ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹೊಯ್ಸಳಕಟ್ಟೆಯಲ್ಲಿ ರಾಜ್ಯೋತ್ಸವ ಆಚರಣೆ

ಹುಳಿಯಾರು ಹೋಬಳಿ ಹೊಯ್ಸಳಕಟ್ಟೆಯ ಕರ್ನಾಟಕ ರಕ್ಷಣಾ ವೇದಿಕೆವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯಿತು. ರಾಜ್ಯೋತ್ಸವದ ಅಂಗವಾಗಿ ಗ್ರಾಮವನ್ನು ಸ್ವಚ್ಚಗೊಳಿಸುವ ಕಾರ್ಯ ಕೈಗೊಂಡಿದ್ದರು. ಹುಳಿಯಾರು ಹೋಬಳಿ ಹೊಯ್ಸಳಕಟ್ಟೆಯಲ್ಲಿ ಕರವೇ ವತಿಯಿಂದ ರಾಜ್ಯೋತ್ಸವ ಆಚರಣೆ ನಡೆಯಿತು. ಧ್ವಜಾರೋಹಣದ ನಂತರ ಸಂಘದ ಪದಾಧಿಕಾರಿಗಳೆಲ್ಲಾ ಒಟ್ಟಾಗಿ ಸಾರ್ವಜನಿಕರನ್ನು ತಮ್ಮೊಟ್ಟಿಗೆ ಸೇರಿಸಿಕೊಂಡು ಗ್ರಾಮದ ಸ್ವಚ್ಚತಾ ಕಾರ್ಯಕ್ಕೆ ಮುಂದಾದರು. ರಸ್ತೆ ಅಕ್ಕಪಕ್ಕದಲ್ಲಿ ಬಿದ್ದಿದ್ದ ಕಸ ಕಡ್ಡಿಯನ್ನು ಒಂದೆಡೆ ಸಂಗ್ರಹಿಸಿದ್ದಲ್ಲದೆ, ಸ್ವಚ್ಚತೆಯ ಜನರಿಗೆ ತಿಳಿಸುತ್ತಾ ಸ್ವಚ್ಚಗ್ರಾಮದ ಬಗ್ಗೆ ಅರಿವು ಮೂಡುವಂತೆ ಮಾಡಿದರು. ಈ ಸಂದರ್ಭದಲ್ಲಿ ದಾನಿಗಳಾದ ರಾಮದಾಸಪ್ಪ, ನಿವೃತ್ತಶಿಕ್ಷಕ ವದ್ದಿಗಯ್ಯ ಹಾಗೂ ಕರವೇ ಅಧ್ಯಕ್ಷ ನಾಗರಾಜು ಪದಾಧಿಕಾರಿಗಳಾದ ಕೋದಂಡರಾಮ,ಗುಂಡ, ಸ್ವಾಮಿ,ರವಿ,ಕಿರಣ್ ಇತರರು ಉಪಸ್ಥಿತರಿದ್ದರು.

ಕರವೇಯಿಂದ ವೈಭವದ ರಾಜ್ಯೋತ್ಸವ ಆಚರಣೆ

ಕರ್ನಾಟಕ ರಕ್ಷಣಾ ವೇದಿಕೆ ಹುಳಿಯಾರು ಘಟಕದ ವತಿಯಿಂದ ಶನಿವಾರದಂದು ಪಟ್ಟಣದ ಕರವೇ ವೃತ್ತದಲ್ಲಿ ಧ್ವಜಾರೋಹಣ ನಡೆಸುವ ಮೂಲಕ ವೈಭವಯುತವಾಗಿ ರಾಜ್ಯೋತ್ಸವ ಆಚರಿಸಿದರು. ಹುಳಿಯಾರಿನ ಕರ್ನಾಟಕ ರಕ್ಷಣಾ ವೇದಿಕೆವತಿಯಿಂದ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು.  ಮಾಜಿ ಶಾಸಕ ಕೆ.ಎಸ್.ಕಿರಣ್ ಅವರು ಧ್ವಜಾರೋಹಣ ನೇರವಿಸಿದ್ದು ಸಿಹಿ ಹಾಗೂ ಉಪಹಾರವನ್ನು ಸಹ ಹಂಚಿದರು. ನಂತರ ಭುವನೇಶ್ವರಿ ತಾಯಿಯ ಭಾವಚಿತ್ರಕ್ಕೆ ಅಲಂಕರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ಪಟಾಕಿ ಸಿಡಿಸುತ್ತಾ ಸಾಸಿಕ್ ಡೋಲಿನ ವಾದ್ಯಕ್ಕೆ ಹೆಜ್ಜೆ ಹಾಕಿದ್ದಲ್ಲೆ, ಕನ್ನಡ ಹಾಡುಗಳನ್ನು ಹಾಕಿಕೊಂಡು ಮೆರವಣಿಗೆ ನಡೆಸಿದರು. ಈ ವೇಳೆ ಕರವೇ ಅಧ್ಯಕ್ಷ ಸಿದ್ದೇಶ್, ಗೌರವಾಧ್ಯ ಕೋಳಿಶ್ರೀನಿವಾಸ್, ಖಜಾಂಚಿ ಚನ್ನಬಸವಯ್ಯ, ಕಾರ್ಯದರ್ಶಿ ಲಕ್ಷ್ಮಿಕಾಂತ, ಮಂಜುನಾಥ, ಪದಾಧಿಕಾರಿಗಳಾದ ಅಂಜನ್ ಕುಮಾರ್, ರಂಗಸ್ವಾಮಿ, ಮುರುಳಿ, ರಘು,ಬೀರಪ್ಪ, ಕೆ.ಕುಮಾರ್,ಗಣೇಶ್,ನವೀನ್,ದಿವಾಕರ,ಬಸವರಾಜು, ಯೋಗೀಶ್, ಸೇರಿದಂತೆ ಇತರರು ಉಪಸ್ಥಿತರಿದ್ದರು.  ಏಜೆಂಟರ್ ಸಂಘದಿಂದ ರಾಜ್ಯೋತ್ಸವ ಆಚರಣೆ ---------- ಹುಳಿಯಾರು: ಪಟ್ಟಣದ ಖಾಸಗಿ ಬಸ್ ಏಜೆಂಟರ ಹಾಗೂ ಮಾಲೀಕರ ಸಂಘದ ವತಿಯಿಂದ ಬಸ್ ನಿಲ್ದಾಣದಲ್ಲಿ ಕನ್ನಡ ಭಾವುಟ ಹಾರಿಸುವ ಮೂಲಕ ರಾಜ್ಯೋತ್ಸವದ ಆಚರಣೆ ನಡೆಸಿದರು. ಮಾಜಿ

ತೊಗರಿ ಬೆಳೆ ಕ್ಷೇತ್ರೋತ್ಸವ

ಹುಳಿಯಾರು ಹೋಬಳಿ ಬರಕನಹಾಳ್ ಗ್ರಾ.ಪಂ.ವ್ಯಾಪ್ತಿಯ ಬಾಲದೇವರಹಟ್ಟಿ ಗ್ರಾಮದಲ್ಲಿ ಶುಕ್ರವಾರ ಕೃಷಿಇಲಾಖೆವತಿಯಿಂದ ಭೂಚೇತನ ಯೋಜನೆಯಡಿ ತೊಗರಿ ಬೆಳೆ ಕ್ಷೇತ್ರೋತ್ಸವ ನಡೆಯಿತು. ಹುಳಿಯಾರು ಹೋಬಳಿ ಬಾಲದೇವರಹಟ್ಟಿ ಗ್ರಾಮದಲ್ಲಿ ಕೃಷಿ ಇಲಾಖೆವತಿಯಿಂದ ಭೂಚೇತನ ಯೋಜನೆಯಡಿ ತೊಗರಿ ಬೆಳೆ ಕ್ಷೇತ್ರೋತ್ಸವ ನಡೆಯಿತು.  ಕ್ಷೇತ್ರೋತ್ಸವದ ನೇತೃತ್ವ ವಹಿಸಿದ್ದ ಸಹಾಯಕ ಕೃಷಿ ನಿರ್ದೇಶಕ ಹೊನ್ನದಾಸೇಗೌಡ ಮಾತನಾಡಿ, ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ತೊಗರಿಯೂ ಸಹ ಒಂದಾಗಿದ್ದು, ಈ ಭಾಗದಲ್ಲಿ ಉತ್ತಮವಾಗಿದೆ. ಇದನ್ನು ರಾಗಿ ಬೆಳೆಯ ಅಕ್ಕಡಿ ಸಾಲಿನಲ್ಲಿ ಮಾತ್ರ ಹಾಕುವುದರ ಜೊತೆಗೆ ಪ್ರಮುಖ ಬೆಳೆಯಾಗಿಯೂ ಸಹ ಬೆಳೆಯಬಹುದಾಗಿದ್ದು ರೈತರು ಮುಂದಾಗಬೇಕಿದೆ ಎಂದರು. ರೈತರು ಕೃಷಿ ಚಟುವಟಿಕೆಯಲ್ಲಿ ಸಾವಯವ ಗೊಬ್ಬರದ ಬಳಕೆಯನ್ನು ಮಾಡುವ ಮೂಲಕ ರಾಸಾಯನಿಕ ಗೊಬ್ಬರದ ಬಳಕೆಯನ್ನು ಹಂತಹಂತವಾಗಿ ಕಡಿಮೆ ಮಾಡಬೇಕು ಎಂದರು. ಎರೆಹುಳು ಗೊಬ್ಬರವನ್ನು ತಾವೇ ಸ್ವತ: ತಯಾರಿಸಿಕೊಂಡು ಬೆಳೆಗಳೀಗೆ ಹಾಕಬೇಕು, ರೈತರಿಗೆ ನಮ್ಮ ತಾಲ್ಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಕ್ಲೋರೋ ಪೈರಿಫಾಸ್ , ಕ್ವಿನಾಲ್ ಫಾಸ್ ಮಾನೋಕ್ರೋಟೋ ಫಾಸ್ ಮತ್ತಿತರರ ಔಷಧಿಗಳು ರಿಯಾಯಿತಿ ದರದಲ್ಲಿ ದೊರೆಯುತ್ತಿವೆ, ಇದರ ಸದುಪಯೋವನ್ನು ಪಡೆಯುವಂತೆ ತಿಳಿಸಿದರು. ಈ ವೇಳೆ ಜಿ.ಪಂ.ಸದಸ್ಯೆ ನಿಂಗಮ್ಮರಾಮಯ್ಯ ಕ್ಷೇತ್ರೋತ್ಸವ ಉದ್ಘಾಟಿಸಿದರು. ಗ್ರಾ.ಪಂ.ಅಧ್ಯಕ್ಷೆ ರಾಜಮ್ಮ ಅಧ್ಯ

ಶಾಲಾಮಕ್ಕಳಿಂದ ಸ್ವಚ್ಚತಾ ಕಾರ್ಯ

ಹುಳಿಯಾರು ಹೋಬಳಿ ವೈ.ಎಸ್.ಪಾಳ್ಯದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಸ್ವಚ್ಚ ಭಾರತ ಅಭಿಯಾನದಡಿ ಶಿಕ್ಷಕರ ಮಾರ್ಗದರ್ಶನದಲ್ಲಿ ಶಾಲಾ ಮಕ್ಕಳು ಶಾಲಾ ಆವರಣ ಸ್ವಚ್ಚಗೊಳಿಸಿದರು. ಹುಳಿಯಾರು ಸಮೀಪದ ವೈ.ಎಸ್.ಪಾಳ್ಯದ ಉರ್ದು ಶಾಲಾಮಕ್ಕಳು ಶಿಕ್ಷಕರ ಮಾರ್ಗದರ್ಶನದಲ್ಲಿ ಶಾಲಾವರಣ ಸ್ವಚ್ಚಗೊಳಿಸುತ್ತಿರುವುದು. ಪುಟ್ಟ ಮಕ್ಕಳೇ ಪೊರಕೆ ಹಿಡಿದು ಶಾಲಾ ಆವರಣದಲ್ಲಿ ಬಿದ್ದಿದ್ದ ಕಸವನ್ನೆಲ್ಲಾ ಒಂದೆಡೆ ಶೇಖರಿಸಿದ್ದರಲ್ಲದೆ, ಆವರಣದಲ್ಲಿ ಬೆಳೆದಿದ್ದ ಕಳೆಸಸ್ಯಗಳನ್ನು ಕಿತ್ತು ಹಾಕುವ ಮೂಲಕ ಸ್ವಚ್ಚತೆಗೊಳಿಸುವಲ್ಲಿ ಮುಂದಾಗಿದ್ದರು. ಪ್ರಧಾನಿ ಮೋದಿಯವರ ಸ್ವಚ್ಚಭಾರತದ ಅಭಿಯಾನಡಿ ಇಡಿ ದೇಶವನ್ನೇ ಸ್ವಚ್ಚಗೊಳಿಸುವ ಕಾರ್ಯ ಕೈಗೊಂಡಿದ್ದಾರೆ ಅದರಂತೆ ನಾವುಗಳು ಸಹ ನಮ್ಮ ಸುತ್ತಮುತ್ತಲಿನ ಜಾಗವನ್ನು ಸ್ವತ: ನಾವೇ ಸ್ವಚ್ಚವಾಗಿಟ್ಟುಕೊಳ್ಳುವುದರಿಂದ ಅನೈರ್ಮಲ್ಯವನ್ನು ತೊಲಗಿಸಬಹುದಾಗಿ ಎಂದು ಮುಖ್ಯಶಿಕ್ಷಕ ಜಯಪ್ರಕಾಶ್ ತಿಳಿಸಿದರು. ನಮ್ಮ ಮನೆ,ರಸ್ತೆ ಬದಿಯ ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿದ್ದರೆ, ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಹಾಗೂ ಸ್ವಚ್ಚತೆಯಿಂದಾಗುವ ಪ್ರಯೋಜನದ ಬಗ್ಗೆ ಶಾಲಾಮಕ್ಕಳಿಗೆ ಮಾಹಿತಿ ನೀಡಿದರು.

