ವಿಷಯಕ್ಕೆ ಹೋಗಿ

ರೋಗಕ್ಕೆ ಮದ್ದು-ಅಜ್ಜಿ ಹಬ್ಬ : ಮಾರಿ ಗಡಿದಾಟಿಸಲು ಹೋಳಿಗೆ ಎಡೆ

      ಅಜ್ಜಿ ಹಬ್ಬ ಅಂದ್ರೆ ಒಬ್ಬಟ್ಟಿನ(ಹೋಳಿಗೆಯ) ಹಬ್ಬವಾಗಿದ್ದು ಈ ಹಬ್ಬ ಆಚರಿಸಿದರೆ ಜನ ಜಾನುವಾರುಗಳ ರೋಗರುಜಿನ ದೂರ ಅದಕ್ಕೂ ಮೀರಿ ವರುಣನ ಕೃಪಾಕಟಾಕ್ಷವಾಗಿ ಸಮೃದ್ದ ಮಳೆಯಾಗಿ ಇಳೆ ತಂಪಾಗಿ ಎಲ್ಲರ ಬದುಕು ಹಸನಾಗಿರುತ್ತದೆ ಅನ್ನುವ ನಂಬಿಕೆ ಆಧಾರದ ಮೇಲೆ ಈ ಹಬ್ಬದ ಆಚರಣೆ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂಯಿದೆ.ಎಲ್ಲಾ ಹಬ್ಬಗಳಂತೆ ಪ್ರತಿ ವರ್ಷವೂ ಆಚರಿಣೆಯಿಲ್ಲದ ಈ ಹಬ್ಬವನ್ನು ಊರಿನಲ್ಲಿ ರೋಗರುಜ್ಜಿನಗಳು ತಾಂಡವಾಡುವಾಗ ಮಾತ್ರ ಊರಿನ ಯಜಮಾನರುಗಳು ಸಮಾಲೋಚಿಸಿ ಈ ಹಬ್ಬದ ಆಚರಣೆ ಮಾಡುತ್ತಾರೆ.ಹೆಚ್ಚಾಗಿ ಆಷಾಢ ಮಾಸದ ಮಂಗಳವಾರ ಅಥವಾ ಶುಕ್ರವಾರದಂದು ಆಚರಿಸುವ ವಾಡಿಕೆಯಿದ್ದು ಅದರಂತೆ ಈ ಹಬ್ಬವನ್ನು ಹುಳಿಯಾರು ಹಾಗೂ ಸುತ್ತೇಳು ಹಳ್ಳಿಗಳಲ್ಲಿ ಶುಕ್ರವಾರ ಆಚರಿಸಲಾಯಿತು.
ಹುಳಿಯಾರಿನಲ್ಲಿ ಅಜ್ಜಿ ಹಬ್ಬದ ಅಂಗವಾಗಿ ಭಕ್ತರು ಮನೆಯಲ್ಲಿ ಮಾಡಿದ ಒಬ್ಬಟ್ಟು ಹಾಗೂ ಅನ್ನಸಾರನ್ನು ಅರ್ಪಿಸುತ್ತಿರುವುದು.




        ಸಾಮಾನ್ಯವಾಗಿ ಊರಿನೆಲ್ಲರೂ ಈ ಹಬ್ಬ ತಪ್ಪದೆ ಆಚರಿಸುತ್ತಾರೆ.ಹಬ್ಬದ ದಿನವನ್ನು ಮುಂಚಿತವಾಗಿಯೆ ಡಂಗೂರ ಸಾರಿಸುವ ಮುಖಾಂತರ ತಿಳಿಸಲಾಗಿರುತ್ತದೆ.ಅಂದು ಎಲ್ಲರ ಮನೆಯಲ್ಲೂ ಒಬ್ಬಟ್ಟಿನ ಘಮಲೇಘಮಲು.ಅಂದು ಮನೆಯಲ್ಲಿ ಮಾಡಿದ ಒಬ್ಬಟ್ಟನ್ನು ಹಾಗೂ ಅನ್ನಸಾರನ್ನು ಕರಗಕ್ಕೆ ಎಡೆಯಿಡುವ ಸಂಪ್ರದಾಯವಿದೆ.
