ವಿಷಯಕ್ಕೆ ಹೋಗಿ

ಹುಳಿಯಾರು ಪಂಚಾಯ್ತಿಯಲ್ಲಿ "ಬಿಲ್ "ವೀರರು.

ಪಂಚಾಯ್ತಿ ಸಭೆಯಲ್ಲಿ ಆಕ್ಷೇಪಣೆ,ಆರೋಪಗಳ ಸುರಿಮಳೆ
---------------------------------------
ಹುಳಿಯಾರು:ಗ್ರಾಮ ಪಂಚಾಯ್ತಿಯಲ್ಲಿ ಆಯವ್ಯಯಗಳ ಮಂಡನೆಯಾಗಿಲ್ಲ,ಸ್ಥಾಯಿ ಸಮಿತಿಗಳ ರಚನೆಯಾಗಿಲ್ಲ,ಇಂಡೆಂಟ್ ನೀಡುವ ನೆಪದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರವಾಗಿದ್ದು ಯಾವುದಕ್ಕೂ ಲೆಕ್ಕಬುಕ್ಕಿಲ್ಲ,ಸಿಸಿಟಿವಿ ಅಳವಡಿಸಲು ಪಡೆದ ಹಣ ಏನಾಯ್ತೆಂದು ಗೊತಿಲ್ಲ,ಎನ್.ಆರ್.ಇ.ಜೆಯಲ್ಲಿಯೂ ಸಾಕಷ್ಟು ಅವ್ಯವಹಾರ ನಡೆದಿದ್ದು ಕಾಮಗಾರಿ ನಡೆಯದೆ ಬಿಲ್ ಮಾಡಿದೆ ಎಂದು ಹೇಳಿದರೂ ಗಮನ ಮಾಡುತ್ತಿಲ್ಲ,ಹಿಂದಿನ ಪಿಡಿಓ ಅವಧಿಯ ಅವ್ಯವಹಾರಗಳ ಬಗ್ಗೆ ಸೊಲ್ಲೆತ್ತುತ್ತಿಲ್ಲ ಹೀಗೆ ಹತ್ತು ಹಲವು ಆರೋಪ ಹಾಗೂ ಆಕ್ಷೇಪಣೆಗಳ ನಡುವಯೆ ಹುಳಿಯಾರು ಗ್ರಾಮ ಪಂಚಾಯ್ತಿಯ ವಿಶೇಷ ಸಭೆ ನಡೆಯಿತು.
ಹುಳಿಯಾರು ಗ್ರಾಮಪಂಚಾಯ್ತಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಅಧ್ಯಕ್ಷೆ ಗೀತಾ ಪ್ರದೀಪ್,ಉಪಾಧ್ಯಕ್ಷ ಗಣೇಶ್,ಪಿಡಿಓ ಸಿದ್ಧರಾಮಣ್ಣ ಇದ್ದಾರೆ.
           ಗೀತಾ ಪ್ರದೀಪ್ ಅಧ್ಯಕ್ಷತೆಯಲ್ಲಿ ನಡೆದ ಹುಳಿಯಾರು ಗ್ರಾಮಪಂಚಾಯ್ತಿಯ ವಿಶೇಷ ಸಭೆಯಲ್ಲಿ ಬಹುಪಾಲು ಸಮಯ ಚರ್ಚೆಯ ವಿಷಯಕ್ಕಿಂತ ಆರೋಪಗಳಿಗೆ ಮೀಸಲಾಗಿ ಸದಸ್ಯರುಗಳು ಸಮಸ್ಯೆಗಳ ಪಟ್ಟಿಯನ್ನೆ ಬಿಚ್ಚಿಟ್ಟರು. 

