ವಿಷಯಕ್ಕೆ ಹೋಗಿ

ನಾಗಪ್ಪನಿಗೆ ಕಿಚುಡಿ, ಹುಳ್ಸೊಪ್ಪು ಸಾರು ನೈವೇದ್ಯ

ನಾಗಪ್ಪನಿಗೆ ಕಿಚುಡಿ, ಹುಳ್ಸೊಪ್ಪು ಸಾರು ನೈವೇದ್ಯ
                                                         -------------------
ಯಾರೊಬ್ಬರು ತಪ್ಪಿಸದ ನಾಗರು ಆಚರಣೆ

                                                            --------
ಗ್ರಾಮೀಣ ಭಾಗದಲ್ಲಿ ವರ್ಷವಿಡಿ ಅನೇಕ ರೀತಿಯ ಹಬ್ಬಗಳ ಆಚರಣೆ ರೂಢಿಯಲಿದ್ದು ಇಲ್ಲಿ ಯಾವುದೇ ಹಬ್ಬವನ್ನು ಆಚರಿಸದಿದ್ದರೂ ಸಹ ನಾಗರು ಪೂಜೆಯನ್ನು ಕಡ್ಡಾಯವಾಗಿ ಆಚರಿಸುವುದು ರೂಢಿಯಲ್ಲಿದೆ. ಅಂದು ಕುಟುಂಬದವರು ಎಲ್ಲೆ ಇದ್ದರೂ ಸಹ ತಮ್ಮ ಸ್ವಸ್ಥಳಗಳಿಗೆ ಆಗಮಿಸಿ ಕುಟುಂಬದವರೆಲ್ಲಾ ಒಟ್ಟಾಗಿ ಗಣೇಶ ಚತುರ್ಥಿಯಂದು ನಾಗರು ಹಬ್ಬವನ್ನು ತಲೆತಲಾಂತರದಿಂದ ಆಚರಿಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ.

ಗಣೇಶನ ಹಬ್ಬದಂದು ವಿನಾಯಕ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದರ ಜೊತೆಜೊತೆಗೆ ಮಡಿಯಲ್ಲಿ ನಾಗಪ್ಪ ಅಂದರೆ ನಾಗರಕಲ್ಲಿಗೆ ಹಾಲನ್ನೆರೆದು ಪೂಜಿಸುವುದು ಹುಳಿಯಾರು ಪಟ್ಟಣ ಸೇರಿದಂತೆ ಸುತ್ತಮುತ್ತಲ್ಲ ಹಳ್ಳಿಗಳಲ್ಲಿ ತಲೆತಲಾಂತರದಿಂದ ನಡೆದುಕೊಂಡು ಬಂದಿದೆ.

ನಾಗಪ್ಪನ ಪೂಜೆ : ನಾಗಪ್ಪ ಎಂದರೆ ಎಲ್ಲರಲ್ಲೂ ಭಯ, ಭಕ್ತಿ ಹೆಚ್ಚಿದ್ದು ಮಡಿಯಿಂದ ನಾಗಪ್ಪನ ಪೂಜೆ ಮಾಡುವುದು ಇಂದಿಗೂ ನಡೆದುಕೊಂಡು ಬರುತ್ತಿದೆ. ನಾಗಪ್ಪನ ಪೂಜೆಯಲ್ಲಿ ಹಲವು ಬಗೆಬಳಿದ್ದು ಕೆಲವರು ಚೌತಿ ನಾಗರು ಎಂದು ಪೂಜಿಸಿದರೆ, ಮತ್ತೆಕೆಲವರು ಕೂಳೆ ನಾಗರು ಎಂದು ಪೂಜಿಸುತ್ತಾರೆ. ಅಲ್ಲದೆ ಗೌರಿಹಬ್ಬದಲ್ಲಿ ಪೂಜಿಸುವ ನಾಗಪ್ಪ ಹೆಚ್ಚು ವಿಶೇಷವಾಗಿದ್ದು ಹೆಚ್ಚು ಜನ ಈ ಸಮಯದಲ್ಲೇ ನಾಗಪ್ಪನ ಪೂಜೆ ಮಾಡುತ್ತಾರೆ. ಕೆಲವರು ಚಿಗಳಿ,ತಮಟ, ಸೌತೆಕಾಯಿ ನೈವೇದ್ಯ ವಿಟ್ಟು ಪೂಜಿಸಿದರೆ, ಕೆಲವರು ಕಿಚಡಿ,ಹಳ್ಸೋಪ್ಪಿನ ಸಾರನ್ನು ನೈವೇದ್ಯವಿಟ್ಟರೆ, ಮತ್ತೆಕೆಲವರು ರಾಗಿ ಹಿಟ್ಟಿನ ಸೀಕನ್ನು ನೈವೇದ್ಯವಾಗಿಟ್ಟು ಶ್ರದ್ದಾಭಕ್ತಿಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ.
ಕೆಂಕೆರೆಯಲ್ಲಿ ಆಚರಣೆ : ಕೆಂಕೆರೆ ಗ್ರಾಮದ ಮಲ್ಲೇಶಪ್ಪನ ವಂಶಸ್ಥರು,ಉಪ್ಪರಿಗೈಯ್ಯನ ವಂಶಸ್ಥರು ಹಾಗೂ ವೀರಭ್ರಜ್ಜನ ಕುಟುಂಬದವರು ಸೇರಿದಂತೆ ಒಟ್ಟು ಇಪ್ಪತೈದರಿಂದ ಮೂವತ್ತು ಕುಟುಂಬದವರೆಲ್ಲಾ ಒಂದೆಡೆ ಸೇರಿ ನಾಗಪ್ಪನಿಗೆ ಪೂಜೆ ಸಲ್ಲಿಸಿದರು. ಹಿಂದಿನಿಂದ ನಡೆದು ಕೊಂಡು ಬಂದ ಪ್ರತೀತಿಯಂತೆ ನಾಗಪ್ಪನಿಗೆ ಕಿಚುಡಿ, ಹುಳ್ಸೋಪ್ಪಿನ ಸಾರನ್ನು ನೈವೇದ್ಯವಾಗಿ ಇಟ್ಟು ನಾಗರಕಲ್ಲಿಗೆ ಹಾಲನ್ನೆರೆಯುವ ಮೂಲಕ ನಾಗರು ಆಚರಿಸಿದರು.