ಟಿ.ಎಸ್.ಹಳ್ಳಿ : ಶ್ರದ್ಧಾಭಕ್ತಿಯಿಂದ ನಡೆದ ದೋಣಿ ಸೇವೆ

ಹುಳಿಯಾರು ಹೋಬಳಿ ತೊರೆಸೂರಗೊಂಡನಹಳ್ಳಿಯ ಶ್ರೀ ಚೌಡೇಶ್ವರಿ ದೇವಿಯ ದೇವಾಲಯದಲ್ಲಿ ಬುಧವಾರದಂದು ಅಪಾರಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಗೊರಪ್ಪಗಳ ದೋಣಿ ಸೇವೆ ಶ್ರದ್ಧಾಭಕ್ತಿಯಿಂದ ನಡೆಯಿತು. ಹುಳಿಯಾರು ಸಮೀಪದ ಟಿ.ಎಸ್.ಹಳ್ಳಿಯ ಚೌಡೇಶ್ವರಿ ದೇವಾಲಯದಲ್ಲಿ ಗೊರಪ್ಪಗಳ ಸಮ್ಮುಖದಲ್ಲಿ ನಡೆದ ದೋಣಿಸೇವೆ. ದೋಣಿ ಸೇವೆಯ ಅಂಗವಾಗಿ ಚೌಡೇಶ್ವರಿದೇವಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ದೇವಾಲಯದ ಮುಂಭಾಗದಲ್ಲಿ ಕರಿಕಂಬಳಿ ಹಾಸಿ ಅದರ ಮೇಲೆ ಬಾಳೆ ಎಲೆ ಹಾಗೂ ಗೊರಪ್ಪಗಳ ದೋಣಿಯನ್ನಿಟ್ಟು, ಬಾಳೆಹಣ್ಣು ಸೇರಿದಂತೆ ಇನ್ನಿತರ ಪದಾರ್ಥಗಳಿಂದ ಸಿದ್ದಗೊಳಿಸಿದ ಪ್ರಸಾದವನ್ನು ತುಂಬಿ ಪೂಜೆ ಸಲ್ಲಿಸಲಾಯಿತು. ಮೈಲಾರದೇವರ ಪ್ರತಿಸ್ವರೂಪ ಎಂದೇ ನಂಬಿರುವ ಗೊರಪ್ಪಗಳ ಹಣೆಗೆ ಅರಿಶಿನದ ತಿಲಕವನ್ನಿಟ್ಟು ಪೂಜೆಸಿ, ಜೈಕಾರ ಹಾಕಲಾಯಿತು. ನಂತರ ಗೊರಪ್ಪಗಳಿಗೆ ಮೈಲಾರದೇವರ ಅವಾಹನೆಯಾಗಿ ಕುಪ್ಪಳಿಸುತ್ತಾ ಅಚ್ ಅಚ್ ಎಂದು ಸದ್ದು ಮಾಡಿಕೊಂಡು ಎಡೆಹಾಕಿದ್ದ ಸ್ಥಳವನ್ನು ಪ್ರದಕ್ಷಿಣೆ ಹಾಕಿದರು. ನಂತರ ವಾದ್ಯಕ್ಕೆ ತಕ್ಕಂತೆ ಕುಪ್ಪಳಿಸುತ್ತಾ ದೋಣಿಯಲ್ಲಿ ತುಂಬಿದ್ದ ಪ್ರಸಾದವನ್ನು ಸ್ವೀಕರಿಸಿದರು. ಗೊರಪ್ಪಗಳು ಅತ್ತಿಂದಿತ್ತ ವೀರಾವೇಶದಿಂದ ಕುಪ್ಪಳಿಸುತ್ತಿದ್ದನ್ನು ದೋಣಿ ತುಂಬಿಸುವ ಸೇವೆಯಲ್ಲಿ ನೆರೆದಿದ್ದ ಜನ ತದೇಕಚಿತ್ತದಿಂದ ವೀಕ್ಷಿಸುತ್ತಿದ್ದರು. ಈವೇಳೆಗೆ ದೇವಾಲಯ ಸಮಿತಿಯವರು, ಊರಿನ ಮುಖಂಡರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಂಡ

ಗ್ರಾಮದೇವತೆ ದುರ್ಗಮ್ಮನಿಗೆ ಕದಳಿ ಅಲಂಕಾರ

ಇಲ್ಲಿನ ಗ್ರಾಮದೇವತೆ ಶ್ರೀದುರ್ಗಾಪರಮೇಶ್ವರಿಯ ಕಾರ್ತಿಕೋತ್ಸವದ ಅಂಗವಾಗಿ ಬಾಳೆದಿಂಡಿನಿಂದ ಮಾಡಲಾಗಿದ್ದ ಅಲಂಕಾರ ಭಕ್ತರ ಮನ ಸೆಳೆಯಿತು. ಹುಳಿಯಾರು ಗ್ರಾಮದೇವತೆ ದುರ್ಗಮ್ಮನವರ ಕಾರ್ತಿಕದ ಅಂಗವಾಗಿ ಮೂಲದೇವತೆಗೆ ಕದಳಿ ಅಲಂಕಾರ ಮಾಡಿದ್ದು ಆಕರ್ಷಕವಾಗಿತ್ತು. ಹುಳಿಯಾರು ಗ್ರಾಮದೇವತೆ ದುರ್ಗಮ್ಮನವರ ಕಾರ್ತಿಕೋತ್ಸವದಲ್ಲಿ ಉತ್ಸವಮೂರ್ತಿ ಕುಣಿತ. ಬುಧವಾರ ಸಂಜೆ ಅಪಾರ ಸಂಖ್ಯೆಯ ಭಕ್ತರ ಹಷೋದ್ಘಾರದಲ್ಲಿ ನಡೆದ ಕಾರ್ತಿಕೋತ್ಸವದ ಅಂಗವಾಗಿ ದುರ್ಗಮ್ಮನ ಮೂಲವಿಗ್ರಹಕ್ಕೆ ವಿಶೇಷ ಪೂಜೆ, ಅಭಿಷೇಕ,ಅರ್ಚನೆ ನಡೆಯಿತು. ಸಂಜೆ ವೇಳೆಗೆ ಉತ್ಸವ ಮೂರ್ತಿಯನ್ನು ಬಗೆಬಗೆಯ ಹೂಗಳಿಂದ ಅಲಂಕರಿಸಿದ್ದರು. ಸಕಲ ವಾದ್ಯ ಸಮೇತ ಅಮ್ಮನವರನ್ನು ಹೊರಡಿಸಿ ದೇವಾಲಯದ ಮುಂಭಾಗದಲ್ಲಿನ ದೀಪವನ್ನು ಅರ್ಧಕ್ಕೆ ಇಳಿಸಿ ನಂತರ ಮಹಾಮಂಗಳಾರತಿ ನಡೆಸಿ, ಪ್ರಸಾದ ವಿತರಿಸಿದರು. ಈ ವೇಳೆ ದೇವಾಲಯ ಕಮಿಟಿಯ ಅಧ್ಯಕ್ಷ ಶಿವಣ್ಣ, ಕಾರ್ಯದರ್ಶಿ ಹು.ಕೃ.ವಿಶ್ವನಾಥ್, ಸದಸ್ಯರಾದ ಪಟೇಲ್ ರಾಜ್ ಕುಮಾರ್, ಈಶ್ವರಯ್ಯ ಕಮಿಟಿಯ ಪದಾಧಿಕಾರಿಗಳು ಹಾಗೂ ಇತರರು ಇದ್ದರು.

ಅನ್ನದಾತನ ಕೈಹಿಡಿದ ಹಿಂಗಾರುಬೆಳೆ ಸಾವೆ : ಹುಳಿಯಾರು ಎಪಿಎಂಸಿ ಸಾವೆಗೆ ಹೆಸರುವಾಸಿ

ಹುಳಿಯಾರು  ಹೋಬಳಿ ವ್ಯಾಪ್ತಿಯ ಸಾಕಷ್ಟು ರೈತರು ಹಿಂಗಾರು ಬೆಳೆಯಾದ ರಾಗಿಗೆ ಹೆಚ್ಚು ಪ್ರಾಶಸ್ತ್ಯ ಕೊಡುವ ಹಾಗೆ ಸಾವೆಗೂ ಅಷ್ಟೇ ಪ್ರಾಶಸ್ತ್ಯ ಕೊಟ್ಟು ಬೆಳೆಯುವ ಪರಿಪಾಟವಿದ್ದು, ಈ ಬಾರಿ ತಡವಾಗಿ ಮಳೆಯಾದ ಕಾರಣ ರಾಗಿ ಕೈಕೊಟ್ಟರೂ ಸಹ ಹಿಂಗಾರುಬೆಳೆಯಾಗಿ ಸಾವೆ ರೈತರಿಗೆ ನೆರವಾಗಿದೆ. ಹೋಬಳಿ ವ್ಯಾಪ್ತಿಯಲ್ಲಿ 300 ಹೆಕ್ಟೆರ್ ನಷ್ಟು ಸಾವೆ ಬಿತ್ತಲಾಗಿದ್ದು ಉತ್ತಮವಾಗಿ ಬೆಳೆ ಬಂದಿದ್ದು, ಭರದಿಂದ ಕಟಾವು ಸಾಗಿದ್ದು ಅನ್ನದಾತನ ಕೈಹಿಡಿದಿದೆ. ಹುಳಿಯಾರಿ ಎಪಿಎಂಸಿಯ ಅಂಗಡಿಯೊಂದರಲ್ಲಿ ಸಾವೆ ಮಾರಾಟ ಮಾಡುತ್ತಿರುವ ರೈತ. ರಾಗಿ,ಸಾವೆ, ನವಣೆ,ಸಜ್ಜೆ ಮುಂತಾದವುಗಳಲ್ಲಿ ಅಧಿಕ ಪೋಷ್ಟಿಕಾಂಶವಿದ್ದು ಸಿರಿಧಾನ್ಯವೆಂದು ಪರಿಗಣಿಸಿರುವ ಸಾವೆ ಎಲ್ಲಾ ಹಮಾನಕ್ಕೂ ಹೊಂದಿಕೊಂಡು ಬೆಳೆಯುವ, ಕೀಟಬಾಧೆಯಿಂದ ಮುಕ್ತವಾಗಿರುವ ಬೆಳೆಯಾಗಿದ್ದು, ಕಡಿಮೆ ಖರ್ಚಿನಲ್ಲಿ ಲಾಭದ ಬೆಳೆಯಾಗಿದೆ. ಇದನ್ನು ತಾಲ್ಲೂಕಿನ ಹುಳಿಯಾರು, ಶೆಟ್ಟಿಕೆರೆ ಹೋಬಳಿ ಸೇರಿದಂತೆ ಹೊಸದುರ್ಗ, ಕಡೂರು,ತಿಪಟೂರು,ಅರಸೀಕೆರೆ ಭಾಗದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಅಧಿಕ ಪೋಷ್ಠಿಕಾಂಶವಿರುವ ಸಾವೆ ಬಳಸಿದಲ್ಲಿ ಡಯಾಬಿಟಿಸ್, ಬಿಪಿ, ಬೊಜ್ಜು ಮುಂತಾದವುಗಳು ನಿಯಂತ್ರಣಕ್ಕೆ ಬರುತ್ತವೆ. "ಸಾವಕ್ಕಿ ಅನ್ನ ಉಂಡರೆ ಮೊಣಕಾಲು ನೋವು ಇಲ್ಲ " ಎಂಬ ಮಾತು ರೈತರಲ್ಲಿ ಚಾಲ್ತಿಯಲ್ಲಿದ್ದು , ಸಾವೆ ಬೆಳೆಯನ್ನು ಆಗಸ್ಟ್ ತಿಂಗಳಿನಲ್ಲಿ ಬಿತ್ತನೆ ಮಾಡಲಾಗುವುದಿದ್ದು , ಕಡ

ವೈಭವದ ಕಾಳಿಕಾಂಭದೇವಿ ದೀಪೋತ್ಸವ

ಹುಳಿಯಾರು ಪಟ್ಟಣದ ವಸಂತನಗರ ಬಡಾವಣೆಯ ಶ್ರೀಕಾಳಿಕಾಂಭ ದೇವಿ ದೇವಾಲಯದಲ್ಲಿ ಮಂಗಳವಾರ ಸಂಜೆ ವಿಶ್ವಕರ್ಮ ಸಮುದಾಯದವರಿಂದ ಕಡೇ ಕಾರ್ತಿಕದ ದೀಪೋತ್ಸವ ಕಾರ್ಯ ನಡೆಯಿತು. ಹುಳಿಯಾರಿನ ಶ್ರೀಕಾಳಿಕಾಂಭ ದೇವಿ ದೇವಾಲಯದಲ್ಲಿ ವಿಶ್ವಕರ್ಮ ಸಮುದಾಯದವರಿಂದ ದೀಪೋತ್ಸವ ನಡೆಯಿತು. ಕಾಳಿಕಾಂಭದೇವಿಗೆ ಮಂಗಳವಾರ ಮುಂಜಾನೆ ಅಭಿಷೇಕ,ಅರ್ಚನೆ ನಡೆಸಿ, ಸಂಜೆ ವೇಳೆಗೆ ದೇವಾಲಯದಲ್ಲಿನ ಅಗ್ನಿಕುಂಡದ ಸುತ್ತ ದೀಪಗಳನ್ನು ಹಚ್ಚಿ, ರಂಗೋಲಿಯಿಟ್ಟು ಅಲಂಕರಿಸಲಾಗಿತ್ತು. ಉತ್ಸವಮೂರ್ತಿ ದೇವಿಯನ್ನು ಸಕಲ ವಾದ್ಯ ಸಮೇತ ಹೊರಡಿಸಿ ದೀಪವನ್ನು ಅರ್ಧಕ್ಕೆ ಇಳಿಸಿ ಮಹಾಮಂಗಳಾರತಿ ನಡೆಸಲಾಯಿತು. ಈ ವೇಳೆ ಅಧ್ಯಕ್ಷರಾದ ಅಚಾರ್ ರಮೇಶಣ್ಣ,ಭಗವಂತಾಚಾರ್, ಚಂದ್ರಶೇಖರಾಚಾರ್,ಮೂರ್ತಿ,ಲಕ್ಷ್ಮಿನಾರಾಯಣ, ನಟೇಶ್, ವಸಂತನಗರ ಬಡಾವಣೆಯ ನಿವಾಸಿಗಳು ಸೇರಿದಂತೆ ವಿಶ್ವಕರ್ಮ ಸಮುದಾಯದ ಅಪಾರ ಸಂಖ್ಯೆ ಭಕ್ತಾದಿಗಳು ಆಗಮಿಸಿದ್ದು ಅಲಂಕೃತ ದೇವಿಯ ದರ್ಶನ ಪಡೆದರು. ವಿಶ್ವಕರ್ಮ ಸಮುದಾಯದವರು ಭಕ್ತರಿಗಾಗಿ ಪ್ರಸಾದ ವಿನಿಯೋಗ ನಡೆಸಿದರು.