                 ಮೊದಲಿಗೆ ಆಯಾವ್ಯಯದ ಬಗ್ಗೆ ಚರ್ಚೆ ಸಾಗಿ ಇದುವರೆಗೂ ಈ ಬಗ್ಗೆ ಸದಸ್ಯರುಗಳೊಂದಿಗೆ ಚರ್ಚೆ ಯಾಕೆ ನಡೆಸಿಲ್ಲ.ಪಂಚಾಯ್ತಿಯಲ್ಲಿ ಕಳೆದ ಸಾಲಿನ ಹಾಗೂ ಈ ಸಾಲಿನ ಲೆಕ್ಕ ಕೊಡಬೇಕೆಂದು.ಹಾಗೂ ಕಾಮಗಾರಿಗಳಿಗೆಂದು ನೀಡಿರುವ ಬಿಲ್ ಲೆಕ್ಕಾಚಾರ ಸಭೆಗೆ ನೀಡಬೇಕೆಂದು ಸದಸ್ಯ ಚಂದ್ರಶೇಖರ್ ಪಟ್ಟುಹಿಡಿದರು.ಎಷ್ಟೊ ಕಾಮಗಾರಿಗಳ ನಡೆಯದಿದ್ದು ಬಿಲ್ ಮಾತ್ರ ಪಾಸಾಗಿದ್ದು ಕೇವಲ ಇಂಡೇಂಟ್ ಮೇಲೆ ಸಹಿ ಮಾಡಿ ಲಕ್ಸಾಂತರ ರೂಪಾಯಿ ಪಾಸ್ ಮಾಡಿರುವುದಾದರೂ ಹೇಗೆಂದು ಶಂಕರ್ ಆಕ್ಷೇಪ ಎತ್ತಿದರು.


                  ಎನ್.ಆರ್.ಇ.ಜೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು ಕಾಮಗಾರಿ ನಡೆಯದೆ ಬಿಲ್ ಮಾಡಲಾಗಿದ್ದು,ಈ ಬಗ್ಗೆ ತನಿಖೆ ನಡೆದಲ್ಲಿ ಅವ್ಯವಹಾರ ಪತ್ತೆ ಮಾಡಬಹುದಾಗಿದೆ, ಈ ಬರಗಾಲದಲ್ಲಿ ಸಾಕಷ್ಟು ಕಾಮಗಾರಿಗಳನ್ನು ಮಾಡಬೇಕಾಗಿದ್ದು, ಇದಕ್ಕಾಗಿ ನಿಯೋಜನೆಗೊಂಡಿರುವ ಇಂಜಿನಿಯರ್ ಸ್ಥಳಕ್ಕೆ ಆಗಮಿಸದೆ ಮಾಹಿತಿ ನೀಡದೆ ನಿರ್ಲಕ್ಷಿಸಿದ್ದಾರೆ ಎಂದು ರಾಘವೇಂದ್ರ ಆರೋಪಿಸಿದರು.

                ಪಂಚಾಯ್ತಿಯಲ್ಲಿ ವಾರ್ಡ್ ಸಭೆ ಹಾಗೂ ಗ್ರಾಮ ಸಭೆಯಲ್ಲಿ ಆಯ್ಕೆಯಾದ ಫಲಾನುಭವಿಗಳನ್ನು ಬೇಕೆಂದು ಕೈಬಿಟ್ಟು ಮತ್ತೆ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಲಂಚಕ್ಕಾಗಿ ಒತ್ತಾಯಿಸುವ ತಾಪಂ ಕಂಪ್ಯೂಟರ್ ಆಪರೇಟರ್ ನಿರ್ಮಲಾರನ್ನು ಇಂದಿನ ಸಭೆಗೆ ಕರೆಸುವಂತೆ ನಿರ್ಣಯ ಮಾಡಿದ್ದರೂ ಸಹಿತ ಆಕೆಯನ್ನು ಕರೆಸಿಲ್ಲದ್ದರ ಬಗ್ಗೆ ಹಾಗೂ ಆಕೆಯ ವಿರುದ್ಧ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸುವಂತೆ ಎಲ್ಲಾ ಸದಸ್ಯರು ಒತ್ತಾಯಿಸಿದರು.ಮುಂದಿನ ಸಭೆಗೆ ಖಡ್ಡಾಯವಾಗಿ ಕರೆಸಲೇ ಬೇಕೆಂದು ಪಟ್ಟು ಹಿಡಿದರು.