        ಆಚರಣೆ ಹೇಗೆ:ಊರಿನ ಗ್ರಾಮದೇವತೆ ದೇವಾಲಯದ ಮುಂಭಾಗದಲ್ಲಿ ಕರಗ ಇಟ್ಟಿರುತ್ತಾರೆ.ಕರಗ ಅಂದರೆ ಜನಜಾನುವಾರುಗಳನ್ನು ಕಾಡುವ ಮಾರಿಯ ಪ್ರತಿರೂಪವಾಗಿದ್ದು ಮಡಕೆಗೆ ಸೀರೆಉಡಿಸಿ ಬೇವಿನ ಸೊಪ್ಪಿನಿಂದ ಅಲಂಕರಿಸಿ ಪ್ರತಿಷ್ಠಾಪಿಸಲಾಗಿರುತ್ತದೆ.
     ಗ್ರಾಮದ ಪ್ರತಿ ಮನೆಯವರೂ ಮಡಿಯಿಂದ ತಯಾರಿಸಿದ ಹೋಳಿಗೆ,ಅನ್ನ ಸಾರನ್ನು ಕರಗಕ್ಕೆ ನೈವೈದ್ಯವಾಗಿ ಸಮರ್ಪಿಸಿ ದೇವಿಗೆ ಪೂಜೆ ಸಲ್ಲಿಸಿ ಹಿಂದಿರುಗುತ್ತಾರೆ.ಆ ನಂತರವಷ್ಟೆ ಮನೆಯಲ್ಲಿ ಮಾಡಿದ ಹೋಳಿಗೆಯನ್ನು ಮನೆಮಂದಿಯೆಲ್ಲ ಸೇವಿಸುತ್ತಾರೆ.
     ರಾತ್ರಿವರೆಗೂ ಕರಗದ ಮುಂದೆ ಸಂಗ್ರಹವಾಗುವ ಒಬ್ಬಟ್ಟೆ ಗುಡ್ಡದಷ್ಟಾಗುವುದಿದ್ದು ಅದನ್ನು ಗ್ರಾಮದೇವತೆಗಳ ಸಮ್ಮೂಖದಲ್ಲಿ ಪೂಜಿಸಿ ಊರಿನಿಂದಾಚೆಗೆ ಕೊಂಡೊಯ್ಯುವುದೇ ಪ್ರಮುಖ ಘಟ್ಟ.ಮಾರಿಯ ಪ್ರತಿರೂಪವಾದ ಕರಗವನ್ನು ಅದಕ್ಕೆಂದೆ ಮೀಸಲಾದ ವ್ಯಕ್ತಿಯೊಬ್ಬನಿಂದ ಹೊರಿಸಿಕೊಂಡು ಗ್ರಾಮದೇವತೆಗಳೊಂದಿಗೆ ಎಲ್ಲಾ ದಿಕ್ಕುಗಳಿಗೂ ತೆರಳಿ ದಿಕ್ಪಾಲಕರಿಗೆಲ್ಲಾ ಬಲಿ ಸಮರ್ಪಿಸುತ್ತಾರೆ.ಅರೆ ವಾದ್ಯದ ಸದ್ದಿನೊಂದಿಗೆ ಕೈಯಲ್ಲಿ ಚಾಟಿಹಿಡಿದು ಬಾಯಲ್ಲಿ ನಿಂಬೆಹಣ್ಣು ಕಚ್ಚಿಕೊಂಡು ಹೂಂಕರಿಸುತ್ತ ಹೊರಡುವ ಕರಗದ ವ್ಯಕ್ತಿ ಗ್ರಾಮದ ಗಡಿದಾಟಿ ಅನತಿ ದೂರಕ್ಕೆ ಸಾಗುತ್ತಾನೆ.ಅಲ್ಲಿ ಕರಗಕ್ಕೆ ಪೂಜೆ ಸಲ್ಲಿಸಿ ಪ್ರಾಣಿ ಬಲಿಕೊಟ್ಟು ಸಂಗ್ರಹಿಸಲಾಗಿದ್ದ ಹೋಳಿಗೆಯನ್ನು ಅಲ್ಲೆ ಸುರಿದು ಕರಗವನ್ನು ಅಲ್ಲೆಬಿಟ್ಟು ಹಿಂದುರುಗೆ ನೋಡದೆ ವಾಪಸ್ಸಾಗುತ್ತಾರೆ.ಹಾಗೆ ಮಾಡುವ ಮುಖಾಂತರ ನಮ್ಮೂರು ಹೊಕ್ಕಿದ್ದ ಮಾರಿ ಗ್ರಾಮದ ಗಡಿದಾಟಿ ಹೋದಳು ಎಂದು ನಿರಾಳರಾಗುತ್ತಾರೆ.
