ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜುಲೈ, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬೋರನಕಣಿವೆ ಶ್ರೀ ಸಾಯಿಮಂದಿರದಲ್ಲಿ ಗುರುಪೂರ್ಣಿಮಾ ಮಹೋತ್ಸವ ನಾಳೆ

      ಹುಳಿಯಾರು ಸಮೀಪದ ಬೋರನಕಣಿವೆಯ ಶ್ರೀ ಸಾಯಿಮಂದಿರದಲ್ಲಿ ಗುರುಪೂರ್ಣಿಮಾ ಪ್ರಯುಕ್ತ ಶುಕ್ರವಾರದಂದು(ನಾಳೆ) ಮುಂಜಾನೆ ಆರು ಗಂಟೆಯಿಂದಲೇ ಧಾರ್ಮಿಕ ಕಾರ್ಯಗಳು ಶುರುವಾಗಲಿದೆ.ಮಧ್ಯಾಹ್ನ ಪ್ರಮುಖ ಬೀದಿಗಳಲ್ಲಿ ಬಾಬಾರ ಪಲ್ಲಕ್ಕಿ  ಉತ್ಸವ  ನಡೆಯಲಿದೆ.      ನಂತರ ಪ್ರಸಾದದ ವ್ಯವಸ್ಥೆಯಿದೆ.ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಾಯಿನಾಥರ  ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಆಡಳಿತ  ಮಂಡಳಿಯವರು ಕೋರಿದ್ದಾರೆ. 

ಮರಳಿ ಬಾ ಕಲಾಂ

ಹುಳಿಯಾರಿನ ಆಟೋ ಚಾಲಕನೊಬ್ಬ ಕಲಾಂ ಅವರ ನಿಧನಕ್ಕೆ ಸಂತಾಪ ಸೂಚಿಸಿ ತನ್ನ ಆಟೋ ಮೇಲೆ "ಮರಳಿ ಬಾ ಭಾರತಕ್ಕೆ ಅಬ್ದುಲ್ ಕಲಾಂ " ಎಂದು ಬರೆಸಿಕೊಳ್ಳುವ ಮೂಲಕ ಕಲಾಂ ಅವರಿಗೆ ನಮನಸಲ್ಲಿಸಿದ್ದಾನೆ.

ಖಾಯಂ ವೈದ್ಯರನ್ನು ನೇಮಿಸುವಂತೆ ಪ್ರತಿಭಟನೆ

ಕಡೆಗೂ ವೈದ್ಯರ ನಿಯೋಜನೆಗೆ ಒಪ್ಪಿದ ಡಿಹೆಚ್ ಓ: ಸಂಜೆ ಪ್ರತಿಭಟನೆ ಹಿಂದಕ್ಕೆ --------------- ಹುಳಿಯಾರು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರಿಲ್ಲದೆ ರೋಗಿಗಳು ಪರದಾಡುವಂತಾಗಿದ್ದು, ಖಾಯಂ ವೈದ್ಯರನ್ನು ನೇಮಿಸುವಂತೆ ಒತ್ತಾಯಿಸಿ ಗ್ರಾ.ಪಂ.ಸದಸ್ಯರು, ಸಾರ್ವಜನಿಕರು ಸೇರಿದಂತೆ ವಿವಿಧ ಸಂಘಟನೆಯವರು ಆಸ್ಪತ್ರೆ ಸಿಬ್ಬಂದಿಯನ್ನು ಆಸ್ಪತ್ರೆಯಿಂದ ಹೊರಗಟ್ಟಿ ಆಸ್ಪತ್ರೆ ಮುಂದೆ ಬುಧವಾರ ಪ್ರತಿಭಟಿಸಿದರಲ್ಲದೆ , ಈ ಹಿಂದೆ ಪ್ರತಿಭಟನೆ ಮಾಡಿದಾಗ ಬಂದು ನಯವಾಗಿ ಭರವಸೆ ನೀಡಿದ್ದ ಡಿಹೆಚ್ ಓ ಅವರೇ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಲಿ ಎಂದು ಪಟ್ಟು ಹಿಡಿದಿದ್ದರಿಂದ ಪ್ರತಿಭಟನೆ ಸಂಜೆಯವರೆಗೂ ಮುಂದುವರೆಯಿತು. ಹುಳಿಯಾರು ಆಸ್ಪತ್ರೆಗೆ ಖಾಯಂ ವೈದ್ಯರನ್ನು ನೇಮಿಸುವಂತೆ ಗ್ರಾ.ಪಂ.ಸದಸ್ಯರು, ವಿವಿಧ ಸಂಘ ಸಂಸ್ಥೆಯವರು ಹಾಗೂ ಸಾರ್ವಜನಿಕರು ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟಿಸಿದರು. ಹೋಬಳಿಯ ಸೀಗೆಬಾಗಿಯ ಶಾಲೆಯಿಂದ ಶಾಲಾಮಕ್ಕಳನ್ನು ಕ್ರೀಡಾಕೂಟಕ್ಕೆಂದು ಹೊಸಹಳ್ಳಿ ಪಾಳ್ಯದ ಮಾರ್ಗವಾಗಿ ಕರೆದೊಯ್ಯುತ್ತಿದ್ದ ಟಾಟಾ ಏಸ್ ವಾಹನ ಪಲ್ಟಿಯಾಗಿ ೧೬ಕ್ಕೂ ಅಧಿಕ ಮಕ್ಕಳಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗೆಂದು ಹುಳಿಯಾರಿನ ಸರ್ಕಾರಿ ಆಸ್ಪತ್ರೆಗೆ ಕರೆತಂದಾಗ ವೈದ್ಯರಿಲ್ಲದೆ ಪರದಾಡುವಂತಾಗಿದ್ದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಈ ರೀತಿ ನಡೆಯುತ್ತಿರುವುದು ಇಂದು ನಿನ್ನೆಯದಲ್ಲಾ ಪ್ರತಿಬಾರಿ ಅಪಘಾತಗಳು ಸಂ

ಕ್ರೀಡಾಕೂಟಕ್ಕೆ ತೆರಳುತ್ತಿದ್ದ ಟಾಟಾ-ಏಸ್ ಪಲ್ಟಿ

೧೬ಕ್ಕೂ ಅಧಿಕ ಮಕ್ಕಳಿಗೆ ಗಾಯ  --------------------------------- ಹುಳಿಯಾರು : ಕ್ರೀಡಾಕೂಟಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಟಾಟಾ ಏಸ್ ವಾಹನವೊಂದು ಚಾಲಕ ಅಜಾಗರೂಕತೆಯಿಂದ ಪಲ್ಟಿಹೊಡೆದ ಪರಿಣಾಮ ಆಟೋದಲ್ಲಿದ್ದ ೧೬ ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗಾಯಗಳಾಗಿರುವ ಘಟನೆ ಹೋಬಳಿಯ ಹೊಸಹಳ್ಳಿಪಾಳ್ಯ ಹಾಗೂ ಹೊಸಹಳ್ಳಿ ನಡುವೆ ಬುಧವಾರ ಘಟಿಸಿದೆ. ಅಪಘಾತದಲ್ಲಿ ಗಾಯಗೊಂಡ ಮಕ್ಕಳು ನೋವು ತಾಳಲಾರದೆ ರೋಧಿಸುತ್ತಿರುವುದು . ಯಳನಡುವಿನಲ್ಲಿ ಬುಧವಾರದಿಂದ ಪ್ರಾರಂಭವಾದ ಹೋಬಳಿಮಟ್ಟದ ಕ್ರೀಡಾಕೂಟಕ್ಕೆ ಸೀಗೆಬಾಗಿಯ ಗ್ರಾಮಾಂತರ ವಿದ್ಯಾಪೀಠ ಫ್ರೌಡಶಾಲೆಯ ವಿದ್ಯಾರ್ಥಿಗಳನ್ನು ಟಾಟಾ ಏಸ್ ವಾಹನದಲ್ಲಿ ಹೊಸಹಳ್ಳಿ ಮಾರ್ಗವಾಗಿ ಕರೆಕೊಂಡು ಹೋಗುವಾಗ ಈ ಅವಘಡ ಸಂಭವಿಸಿದೆ. ಆಟೋದಲ್ಲಿ ಒಬ್ಬ ಶಿಕ್ಷಕ ಸೇರಿ ೩೦ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳಿದ್ದು ಆ ಪೈಕಿ ಶಿಕ್ಷಕನಿಗೆ ತಲೆಗೆ ಪೆಟ್ಟಾದರೆ, ೧೦ನೇತರಗತಿಯ ಸಂತೋಷ ವಿದ್ಯಾರ್ಥಿಯ ಕೈ ಮುರಿದುಕೊಂಡಿದೆ. ಉಳಿದ ಹತ್ತನ್ನೆರಡು ಮಕ್ಕಳಿಗೆ ತಲೆ,ಮುಖ,ಕೈಕಾಲು ಭಾಗದಲ್ಲಿ ಗಾಯಗಳಾಗಿವೆ. ಆಟೋ ಚಾಲಕ ಲಕ್ಷ್ಮಿಪುರದ ನಂದ ಎಂಬಾತನಾಗಿದ್ದು ಪರಾರಿಯಗಿದ್ದಾನೆ. ಅಪಘಾತದಿಂದ ಗಾಯಗೊಂಡ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ೧೦೮ ವಾಹನದಲ್ಲಿ ಕಳುಹಿಸುತ್ತಿರುವುದು. ಅಪಘಾತದಿಂದ ಗಾಯಗೊಂಡ ಮಕ್ಕಳನ್ನು ಹುಳಿಯಾರಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದ ವೇಳೆ ವೈದ್ಯರಿಲ್ಲದೆ

ಹುಳಿಯಾರು : ಅಬ್ದುಲ್ ಕಲಾಂ ಗೆ ಶ್ರದ್ಧಾಂಜಲಿ

ಹುಳಿಯಾರು ಹೋಬಳಿಯಾದ್ಯಂತ ಶಾಲಾಕಾಲೇಜುಗಳಲ್ಲಿ , ಸರ್ಕಾರಿ ಕಛೇರಿಗಳಲ್ಲಿ ,ಸಂಘ ಸಂಸ್ಥೆಗಳು ಮಾಜಿ ರಾಷ್ಟ್ರಪತಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು. ಹುಳಿಯಾರಿನ ಕರವೇ ಪದಾಧಿಕಾರಿಗಳು ಕರವೇ ವೃತ್ತದಲ್ಲಿ ಕಲಾಂ ಅವರ ನಿಧನಕ್ಕೆ ಮೌನಾಚರಣೆ ನಡೆಸಿ, ಸಂತಾಪ ಸೂಚಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯರ್ತರು ಕರವೇ ವೃತ್ತದಲ್ಲಿ ಅಬ್ದುಲ್ ಕಲಾಂ ಅವರ ಭಾವಚಿತ್ರವನ್ನಿಟ್ಟು ಮೌನಾಚರಣೆ ಮಾಡುವ ಮೂಲಕ ಕಲಾಂ ನಿಧನಕ್ಕೆ ಸಂತಾಪ ಸೂಚಿಸಿದರು. ಗ್ರಾ.ಪಂ.ಸದಸ್ಯ ಹಾಗೂ ಕರವೇ ಅಧ್ಯಕ್ಷರಾಗಿರುವ ಕೋಳಿ ಶ್ರೀನಿವಾಸ್ ಮಾತನಾಡಿ, ದೇಶಕಂಡ ಮಹಾನ್ ವ್ಯಕ್ತಿಗಳಲ್ಲಿ ಕಲಾಂ ಸಹ ಒಬ್ಬರಾಗಿದ್ದು, ಇಡಿ ಪ್ರಪಂಚಕ್ಕೆ ಪರಿಚಿತರಾದ ವ್ಯಕ್ತಿಯಾಗಿದ್ದವರು. ಬಡತನದಲ್ಲಿ ವಿದ್ಯಾಭ್ಯಾಸ ಕಲಿತ ಕಲಾಂ ಭಾರತದ ರಾಷ್ಟ್ರಪತಿಯಾಗುವ ಮೂಲಕ ಕಠಿಣ ಪರಿಶ್ರಮದಿಂದ ಯಾವ ಸ್ಥಾನವನ್ನಾದರೂ ಪಡೆಯಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದರು.ವಿಜ್ಞಾನಿಯಾಗಿ, ಕ್ಷಿಪಣಿ ತಂತ್ರಜ್ಞರಾಗಿ ಅವರ ಕೊಡುಗೆ ಅವಿಸ್ಮರಣೀಯ. ಅವರ ಅಕಾಲಿಕ ಮರಣ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ಈ ವೇಳೆ ಕರವೇ ಪದಾಧಿಕಾರಿಗಳಾದ ಚಂಬಣ್ಣ, ಮುರುಳಿ,ರಘು,ವಕೀಲ ಮೋಹನ್, ರಂಗಸ್ವಾಮಿ,ಗೌಡಿರಂಗನಾಥ್, ದಿವಾಕರ,ಮೋಹನ್,ಕುಮಾರ್ ಸೇರಿದಂತೆ ಇತರರಿದ್ದರು. ಪಟ್ಟಣದ ಎಂಪಿಎಸ್ ಶಾಲೆ,ವಾಸವಿ,ಟಿ.ಆರ್.ಎಸ್.ಆರ್,ಕನಕದಾಸ, ಜಿಪಿಯುಸಿ, ಉರ್ದುಶಾಲೆ,ಜ್ಞಾನಜ್ಯೋತಿ,ವಿದ್ಯಾವಾರಿಧಿ ಸ್ಕೂಲ್, ಬಿಎಂಎಸ

