ಹುಳಿಯಾರು: ಇಲ್ಲಿನ ಬಸ್ ನಿಲ್ದಾಣದಲ್ಲಿನ ಬಸ್ ಶೆಲ್ಟರ್ನ ಸ್ಥಳದಲ್ಲಿ ಪ್ರಯಾಣಿಕರಿಗೆ ಕೂರಲು ಆಸನಗಳು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ ನಂತರ ಫುಟ್ಪಾತ್ ಅಂಗಡಿಗಳ ಸುಂಕ ವಸೂಲಾತಿ ಗುತ್ತಿಗೆ ಹರಾಜು ನಡೆಸಲಾಗುವುದು ಎಂದು ಗ್ರಾಪಂ ಉಪಾಧ್ಯಕ್ಷ ಗಣೇಶ್ ತಿಳಿಸಿದರು. ಹುಳಿಯಾರಿನ ಗ್ರಾಪಂ ಆವರಣದಲ್ಲಿ ನಡೆದ ಬಸ್ ಸುಂಕ ಮತ್ತು ಸಂತೆ ಸುಂಕ ವಸೂಲಾತಿ ಗುತ್ತಿಗೆ ಹರಾಜು ನಡೆಸುವ ವೇಳೆ ಆಗಮಿಸಿದ ಫುಟ್ಪಾತ್ ಅಂಗಡಿಯವರೊಂದಿಗೆ ಅವರು ಮಾತನಾಡಿದರು. ಪ್ರಯಾಣಿಕರಿಗೆ ಆಸನದ ವ್ಯವಸ್ಥೆ ಕಲ್ಪಿಸಿದ ನಂತರ ಬಸ್ ನಿಲ್ದಾಣದಲ್ಲಿನ ುಟ್ಪಾತ್ ಅಂಗಡಿಯವರನ್ನು ಮತ್ತು ಡಾ:ರಾಜಕುಮಾರ್ ರಸ್ತೆಯಲ್ಲಿನ ಸಣ್ಣಪುಟ್ಟ ಗೂಡಂಗಡಿಯವರನ್ನು ಪ್ರತ್ಯೇಕ ಸಭೆ ನಡೆಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲನಿಬಂಧನೆಗಳಿಗೆ ಒಳಪಡಿಸಿ ಸುಂಕ ವಸೂಲಾತಿ ಗುತ್ತಿಗೆ ಹರಾಜು ನಡೆಸಲಾಗುವುದು ಎಂದರು. ಬಸ್ನಿಲ್ದಾಣದ ಫುಟ್ಪಾತ್ ಅಂಗಡಿಯ ಹೂವಿನರಘು ಮಾತನಾಡಿ ಬಸ್ಶೆಲ್ಟರ್ ಸ್ಥಳದಲ್ಲಿನ ಸಣ್ಣಪುಟ್ಟ ಅಂಗಡಿಗಳನ್ನು ನಾವೇ ಸ್ವಯಂ ಪ್ರೇರಣೆಯಿಂದ ತೆರವು ಮಾಡುತ್ತೇವೆ. ಅಲ್ಲಿ ಪ್ರಾಯಾಣಿಕರಿಗೆ ಕೂರಲು ಆಸನದ ವ್ಯವಸ್ತೆ ಕಲ್ಪಿಸಿ. ನಂತರ ಅಲ್ಲಿಯೇ ಇರುವ ಅಲ್ಪ ಸ್ವಲ್ಪ ಜಾಗದಲ್ಲಿ ಅನೇಕ ವರ್ಷಗಳಿಂದ ಅಂಗಡಿಯಿಟ್ಟು ಜೀವನ ನಡೆಸಿಕೊಂಡು ಬ...
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070