ವಿಷಯಕ್ಕೆ ಹೋಗಿ

ಹುಳಿಯಾರು-ಶಿರಾ ರಸ್ತೆ : ಬಲಿಗಾಗಿ ಬಾಯ್ತೆರದು ನಿಂತ ಗುಂಡಿಗಳು ಅವಧಿ ಮುಗಿದರೂ ಪ್ರಾರಂಭವಾಗದ ಹೆದ್ದಾರಿ ಕಾಮಗಾರಿ ಪ್ರತಿಭಟನೆಗೆ ಕಿಂಚಿತ್ತು ಗಮನಗೊಡದ ಅಧಿಕಾರಿ ವರ್ಗ

ವರದಿ:ಡಿ.ಆರ್.ನರೇಂದ್ರಬಾಬು
ಹುಳಿಯಾರು : ಕಾನೂನು ಸಚಿವರ ಕ್ಷೇತ್ರವಾಗಿರುವ ಶಿರಾ ಹಾಗೂ ಹುಳಿಯಾರು ನಡುವಿನ ಮಾರ್ಗ ಹದಗೆಟ್ಟಿದ್ದು, ರಸ್ತೆಯಲ್ಲಿ ಆಳುದ್ದ ಗುಂಡಿಗಳು ಬಿದ್ದು ದಿನಗರುಳುತ್ತಿವೇ ಹೊರತು ಯಾವುದೇ ದುರಸ್ಥಿಯಾಗದೆಯಿದ್ದು, ಯಾವಾಗ ಏನಾಗುತ್ತದೋ ಎಂಬಂತಾಗಿ, ಇಲ್ಲಿ ಸಂಚರಿಸುವವವರು ಜೀವದ ಆಸೆ ತೊರೆದು ಸಂಚರಿಸುವಂತಾಗಿದೆ. ರಸ್ತೆಯಲ್ಲಿನ ಗುಂಡಿಗಳನ್ನಾದರೂ ಮುಚ್ಚಿ ಸಂಚಾರಕ್ಕೆ ಯೋಗ್ಯ ಮಾಡಿಕೊಡಿ ಎಂದು ಈ ಮಾರ್ಗದ ಸಾರ್ವಜನಿಕರು ಎಷ್ಟೇ ಬಾರಿ ಪ್ರತಿಭಟನೆ ಮಾಡಿದರೂ ಸಹ ಈ ಬಗ್ಗೆ ಅಧಿಕಾರಿಗಳು ಕಿವಿಗೊಡದೆ ಮೌನವಾಗಿದ್ದು ಸಾರ್ವಜನಿಕರನ್ನು ಮೃತ್ಯುಕೂಪಕ್ಕೆ ತಳ್ಳುತ್ತಿದ್ದಾರೆ.
ಹುಳಿಯಾರು-ಶಿರಾ ಮಾರ್ಗದಲ್ಲಿ ಹದಗೆಟ್ಟಿರುವ ರಸ್ತೆ .
ಹುಳಿಯಾರು-ಶಿರಾ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ೨೩೪ ಆಗಿ ಮೇಲ್ದರ್ಜೆಗೇರಿಸಿದ್ದು ಹೆದ್ದಾರಿ ಪ್ರಾಧಿಕಾರಕ್ಕೆ ವಹಿಸಿಕೊಡಲಾಗಿದೆ. ಈಗಾಗಲೇ ರಸ್ತೆ ಕಾಮಗಾರಿಗಾಗಿ ೨೦೧೦ರಲ್ಲೇ ಟೆಂಡರ್ ಸಹ ಕರೆದು ೮-೧೦ಪ್ಯಾಕೇಜ್ ನಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದು ಕೆಲವೆಡೆ ಮಾತ್ರ ರಸ್ತೆ ಕೆಲಸ ಸಾಗುತ್ತಿದೆ. ಆದರೆ ಶಿರಾ-ಹುಳಿಯಾರು- ಬಾಣಾವರ ನಡುವಿನ ರಸ್ತೆ ಮಾರ್ಗದಲ್ಲಿ ಕಾಮಗಾರಿ ಕುಂಟುತ್ತಾ ಸಾಗಿದೆ. ಈ ಮಾರ್ಗದಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆ ರಸ್ತೆ ಮಾಡುವುದಾಗಿ ಬಂದವರು ರಸ್ತೆ ಬದಿಯಲ್ಲಿನ ಬೃಹತ್ ಮರಗಳನ್ನು ತುಂಡರಿಸಿ ಸಾಗಿಸಿದರಲ್ಲದೆ, ಕೆಲ ಸೇತುವೆಗಳನ್ನು ಕಿತ್ತು ಅದನ್ನು ಅರ್ಧಂಬರ್ಧ ಕೆಲಸ ಮಾಡಿದ್ದು ಬಿಟ್ಟರೆ ರಸ್ತೆ ಕಾರ್ಯಕ್ಕೆ ಕೈ ಹಾಕದೆ ಸುಮ್ಮನಾಗಿದ್ದಾರೆ.