ನೂತನ ಪಶುಚಿಕಿತ್ಸಾಲಯದ ಉದ್ಟಾಟನೆ

ಹುಳಿಯಾರು  ಹೋಬಳಿ ಹೊಯ್ಸಳಕಟ್ಟೆ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆಶ್ರಯದಲ್ಲಿ ಅಯೋಜಿಸಿದ್ದ ನೂತನ ಪಶುಚಿಕಿತ್ಸಾ ಕೇಂದ್ರದ ಉದ್ಘಾಟನೆಯನ್ನು ಪಶುಸಂಗೋಪನೆ ಸಚಿವ ಟಿ.ಬಿ.ಜಯಚಂದ್ರ ಶನಿವಾರ ನೆರವೇರಿಸಿದರು ಹುಳಿಯಾರು ಹೋಬಳಿ ಹೊಯ್ಸಳಕಟ್ಟೆಯಲ್ಲಿನ ನೂತನ ಪಶುಚಿಕಿತ್ಸಾಲಯವನ್ನು ಸಚಿವ ಟಿ.ಬಿ.ಜಯಚಂದ್ರ ಉದ್ಘಾಟಿಸಿದರು. ನಂತರ ಅವರು ಮಾತನಾಡಿ ಹುಳಿಯಾರು ಹಾಗೂ ಹೊಯ್ಸಳಕಟ್ಟೆ ಭಾಗ ನನಗೆ ತವರು ಮನೆಯಂತಾಗಿದ್ದು ಈ ಭಾಗದ ಸಂಪೂರ್ಣ ವಿವರ ತಮಗೆ ತಿಳಿದಿದೆ ಎಂದರು. ಹೊಯ್ಸಳಕಟ್ಟೆ ಭಾಗದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಶು ಆಸ್ಪತ್ರೆ ತೆರೆದಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ಕಟ್ಟಡದ ವ್ಯವಸ್ಥೆ ಮಾಡಿಸುವೆ ಎಂದರು. ರೈತರು ರಾಗಿ,ಜೋಳ,ಹೆಸರು ಸೇರಿದಂತೆ ಹೊಲದ ಕಾರ್ಯಗಳ ಜೊತೆಗೆ ಇದಕ್ಕೆ ಪೂರಕವಾಗಿ ಹೈನುಗಾರಿಕೆ, ಕುರಿ,ಕೋಳಿ ಸಾಕಣೆ ಮಾಡುವುದರಿಂದ ಆರ್ಥಿಕವಾಗಿ ಸಬಲರಾಗಬಹುದು ಎಂದರು. ರೈತರು ಯಾವುದೇ ಸಮಯದಲ್ಲೂ ತಮ್ಮ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಎದುರಾಗುವ ಸಮಸ್ಯೆಗಳನ್ನು ಧೈರ್ಯದಿಂದ ಹೆದರಿಸಿ ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದರು. ಈ ವೇಳೆ ಸಂಸದ ಮುದ್ದಹನುಮೇಗೌಡ, ಶಾಸಕ ಸುರೇಶ್ ಬಾಬು, ಗ್ರಾ.ಪಂ.ಅಧ್ಯಕ್ಷೆ ಮಂಜುಳಾ,ಪಶುಪಾಲನಾ ಉಪನಿರ್ದೇಶಕ ಡಾ|| ಎನ್.ರಾಜಶೇಖರ್,ಸಹಾಯಕ ನಿರ್ದೇಶಕ ಡಾ|| ಎಂ.ಪಿ.ಶಶಿಕುಮಾರ್,ತಹಸೀಲ್ದಾರ್ ಕಾಮಾಕ್ಷಮ್ಮ, ಇಓ ಕೃಷ

ಅಜ್ಜನಪಾಳ್ಯದ ರಸ್ತೆ ತುಂಬಾ ಕೆಸರು ಸಂಚಾರ ದುಸ್ಥರ ಗಡಿಗ್ರಾಮವೆಂದು ಗಮನಗೊಡದ ಜನಪ್ರತಿನಿಧಿಗಳು

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗಡಿಭಾಗದ ಹೋಬಳಿ ಕೇಂದ್ರವಾಗಿರುವ ಹಂದನಕೆರೆಯ ಅಜ್ಜನಪಾಳ್ಯಕ್ಕೆ ಸಂಪರ್ಕ ಕಲ್ಪಿಸುವ ಮಣ್ಣು ರಸ್ತೆ ಸಂಪೂರ್ಣ ಹದಗೆಟ್ಟಿರುವುದರಲ್ಲದೆ, ಮಳೆ ಬಂದಾಗ ರಸ್ತೆಯಲ್ಲಿ ನೀರು ನಿಂತು ಕೆಸರುಂಟಾಗಿ ಕೆಸರ ನಡುವೆಯೇ ಗ್ರಾಮದ ಜನ ಸಂಚಾರಿಸುವಂತಹ ದುಸ್ಥಿತಿ ನಿರ್ಮಾಣವಾಗಿದೆ.   ಪಂಚನಹಳ್ಳಿಗೆ ಹೋಗುವ ರಸ್ತೆಯಿಂದ ಅಜ್ಜನಪಾಳ್ಯಕ್ಕೆ ಹೋಗುವ ಮಣ್ಣುರಸ್ತೆಯಲ್ಲಿ ಕೆಸರುಂಟಾಗಿ ಸಾರ್ವಜನಿಕರು ಸಂಚರಿಸಲು ಪರದಾಡುವಂತಾಗಿದೆ. ಹುಳಿಯಾರಿನಿಂದ ಪಂಚನಹಳ್ಳಿಗೆ ಹೋಗುವ ರಸ್ತೆಯಲ್ಲಿ ಅಜ್ಜನಪಾಳ್ಯದ ಗೇಟ್ ಇದ್ದು, ಅಲ್ಲಿಂದ ಅಜ್ಜನಪಾಳ್ಯದ ಊರಿಗೆ ಸುಮಾರು ಒಂದು ಕಿ.ಮೀ ದೂರದ ಮಣ್ಣು ರಸ್ತೆಯಿದ್ದು ಇದುವರೆಗೂ ಈ ರಸ್ತೆ ಜಲ್ಲಿಯಾಗಲಿ, ಡಾಂಬರ್ ಆಗಲಿ ಕಂಡಿಲ್ಲ. ರಸ್ತೆ ಬದಿಯಲ್ಲಿ ಚರಂಡಿ ವ್ಯವಸ್ಥೆಯಿಲ್ಲ, ರಸ್ತೆ ತುಂಬ ಗುಂಡಿಗಳು ಸಹ ಬಿದ್ದಿದ್ದು ಮಳೆ ಬಂದಾಗ ನೀರು ನಿಂತು ರಸ್ತೆ ಕೆಸರು ಗದ್ದೆಯಾಗಿ ಮಾರ್ಪಾಡಾಗುತ್ತದೆ. ಬೈಕ್ , ಆಟೋ ಸೇರಿದಂತೆ ಇನ್ನಿತರ ವಾಹನ ಸವಾರರು ಇಲ್ಲಿ ಹೇಗಪ್ಪ ಹೋಗುವುದು ಎನ್ನುವಂತಾಗಿದೆ. ಅಜ್ಜನಪಾಳ್ಯದಿಂದ ಪ್ರತಿನಿತ್ಯ ಶಾಲಾಮಕ್ಕಳು, ರೈತರು ಈ ರಸ್ತೆ ಮೂಲಕವೇ ಹಾದು ಹುಳಿಯಾರಿಗೆ ಹೋಗಬೇಕಿದ್ದು ಮಳೆಗಾಲದಲ್ಲಿ ನಿತ್ಯ ನರಕ ಯಾತನೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರಾದ ಫೋಟೋಗ್ರಾಫರ್ ಸುರೇಶ್ ತಿಳಿಸುತ್ತಾರೆ. ದೊಡ್ಡಎಣ್ಣೆಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಅಜ್ಜನಪಾಳ್ಯ ಗ

ದಸೂಡಿಯಲ್ಲಿ ಕಲಾಂ ನಿಧನಕ್ಕೆ ಸಂತಾಪ

ಹುಳಿಯಾರು ಹೋಬಳಿಯ ಗಡಿಗ್ರಾಮವಾದ ದಸೂಡಿಯಲ್ಲಿ ಶಾಲೆಯ ಮಕ್ಕಳು ಕಲಾಂ ಅವರ ನಿಧನಕ್ಕೆ ಸಂತಾಪಸೂಚಕವಾಗಿ ಮೌನ ಮೆರವಣಿಗೆ ನಡೆಸಿದರು.

ವಿದ್ಯಾವಾರಿಧಿ ಶಾಲೆಯ ಮಕ್ಕಳಿಂದ ಸಂತಾಪ

ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯ ಮಕ್ಕಳು ಕಲಾಂ ಅವರ ನಿಧನಕ್ಕೆ ಮೋಂಬತ್ತಿ ಬೆಳಗಿ ಮೌನಾಚರಣೆ ನಡೆಸಿ, ಸಂತಾಪ ಸೂಚಿಸಿದರು.ಮಾಜಿ ಶಾಸಕ ಕಿರಣ್ ಕುಮಾರ್ ಸಂಸ್ಥೆಯ ಕಾರ್ಯದರ್ಶಿ ಕವಿತಾ ಕಿರಣ್ ಕುಮಾರ್  ,ಪ್ರಿನ್ಸಿಪಾಲ್ ರವಿ ಮತ್ತಿತರರಿದ್ದರು.

ಚಿಕ್ಕನಾಯಕನಹಳ್ಳಿ,ಅರಸೀಕೆರೆ ರಥೋತ್ಸವ

ಇಂದು ಮಂಗಳವಾರ ಬೆಳಿಗ್ಗೆ 8.30ಕ್ಕೆ ಚಿಕ್ಕನಾಯಕನಹಳ್ಳಿಯಲ್ಲಿ ಹಳೆಯೂರು ಆಂಜನೇಯಸ್ವಾಮಿಯ ಆಂಜನೇಯಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯಲಿದೆ. ಅಲ್ಲದೆ ಅರಸೀಕೆರೆಯಲ್ಲೂ ಕೂಡ ಅಮರಗಿರಿ ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿಯ ಮಹಾ ರಥೋತ್ಸವ ನಡೆಯಲಿದೆ.