                    ಸಂತೆ ಹಾಗೂ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರು ಹಾಗೂ ಅಗತ್ಯ ಸೌಕರ್ಯ ಒದಗಿಸುವ ಬಗ್ಗೆ ಚರ್ಚೆ ನಡೆದು ಬಸ್ ನಿಲ್ದಾಣದಲ್ಲಿ ಹಾಗೂ ಪಶುವೈದ್ಯಕೀಯ ಆಸ್ಪತ್ರೆ ಬಳಿ ಸಿಸ್ಟನ್ ಇಟ್ಟು ನೀರು ಸರಬರಾಜು ಮಾಡಲು ಒಪ್ಪಿಗೆ ಪಡೆಯಲಾಯಿತು.ಬಸ್ ನಿಲ್ದಾಣದಲ್ಲಿ ಎಲ್ಲರ ಅನುಕೂಲಕ್ಕಾಗಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಸಂಸದರು ಹಾಗು ಶಾಸಕರನ್ನು ಒತ್ತಾಯಿಸಲು ತೀರ್ಮಾನಿಸಲಾಯಿತು.

                ಹುಳಿಯಾರಿಗೆ ಬೋರನಕಣಿವೆಯಿಂದ ಸರಬರಾಜಗುತ್ತಿರುವ ಕುಡಿಯುವ ನೀರು ಕಲ್ಮಶವಾಗಿದ್ದು ದುರ್ವಾಸನೆಯಿಂದ ಕೂಡಿರುವ ನೀರನ್ನು ನಿತ್ಯ ಬಳಕೆಗೂ ಸಹ ಬಳಸಲು ಅಸಾದ್ಯವಾಗಿದೆ ಕಳೆದ ೧೦ ವರ್ಷಗಳಿಂದಲೂ ಣಿರಿನ ಫಿಲ್ಟರ್ ಗೆ ಬಳಸುವ ಮರಳನ್ನು ಬದಲಾಯಿಸಿಲ್ಲ.ಕೇಳಿದರೆ ಹಣದ ಕೊರತೆ ಎನ್ನುತ್ತಾರೆ ಎಂದು ಅಹ್ಮದ್ ಖಾನ್ ಪ್ರಶ್ನಿಸುತ್ತಿದ್ದಂತೆ ಎಲ್ಲಾ ಸದಸ್ಯರು ಪಿಡಿಓ ಅವರನ್ನು ತರಾಟೆಗೆ ತೆಗೆದುಕೊಂಡರು.ಈ ಬಗ್ಗೆ ನಡೆದ ಚರ್ಚೆಯಲ್ಲಿ ಪಿಲ್ಟರ್ ಕ್ಲೀನ್ ಮಾಡಲು ಸುಮಾರು ೧೪ ಲಕ್ಷ ತಗಲಲಿದ್ದು ಪಂಚಾಯಿತಿಯಲ್ಲಿ ಹಣವಿಲ್ಲದ ಕಾರಣ ಸಚಿವರ, ಜಿಲ್ಲಾಧಿಕಾರಿಗಳ ಬಳಿ ನಿಯೋಗ ತೆರಳಿ ಸರ್ಕಾರದ ಅನುದಾನ ಪಡೆಯಲು ತೀರ್ಮಾನಿಸಲಾಯಿತು.

