ವಿಷಯಕ್ಕೆ ಹೋಗಿ

16 ಸಾವಿರಕ್ಕೆ ಸ್ಥಿರವಾಯ್ತು ಕೊಬ್ಬರಿ ಬೆಲೆ

       ಕೆಲವು ತಿಂಗಳುಗಳಿಂದ ಏರಿಕೆ ಕಂಡು 19ಸಾವಿರದ ಗಡಿಯಾಚೆಗೆ ಜಿಗಿತಗೊಂಡಿದ್ದ ಕೊಬ್ಬರಿ ಧಾರಣೆ ಇಳಿಮುಖಗೊಂಡು ಕಳೆದೆರಡು ವಾರದಿಂದ 16ಸಾವಿರ ಆಸುಪಾಸಿನ ಬೆಲೆಯಲ್ಲಿ ಸ್ಥಿರವಾಗಿದೆ.
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕ್ಷಿಂಟಲ್ ಕೊಬ್ಬರಿಗೆ 16,200ರೂಪಾಯಿಗೆ ಮಾರಾಟವಾಗುವ ಮೂಲಕ ದಾಖಲೆ ಬೆಲೆಯ 19ಸಾವಿರದ ಗಡಿದಾಟಿ , 20ಸಾವಿರಕ್ಕೆ ಏರಿಕೆಯಾಗುತ್ತದೆಂಬ ರೈತರ ಊಹೆ ಬುಡಮೇಲಾಗುವಂತಾಗಿದೆ.

ಕೊಬ್ಬರಿ ಬೆಲೆ ಇದುವರೆಗೂ ಹೆಚ್ಚೆಂದರೆ 8ಸಾವಿರ ತಲುಪಿದ್ದೇ ಗರಿಷ್ಠ ಬೆಲೆಯಾಗಿದ್ದು, ಪ್ರತಿಬಾರಿಯೂ 5 ರಿಂದ 6 ಸಾವಿರ ಬೆಲೆಯಿದ್ದು ನಫೆಡ್ ಮೂಲಕ ಬೆಂಬಲ ಬೆಲೆಯಲ್ಲಿ ಮಾರುವ ಪರಿಸ್ಥಿತಿಯಿತ್ತು. ಸದಾ ನಿರಾಸೆಯ ಮಡುವಿನಲ್ಲೇ ನಿಟ್ಟುಸಿರು ಬಿಡುತ್ತಿದ್ದ ರೈತನಿಗೆ ಪ್ರಸ್ತುತ ಬೆಲೆ ಸಂತಸ ತಂದಿದೆ.
ಕೊಬ್ಬರಿಯ ಇತಿಹಾಸದಲ್ಲೇ 10ಸಾವಿರದ ಗಡಿದಾಟದಿದ್ದ ಕೊಬ್ಬರಿಗೆ ಈ ಬಾರಿ ಶುಕ್ರದೆಸೆ ತಿರುಗಿ ಉತ್ತಮ ಬೆಲೆ ಬಂದು 19 ಸಾವಿರದ ಗಡಿ ದಾಟಿ ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದಲ್ಲದೆ ದೀಪಾವಳಿ ಸಮಯದಲ್ಲಿ 20 ಸಾವಿರ ಗಡಿದಾಟಲಿದೆ ಎಂಬ ಮಾತೆ ರೈತರನ್ನು ಮತ್ತು ವರ್ತಕರನ್ನು ಆಶ್ಚರ್ಯ ಪುಳುಕಿತರನ್ನಾಗಿ ಮಾಡಿತ್ತು.
ಕೊಬ್ಬರಿ ಬೆಲೆ ಮತ್ತಷ್ಟು ಇಳಿಕೆಯಾಗುತ್ತದೆಂಬ ಆತಂಕದಲ್ಲಿ ಕೊಬ್ಬರಿ ಸುಲಿಯಲು ಮುಂದಾಗಿರುವ ರೈತರು. 

ಆದರೆ ಇದೀಗ ಅದರ ಬೆನ್ನಲ್ಲೇ ಕಳೆದ ಮೂರ್ನಾಲ್ಕು ವಾರದಿಂದ ಕೊಬ್ಬರಿ ಬೆಲೆಯಲ್ಲಿ ಇಳಿಕೆಯಾಗುತ್ತಾ ಸಾಗಿ 16ಸಾವಿರದಲ್ಲಿಗೆ ಬಂದಿದ್ದು, ಬೆಲೆ ಹೆಚ್ಚಾಗುತ್ತದೆ ಎಂದುಕೊಂಡಿದ್ದ ತೆಂಗುಬೆಳೆಗಾರರಿಗೆ ಈ ರೀತಿ ಬೆಲೆ ಇಳಿಕೆಯಾಗುತ್ತಿರುವುದು ಆತಂಕ ಉಂಟುಮಾಡಿದೆ.

