ವಿಷಯಕ್ಕೆ ಹೋಗಿ

ಆರಣ್ಯ ಇಲಾಖೆಯವರ ನಿರ್ಲಕ್ಷವೇ ಕರಡಿ ದಾಳಿಗೆ ಕಾರಣ : ಸ್ಥಳಿಯರ ದೂರು

                   ಹುಳಿಯಾರುಹೋಬಳಿ ಕೆಂಕೆರೆ ಗ್ರಾಮದ ಹೊನ್ನಯ್ಯನಪಾಳ್ಯದ ಉಮಾಶಂಕರ್ ಕರಡಿ ದಾಳಿಗೆ ಬಲಿಯಾಗುವುದಕ್ಕೆ ಆರಣ್ಯ ಇಲಾಖೆಯವರ ನಿರ್ಲಕ್ಷವೇ ಕಾರಣವೆಂದು ಸ್ಥಳಿಯರು ದೂರಿದ್ದಾರೆ.
               ಕಳೆದ ತಿಂಗಳು ಹೊನ್ನಯ್ಯನ ಪಾಳ್ಯದ ತೋಟವೊಂದರ ಪಂಪ್ ಹೌಸ್ ಗುಂಡಿಗೆ ಕರಡಿ ಹಾಗೂ ಎರಡು ಕರಡಿ ಮರಿ ಬಿದಿದ್ದು , ಅವುಗಳನ್ನು ಹಿಡಿದು ಆರಣ್ಯಕ್ಕೆ ಬಿಡುವಂತೆ ಆರಣ್ಯ ಇಲಾಖೆಯವರಿಗೆ ತಿಳಿಸಿದ್ದರೂ ಸಹ ಅವುಗಳನ್ನು ಹಿಡಿಯದೆ ಗುಂಡಿಯಿಂದ ಹೊರಗಡೆ ಓಡಿಸಿದ್ದರು ಅಷ್ಟೆ. ಅದಾದ ಒಂದು ವಾರದೊಳಗಾಗಿ ಅವೇ ಕರಡಿಗಳು ಇದೇ ಊರಿನ ಸ್ವಾಮಿ ಎಂಬಾತನನ್ನು ಪರಚಿ ಗಾಯಗೊಳಿಸಿದ್ದವು. ಆಗ ಇಲಾಖೆಯವರಿಗೆ ತಿಳಿಸಿದಾಗ ಕರಡಿಯನ್ನು ಹಿಡಿಯುವುದಾಗಿ ತಿಳಿಸಿ ಒಂದು ಬೋನ್ ತಂದಿಟ್ಟಿದ್ದರು. ಅದರಲ್ಲಿ ದೊಡ್ಡ ಕರಡಿ ಬೀಳುವ ಬದಲು ಮರಿಕರಡಿ ಬಿದ್ದಿತ್ತು. ಆದರೆ ತಾಯಿ ಕರಡಿ ಮಾತ್ರ ಬಿದ್ದಿರಲಿಲ್ಲ. ಬೋನಿಗೆ ಬಿದ್ದಿದ್ದ ಮರಿಕರಡಿಯನ್ನು ಇಲ್ಲಿಂದ ತೆಗೆದುಕೊಂಡು ಹೋಗಿದ್ದನ್ನು ಬಿಟ್ಟರೆ ಮತ್ತೆ ಇದುವರೆಗೂ ಬೋನು ತಂದಿಟ್ಟಿಲ್ಲ. ತಾಯಿ ಕರಡಿ ಮರಿಯನ್ನು ಕಳೆದು ಕೊಂಡು ಗಾಸಿಯಾಗಿದ್ದು ಸಿಕ್ಕಿದವರ ಮೇಲೆ ದಾಳಿ ಮಾಡುತ್ತಿದೆ ಇದಕ್ಕೆಲ್ಲಾ ಆರಣ್ಯ ಇಲಾಕೆಯವರ ನಿರ್ಲಕ್ಷವೇ ಕಾರಣವೆಂದು ಚಿದಾನಂದ್ ಆರೋಪಿಸಿದರು.