                     ಪಿಡಿಓ ಹಾಗೂ ಅಧ್ಯಕ್ಷರ ವೈಫಲ್ಯದಿಂದ ಕಳೆದ ತಿಂಗಳು ನಡೆಯಬೇಕಿದ್ದ ಪುಟ್‌ಪಾತ್ ಅಂಗಡಿಗಳ ಹರಾಜು ಕೈಬಿಟ್ಟಿದ್ದರಿಂದ ಹಾಗೂ ಮಳಿಗೆ ಹರಾಜು ಮುಂದೂಡಿದ್ದರಿಂದ ಸುಂಕ ವಸೂಲಿಯಾಗದೆ ಪಂಚಾಯಿತಿಗೆ ಬರುವ ಆದಾಯ ಕಳೆದೊಂದು ತಿಂಗಳಿನಿಂದ ಕುಂಠಿತವಾಗಿದ್ದು ಇದಕ್ಕೆ ಇವರಿಬ್ಬರೆ ಹೊಣೆ ಎಂದು ರಾಘವೇಂದ್ರ ಹಾಗೂ ಜಬೀಉಲ್ಲಾ ಧ್ವನಿ ಎತ್ತಿದರು.ಸುದೀರ್ಘ ಚರ್ಚೆ ನಡೆದು ಪುಟ್ ಪಾತ್ ತೆರವು ಪ್ರಸ್ತಾಪ ಸದ್ಯಕ್ಕೆ ಕೈಬಿಟ್ಟು ಹಿಂದಿನಂತೆ ಸುಂಕ ವಸೂಲಾತಿ ಮಾಡುವಂತೆ ಹಾಗೂ ಬಸ್ ನಿಲ್ದಾಣ ಮತ್ತು ರಾಜ್ ಕುಮಾರ್ ರಸ್ತೆಯ ಅಂಗಡಿಗಳ ಸುಂಕ ವಸೂಲಾತಿಗಾಗಿ ಕೂಡಲೆ ಹರಾಜಿನ ದಿನ ನಿಗದಿ ಮಾಡಿ ಹರಾಜು ನಡೆಸುವಂತೆ ಒಪ್ಪಿಗೆ ಪಡೆಯಲಾಯಿತು.


                 ಕೆಲವೊಂದು ಸದಸ್ಯರುಗಳು ತಮ್ಮ ಸ್ವಂತ ಖರ್ಚಿನಲ್ಲೆ ಅವರವರ ಬ್ಲಾಕ್ ಗಳಲ್ಲಿ ಕಾಮಗಾರಿ ಮಾಡಿಸಿದ್ದರ ಬಗ್ಗೆ ಪತ್ರಿಕೆಗಳಲ್ಲೂ ಅಬ್ಬರದ ಪ್ರಚಾರ ಪಡೆದಿದ್ದರಲ್ಲದೆ ಈ ಬಗ್ಗೆ ನಡೆದ ಚರ್ಚೆಯಲ್ಲಿ ನಮಗೆ ಕಾಮಗಾರಿಯ ಹಣ ಬೇಡವೆಂದಿದ್ದರು ಸಹ ಅವರ ಹೆಸರಿನಲ್ಲಿ ಕೇವಲ ಇಂಡೆಂಟ್ ಗಳ ಮೇಲೆಯೇ ಪರಿಶೀಲನೆ ಕೂಡ ಮಾಡದೆ ಹಣ ಕೊಟ್ಟಿದ್ದೇಕೆಂದು ಗೀತಾ ಬಾಬು ಆಕ್ಷೇಪಣೆ ಮಾಡಿದ್ದಲ್ಲದೆ ಈ ರೀತಿ ಮಾಡಿರುವ ಬಿಲ್ ಗಳಲ್ಲಿ ಸಾಕಷ್ಟು ಅವ್ಯವಹಾರವಾಗಿರುವ ಬಗ್ಗೆ ದಾಖಲೆ ಸಮೇತ ಪ್ರದರ್ಶಿಸಿದರು.

                ಇದಕ್ಕೆ ಉತ್ತರಿಸಿದ ಪಿಡಿಓ ಸಿದ್ದರಾಮಯ್ಯ ನಾನ್ಯಾವುದೇ ಬಿಲ್ ಪಾಸ್ ಮಾಡಿಲ್ಲ,ಇದ್ಯಾವುದು ನನ್ನ ಅವಧಿಯಲ್ಲಿ ನಡೆದಿಲ್ಲ,ಅಲ್ಲದೆ ಇದಕ್ಕೆ ಬೇಕಾದ ದಾಖಲೆ ಪರಿಶೀಲಿಸೋಣವೆಂದರೆ ಯಾವುದಕ್ಕೂ ಲೆಖ್ಕವಿಟ್ಟಿಲ್ಲ,ನಾನೇನೂ ಮಾಡೋಣವೆಮ್ದ ಅಸಹಾಯಕತೆ ವ್ಯಕ್ತಪಡಿಸಿದರು.