ಬೋರನಕಣಿವೆಯಲ್ಲಿ ಐಟಿಐ ಕಾಲೇಜು ಉದ್ಘಾಟನೆ

ಹುಳಿಯಾರು  ಹೋಬಳಿ ಬೋರನಕಣಿವೆಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆಯ ಉದ್ಘಾಟನೆ ಹಾಗೂ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳ ಉದ್ಟಾಟನೆಯನ್ನು ಸಚಿವ ಟಿ.ಬಿ.ಜಯಚಂದ್ರ ನೆರವೇರಿಸಿದರು. ಹುಳಿಯಾರು ಹೋಬಳಿ ಬೋರನಕಣಿವೆಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ಐಟಿಐ ಕಾಲೇಜಿನ ಉದ್ಟಾಟನೆಯನ್ನು ಸಚಿವ ಟಿ.ಬಿ.ಜಯಚಂದ್ರ ನೆರವೇರಿಸಿದರು. ನಂತರ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕಾರ್ಯಕ್ಕೂ ಯಂತ್ರಗಳ ಬಳಕೆ ಹೆಚ್ಚುತ್ತಿದ್ದು ತಾಂತ್ರಿಕ ವಿಷಯ ಅಧ್ಯಯನ ಮಾಡಿದವರಿಗೆ ಹೆಚ್ಚು ಬೇಡಿಕೆ ಬರುತ್ತಿದೆ ಎಂದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಾಂತ್ರಿಕ ಕೋರ್ಸ್ ಗಳನ್ನು ಮಾಡಬೇಕೆಂದರೆ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಇರುವ ಕಾಲೇಜುಗಳಿಗೆ ಹೋಗಬೇಕು ಇದರಿಂದ ಹೆಚ್ಚಿನ ಹಣವನ್ನು ಪೋಷಕರು ಭರಿಸಬೇಕಾಗುತ್ತದೆ. ಇದನ್ನು ಮನಗಂಡು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ದೃಷ್ಠಿಯಿಂದ ಐಟಿಐ ಕಾಲೇಜನ್ನು ಈ ಭಾಗದಲ್ಲಿ ಪ್ರಾರಂಭಿಸಿದ್ದು, ಸದ್ಯ ಪದವಿಪೂರ್ವ ಕಾಲೇಜಿನ ಕಟ್ಟಡಲ್ಲಿ ತರಗತಿಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡದ ವ್ಯವಸ್ಥೆ ಮಾಡಿಸಿಕೊಡುವುದಾಗಿ ತಿಳಿಸಿದರು. ಕಾಯಂ ಕೆಲಸ : ಬೋರನಕಣಿವೆಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಯಾರು ಅಭ್ಯಾಸ ಮಾಡುತ್ತಾರೋ ಅವರಿಗೆ ತಾವು ಖಾಯಂ ಕೆಲಸ ಕೋಡಿಸುವುದಾಗಿ ಭರವಸೆ ನೀಡಿದರು. ಸಂಸ

ಮುಕ್ತಿಧಾಮಗಳ ಅಭಿವೃದ್ದಿಗೆ ೧೫ ಲಕ್ಷ ಅನುದಾನ : ಟಿಬಿಜೆ

ರಾಜ್ಯದ್ಯಾಂತ ಇರುವ ಮುಕ್ತಿಧಾಮಗಳ ಅಭಿವೃದ್ಧಿ ಹಾಗೂ ಅವುಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲು ಸರ್ಕಾರ ಚಿಂತನೆ ನಡೆಸಿದ್ದು ಅದಕ್ಕಾಗಿ ಹಣ ಸಹ ಮೀಸಲಿರಿಸಿದೆ. ಆ ನಿಟ್ಟಿನಲ್ಲಿ ಹುಳಿಯಾರು ಹಾಗೂ ಚಿಕ್ಕನಾಯಕನಹಳ್ಳಿಯಲ್ಲಿನ ಮುಕ್ತಿಧಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ೧೫ ಲಕ್ಷ ಅನುದಾನ ನೀಡುವುದಾಗಿ ಸಚಿವ ಟಿ.ಬಿ.ಜಯಚಂದ್ರ ಭರವಸೆ ನೀಡಿದರು. ಹುಳಿಯಾರಿಗೆ ಆಗಮಿಸಿದ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಪಟ್ಟಣದ ವಿವಿಧ ಸಮುದಾಯವರು ಮುಕ್ತಿಧಾಮ ಅಭಿವೃದ್ದಿಗಾಗಿ ಅನುದಾನ ಕಲ್ಪಿಸಿಕೊಡುವಂತೆ ಮನವಿ ಪತ್ರಸಲ್ಲಿಸಿದರು. ಪಟ್ಟಣಕ್ಕೆ ಆಗಮಿಸಿದ್ದ ಸಚಿವರಿಗೆ ಹುಳಿಯಾರಿನ ವಿಪ್ರ ಸಮಾಜ ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕು ವಿಪ್ರ ಹಿತರಕ್ಷಣಾ ವೇದಿಕೆ, ಮುಕ್ತಿಧಾಮ ಅಭಿವೃದ್ಧಿ ಸಂಘದವರು ರುದ್ರಭೂಮಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ಮನವಿಪತ್ರ ಸಲ್ಲಿಸಿದ್ದು, ಮನವಿ ಪತ್ರ ಸ್ವೀಕರಿಸಿದ ಸಚಿವರು ಅನುದಾನ ಕೊಡುವುದಾಗಿ ತಿಳಿಸಿದರು. ಹುಳಿಯಾರು ಹಾಗೂ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಹಿಂದೂ ಸಮುದಾಯದವರ ರುದ್ರಭೂಮಿಯಿದ್ದರೂ ಸಹ ಸೂಕ್ತ ನಿರ್ವಹಣೆಯಿಲ್ಲದೆ, ಮೂಲ ಸೌಕರ್ಯಗಳಿಲ್ಲದೆ ಅಂತ್ಯಕ್ರಿಯೆ ನಡೆಸಲು ಬರುವವರು ಪರದಾಡುವಂತಾಗಿತ್ತು. ಇದನ್ನರಿತ ತಾಲ್ಲೂಕು ವಿಪ್ರ ಹಿತರಕ್ಷಣಾ ವೇದಿಕೆ, ಮುಕ್ತಿಧಾಮ ಅಭಿವೃದ್ಧಿ ಸಮಿತಿ ಹಾಗೂ ಹುಳಿಯಾರು ಮುಕ್ತಿಧಾಮ ಅಭಿವೃಧ್ಧಿ ಸಮಿತಿಯವರು, ಸರ್ಕಾರ

ಎಸ್ಡಿಎಂಸಿ ನೂತನ ಅಧ್ಯಕ್ಷ, ಸದಸ್ಯರ ಆಯ್ಕೆ

ಹುಳಿಯಾರು  ಹೋಬಳಿ ಮರಾಠಿಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ೨೦೧೫-೧೬ ನೇ ಸಾಲಿನ ಶಾಲಾಭಿವೃದ್ದಿ ಸಮಿತಿಯ ನೂತನ ಅಧ್ಯಕ್ಷರಾಗಿ ಎಂ.ಕೆ.ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಿದ್ದರಾಮಯ್ಯ ಮಾತನಾಡಿ, ಗ್ರಾಮೀಣ ಭಾಗದ ಶಾಲೆಗಳಿಗೆ ಸರ್ಕಾರದಿಂದ ಹೆಚ್ಚು ಸವಲತ್ತುಗಳು ದೊರೆಯಬೇಕಿದೆ ಎಂದರು. ವಿದ್ಯಾರ್ಥಿಗಳನ್ನು ಶಾಲೆಯತ್ತ ಆಕರ್ಷಿಸಲು ಬಿಸಿಊಟ,ಪುಸ್ತಕ, ಬಟ್ಟೆ ನೀಡುತ್ತಿದ್ದು ವಿದ್ಯಾರ್ಥಿಗಳು ಪ್ರತಿ ನಿತ್ಯ ತಪ್ಪದೆ ಶಾಲೆ ಬರಬೇಕು ಹಾಗೂ ಪೋಷಕರು ಹೊಲ,ತೋಟದ ಕಾರ್ಯಕ್ಕೆ ಮಕ್ಕಳನ್ನು ಬಳಸಿಕೊಳ್ಳಬೇಡಿ, ಅವರನ್ನು ಓದಲು ಬಿಡಿ ಎಂದರು. ಉಪಾಧ್ಯಕ್ಷರಾಗಿ ರೇಣುಕಾದೇವಿ,ಸದಸ್ಯರಾಗಿ ಸಿದ್ದರಾಮಯ್ಯ,ರಾಮಯ್ಯ,ವಿಜಯಕುಮಾರ್,ವಿಜಯಣ್ಣ,ಜಯಣ್ಣ, ಜ್ಯೋತಿ,ಲಕ್ಷ್ಮಿದೇವಿ,ಮಲ್ಲಮ್ಮ,ಲಕ್ಷ್ಮಮ್ಮ,ಪುಷ್ಪಾವತಿ,ಅನುಸೂಯಮ್ಮ, ರೇಣುಕಮ್ಮ, ರಾಮಯ್ಯ,ಉಮಾದೇವಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಗ್ರಾ.ಪಂ.ಸದಸ್ಯೆ ಭಾಗಮ್ಮ ಅಧ್ಯಕ್ಷತೆಯಲ್ಲಿ ಸದಸ್ಯರ ಆಯ್ಕೆ ನಡೆದಿದ್ದು, ಮುಖ್ಯಶಿಕ್ಷಕಿ ನಾಗರತ್ನಬಾಯಿ, ಶಿಕ್ಷಕರಾದ ರಮೇಶ್, ಜಯಲಕ್ಷ್ಮಮ್ಮ ಉಪಸ್ಥಿತರಿದ್ದರು.

ಪೋಟೋ ಕ್ಯಾಪ್ಷನ್

ಹುಳಿಯಾರು-ಶಿರಾ ನಡುವಿನ ರಸ್ತೆ ಹದಗೆಟ್ಟಿರುವ ಬಗ್ಗೆ ಕನ್ನಡಪ್ರಭಪತ್ರಿಕೆಯಲ್ಲಿ ಶನಿವಾರ ಪ್ರಕಟವಾದ ವರದಿಯನ್ನು ಎಪಿಎಂಸಿ ಕಾರ್ಯಕ್ರಮದ ವೇದಿಕೆಯಲ್ಲಿ ಸಚಿವ ಜಯಚಂದ್ರ ಹಾಗೂ ಸಂಸದ ಮುದ್ದಹನುಮೇಗೌಡ ಅವರು ಕುತೂಹಲದಿಂದ ವೀಕ್ಷಿಸಿದರು.

ಸಚಿವ,ಸಂಸದ, ಶಾಸಕರ ಮೆರವಣಿಗೆ

ಹುಳಿಯಾರು ಹೋಬಳಿ ಹೊಯ್ಸಳಕಟ್ಟೆಗೆ ಆಗಮಿಸಿದ ಸಚಿವ ಜಯಚಂದ್ರ, ಸಂಸದ ಮುದ್ದಹನುಮೇಗೌಡ ಹಾಗೂ ಶಾಸಕ ಸುರೇಶ್ ಬಾಬು ಅವರನ್ನು ವಿದ್ಯುತ್ ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ, ಪೂರ್ಣಕುಂಭ ಸಹಿತ ವಾದ್ಯದೊಂದಿಗೆ ಮೆರವಣಿಗೆ ನಡೆಸಿದರು .