ತೊರೆಸೂರಗೊಂಡನಹಳ್ಳಿಯಲ್ಲಿ ಮಹಾಚಂಡಿಕಾ ಹೋಮ

ಹುಳಿಯಾರು ಹೋಬಳಿ ತೊರೆಸೂರಗೊಂಡನಹಳ್ಳಿಯ ಆದಿಶಕ್ತಿ ಶ್ರೀಚೌಡೇಶ್ವರಿ ದೇವಾಲಯದಲ್ಲಿ ಚೌಡೇಶ್ವರಿ ದೇವಿ , ಶ್ರೀಬಸವೇಶ್ವರ ಸ್ವಾಮಿ ಹಾಗೂ ಮೈಲಾರದೇವರ ಬೆಟ್ಟದ ಚೌಡಮ್ಮನವರ ಸಮ್ಮುಖದಲ್ಲಿ ಮಂಗಳವಾರದಂದು ಅಪಾರ ಸಂಖ್ಯೆ ಭಕ್ತರ ಶ್ರದ್ಧಾಭಕ್ತಿಯ ನಡುವೆ ವಿಶೇಷವಾಗಿ ಮಹಾಚಂಡಿಕಾ ಹೋಮ ನಡೆಯಿತು. ಹುಳಿಯಾರು ಹೋಬಳಿ ಟಿ.ಎಸ್.ಹಳ್ಳಿ ಯಲ್ಲಿ ನಡೆದ ಮಹಾಚಂಡಿಕಾ ಹೋಮಕ್ಕೆ ಒಣಮೆಣಸಿನಕಾಯಿಯನ್ನು ಸಮರ್ಪಿಸುತ್ತಿರುವುದು. ಹುಳಿಯಾರು ಹೋಬಳಿ ಟಿ.ಎಸ್.ಹಳ್ಳಿ ಯಲ್ಲಿ ನಡೆದ ಮಹಾಚಂಡಿಕಾ ಹೋಮದ ಪೂರ್ಣಾಹುತಿಗೆ ಪೂಜಾದ್ರವ್ಯಗಳನ್ನು ಸಮರ್ಪಿಸಲು ಗ್ರಾಮಸ್ಥರು ಸರತಿ ಸಾಲಿನಲ್ಲಿ ನಿಂತಿರುವುದು. ಚೌಡೇಶ್ವರಿದೇವಿಯ ದುರ್ಗಿಹೋಮದ ಮಂಡಲ ಪೂಜೆ ಅಂಗವಾಗಿ ಕಳೆದ 48 ದಿನದಿಂದಲೂ ವಿಶೇಷ ಪೂಜೆ ನಡೆಯುತ್ತ ಬಂದಿದ್ದು, ಸೋಮವಾರದಂದು ಗಣಪತಿಹೋಮ,ರುದ್ರಹೋಮ ನಡೆದಿತ್ತು. ಚಂಡಿಕಾ ಮಾತೆಯನ್ನು ಶ್ರದ್ಧಾಭಕ್ತಿಯಿಂದ ನಿಷ್ಕಲ್ಮಶ ಮನಸ್ಸು ಹಾಗೂ ಏಕಾಗ್ರಚಿತ್ತದಿಂದ ಧ್ಯಾನಿಸಿದರೆ ಭಕ್ತರಿಗೆ ಮಾತ್ರವಲ್ಲ ಈಡಿ ಲೋಕಕ್ಕೆ ಒಳಿತಾಗುತ್ತದೆ ಎಂಬ ನಂಬಿಕೆಯ ಹಿನ್ನಲೆಯಲ್ಲಿ ಈ ದಿನ ಮಹಾಚಂಡಿಕಾಹೋಮ ಆಯೋಜಿಸಲಾಗಿತ್ತು. ಹೋಮಕ್ಕೆ ಎಲ್ಲೆಡೆ ವಿವಿಧ ಬಗೆಯ ತೈಲ, ತುಪ್ಪಾ, ಎಲ್ಲಾ ರೀತಿಯ ದವಸ ಧಾನ್ಯ, ವಿವಿಧರೀತಿಯ ಹಣ್ಣು ಹೂ ಸೇರಿದಂತೆ ಇನ್ನಿತರ ಪರಿಕರಗಳನ್ನು ಉಪಯೋಗಿಸುತ್ತಾರೆ. ಆದರೆ ಇಲ್ಲಿ ನಡೆದ ಹೋಮದಲ್ಲಿ ಈ ಎಲ್ಲಾ ವಸ್ತುಗಳ ಜೊತೆಗೆ ಅರ್ಧ ಕ್ವಿಂಟಾಲ್ ಒಣ

ಹುಳಿಯಾರಮ್ಮನ ಅದ್ಧೂರಿ ಕಾರ್ತಿಕೋತ್ಸವ

ಗ್ರಾಮದೇವತೆ ಶ್ರೀ ಹುಳಿಯಾರಮ್ಮನ ಕಾರ್ತಿಕ ಮಹೋತ್ಸವ ಸೋಮವಾರ ಸಂಜೆ ಅಪಾರ ಸಂಖ್ಯೆಯ ಭಕ್ತಾಧಿಗಳ ಹರ್ಷೋದ್ಘಾರದಲ್ಲಿ ಅದ್ದೂರಿಯಾಗಿ ಜರುಗಿತು. ಹುಳಿಯಾರಿನ ಗ್ರಾಮದೇವತೆ ಹುಳಿಯಾರಮ್ನ ಕಾರ್ತಿಕೋತ್ಸವ ಅಪಾರ ಸಂಖ್ಯೆ ಭಕ್ತರ ಸಮ್ಮುಖದಲ್ಲಿ ಜರುಗಿತು. ಕಾರ್ತಿಕೋತ್ಸವದ ಅಂಗವಾಗಿ ದೇವಾಲಯವನ್ನು ಬಾಳೆಕಂದು,ತಳಿರುತೋರಣ ಹಾಗೂ ವಿದ್ಯುತ್ ದೀಪಗಳಿಂದ ಸಿಂಗರಿಸಿದ್ದಲ್ಲದೆ, ಅಮ್ಮನವರಿಗೆ ವಿಶೇಷ ಪೂಜೆ,ಅಲಂಕಾರ ಮಾಡಲಾಗಿತ್ತು. ಸಂಜೆ ವೇಳೆಗೆ ದೇವಾಲಯದಲ್ಲಿ ಹಣತೆಗಳನ್ನು ಹಚ್ಚಿಟ್ಟು, ಹುಳಿಯಾರಮ್ಮನ ಉತ್ಸವ ಮೂರ್ತಿಯನ್ನು ಬಗೆಬಗೆಯ ಹೂಗಳಿಂದ ಅಲಂಕರಿಸಿ ಸಕಲ ವಾದ್ಯಗಳ ನಾದದಲ್ಲಿ ಜೈಕಾರ ಹಾಕುವ ಮೂಲಕ ಅಮ್ಮನವರನ್ನು ಹೊರಡಿಸಲಾಯಿತು. ನಂತರ ಅಮ್ಮನವರ ಮೂಲಸ್ಥಾನ,ರಂಗನಾಥಸ್ವಾಮಿ ದೇವಾಲಯ, ಕೆಂಚಮ್ಮನ ದೇವಾಲಯಗಳಲ್ಲಿಗೆ ತೆರಳಿ ಪೂಜೆ ಸಲ್ಲಿಸಲಾಯಿತು. ಮದಾಸಿ ಕುಣಿತದಲ್ಲಿ ಅಮ್ಮನವರನ್ನು ದೇವಾಲಯದಲ್ಲಿಗೆ ಕರೆದೊಯ್ದು ದೇವಾಲಯದ ಮುಂಭಾಗದಲ್ಲಿ ಕಾರ್ತಿಕ ಮಾಸದ ಪ್ರಾರಂಭದಲ್ಲಿ ಏರಿಸಿದ್ದ ದೀಪಕ್ಕೆ ಪೂಜೆ ಸಲ್ಲಿಸಿ ಬಳಿಕ ದೀಪವನ್ನು ಕೆಳಗೆ ಇಳಿಸುವ ಮೂಲಕ ಕಾರ್ತಿಕೋತ್ಸವಕ್ಕೆ ತೆರೆ ಎಳೆಯಲಾಯಿತು. ಈ ವೇಳೆ ಪಟ್ಟಣ ಸೇರಿದಂತೆ ಸುತ್ತಮುತ್ತಮ ಹಳ್ಳಿಗಳ ಅಪಾರ ಸಂಖ್ಯೆ ಭಕ್ತರು ಆಗಮಿಸಿದ್ದು ಅಮ್ಮನವರ ದರ್ಶನ ಹಾಗೂ ಅಮ್ಮನವರ ಕುಣಿತವನ್ನು ಕಣ್ತುಂಬಿಕೊಂಡರು. ಭಕ್ತರಿಗಾಗಿ ದೇವಾಲಯ ಸಮಿತಿಯಿಂದ ಉಪಹಾರ ವ್ಯವಸ್ಥೆ ಮಾಡಲಾಗಿತ್ತು

ಚಂದ್ರಮೌಳೇಶ್ವರ ಸ್ವಾಮಿಗೆ ವಿಶೇಷ ಪೂಜೆ

ಹುಳಿಯಾರು  ಹೋಬಳಿ ಜೋಡಿತಿರುಮಲಾಪುರದ ಚಂದ್ರಮೌಳೇಶ್ವರ ದೇವಾಲಯದಲ್ಲಿ ಕಾರ್ತಿಕ ಅಮವಾಸ್ಯೆ ಅಂಗವಾಗಿ ವಿಶೇಷ ಪೂಜೆ ನಡೆಸಲಾಯಿತು. ಟಿ.ಎಸ್.ಮಂಜುನಾಥ ಶರ್ಮ ಅವರ ನೇತೃತ್ವದಲ್ಲಿ ಶ್ರೀಕಂಠಶಾಸ್ತ್ರಿ, ರಾಘವೇಂದ್ರ, ಕೃಷ್ಣಮೂರ್ತಿ, ಸತೀಶ್, ರವಿ ಅವರುಗಳ ಪೌರೋಹಿತ್ಯದಲ್ಲಿ ಸ್ವಾಮಿಗೆ ಪಂಚಾಮೃತಾಭಿಷೇಕ, ಬಿಲ್ವಾರ್ಚನೆ, ರುದ್ರಾಭಿಷೇಕ, ಮಹಾನ್ಯಾಸ ಪೂರಕ ಸೇವೆ ನಡೆಯಿತು. ಮಹಾಮಂಗಳಾರತಿಯ ನಂತರ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಈ ವೇಳೆ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದು ಪೂಜೆಸಲ್ಲಿಸಿದರು.

ಶ್ರೀರಾಮ ದೇವರ ಸನ್ನಿಧಿಯಲ್ಲಿ ಕಾರ್ತಿಕೋತ್ಸವ

ಹುಳಿಯಾರು ಸಮೀಪದ ಲಿಂಗಪ್ಪನಪಾಳ್ಯದ ಶ್ರೀರಾಮದೇವರ ಸನ್ನಿಧಾನದಲ್ಲಿ ಕಾರ್ತಿಕಅಮವಾಸ್ಯೆಯು ಭಕ್ತಾಧಿಗಳ ಶ್ರದ್ಧಾಭಕ್ತಿಯೊಂದಿಗೆ ವೈಭವಯುತವಾಗಿ ಜರುಗಿತು. ಹುಳಿಯಾರು ಸಮೀಪದ ಲಿಂಗಪ್ಪನಪಾಳ್ಯದ ಶ್ರೀರಾಮದೇವರ ಸನ್ನಿದಾನದಲ್ಲಿ ಮಹಿಳೆಯರು ಆರತಿ ಸೇವೆ ನಡೆಸಿದರು. ಹುಳಿಯಾರು ಹೋಬಳಿ ಲಿಂಗಪ್ಪನಪಾಳ್ಯದಲ್ಲಿ ಕಾರ್ತಿಕದ ಅಂಗವಾಗಿ ಶ್ರೀರಾಮದೇವರನ್ನು ಬಾಳೆದಿಂಡಿನಿಂದ ವಿಶೇಷವಾಗಿ ಅಲಂಕರಿಸಿರುವುದು. ಕಾರ್ತಿಕೋತ್ಸವದ ಅಂಗವಾಗಿ ಶ್ರೀ ರಾಮದೇವರ ಮೂಲ ವಿಗ್ರಹಕ್ಕೆ ಅಭಿಷೇಕ,ಅರ್ಚನೆ ನಡೆಯಿತು. ಬಾಳೆದಿಂಡಿನಿಂದ ಮಾಡಿದ್ದ ಕದಳಿ ಅಲಂಕಾರ ಗಮನಸೆಳೆಯಿತು. ಸಂಜೆ ವೇಳೆಗೆ ಉತ್ಸವ ಶ್ರೀರಾಮನ ಮೂರ್ತಿಯನ್ನು ಸಹ ವಿವಿಧ ಹೂ, ಹಾರಗಳಿಂದ ಅಲಂಕರಿಸಿ ಪೂಜೆ ನಡೆಸಲಾಯಿತು. ಮಹಿಳೆಯರು ಮನೆಯಿಂದ ಆರತಿಯನ್ನು ಸಿದ್ದಮಾಡಿಕೊಂಡು ದೇವಾಲಯದಲ್ಲಿಗೆ ತಂದು ಸ್ವಾಮಿಗೆ ಬೆಳಗುವ ಮೂಲಕ ಪೂಜೆ ಸಲ್ಲಿಸಿದರು. ಗ್ರಾಮದ ಭಜನಾ ಮಂಡಳಿಯವರು ಭಜನಾಕಾರ್ಯಕ್ರಮ ನಡೆಸಿಕೊಟ್ಟರು.ಈ ವೇಳೆ ದೇವಾಲಯ ಸಮಿತಿಯವರು, ಊರಿನ ಗೌಡರು ಸೇರಿದಂತೆ ಸುತ್ತಮುತ್ತಲ ಹಳ್ಳಿಯವರು ಇದ್ದರು.   

ಈಶ್ವರನ ಗುಡಿಯಲ್ಲಿ ಕಾರ್ತಿಕೋತ್ಸವ

ಹುಳಿಯಾರು ಹೋಬಳಿ ಕೆಂಕೆರೆಯ ಈಶ್ವರನಗುಡಿಯಲ್ಲಿ ಭಾನುವಾರ ಸಂಜೆ ಅಪಾರ ಸಂಖ್ಯೆಯ ಭಕ್ತಾಧಿಗಳ ಸಮ್ಮುಖದಲ್ಲಿ ಕಾರ್ತಿಕ ಮಹೋತ್ಸವ ನಡೆಯಿತು. ಕಾರ್ತಿಕೋತ್ಸವದ ಅಂಗವಾಗಿ ಭಾನುವಾರ ಮುಂಜಾನೆ ಶಿವಲಿಂಗಕ್ಕೆ ಅಭಿಷೇಕ, ಬಿಲ್ವಾರ್ಚನೆ ನಡೆಸಿ, ಸಂಜೆ ವೇಳೆಗೆ ಸ್ವಾಮಿಯನ್ನು ಅಲಂಕರಿಸಲಾಯಿತು. ದೇವಾಲಯದ ಆವರಣದಲ್ಲಿ ಸಾಲು ದೀಪಗಳನ್ನು ಹಚ್ಚಿ ಮಹಾಮಂಗಳಾರತಿ ನಡೆಸಿ, ಕಾರ್ತಿಕ ಮಾಸದ ಪ್ರಾರಂಭದಲ್ಲಿ ದೇವಾಲಯದ ಮುಂಭಾಗ ಏರಿಸಿದ್ದ ದೀಪ ಇಳಿಸಿದರು. ಗ್ರಾಮದ ಹಾಗೂ ಸುತ್ತಮುತ್ತಲಿನ ಹಳ್ಳಿಯ ಅಪಾರ ಸಂಖ್ಯೆ ಭಕ್ತರು ಆಗಮಿಸಿದ್ದು ಸ್ವಾಮಿ ದರ್ಶನ ಪಡೆದು, ಪೂಜೆ ಸಲ್ಲಿಸಿದರು. ಆಗಮಿಸಿದ್ದ ಭಕ್ತರಿಗಾಗಿ ಅನ್ನಸಂತರ್ಪಣೆಯನ್ನು ನಡೆಸಲಾಯಿತು.

ಮಹಿಳೆಯರಿಂದ ಕುಂಕುಮಾರ್ಚನೆ

ಹುಳಿಯಾರು ಹೋಬಳಿ ತೊರೆಸೂರಗೊಂಡನಹಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ದುರ್ಗಿಹೋಮದ ಮಂಡಲಪೂಜೆಯ ಅಂಗವಾಗಿ ಗ್ರಾಮದ ಮಹಿಳೆಯರಿಂದ ಕುಂಕುಮಾರ್ಚನೆ ಸೇವೆ ನಡೆಯಿತು. ಹುಳಿಯಾರು ಹೋಬಳಿ ತೊರೆಸೂರಗೊಂಡನಹಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಮಹಿಳೆಯರಿಂದ ಕುಂಕುಮಾರ್ಚನೆ ನಡೆಸಲಾಯಿತು. ಕುಂಕುಮಾರ್ಚನೆಯ ಅಂಗವಾಗಿ ಗ್ರಾಮದ ಮಹಿಳೆಯರು ದೇವಾಲಯದಲ್ಲಿಗೆ ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿ ನಂತರ ದೇವಿಯ ಮುಂಭಾಗದಲ್ಲಿ ಗುಂಪಾಗಿ ಎಲ್ಲರೂ ಕೂತು ದೇವಿಪ್ರತಿರೂಪಕ್ಕೆ ಕುಂಕುಮವನ್ನು ಅರ್ಪಿಸಿದರು. ನಂತರ ಮಹಾಮಂಗಳಾರತಿ ನಡೆಸಿ ಪ್ರಸಾದವಿನಿಯೋಗ ನಡೆಸಲಾಯಿತು.

