ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಂದಿಕೆರೆ ಹೋಬಳಿ ತೀರ್ಥಪುರದ ಶ್ರೀತೀರ್ಥಲಿಂಗೇಶ್ವರ ಸ್ವಾಮಿಯ ನೂತನ ದೇವಾಲಯದ ಪ್ರವೇಶ ಹಾಗೂ ವಿಗ್ರಹ ಪ್ರತಿಷ್ಠಾಪನೆ ನೂತನ ಶಿಖರಕ್ಕೆ ಕಳಸ ಪ್ರತಿಷ್ಠಾಪನೆ ಮತ್ತು 108 ಕುಂಬಾಭಿಷೇಕ ಮಹೋತ್ಸವ ನ. 6ರಿಂದ 7 ರವರೆಗೆ ನಡೆಯಲಿದೆ. 6ರಂದು ಸಂಜೆ ಗೋಧೋಳಿ ಲಗ್ನದಲ್ಲಿ ಧ್ವಜಾರೋಹಣ, ಗಂಗಾ ಪೂಜೆ, 108 ಕುಂಭಾಪೂಜೆ, ಗಣಪತಿಪೂಜೆ, ರುದ್ರಪೂಜೆ ಕಾರ್ಯಕ್ರಮಗಳು ಶ್ರೀಕ್ಷೇತ್ರ ವಜ್ರದಿಂದ ಆರಂಭವಾಗಲಿದೆ. 7ರಂದು ಬೆಳಗಿನಜಾವ 4 ರಿಂದ 5 ಗಂಟೆಗೆ ಸಲ್ಲುವ ಬ್ರಾಹ್ಮಿ ಲಗ್ನದಲ್ಲಿ ಪೂಜಾ ಆಲಯ ಪ್ರವೇಶ, ಮಹಾಗಣಪತಿ ಪೂಜೆ, ಸ್ವಾಸ್ತು ಪೂಜೆ, ಮಂಡಲಕಳಸ ಸೇರಿದಂತೆ ನೂತನ ವಿಗ್ರಹಗಳಿಗೆ ಕ್ಷೀರದಿವಾಸ, ಜಲಧಿವಾಸ ಸೇರಿದಂತೆ ನಾನಾ ಪೂಜಾಧಿ ಕಾರ್ಯಗಳು ನಡೆಯಲಿವೆ. ತಮ್ಮಡಿಹಳ್ಳಿಯ ಡಾ.ಅಭಿನವ ಮಲ್ಲಿಕಾರ್ಜುನ ದೇಶೀಕೇಂದ್ರಸ್ವಾಮಿಜಿಯ ಅಮೃತ ಹಸ್ತದಿಂದ ವಿಗ್ರಹ ಪ್ರತಿಷ್ಠಪನೆ, ಪ್ರಾಣ ಪ್ರತಿಪ್ಠಾಪನೆ, ನೂತನ ಶಿಖರಕ್ಕೆ ಕಳಸ ಪ್ರತಿಷ್ಠಾಪನೆ, ರುದ್ರಾಭಿಷೇಕ ನಡೆಯಲಿದೆ. 8ಗಂಟೆಗೆ ನವಗ್ರಹ ಮೃತ್ಯುಂಜಯ ಹೋಮ ರುದ್ರಹೋಮ ಪೂರ್ಣಾಹುತಿ ನಂತರ ಮಹಾಮಂಗಳಾರತಿ ನಡೆಯಲಿದೆ. ಪೂಜಾ ಕಾರ್ಯಕ್ರಮದಲ್ಲಿ ಕೆರೆಗೋಡಿ ರಂಗಾಪುರದ ಗುರುಪರ ದೇಶಿಕೇಂದ್ರಸ್ವಾಮೀಜಿ, ತಮ್ಮಡಿಹಳ್ಳೀ ಡಾ.ಶ್ರೀ.ಅಭಿನವ ಮಲ್ಲಿಕಾರ್ಜ...
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070