ಗ್ರಾಮದಲ್ಲಿ ಶುಕ್ರವಾರ ಗ್ರಾಮದೇವತೆ ದುರ್ಗಮ್ಮನ ದೇವಾಲಯದ ಮುಂದೆ ಹುಳಿಯಾರಮ್ಮ ದೇವಿಯ ಉಪಸ್ಥಿತಿಯಲ್ಲಿ ಸಂಭ್ರಮದಿಂದ ಅಜ್ಜಿ ಹಬ್ಬ ಆಚರಿಸಲಾಯಿತು.ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿದವು. ಹಬ್ಬದ ಆಚರಣೆಯಲ್ಲಿ ತೊಡಗಿಕೊಂಡ ಪ್ರತಿ ಮನೆಯವರು ಮಡಿಯಿಂದ ಹೂ, ಹಣ್ಣು, ಹೋಳಿಗೆ ಎಡೆಯನ್ನು ದೇವಸ್ಥಾನದ ಬಳಿ ತಂದು ಕರಗಕ್ಕೆ ಪೂಜೆ ಸಲ್ಲಿಸಿದರು. ಸಂಜೆ ದುರ್ಗಮ್ಮ ಹಾಗೂ ಹುಳಿಯಾರಮ್ಮ ದೇವರುಗಳ ಸಮೇತ ಕರಗದವನ್ನು ಗುಡ್ಡದಷ್ಟಿದ್ದ ಹೋಳಿಗೆ ಅನ್ನವನ್ನು ತಟ್ಟಿಗಳಲ್ಲಿ ತುಂಬಿಕೊಂಡು ಮೆರವಣಿಗೆ ಮೂಲಕ ಗ್ರಾಮದ ಗಡಿದಾಟಿಸಲಾಯಿತು. . ಅಲ್ಲಿ ಪೂಜೆ ಹಾಗೂ ಬಲಿ ಸಮರ್ಪಣೆಯಂತಹ ಸಾಂಪ್ರದಾಯಿಕ ರೀತಿ ರಿವಾಜುಗಳನ್ನು ನೆರವೇರಿಸಲಾಯಿತು. ನಂತರ ಕರಗವನ್ನು ಅಲ್ಲಿಯೇ ಬಿಟ್ಟು ದೇವರುಗಳನ್ನು ಮರಳಿ ದೇವಸ್ಥಾನದ ಬಳಿ ಕರೆತಂದು ಪುಣ್ಯಾಹ ಮಾಡಿಸಿ ಗುಡಿತುಂಬಿಸಲಾಯಿತು. ದೇವಸ್ಥಾನದ ಗುಡಿಗೌಡರುಗಳು,ಗ್ರಾಮದ ಮುಖಂಡರುಗಳು ಸೇರಿದಂತೆ ನೂರಾರು ಜನರು ಈ ಆಚರಣೆಯಲ್ಲಿ ಪಾಲ್ಗೊಂಡಿದ್ದರು.