                    ಗ್ರಾಮದ ಸಿಹಿನೀರು ಬಾವಿ ಸಮೀಪದ ತೋಟವೊಂದರಲ್ಲಿ ಪೂರ್ವಿಕರು ಸ್ಥಾಪಿಸಿದ ನಾಗರಕಲ್ಲಿದ್ದು ಅಲ್ಲಿಗೆ ಈ ಕುಟುಂಬದವರು ಮಡಿಯಿಂದ ಮನೆಯಲ್ಲೇ ಕಿಚುಡಿ,ಹುಳ್ಸೋಪ್ಪು ಸಾರು ಸಿದ್ದ ಮಾಡಿಕೊಂಡು ಬಂದು ಸೇರುತ್ತಾರೆ. ಕುಟುಂಬದ ಎಲ್ಲರೂ ಬಂದು ಸೇರಿದ ನಂತರ ತಾವು ತಂದಿದ್ದ ಕಿಚುಡಿ , ಹುಳ್ಸೋಪ್ಪಿನ ಸಾರನ್ನು ಒಂದು ದೊಡ್ಡ ಪಾತ್ರೆಯಲ್ಲಿ ಹಾಕಿ ಮಿಶ್ರಣ ಮಾಡಿ ನಾಗಪ್ಪನಿಗೆ ಎಡೆಯಾಗಿಟ್ಟು ಪೂಜೆ ಸಲ್ಲಿಸಿ ಹಾಲುತುಪ್ಪವನ್ನೆರೆಯುತ್ತಾರೆ. ಬಂದಿದ್ದ  ಮುತ್ತೈದೆಯರಿಗೆ ಮಡಿಲು ತುಂಬುವ ಕಾರ್ಯ ಮಾಡಿ ನಂತರ ಅಲ್ಲೇ ಎಲ್ಲರೂ ಒಟ್ಟಾಗಿ ಕೂತು ಕಿಚುಡಿ ಊಟ ಮಾಡಿ ನಂತರ ತಮ್ಮ ಮನೆಗಳಿಗೆ ತೆರಳುತ್ತಾರೆ. ಪೂಜೆಯಲ್ಲಿ ಪುರೋಹಿತ ಚನ್ನಬಸವಯ್ಯ,ಸದಾಶಿವಣ್ಣ, ಕುಮಾರಣ್ಣ, ಚನ್ನಬಸವಯ್ಯ,
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಕುಟುಂಬದವರು ನಾಗಪ್ಪನಿಗೆ ಕಿಚುಡಿ ನೈವೇದ್ಯವಿಟ್ಟು ಪೂಜಿಸಿದರು.
ಮಲ್ಲಿಕಣ್ಣ,ಪ್ರಭುಸ್ವಾಮಿ,ಚೇತನ್, ಗಂಗಾಧರ್. ಮಧು ಸೇರಿದಂತೆ ಸುಮಾರು ಇನ್ನೂರಕ್ಕೂ ಹೆಚ್ಚು ಮಂದಿ ಸೇರಿ ಪ್ರಸಾದ ಸ್ವೀಕರಿಸಿದರು.

ಹಬ್ಬದ ಕಡ್ಡಾಯ ಆಚರಣೆ ನೆಪದಲ್ಲಿ ಎಲ್ಲೆಲ್ಲೋ ಇರುವ ಕುಟುಂಬದವರನ್ನೆಲ್ಲಾ ಒಗ್ಗೂಡಿಸುವುದೆ ಈ ಹಬ್ಬದ ವಿಶೇಷ ಎನ್ನಬಹುದಾಗಿದೆ. 
-----------------------------------------------------------
ನಮ್ಮ ತಾತಂದಿರೂ ಸಹ ಇದೇ ರೀತಿ ನಾಗಪ್ಪನಿಗೆ ಕಿಚುಡಿ ಎಡೆ ಇಟ್ಟು ಪೂಜೆ ಮಾಡಿಕೊಂಡು ಬರುತ್ತಿದ್ದರು ಅದನ್ನೇ ತಾವೂ ಸಹ ಈಗ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಇದನ್ನೇನಾದರೂ ಬಿಟ್ಟರೆ ನಮಗೆ ನಾಗರುಹಾಕಿಕೊಂಡು ತೊಂದರೆ ಅನುಭವಿಸಸಬೇಕಾಗುತ್ತದೆ : ಸದಾಶಿವಣ್ಣ , ಕುಟುಂಬದ ಹಿರಿಯ.
--------------------------
ನಾಗಪ್ಪನ ಪೂಜೆ ನಂತರ ಕುಟುಂಬ ಸದಸ್ಯರೆಲ್ಲಾ ಸೇರಿ ಕಿಚಡಿ, ಹುಳ್ಸೊಪ್ಪು ಸಾರಿನ ಊಟ ಸವಿಯುತ್ತಿರುವುದು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...