ಲವೆಂದು ಮುಂಚಿತವಾಗಿ ತಿಳಿಸಿದ್ದಲ್ಲಿ ಹೇಗಾದರು ಮಾಡಿ ಬದುಕಿಸಿಕೊಳ್ಳುತ್ತಿದ್ದೆವು. ಚಿಕಿತ್ಸೆಗೆ ನಿರ್ಲಕ್ಷ ತೋರಿದ ವೈದ್ಯರೇ ನನ್ನ ಮಗಳ ಸಾವಿಗೆ ಕಾರಣ ಎಂದು ಬಾಣಂತಿಯ ತಾಯಿ ಉಮಾದೇವಿ ಹಾಗೂ ಪತಿ ಮುನಿರಾಜ್ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದ ದೃಶ್ಯ ಮನಕರಗುವಂತಿತ್ತು .
ಬಾಣಂತಿ ಸಾವಿಗೆ ಹುಳಿಯಾರಿನ ನರ್ಸಿಂಗ್ ಹೋಂ ನ ವೈದ್ಯರ ನಿರ್ಲಕ್ಷವೇ ಕಾರಣವೆಂದು ನರ್ಸಿಂಗ್ ಹೋಂ ಗೆ ಮತ್ತೆ ಬಾಣಂತಿ ಶವ ತಂದಿಟ್ಟಿರುವುದು. |
ಇಷ್ಟೆಲ್ಲಾ ನಡೆಯುತ್ತಿದ್ದರೂ ಸಹ ನರ್ಸಿಂಗ್ ಹೋಂ ವೈದ್ಯರು ಬಾರದೆ ಜವಬ್ದಾರಿ ಉತ್ತರ ನೀಡುವವರೂ ಕಾಣದಿದ್ದು ಪ್ರತಿಭಟನಾಕಾರರನ್ನು ಕೆರಳುವಂತೆ ಮಾಡಿತ್ತು , ಸಂಜೆಯಾದರೂ ಗ್ರಾಮಸ್ಥರು ಅಲ್ಲಿಂದ ಕದಲದೆ ಅಲ್ಲೇ ಮೊಕ್ಕಾಂ ಹೂಡಿದ್ದು , ಗ್ರಾಮಗಳಿಂದ ತಂಡವಾಗಿ ಜನರು ಬರುತ್ತಲೇ ಇದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು ಹೆಚ್ಚಿನ ಯಾವುದೇ ರೀತಿಯ ಅನಾಹುತ ಸಂಭವಿಸದಂತೆ ನರ್ಸಿಂಗ್ ಹೋಂನ ಸುತ್ತಾ ಬಿಗಿ ಪೊಲೀಸ್ ಪಹರೆಯನ್ನು ಹಾಕಲಾಗಿದ್ದು , ಸಂಜೆಯಾದರೂ ಶವವನ್ನು ನರ್ಸಿಂಗ್ ಹೋಂ ನಲ್ಲೇ ಬಿಡಲಾಗಿದ್ದು ಪರಿಸ್ಥಿತಿ ಬಿಗಡಾಯಿಸಿದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