ಪ್ರಪಂಚದಲ್ಲಿ ಅನೇಕ ವಸ್ತುಗಳಿಗೆ ಇಂತಿಷ್ಟೇ ಎಂಬ ಬೆಲೆಯಿದ್ದು ಅವುಗಳನ್ನು ಕೊಂಡುಕೊಳ್ಳಬಹುದಾಗಿದೆ. ಆದರೆ ನಾವು ಮಾಡುವಂತಹ ಸಾರ್ವಜನಿಕ ಸೇವೆಗೆ ಬೆಲೆಕಟ್ಟಲು ಸಾಧ್ಯವಿಲ್ಲ ಅಂತಹ ಸೇವೆಯನ್ನು ರೋಟರಿ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಸಾಹಿತಿ ನಾಗರಾಜರಾವ್ ಅಭಿಮತವ್ಯಕ್ತಪಡಿಸಿದರು.
![]() |
ಹುಳಿಯಾರು ರೋಟರಿ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ರೋಟರಿ ಸಂಸ್ಥೆಯ ಜಿಲ್ಲಾಕಾರ್ಯದರ್ಶಿ ಬಿಳಿಗೆರೆ ಶಿವಕುಮಾರ್ ಉದ್ಘಾಟಿಸಿದರು. |
ಹುಳಿಯಾರಿನ ರೋಟರಿ ಬಾಲಭವನದಲ್ಲಿ ಭಾನುವಾರ ನಡೆದ ರೋಟರಿ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.
ಸ್ನೇಹ, ಅನ್ಯೂನ್ಯತೆ,ಪ್ರೀತಿ,ವಿಶ್ವಾದ ಜೊತೆಗೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದ ಸೇವೆ ಮಾಡುವುದನ್ನೇ ತನ್ನ ಗುರಿಯನ್ನಾಗಿಟ್ಟುಕೊಂಡು ರೋಟರಿ ಸಂಸ್ಥೆ ಸಾಗುತ್ತಿದೆ ಎಂದರು. ಪ್ರಸ್ತುತದಲ್ಲಿ ರೋಟರಿಗೆ ಸದಸ್ಯರಾಗಿ ಎಂದರೆ ತಮಗೆ ಬಿಡುವಿಲ್ಲ ಎಂದು ಹೇಳುತ್ತಾರೆ ಆದರೆ ಈ ಹಿಂದೆ ಸಾಧನೆ ಮಾಡಿದ ಅನೇಕ ಮಹಾನ್ ವ್ಯಕ್ತಿಗಳು ತಮ್ಮ ಬಿಡುವಿಲ್ಲದ ಸಮಯದಲ್ಲೂ ಸಹ ದೇಶಕ್ಕಾಗಿ ದುಡಿದು ತಮ್ಮಸೇವೆ ನೀಡಿದ್ದಾರೆ ಎಂದರು. ಜೀವನದಲ್ಲಿ ಮೊದಲು ನಾನು ಜಗತ್ತಿಗೆ ಉಡುಗೊರೆಯಾಗಬೇಕು ಆಗ ಸಾಧನೆಯ ಮೆಟ್ಟಿಲೇರಲು ಸಾಧ್ಯವಾಗುತ್ತದೆ ಆ ನಿಟ್ಟಿನಲ್ಲಿ ಸಾಗೋಣ ಎಂದರು.
![]() |
ಹುಳಿಯಾರು ರೋಟರಿ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನಿವೃತ್ತ ಶಿಕ್ಷಕ ಕೃಷ್ಣಪ್ಪಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಮಂಜುನಾಥಗುಪ್ತಾ,ಉಪಾಧ್ಯಕ್ಷ ದುರ್ಗರಾಜ್ ಇತರರಿದ್ದಾರೆ. |
![]() |
ಇಂಟರ್ ನ್ಯಾಷನಲ್ ಡೈರಕ್ಟರ್ ಹೆಚ್.ಆರ್.ಶ್ರೀನಾಥ್ ಬಾಬು ಮಕ್ಕಳಿಗೆ ರೋಟರಿ ಬ್ಯಾಡ್ಜ್ ಹಾಕುವ ಮೂಲಕ ರೋಟರಿಕಿಡ್ಸ್ ಸಂಘಕ್ಕೆ ಚಾಲನೆ ನೀಡಿದರು. |
ರೋಟರಿ ಹುಳಿಯಾರು ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಂಜುನಾಥ ಗುಪ್ತಾ ಮಾತನಾಡಿ, ರೋಟರಿ ಸಂಸ್ಥೆ ಸೇವೆಯನ್ನೇ ಮೂಲಮಂತ್ರವನ್ನಾಗಿಸಿಕೊಂಡು ಸಾಗುತ್ತಿದ್ದು ಹಿಡಿ ಪ್ರಪಂಚದಲ್ಲೇ ಪ್ರಖ್ಯಾತಿ ಪಡೆದಿದ್ದು, ಅಂತಹ ಸಂಸ್ಥೆಗೆ ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಸದಸ್ಯರಾಗಿ ಎಂದು ಮನವಿ ಮಾಡಿದರು. ತಮ್ಮ ಅಧ್ಯಕ್ಷ ಅವಧಿಯಲ್ಲಿ ವಿವಿಧ ಸಾರ್ವಜನಿಕ ಕಾರ್ಯಗಳನ್ನು ಮಾಡುವ ಯೋಜನೆಗಳಿದ್ದು ಸಂಸ್ಥೆಯ ಪದಾಧಿಕಾರಿಗಳು, ಸಾರ್ವಜನಿಕರು ತಮ್ಮೊಂದಿಗೆ ಕೈಜೋಡಿ ಸಹಕರಿಸಿ ಎಂದರು.
![]() |
ಶಾಲಾಮಕ್ಕಳಿಗೆ ನೋಟ್ ಬುಕ್ ವಿತರಣೆ |
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