ಹುಳಿಯಾರು ಬನಶಂಕರಿ ದೇವಾಲಯದಲ್ಲಿ ಶರನ್ನವರಾತ್ರಿ ಅಂಗವಾಗಿ ಅ. ೦೧ ರಿಂದ ೧೧ ರವರೆಗೆ ಪ್ರತಿನಿತ್ಯ ಬೆಳಗ್ಗೆ ಅಭಿಷೇಕ,ಅರ್ಚನೆ ಸೇರಿದಂತೆ ಚಂಡಿಕಾಪಾರಾಯಣ, ದೇವಿಸ್ತುತಿ,ದುರ್ಗಾಪಾರಾಯಣ, ಮಹಾಮಂಗಳಾರತಿ ಹಾಗೂ ಸಂಜೆ ದೇವಿಗೆ ವಿವಿಧ ಅಲಂಕಾರ, ರಾತ್ರಿ ೭ ಗಂಟೆಗೆ ಭಜನೆ, ಅರ್ಚನೆ, ದೀಪಾರಾಧನೆ ಮತ್ತಿತರ ವಿಶೇಷ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಬನಶಂಕರಿ ಅಮ್ಮನವರಿಗೆ ಅ.೧ರಿಂದ ಕ್ರಮವಾಗಿ ಪ್ರತಿದಿನ ಸಂಜೆ ಹರಿದ್ರಾ ಕುಂಕುಮಾಲಂಕಾರ,ಬ್ರಹ್ಮಚಾರಿಣಿ, ಗಜಲಕ್ಶ್ಮೀ ಅಲಂಕಾರ, ಕಾತ್ಯಾಯಿನಿ, ಸ್ಕಂದಮಾತಾ,ಮಹಾಗೌರಿ,ಹಂಸವಾಹಿನಿ ಸರಸ್ವತಿ,ಗಂಧದ ಅಲಂಕಾರ,ವನದುರ್ಗಿ,ಶಾಖಾಂಬರಿ ಅಲಂಕಾರ,ವನದುರ್ಗಿ ಅಲಂಕಾರ ,ಕಾಳರಾತ್ರಿ ಹಾಗೂ ವಿಜಯದಶಮಿಯಂದು ಸರ್ವಾಲಂಕೃತ ಬನಶಂಕರಿ ಅಲಂಕಾರ ಮಾಡಲಾಗುವುದು.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಲಂಕೃತ ಅಮ್ಮನವರ ದರ್ಶನ ಪಡೆಯಬೇಕಾಗಿ ದೇವಾಲಯ ಸಮಿತಿಯ ಅಧ್ಯಕ್ಷ ಅನಂತಕುಮಾರ್ ಕೋರಿದ್ದಾರೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