ಸಚಿವ, ಸಂಸದರ ಭರವಸೆ ; ಅಹೋರಾತ್ರಿ ಧರಣಿ ಅಂತ್ಯ ೨೦ ದಿನದಲ್ಲಿ ಗುಂಡಿ ಮುಚ್ಚಿಸುವ ಕಾರ್ಯ ಪ್ರಾರಂಭ

ಶಿರಾ-ಹುಳಿಯಾರು ನಡುವಿನ ರಸ್ತೆ ಹದಗೆಟ್ಟಿದ್ದು, ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವಂತೆ ಒತ್ತಾಯಿಸಿ ಕಳೆದ ಸೋಮವಾರದಿಂದ ಹೊಯ್ಸಳಕಟ್ಟೆ ಗೇಟ್ ನಲ್ಲಿ ನಡೆಯುತ್ತಿದ್ದ ಅಹೋರಾತ್ರಿ ಧರಣಿಗೆ ಸಚಿವ ಜಯಚಂದ್ರ ಹಾಗೂ ಸಂಸದ ಮುದ್ದಹನುಮೇ ಗೌಡ, ಶಾಸಕ ಸುರೇಶ್ ಬಾಬು ಅವರುಗಳು ಭರವಸೆ ನೀಡುವ ಮೂಲಕ ತಿಲಾಂಜಲಿ ಹಾಡಿದರು. ಹುಳಿಯಾರು-ಶಿರಾ ನಡುವಿನ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿಸುವಂತೆ ಹೊಯ್ಸಳಕಟ್ಟೆ ಗೇಟ್ ನಲ್ಲಿ ನಡೆಯುತ್ತಿದ್ದ ಅಹೋರಾತ್ರಿಧರಣಿ ಸ್ಥಳಕ್ಕೆ ಭೇಟಿ ನೀಡ ಸಚಿವ ಜಯಚಂದ್ರ, ಸಂಸದ ಮುದ್ದಹನುಮೇಗೌಡ, ಶಾಸಕ ಸುರೇಶ್ ಬಾಬು ಧರಣಿನಿರತರೊಂದಿಗೆ ಚರ್ಚಿಸಿದರು. ಹುಳಿಯಾರು-ಶಿರಾ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ೨೩೪ ಆಗಿ ಮೇಲ್ದರ್ಜೆಗೇರಿಸಿದ್ದು ಹೆದ್ದಾರಿ ಕಾಮಗಾರಿ ನಡೆಯದೆ ರಸ್ತೆ ತುಂಬೆಲ್ಲಾ ಆಳುದ್ದ ಗುಂಡಿಗಳು ಬಿದ್ದು ಸಂಚಾರ ದುಸ್ತರವಾಗಿದೆ ಎಂದು ಈ ಭಾಗದ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಯವರು, ಜನಪ್ರತಿನಿಧಿಗಳು ಆಹೋರಾತ್ರಿ ಧರಣಿ ನಡೆಸುತ್ತಿದ್ದರು.ಧರಣಿ ವಿಷಯ ತಿಳಿದು ಶನಿವಾರದಂದು ಸ್ಥಳಕ್ಕಾಗಮಿಸಿದ ಸಚಿವರು, ಸಂಸದರು ಹಾಗೂ ಶಾಸಕರು ಧರಣಿನಿರತರ ಸಮಸ್ಯೆಯನ್ನು ಆಲಿಸಿ, ಧರಣಿನಿರತರ ಮನೋಲಿಸಿ ಧರಣಿ ಹಿಂಪಡೆಯುವಂತೆ ಮಾಡಿದರು. ಸಮಸ್ಯೆ ಬಗ್ಗೆ ತಿಳಿದ ಸಚಿವ ಜಯಚಂದ್ರ ಮಾತನಾಡಿ ಹುಳಿಯಾರು-ಶಿರಾ ಹೆದ್ದಾರಿಯ ಕಾಮಗಾರಿಯ ಗುತ್ತಿಗೆ ಪಡೆದಿದ್ದ ಎ.ಎಸ್.ಐ.ಪಿ ಕಂಪ

ರೈತರ ಬದುಕು ಡೋಲಾಯಮಾನ : ಟಿಬಿಜೆ

ಪ್ರಸ್ತುತ ದಿನದಲ್ಲಿ ಉತ್ತಮ ಮಳೆಯಿಲ್ಲದೆ, ಉತ್ತಮ ಬೆಳೆಯಿಲ್ಲದೆ, ಬೆಳೆದ ಬೆಳೆಗೆ ಉತ್ತಮ ಬೆಲೆ ದೊರೆಯದೆ ರೈತ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾ ಕಂಗಾಲಾಗಿದ್ದು, ಅವರ ಜೀವನ ಡೋಲಾಯಮಾನವಾಗಿದೆ ಎಂದು ಕಾನೂನು ಸಂಸದೀಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ವಿಷಾಧಿಸಿದರು. ಹುಳಿಯಾರು ಎಪಿಎಂಸಿ ಪ್ರಾಂಗಣದಲ್ಲಿ ವಿವಿಧ ಯೋಜನಯಡಿ ನಿರ್ಮಿಸಿರುವ ಗೋದಾಮುಗಳ ಉದ್ಘಾಟನಾ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಉದ್ಘಾಟಿಸಿದರು. ಶಾಸಕ ಸಿ.ಬಿ.ಸುರೇಶ್ ಬಾಬು, ಸಂಸದ ಎಸ್.ಪಿ.ಮುದ್ದಹನುಮೇಗೌಡ ಇತರರಿದ್ದಾರೆ. ಹುಳಿಯಾರಿನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಆರ್.ಐ.ಡಿ.ಎಫ್ ಯೋಜನೆಯಡಿಯಲ್ಲಿ ನಿರ್ಮಿಸಲಾಗಿದ್ದ ೨ ಗೋದಾಮುಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಹೊಸದುರ್ಗದಿಂದ ಹುಳಿಯಾರು ಮಾರ್ಗವಾಗಿ ಶಿರಾಕ್ಕೆ ನೀರೊದಗಿಸುವ ಸುಮಾರು ರೂ.12334 ಕೋಟಿ ವೆಚ್ಚದ ಭದ್ರಾ ಮೇಲ್ದಂಡೆ ಯೋಜನೆಗೆ ಸರ್ಕಾರದಿಂದ ಮಂಜೂರಾತಿ ದೊರೆತಿದೆ. ಈ ಹಿಂದೆ ರೂಪುಗೊಂಡಿದ್ದ ಭದ್ರಾ ಮೇಲ್ದಂಡೆ ಯೋಜನೆಯಿಂದ ಒಟ್ಟು 21 ಟಿಎಂಸಿ ನೀರಲ್ಲಿ ಕೇವಲ 6 ಟಿಎಂಸಿ ಮಾತ್ರ ಜಿಲ್ಲೆಗೆ ಲಭ್ಯವಾಗುವ ಸಾಧ್ಯತೆ ಇತ್ತು. ಆದರೆ ಈಗ ಒಟ್ಟು 30ಟಿಎಂಸಿ ನೀರು ಹರಿಸುವ ಯೋಜನೆ ರೂಪಿಸಿದ್ದು ಜಿಲ್ಲೆಗೆ 10 ಟಿಎಂಸಿ ನೀರು ಲಭ್ಯವಾಗಲಿದೆ. ಹೊಸದುರ್ಗದಿಂದ ನೈಸರ್ಗಿಕವಾಗಿ ಹುಳಿಯಾರು ಮಾರ್ಗವಾಗಿ

ಹುಳಿಯಾರು-ಶಿರಾ ರಸ್ತೆ : ಬಲಿಗಾಗಿ ಬಾಯ್ತೆರದು ನಿಂತ ಗುಂಡಿಗಳು ಅವಧಿ ಮುಗಿದರೂ ಪ್ರಾರಂಭವಾಗದ ಹೆದ್ದಾರಿ ಕಾಮಗಾರಿ ಪ್ರತಿಭಟನೆಗೆ ಕಿಂಚಿತ್ತು ಗಮನಗೊಡದ ಅಧಿಕಾರಿ ವರ್ಗ

ವರದಿ:ಡಿ.ಆರ್.ನರೇಂದ್ರಬಾಬು ಹುಳಿಯಾರು : ಕಾನೂನು ಸಚಿವರ ಕ್ಷೇತ್ರವಾಗಿರುವ ಶಿರಾ ಹಾಗೂ ಹುಳಿಯಾರು ನಡುವಿನ ಮಾರ್ಗ ಹದಗೆಟ್ಟಿದ್ದು, ರಸ್ತೆಯಲ್ಲಿ ಆಳುದ್ದ ಗುಂಡಿಗಳು ಬಿದ್ದು ದಿನಗರುಳುತ್ತಿವೇ ಹೊರತು ಯಾವುದೇ ದುರಸ್ಥಿಯಾಗದೆಯಿದ್ದು, ಯಾವಾಗ ಏನಾಗುತ್ತದೋ ಎಂಬಂತಾಗಿ, ಇಲ್ಲಿ ಸಂಚರಿಸುವವವರು ಜೀವದ ಆಸೆ ತೊರೆದು ಸಂಚರಿಸುವಂತಾಗಿದೆ. ರಸ್ತೆಯಲ್ಲಿನ ಗುಂಡಿಗಳನ್ನಾದರೂ ಮುಚ್ಚಿ ಸಂಚಾರಕ್ಕೆ ಯೋಗ್ಯ ಮಾಡಿಕೊಡಿ ಎಂದು ಈ ಮಾರ್ಗದ ಸಾರ್ವಜನಿಕರು ಎಷ್ಟೇ ಬಾರಿ ಪ್ರತಿಭಟನೆ ಮಾಡಿದರೂ ಸಹ ಈ ಬಗ್ಗೆ ಅಧಿಕಾರಿಗಳು ಕಿವಿಗೊಡದೆ ಮೌನವಾಗಿದ್ದು ಸಾರ್ವಜನಿಕರನ್ನು ಮೃತ್ಯುಕೂಪಕ್ಕೆ ತಳ್ಳುತ್ತಿದ್ದಾರೆ. ಹುಳಿಯಾರು-ಶಿರಾ ಮಾರ್ಗದಲ್ಲಿ ಹದಗೆಟ್ಟಿರುವ ರಸ್ತೆ . ಹುಳಿಯಾರು-ಶಿರಾ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ೨೩೪ ಆಗಿ ಮೇಲ್ದರ್ಜೆಗೇರಿಸಿದ್ದು ಹೆದ್ದಾರಿ ಪ್ರಾಧಿಕಾರಕ್ಕೆ ವಹಿಸಿಕೊಡಲಾಗಿದೆ. ಈಗಾಗಲೇ ರಸ್ತೆ ಕಾಮಗಾರಿಗಾಗಿ ೨೦೧೦ರಲ್ಲೇ ಟೆಂಡರ್ ಸಹ ಕರೆದು ೮-೧೦ಪ್ಯಾಕೇಜ್ ನಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದು ಕೆಲವೆಡೆ ಮಾತ್ರ ರಸ್ತೆ ಕೆಲಸ ಸಾಗುತ್ತಿದೆ. ಆದರೆ ಶಿರಾ-ಹುಳಿಯಾರು- ಬಾಣಾವರ ನಡುವಿನ ರಸ್ತೆ ಮಾರ್ಗದಲ್ಲಿ ಕಾಮಗಾರಿ ಕುಂಟುತ್ತಾ ಸಾಗಿದೆ. ಈ ಮಾರ್ಗದಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆ ರಸ್ತೆ ಮಾಡುವುದಾಗಿ ಬಂದವರು ರಸ್ತೆ ಬದಿಯಲ್ಲಿನ ಬೃಹತ್ ಮರಗಳನ್ನು ತುಂಡರಿಸಿ ಸಾಗಿಸಿದರಲ್ಲದೆ, ಕೆಲ ಸೇತುವೆಗಳನ್ನು ಕಿತ್ತು ಅ

ನಿಧನ :ಶಿಕ್ಷಕಿ ಅನ್ನಪೂರ್ಣಮ್ಮ

ಹುಳಿಯಾರು ಹೋಬಳಿಯ ಗೋಪಾಲಪುರದ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಅನ್ನಪೂರ್ಣಮ್ಮ(೫೩) ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.ಕಳೆದ ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಶೆಟ್ಟಿಕೆರೆ ಹೋಬಳಿಯ ಸೋಮಲಾಪುರದವರಾಗಿದ್ದು ಹುಳಿಯಾರಿನ ವಸಂತನಗರ ಬಡಾವಣೆಯಲ್ಲಿ ನೆಲೆಸಿದ್ದವ ಇವರು ಈ ಮುಂಚೆ ಗಾಣಧಾಳು, ಕಂಪನಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ಕಾರ್ಯನಿರ್ವಹಿಸಿದ್ದರು. ತಾಲ್ಲೂಕು ಪ್ರಾಥಮಿಕಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಸ್.ಪ್ರಕಾಶ್, ಬಿಇಓ ಕೃಷ್ಣಮೂರ್ತಿ, ದೇವಾಂಗ ಸಂಘದ ಅಧ್ಯಕ್ಷ ಅನಂತ್ ಕುಮಾರ್, ದಾಸಪ್ಪ ,ವಿವಿಧ ಶಾಲೆಯ ಶಿಕ್ಷಕರು,ಎಸ್ಡಿಎಂಸಿಯವರು ಮೃತರ ಅಂತಿಮ ದರ್ಶನ ಪಡೆದರು. ಮೃತರ ಅಂತ್ಯ ಸಂಸ್ಕಾರಕ್ಕಾಗಿ ಶಿಕ್ಷಕರ ಸಂಘದಿಂದ ೫ಸಾವಿರ ಹಾಗೂ ಬಿಇಓ ಅವರು ೫ ಸಾವಿರ ರೂಗಳನ್ನು ನೀಡಿದರು. ಶುಕ್ರವಾರ ಪಟ್ಟಣದಲ್ಲಿ ಅಂತ್ಯಕ್ರಿಯೆ ನಡೆಯಿತು.