ಹುಳಿಯಾರು-ಶಿರಾ ನಡುವಿನ ೪೭ ಕಿ.ಮೀ ರಸ್ತೆಯನ್ನು ಹಾಗೂ ಹುಳಿಯಾರು-ಬಾಣಾವರ ನಡುವಿನ ೪೮ ಕಿ.ಮೀ ರಸ್ತೆಯ ಕಾಮಗಾರಿಗೆ ಹೈದರಾಬಾದಿನ ಎ.ಎಸ್.ಐ.ಪಿ ಎಂಬ ಕಂಪನಿಗೆ ೨೦೧೨ರಲ್ಲಿ ಗುತ್ತಿಗೆ ನೀಡಲಾಗಿತ್ತು. ಆದರೆ ವರ್ಷಗಳುರುಳಿ ನಿಗದಿತ ಅವಧಿ ಮುಗಿದರೂ ಸಹ ಗುತ್ತಿಗೆ ಪಡೆದ ಕಂಪನಿ ರಸ್ತೆ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪ್ರಾರಂಭಿಸದ ಹಿನ್ನಲೆಯಲ್ಲಿ ಆ ಕಂಪನಿ ಪಡೆದಿದ್ದ ಗುತ್ತಿಗೆಯನ್ನು ಇಲಾಖೆ ರದ್ದುಗೊಳಿಸಿದ್ದು ರಸ್ತೆ ಕಾಮಗಾರಿ ಕಾರ್ಯ ಸ್ಥಗಿತಗೊಳ್ಳುವಂತಾಗಿದೆ.
ರಸ್ತೆ ಕಾರ್ಯ ಮಾಡಲು ಬಂದವರು ರಸ್ತೆ ಬದಿಯಲ್ಲಿನ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿ, ಮರಗಳನ್ನು ಕಡಿದಿದ್ದಾರೆ, ಸೇತುವೆಗೆಗಳನ್ನು ಕಿತ್ತು ಪೈಪ್ ಜೋಡಿಸಿದ್ದಾರೆ ಇಷ್ಟು ಬಿಟ್ಟರೆ ಯಾವುದೇ ಪ್ರಗತಿಯಾಗದ ರಸ್ತೆ ಕಾಮಗಾರಿಗೆ ಮತ್ತೆ ಹೊಸದಾಗಿ ಟೆಂಡರ್ ಕರೆಯಬೇಕಿದೆ. ಇಷ್ಟರ ಮಧ್ಯೆ ರಸ್ತೆಯೆಲ್ಲಾ ಪೂರ್ಣ ಹಾಳಾಗಿದ್ದು ಸಂಚಾರಕ್ಕೆ ದುಸ್ಥರವಾಗಿದೆ. ಹೆದ್ದಾರಿ ಆಗದಿದ್ದರೂ ಪರವಾಗಿಲ್ಲ ಗುಂಡಿಯನ್ನಾದರೂ ಮುಚ್ಚಿ ಸಂಚಾರಕ್ಕೆ ಅನುವು ಮಾಡಿ ಕೊಡಿ ಎಂಬುದು ಸಾರ್ವಜನಿಕರ ಕೋರಿಕೆಯಾಗಿದೆ.
ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ಹೊಯ್ಸಳಕಟ್ಟೆ ಗೇಟ್ ನಲ್ಲಿ ಕಳೆದ ಸೋಮವಾರದಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿಯ ದೃಶ್ಯ.
ಈಗಾಗಲೇ ಲೋಕೋಪಯೋಗಿಇಲಾಖೆಯಿಂದ ಹೆದ್ದಾರಿಗೆ ಹಸ್ತಾಂತರವಾಗಿರುವುದರಿಂದ ರಸ್ತೆ ಗುಂಡಿ ಮುಚ್ಚಲು ಲೋಕೋಪಯೋಗಿಇಲಾಖೆಯೂ ಮುಂದೆ ಬರುತ್ತಿಲ್ಲ, ಹೊಸದಾಗಿ ಟೆಂಡರ್ ಕರೆಯದ ಹೊರತು ರಾ.ಹೆ.ಪ್ರಾ. ರಿಪೇರಿಗೆ ಮುಂದಾಗುವಂತಿಲ್ಲ.