--------------------------------

        ಸಾಂಕ್ರಾಮಿಕ ಕಾಯಿಲೆಗಳು ಬಾರದಿರಲಿ, ಗ್ರಾಮ ದುಷ್ಟಶಕ್ತಿಗಳ ಕಾಟದಿಂದ ಮುಕ್ತವಾಗಿರಲಿ ಎನ್ನುವ ನಂಬಿಕೆಯಿಂದ ಅಜ್ಜಿ ಹಬ್ಬ ಆಚರಿಸಲಾಗುತ್ತದೆ .8 ವರ್ಷದ ಹಿಂದೆ ಈ ಹಬ್ಬ ಆಚರಿಸಲಾಗಿದ್ದು ಇದೀಗ ಮತ್ತೆ ಆಚರಿಸಲಾಗುತ್ತಿದೆ.-ಪೂಜಾರ್ ಭೈರೇಶ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಹುಳಿಯಾರು: ಸಂಕಷ್ಟದಲ್ಲಿದ್ದ ಬುದ್ಧಿಮಾನ್ಯ ಯುವಕನಿಗೆ ಇಮ್ರಾಜ್ ಬಳಗದಿಂದ ಆಸರೆ; ಮಾನವೀಯತೆ ಮೆರೆದ ಯುವಕರು

ಹುಳಿಯಾರು : " ಮಾನವೀಯತೆ ಎಲ್ಲಕ್ಕಿಂತ ದೊಡ್ಡದು " ಎಂಬ ಮಾತನ್ನು ಹುಳಿಯಾರಿನ ಯುವಕರ ತಂಡವೊಂದು ನಿಜ ಮಾಡಿ ತೋರಿಸಿದೆ.               ಇಲ್ಲಿನ ಎಪಿಎಂಸಿ ಆವರಣದಲ್ಲಿ ದಿಕ್ಕುತೋಚದೆ, ಅಸಹಾಯಕ ಸ್ಥಿತಿಯಲ್ಲಿದ್ದ ಬುದ್ಧಿಮಾನ್ಯ ಯುವಕನೊಬ್ಬನಿಗೆ ಆಸರೆಯಾಗುವ ಮೂಲಕ ಸ್ಥಳೀಯ ಯುವಕರು ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆ :ಹುಳಿಯಾರಿನ ಎಪಿಎಂಸಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬುದ್ಧಿಮಾನ್ಯ ಯುವಕನೊಬ್ಬ ಒಂಟಿಯಾಗಿ ಅಲೆಯುತ್ತಿದ್ದನು. ಸರಿಯಾದ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಆತ ತೀವ್ರ ಸಂಕಷ್ಟದಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಯುವಕ ಇಮ್ರಾಜ್ ಮತ್ತು ಅವರ ಸ್ನೇಹಿತರ ಬಳಗವು ತಕ್ಷಣವೇ ಆತನ ನೆರವಿಗೆ ಧಾವಿಸಿತು. ಸಕಾಲಿಕ ಸ್ಪಂದನೆ :ಯುವಕನ ಸ್ಥಿತಿಯನ್ನು ಕಂಡು ಮನನೊಂದ ಸ್ನೇಹಿತರಾದ ಇಮ್ರಾಜ್, ಜಬಿ ಉಲ್ಲಾಖಾನ್ ಫರ್ಮಾನ್, ಅಬ್ದುಲ್ಲಾ, ನವಾ ಶರೀಫ್, ಜಿಶನ್ ಹಾಗೂ ಫಯಾಜ್ ಅವರು ಮೊದಲು ಆತನಿಗೆ ಆಹಾರದ ವ್ಯವಸ್ಥೆ ಮಾಡಿದರು. ನಂತರ ಆತನ ಸುರಕ್ಷತೆಗಾಗಿ ಕ್ರಮ ಕೈಗೊಂಡರು. ಇಲಾಖೆಯ ಸುಪರ್ದಿಗೆ: ಯುವಕರ ಮನವಿಗೆ ಸ್ಪಂದಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, "ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ನಾವು ಇಲ್ಲಿಗೆ ಬಂದಿದ್ದು, ...

