![]() |
ದಸೂಡಿ ಆಂಜನೇಯಸ್ವಾಮಿ |
ಏ13ರಿಂದ ದಸೂಡಿ ಆಂಜನೇಯಸ್ವಾಮಿ ಜಾತ್ರೆ
-----------------------------------
ಹುಳಿಯಾರು ಹೋಬಳಿ ದಸೂಡಿ ಗ್ರಾಮದ ಶೀ ಆಂಜನೇಯಸ್ವಾಮಿ ಜಾತ್ರಾಮಹೋತ್ಸವ ಹಾಗೂ ದನಗಳ ಜಾತ್ರೆ ತಾ.13 ಬುಧವಾರದಿಂದ ಪ್ರಾರಂಭಗೊಳ್ಳಲಿದ್ದು ತಾ.23ರ ಶನಿವಾರದವರೆಗೆ ಹನ್ನೊಂದು ದಿನಗಳ ಕಾಲ ನಡೆಯಲಿದೆ.
ತಾ.13ರ ಬುಧವಾರ ಆಂಜನೇಯಸ್ವಾಮಿ ಮೂಲವಿಗ್ರಹ ಕ್ಕೆ ಅಂಕುರಾರ್ಪಣೆ,ಚಂದ್ರಮಂಡಲೋತ್ಸವ ಹಾಗೂ ಉತ್ಸವ ಮೂರ್ತಿಗೆ ಅಂಕುರಾರ್ಪಣೆ ,
ತಾ.14ರ ಗುರುವಾರ ಬೆಳಿಗ್ಗೆ ಧ್ವಜಾರೋಹಣ , ಅಡ್ಡಪಲ್ಲಕ್ಕಿ ಉತ್ಸವ ನಡೆದು ರಾತ್ರಿ ಸರ್ಪವಾಹನೋತ್ಸವ ನಡೆಯಲಿದೆ.
ತಾ.15ರ ಶುಕ್ರವಾರ ಇಂದ್ರಜಿತುವಾಹನೋತ್ಸವ,
ತಾ.16ರ ಶನಿವಾರ ಬೆಳಿಗ್ಗೆ ಅಭಿಷೇಕ,ಸಹಸ್ರನಾಮ ಪೂಜೆ,ಅಷ್ಟೋತ್ತರ, ಪ್ರಸಾದವಿನಿಯೋಗ ನಂತರ ರಾಮೋತ್ಸವ ಪಾನಕಪೂಜೆ,ಭಜನಾ ಕಾರ್ಯಕ್ರಮ, ಮಧ್ಯಾಹ್ನ ನೂರೊಂದೆಡೆ ಸೇವೆ,ಮಹಾಸಂತರ್ಪಣೆ ನಡೆದು ಅದೇ ದಿನ ಸಂಜೆ ಗೌಡಗೆರೆ ದುರ್ಗಮ್ಮದೇವರ ಆಗಮನವಾಗಲಿದೆ.
ತಾ.17ರ ಭಾನುವಾರ ಬೆಳಗಿನ ಜಾವ ಗಜವಾಹನೋತ್ಸವ.ಶ್ರೀ ಸ್ವಾಮಿಯ ಪುರ ಪ್ರವೇಶ,
ತಾ.18ರ ಸೋಮವಾರ ಬೆಳಗ್ಗೆ ಬ್ರಹ್ಮ ರಥೋತ್ಸವ ನಡೆದು ನಂತರ ಬ್ರಾಹ್ಮಣ ಸಂತರ್ಪಣೆ,ಪಾನಕಾಪನಿವಾರ ನಡೆದು ಇದೇ ದಿನ ಸಂಜೆ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ತಾ.19ರ ಮಂಗಳವಾರ ಬ್ರಾಹ್ಮಣರಿಗೆ ಸಂತರ್ಪಣೆ ಹಾಗೂ ಕೊಠಾರೋತ್ಸವ, "ಮುಳ್ಳುಪಾದಿಕೆ ಸೇವೆ",
ತಾ.20ರ ಬುಧವಾರ ಮುಂಜಾನೆ ಹಾಲು ಪಲ್ಲಕ್ಕಿ ಉತ್ಸವ, ಮಂಗಳ ಸ್ನಾನ(ಓಕುಳಿ) ಪಾನಕ ಪೂಜೆ,
ತಾ.21ರ ಗುರುವಾರ ರಾತ್ರಿ ಮುತ್ತಿನಪಲ್ಲಕ್ಕಿ ಉತ್ಸವ, ಅನ್ನಸಂತರ್ಪಣೆ.
ತಾ.22ರ ಶುಕ್ರವಾರ ರಾತ್ರಿ ಪುಷ್ಪವಾಹನೋತ್ಸವ,
ತಾ.23ರ ಶನಿವಾರ ನವಿಲುವಾಹನೋತ್ಸವ ನಡೆಯಲಿದೆ.
ದಸೂಡಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ದೇವಾಲಯ ಸಮಿತಿಯವರು ಹಾಗೂ ದಸೂಡಿ ಶ್ರೀಸೇನೆ ಸದಸ್ಯರು ಕೋರಿದ್ದಾರೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