ವಿಷಯಕ್ಕೆ ಹೋಗಿ

ರಾಗಿ ಬಿತ್ತನೆ ಕುಂಠಿತ : ಮಳೆಯ ಆಶಾಭಾವನೆಯಲ್ಲಿ ರೈತ

           ಹುಳಿಯಾರು  ಹೋಬಳಿಯಲ್ಲಿ ರಾಗಿ ಸಾಂಪ್ರದಾಯಿಕ ಬೆಳೆಯಾಗಿದ್ದು , ಬಹುತೇಕ ರೈತರಿಗೆ ಇದೇ ಜೀವನಾಧಾರವಾಗಿದ್ದು ಮಳೆಯ ಅಭಾವದಿಂದಾಗಿ ಶೇ.38 ರಷ್ಟು ಪ್ರದೇಶದಲ್ಲಿ ಮಾತ್ರ ರಾಗಿ ಬಿತ್ತನೆಯಾಗಿರುವುದು ಆತಂಕದ ಸಂಗತಿಯಾಗಿದೆ. ರೈತರಲ್ಲಿ ಬಿತ್ತನೆಯ ಉತ್ಸಾವೂ ಇಲ್ಲದೆ ಮಳೆಗಾಗಿ ಕಾದುಕೂರುವಂತ ಚಿಂತಾಜನಕ ಸ್ಥಿತಿಯಲ್ಲಿ ನೇಗಿಲಯೋಗಿ ಪರಿತಪಿಸುತ್ತಿದ್ದಾನೆ.
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಹೊಲವೊಂದರಲ್ಲಿ ಸಾಲು ಸಡ್ಡೆ ಮೂಲಕ ರಾಗಿ ಬಿತ್ತನೆಯಲ್ಲಿ ತೊಡಗಿರುವ ರೈತ.
              ಸಹಜವಾಗಿ ಜುಲೈ ತಿಂಗಳಿನಿಂದ ಪ್ರಾರಂಭವಾಗುವ ಹಿಂಗಾರು ಆಗಸ್ಟ್ ಅಂತ್ಯದೊಳಗೆ ಹೆಚ್ಚು ಬಿತ್ತನೆಯಾಗಬೇಕು. ಆದರೆ ಹೋಬಳಿ ವ್ಯಾಪ್ತಿಯಲ್ಲಿ ಸಕಾಲದಲ್ಲಿ ಮಳೆಯಾಗದೆ ಹೋಗಿದ್ದರಿಂದ ಆಗಸ್ಟ್ ಅರ್ಧ ತಿಂಗಳು ಕಳೆದರೂ ಸಹ ಅರ್ಧದಷ್ಟು ಸಹ ರಾಗಿ ಬಿತ್ತನೆಯಾಗಿಲ್ಲ. ಕೆಲ ಭಾಗದಲ್ಲಿ ಚದುರಿದ ತುಂತುರು ಮಳೆಯಾಗಿದ್ದರಿಂದ ಆ ಭಾಗದ ರೈತರು ರಾಗಿ ಬಿತ್ತಿದ್ದರೆ , ಇನ್ನುಳಿದ ಭಾಗದಲ್ಲಿ ಹೊಲ ಹದಮಾಡಿಕೊಂಡು ರಾಗಿ ಬಿತ್ತನೆಗೆ ಕಾಯುತ್ತಿದ್ದಾರೆ.
               ಕಳೆದ ಪೂರ್ವಮುಂಗಾರು ಪ್ರಾರಂಭದಲ್ಲಿ ಉತ್ತಮ ಮಳೆಯಾಗಿ ರೈತರಲ್ಲಿ ಉತ್ಸಾಹ ತುಂಬಿದ್ದ ಮಳೆ ನಂತರ ದಿನಗಳಲ್ಲಿ ಕೈಕೊಟ್ಟಿದ್ದರಿಂದ ಕೆಲಭಾಗಗಳಲ್ಲಿ ಮಾತ್ರ ಅಲ್ಪಸ್ವಲ್ಪ ಹೆಸರು ಬೆಳೆಯಾಗಿ ಉಳಿದಂತೆ ಬಿತ್ತಿದ ಬೀಜವೂ ಸಹ ದೊರೆಯದ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ನಷ್ಟ ಅನುಭವಿಸಿದ ರೈತ ಮುಂಗಾರು ಕೈಹಿಡಿಯಲಿಲ್ಲವಾದರೂ ಹಿಂಗಾರಾದರೂ ಕೈಹಿಡಿಯುತ್ತದೆ ಎಂಬ ಆಶಾಭಾವನೆಯಿಂದ ರೈತರು ಬಿತ್ತನೆಯಲ್ಲಿ ತೊಡಗಿದ್ದರೂ ಸಹ ಹೆಚ್ಚಿನ ಉತ್ಸಾಹ ಕಂಡುಬರುತ್ತಿಲ್ಲ.