​ಹುಳಿಯಾರು ಕಸ ವಿಲೇವಾರಿ ಬಿಕ್ಕಟ್ಟು: ನಾಡಕಚೇರಿ ಮುಂದೆ ಕಸ ಸುರಿಯುವ ಯತ್ನ, ಅಧಿಕಾರಿಗಳಿಂದ 15 ದಿನಗಳಲ್ಲಿ ಶಾಶ್ವತ ಪರಿಹಾರದ ಭರವಸೆ

ಹುಳಿಯಾರು ಕಸ ವಿಲೇವಾರಿ ಬಿಕ್ಕಟ್ಟು: ನಾಡಕಚೇರಿ ಮುಂದೆ ಕಸ ಸುರಿಯುವ ಯತ್ನ, ಅಧಿಕಾರಿಗಳಿಂದ 15 ದಿನಗಳಲ್ಲಿ ಶಾಶ್ವತ ಪರಿಹಾರದ ಭರವಸೆ ವರದಿ : ಡಿ.ಆರ್‌.ನರೇಂದ್ರಬಾಬು-ಹುಳಿಯಾರು ​ ಹುಳಿಯಾರು : ದೀರ್ಘಕಾಲದಿಂದ ಬಗೆಹರಿಯದ ಕಸ ವಿಲೇವಾರಿ ಘಟಕದ ಸಮಸ್ಯೆ ಹಾಗೂ ಪಟ್ಟಣದ ಮೂಲಸೌಕರ್ಯಗಳ ಕೊರತೆ ಖಂಡಿಸಿ, ಹುಳಿಯಾರಿನ ರೈತ ಸಂಘ ಕಳೆದ 19 ದಿನಗಳಿಂದ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ನಡೆಯುತ್ತಿರುವ ಅಹೋರಾತ್ರ ಧರಣಿಗೆ ಬೆಂಬಲಿಸಿ ಇಂದು ವಿವಿಧ ಸಂಘ-ಸಂಸ್ಥೆಗಳು ಮತ್ತು ನಾಗರಿಕರು ಟ್ರ್ಯಾಕ್ಟರ್‌ನಲ್ಲಿ ಕಸ ತುಂಬಿಕೊಂಡು ಬಂದು ನಾಡಕಚೇರಿ ಮುಂದೆ ಸುರಿಯಲು ಯತ್ನಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು . ​ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್.) ಪಕ್ಷ ಸೇರಿದಂತೆ ಹಲವು ಸಂಘಟನೆಗಳ ಬೆಂಬಲದೊಂದಿಗೆ ನಡೆದ ಈ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿತ್ತು. ಪಟ್ಟಣ ಪಂಚಾಯಿತಿ ಮುಂದೆ ತಹಸಿಲ್ದಾರ್ ,ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಸೇರಿಕೊಂಡು ಪ್ರತಿಭಟನಾಕಾರದೊಂದಿಗೆ ಗಂಟಗಟ್ಟಲೆ ಸಮಾಲೋಚಿಸಿದರು. ಮೂರು ಬೇಡಿಕೆಗಳಲ್ಲಿ ಎರಡು ಬೇಡಿಕೆ ಈಡೇರಿಸುವ ಭರವಸೆ ನೀಡಿದರೂ ಸಹ ಪ್ರತಿಭಟನಾಕಾರರು ಒಪ್ಪದೇ ನಾಡಕಚೇರಿ ಮುಂದೆ ಕಸ ಸುರಿಯುವ ಪ್ರಯತ್ನಕ್ಕೆ ಮುಂದಾದರು. ​ ಪ್ರತಿಭಟನೆ ಹಾದಿ ಮತ್ತು ಪೊಲೀಸ್ ಸರ್ಪಗಾವಲು :  ​ಪ್ರತಿಭಟನಾಕಾರರು ಟ್ರ್ಯಾಕ್ಟರ್‌ನಲ್ಲಿ ಕಸ ತುಂಬಿಕೊಂಡು ಮೊದಲು ದ...