ಸದ್ಯ ಹಬ್ಬಹರಿದಿನಗಳ ಸಾಲೆಲ್ಲಾ ಮುಗಿದು ಮುಂದಿನ ಸಂಕ್ರಾಂತಿ ವರೆಗೆ ಇನ್ನಾವುದೇ ಹಬ್ಬ ಇಲ್ಲದಿದ್ದು ನಾಗಾಲೋಟದಲ್ಲಿದ್ದ ಬೆಲೆ ಸ್ಥಿರವಾಗಿ 16ಸಾವಿರ ಅಸುಪಾಸಿನಲ್ಲಿ ಮಾರಾಟವಾಗುತ್ತಿದೆ.

ಏರಿಕೆ ಏನಕ್ಕೆ: ಪ್ರಸಕ್ತ ವರ್ಷ ಉತ್ಪಾದೆನೆ ಕುಂಠಿತವಾಗಿದ್ದೇ ಬೆಲೆ ಏರಿಕೆಗೆ ಕಾರಣವಾಗಿತ್ತು. ಸುಡುಬಿಸಿಲು ಹಾಗೂ ಅಂತರ್ಜಲ ಬತ್ತಿ ಹೋದ ಕಾರಣ ನೀರಿನ ಸಮಸ್ಯೆ ತಲೆದೂರಿದ್ದಲ್ಲದೆ, ತೆಂಗಿನ ಮರಗಳಿಗೆ ನುಸಿರೋಗ, ಕಾಂಡಸೋರುವ ರೋಗ ಹಾಗೂ ಸುಳಿ ಒಣಗುವ ರೋಗ ವ್ಯಾಪಿಸಿ ಸುಳಿ ಒಣಗಿ ನೆಲಕ್ಕುರುಳುವ ತೆಂಗನ್ನು ಉಳಿಸಿಕೊಳ್ಳುವುದೇ ರೈತರಿಗೆ ದುಸ್ಥರವಾಗಿತ್ತು. ತೆಂಗನ್ನು ತೊರೆದು ಇನ್ನಿತರ ಬೆಳೆಗಳತ್ತ ಮುಖಮಾಡುವಂತಾಗಿತ್ತು. ತೆಂಗಿನ ಸ್ಥಾನ ದಾಳಿಂಬೆ ಆಕ್ರಮಿಸಿ ತೆಂಗು ಕಡಿಮೆಯಗುವಂತೆ ಸ್ಥಿತಿಯಲ್ಲಿ ಕೊಬ್ಬರಿ ಕೈಹಿಡಿದಿದ್ದು ರೈತರಲ್ಲಿ ಸಂತಸ ಮೂಡಿಸಿದೆ.

ಇಂತಹ ವಿಷಮ ಸ್ಥಿತಿಯಲ್ಲಿ ಕೊಬ್ಬರಿಗೆ ಉತ್ತಮ ಬೆಲೆ ಬಂದ ಹಿನ್ನಲೆಯಲ್ಲಿ ಮತ್ತೆ ತೆಂಗಿನ ಮರಗಳ ಆರೈಕೆಗೆ ಬೆಳೆಗಾರರು ಮತ್ತೆ ಮುಂದಾಗಿದ್ದು, ಇದೀಗ ಮತ್ತೆ ಕೊಬ್ಬರಿಗೆ ಬೆಲೆ ಇಳಿಕೆಯಾಗುತ್ತಾ ಸಾಗುತ್ತಿದ್ದು, ಮತ್ತೆಲ್ಲಿ ಈ ಹಿಂದೆಯಿದ್ದ ನಾಲ್ಕೈದು ಸಾವಿರ ರೂನತ್ತ ಬಂದು ಬಿಡುತ್ತದೆ ಎಂಬ ಭಯ ಮೂಡುವಂತಾಗಿದೆ.

ಕೊಟ್ಯಾಂತರ ರೂಪಾಯಿ ವಹಿವಾಟಿನ ಕೊಬ್ಬರಿ ಮಾರುಕಟ್ಟೆಯ ಬೆಲೆ ನಿಯಂತ್ರಣ ಹೆಚ್ಚುಕಮ್ಮಿ ರವಾನೆದಾರರ ಕೈಯಲ್ಲೇ ಇದ್ದು,ಇತ್ತೀಚೆಗೆ ಇ-ಟೆಂಡರ್ ಮೂಲಕ ವಹಿವಾಟು ಪ್ರಾರಂಭವಾಗಿದ್ದೇ ಕೊಬ್ಬರಿ ಬೆಲೆ ದಿಢೀರ್ ಹೆಚ್ಚಳಕ್ಕೆ ಮೂಲ ಕಾರಣ ಎನ್ನಲಾಗುತ್ತಿದೆ.


ಒಟ್ಟಾರೆ ಒಂದು ಸಮಯದಲ್ಲಿ ಉತ್ತಮ ಬೆಲೆಯಿಲ್ಲದೆ ಸೂರಗಿದ್ದ ಕೊಬ್ಬರಿಗೆ ಅದೃಷ್ಠವೆಂಬಂತೆ ಉತ್ತಮ ಬೆಲೆ ಬಂದಿರುವುದು ಆಶಾದಾಯಕ ಬೆಳೆಣಿಗೆಯಾಗಿದ್ದರೂ ಸಹ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗಲಿದೆಯೇ ಎಂದು ಕಾಯುವ ಸ್ಥಿತಿ ರೈತರದ್ದಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...