        ಬಿತ್ತನೆ : ಹುಳಿಯಾರು,ಕೆಂಕೆರೆ,ಕೋರಗೆರೆ,ಯಳನಡು,ಬರಕನಹಾಳ್, ದೊಡ್ಡಬಿದರೆ, ಗಾಣಧಾಳು, ಹೊಯ್ಸಲಕಟ್ಟೆ, ತಿರುಮಲಾಪುರ,ದಸೂಡಿ ಭಾಗದ ಗ್ರಾಮಗಳು ರಾಗಿ ಬಿತ್ತನೆ ಪ್ರದೇಶಗಳಾಗಿವೆ. ಇದುವರೆಗೆ ತಿಮ್ಲಾಪುರ,ಕೋರಗೆರೆ, ದೊಡ್ಡಬಿದರೆ ವ್ಯಾಪ್ತಿಯಲ್ಲಿ ಈಗಾಗಲೇ ಬಿತ್ತನೆಯಾಗಿದ್ದರೆ, ಯಳನಡು ,ಕೆಂಕೆರೆ ಗ್ರಾ.ಪಂ.ಯ ಹಳ್ಳಿಗಳಲ್ಲಿ ಭಾಗಶಃ ಬಿತ್ತನೆಯಾಗಿದೆ. ಇನ್ನುಳಿದ ಭಾಗಗಳ ರೈತರು ಹೊಲಗಳನ್ನು ಹದಮಾಡಿಕೊಂಡು ಮಳೆ ಎದುರು ನೋಡುತ್ತಿದ್ದಾರೆ.
         ಪ್ರಗತಿ : ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು 9500 ಹೆಕ್ಟೇರ್ ರಾಗಿ ಬಿತ್ತನೆ ಪ್ರದೇಶವಿದ್ದು ಅದರಲ್ಲಿ ರಾಗಿ 3635 ಹೆಕ್ಟೇರ್, ಅವರೆ 140 ಹೆಕ್ಟೇರ್, ಜೋಳ 40 ಹೆಕ್ಟೇರ್, ಹುಚ್ಚೆಳ್ಳು 24 ಹೆಕ್ಟೇರ್, ತೊಗರಿ 135 ಹೆಕ್ಟೇರ್,ಸಾಮೆ 12 ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಬಿತ್ತನೆಯಾಗಿದೆ. ಇನ್ನೂ ಅರ್ಧಕ್ಕೂ ಹೆಚ್ಚಿನ ಭಾಗದಲ್ಲಿ ಬಿತ್ತನೆಯಾಗಬೇಕಿದೆ.
         ಪ್ರೋತ್ಸಾಹ : ಕೃಷಿ ಇಲಾಖೆ ವತಿಯಿಂದ ಹೋಬಳಿಯ ಕೆಲ ಗ್ರಾಮಗಳಲ್ಲಿ ರಾಗಿ,ನವಣೆ , ಜಿಪ್ಸಂ,ಬೋರೆಕ್ಸ್ ನಂತಹ ಲಘುಪೋಷಕಾಂಷಗಳನ್ನು ಉಚಿತವಾಗಿ ನೀಡುವ ಮೂಲಕ ಬಿತ್ತನೆಗೆ ಪ್ರೋತ್ಸಾಹ ನೀಡಿದ್ದರೂ ಸಹ ಮಳೆಯಾಗದೆ ಪ್ರಯೋಜನವಾಗಲಿಲ್ಲ.
          ಕುಂಠಿತ : ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಿತ್ತನೆಯಲ್ಲಿ ಸಾಕಷ್ಟು ಕ್ಷೀಣಿಸಿರುವುದಲ್ಲದೆ, ಸರಿಯಾಗಿ ಮಳೆಯಾಗಿರದ ಕಾರಣ ರಾಗಿ ಕೊಳ್ಳಲು ಸಹ ರೈತರು ಮುಂದಾಗದೆ ಸುಮ್ಮನಿದ್ದಾರೆ. ಹಿಂಗಾರು ಬಿತ್ತನೆ ಸೆಪ್ಟಂಬರ್ ಅಂತ್ಯದವರೆಗೂ ಇರುತ್ತದಾರೂ ರಾಗಿ ಬಿತ್ತನೆಗೆ ಜುಲೈ-ಆಗಸ್ಟ್ ತಿಂಗಳು ಸೂಕ್ತವಾಗಿದ್ದು ಈ ಸಮಯದಲ್ಲಿ ಬಿತ್ತನೆಯಾದರೆ ಮಾತ್ರ ಉತ್ತಮ ಇಳುವರಿ ಸಾಧ್ಯವಾಗುತ್ತದೆ . ಇನ್ನೊಂದು ವಾರದಲ್ಲಿ ಮಳೆಯಾಗದಿದ್ದರೆ ರೈತರು ರಾಗಿ ಬದಲು ಜೋಳ, ಹುರುಳಿ ಬಿತ್ತನೆ ಕಡೆ ವಾಲುತ್ತಾರೆ ಎನ್ನುತ್ತಾರೆ ಸಹಾಯಕ ಕೃಷಿ ಅಧಿಕಾರಿ ನೂರುಲ್ಲಾ.