ವೈಭವಯುತವಾಗಿ ನಡೆದ ದೀಪೋತ್ಸವ

ಹುಳಿಯಾರು ಪಟ್ಟಣದ ಶ್ರೀವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ಕಾರ್ತಿಕಮಾಸದ ಅಮವಾಸ್ಯೆಯ ದಿನವಾದ ಶನಿವಾರ ಸಂಜೆ ಅಪಾರಸಂಖ್ಯೆಯ ಭಕ್ತಾಧಿಗಳ ಸಮ್ಮುಖದಲ್ಲಿ ಕಾರ್ತಿಕ ದೀಪೋತ್ಸವ ವೈಭವಯುತವಾಗಿ ಜರುಗಿತು. ಹುಳಿಯಾರಿನ ಶ್ರೀವೀರಭದ್ರೇಶ್ವರ ಸ್ವಾಮಿಯನ್ನು ಕಾತೀಕೋತ್ಸವದ ಅಂಗವಾಗಿ ಬಗೆಬಗೆಯ ಹೂಗಳಿಂದ ಅಲಂಕರಿಸಿರುವುದು. ದೀಪೋತ್ಸವದ ಅಂಗವಾಗಿ ಶನಿವಾರ ಮುಂಜಾನೆಯೇ ಅರ್ಚಕರಾದ ಮಲ್ಲಿಕಾರ್ಜುನಯ್ಯ ಹಾಗೂ ವೀರೇಶ್ ಸಂಗಡಿಗರಿಂದ ಸ್ವಾಮಿಗೆ ಪಂಚಾಮೃತಾಭಿಷೇಕ, ಬಿಲ್ವಾರ್ಚನೆ,ಸಹಸ್ರನಾಮಾರ್ಚನೆ ನಡೆದು, ಸಂಜೆ ವೇಳೆ ಸ್ವಾಮಿಯನ್ನು ವಿವಿಧ ಹೂ,ಹಾರಗಳಿಂದ ಅಲಂಕರಿಸಿ, ದೇವಾಲಯದ ಆವರಣದಲ್ಲಿ ಹಣತೆಗಳನ್ನು ಹಚ್ಚುವ ಮೂಲಕ ಮಹಾಮಂಗಳಾರತಿ ನಡೆಸಲಾಯಿತು. ಆಗಮಿಸಿದ್ದ ಭಕ್ತರು ಸ್ವಾಮಿಗೆ ಆರತಿ ಮಾಡಿ ಪೂಜೆ ಸಲ್ಲಿಸಿದರು. ಭಕ್ತಾಧಿಗಳಿಗಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಈ ವೇಳೆ ದೇವಾಲಯ ಸಮಿತಿಯವರು ಸೇರಿದಂತೆ ಹುಳಿಯಾರು,ಕೆಂಕೆರೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಅಪಾರ ಸಂಖ್ಯೆ ಭಕ್ತರು ಉಪಸ್ಥಿತರಿದ್ದರು.

ಭಜನಾಕಾರ್ಯಕ್ರಮ

ಹುಳಿಯಾರು ಸಮೀಪದ ಲಿಂಗಪ್ಪನಪಾಳ್ಯದ ಶ್ರೀರಾಮದೇವರ ದೇವಾಲಯದಲ್ಲಿ ಕಾರ್ತಿಕೋತ್ಸವದ ಅಂಗವಾಗಿ ಭಕ್ತರು ಭಜನಾಕಾರ್ಯಕ್ರಮ ನಡೆಸಿದರು.

ಆಂಜನೇಯನಿಗೆ ವಿಶೇಷ ಅಲಂಕಾರ

ಹುಳಿಯಾರಿನ ಮಾರುತಿನಗರ ಆಂಜನೇಯದೇವಾಲಯದಲ್ಲಿ ಕಾರ್ತಿಕ ಅಮವಾಸ್ಯೆ ಅಂಗವಾಗಿ ಮಾರುತಿಯನ್ನು ವಿಶೇಷವಾಗಿ ಅಲಂಕರಿಸಿದ್ದು ಭಕ್ತರ ಗಮನ ಸೆಳೆಯಿತು.

ಅಮವಾಸ್ಯೆ ಅಂಗವಾಗಿ ಗಣೇಶನಿಗೆ ವಿಶೇಷ ಅಲಂಕಾರ

ಹುಳಿಯಾರು ಪಟ್ಟಣದ ಪುರಾಣಪ್ರಸಿದ್ಧ ಶ್ರೀಪಸನ್ನ ಗಣಪತಿ ದೇವಾಲಯದಲ್ಲಿ ಶನಿವಾರದಂದು ಕಾರ್ತಿಕ ಅಮವಾಸ್ಯೆಯ ಅಂಗವಾಗಿ ಗಣೇಶವಿಗ್ರಹಕ್ಕೆವಿಶೇಷ ಅಲಂಕಾರ ಮಾಡಿದ್ದು ಆಕರ್ಷಕವಾಗಿತ್ತು. ಹುಳಿಯಾರಿನ ಪುರಾಣಪ್ರಸಿದ್ದ ಗಣೇಶನನ್ನು ವಿಶೇಷವಾಗಿ ಅಲಂಕರಿಸಿರುವುದು. ಅಮವಾಸ್ಯೆ ಅಂಗವಾಗಿ ಮುಂಜಾನೆಯಿಂದ ಸ್ವಾಮಿ ಅಭಿಷೇಕ,ಅರ್ಚನೆ ಸೇರಿದಂತೆ ವಿವಿಧ ಪೂಜೆಗಳನ್ನು ನಡೆಸಿ, ಅರ್ಚಕ ರಾಜಣ್ಣ ಅವರು ಸ್ವಾಮಿಯನ್ನು ವಿಶೇಷವಾಗಿ ಅಲಂಕರಿಸಿದ್ದರು. ಅಲಂಕೃತ ಸ್ವಾಮಿ ದರ್ಶನ ಪಡೆಯಲು ಅಪಾರ ಸಂಖ್ಯೆ ಭಕ್ತರು ಆಗಮಿಸಿ, ಹಣ್ಣುಕಾಯಿ ಮಾಡಿಸಿದರು. ಈ ವೇಳೆ ದೇವಾಲಯ ಸಮಿತಿಯವರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸಂಸ್ಥಾಪಕರ ದಿನ ಆಚರಣೆ

ಹುಳಿಯಾರು ಪಟ್ಟಣದ ಕೆನರಾಬ್ಯಾಂಕ್ ಶಾಖೆಯಲ್ಲಿ ಶಾಖಾವ್ಯವಸ್ಥಾಪಕ ಹೆಚ್.ವಿಜಯ್ ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳೆಲ್ಲಾ ಸೇರಿ ಕೆನರಾಬ್ಯಾಂಕ್ ಸಂಸ್ಥಾಪಕರ ದಿನಾಚರಣೆ ಆಚರಿಸಿದರು.   ಹುಳಿಯಾರು ಕೆನರಾ ಬ್ಯಾಂಕ್ ಶಾಖೆಯಲ್ಲಿ ಕೆನರಾಬ್ಯಾಂಕ್ ಸಂಸ್ಥಾಪಕರ ದಿನಾಚರಣೆ ಆಚರಿಸಲಾಯಿತು. ಕೆನರಾ ಬ್ಯಾಂಕ್ ಸಂಸ್ಥಾಪಕರಾದ ಸುಬ್ಬರಾವ್ ಪೈ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಮ್ಯಾನೇಜರ್ ಹೆಚ್.ವಿಜಯ್ ಕುಮಾರ್ ಮಾತನಾಡಿ, ಕೆನರಾಬ್ಯಾಂಕ್ ಸಂಸ್ಥಾಪಕರಾದ ಸುಬ್ಬರಾವ್ ಪೈ ಅವರನ್ನು ನಾವು ಎಂದಿಗೂ ಮರೆಯುಂತಿಲ್ಲ, ಅಂದು ಅವರಿಂದ ಸಣ್ಣ ಘಟಕವಾಗಿ ಸ್ಥಾಪಿತವಾದ ಬ್ಯಾಂಕ್ ಪ್ರಸ್ತುತದಲ್ಲಿ ದೇಶದೆಲ್ಲೆಡೆ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ತನ್ನ ನೂರಾರು ಶಾಖೆಗಳನ್ನು ತೆರೆದು ತನ್ನದೇ ಆದ ಗ್ರಾಹಕರನ್ನು ಹೊಂದಿ,ಸಾಲಸೌಲಭ್ಯಗಳನ್ನು ಒದಗಿಸಿಕೊಡುತ್ತಿದೆ ಎಂದರು. ಗ್ರಾಮೀಣ ಭಾಗದಲ್ಲಿ ಇತರ ಬ್ಯಾಂಕ್ ಗಳಿಗೆ ಹೋಲಿಸಿದರೆ ಕೆನರಾ ಬ್ಯಾಂಕ್ ನ ವಹಿವಾಟು ಉತ್ತಮವಾಗಿದೆ ಎಂದರು. ಈ ವೇಳೆ ಶಾಖೆಯ ಸಿಬ್ಬಂದಿಗಳಾದ ರಾಮಣ್ಣ,ವೇಣು,ರವಿ,ಜಯಶಂಕರ್,ಅಕ್ಷಯ್,ವೈ.ಜೆ.ಲಕ್ಷ್ಮಿನಾರಾಯಣ್,ಶಿವಣ್ಣ,ಅನಿಲ್ ಉಪಸ್ಥಿತರಿದ್ದು ಗ್ರಾಹಕರಿಗೆ ಸಿಹಿ ವಿತರಿಸಿದರು.

ನವಜಾತ ಹೆಣ್ಣುಶಿಶು ಪತ್ತೆ

ಅಗತಾನೆ ಜನಿದ ನವಜಾತ ಹೆಣ್ಣು ಶಿಶುವನ್ನು ರಸ್ತೆ ಬದಿಯ ಪೊದೆಯಲ್ಲಿ ಅನಾಥವಾಗಿ ಮಲಗಿಸಿ ಹೋಗಿರುವ ಹೃದಯ ವಿದ್ರಾವಕ ಘಟನೆ ಹೋಬಳಿಯ ಯಗಚಿಹಳ್ಳಿಯಲ್ಲಿ ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ. ಹುಳಿಯಾರು ಹೋಬಳಿ ಯಗಚಿಹಳ್ಳಿಯ ರಸ್ತೆ ಬದಿಯಲ್ಲಿ ಪತ್ತೆಯಾದ ನವಜಾತ ಹೆಣ್ಣುಶಿಶು. ಹುಳಿಯಾರು-ಶಿರಾ ಮಾರ್ಗದಲ್ಲಿನ ಯಗಚಿಹಳ್ಳಿ ಬಳಿ ಈ ಶಿಶು ಪತ್ತೆಯಾಗಿದ್ದು, ಮಗುವನ್ನು ಪ್ಲಾಸ್ಟಿಕ್ ಕವರೊಂದರಲ್ಲಿ ಹಾಕಿ ಯಾರೋ ಎಸೆದು ಹೋಗಿದ್ದಾರೆ. ಶನಿವಾರ ಬೆಳಿಗ್ಗೆ ಪಾದಚಾರಿಯೊಬ್ಬರು ನೋಡಿದ್ದು ಪೋಲಿಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ವಿಷಯ ತಿಳಿದ ಪಿಎಸೈ ವೈ.ಘೋರ್ಪಡೆ ಕೂಡಲೇ ತಮ್ಮೊಂದಿಗೆ ಆರೋಗ್ಯ ಇಲಾಖೆಯವರನ್ನು ಸ್ಥಳಕ್ಕೆ ಕರೆದೊಯ್ದಿದ್ದಾರೆ. ಮಗುವಿನ ಮೇಲಿದ್ದ ರಕ್ತ ಹಸಿಯಾಗಿದ್ದು, ಅದರ ಚಲನವಲನಗಳನ್ನು ಗಮನಿಸಿದ ಆರೋಗ್ಯ ಇಲಾಖೆಯವರು ಹೆರಿಗೆಯಾಗಿ ಒಂದೆರೆಡು ಗಂಟೆಯಾಗಿರಬಹುದು ಎಂದಿದ್ದಾರೆ. ಕೂಡಲೇ ಮಗುವನ್ನು ಸ್ವಚ್ಚಗೊಳಿಸಿ ಅಗತ್ಯ ಚಿಕಿತ್ಸೆ ನೀಡಿ ನಂತರ ಮಗುವನ್ನು ಚಿ.ನಾ.ಹಳ್ಳಿಯ ಮಕ್ಕಳ ಕಲ್ಯಾಣ ಇಲಾಖೆಯಲ್ಲಿಗೆ ಕಳುಹಿಸಿ ಕೊಡಲಾಯಿತು. ಅನಾಥವಾಗಿ ಬಿದ್ದಿದ್ದ ಮಗುವನ್ನು ನೋಡಿದ ಗ್ರಾಮಸ್ಥರು ಹೆಣ್ಣುಮಗುವೆಂದು ಇಂತಹ ಹೀನಕೃತ್ಯವೆಸಗಿದ ತಾಯಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಈ ಮಗು ಯಾರದು, ಇಲ್ಲಿ ಏಕೆ ಎಸೆದು ಹೋಗಿದ್ದಾರೆ ಎಂಬ ಯಕ್ಷಪ್ರಶ್ನೆಗಳು ಎಲ್ಲರ ಮನದಲ್ಲಿ ಕಾಡುತ್ತಿದ್ದವು.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಸುರಕ್ಷತೆ ಬಗ್ಗೆ ಅರಿವು

 ಟಿಆರ್‍ಎಸ್‍ಆರ್ ಪ್ರೌಢಶಾಲೆ , ವಾಸವಿ ವಿದ್ಯಾಸಂಸ್ಥೆ ಹಾಗೂ ಪೋಲಿಸ್ ಇಲಾಖೆ ಸಹಯೋಗದಲ್ಲಿ ಪಟ್ಟಣದ ವಾಸವಿ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. ಹುಳಿಯಾರಿನ ಟಿಆರ್‍ಎಸ್‍ಆರ್ ಪ್ರೌಢಶಾಲೆಯಲ್ಲಿ ಅಯೋಜಿಸಿದ್ದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಸುರಕ್ಷತೆ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಪಿಎಸೈ ವೈ.ಘೋರ್ಪಡೆ ಮಕ್ಕಳಿಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಶ್ರದ್ಧೆ , ಆಸಕ್ತಿ ಮತ್ತು ಗುರಿಯಿದ್ದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಭವಿಷ್ಯದಲ್ಲಿ ಮುಂದೆಬರಲು ಸಾಧ್ಯ ಎಂದು ಪಿಎಸೈ ವೈ.ಘೋರ್ಪಡೆ ತಿಳಿಸಿದರು. ಶಾಲಾ ಮಕ್ಕಳು ಮೊಬೈಲ್ ಮತ್ತು ಇನ್ನಿತರೆ ಸಾಮಾಜಿಕತಾಣಗಳ ಬಗ್ಗೆ ಅತಿಯಾದ ಆಸಕ್ತಿ ಹೊಂದಿದಲ್ಲಿ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗುತ್ತದೆ ಎಂದರು. ಪೋಸ್ಕೋ ಕಾಯ್ದೆ ಬಗ್ಗೆ ತಿಳಿಸುತ್ತಾ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗುವವರಿಗೆ ಈ ಕಾಯ್ದೆಯಡಿ ನೀಡುವ ಶಿಕ್ಷೆಯ ಬಗ್ಗೆ ತಿಳಿಸಿದರಲ್ಲದೆ, ಯಾವರೀತಿ ದೂರು ನೀಡಬೇಕು ಎಂಬುದನ್ನು ತಿಳಿಸಿದರು. ವಿದ್ಯಾರ್ಥಿಗಳು ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ತೆರಳುವಾಗ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ವಿವರಿಸಿದರು. ಹುಳಿಯಾರು ಪೋಲಿಸ್ ಠಾಣೆ ಸಂಖ್ಯೆ 08133-256150, ಸಬ್ ಇಸ್ಪೆಕ್ಟರ್ 9480802900, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 9036421593 ಸ