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಹೊನ್ನಯ್ಯನ ಪಾಳ್ಯದ ತೋಟದಲ್ಲಿ ಕರಡಿ ದಾಳಿ ಬಲಿಯಾದ ಉಮಾಶಂಕರ್ ಪತ್ನಿ ಬಸಮ್ಮ ಅವರಿಗೆ ಸರ್ಕಾದವತಿಯಿಂದ ಶಾಸಕ ಸಿ.ಬಿ.ಸುರೇಶ್ ಬಾಬು 2 ಲಕ್ಷ್ಯ ಮೊತ್ತದ ಚೆಕ್ ವಿತರಿಸಿದರು. 
            ಹೊನ್ನಯ್ಯನಪಾಳ್ಯದದಿಂದ ಸ್ಪಲ್ಪದೂರದಲ್ಲೇ ಗುಡ್ಡವಿದ್ದು ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯ ಗಡಿ ಭಾಗವೂ ಸಹ ಆಗಿದೆ. ಚಿತ್ರದುರ್ಗದ ಕಡೆಯಗುಡ್ಡದಲ್ಲಿ ಕರಡಿಗಳಿದ್ದು ಅವು ನಮ್ಮಕಡೆ ಬಂದು ಈರೀತಿ ದಾಳಿ ಮಾಡುತ್ತಿವೆ. ಈ ಘಟನೆ ನಡೆದ ಕೂಡಲೇ ಗಾರ್ಡ್ ಗೆ ತಿಳಿಸಿದರೆ ಆತ ತನಗೂ ಇದಕ್ಕೆ ಸಂಬಂಧವಿಲ್ಲ ಬುಕ್ಕಾಪಟ್ಟಣದವರಿಗೆ ತಿಳಿಸಿ ಎಂದು ಹೇಳಿದ್ದಾರೆ. ಆದರೆ ಅದೇ ಗಾರ್ಡ್ ರೈತರು ತಮ್ಮ ಕೃಷಿ ಕಾರ್ಯಕ್ಕೆ ಸೌದೆ, ಗುಜ್ಜುಗಳನ್ನೇನಾದರೂ ಆರಣ್ಯದಿಂದ ತಂದರೆ ರೈತರ ಗಾಡಿಗಳನ್ನು ಹಿಡಿದು ಹಣವಸೂಲಿ ಮಾಡುತ್ತಾನೆ ಎಂದು ಶಿವುಮೂರ್ತಿ ದೂರಿದರು.ಅಲ್ಲದೆ ಕರಡಿಯನ್ನು ಹಿಡಿಯುವಂತೆ ಹೇಳಿದರೂ ಆ ಬಗ್ಗೆ ಸೂಕ್ತ ಗಮನಗೊಡದ ಹಾಗೂ ರೈತರಿಂದ ಹಣವಸೂಲಿ ಮಾಡುವ ಗಾರ್ಡ್ ಮೇಲೆ ಶಿಸ್ತುಕ್ರಮ ಜರುಗಿಸುವಂತೆ ಡಿಎಫ್ ಓ ಅವರನ್ನು ಕೇಳಿಕೊಂಡರು.
