ವಿಷಯಕ್ಕೆ ಹೋಗಿ

ಆರಣ್ಯ ಇಲಾಖೆಯವರ ನಿರ್ಲಕ್ಷವೇ ಕರಡಿ ದಾಳಿಗೆ ಕಾರಣ : ಸ್ಥಳಿಯರ ದೂರು

                   ಹುಳಿಯಾರುಹೋಬಳಿ ಕೆಂಕೆರೆ ಗ್ರಾಮದ ಹೊನ್ನಯ್ಯನಪಾಳ್ಯದ ಉಮಾಶಂಕರ್ ಕರಡಿ ದಾಳಿಗೆ ಬಲಿಯಾಗುವುದಕ್ಕೆ ಆರಣ್ಯ ಇಲಾಖೆಯವರ ನಿರ್ಲಕ್ಷವೇ ಕಾರಣವೆಂದು ಸ್ಥಳಿಯರು ದೂರಿದ್ದಾರೆ.
               ಕಳೆದ ತಿಂಗಳು ಹೊನ್ನಯ್ಯನ ಪಾಳ್ಯದ ತೋಟವೊಂದರ ಪಂಪ್ ಹೌಸ್ ಗುಂಡಿಗೆ ಕರಡಿ ಹಾಗೂ ಎರಡು ಕರಡಿ ಮರಿ ಬಿದಿದ್ದು , ಅವುಗಳನ್ನು ಹಿಡಿದು ಆರಣ್ಯಕ್ಕೆ ಬಿಡುವಂತೆ ಆರಣ್ಯ ಇಲಾಖೆಯವರಿಗೆ ತಿಳಿಸಿದ್ದರೂ ಸಹ ಅವುಗಳನ್ನು ಹಿಡಿಯದೆ ಗುಂಡಿಯಿಂದ ಹೊರಗಡೆ ಓಡಿಸಿದ್ದರು ಅಷ್ಟೆ. ಅದಾದ ಒಂದು ವಾರದೊಳಗಾಗಿ ಅವೇ ಕರಡಿಗಳು ಇದೇ ಊರಿನ ಸ್ವಾಮಿ ಎಂಬಾತನನ್ನು ಪರಚಿ ಗಾಯಗೊಳಿಸಿದ್ದವು. ಆಗ ಇಲಾಖೆಯವರಿಗೆ ತಿಳಿಸಿದಾಗ ಕರಡಿಯನ್ನು ಹಿಡಿಯುವುದಾಗಿ ತಿಳಿಸಿ ಒಂದು ಬೋನ್ ತಂದಿಟ್ಟಿದ್ದರು. ಅದರಲ್ಲಿ ದೊಡ್ಡ ಕರಡಿ ಬೀಳುವ ಬದಲು ಮರಿಕರಡಿ ಬಿದ್ದಿತ್ತು. ಆದರೆ ತಾಯಿ ಕರಡಿ ಮಾತ್ರ ಬಿದ್ದಿರಲಿಲ್ಲ. ಬೋನಿಗೆ ಬಿದ್ದಿದ್ದ ಮರಿಕರಡಿಯನ್ನು ಇಲ್ಲಿಂದ ತೆಗೆದುಕೊಂಡು ಹೋಗಿದ್ದನ್ನು ಬಿಟ್ಟರೆ ಮತ್ತೆ ಇದುವರೆಗೂ ಬೋನು ತಂದಿಟ್ಟಿಲ್ಲ. ತಾಯಿ ಕರಡಿ ಮರಿಯನ್ನು ಕಳೆದು ಕೊಂಡು ಗಾಸಿಯಾಗಿದ್ದು ಸಿಕ್ಕಿದವರ ಮೇಲೆ ದಾಳಿ ಮಾಡುತ್ತಿದೆ ಇದಕ್ಕೆಲ್ಲಾ ಆರಣ್ಯ ಇಲಾಕೆಯವರ ನಿರ್ಲಕ್ಷವೇ ಕಾರಣವೆಂದು ಚಿದಾನಂದ್ ಆರೋಪಿಸಿದರು.