ಕೃಷಿಯಲ್ಲಿ ಉತ್ತಮ ತಂತ್ರಜ್ಞಾನ ಅಳವಡಿಸಿಕೊಳ್ಳಿ

ರೈತರು ಕೃಷಿ ಚಟುವಟಿಕೆಯಲ್ಲಿ ಉತ್ತಮ ತಂತ್ರಜ್ಞಾನವನ್ನು ಅಳವಡಿಸಿಕೊಂಡು ವ್ಯವಸಾಯ ಮಾಡುವುದರಿಂದ ಉತ್ತಮ ಇಳುವರಿ ಪಡೆಯಬಹುದಾಗಿದೆ ಎಂದು ಸಹಾಯಕಕೃಷಿ ನಿರ್ದೇಶಕ ಹೊನ್ನದಾಸೇಗೌಡ ಅವರು ತಿಳಿಸಿದರು. ಹುಳಿಯಾರು ಸಮೀಪದ ಅವಳಗೆರೆಯಲ್ಲಿ ನಡೆದ ರಾಗಿಬೆಳೆ ಕ್ಷೇತ್ರೋತ್ಸವದಲ್ಲಿ ಸಹಾಯಕಕೃಷಿ ನಿರ್ದೇಶಕ ಹೊನ್ನದಾಸೇಗೌಡ ಉತ್ತಮವಾಗಿ ಬೆಳೆದ ರಾಗಿತಾಕು ವೀಕ್ಷಿಸಿದರು.  ಹುಳಿಯಾರು ಸಮೀಪದ ಅವಳಗೆರೆ ಗ್ರಾಮದಲ್ಲಿ ತಾಲ್ಲೂಕು ಕೃಷಿ ಇಲಾಖೆವತಿಯಿಂದ ಒರಟುಧಾನ್ಯ ಅಭಿವೃದ್ಧಿಯೋಜನೆಯಡಿ ಅಯೋಜಿಸಿದ್ದ ರಾಗಿಬೆಳೆಕ್ಷೇತ್ರೋತ್ಸವದಲ್ಲಿ ಅವರು ರೈತರಿಗೆ ಮಾಹಿತಿ ನೀಡಿದರು. ರಾಗಿ ಬಿತ್ತನೆ ಬೀಜದ ಆಯ್ಕೆಯಲ್ಲಿ ರೈತರು ಎಚ್ಚರವಹಿಸಿ ಬಿತ್ತನೆರಾಗಿಯನ್ನು ಆಯ್ಕೆ ಮಾಡಿ ಬಿತ್ತಿದರೆ ರಾಗಿ ಉತ್ತಮವಾಗಿ ಬೆಳೆದು ಫಸಲು ಸಿಗುತ್ತದೆ ಎಂದರು. ಅಲ್ಲದೆ ತಮ್ಮ ಇಲಾಖೆಯಿಂದ ರೈತರಿಗಾಗಿ ಅನೇಕ ಸೌಲಭ್ಯಗಳಿದ್ದು ಅವುಗಳನ್ನು ಪಡೆಯುವಂತೆ ತಿಳಿಸಿದರು. ಅತಿಯಾದ ರಾಸಾಯನಿಕ ಗೊಬ್ಬರದಿಂದ ಮನುಷ್ಯನ ಆರೋಗ್ಯದ ಮೇಲಾಗುವ ದುಷ್ಪರಿಣಾಮದ ಬಗ್ಗೆ , ಕೃಷಿಯಲ್ಲಿ ಸಾವಯವ ಗೊಬ್ಬರದ ಬಳಕೆಯ ಬಗ್ಗೆ ಹಾಗೂ ಸಾವಯವಭಾಗ್ಯ ಯೋಜನೆ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಮಂಜುಳಾ, ಗ್ರಾಪಂ ಅಧ್ಯಕ್ಷೆ ಶಶಿಕಲಾ, ಸಹಾಕಯ ಕೃಷಿಅಧಿಕಾರಿಗಳಾದ ಕರಿಬಸವಯ್ಯ,ನೂರುಲ್ಲಾ, ಶಿವಣ್ಣ ಸೇರಿದಂತೆ ರೈತ ಅನುವುಗಾರರು ಹಾಗೂ ರೈತರು ಉಪಸ್ಥಿತರಿ

ತಾ.22 ಕ್ಕೆ ವೀರಭದ್ರೇಶ್ವರಸ್ವಾಮಿ ದೀಪೋತ್ಸವ

ಹುಳಿಯಾರು ಪಟ್ಟಣದ ಶ್ರೀವಿರಭದ್ರೇಶ್ವರ ಸ್ವಾಮಿಯ 34 ನೇ ವರ್ಷದ ದೀಪೋತ್ಸವಕಾರ್ಯ ಇದೇ 22ರ ಶನಿವಾರ ಸಂಜೆ ನಡೆಯಲಿದೆ. ದೀಪೋತ್ಸವದ ಅಂಗವಾಗಿ ಸ್ವಾಮಿಗೆ ಪುರೋಹಿತರಾದ ಮಲ್ಲಿಕಾರ್ಜುನಯ್ಯ ಹಾಗೂ ವೀರೇಶ್ ಸಂಗಡಿಗರಿಂದ ಅಭಿಷೇಕ,ಅರ್ಚನೆ ಹಾಗೂ ಅಲಂಕಾರ ಸೇವೆ ಸೇರಿದಂತೆ ವಿವಿಧ ಪೂಜಾಕೈಂಕರ್ಯ ನಡೆಯಲಿದೆ. ಸಂಜೆ ದೇವಾಲಯ ಆವರಣದಲ್ಲಿ ಹಣತೆಗಳನ್ನು ಹಚ್ಚುವ ಮೂಲಕ ಸ್ವಾಮಿಯ ಮಹಾಮಂಗಳಾರತಿ ನಡೆದು, ಪ್ರಸಾದವಿನಿಯೋಗ ನಡೆಯಲಿದೆ. ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವಂತೆ ದೇವಾಲಯ ಸಮಿತಿಯವರು ಕೋರಿದ್ದಾರೆ.

ಬಾಲಮೇಳದಲ್ಲಿ ಹಾಡಿಕುಣಿದ ಮಕ್ಕಳು

ಹುಳಿಯಾರು ಪಟ್ಟಣದ ಮಾರುತಿ ನಗರದಲ್ಲಿ ಹೋಬಳಿಯ ಅಂಗನವಾಡಿ ಮಕ್ಕಳಿಗಾಗಿ ಬುಧವಾರ ಆಯೋಜಿಸಿದ್ದ ಬಾಲಮೇಳ-2014 ರಲ್ಲಿ ಅಪಾರ ಸಂಖ್ಯೆಯ ಮಕ್ಕಳು ಪಾಲ್ಗೊಂಡು ಹಾಡಿ,ಕುಣಿಯುತ್ತಾ ತಮ್ಮ ಪ್ರತಿಭೆ ಹೊರಹಾಕಿದರು. ಹುಳಿಯಾರಿನ ಮಾರುತಿನಗರದಲ್ಲಿ ನಡೆದ ಬಾಲಮೇಳದಲ್ಲಿ ಪುಟಾಣಿ ಮಕ್ಕಳು ಹಾಡು ಹಾಡುತ್ತಿರುವುದು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಗ್ರಾ.ಪಂ.ಸದಸ್ಯೆ ಗೀತಾ ಅಶೋಕ್ ಬಾಬು ಮಾತನಾಡಿ, ಅಂಗನವಾಡಿಯ ಪುಟ್ಟ ಮಕ್ಕಳಿಗಾಗಿ ಇಂತಹ ಕಾರ್ಯಕ್ರಮ ರೂಪಿಸಿರುವುದು ಅವರಿಗೂ ಒಂದು ವೇದಿಕೆ ಕಲ್ಪಿಸಿದಂತಾಗುತ್ತದೆ. ಮಕ್ಕಳು ತಾವು ಕಲಿತ ಹಾಡು,ನೃತ್ಯ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಇಲ್ಲಿ ಪ್ರದರ್ಶನ ನೀಡುವುದರಿಂದ ಮುಂದಿನ ದಿನಗಳಲ್ಲಿ ಅವರ ಬೆಳವಣಿಗೆ ಉತ್ತಮವಾಗಿರುತ್ತದೆ ಎಂದರು. ಪ್ರತಿ ಅಂಗನವಾಡಿ ಕೇಂದ್ರದ ಶಿಕ್ಷಕಿಯರು ಮಕ್ಕಳನ್ನು ಶಿಕ್ಷಿಸದೆ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾ ಅವರನ್ನು ವಿವಿಧ ಚಟುವಟಿಕೆಗೆ ಸೆಳೆಯಬೇಕು ಎಂದರು. ಬಾಲಮೇಳದಲ್ಲಿ ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮಿ,, ತಾ.ಪಂ.ಸದಸ್ಯೆ ಬೀಬೀಫಾತೀಮಾ, ಗ್ರಾ.ಪಂ.ಸದಸ್ಯರಾದ ಅಶೋಕ್ ಬಾಬು, ಗೀತಾಬಾಬು, ವೆಂಕಟಮ್ಮ, ಜಹೀರ್ ಸಾಬ್, ಆಂಜನೇಯ ದೇವಾಲಯ ಸಮಿತಿಯ ನರಸಿಂಹಮೂರ್ತಿ, ಮುಖಂಡರಾದ ಧನಂಜಯ್, ಎಸ್‍ಆರ್‍ಎಸ್ ದಯಾನಂದ್, ಕರವೇ ಮೆಡಿಕಲ್ ಚಂಬಣ್ಣ, ಎಲ್.ಐ.ಸಿ ಕುಮಾರ್ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಹೋಬಳಿಯ ವಿವಿಧ ಅಂಗನವಾಡಿಯ 60ಕ್ಕೂ ಹ

ಸಿಸಿ ಟಿವಿಯಲ್ಲಿ ಬಯಲಾಯ್ತು ವಂಚಕಿಯ ಕೈಚಳಕ

ಹುಳಿಯಾರು ಪಟ್ಟಣದ ಬಂಗಾರದ ಅಂಗಡಿಯೊಂದಕ್ಕೆ ಕಾಲುಂಗುರ ಕೊಳ್ಳಲು ಬಂದ ಮಹಿಳೆಯೊಬ್ಬಳು ಡಬ್ಬಿಯಲ್ಲಿನ ಬೆಳ್ಳಿಯ ಆಭರಣಗಳನ್ನು ಕೈಚಳಕ ತೋರಿ ಬಚ್ಚಿಟ್ಟುಕೊಂಡಿದ್ದನ್ನು ಸಿಸಿ ಟಿವಿ ಮೂಲಕ ಪತ್ತೆ ಮಾಡಿ ವಾಪಸ್ ಪಡೆದ ಪ್ರಕರಣ ಮಂಗಳವಾರ ನಡೆದಿದೆ. ಹುಳಿಯಾರಿನ ಶ್ರೀದುರ್ಗಾಂಬ ಜ್ಯೂಯಲರಿ ಅಂಗಡಿಯಲ್ಲಿ ಬೆಳ್ಳಿ ಆಭರಣ ಕದಿಯಲು ಮುಂದಾಗಿ ಸಿಕ್ಕಿ ಬಿದ್ದ ಮಹಿಳೆ. ಪಟ್ಟಣದ ರಾಜ್ ಕುಮಾರ್ ರಸ್ತೆಯಲ್ಲಿನ ಹೆಚ್.ಆರ್. ಶಂಕರ್ ಅವರ ಶ್ರೀದುರ್ಗಾಂಬ ಜ್ಯೂಯಲರಿ ಅಂಗಡಿಗೆ ಬೆಳ್ಳಿ ಕಾಲುಂಗುರ ಕೊಳ್ಳುವ ನೆಪದಲ್ಲಿ ಮಹಿಳೆಯೊಬ್ಬಳು ನಾನಾ ರೀತಿಯ ಬೆಳ್ಳಿಯ ಕಾಲುಂಗುರಗಳನ್ನು ತೋರಿಸಲು ಕೇಳಿದಳು. ಅಂಗಡಿಯಲ್ಲಿ ಸಾಕಷ್ಟು ದಟ್ಟಣೆ ಇದ್ದುದರಿಂದ ಕಾಲುಂಗುರ ಗೆಜ್ಜೆಯ ಬಾಕ್ಸನ್ನು ತೂಕ ಮಾಡಿ ಇಡಿ ಪೆಟ್ಟಿಗೆಯನ್ನೇ ಅಂಗಡಿಯಾತ ಆಕೆಗೆ ನೀಡಿದ್ದಾನೆ. ಆಭರಣದ ಬಾಕ್ಸ್ ಪಡೆದ ಆಕೆ , ಅಂಗಡಿಯಲ್ಲಿ ಹೆಚ್ಚು ಜನರಿದ್ದುದನ್ನು ಗಮನಿಸಿ ತನ್ನ ಕೈಚಳಕದಿಂದ ಅದರಲ್ಲಿದ್ದ ಕೆಲ ಕಾಲುಂಗುರಗಳನ್ನು ತನ್ನ ರವಿಕೆಯಲ್ಲಿ ಬಚ್ಚಿಟ್ಟುಕೊಂಡು ನಂತರ ತನಗೆ ಯಾವುದೇ ಆಭರಣ ಬೇಡವೆಂದು ಬಾಕ್ಸ್ ವಾಪಸ್ ಅಂಗಡಿಯಾತನಿಗೆ ನೀಡಿದ್ದಾಳೆ. ಬಾಕ್ಸ್ ಪಡೆದ ಆಂಗಡಿಯಾತ ತೂಕ ಹಾಕಿದಾಗ ತೂಕದಲ್ಲಿ ವ್ಯತ್ಯಯ ಕಂಡು ಬಂದಿದ್ದು, ಆಕೆಯನ್ನು ಕೇಳಿದಾಗ ತಾನು ಅದರಿಂದ ಏನನ್ನು ತೆಗೆದುಕೊಂಡಿಲ್ಲ ನೀವು ಹೇಗೇ ಕೊಟ್ಟರೋ ಹಾಗೇ ಇದೆ ಸುಮ್ಮನೇ ನನ್ನನ್ನು ಅಪಾದಿಸಬೇಡಿ ಎಂದಿದ್ದಾಳೆ. ಎಷ್ಟ