ಮೌನವಹಿಸಿದ ಇಲಾಖೆ : ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿದ ನಂತರ ರಸ್ತೆಯ ಸಂಪೂರ್ಣ ನಿರ್ವಹಣೆಯ ಹೊಣೆ ಹೊತ್ತಿರುವ ಕೇಂದ್ರ ಭೂ ಸಾರಿಗೆ ಇಲಾಖೆ ಅಧಿಕಾರಿಗಳು ಮೌನವಹಿಸಿದ್ದಾರೆ. ಸ್ಥಳಿಯ ಪಿಡಬ್ಯೂಡಿ ಅವರು ತಮಗೂ ಇದಕ್ಕೂ ಏನು ಸಂಬಂಧವಿಲ್ಲವೆಂದು , ಕೇಂದ್ರ ಭೂ ಸಾರಿಗೆ ಇಲಾಖೆ ಕಡೆ ಬೆರಳು ಮಾಡುತ್ತಾರೆ. ಶಿರಾ-ಹುಳಿಯಾರು-ಬಾಣಾವರ ನಡುವಿನ ರಸ್ತೆ ಕಾಮಗಾರಿಯ ಗುತ್ತಿಗೆ ರದ್ದಾಗಿ ವರ್ಷಗಳು ಉರುಳುತ್ತಾ ಬಂದಿದ್ದರೂ ಸಹ ಇದುವರೆಗೂ ಹೊಸ ಟೆಂಡರ್ ಕರೆಯುವುದಾಗಿ ಹೇಳುತ್ತಿದ್ದಾರೆ ಹೊರತು ಟೆಂಡರ್ ಕರೆಯುವಲ್ಲಿ ಸಫಲರಾಗಿಲ್ಲ. ಹೊಸ ಟೆಂಡರ್ ಆಗುವವರೆಗಾದರೂ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡೋಣ ಎನ್ನುವ ಯೋಚನೆಯನ್ನು ಮಾಡದೆಯಿದ್ದು ಪ್ರತಿನಿತ್ಯ ಇಲ್ಲಿ ಸಂಚರಿಸುವ ಜನರ ಪ್ರಾಣದೊಂದಿಗೆ ಚಲ್ಲಾಟವಾಡುತ್ತಿದ್ದಾರೆ.
ಸ್ತಬ್ಧವಾದ ಜನಪ್ರತಿನಿಧಿಗಳು ; ಹುಳಿಯಾರು-ಶಿರಾ ನಡುವೆ ನಿತ್ಯ ಹತ್ತಾರೂ ವಾಹನಗಳು ಸಂಚರಿಸುತ್ತವೆ ಜೊತೆಗೆ ಶಾಲಾ ವಿದ್ಯಾರ್ಥಿಗಳು ಸಹ ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಹಾಲಿ ಇರುವ ರಸ್ತೆ ಗುಂಡಿಗಳಿಂದ ಆವೃತವಾಗಿದ್ದು ರಸ್ತೆಯಾವುದು ಎಂಬು ಹುಡುಕಿಕೊಂಡು ವಾಹನ ಸಂಚರಿಸುವಂತಾಗಿದೆ. ರಸ್ತೆ ಬಿಟ್ಟು ಬದಿಯಲ್ಲಿ ವಾಹನ ಹೋಗುವಂತಾಗಿದ್ದು ಪ್ರತಿನಿತ್ಯ ಒಂದಲ್ಲಒಂದು ಅವಘಡ ಸಂಬವಿಸುತ್ತಿದೆಂದು ಈ ಭಾಗದ ಶಾಸಕರು,ಸಂಸದರ ಗಮನಕ್ಕೆ ತಂದಿದ್ದರೂ ಸಹ ಅವರು ಸಹ ಯಾವುದೇ ಕಾರ್ಯ ಮಾಡಲು ಮುಂದಾಗದೆಯಿದ್ದು ಸ್ತಬ್ಧರಾಗಿದ್ದಾರೆ.
ಆಹೋರಾತ್ರಿ ಧರಣಿ : ಇಲಾಖೆಗಳ ಮೌನದಿಂದ ರೊಚ್ಚಿಗೆದ್ದಿರುವ ಜನತೆ ಕಡೆಯದಾಗಿ ಅಹೋರಾತ್ರಿ ಧರಣಿಯ ಅಸ್ತ್ರ ಹೂಡಿದ್ದು ತಮ್ಮ ಬೇಡಿಕೆ ಈಡೇರುವವರೆಗೂ ತಮ್ಮ ಧರಣಿ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕೂತಿದ್ದಾರೆ.