ಮುಂದುವರಿದ ಅಹೋರಾತ್ರಿ ಧರಣಿ

ಎನ್.ಹೆಚ್.೨೩೪ ರಸ್ತೆ ಕಾಮಗಾರಿಯನ್ನು ಶೀಘ್ರವೇ ಪ್ರಾರಂಭಿಸುವಂತೆ ಹಾಗೂ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಒತ್ತಾಯಿಸಿ ಹೋಬಳಿಯ ಹೊಯ್ಸಳಕಟ್ಟೆ ಗೇಟ್ ನಲ್ಲಿ ವಿವಿಧ ಸಂಘ ಸಂಸ್ಥೆಯವರು, ಜನಪ್ರತಿನಿಧಿಗಳು, ಸಾರ್ವಜನಿಕರು ಕಳೆದ ಸೋಮವಾರ ಪ್ರಾರಂಭಿಸಿದ ಅಹೋರಾತ್ರಿ ಧರಣಿ ೪ನೇ ದಿನವಾದ ಗುರುವಾರವೂ ಮುಂದುವರೆದಿದೆ. ಹುಳಿಯಾರು-ಶಿರಾ ಮಾರ್ಗದ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವಂತೆ ಒತ್ತಾಯಿಸಿ ಹುಳಿಯಾರು ಹೋಬಳಿ ಹೊಯ್ಸಳಕಟ್ಟೆ ಗೇಟ್ ನಲ್ಲಿ ಗುರುವಾರವೂ ಮುಂದುವರಿದ ಅಹೋರಾತ್ರಿಧರಣಿ. ಪ್ರತಿದಿನ ಒಂದೊಂದು ಸಂಘಸಂಸ್ಥೆಯವರು ಪಾಲ್ಗೊಳ್ಳುತ್ತಿದ್ದು ಹೋರಾಟಕ್ಕೆ ಇಂಬುನೀಡುತ್ತಿದ್ದಾರೆ. ಗುರುವಾರದ ಧರಣಿಯಲ್ಲಿ ಜಯಚಂದ್ರನಗರದ ಬೋರನಕಣಿವೆ ಜಲಾಶಯದ ವಿನಾಯಕ ಮೀನುಗಾರರ ಸಂಘದ ಸದಸ್ಯರು ಪಾಲ್ಗೊಂಡು ಅಧಿಕಾರಿಗಳ ವಿರುದ್ದ ಧಿಕ್ಕಾರ ಕೂಗಿದರು.ದಿನನಿತ್ಯ ಭಜನೆ, ಸಾಂಸ್ಕೃತಿಕಕಾರ್ಯಕ್ರಮ ನಡೆಸುವ ಮೂಲಕ ಧರಣಿ ಮುಂದುವರೆದಿದೆ. ಧರಣಿ ಪ್ರಾರಂಭದ ದಿನ ಎಇಇ ಬಂದು ಹೋಗಿದ್ದು ಬಿಟ್ಟರೆ ಮತ್ಯಾವುದೇ ಅಧಿಕಾರಿಗಳು ಬಾರದೆಯಿದ್ದು ಧರಣಿ ನಿರತರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದು ನಾಲ್ಕುದಿನವಾದರೂ ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಸ್ಥಳಕ್ಕಾಗಮಿಸದೆ ಇರುವುದು ಧರಣಿನಿರತರನ್ನು ರೊಚ್ಚಿಗೇಳುವಂತೆ ಮಾಡಿದೆ.

"ನೀಲಿ ಕುದುರೆ" ನಾಟಕ ಪ್ರದರ್ಶನಕ್ಕೆ ಚಾಲನೆ

ಮಕ್ಕಳ ನಾಟಕ ಹಬ್ಬ-೨೦೧೫ರ ಅಂಗವಾಗಿ ತಿಪಟೂರಿನ ಭೂಮಿ ಥಿಯೇಟರ್ ತಂಡದಿಂದ ಪಟ್ಟಣದಲ್ಲಿ ಎರಡುದಿನಗಳ ಕಾಲ ನಡೆಯಲಿರುವ ನಾಟಕ ಪ್ರದರ್ಶನಕ್ಕೆ ಮಕ್ಕಳಸಾಹಿತಿ ಕೃಷ್ಣಮೂರ್ತಿಬಿಳಿಗೆರೆ ಗುರುವಾರ ಚಾಲನೆ ನೀಡಿದರು. ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ನಡೆದ "ನೀಲಿ ಕುದುರೆ" ನಾಟಕ ಪ್ರದರ್ಶನಕ್ಕೆ ಮಕ್ಕಳಸಾಹಿತಿ ಕೃಷ್ಣಮೂರ್ತಿಬಿಳಿಗೆರೆ ಚಾಲನೆನೀಡಿ ಮಾತನಾಡಿದರು. ನಂತರ ಮಾತನಾಡಿದ ಅವರು ನೀಲಿ ಕುದುರೆ ಜಗತ್ ಪ್ರಸಿದ್ದ ಮಕ್ಕಳ ನಾಟಕವಾಗಿದ್ದು ಬ್ರೆಜಿಲ್ ನ ಖ್ಯಾತ ಲೇಖಕಿ ಮಾರಿಯಾ ಕ್ಲಾರಾ ಮಾಶಾಡೊ ಅವರು ರಚಿಸಿದ್ದಾರೆ. ಪೋರ್ಚಗೀಸ್ ಭಾಷೆಯಲ್ಲಿ ರಚನೆಯಾಗಿರುವ ಈ ನಾಟಕವನ್ನು ರಂಗಕರ್ಮಿ ಬಿ.ವಿ.ಕಾರಂತರು ಕನ್ನಡಕ್ಕೆ ಅನುವಾದಿಸಿದ್ದಾರೆ. ಭೂಮಿ ಥಿಯೇಟರ್ ನಿರ್ದೇಶಕರಾದ ಸತೀಶ್ ತಿಪಟೂರು ಅವರು ಭೂಮಿ ರಂಗ ಪ್ರಯೋಗಶಾಲೆಯ ಮೂಲಕ ಶಾಲಾಮಕ್ಕಳಿಗಾಗಿ ಇದನ್ನು ಪ್ರದರ್ಶಿಸುತ್ತಿದ್ದಾರೆ. ಇಂತಹ ನಾಟಕ ಪ್ರದರ್ಶನಗಳು ಮಕ್ಕಳಿಗೆ ರಂಜನೆ ಕೊಡುವುದರ ಜೊತೆಗೆ ಸಾಮಾಜಿಕ ಅರಿವು,ಜವಾಬ್ದಾರಿಯನ್ನು ಬೆಳೆಸಿ ಅವರ ಕಲ್ಪನಾ ಶಕ್ತಿಯು ವಿಸ್ತರಿಸಿ ಹೊಸದಿಕ್ಕಿನತ್ತ ಕೊಂಡೊಯ್ಯುತ್ತದೆ ಎಂದು ಶ್ಲಾಘಿಸಿದರು. ತಿಪಟೂರಿನ ಸತೀಶ್ ಅವರ ನಿರ್ದೇಶನದಲ್ಲಿ ನಾಟಕಪ್ರದರ್ಶನ ನಡೆದಿದ್ದು, ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ನಾಟಕ ಪ್ರದರ್ಶನ ವೀಕ್ಷಿಸಲು ವಾಸವಿಶಾಲೆ,ಟಿ.ಆರ್.ಎಸ್.ಆರ್ ಶಾಲೆ,ಕನಕದಾಸ ಶಾಲೆಯ ವಿದ್ಯಾರ್ಥಿಗಳು ಆಗಮಿಸಿದ್ದರು.

ಪೋಟೋ ಕ್ಯಾಪ್ಷನ್

ಹುಳಿಯಾರಿನ ಹೋಟೆಲ್ ನರಸಿಂಹಣ್ಣನವರ ಮನೆ ಹತ್ತಿರ ಅಮೃತ ಜ್ಞಾನ ವಿಕಾಸ ಕೇಂದ್ರದ ನೇತೃತ್ವದಲ್ಲಿ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ "ಚಲನಚಿತ್ರೋತ್ಸವ ೨೦೧೫" ಕ್ಕೆ ಗ್ರಾಪಂ ಸದಸ್ಯ ಹೇಮಂತ್ ಚಾಲನೆ ನೀಡಿದರು.

ಥಿಯೋಸಫಿಯಲ್ಲಿ ಉಪನ್ಯಾಸ

ದಿವಂಗತ ಹೆಚ್.ಎ. ಭಾಸ್ಕರಾಚಾರ್ ಅವರ ಸ್ಮರಣಾರ್ಥ ಪಟ್ಟಣದ ಸನ್ಮಾರ್ಗ ಥಿಯಸಾಫಿಕಲ್ ಸೊಸೈಟಿಯಲ್ಲಿ ಸಾರ್ವಜನಿಕ ಸಮಾವೇಶ ಹಾಗೂ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಹುಳಿಯಾರಿನ ಥಿಯಸಾಫಿಕಲ್ ಸೊಸೈಟಿಯಲ್ಲಿ ನಡೆದ ಉಪನ್ಯಾಸಕ ಕಾರ್ಯಕ್ರಮದಲ್ಲಿ ಸೊಸೈಟಿಯ ಎಂ.ಆರ್.ಗೋಪಾಲ್ ಮಾತನಾಡಿದರು. ಸೊಸೈಟಿಯ ಅಧ್ಯಕ್ಷ ಹೆಚ್.ಬಿ.ಗೋಪಾಲಕೃಷ್ಣ ಅಧ್ಯಕ್ಷತೆವಹಿಸಿದ್ದು, ಶ್ರೀರಾಂಪುರದ ಡಾ.ಗೋಪಾಲಕೃಷ್ಣ ಅವರು "ನಿನ್ನ ಭವಿಷ್ಯತ್ತಿಗೆ ಒಡೆಯನಾರು" ವಿಷಯ ಕುರಿತು ಉಪನ್ಯಾಸ ನೀಡಿದರು. ಎಂ.ಆರ್.ಗೋಪಾಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಈ ವೇಳೆ ಸೊಸೈಟಿಯ ಮಹೇಶಾಚಾರ್,ವಕೀಲ ಸತೀಶ್, ಶಿಕ್ಷಕ ಜಗದೀಶ್,ಸುದರ್ಶನ್ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

ಹೆದ್ದಾರಿ ಕಾಮಗಾರಿಗೆ ಒತ್ತಾಯಿಸಿ ಪ್ರತಿಭಟನೆ ಪಟ್ಟು ಬಿಡದ ಧರಣಿನಿರತರು : ಮುಂದುವರಿದೆ ಅಹೋರಾತ್ರಿ ಧರಣಿ : ಸ್ಥಳದಲ್ಲೇ ಅಡುಗೆ