ಹುಳಿಯಾರಿಗೆ ಆಗಮಿಸಿದ ಹೊಳಲ್ಕೆರೆ ರಾಮೇಶ್ವರ

ಹುಳಿಯಾರು ಪಟ್ಟಣಕ್ಕೆ ಆಗಮಿಸಿದ ಹೊಳಲ್ಕೆರೆ ರಾಮೇಶ್ವರ ಸ್ವಾಮಿಯನ್ನು ಭಕ್ತರು ತಮ್ಮ ಮನೆಗಳಿಗೆ ಕರೆದುಕೊಂಡು ಹೋಗಿ ಪೂಜೆ ಸಲ್ಲಿಸಿದರು. ಹುಳಿಯಾರಿಗೆ ಆಗಮಿಸಿದ ರಾಮೇಶ್ವರಸ್ವಾಮಿಯನ್ನು ಭಕ್ತರ ಮನೆಗಳಿಗೆ ಕರೆದೊಯ್ಯುತ್ತಿರುವುದು. ಹೊಳಲಕ್ಕೆರೆ ಪ್ರಸನ್ನ ರಾಮೇಶ್ವರಸ್ವಾಮಿಗೆ ತನ್ನದೇ ಆದ ಐತಿಹ್ಯವಿದ್ದು, ಪುರಾಣಕಾಲದಲ್ಲಿ ಶ್ರೀ ರಾಮಲಕ್ಷ್ಮಣರು ಸೀತೆಯನ್ನು ಅರಸುತ್ತಾ ಬಂದಾಗ ಈ ಭಾಗದಲ್ಲಿ ನೆಲೆನಿಂತಿದ್ದು ಇಲ್ಲಿ ಶಿವಲಿಂಗ ಪ್ರತಿಷ್ಢಾಪಿಸಿ ಪೂಜಿಸಿದರು ಎಂಬ ಪ್ರತೀತಿ ಇದ್ದು, ಸ್ವಾಮಿಗೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯ ಒಕ್ಕಲಿನವರಿದ್ದು, ಸ್ವಾಮಿಗೆ ಹೆಚ್ಚು ಮಹತ್ವವಿದೆ. ಕಳೆದ ಒಂದು ವಾರದ ಹಿಂದೆ ಕೆಂಕೆರೆಯಲ್ಲಿನ ಭಕ್ತರ ಮನೆಗಳಿಗೆ ಕರೆದುಕೊಂಡು ಬಂದಿದ್ದ ಸ್ವಾಮಿಯನ್ನು ಮಂಗಳವಾರ ವಾಪಸ್ ಹೊಳಲ್ಕೆರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಹುಳಿಯಾರಿನ ಬಸ್ ಏಜೆಂಟ್ ವಿಶ್ವಣ್ಣ ಹಾಗೂ ಪಟ್ಟಣದ ಇತರ ಕೆಲ ಭಕ್ತರ ಮನೆಗಳಿಗೆ ತೆರಳಿ ಪೂಜೆ ಸಲ್ಲಿಸಿ, ಮಡಿಲಕ್ಕಿ ಹಾಕಿಸಿಕೊಂಡು, ಪನಿವಾರ ವಿತರಿಸಲಾಯಿತು. ಸ್ವಾಮಿಯ ಜೊತೆ ಅಪಾರ ಸಂಖ್ಯೆ ಭಕ್ತರಿದ್ದರು. 

ನಡಿಗೆ ಮೂಲಕವೇ ಸಾಗಿ ಸಿದ್ದಲಿಂಗೇಶ್ವರ ದರ್ಶನ

ಭಕ್ತಿಗೆ ಹಲವಾರು ದಾರಿಗಳಿದ್ದು, ಇವರುಗಳು ಬರೋಬ್ಬರಿ 500 ಕಿ.ಮೀ ದೂರವನ್ನು ಸುದೀರ್ಘ ಪಾದಯಾತ್ರೆ ಮಾಡುವ ಮೂಲಕ ಯಡೆಯೂರು ಸಿದ್ದಲಿಂಗೇಶ್ವರನ ದರ್ಶನ ಮಾಡುತ್ತಾ ಭಕ್ತಿಯ ಪರಾಕಾಷ್ಠೆ ಮೆರೆಯುತ್ತಿದ್ದಾರೆ. ಕಳೆದ 39 ವರ್ಷದಿಂದ ಗದಗ, ಬಾಗಲಕೋಟೆ, ಧಾರವಾಡ,ಹಾವೇರಿ ಜಿಲ್ಲೆಗಳಿಂದ ಪಾದಯಾತ್ರೆ ಮೂಲಕ ಈ ಭಾಗದ ಭಕ್ತಾದಿಗಳು ಜಾತಿಮತ ಭೇದವಿಲ್ಲದೇ ಸಿದ್ದಲಿಂಗನ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಹುಳಿಯಾರಿನ ಶ್ರೀವೀರಭದ್ರಸ್ವಾಮಿ ದೇವಸ್ಥಾನಕ್ಕೆ ಭಾನುವಾರ ಸಂಜೆ ಆಗಮಿಸಿದ್ದ ಉತ್ತರ ಕರ್ನಾಟಕ ಭಾಗದ ಎಡೆಯೂರು ಸಿದ್ಧಲಿಂಗೇಶ್ವರನ ದರ್ಶನ ಪಾದಯಾತ್ರೆಗಳು ಪ್ರವಚನ ಆಲಿಸುತ್ತಿರುವುದು. ಧೋತಿ, ತಲೆಗೆ ಟೋಪಿ, ಕೊರಳಿಗೆ ಕೆಂಪು ವಸ್ತ್ರ ಧರಿಸಿ ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿಯ ಪದಗಳನ್ನು ತಾಳ ಹಾಕಿ ಹಾಡುತ್ತಾ, ಸಿದ್ಧಲಿಂಗೇಶ್ವರನ ಪೆÇೀಟೋ ಹಿಡಿದು, ವೃದ್ದರು,ವಯಸ್ಕರು ಎನ್ನದೆ ಉತ್ತರ ಕರ್ನಾಟಕದ ಹಲವು ಪ್ರದೇಶಗಳ 500ರಕ್ಕೂ ಹೆಚ್ಚು ಪಾದಯಾತ್ರಿಗಳು ಲೋಕಕಲ್ಯಾಣದ ಸದುದ್ದೇಶದ ಸಂಕಲ್ಪ ಹೊಂದಿ ಪಾದಯಾತ್ರೆ ಮಾಡುತ್ತಿದ್ದಾರೆ. ನವಲಗುಂದದ ಶಲವಡಿ,ದಾಟನಾಳದಿಂದ ಇದೇ ನವಂಬರ್ 5 ರಿಂದ ಪ್ರಾರಂಭವಾಗಿರುವ ಪಾದಯಾತ್ರೆ ನವಂಬರ್ 19 ರಂದು ತುಮಕೂರು ಜಿಲ್ಲೆಯ ಯಡೆಯೂರು ತಲುಪಿ, ನವಂಬರ್ 22 ರಂದು ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿಯ ಕಾರ್ತಿಕ ಮಾಸದ ಲಕ್ಷ ದೀಪೆÇೀತ್ಸವದಲ್ಲಿ ಭಾಗವಹಿಸುವುದರ ಮೂಲಕ ಕೊನೆಗೊಳ್ಳಲಿದ್ದು,ಸುಮಾರು 500 ಕ

ಶ್ರದ್ಧಾಭಕ್ತಿಯಿಂದ ನಡೆದ ರಾಮೇಶ್ವರಸ್ವಾಮಿ ಉತ್ಸವ

ಹುಳಿಯಾರು ಹೋಬಳಿ ಕೆಂಕೆರೆಯಲ್ಲಿ ಗ್ರಾಮದೇವತೆ ಕಾಳಿಕಾಂಭ ದೇವಿ ಹಾಗೂ ದಮ್ಮಡಿಹಟ್ಟಿ ಈರಬೊಮ್ಮಕ್ಕ ದೇವರುಗಳೊಂದಿಗೆ ಹೊಳಲ್ಕೆರೆರಾಮೇಶ್ವರಸ್ವಾಮಿ ವೈಭವಯುತ ಉತ್ಸವ ನಡೆಯಿತು. ಉತ್ಸವದ ಅಂಗವಾಗಿ ಸ್ವಾಮಿಗೆ ಅಭಿಷೇಕ , ಅರ್ಚನೆ ಮಾಡಿ ನಂತರ ಅಲಂಕರಿಸಿ ಕಾಳಮ್ಮದೇವಿ ಹಾಗೂ ಈರಬೊಮ್ಮಕ್ಕ ದೇವರುಗಳ ಸಮೇತ ಸಕಲ ವಾದ್ಯದೊಂದಿಗೆ ಸ್ವಾಮಿಯನ್ನು ಕರೆತಂದು ಅಲಂಕೃತ ರಥದಲ್ಲಿ ಸ್ವಾಮಿಯನ್ನು ಕುಳ್ಳಿರಿಸಿ , ಜೈಕಾರ ಹಾಕುತ್ತಾ ರಥವನ್ನೆಳೆದು ಉತ್ಸವ ಪ್ರಾರಂಭಿಸಿದರು. ಉತ್ಸವಕ್ಕೆ ಮಹಿಳಾ ವೀರಗಾಸೆ ನೃತ್ಯ ಮೆರುಗುತಂದಿತ್ತು.  ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದಲ್ಲಿ ರಾಮೇಶ್ವರ ಸ್ವಾಮಿ ಉತ್ಸವ ವೈಭವಯುತವಾಗಿ ನಡೆಯಿತು ಗ್ರಾಮದ  ಚನ್ನಬಸವೇಶ್ವರ ಸ್ವಾಮಿ ದೇವಾಲದಿಂದ ಪ್ರಾರಂಭವಾದ ಉತ್ಸವ ಊರಿನ ಬೀದಿಗಳಲ್ಲಿ ಸಾಗಿತು. ಗ್ರಾಮದ ಅಪಾರ ಸಂಖ್ಯೆಯ ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ಸ್ವಾಮಿ ದರ್ಶನ ಪಡೆದು, ಹಣ್ಣುಕಾಯಿ ಮಾಡಿಸಿದರು.

ಕಳಪೆ ಈರುಳ್ಳಿ ಬೀಜ ಮಾರಾಟ ಅಂಗಡಿಗೆ ರೈತರ ಘೇರಾವ್

ಕಳಪೆ ಈರುಳ್ಳಿ ಬೀಜ ಮಾರಾಟ ಮಾಡಿದ್ದರಿಂದ ಬೆಳೆನಷ್ಟವಾಗಿ ಲಕ್ಷಾಂತರ ರೂಪಾಯಿ ಲುಕ್ಸಾನಾಗಿದೆ ಎಂದು ಆರೋಪಿಸಿ ಹಿರಿಯೂರು ತಾಲ್ಲೂಕಿನ ಯಲ್ಲದಕೆರೆ, ಕೆಂಚಯ್ಯನಹಟ್ಟಿ, ಬಡಗೊಲ್ಲರಹಟ್ಟಿ. ಪಿಲಾಜನಹಳ್ಳಿ, ಹಾಲ್ ಮಾದೇನಹಳ್ಳಿ, ನಾಯ್ಕರಕೊಟ್ಟಿಗೆ, ಶೇಷಪ್ಪನಹಳ್ಳಿ ಸೇರಿದಂತೆ ಹುಳಿಯಾರು ಹೋಬಳಿ ದಸೂಡಿ ಗ್ರಾಮದ ಲಕ್ಷ್ಮೀವೆಂಕಟೇಶ್ವರ ಪರ್ಟಿಲೈಸರ್ಸ್ ವತಿಯಿಂದ ನಕಲಿ ಈರುಳ್ಳಿ ಬೀಜ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿ ಭಾನುವಾರ ನೂರಾರು ರೈತರು ಪ್ರತಿಭಟನೆ ನಡೆಸಿದರು. ಅನೇಕ ಗ್ರಾಮಗಳ ನೂರಾರು ರೈತರು ಪರಿಹಾರ ನೀಡಲು ಒತ್ತಾಯಿಸಿ ಹೋಬಳಿಯ ದಸೂಡಿ ಗ್ರಾಮದ ಲಕ್ಷ್ಮೀವೆಂಕಟೇಶ್ವರ ಪರ್ಟಿಲೈಸರ್ಸ್ ಎದುರು ಭಾನುವಾರ ಅಂಗಡಿ ಮಾಲೀಕನಿಗೆ ಘೇರಾವು ಮಾಡಿದರು. ಆರೋಪ: ಈರುಳ್ಳಿ ಬೀಜಕ್ಕೆ ಹಿರಿಯೂರು ಹೆಸರುವಾಸಿಯಾಗಿದ್ದು ಕಳೆದ ಜುಲೈನಲ್ಲಿ ಹಿರಿಯೂರಿನಲ್ಲಿ ಬೀಜ ದೊರೆಯದ ಕಾರಣ ಹುಳಿಯಾರು ಹೋಬಳಿಯ ದಸೂಡಿ ಗ್ರಾಮದ ಲಕ್ಷ್ಮೀವೆಂಕಟೇಶ್ವರ ಪರ್ಟಿಲೈಸರ್ಸ್ ಅಂಗಡಿಯಲ್ಲಿ ಸಿಕ್ಕ ಜಿಂದಾಲ್ ಕಂಪನಿಯ ಬೀಜಕ್ಕೆ ದುಬಾರಿ ಬೆಲೆ ತೆತ್ತಿದ್ದೆವು. ಬೀಜ ಉತ್ತಮವಾಗಿ ಮೊಳಕೆಯೊಡೆದು ಬೆಳೆದಿದ್ದರೂ ಫಸಲು ಮಾತ್ರ ಕಮ್ಮಿ ಹಾಗೂ ಕಳಪೆಯದಾಗಿದೆ ಎಂಬುದು ರೈತರ ಆರೋಪ. ಈರುಳ್ಳಿ ಗಡ್ಡೆ ರೋಗ ಪೀಡಿತವಾಗಿದ್ದು ಕೆಂಪು ಬಣ್ಣಕ್ಕೆ ತಿರುಗಿದೆ ಅಲ್ಲದೆ ಗಾತ್ರ ತೀರ ಕಿರಿದಾಗಿದೆ. ಈ ಈರುಳ್ಳಿ ಪಕೋಡಕ್ಕೂ ಲಾಯಕ್ಕಾಗದೆ ಬಂದಿದ್ದ ಅಲ್ಪಸ್ವಲ್ಪ ಬೆಳೆಯನ್ನು ಮಾರಾಟಕ್ಕ

ಬಗರ್ ಹುಕುಂ ಕಮಿಟಿ ಸದಸ್ಯರ ನೇಮಕಕ್ಕೆ ಒತ್ತಾಯ

 ಚಿಕ್ಕನಾಯಕನಹಳ್ಳಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬಗರ್ ಹುಕುಂ ಕಮಿಟಿ ರಚಿಸಿ ಸದಸ್ಯರ ನೇಮಕ ಮಾಡುವಂತೆ ಸರ್ಕಾರವನ್ನು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್ ಕುಮಾರ್ ಒತ್ತಾಯಿಸಿದ್ದಾರೆ. ಸಿಂಗದಹಳ್ಳಿ ರಾಜ್ ಕುಮಾರ್ . ಸರ್ಕಾರ ರಚನೆಗೊಂಡು ವರ್ಷ ಕಳೆಯತ್ತಾ ಬಂದರೂ ಕ್ಷೇತ್ರದಲ್ಲಿ ಬಗರ್ ಹುಕುಂ ಕಮಿಟಿ ಸದಸ್ಯರ ನೇಮಕ ಪ್ರಕ್ರಿಯೆ ನಡೆಯದೆ ಇರುವುದರಿಂದ ರೈತರ ಸಾಗುವಳಿ ಮಾಡಿರುವ ಜಮೀನುಗಳ ಮುಂಜೂರಾತಿ ಕಾರ್ಯ ನಡೆಯುತ್ತಿಲ್ಲ. ಬಡವರು ಜೀವನ ನಿರ್ವಹಣೆಗೆ ಅಷ್ಟೋ ಇಷ್ಟು ಉಳಿಮೆ ಮಾಡಿಕೊಂಡಿಕೊಂಡು ಸರ್ಕಾರಿ ಜಮೀನು ಸಕ್ರಮಗೊಳ್ಳದಿರುವುದರಿಂದ ಕ್ಷೇತ್ರದ ಗ್ರಾಮಾಂತರ ಪ್ರದೇಶದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಸಾಗುವಳಿ ಸಕ್ರಮಕ್ಕೆ ಅರ್ಜಿ ಸಲ್ಲಿಸುವ ವೇಳೆಯನ್ನು ಸರ್ಕಾರ ನಿಗದಿ ಪಡಿಸಿರುವುದರಿಂದ ಕಮಿಟಿ ಇಲ್ಲದಿರುವುದರಿಂದ ರೈತರು ಅನೇಕ ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದ ಜಮೀನು ಕೈ ತಪ್ಪುವ ಸಂಭವವಿದೆ. ಕೂಡಲೇ ಸಮಿತಿ ರಚಿಸಿ ಸದಸ್ಯರ ನೇಮಕ ಮಾಡುವಂತೆ ಅವರು ಒತ್ತಾಯಿಸಿದ್ದಾರೆ.