---------------------------------
ಎನ್.ಹೆಚ್. ೨೩೪ ರ ಹುಳಿಯಾರು-ಶಿರಾ ಸೆಕ್ಷನ್ ೨೪೩.೩ ಕಿಮೀ ನಿಂದ ೨೯೦ ಕಿಮೀವರೆಗೆ ೪೭ ಕಿಮೀದೂರದ ದ್ವಿಪಥದ ಹೆದ್ದಾರಿ ಅಗಲಿಕರಣಕ್ಕೆ ೨೦೧೧ ನವಂಬರ್ ನಲ್ಲಿ ೧೨೪.೫ ಕೋಟಿಗೆ ಟೆಂಡರ್ ಕರೆಯಲಾಗಿದ್ದು ಹೈದರಾಬಾದಿನ ಎ.ಎಸ್.ಐ.ಪಿ ಪ್ರವೈಟ್ ಲಿಮಿಟೆಡ್ ಕಾಂಟ್ರ್ಯಾಕ್ಟ್ ಪಡೆದಿತ್ತು. ೩೧.೦೭.೨೦೧೨ ಕ್ಕೆ ಪ್ರಾರಂಭಿಸಿ ೩೧.೦೭.೨೦೧೪ಕ್ಕೆ ೨ ವರ್ಷಗಳಲ್ಲಿ ಕಾಮಗಾರಿ ಪೂರೈಸಬೇಕಿತ್ತು. ವಿದ್ಯುತ್ ಕಂಬಗಳ ಸ್ಥಳಾಂತರ , ಪೈಪ್ ಲೈನ್ ಗಳ ಸ್ಥಳಾಂತರ, ರಸ್ತೆ ಬದಿ ಮರಗಳ ತೆರವು ಮಾಡಿದ ಕಂಪನಿ ನಂತರ ಇತ್ತ ತಿರುಗಿ ನೋಡಿಲ್ಲ. ಇಲಾಖೆ ಸಾಕಷ್ಟು ನೋಟಿಸ್ ನೀಡಿದ್ದರೂ ಯಾವುದಕ್ಕೂ ಸ್ಪಂದಿಸಿಲ್ಲ. ಕಾಂಟ್ರ್ಯಾಕ್ಟ್ ಉಲ್ಲಂಘನೆಯಾಗಿರುವುದರಿಂದ ಹೊಸದಾಗಿ ಟೆಂಡರ್ ಕರೆಯಬೇಕಿದೆ.
------------------------------

ಎನ್.ಹೆಚ್.೨೩೪ ಕರ್ನಾಟಕದ ಮಂಗಳೂರಿನಿಂದ ಆರಂಭಗೊಳ್ಳುವ ಈ ಹೆದ್ದಾರಿ ಬಿ.ಸಿ.ರೋಡ್ - ಕೊಟ್ಟಿಗೆಹಾರ-ಮೂಡಿಗೆರೆ-ಬೇಲೂರು-ಹುಳಿಯಾರು- ಶಿರಾ-ಮಧುಗಿರಿ-ಚಿಂತಾಮಣಿ ಮೂಲಕ ಆಂಧ್ರಪ್ರದೇಶ ಮಾರ್ಗವಾಗಿ ಹಾಗೂ ತಮಿಳುನಾಡಿನ ಪೆರ್ನುಂಪೇಟೆ-ಕಾಟ್ಪಾಡಿ-ವೆಲ್ಲೂರು-ತಿರುವಣ್ಣಾಮಲೈ ಮೂಲಕ ವಿಲ್ಲುಪುರಂಗೆ ಸಂಪರ್ಕಿಸಲಿದೆ. ಒಟ್ಟು ೭೮೦ ಕಿ.ಮೀ ಉದ್ದದ ಹೆದ್ದಾರಿ ಇದಾಗಿದ್ದು ಇದರಲ್ಲಿ ಹುಳಿಯಾರು-ಶಿರಾ ಮಾರ್ಗವಾಗಿ ೪೭ ಕಿ.ಮೀ ಹಾದುಗೋಗಲಿದೆ. ಸದ್ಯ ಲೋಕೋಪಯೋಗಿ ಇಲಾಖೆಯಿಂದ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರವಾಗಿವೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.