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಹೊನ್ನಯ್ಯನ ಪಾಳ್ಯದ ತೋಟದಲ್ಲಿ ಕರಡಿ ದಾಳಿ ಬಲಿಯಾದ ಉಮಾಶಂಕರ್ ಪತ್ನಿ ಬಸಮ್ಮ ಅವರಿಗೆ ಸರ್ಕಾದವತಿಯಿಂದ ಶಾಸಕ ಸಿ.ಬಿ.ಸುರೇಶ್ ಬಾಬು 2 ಲಕ್ಷ್ಯ ಮೊತ್ತದ ಚೆಕ್ ವಿತರಿಸಿದರು. 
            ಹೊನ್ನಯ್ಯನಪಾಳ್ಯದದಿಂದ ಸ್ಪಲ್ಪದೂರದಲ್ಲೇ ಗುಡ್ಡವಿದ್ದು ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯ ಗಡಿ ಭಾಗವೂ ಸಹ ಆಗಿದೆ. ಚಿತ್ರದುರ್ಗದ ಕಡೆಯಗುಡ್ಡದಲ್ಲಿ ಕರಡಿಗಳಿದ್ದು ಅವು ನಮ್ಮಕಡೆ ಬಂದು ಈರೀತಿ ದಾಳಿ ಮಾಡುತ್ತಿವೆ. ಈ ಘಟನೆ ನಡೆದ ಕೂಡಲೇ ಗಾರ್ಡ್ ಗೆ ತಿಳಿಸಿದರೆ ಆತ ತನಗೂ ಇದಕ್ಕೆ ಸಂಬಂಧವಿಲ್ಲ ಬುಕ್ಕಾಪಟ್ಟಣದವರಿಗೆ ತಿಳಿಸಿ ಎಂದು ಹೇಳಿದ್ದಾರೆ. ಆದರೆ ಅದೇ ಗಾರ್ಡ್ ರೈತರು ತಮ್ಮ ಕೃಷಿ ಕಾರ್ಯಕ್ಕೆ ಸೌದೆ, ಗುಜ್ಜುಗಳನ್ನೇನಾದರೂ ಆರಣ್ಯದಿಂದ ತಂದರೆ ರೈತರ ಗಾಡಿಗಳನ್ನು ಹಿಡಿದು ಹಣವಸೂಲಿ ಮಾಡುತ್ತಾನೆ ಎಂದು ಶಿವುಮೂರ್ತಿ ದೂರಿದರು.ಅಲ್ಲದೆ ಕರಡಿಯನ್ನು ಹಿಡಿಯುವಂತೆ ಹೇಳಿದರೂ ಆ ಬಗ್ಗೆ ಸೂಕ್ತ ಗಮನಗೊಡದ ಹಾಗೂ ರೈತರಿಂದ ಹಣವಸೂಲಿ ಮಾಡುವ ಗಾರ್ಡ್ ಮೇಲೆ ಶಿಸ್ತುಕ್ರಮ ಜರುಗಿಸುವಂತೆ ಡಿಎಫ್ ಓ ಅವರನ್ನು ಕೇಳಿಕೊಂಡರು.