ಹೊಯ್ಸಳಕಟ್ಟೆ ಮೂಲಕ ಹಾದುಹೋಗುವ ಹುಳಿಯಾರು- ಶಿರಾ ರಸ್ತೆ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಶೀಘ್ರ ಪ್ರಾರಂಭಿಸುವಂತೆ ಹಾಗೂ ಹದಗೆಟ್ಟಿರುವ ಈ ಮಾರ್ಗವನ್ನು ದುರಸ್ಥಿಗೊಳಿಸಿ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಒತ್ತಾಯಿಸಿ ಹೊಯ್ಸಳಕಟ್ಟೆಯಲ್ಲಿ ಬಸ್ ನಿಲ್ದಾಣದಲ್ಲಿ ಸೋಮವಾರ ಧರಣಿ ಪ್ರಾರಂಭಿಸಿದ ಗ್ರಾಮಸ್ಥರು ಕಾಮಗಾರಿ ಆರಂಭವಾಗುವವರೆಗೆ ಸ್ಥಳದಿಂದ ಕದಲುವುದಿಲ್ಲವೆಂಬ ತಮ್ಮ ಪಟ್ಟುಸಡಿಲಿಸದೆ ಸ್ಥಳದಲ್ಲೇ ಅಡುಗೆ ಮಾಡುವ ಮುಲಕ ಅಹೋರಾತ್ರಿಧರಣಿ ಮುಂದಾಗಿದ್ದಾರೆ. ಹುಳಿಯಾರು-ಶಿರಾ ನಡುವಿನ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿಸುವಂತೆ ಒತ್ತಾಯಿಸಿ ಹೊಯ್ಸಳಕಟ್ಟೆ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ರಾಷ್ಟ್ರೀಯ ಹೆದ್ದಾರಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಿವಕುಮಾರ್ ಗೆ ಘೇರಾವ್ ಮಾಡಿದ ಪ್ರತಿಭಟನಾ ನಿರತರು ಅವರ ಯಾವುದೇ ಉತ್ತರಕ್ಕೂ ಕಿವಿಗೊಡದೆ ಮೇಲಾಧಿಕಾರಿಗಳನ್ನು ಕರೆತರೆದೆ ಅವರ ಗಮನಕ್ಕೂ ತಾರದೇ ತಾವೇ ಸ್ಥಳಕ್ಕೆ ಬಂದಿದ್ದರಿಂದ ರೊಚ್ಚಿಗೆದ್ದ ಧರಣಿನಿರತರು ಅವರೊಂದಿಗೆ ಮಾತಿನಚಕಮುಕಿ ನಡೆಸಿದರು. ಸಮಸ್ಯೆ : ಹುಳಿಯಾರು-ಶಿರಾ ಮಾರ್ಗದ ರಸ್ತೆಯನ್ನು ಎನ್.ಹೆಚ್.೨೩೪ ಆಗಿ ಮೇಲ್ದರ್ಜೆಗೇರಿಸಿದ್ದು ಹೆದ್ದಾರಿ ಕಾಮಗಾರಿ ನಡೆಯದೆ ರಸ್ತೆಯೆಲ್ಲಾ ಹದಗೆಟ್ಟು ಆಳುದ್ದ ಗುಂಡಿಗಳು ಬಿದ್ದಿದ್ದು ಸಂಚಾರ ದುಸ್ಥರವಾಗಿದೆ. ಈ ಮ

ಹುಳಿಯಾರು ಎಪಿಎಂಸಿಯಲ್ಲಿ ಹೆಸರುಕಾಳಿನ ಸುಗ್ಗಿ ಎತ್ತ ಕಣ್ಣಾಯಿಸಿದರೂ ಹೆಸರುಕಾಳಿನ ರಾಶಿ ರಾಶಿ

ವರದಿ:ಡಿ.ಆರ್.ನರೇಂದ್ರಬಾಬು ಹುಳಿಯಾರು : ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರಿನ ಪ್ರಮುಖ ಬೆಳೆಯಾಗಿ ಬಿಂಬಿತವಾಗಿರುವ ಹೆಸರು ಇದೀಗ ಫಸಲು ನೀಡಿದ್ದು ರೈತರು ಹೆಸರುಕಾಳನ್ನು ಮಾರಲು ಎಪಿಎಂಸಿಯತ್ತ ಮುಗಿಬಿದಿದ್ದು ಪಟ್ಟಣದ ಎಪಿಎಂಸಿಯಲ್ಲಿ ಹೆಸರುಕಾಳಿನ ವ್ಯಾಪಾರ ಭರಾಟೆಯಿಂದ ಕೂಡಿದ್ದು, ಎತ್ತ ಕಣ್ಣುಹಾಯಿಸಿದರೂ ಹೆಸರುಕಾಳಿನ ರಾಶಿ ಹಾಗೂ ಚೀಲಗಳೇ ಕಂಡುಬರುತ್ತಿವೆ. ಹುಳಿಯಾರು ಎಪಿಎಂಸಿಯ ಅಂಗಡಿಗಳ ಮುಂದೆ ನಿಟ್ಟಾಕಿರುವ ಹೆಸರುಕಾಳಿನ ಚೀಲಗಳು. ಈ ಬಾರಿ ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆಯಾದ ಹಿನ್ನಲೆಯಲ್ಲಿ ರೈತರು ಹೆಸರು ಬಿತ್ತನೆ ಮಾಡಿದ್ದು ನಂತರ ಕಾಲಕ್ಕೆ ತಕ್ಕಂತೆ ಹದಮಳೆಯಾಗಿದ್ದು ಹೆಸರು ಹುಲುಸಾಗಿ ಬೆಳೆಯಲು ಸಹಕಾರಿಯಾಗಿತ್ತು. ಅಂತೆಯೇ ಹೋಬಳಿಯ ದಸೂಡಿ,ದಬ್ಬಗುಂಟೆ,ಹೊಯ್ಸಳಕಟ್ಟೆ, ಗಾಣಧಾಳು,ಕೆಂಕೆರೆ, ಯಳನಡು, ಕೋರಗೆರೆ, ತಿರುಮಲಾಪುರ,ನಂದಿಹಳ್ಳಿ, ದೊಡ್ಡಬಿದರೆ, ಬರಕನಹಾಳ್ ಸೇರಿದಂತೆ ಇನ್ನಿತರ ಹಳ್ಳಿಗಳ ಬಹುತೇಕ ಮಂದಿ ರೈತರು ತಮ್ಮ ಜಮೀನಿನಲ್ಲಿ ಹೆಸರು ಬಿತ್ತನೆ ಮಾಡಿದ್ದರು. ಪೂರ್ವ ಮುಂಗಾರಿನ ನಂತರ ಕೆಲ ದಿನ ಮಳೆ ಬಾರದೆ ಬಿಸಿಲಝಳದ ಹೆಚ್ಚಳದಿಂದಾಗಿ ಹೆಸರು ಗಿಡದ ಎಲೆಗಳು ಹಳದಿಯಾಗುವಂತಾಗಿದ್ದು ಬಿಟ್ಟರೆ ಹೆಸರಿನಲ್ಲಿ ಮತ್ಯಾವುದೇ ರೀತಿಯ ರೋಗಬಾಧೆ ಕಂಡುಬಂದಿಲ್ಲ. ಕೆಲ ರೈತರು ತಾವೇ ಈ ಹಿಂದೆ ದಾಸ್ತಾನು ಮಾಡಿಕೊಂಡಿದ್ದ ಹೆಸರುಕಾಳುಗಳನ್ನೇ ಬಿತ್ತನೆಗೆ ಬಳಸಿದ್ದರೆ, ಮತ್ತೆ ಕೆಲ ರೈತರು ರೈತಸಂಪರ್ಕ ಕೇಂ

ಹುಳಿಯಾರು : ದಿನವಿಡಿ ಬಿಟ್ಟುಬಿಡದೆ ಬಂದ ಸೊನೆ ಮನೆ

ಹುಳಿಯಾರು ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಭಾನುವಾರ ಮುಂಜಾನೆಯಿಂದ ಬಿಟ್ಟುಬಿಡದೆ ಸೊನೆ ಮಳೆ ಸುರಿಯಿತು. ಪಟ್ಟಣದಲ್ಲಿ ಸೊನೆಮಳೆಯಿಂದಾಗಿ ಅಂಗಡಿ ಮುಗ್ಗಟ್ಟಿನ ವಹಿವಾಟು ವಿರಳವಾಗಿತ್ತು. ಬೆಳಿಗ್ಗಿನಿಂದಲೇ ಸೊನೆ ಮಳೆ ಬರುತ್ತಿದ್ದರಿಂದ ಜನರು ಮನೆಯಿಂದ ಹೇಗಪ್ಪ ಹೊರ ಹೋಗೋದು ಎಂಬಂತಾಗಿ ಮನೆಯಲ್ಲಿರುವಂತಾಗಿದ್ದರೂ ಸಹ ಕೆಲವರು ಛತ್ರಿ ಆಶ್ರಯದಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುತ್ತಿದ್ದು ಕಂಡುಬಂತು. ಮುಂಜಾನೆಯಿಂದಲೂ ಸೂರ್ಯ ರಶ್ಮಿಯಿಲ್ಲಂತಾಗಿ ಶೀತದ ವಾತಾವರಣ ನಿರ್ಮಾಣವಾಗಿತ್ತು. ಪಟ್ಟಣದ ಬಸ್ ನಿಲ್ದಾಣ, ರಾಜ್ ಕುಮಾರ್ ರಸ್ತೆ ಸೇರಿದಂತೆ ವಿವಿಧೆಡೆ ನೀರು ನಿಂತು ಸಂಚಾರಕ್ಕೆ ತೊಂದರೆಯಾಗಿತ್ತು. ಬಸ್ ನಿಲ್ದಾಣದಲ್ಲಿ ನೀರು ಜನ ಅದರ ನಡುವೆಯೇ ನಡೆದಾಡುವಂತಾಗಿತ್ತು. ಹೋಬಳಿಯ ವಿವಿಧೆಡೆ ರೈತರು ಹೆಸರುಗಿಡನ್ನು ಕಿತ್ತಿದ್ದು ಅದನ್ನು ಒಣಗಿಸಲು ಮುಂದಾಗಿದ್ದರಾದರೂ ಬಿಸಿಲಿಲ್ಲದ ಕಾರಣ ಕೈಕಟ್ಟಿಕೂರುವಂತಾಗಿ, ಹೀಗಾದರೆ ಹೆಸರನ್ನು ಯಾವರೀತಿ ಒಕ್ಕಣೆ ಮಾಡುವುದು, ಮಳೆ ಬರುತ್ತಲೇ ಇದ್ದರೆ ಹೆಸರುಕಾಳಿಗೆ ಶೀತತಗುಲಿ ಅವು ಕಪ್ಪಾಗುತ್ತವೆಂಬ ಆತಂಕ ರೈತರಲ್ಲಿ ಉಂಟಾಗಿದೆ. 

ಹುಳಿಯಾರು: ಸಂಭ್ರಮದ ರಂಜಾನ್

ಮುಸ್ಲಿಂರ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಈದ್-ಉಲ್-ಫಿತರ್(ರಂಜಾನ್) ಹಬ್ಬವನ್ನು ಶನಿವಾರದಂದು ಪಟ್ಟಣದ ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಆಚರಿಸುವ ಮೂಲಕ ಕಳೆದ ಒಂದು ತಿಂಗಳ ಉಪವಾಸಕ್ಕೆ ಅಂತ್ಯಹಾಡಿದ್ದಾರೆ. ಸುಗಂಧದ್ರವ್ಯ ಲೇಪಿತ ಹೊಸಬಟ್ಟೆಗಳನ್ನು ತೊಟ್ಟ ಮುಸ್ಲಿಂ ಸಮುದಾಯದವರು ಪಟ್ಟಣದ ಜಾಮೀಯಾ,ಸೂರಾನಿ,ಮದೀನಾ ಮಸೀದಿಯಲ್ಲಿ ಪ್ರಾರ್ಥನೆ ನಡೆಸಿದರು. ನಂತರ ಧರ್ಮಗುರುಗಳೊಂದಿಗೆ ಈದ್ಗಾ ಮೈದಾನಕ್ಕೆ ಆಗಮಿಸಿ ನಮಾಜ್ ಮಾಡಿ, ಒಬ್ಬರಿಗೊಬ್ಬರು ಅಪ್ಪಿಕೊಳ್ಳುವ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಹುಳಿಯಾರಿನ ಈದ್ಗಾಮೈದಾನದಲ್ಲಿ ಮುಸ್ಲಿಂಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ರಂಜಾನ್ ಆಚರಿಸಿದರು . ಧರ್ಮಗುರುಗಳಾದ ಮೌಲಾನಾ ಹಸೀಫ್ ಅಲಿ ಅವರು ಮಾತನಾಡಿ, ಮಹಮದ್ ಪೈಗಂಬರರರ ನೆನಪಾಗಿ ಹಾಗೂ ತ್ಯಾಗ,ದಾನದ ಸಂಕೇತವಾಗಿ ಹಬ್ಬದ ಅಚರಣೆ ನಡೆದುಕೊಂಡಿದ್ದು ಬಂದಿದೆ ಎಂದರು. ಶ್ರೀಮಂತರು,ಬಡವರೆನ್ನುವ ಭೇದಭಾವವಿಲ್ಲದೆ ಒಂದು ತಿಂಗಳಕಾಲ ಉಪವಾಸ ವ್ರತಾಚರಣೆ ಮಾಡುತ್ತಾ ಅಲ್ಲಾನನ್ನು ಸ್ಮರಿಸಿರುವುದಾಗಿ ತಿಳಿಸಿದರು. ರಂಜಾನ್ ದಾನದ ಹಬ್ಬವಾಗಿದ್ದು ಉಳ್ಳವರು ಇಲ್ಲದವರಿಗೆ ತಮ್ಮ ಕೈಕೆಲಾದ ಬಟ್ಟೆ, ಪಾತ್ರೆ ಸೇರಿದಂತೆ ಇನ್ನಿತರ ವಸ್ತುಗಳನ್ನು ದಾನ ಮಾಡುತ್ತಾರೆ ಎಂದರು. ಪಟ್ಟಣದ ಈದ್ಗಾ ಮೈದಾನ ಸೇರಿದಂತೆ ವೈಎಸ್.ಪಾಳ್ಯ,ಕಂಪನಹಳ್ಳಿ,ಯಗಚಿಹಳ್ಳಿಯಲ್ಲೂ ಸಹ ಸಾಮೂಹಿಕ ಪ್ರಾರ್ಥನೆ ಸಲ್ಲಿ

