ವಿಷಯಕ್ಕೆ ಹೋಗಿ

ಬಾವುಟ ಮಾರಾಟ ಬಲು ಜೋರು

             ಸ್ವಾತಂತ್ರ್ಯ ದಿನಾಚರಣೆಗೆ ಕ್ಷಣಗಣನೆ ಆರಂಭವಾಗಿದ್ದು ಪಟ್ಟಣದ ಅಂಗಡಿಗಳಲ್ಲಿ ತ್ರಿವರ್ಣ ಧ್ವಜ ,ಬ್ಯಾಂಡ್,ಟೋಪಿ ,ಟೇಪ್ ಗಳ ಮಾರಾಟ ಭರದಿಂದ ಸಾಗಿದೆ.ಒಂದೆಡೆ ಶಾಲಾಮಕ್ಕಳು ಅಂಗಡಿಗಳ ಮುಂದೆ ಇವುಗಳನ್ನು ಕೊಳ್ಳಲು ಮುಗಿಬಿದಿದ್ದರೆ ಆಟೋ ರಿಕ್ಷಾ ,ವ್ಯಾನ್ ಡ್ರೈವರ್ ಗಳು ಸಹ ವಾಹನಕ್ಕೆ ಕಟ್ಟಲು ಯಾರಿಗೇನೂ ಕಮ್ಮಿಯಿಲ್ಲದಂತೆ ಬಾವುಟಗಳ ಕೊಳ್ಳಲು ಮುಂದಾಗಿದ್ದಾರೆ.
             ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವದ ಸಂದರ್ಭಗಳಲ್ಲಿ ಬಾವುಟಗಳನ್ನು ವಾಹನಗಳಿಗೆ ಕಟ್ಟಿ , ಬಾವುಟ ಚಿತ್ರವಿರುವ ಬ್ಯಾಡ್ಜ್ ದಿರುಸುಗಳಲ್ಲಿ ಧರಿಸಿಕೊಂಡರೆ ಒಂದುರೀತಿಯ ದೇಶಭಕ್ತಿಯ ಭಾವನೆ ಮೂಡುವುದಿದ್ದು ಅದಕ್ಕಾಗೆ ಈ ದಿನಗಳಲ್ಲಿ ರಾಷ್ಟ್ರಧ್ವಜ ಸೇರಿದಂತೆ ವಂದೇ ಮಾತರಂ, ಮೇರಾ ಭಾರತ್ ಮಹಾನ್ ಮುಂತಾದ ರಾಷ್ಟ್ರ ಪ್ರೇಮ ಮೆರೆಯುವ ಬ್ಯಾಡ್ಜ್‌ಗಳ ಬೇಡಿಕೆ ಹೆಚ್ಚು.
ಹುಳಿಯಾರಿನ ಅಂಗಡಿಯೊಂದರಲ್ಲಿ ಮಾರಾಟಕ್ಕೆ ಪ್ರದರ್ಶಿಸಿರುವ ತ್ರಿವರ್ಣ ಬಾವುಟ ಹಾಗೂ ಇನ್ನಿತರ ವಸ್ತುಗಳು .
            ಕಳೆದೆರಡು ವರ್ಷಗಳಿಂದ ಪ್ಲಾಸ್ಟಿಕ್ ಬಾವುಟ ಮಾರಾಟ ಮಾಡುವುದಕ್ಕೆ ನಿಷೇದ ಹೇರಿದ್ದರಿಂದ ಮಾರಾಟವನ್ನೆ ಸ್ಥಗಿತಗೊಳಿಸಿದ್ದಾಗಿ ಹೇಳುತ್ತಾರೆ ಉಮಾಸ್ಟೋರಿನ ಮಾಲಿಕ ಬದರೀಶ್.ಬಾವುಟ ಕೇಳಿ ಬರುವ ಮಕ್ಕಳೂ ಬಾವುಟ ದೊರೆಯದೆ ನಿರಾಶರಾಗಿ ಹೋಗುತ್ತಿದ್ದನ್ನು ಕಂಡು ಮನಸ್ಸು ಕರಗಿ ಮತ್ತೆ ಬಾವುಟ ಮಾರಾಟಕ್ಕೆ ತೊಡಗಿರುವುದಾಗಿ ಅವರು ಹೇಳುತ್ತಾರೆ.ಪ್ಲಾಸ್ಟಿಕ್ ಬಾವುಟಗಳನ್ನು ಮಕ್ಕಳು ಎಲ್ಲೆಂದರಲ್ಲಿ ಬಿಸಾಕಿ ಹೋಗುವದನ್ನು ಮನಗಂಡು ನಿಷೇದಿಸಿದ್ದರಿಂದ ಸಮಸ್ಯೆ ಬಗೆಹರಿಯಲಿಲ್ಲ. ಇದರಿಂದ ಮಕ್ಕಳ ಮನಸ್ಸು ಧ್ವಜಾರೋಹಣದ ನೆಮ್ಮದಿ ಕಾಣದೆ ಮುದುರುತ್ತದೆ.ವರ್ಷವಿಡಿ ಪ್ಲಾಸ್ಟಿಕ್ ಬಳಕೆ ಎಗ್ಗಿಲ್ಲದೆ ನಡೆಯುವಾಗ ಇದೊಂದು ದಿನ ಮಾತ್ರ ನಿಷೇಧಿಸುವುದರಿಂದ ಏನು ಪ್ರಯೋಜನ . ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವದ ಸಂದರ್ಭಗಳಲ್ಲಿ ಬಾವುಟ ಮಾರಾಟವಿದ್ದು ಉಳಿದಂತೆ ಜೋಪಾನಮಾಡಿಡುವುದೆ ದುಸ್ಥರದ ಕೆಲಸವಾಗುತ್ತದೆ ಎನುತ್ತಾರೆ .
ಬಾವುಟಗಳ ಮಾರಾಟ ವರ್ಷದಲ್ಲಿ ಎರಡು ಮೂರು ಬಾರಿ ಮಾತ್ರ ನಡೆಯುವುದಿದ್ದು ಅದೂ ಕೂಡ ಹತ್ತದಿನೈದು ದಿನಗಳು ಮಾತ್ರ ದೊರೆಯುತ್ತದೆ. ಬಟ್ಟೆ ಬಾವುಟ ದುಬಾರಿಯಾಗಿದ್ದು . ಖಾದಿ ಸೇರಿದಂತೆ ಕಾಟನ್, ಪಾಲಿಸ್ಟರ್ ನ ಎಲ್ಲಾ ಅಳತೆಯ,ನಿಗದಿಪಡಿಸಿದ ಬಾವುಟಗಳು ದೊರೆಯುವುದಾದರೂ ಕಡಿಮೆ ಬೆಲೆಯ ಪ್ಲಾಸ್ಟಿಕ್ ಬಾವುಟಗಳಿಗೆ ಬೇಡಿಕೆ ಹೆಚ್ಚು ಆಟೋರಿಕ್ಷಾ,ಬಸ್,ಮ್ಯಾಕ್ಸಿ ಕ್ಯಾಬ್,ಸೈಕಲ್,ಬೈಕ್ ಗಳಿಗೆ ಬಟ್ಟೆ ಬಾವುಟಗಳ ಬೇಡಿಕೆ ಕಂಡು ಬಂದರೆ ಶಾಲಾಮಕ್ಕಳು ಮಾತ್ರ ಪ್ಲಾಸ್ಟಿಕ್ ಬಾವುಟಕ್ಕೆ ಮೊರೆಹೋಗಿದ್ದಾರೆ.
             ನಿಷೇಧ:ಇಂತಹ ದಿನಗಳಂದು ಪ್ಲಾಸ್ಟಿಕ್ ಬಾವುಟಗಳ ಬಳಕೆಮಾಡಿ ನಂತರ ಎಲ್ಲೆಂದರಲ್ಲಿ ಎಸೆದು ಹೋಗುವ ಜನರ ಮನೋಭಾವದಿಂದಾಗಿ ರಾಷ್ಟ್ರಧ್ವಜಕ್ಕೆ ಅವಮಾನಮಾಡಿದಂತಾಗುತ್ತೆದೆ ಎನ್ನುವ ಕಾರಣದಿಂದ ಕಳೆದ ಕೆಲವು ವರ್ಷಗಳಿಂದ ಇವುಗಳನ್ನು ಉಪಯೋಗಿಸದಂತೆ ನಿಷೆಧ ಹೇರಲಾಗಿತ್ತಾದರೂ ಬಳಕೆ ಮಾತ್ರ ದಿನೇ ದಿನೆ ಹೆಚ್ಚುತ್ತಲೇ ಇದೆ .
          ಇನ್ನೇನು ಸ್ವಾತಂತ್ರ್ಯ ದಿನಾಚರಣೆಗೆ ಎಣಿಕೆ ಪ್ರಾರಂಭವಾಗಿದ್ದು ಅಂಗಡಿಗಳವರು ಕೊನೆ ಕ್ಷಣದ ವ್ಯಾಪಾರದ ನೀರಿಕ್ಷೆಯಲ್ಲಿದ್ದಾರೆ.

ಬಾವುಟ ಕೊಳ್ಳುವುದರಿಂದ ದೇಶ ಪ್ರೇಮದ ಮನೋಭಾವ ಉಂಟಾಗುತ್ತದೆ , ನಾನು ಸೇರಿದಂತೆ ಆಟೋಚಾಲಕರ ಸಂಘದಿಂದ ಪ್ರತಿಯೊಬ್ಬರು ಆಟೋಗೆ ಬಾವುಟ ಕಟ್ಟಿ ಸ್ವತಂತ್ರ್ಯ ದಿನವನ್ನು ಆಚರಿಸುತ್ತಿದ್ದೆವೆಂದು ಅಭಿಮಾನದಿಂದ ನುಡಿಯುತ್ತಾರೆ ವಂದೆಮಾತರಂ ಆಟೋ ಚಾಲಕರ ಸಂಘದ ಆಟೋ ಚಾಲಕ ರಂಗಸ್ವಾಮಿ. 



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.