ಅಗ್ನಿವಂಶ ಕುರುಬರಿಂದ ಮಾಸ್ತಮ್ಮನ ಹಬ್ಬ ಆಚರಣೆ

ಗ್ರಾಮ ಹಾಗೂ ತಮ್ಮ ಸಮುದಾಯದವರಿಗೆ ತೊಡಕುಗಳಾಗದಂತೆ ಮಾಸ್ತಮ್ಮ ಕಾಯುತ್ತಾಳೆಂಬ ನಂಬಿಕೆಯಿಂದ ಹಿಂದಿನಿಂದ ಪೂರ್ವಿಕರು ರೂಢಿಸಿಕೊಂಡು ಬಂದಿದ್ದ ಮಾಸ್ತಪ್ಪ-ಮಾಸ್ತಮ್ಮನ ಹಬ್ಬವನ್ನು ಹುಳಿಯಾರು ಸಮೀಪದ ಲಿಂಗಪ್ಪನಪಾಳ್ಯ, ಸೋಮಜ್ಜನಪಾಳ್ಯ,ಕೆ.ಸಿ.ಪಾಳ್ಯ, ನಂದಿಹಳ್ಳಿ,ಸಾದರಹಳ್ಳಿ, ಸಾಲ್ಕಟ್ಟೆ,ಶೆಟ್ಟಿಕೆರೆ ಗ್ರಾಮಗಳಲ್ಲಿ ಅಗ್ನಿವಂಶಕುರುಬ ಜನಾಂಗದ ಬಂಧುಗಳು ಒಟ್ಟಾಗಿ ಸೇರಿ ಪಟ್ಟಣದ ಬೀರದೇವರಕಟ್ಟೆ ಬಳಿಯ ಮಾಸ್ತಮ್ಮದೇವಿ ಸನ್ನಿಧಾನದಲ್ಲಿ ಶ್ರದ್ದಾಭಕ್ತಿಯಿಂದ ಭಾನುವಾರ ಆಚರಿಸಿದರು. ಹುಳಿಯಾರಿನ ಬೀರದೇವರೆಕಟ್ಟೆ ಹತ್ತಿರ ಮಾಸ್ತಮ್ಮ ದೇವಿ ದೇವಾಲಯದಲ್ಲಿ ಮಾಸ್ತಮ್ಮ ದೇವಿ ದರ್ಶನಕ್ಕೆ ಸೇರಿದ್ದ ಭಕ್ತ ಸಮೂಹ. ಅಗ್ನಿವಂಶ ಕುರುಬ ಸಮುದಾಯದವರು ಮಾಸ್ತಮ್ಮದೇವಿಯನ್ನು ತಮ್ಮ ಮನೆದೇವತೆ ಎಂದು ನಂಬಿದ್ದು, ಕಾರ್ತೀಕ ಮಾಸದಲ್ಲಿ ಈ ಹಬ್ಬದ ಆಚರಣೆ ನಡೆಸಿಕೊಂಡು ಬಂದಿದ್ದಾರೆ. ಹಬ್ಬದ ಅಂಗವಾಗಿ ಮುಂಜಾನೆಯೇ ಬಿದರೆಹೊಳೆಯಲ್ಲಿ ಗಂಗಾಪೂಜೆ ನೆರವೇರಿಸಿ ಗಂಗೆ ತಂದು ಮಾಸ್ತಮ್ಮದೇವಿಗೆ ಅಭಿಷೇಕ ಮಾಡಿ ಅಮ್ಮನವರನ್ನು ಅಲಂಕರಿಸಲಾಯಿತು. ಕುರುಬ ಸಮುದಾಯದ ಕುಟುಂಬದವರು ತಮ್ಮ ಹರಕೆಯಂತೆ ಕುರಿ, ಕೋಳಿಯನ್ನು ಬಲಿ ನೀಡಿ, ಆರತಿ ಮಾಡಿ, ಪನಿವಾರ ವಿತರಿಸಿದರು. ಬಲಿ ನೀಡಿದ ಕುರಿ,ಕೋಳಿಯನ್ನು ಮನೆಗೆ ತೆಗೆದುಕೊಂಡು ಹೋಗಿ ಅಡುಗೆ ತಯಾರಿಸಿ ಸಂಜೆ ಪುನ: ದೇವಾಲಯದಲ್ಲಿಗೆ ತಂದು ಎಲ್ಲರೂ ಸೇರಿ ಒಟ್ಟಾಗಿ ಸ್ವೀಕರಿಸಿದರು. ಈ ವೇಳೆ ಗುಡಿಗೌಡರು, ಗ್ರಾಮದ ಮುಖಂಡರು

ಕೃಷಿಸಾಲವನ್ನು ದುಂದು ವೆಚ್ಚ ಮಾಡಬೇಡಿ

ಕೃಷಿಸಾಲವನ್ನು ದುಂದು ವೆಚ್ಚ ಮಾಡದೆ, ಕೃಷಿ ಚಟುವಟಿಕೆಗಳಿಗೇ ಬಳಸಿ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್ ಕುಮಾರ್ ತಿಳಿಸಿದರು. ಹುಳಿಯಾರು ಹೋಬಳಿ ಗಾಣಧಾಳು ಪ್ರಾ.ಕೃ.ಸ.ಸಂಘದಲ್ಲಿ ಸಿಂಗದಹಳ್ಳಿ ರಾಜ್ ಕುಮಾರ್ ಸ್ವಸಹಾಯ ಗುಂಪುಗಳಿಗೆ ಸಾಲ ವಿತರಣೆ ಮಾಡಿದರು.  ಹೋಬಳಿಯ ಗಾಣಧಾಳು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರಿಗೆ ಹಾಗೂ ಸ್ವಸಹಾಯ ಗುಂಪುಗಳಿಗೆ ಸಾಲ ವಿತರಣ ಸಮಾರಂಭದಲ್ಲಿ ಅವರು ಮಾತನಾಡಿದರು. ಸಂಘದಿಂದ ಕೃಷಿಗಾಗಿ ಪಡೆದ ಸಾಲವನ್ನು ರೈತರು ಗೊಬ್ಬರ, ಬಿತ್ತನೆ ಬೀಜ ಸೇರಿದಂತೆ ಇನ್ನಿತರ ಕೃಷಿಗೆ ಪೂರಕವಾದ ವಸ್ತುಗಳನ್ನು ಕೊಂಡುಕೊಳ್ಳಲು ಉಪಯೋಗಿಸಿಕೊಂಡು, ಫಸಲು ಬಂದ ಮೇಲೆ ಸಾಲವನ್ನು ಮರುಪಾವತಿ ಮಾಡಿ ಎಂದರು. ಜಿಲ್ಲಾ ಸಹಕಾರ ಬ್ಯಾಂಕ್ ವತಿಯಿಂದ ಕೃಷಿಗಾಗಿ ಸಾಲ ಪಡೆದ ರೈತ ಮರಣ ಹೊಂದಿದಲ್ಲಿ ರೂ. ಒಂದು ಲಕ್ಷದವರೆಗೆ ಸಾಲ ಮನ್ನಾ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ವಿವರಿಸಿದರು. ಸಂಘದ ಅಧ್ಯಕ್ಷ ಜಿ.ಎಂ.ನೀಲಕಂಠಯ್ಯ ಮಾತನಾಡಿ ಬಡ್ಡಿ ರಹಿತ ಸಾಲವನ್ನು ಜಿಲ್ಲಾ ಸಹಕಾರ ಬ್ಯಾಂಕ್ ನೀಡುತ್ತಾ ಬಂದಿರುವುದು ರೈತರಿಗೆ ವರದಾನವಾಗಿದೆ. ಈ ನಿಟ್ಟಿನಲ್ಲಿ ಸುಮಾರು ನೂರು ರೈತರಿಗೆ ಹಾಗೂ ಏಳು ಸ್ವಸಹಾಯ ಗುಂಪುಗಳಿಗೆ ಸುಮಾರು ರೂ.45 ಲಕ್ಷ ಸಾಲ ವಿತರಿಸಲಾಗಿದೆ ಎಂದರು. ಸಂಘದ ಉಪಾಧ್ಯಕ್ಷ ನಂಜೇಗೌಡ, ನಿರ್ದೇಶಕರಾದ ಜಿ.ಟಿ.ಜಯದೇವಪ್ಪ, ಆರ್.ಕರ

ವಿಶಾಖ ಮಳೆ : ರಾಗಿ ಬೆಳೆಗೆ ವರದಾನ

ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಬಿದ್ದ ವಿಶಾಖಿ ಮಳೆಗೆ ಇತ್ತೀಚೆಗೆ ರಾಗಿ ಬೆಳೆಗೆ ಕಾಣಿಸಿಕೊಂಡಿದ್ದ ಹಸಿರುಹುಳಗಳ ಬಾಧೆ ಸ್ವಲ್ಪ ಪ್ರಮಾಣದಲ್ಲಿ ತಗ್ಗುವಂತಾಗಿದೆ ಎನ್ನಲಾಗಿದೆ. ಮಳೆ ನಕ್ಷತ್ರಗಳಿಗೆ ರೈತರು ಅವರದ್ದೇ ಧಾಟಿಯಲ್ಲಿ ವ್ಯಾಖ್ಯಾನಿಸುವುದು ರೂಢಿಯಲ್ಲಿದ್ದು ,ಕೆಲವೊಂದು ಮಳೆಬಂದರೆ ಬೆಳೆಗೆ ಅನುಕೂಲ, ಕೆಲವದರಿಂದ ಕೇಡುಗಾಲ ಎಂಬ ನಂಬಿಕೆ ಮನೆ ಮಾಡಿದೆ. ಹಿಂಗಾರು ಕೊನೆಘಟ್ಟದ ಬೆಳೆಗಳಿಗೆ ವಿಶಾಖಮಳೆ ಅಂತಿಮವಾಗಿದ್ದು ವಿಶಾಖಮಳೆ ಬಂದೇಬರುತ್ತದೆಂಬ ಆಶಾಭಾವನೆ ರೈತರಲ್ಲಿದೆ. ಹುಳಿಯಾರು ಹೋಬಳಿಯಲ್ಲಿ ವಿಶಾಖಮಳೆಬಂದು ರಾಗಿಗೆ ಬಿದ್ದದ್ದ ಹಸಿರುಹುಳುಗಳು ನಾಶವಾಗಿರುವುದನ್ನು ವೀಕ್ಷಿಸುತ್ತಿರುವ ರೈತ. ವಿಶಾಖಮಳೆಗೆ ವಿಷ ಮಳೆ ಎಂದು ಕರೆಯಲಾಗುವುದಿದ್ದು, "ವಿಶಾಖಿ ಮಳೆಬಂದು ಹುಳುಗಳ ಬಾಯಿಗೆಲ್ಲಾ ವಿಷಹಾಕ್ತು "ವಿಶಾಖಮಳೆ ಪಿಚಾಚಿ ಇದ್ದಂತೆ" ಎಂಬ ನಾಣ್ನುಡಿಗಳಿವೆ. ಈ ಮಳೆ ಬರುವ ಹಂತದಲ್ಲಿ ಬೆಳೆ ಕಟಾವು ಸ್ಥಿತಿಗೆ ಬಂದಿದ್ದು ಹುಳುಗಳಬಾಧೆ ಕೂಡ ಕಾಟಕಾಡುತ್ತೆ. ಈ ಮಳೆ ಬಂದಲ್ಲಿ ಮರಿಹಂತದ ಕೀಟಗಳು ಸಾಯುತ್ತವೆ ಎಂಬ ಪ್ರತೀತಿ ಇದೆ. ಹರಳು, ತೊಗರಿ ಸೇರಿದಂತೆ ಮತ್ತಿತರರ ದ್ವಿದಳಧಾನ್ಯಗಳ ಬೆಳೆಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದ್ದ ಹುಳುಗಳಬಾಧೆ ಕಳೆದೆರಡು ವರ್ಷಗಳಿಂದ ರಾಗಿ ಬೆಳೆಗೂ ವ್ಯಾಪಿಸಿತ್ತು. ಈ ಸಂಬಂಧ ವಿವಿಧ ವಿಜ್ಞಾನಿಗಳ ತಂಡ ಸಹ ಹೋಬಳಿ ವ್ಯಾಪ್ತಿಯ ಹುಳುಭಾದಿತ ತಾಕುಗಳಿಗ

ಹುಯ್ಯೋ ಹುಯ್ಯೋ ಮಳೆರಾಯ: ಲೇಖಕರು : ಮಲ್ಲಿಕಾರ್ಜುನ ಹೊಸಪಾಳ್ಯ

ಹುಯ್ಯೋ ಹುಯ್ಯೋ ಮಳೆರಾಯ: ಲೇಖಕರು : ಮಲ್ಲಿಕಾರ್ಜುನ ಹೊಸಪಾಳ್ಯ

ವಿದ್ಯಾವಾರಿಧಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಹುಳಿಯಾರಿನ ವಿದ್ಯಾವಾರಿಧಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು. ಕಾರ್ಯದರ್ಶಿ ಕವಿತಾ ಕಿರಣ್ ಕುಮಾರ್, ಪ್ರಾಂಶುಪಾಲ ರವಿ ಹಾಗೂ ಇತರರಿದ್ದಾರೆ.

ಆಳ್ವಾಸ್ ನುಡಿಸಿರಿಯಲ್ಲಿ ಹುಳಿಯಾರು ನಟರಾಜ್

ಖ್ಯಾತ ಚಿಂತಕರಾದ ಹುಳಿಯಾರಿನವರಾಗಿರುವ ಡಾ. ನಟರಾಜ್ ಹುಳಿಯಾರ್ ಅವರನ್ನು ಮೂಡಬಿದರೆಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿ ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ಸಿದ್ದಲಿಂಗಯ್ಯ, ಸ್ವಾಗತ ಸಮಿತಿಯ ಪ್ರೋ.ನರಸಿಂಹಮೂರ್ತಿ ಸನ್ಮಾನಿಸಿದರು.