ಕುಡಿಯುವನೀರು ಪೂರೈಕೆ ಟ್ಯಾಂಕ್ ಸುತ್ತ ಮುಳ್ಳುಪೊದೆ

ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಒವರ್ ಹೆಡ್ ಟ್ಯಾಂಕ್ ಸುತ್ತ ಮುಳ್ಳುಗಿಡಗಳು ಬೆಳೆದಿದ್ದು ಅನೈರ್ಮಲ್ಯ ಉಂಟಾಗಿದ್ದರೂ ಸಹ ಈ ಬಗ್ಗೆ ಸ್ಥಳೀಯ ಆಡಳಿತದವರು ಗಮನಹರಿಸದ ಮೌನವಹಿಸಿದ್ದಾರೆ. ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದಲ್ಲಿ ಕುಡಿಯುವ ನೀರು ಪೂರೈಸುವ ಟ್ಯಾಂಕ್ ಸುತ್ತ ಬೆಳೆದಿರುವ ಮುಳ್ಳುಪೊದೆ. ಗ್ರಾಮಕ್ಕೆ ಕಳೆದ ಹತ್ತಾರೂ ವರ್ಷದಿಂದ ನೀರು ಪೂರೈಸುತ್ತಿರುವ ಈ ಟ್ಯಾಂಕ್ ಸುತ್ತಾ ಮುಳ್ಳು ಗಿಡಗಳು ಬೆಳೆದು ನೀರುಗಂಟಿ ನೀರು ಬಿಡಲು ಆ ಗಿಡಗಳ ಮಧ್ಯೆಯೇ ಕೂತು ಕಂಟ್ರೋಲ್ ತಿರುಗಿಸಿ ನೀರು ಬಿಡುವಂತಾಗಿದೆ. ಕೆಲವೊಮ್ಮೆ ಹೆಚ್ಚುವಾರಿಯಾದ ನೀರು ಟ್ಯಾಂಕ್ ಹತ್ತಿರವೇ ನಿಂತು ಸೊಳ್ಳೆಗಳು ಹೆಚ್ಚಳವಾಗುವಂತಾಗಿದೆ. ಟ್ಯಾಂಕ್ ನ ಕೆಲ ಭಾಗದಲ್ಲಿ ಸಿಮೆಂಟ್ ಉದುರಿದ್ದು ಕಬ್ಬಿಣದ ಸರಳುಗಳು ಹೊರಕಾಣಿಸುತ್ತಿದ್ದು ಯಾವಾಗ ಏನಾಗುತ್ತದೋ ಎಂಬಂತಾಗಿದೆ. ಪಂಚಾಯ್ತಿ ಸದಸ್ಯರು ದಿನನಿತ್ಯ ಟ್ಯಾಂಕ್ ಅಕ್ಕಪಕ್ಕ ಸಂಚರಿಸುತ್ತಿದ್ದರೂ ಸಹ ಈ ಬಗ್ಗೆ ಗಮನಹರಿಸಿಲ್ಲವೆಂದು ಸಾರ್ವಜನಿಕರು ದೂರಿದ್ದಾರೆ. ಪಂಚಾಯ್ತಿಯವರು ಈ ಬಗ್ಗೆ ಶೀಘ್ರವೇ ಗಮನಹರಿಸಿ ಟ್ಯಾಂಕ್ ಸುತ್ತಮುತ್ತ ಬೆಳೆದಿರುವ ಬೇಲಿಯನ್ನು ತೆರವುಗೊಳಿಸಿ ಸ್ವಚ್ಚ ಮಾಡುವುದರ ಜೊತೆಗೆ ಶಿಥಿಲವಾಗುತ್ತಿರುವ ಟ್ಯಾಂಕ್ ನ ಭಾಗವನ್ನು ಸರಿಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

"ತಲೆಮಾರು" ಪತ್ರಿಕೆ ಕೃಷಿ, ಸಾಮಾಜಿಕ ಕ್ಷೇತ್ರಕ್ಕೆ ದಾರಿದೀಪವಾಗಲಿದೆ : ಸಾಹಿತಿ ಸಿದ್ದರಾಮಯ್ಯ

ಪದವಿ ಹಂತದ ವಿದ್ಯಾರ್ಥಿಗಳು ಅಧ್ಯಾಪಕರ ಸಹಕಾರದೊಂದಿಗೆ ತಮ್ಮ ಸೃಜನಶೀಲ ಬರಹಗಳನ್ನು ಕೇಂದ್ರಿಕರಿಸಿ ಪ್ರಕಟಮಾಡಿರುವ "ತಲೆಮಾರು" ಎಂಬ ಕಾಲೇಜು ಪತ್ರಿಕೆಯು ಕೃಷಿ ಹಾಗೂ ಸಾಮಾಜಿಕ ಕಳಕಳಿಯ ವಿಚಾರಗಳನ್ನೊಳಗೊಂಡಿದ್ದು ಸಮಾಜಕ್ಕೆ ಉತ್ತಮ ಕೊಡುಗೆಯಾಗಲಿದೆ ಎಂದು ಸಾಹಿತಿ ಸಿಂಗಾಪುರದ ಸಿದ್ದರಾಮಯ್ಯ ಅಭಿಮತವ್ಯಕ್ತಪಡಿಸಿದರು. ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಬರಹಗಳನ್ನು ಸಂಗ್ರಹಿಸಿ ಹೊರತಂದಿರುವ "ತಲೆಮಾರು" ಕಾಲೇಜು ಪತ್ರಿಕೆಯನ್ನು ಸಾಹಿತಿ ಸಿಂಗಾಪುರದ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇದೇ ಪ್ರಪ್ರಥಮಬಾರಿಗೆ ವಿದ್ಯಾರ್ಥಿಗಳ ಬರಹಗಳನ್ನು ಸಂಗ್ರಹಿಸಿ ಹೊರತಂದಿರುವ "ತಲೆಮಾರು" ಎಂಬ ಕಾಲೇಜು ಪತ್ರಿಕೆಯ ಸಂಚಿಕೆಯನ್ನು ಶುಕ್ರವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು. ತಲೆಮಾರು ಪತ್ರಿಕೆಯಲ್ಲಿ ನಮ್ಮಸುತ್ತಮುತ್ತಲಿನ ಹಳ್ಳಿಗಳ ಐತಿಹ್ಯ,ನೀರಿನ ಬಳಕೆ, ರೈತ ಸಮುದಾಯ ಎದುರಿಸುತ್ತಿರುವ ಸಮಸ್ಯೆ,ಆಹಾರ ಧಾನ್ಯಗಳು ಸೇರಿದಂತೆ ಹತ್ತಾರೂ ವಿಚಾರಗಳು ಅಂಕಿಅಂಶ ಸಮೇತ ಒಳಗೊಂಡಿದೆ. ಈ ವಿಚಾರಗಳನ್ನು ವಿದ್ಯಾರ್ಥಿಗಳೇ ಸಂಗ್ರಹಿಸಿ ಪ್ರಕಟಿಸಿರುವುದು ಹೆಮ್ಮೆಯ ವಿಚಾರ ಎಂದರು. ಪತ್ರಿಕೆಯಲ್ಲಿನ ಸಾಮಾಜಿಕ ವಿಚಾರಗಳನ್ನು ಅಧಿಕಾರಿವರ್ಗದವರು ಓದುವುದರಿಂದ ಅ

ಶ್ರದ್ದಾಭಕ್ತಿಯಿಂದ ನಡೆದ ಅಮವಾಸ್ಯೆ ಪೂಜೆ

ಹುಳಿಯಾರು ಪಟ್ಟಣದ ಪುರಾಣಪ್ರಸಿದ್ದ ಶ್ರೀ ಅನಂತಶಯನ ರಂಗನಾಥಸ್ವಾಮಿ ದೇವಾಲಯದಲ್ಲಿ ಬುಧವಾರ ಸಂಜೆ ಅಮವಾಸ್ಯೆ ಅಂಗವಾಗಿ ಸ್ವಾಮಿಗೆ ತುಳಿಸಿಯ ವಿಶೇಷ ಅಲಂಕಾರ ಹಾಗೂ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ಹುಳಿಯಾರಿನ ಶ್ರೀರಂಗನಾಥಸ್ವಾಮಿಗೆ ಅಮವಾಸ್ಯೆ ಪೂಜೆ ಅಂಗವಾಗಿ ತುಳಸಿಯಿಂದ ಮಾಡಿರುವ ವಿಶೇಷ ಅಲಂಕಾರ. ಪಟ್ಟಣದ ವರುಣ್ ಕುಮಾರ್,ಹೆಚ್.ಆರ್.ದಿವಾಕರ್,ಬಿ.ಎನ್.ತಿಮ್ಮರಾಜ್, ಹೆಚ್.ವಿ.ದೇವರಾಜು ಅವರುಗಳ ಸೇವಾರ್ಥದಲ್ಲಿ ಅಲಂಕಾರ ಸೇವೆ ನಡೆಸಲಾಯಿತು. ನೀಲಾದ್ರಿ ಭಜನಾ ಮಂಡಳಿಯವರು ಭಜನಾಕಾರ್ಯಕ್ರಮ ನಡೆಸಿಕೊಟ್ಟರು. ಅಲಂಕೃತಸ್ವಾಮಿಯ ದರ್ಶನಕ್ಕಾಗಿ ಭಕ್ತಾಧಿಗಳು ಆಗಮಿಸಿದ್ದು ಸ್ವಾಮಿಯ ದರ್ಶನ ಪಡೆದು ಪೂಜೆಸಲ್ಲಿಸಿದರು.ಆಗಮಿಸಿದ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಶನೇಶ್ವರ ದೇವಾಲಯದಲ್ಲಿ ಅಮವಾಸ್ಯೆ ಅಂಗವಾಗಿ ಸ್ವಾಮಿಗೆ ಅಭಿಷೇಕ,ಅರ್ಚನೆ ಹಾಗೂ ಹೋಮ ನಡೆಯಿತು. ಆಗಮಿಸಿದ ಭಕ್ತಾಧಿಗಳಿಗೆ ಸಮಿತಿಯಿಂದ ಅನ್ನಸಂತರ್ಪಣೆ ನಡೆಸಲಾಯಿತು.