                 ಬಸ್ ನಿಲ್ದಾಣದ ಮಳಿಗೆ ಹರಾಜು ಮೂಲಭೂತ ಸೌಲಭ್ಯ ಕಲ್ಪಿಸಿಲ್ಲವೆಂದು ಅರ್ಧಕ್ಕೆ ನಿಂತಿದ್ದು ಇದರ ಹರಾಜು ಸಧ್ಯಕ್ಕೆ ಕೈಬಿಟ್ಟೂ ಸುಣ್ಣಬಣ್ಣ,ವಿದ್ಯುತ್ ಸೌಲತ್ತು ಕೊಟ್ಟನಂತರ ತೀರ್ಮಾನಿಸೋಣ. ಸಧ್ಯಕ್ಕೆ ತುರ್ತಾಗಿ ಬಸ್ ನಿಲ್ದಾಣದ ಶೌಚಾಲಯ ದುರಸ್ತಿ ಪಡಿಸಿ ಬೇರೊಬ್ಬರಿಗೆ ನಿರ್ವಹಣೆ ಮಾಡಲು ನೇಮಿಸಲು ತಿಳಿಸಲಾಯಿತು.


ಸಭೆಯಲ್ಲಿ ಸದಸ್ಯರುಗಳಾದ ದಸೂಡಿ ಚಂದ್ರಣ್ಣ,ಜಬೀಉಲ್ಲಾ,ಡಾಬಾ ಸೂರಪ್ಪ,ಹೇಮಂತ್,ಪುಟ್ಟರಾಜು, ಡಿಶ್ ಬಾಬು,ವೆಂಕಟೇಶ್,ಕಾಯಿ ಕುಮಾರ್,ಕೆಂಪಮ್ಮ,ಕರಿಯಮ್ಮ,ಬಿಂದು ರಮೇಶ್,ಗೀತಾಬಾಬು, ಸಿದ್ದಗಂಗಮ್ಮ,ಪುಟ್ಟಿಬಾಯಿ,ಕಾರ್ಯದರ್ಶಿ ಉಮಾಮಹೇಶ್,ಇನ್ನಿತರರಿದ್ದರು.
----------------------------------------------
ಪಂಚಾಯಿತಿಯಲ್ಲಿ ಸಿಬ್ಬಂದಿ ವರ್ಗದ ಸಂಬಳಕ್ಕಾಗಿ ಪ್ರತಿ ತಿಂಗಳು ೨.೨೫ ಲಕ್ಷ ಬೇಕಿದ್ದು ವಾರ್ಷಿಕ ಇದೊಂದು ಬಾಬಿಗಾಗಿಯೇ ೩೦.೦೦ ಲಕ್ಷ ಖರ್ಚಾಗುತ್ತಿದ್ದು ಸರ್ಕಾರದಿಂದ ಕೇವಲ ವಾರ್ಷಿಕ ೪.೦ ಲಕ್ಷ ಅನುದಾನ ಬರುತ್ತಿದ್ದು ಅಗತ್ಯ ಮೂಲಬೂತ ಸೌಕರ್ಯ ಕಲ್ಪಿಸಲು ದುಸ್ತರವಾಗಿದೆ.:ಪಿಡಿಓ ,ಸಿದ್ಧರಾಮಯ್ಯ
------------------------------------------
ನಮ್ಮ ಪಂಚಾಯಿತಿಯಲ್ಲಿ ನಡೆಯುವ ವ್ಯವಹಾರಗಳ ಬಗ್ಗೆ ಸದಸ್ಯರಿಗಿರಲಿನನಗೇ ಸರಿಯಾದ ಮಾಹಿತಿ ಲಭ್ಯವಿಲ್ಲ.ಅಧ್ಯಕ್ಷರು ಹಾಗೂ ಪಿ.ಡಿ.ಓ ನನ್ನ ಗಮನಕ್ಕೂ ತಾರದೆ ಏಕ ಪಕ್ಷಿಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ:ಗಣೇಶ್ ,ಪಂಚಾಯ್ತಿ ಉಪಾಧ್ಯಕ್ಷ

--------------------------------------------------

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...