            ಘಟನಾ ವಿಷಯ ತಿಳಿದು ಆಗಮಿಸಿದ್ದ ಶಾಸಕ ಸಿ.ಬಿ.ಸುರೇಶ್ ಬಾಬು, ಇಂತಹ ಘಟನೆಗೆ ಇಲಾಖೆಯಿಂದ 5 ಲಕ್ಷ್ಯ ಪರಿಹಾರವಿದ್ದು , ಈಗ 2 ಲಕ್ಷದ ಚೆಕ್ ನೀಡಲಿದ್ದು ಉಳಿಕೆ ಹಣವನ್ನು ಶೀಘ್ರವೇ ಕುಟುಂಬದವರಿಗೆ ತಲುಪಿಸುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದರಲ್ಲದೆ, ಆ ಕರಡಿಯನ್ನು ಹಿಡಿಯಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಂಡು ಕರಡಿ ಹಿಡಿಯಲು ಮುಂದಾಗುವಂತೆ ಹಾಗೂ ಹಿಡಿದ ಕರಡಿಯನ್ನು ಮತ್ತೆ ಇಲ್ಲೆಲ್ಲೂ ಬಿಡದೆ ಕರಡಿಧಾಮಕ್ಕೆ ಕಳುಹಿಸುವಂತೆ ಡಿಎಫ್.ಓ ಅವರಿಗೆ ತಿಳಿಸಿದರು.
             ಕರಡಿ ಹಿಡಿಯುವ ಕಾರ್ಯವನ್ನು ಕೂಡಲೇ ಕೈಗೊಳ್ಳದಿದ್ದರೆ ಶವವನ್ನು ಇಲ್ಲಿಂದ ತೆಗೆಯುವುದಿಲ್ಲ ಎಂದು ಸ್ಥಳೀಯರು ಪಟ್ಟುಹಿಡಿದಾಗ ಡಿಎಫ್ ಓ ಅಮರ್ ನಾಥ ಪ್ರತಿಕ್ರಿಯಿಸಿ ಈಗ ಬೋನ್ ಹಾಗೂ ಬಲೆಯ ವ್ಯವಸ್ಥೆಯನ್ನು ಮಾಡಿರುವುದಾಗಿ ಹಾಗೂ ತಮ್ಮ ಸಿಬ್ಬಂದಿಯನ್ನು ಇಲ್ಲಿಯೇ ಗಸ್ತಿಗೆ ಹಾಕುವುದಾಗಿ ತಿಳಿಸಿದರು. ಇಲಾಖೆಯಿಂದ ಮೃತರ ಕುಟುಂಬದವರಿಗೆ ಸಿಗಬೇಕಾದ ಪರಿಹಾದ ಹಣವನ್ನು ಶೀಗ್ರದಲ್ಲೇ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.

             ಅರಣ್ಯ ಇಲಾಖೆಯವರು ಬಂದು ಕರಡಿ ಹಿಡಿಯುವ ಕಾರ್ಯಕ್ಕೆ ಮುಂದಾಗುವವರೆಗೂ ಇಲ್ಲಿಂದ ಕದಲುವುದಿಲ್ಲ ಹಾಗೂ ಶವವನ್ನು ತೆಗೆಯುವುದಿಲ್ಲವೆಂದು ಬೆಳಿಗ್ಗೆಯಿಂದಲೂ ಕೆಂಕೆರೆ ಸೇರಿದಂತೆ ಸುತ್ತಮುತ್ತಲ ಹೆಚ್ಚು ಜನ ಪಟ್ಟುಹಿಡಿದು ಪ್ರತಿಭಟಿಸಿದ್ದರು. ಮಧ್ಯಾಹ್ನದ ನಂತರ ಅರಣ್ಯ ಇಲಾಖೆಯ ಡಿಎಫ್.ಓ ಬಂದು ಕರಡಿ ಹಿಡಿಯುವ ಭರವಸೆಯಿತ್ತ ಮೇಲೆ ತಮ್ಮಪಟ್ಟು ಕೈಬಿಟ್ಟರಲ್ಲದೆ ಕರಡಿಯನ್ನು ಹಿಡಿಯದಿದ್ದರೆ ತಾವೇ ಕರಡಿಗೆ ಏನು ಮಾಡಬೇಕು ಅದನ್ನು ಮಾಡುತ್ತೇವೆ ಆ ಬಗ್ಗೆ ತಾವು ಪ್ರಶ್ನಿಸಬಾರದೆಂದು ಎಚ್ಚರಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...