ಕಾಮಧೇನು ಪೂಜೆ

ಹುಳಿಯಾರು ಪಟ್ಟಣದ ವಾಸವಿದೇವಾಲಯದಲ್ಲಿ ಅಧಿಕ ಅಷಾಢದ ಪ್ರಯುಕ್ತ ಮಾತೆಯರಿಂದ ಅಮೃತಕಾಮದೇನು ಪೂಜೆ ನಡೆಯಿತು. ಹುಳಿಯಾರಿನ ಆರ್ಯವೈಶ್ಯ ಸಮಾಜದಿಂದ ವಾಸವಿದೇವಾಲಯದಲ್ಲಿ ಅಮೃತಕಾಮಧೇನು ಪೂಜೆಯಲ್ಲಿ ಪಾಲ್ಗೊಂಡಿರುವ ಮಾತೆಯರು. ರಂಗೋಲಿಯಿಂದ ಕಾಮಧೇನು ಸೃಷ್ಠಿಸಿ ಹೂ ನಿಂದ ಅಲಂಕರಿಸಿ ಪೂಜೆಸಿದರು. ಮುತ್ತೈದೆಯರು ಆ ಕಾಮಧೇನು ಸುತ್ತ ಕಳಸಗಳನ್ನು ಪ್ರತಿಷ್ಠಾಪಿಸಿ ಕುಂಕುಮಾರ್ಚನೆ ಮಾಡಿ, ಅರ್ಚಕ ರಾಮಚಂದ್ರಭಟ್ರ ಪೌರೋಹಿತ್ಯದಲ್ಲಿ ಪೂಜೆ ಹಾಗೂ ಆರತಿ ಸೇವೆ ಸಲ್ಲಿಸಿದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಒತ್ತಾಯಿಸಿ ತಾ.೨೦ರಿಂದ ಅಹೋರಾತ್ರಿ ಧರಣಿ

ಹುಳಿಯಾರು  ಪಟ್ಟಣದಿಂದ ಶಿರಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ೨೩೪ ಆಗಿ ಗುರ್ತಿಸಿ ಟೆಂಡರ್ ಪ್ರಕ್ರಿಯೆ ನಡೆಸಿದ್ದು, ಗುತ್ತಿಗೆದಾರರ ಅರೆಬರೆ ಕೆಲಸದಿಂದ ಈ ಮಾರ್ಗವಾಗಿ ಸಂಚರಿಸಲು ದುಸ್ಥರವಾಗಿದ್ದು ಶೀಘ್ರವೇ ರಸ್ತೆ ಕಾಮಗಾರಿ ಪ್ರಾರಂಭಿಸಿಸುವಂತೆ ಒತ್ತಾಯಿಸಿ ದಬ್ಬಗುಂಟೆ ರವಿಕುಮಾರ್ ನೇತೃತ್ವದಲ್ಲಿ ವಿವಿಧ ಸಂಘಸಂಸ್ಥೆಗಳು ಹೋಬಳಿಯ ಹೊಯ್ಸಳಕಟ್ಟೆ ಬಸ್ ನಿಲ್ದಾಣದಲ್ಲಿ ಇದೇ ೨೦ರ ಸೋಮವಾರದಿಂದ ಅಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ. ಹುಳಿಯಾರು-ಶಿರಾ ಮಾರ್ಗವಾಗಿ ಎನ್.ಹೆಚ್.೨೩೪ ರಸ್ತೆ ಹಾದುಹೋಗಿದ್ದು ಈಗಾಗಲೇ ಈ ರಸ್ತೆ ಕಾಮಗಾರಿಗಾಗಿ ಹೈದರಾಬಾದ್ ನ ಕಂಪನಿಯೊಂದನ್ನು ನಿಯೋಜಿಸಲಾಗಿದೆ. ಆದರೆ ಈ ಕಂಪನಿಯವರು ಇದುವರೆಗೂ ಯಾವುದೇ ಕೆಲಸ ಮಾಡಿಲ್ಲ. ರಸ್ತೆ ಅಗಲಿಕರಣವೆಂದು ರಸ್ತೆ ಬದಿಯ ಬೃಹತ್ ಗಾತ್ರದ ಮರಗಳನ್ನು ತುಂಡರಿಸಿದ್ದು ಬಿಟ್ಟರೆ ರಸ್ತೆಕೆಲಸವನ್ನು ಕಿಂಚಿತ್ತು ಮಾಡಿಲ್ಲ. ಈಗಾಗಲೇ ಈ ರಸ್ತೆಯನ್ನು ರಾ.ಹೆ.ಆಗಿ ಮೇಲ್ದರ್ಜೆಗೇರಿಸಿರುವುದರಿಂದ ಲೋಕೋಪಯೋಗಿ ಇಲಾಖೆಯವರು ರಸ್ತೆಯ ಗುಂಡಿ ಮುಚ್ಚುವ ಕೆಲಸ ಸೇರಿದಂತೆ ಯಾವುದೇ ಕಾಮಗಾರಿಯನ್ನು ಮಾಡಲು ಮುಂದಾಗುತ್ತಿಲ್ಲ. ಶಿರಾದವರೆಗಿನ್ ಒಟ್ಟು ೪೦ ಕಿ.ಮೀ ರಸ್ತೆಯೂ ಆಳುದ್ದಗುಂಡಿಗಳು ಬಿದ್ದು ಸಂಪೂರ್ಣ ಹಾಳಾಗಿದ್ದು, ಮಣ್ಣು,ಜೆಲ್ಲಿ ಹಾಕಿ ಮುಚ್ಚುವ ಕಾರ್ಯವನ್ನು ಸಹ ಮಾಡದೆಯಿದ್ದು ಸಂಚಾರಕ್ಕೆ ತೊಂದರೆಯಾಗಿದೆ.ಈ ಮಾರ್ಗವಾಗಿ ಪ್ರತಿನಿತ್ಯ

ಧಾರ್ಮಿಕ ಜಾಗೃತಿಗೆ ಕುಪ್ಪೂರು ಶ್ರೀಗಳ ಪಾದಯಾತ್ರೆ

             ಹುಳಿಯಾರು  ಹೋಬಳಿ ಕೆಂಕೆರೆ ಗ್ರಾಮದ ಪುರದಮಠದಲ್ಲಿ ನಡೆದ ಶಿವಪೂಜಾನುಷ್ಠಾನ ಹಾಗೂ ಮೌನಾನುಷ್ಠಾನ ಕಾರ್ಯ ನಡೆಸಿದ ಕುಪ್ಪೂರುಗದ್ದಿಗೆ ಮಠದ ಶ್ರೀಡಾ.ಯತೀಶ್ವರಶಿವಾಚಾರ್ಯ ಮಹಾಸ್ವಾಮಿಯವರು ಪೂಜಾಕಾರ್ಯದ ಮುಕ್ತಾಯದನಂತರ ಪುರದಮಠದಗವಿಯಿಂದ ಕೆಂಕೆರೆ ಗ್ರಾಮಕ್ಕೆ ಪಾದಯಾತ್ರೆ ನಡೆಸಿದರು. ಹುಳಿಯಾರು ಹೋಬಳಿ ಪುರದಮಠದ ಗವಿಯಿಂದ ಕೆಂಕೆರೆಗೆ ಕಾಳಮ್ಮದೇವಿಯವರೊಂದಿಗೆ ಕುಪ್ಪೂರು ಶ್ರೀಡಾ.ಯತೀಶ್ವರಶಿವಾಚಾರ್ಯಮಹಾಸ್ವಾಮಿ, ನರೇಂದ್ರಬಾಬುಶರ್ಮಾಜಿಯವರು ಪಾದಯಾತ್ರೆ ನಡೆಸಿದರು. ಶ್ರೀಗಳ ಶಿವಪೂಜಾನುಷ್ಠಾನ ಕಾರ್ಯದ ಮುಕ್ತಾಯಕ್ಕೆ ಆಗಮಿಸಿದ ಬೃಹತ್ ಬ್ರಹ್ಮಾಂಡ ಖ್ಯಾತಿಯ ನರೇಂದ್ರಬಾಬು ಶರ್ಮಾಜಿಯವರೂ ಸಹ ಶ್ರೀಗಳೊಂದಿಗೆ ಕೆಂಕೆರೆಯವರೆಗೆ ಸುಮಾರು ನಾಲ್ಕೈದು ಕಿ.ಮೀ ಹೆಜ್ಜೆ ಹಾಕಿದರು. ಗ್ರಾಮದೇವತೆ ಕಾಳಮ್ಮನವರೊಂದಿಗೆ ಶ್ರೀಗಳು ಸೇರಿ ಅಪಾರ ಸಂಖ್ಯೆಯ ಭಕ್ತಾಧಿಗಳು ಕಾಲ್ನಡಿಗೆಯಲ್ಲಿ ಸಾಗಿದರು. ಕೆಂಕೆರೆಗೆ ಆಗಮಿಸಿದ ಅವರುಗಳನ್ನು ಭಕ್ತಾಧಿಗಳು ಸ್ವಾಗತಿಸಿ ವೀರಗಾಸೆ ನೃತ್ಯದೊಂದಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಾಗಿ ಅಂತಿಮವಾಗಿ ಶ್ರೀಚನ್ನಬಸವೇಶ್ವರಸ್ವಾಮಿ ಹಾಗೂ ಕಾಳಮ್ಮದೇವಿಯ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಶ್ರೀಗಳ ದರ್ಶನಕ್ಕೆ ಕೆಂಕೆರೆ ಹಾಗೂ ಸುತ್ತಮುತ್ತಲಿನ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಪಾದಯಾತ್ರೆಯ ನಂತರ ಶ್ರೀಗಳನ್ನು ಬೈಕ್ ರ್ಯಾಲಿಮೂಲಕ ಕುಪ್ಪೂರುಗದ್ದಿಗೆಗೆ ಬೀಳ್ಕೊ

ಕೈಗಾರಿಕರಣದಿಂದ ನೈಸರ್ಗಿಕ ಸಂಪತ್ತು ನಾಶ

ಆಧುನಿಕ ಪ್ರಪಂಚದಲ್ಲಿ ಹೆಚ್ಚೆಚ್ಚು ಕೈಗಾರಿಕೆಗಳು ತಲೆಯೆತ್ತುತ್ತಿದ್ದು, ಪ್ರಕೃತಿದತ್ತವಾದ ನೈಸರ್ಗಿಕ ಸಂಪನ್ಮೂಲಗಳು ನಶಿಸಿಹೋಗುವೆ. ಇದೇರೀತಿ ಮುಂದುವರಿದಂತೆ ಮುಂದಿನ ದಿನಗಳಲ್ಲಿ ಸಂಪನ್ಮೂಲಗಳ ಕೊರತೆ ಉಂಟಾಗಬಹುದು ಎಂದು ದೊಡ್ಡಎಣ್ಣೆಗೆರೆ ಶಾಲೆಯ ಶಿಕ್ಷಕ ಕೆ.ಎಸ್.ನಾಗರಾಜು ವಿಷಾಧಿಸಿದರು. ಹುಳಿಯಾರು ಹೋಬಳಿ ಕೆಂಕೆರೆಯಲ್ಲಿ ನಡೆದ ಕನ್ನಡಕವಿಕಾವ್ಯ ಗೋಷ್ಠಿ ಕಾರ್ಯಕ್ರಮದಲ್ಲಿ ಕಸಾಪದ ತ.ಶಿ.ಬಸವಮುರ್ತಿಗಳು ಜಾನಪದ ಹಾಡುಗಳನ್ನು ಶುಶ್ರಾವ್ಯವಾಗಿ ಹಾಡಿದರು. ಹುಳಿಯಾರು ಹೋಬಳಿ ಕೆಂಕೆರೆಯ ಸರ್ವೆ ಇಲಾಖೆಯ ಬಾಲಾಜಿ ಸಿಂಗ್ ಅವರ ನಿವಾಸದಲ್ಲಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸೋಮವಾರ ಸಂಜೆ ಅಯೋಜಿಸಿದ್ದ ಕನ್ನಡಕವಿಕಾವ್ಯ ಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮಾನವ ತನ್ನ ಸ್ವಂತಿಕೆಯನ್ನು ಮರೆತು ಪ್ರತಿಯೊಂದಕ್ಕು ಯಂತ್ರಗಳನ್ನು ಬಳಸುತ್ತಾ ಯಾಂತ್ರಿಕವಾಗಿ ಜೀವನ ಸಾಗಿಸುತ್ತಿದ್ದಾನೆ. ಇದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ದುಷ್ಪರಿಣಾಮಗಳು ಉಂಟಾಗಲಿದೆ ಎಂದರು. ಸಾವಿರಾರು ವರ್ಷದ ಇತಿಹಾಸವಿರುವ ಕನ್ನಡನಾಡು,ನುಡಿ, ಸಾಹಿತ್ಯದ ಬಗ್ಗೆ ತಿಳಿಯುವುದು ಕನ್ನಡಿಗರಾದ ನಮ್ಮ ಕರ್ತವ್ಯವಾಗಿದ್ದು ಆ ಬಗ್ಗೆ ತಿಳಿಸುವ ಕಾರ್ಯವನ್ನು ಕಸಾಪ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಹುಳಿಯಾರು-ಕೆಂಕೆರೆ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಹಾಲಪ್ಪ ತಮ್ಮ