           ನೆನ್ನೆಯಿಂದ ಹೋಬಳಿ ವ್ಯಾಪ್ತಿಯಲ್ಲಿ ಮಳೆಯ ಸೂಚನೆ ಕಾಣುತ್ತಿದ್ದು ಅಲ್ಲಲ್ಲಿ ಬಿದ್ದ ಮಳೆಯಿಂದ ಈಗಾಗಲೇ ಬಿತ್ತಿದ್ದ ರಾಗಿಗೆ ಜೀವಬಂದಂತಾಗಿದ್ದು, ಮೊಳಕೆಗೆ ಸಹಕಾರಿಯಾಗಲಿದೆ. ರಾಗಿ ಬಿತ್ತಿದ್ದ ರೈತರು ಗೊಬ್ಬರ ಹಾಕಲು ಮುಂದಾಗಿದ್ದರೆ , ಇನ್ನೂ ಬಿತ್ತನೆ ಮಾಡದ ರೈತರು ಬಿತ್ತನೆಗೆ ಮುಂದಾಗಿದ್ದು ಕಂಡು ಬಂತು.

ಬಿದಿದ್ದ ಸೋನೆ ಮಳೆಗೆ ರಾಗಿ ಏನೋ ಬಿತ್ತಿದ್ದೆವೂ , ಬಿತ್ತಿದ ಮೇಲೆ ಮಳೇನೆ ಆಗಿಲ್ಲ , ಭೂಮಿಗೆ ಬಿದ್ದ ರಾಗಿಗೆ ನೀರಿನಲ್ಲದೆ ಹುಸಿಯಾಗುವ ಹಂತದಲ್ಲಿತ್ತು ಆದರೆ ನೆನ್ನೆ ರಾತ್ರಿ ಬಂದ ಮಳೆಯಿಂದ ಮೊಳಕೆಯೊಡೆಯಲು ಅನುಕೂಲವಾಗಿದೆ , ಮುಂದೆ ಚೆನ್ನಾಗಿ ಮಳೆ ಬಂದ್ರೆ ಉತ್ತಮ ಇಳುವರಿ ಬರುತ್ತದೆ, ಇಲ್ಲದಿದ್ರೆ ಬಿತ್ತಿದ ಬೀಜವೂ ಸಿಗುವುದಿಲ್ಲ : ಕೃಷಿಕ ಕೆಂಕೆರೆ ಚನ್ನಬಸವಯ್ಯ.

ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಪಾತ್ಯಕ್ಷಿಕೆಯಲ್ಲಿ 45 ಕ್ವಿಂಟಲ್ ಹಾಗೂ ಸಬ್ಸಿಡಿದರಲ್ಲಿ ಈಗಾಗಲೇ 48 ಕ್ವಿಂಟಾಲ್ ರಾಗಿ ಮಾರಾಟ ಮಾಡಿದ್ದು, ಇನ್ನೂ ದಾಸ್ತಾನಿದ್ದರೂ ಸಹ ಮಳೆಯಿಲ್ಲದ ಕಾರಣ ರೈತರು ಬಿತ್ತನೆಗೆ ರಾಗಿ ಕೊಳ್ಳಲು ಬರುತ್ತಿಲ್ಲ , ಸದ್ಯ ಕೆ.ಎಂ.ಆರ್ ತಳಿ ಬಿತ್ತ ಬಹುದಾಗಿದ್ದು ಮಳೆ ಬಂದರೆ ರಾಗಿ ಕೊಳ್ಳಲು ಬಂದರೂ ಬರಬಹುದು : ತಿಪ್ಪೇಸ್ವಾಮಿ. ಕೃಷಿ ಸಹಾಯಕ, ಹುಳಿಯಾರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.