ಮಂಕುತಿಮ್ಮನ ಕಗ್ಗ ಕುರಿತು ಉಪನ್ಯಾಸ

ಹುಳಿಯಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಸಿಕೊಂಡು ಬರುತ್ತಿರುವ ಮನೆಮನೆಗಳಲ್ಲಿ ಕನ್ನಡ ಕವಿಕಾವ್ಯ ಗೋಷ್ಠಿ ಪಾಕ್ಷಿಕ ಕಾರ್ಯಕ್ರಮ ಪಟ್ಟಣದ ವಸಂತನಗರ ಬಡಾವಣೆಯ ಗೋಪಾಲಕೃಷ್ಣ ಅವರ ನಿವಾಸದಲ್ಲಿ ನಡೆಯಿತು. ನಂದಿಹಳ್ಳಿ ಶಾಲೆಯ ಶಿಕ್ಷಕ ಯಲ್ಲಪ್ಪ ತಮ್ಮ ಉಪನ್ಯಾಸದಲ್ಲಿ ಡಿವಿಜಿಯವರ ಮಂಕುತಿಮ್ಮನ ಕಗ್ಗ ಕುರಿತು ತಿಳಿಸುತ್ತಾ, ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು , ಎಲ್ಲರೊಳಗೊಂದಾಗು ಎಂಬ ಕಗ್ಗದ ಮೂಲಕ ಡಿವಿಜಿಯವರು ಕಂಡಂತೆ ಜೀವನದ ದರ್ಶನದ ಬಗ್ಗೆ ವ್ಯಾಖ್ಯಾನಿಸಿದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕನಕದಾಸ ಪ್ರೌಢಶಾಲೆಯ ಶಿಕ್ಷಕ ಎನ್.ಬಿ.ಚಂದ್ರಪ್ಪ ಮಾತನಾಡಿ, ಡಿವಿಜಿಯವರ ಜೀವನವನ್ನು ಕುರಿತು ತಿಳಿಸಿದರಲ್ಲದೆ,ಅವರು ರಚಿಸಿದ ಕವಿತೆಗಳನ್ನು ಓದಿ ತಿಳಿಯುವಂತೆ ಹೇಳಿದರು. ಕಸಾಪದ ತ.ಶಿ.ಬಸವಮೂರ್ತಿ ಅವರು ಸ್ವರಚಿತ ಕವಿತೆಗಳನ್ನು ಹಾಡುವ ಮೂಲಕ ಕನ್ನಡ ಸಾಹಿತ್ಯದ ಬಗ್ಗೆ ತಿಳಿಸಿದರು. ಶಿಕ್ಷಕ ಜಗದೀಶ್ ಪ್ರಾರ್ಥಿಸಿ, ರವಿ ನಿರೂಪಿಸಿ,ವಂದಿಸಿದರು.

ಶಿಸ್ತು, ಶ್ರದ್ಧೆ ಮೈಗೂಡಿಸಿಕೊಂಡಲ್ಲಿ ಯಶಸ್ಸು ಲಭ್ಯ

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್.ಎಸ್.ಎಸ್.ಘಟಕದ ಸಹಯೋಗದಲ್ಲಿ ಪ್ರಾಂಶುಪಾಲ ನಟರಾಜ್ ಅಧ್ಯಕ್ಷತೆಯಲ್ಲಿ ಮಕ್ಕಳ ದಿನಾಚರಣೆ ಆಚರಿಸಿ,ಸಿಹಿ ವಿತರಿಸಲಾಯಿತು. ಹುಳಿಯಾರು-ಕೆಂಕೆರೆ ಪಿಯು ಕಾಲೇಜಿನಲ್ಲಿ ನಡೆದ ಮಕ್ಕಳ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲ ನಟರಾಜ್ ಬಹುಮಾನ ವಿತರಿಸಿದರು. ದಿನಾಚರಣೆಯ ಅಂಗವಾಗಿ ರಸಪ್ರಶ್ನೆ ಕಾರ್ಯಕ್ರಮ, ನೆಹರು ಕುರಿತು ಭಾಷಣಸ್ಪರ್ಧೆ,ಜನಸಂಖ್ಯಾ ಶಿಕ್ಷಣ ಕುರಿತು ಪ್ರಬಂಧ ಸ್ಫರ್ಧೆ ನಡೆಸಿ ವಿಜೇತರಾದ ಮಣಿಕಂಠ,ಅರ್ಪಿತ,ತುಂಗಾ,ಗಗನ,ಅಶ್ವಿನಿ ಎಂಬ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಾಂಶುಪಾಲ ನಟರಾಜ್ ಮಾತನಾಡಿ, ನೆಹರು ಅವರ ಜನ್ಮ ದಿನವನ್ನೇ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುತಿದ್ದು, ನೆಹರುರವರ ಆದರ್ಶಗುಣಗಳನ್ನು ಇಂದಿನ ಮಕ್ಕಳು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಪ್ರಜೆಗಳಾಗಿ ಎಂದರು. ವಿದ್ಯಾರ್ಥಿಗಳು ಶಿಸ್ತು,ಶ್ರದ್ದೆಯನ್ನು ಮೈಗೂಡಿಸಿಕೊಂಡು ಮುನ್ನಡೆದರೆ ಯಶಸ್ಸು ಲಭಿಸುತ್ತದೆ ಇದರಿಂದ ಪೋಷಕರಿಗೂ ಹಾಗೂ ಶಾಲೆಗೂ ಕೀರ್ತಿ ಬರುತ್ತದೆ ಎಂದರು. ಈ ವೇಳೆ ಕಾಲೇಜು ಅಭಿವೃದ್ದಿ ಸಮಿತಿಯ ಜಲಾಲ್ ಸಾಬ್, ಉಪನ್ಯಾಸಕರಾದ ಶಿವಾನಂದ್,ಎಸ್.ಜಿ.ರಮೇಶ್,ಅನಂತಯ್ಯ, ಎನ್‍ಎಸ್‍ಎಸ್ ಅಧಿಕಾರಿ ಯೋಗೀಶ್, ಮಂಜುನಾಥ್,ಮಲ್ಲಿಕಾರ್ಜುನಯ್ಯ ಸೇರಿದಂತೆ ಇತರರಿದ್ದರು.

16 ಸಾವಿರಕ್ಕೆ ಸ್ಥಿರವಾಯ್ತು ಕೊಬ್ಬರಿ ಬೆಲೆ

       ಕೆಲವು ತಿಂಗಳುಗಳಿಂದ ಏರಿಕೆ ಕಂಡು 19ಸಾವಿರದ ಗಡಿಯಾಚೆಗೆ ಜಿಗಿತಗೊಂಡಿದ್ದ ಕೊಬ್ಬರಿ ಧಾರಣೆ ಇಳಿಮುಖಗೊಂಡು ಕಳೆದೆರಡು ವಾರದಿಂದ 16ಸಾವಿರ ಆಸುಪಾಸಿನ ಬೆಲೆಯಲ್ಲಿ ಸ್ಥಿರವಾಗಿದೆ. ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕ್ಷಿಂಟಲ್ ಕೊಬ್ಬರಿಗೆ 16,200ರೂಪಾಯಿಗೆ ಮಾರಾಟವಾಗುವ ಮೂಲಕ ದಾಖಲೆ ಬೆಲೆಯ 19ಸಾವಿರದ ಗಡಿದಾಟಿ , 20ಸಾವಿರಕ್ಕೆ ಏರಿಕೆಯಾಗುತ್ತದೆಂಬ ರೈತರ ಊಹೆ ಬುಡಮೇಲಾಗುವಂತಾಗಿದೆ. ಕೊಬ್ಬರಿ ಬೆಲೆ ಇದುವರೆಗೂ ಹೆಚ್ಚೆಂದರೆ 8ಸಾವಿರ ತಲುಪಿದ್ದೇ ಗರಿಷ್ಠ ಬೆಲೆಯಾಗಿದ್ದು, ಪ್ರತಿಬಾರಿಯೂ 5 ರಿಂದ 6 ಸಾವಿರ ಬೆಲೆಯಿದ್ದು ನಫೆಡ್ ಮೂಲಕ ಬೆಂಬಲ ಬೆಲೆಯಲ್ಲಿ ಮಾರುವ ಪರಿಸ್ಥಿತಿಯಿತ್ತು. ಸದಾ ನಿರಾಸೆಯ ಮಡುವಿನಲ್ಲೇ ನಿಟ್ಟುಸಿರು ಬಿಡುತ್ತಿದ್ದ ರೈತನಿಗೆ ಪ್ರಸ್ತುತ ಬೆಲೆ ಸಂತಸ ತಂದಿದೆ. ಕೊಬ್ಬರಿಯ ಇತಿಹಾಸದಲ್ಲೇ 10ಸಾವಿರದ ಗಡಿದಾಟದಿದ್ದ ಕೊಬ್ಬರಿಗೆ ಈ ಬಾರಿ ಶುಕ್ರದೆಸೆ ತಿರುಗಿ ಉತ್ತಮ ಬೆಲೆ ಬಂದು 19 ಸಾವಿರದ ಗಡಿ ದಾಟಿ ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದಲ್ಲದೆ ದೀಪಾವಳಿ ಸಮಯದಲ್ಲಿ 20 ಸಾವಿರ ಗಡಿದಾಟಲಿದೆ ಎಂಬ ಮಾತೆ ರೈತರನ್ನು ಮತ್ತು ವರ್ತಕರನ್ನು ಆಶ್ಚರ್ಯ ಪುಳುಕಿತರನ್ನಾಗಿ ಮಾಡಿತ್ತು. ಕೊಬ್ಬರಿ ಬೆಲೆ ಮತ್ತಷ್ಟು ಇಳಿಕೆಯಾಗುತ್ತದೆಂಬ ಆತಂಕದಲ್ಲಿ ಕೊಬ್ಬರಿ ಸುಲಿಯಲು ಮುಂದಾಗಿರುವ ರೈತರು.  ಆದರೆ ಇದೀಗ ಅದರ ಬೆನ್ನಲ್ಲೇ ಕಳೆದ ಮೂರ್ನಾಲ್ಕು ವಾರದಿಂದ ಕೊಬ

ಮಕ್ಕಳ ದಿನಾಚರಣೆ ಅಂಗವಾಗಿ ಸ್ವಚ್ಚತಾ ಆಂದೋಲನ

 ಹುಳಿಯಾರಿನ ತಾ.ಪಂ ಹಾಗೂ ಗ್ರಾ.ಪಂ. ಸದಸ್ಯರುಗಳು ಅಜಾದನಗರದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಸ್ವಚ್ಚತಾ ಆಂದೋಲನ ಕೈಗೊಂಡಿದ್ದರು.

ಆಜಾದ್ ನಗರದ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ

ಹುಳಿಯಾರಿನ ಆಜಾದ್ ನಗರದ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ತಾ.ಪಂ.ಸದಸ್ಯೆ ಬೀಬೀಫಾತೀಮಾ, ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ,ಸದಸ್ಯರಾದ ವೆಂಕಟಮ್ಮ,ಗೀತಾ,ಅಶೋಕ್ ಬಾಬು ಇನ್ನಿತರರಿದ್ದಾರೆ.

ನೆಹರು ಅವರ ಶುಭಾಷಯ ಪತ್ರ ವಿತರಣೆ

ಹುಳಿಯಾರಿನ ಎಂಪಿಎಸ್ ಶಾಲಾ ಮಕ್ಕಳಿಗೆ ಮಕ್ಕಳ ದಿನಾಚರಣೆ ಅಂಗವಾಗಿ ಸಿಹಿ ಹಾಗೂ ನೆಹರು ಅವರ ಶುಭಾಷಯ ಪತ್ರ ವಿತರಿಸಲಾಯಿತು.ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ, ಮುಖ್ಯಶಿಕ್ಷಕ ನಂದವಾಡಗಿ, ಸದಸ್ಯರಾದ ವೆಂಕಟಮ್ಮ, ಅಹಮದ್ ಖಾನ್, ಕಲಾವಿದ ಗೌಡಿ ಇತರರಿದ್ದಾರೆ.

ಹುಳಿಯಾರಿನಲ್ಲಿ ಸಂಭ್ರಮದ ಮಕ್ಕಳ ದಿನಾಚರಣೆ

ಹುಳಿಯಾರು ಪಟ್ಟಣದ ಎಂಪಿಎಸ್ ಶಾಲೆ, ವಾಸವಿಶಾಲೆ, ವಿದ್ಯಾವಾರಿಧಿ, ಕನಕದಾಸ ಶಾಲೆ, ಉರ್ದುಶಾಲೆ, ಮಾರುತಿ ಶಾಲೆ, ಬಸವೇಶ್ವರ ಶಾಲೆ, ಕೇಶವ ವಿದ್ಯಾಮಂದಿರ, ಜ್ಞಾನಜ್ಯೋತಿ,ಶಾರದಾ ಕಾನ್ವೆಂಟ್, ಹುಳಿಯಾರು-ಕೆಂಕೆರೆ ಪ್ರೌಢಶಾಲೆ ಹಾಗೂ ಅಂಗನವಾಡಿ ಕೇಂದ್ರಗಳು ಸೇರಿದಂತೆ ಪಟ್ಟಣದ ಎಲ್ಲಾ ಶಾಲೆಗಳಲ್ಲೂ ಶುಕ್ರವಾರದಂದು ಸಂಭ್ರಮದಿಂದ ಮಕ್ಕಳ ದಿನಾಚರಣೆ ಆಚರಿಸಲಾಯಿತು. ಹುಳಿಯಾರಿನ ವಾಸವಿ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ಅಧ್ಯಕ್ಷತೆಯಲ್ಲಿ ಮಕ್ಕಳ ದಿನಾಚರಣೆ ನಡೆಯಿತು. ವಾಸವಿ ಆಂಗ್ಲಶಾಲೆ ಹಾಗೂ ಟಿ.ಆರ್.ಎಸ್.ಆರ್ ಶಾಲೆಯಲ್ಲಿ ಮಕ್ಕಳದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಂದಲೇ ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳನ್ನೇ ಅಧ್ಯಕ್ಷರನ್ನಾಗಿ ಮಾಡಿ, ಮಕ್ಕಳೇ ಸೇರಿ ಕಾರ್ಯಕ್ರಮ ನಿರೂಪಿಸುವ ಮೂಲಕ ಆಚರಿಸಲಾಯಿತು. ವಾಸವಿ ಆಂಗ್ಲಶಾಲೆಯ ಕಾರ್ಯಕ್ರಮದಲ್ಲಿ 10ನೇ ತರಗತಿಯ ವಿದ್ಯಾರ್ಥಿ ವಿನಾಯಕ ಅಧ್ಯಕ್ಷತೆವಹಿಸಿದ್ದು, ಹರ್ಷಿಯಾ,ಲಕ್ಷಿಕಾಂತ್,ಹೇಮಂತ್,ಕಿರಣ್ ಕುಮಾರ್ ವೇದಿಕೆಯಲ್ಲಿದ್ದರು. ಸಹನ ನಿರೂಪಿಸಿ, ಅಪೂರ್ವ ಸ್ವಾಗತಿಸಿ,ಮೋನಿಕ ವಂದಿಸಿದರು. ಟಿ.ಆರ್.ಎಸ್.ಆರ್ ಶಾಲೆಯಲ್ಲಿ ವಿದ್ಯಾರ್ಥಿನಿ ಹೇಮಲತಾ ಅಧ್ಯಕ್ಷತೆವಹಿಸಿದ್ದು,ಸಿಮ್ರಾನ್ ಖಾನ್,ಲಾವಣ್ಯ ಸಭೆಯಲಿದ್ದರು. ಸುಮಾರು 60ಕ್ಕೂ ಹೆಚ್ಚು ಮಕ್ಕಳು ನೆಹರು ಅವರ ಜೀವನದ ಸಾಧನೆಗಳ ಬಗ್ಗೆ ಚುಟುಕಾಗಿ ವಿವರಿಸಿದರು. ಮತ್ತೆ ಕೆಲ ಮಕ್ಕಳು ನಾಡಗೀತೆ,ಭಾವಗೀತೆಗಳನ್ನು ಹಾಡಿದರು. ನಂತರ