            ಘಟನಾ ವಿಷಯ ತಿಳಿದು ಆಗಮಿಸಿದ್ದ ಶಾಸಕ ಸಿ.ಬಿ.ಸುರೇಶ್ ಬಾಬು, ಇಂತಹ ಘಟನೆಗೆ ಇಲಾಖೆಯಿಂದ 5 ಲಕ್ಷ್ಯ ಪರಿಹಾರವಿದ್ದು , ಈಗ 2 ಲಕ್ಷದ ಚೆಕ್ ನೀಡಲಿದ್ದು ಉಳಿಕೆ ಹಣವನ್ನು ಶೀಘ್ರವೇ ಕುಟುಂಬದವರಿಗೆ ತಲುಪಿಸುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದರಲ್ಲದೆ, ಆ ಕರಡಿಯನ್ನು ಹಿಡಿಯಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಂಡು ಕರಡಿ ಹಿಡಿಯಲು ಮುಂದಾಗುವಂತೆ ಹಾಗೂ ಹಿಡಿದ ಕರಡಿಯನ್ನು ಮತ್ತೆ ಇಲ್ಲೆಲ್ಲೂ ಬಿಡದೆ ಕರಡಿಧಾಮಕ್ಕೆ ಕಳುಹಿಸುವಂತೆ ಡಿಎಫ್.ಓ ಅವರಿಗೆ ತಿಳಿಸಿದರು.
             ಕರಡಿ ಹಿಡಿಯುವ ಕಾರ್ಯವನ್ನು ಕೂಡಲೇ ಕೈಗೊಳ್ಳದಿದ್ದರೆ ಶವವನ್ನು ಇಲ್ಲಿಂದ ತೆಗೆಯುವುದಿಲ್ಲ ಎಂದು ಸ್ಥಳೀಯರು ಪಟ್ಟುಹಿಡಿದಾಗ ಡಿಎಫ್ ಓ ಅಮರ್ ನಾಥ ಪ್ರತಿಕ್ರಿಯಿಸಿ ಈಗ ಬೋನ್ ಹಾಗೂ ಬಲೆಯ ವ್ಯವಸ್ಥೆಯನ್ನು ಮಾಡಿರುವುದಾಗಿ ಹಾಗೂ ತಮ್ಮ ಸಿಬ್ಬಂದಿಯನ್ನು ಇಲ್ಲಿಯೇ ಗಸ್ತಿಗೆ ಹಾಕುವುದಾಗಿ ತಿಳಿಸಿದರು. ಇಲಾಖೆಯಿಂದ ಮೃತರ ಕುಟುಂಬದವರಿಗೆ ಸಿಗಬೇಕಾದ ಪರಿಹಾದ ಹಣವನ್ನು ಶೀಗ್ರದಲ್ಲೇ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.

             ಅರಣ್ಯ ಇಲಾಖೆಯವರು ಬಂದು ಕರಡಿ ಹಿಡಿಯುವ ಕಾರ್ಯಕ್ಕೆ ಮುಂದಾಗುವವರೆಗೂ ಇಲ್ಲಿಂದ ಕದಲುವುದಿಲ್ಲ ಹಾಗೂ ಶವವನ್ನು ತೆಗೆಯುವುದಿಲ್ಲವೆಂದು ಬೆಳಿಗ್ಗೆಯಿಂದಲೂ ಕೆಂಕೆರೆ ಸೇರಿದಂತೆ ಸುತ್ತಮುತ್ತಲ ಹೆಚ್ಚು ಜನ ಪಟ್ಟುಹಿಡಿದು ಪ್ರತಿಭಟಿಸಿದ್ದರು. ಮಧ್ಯಾಹ್ನದ ನಂತರ ಅರಣ್ಯ ಇಲಾಖೆಯ ಡಿಎಫ್.ಓ ಬಂದು ಕರಡಿ ಹಿಡಿಯುವ ಭರವಸೆಯಿತ್ತ ಮೇಲೆ ತಮ್ಮಪಟ್ಟು ಕೈಬಿಟ್ಟರಲ್ಲದೆ ಕರಡಿಯನ್ನು ಹಿಡಿಯದಿದ್ದರೆ ತಾವೇ ಕರಡಿಗೆ ಏನು ಮಾಡಬೇಕು ಅದನ್ನು ಮಾಡುತ್ತೇವೆ ಆ ಬಗ್ಗೆ ತಾವು ಪ್ರಶ್ನಿಸಬಾರದೆಂದು ಎಚ್ಚರಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.