ವಿಷಯಕ್ಕೆ ಹೋಗಿ

ಕೊನೆಗೂ ಎತ್ತಂಗಡಿಯಾಗಲಿದೆ ವಿವಾದಿತ ಲಿಕ್ಕರ್ ಶಾಪ್ : ಡಿಸೆಂಬರ್ 28 ರವರೆಗೆ ಮಾತ್ರ ಗಡುವು

        ಕಳೆದ ಅನೇಕ ವರ್ಷಗಳಿಂದ ಪಟ್ಟಣದ ಹೃದಯಭಾಗದಲ್ಲಿದ್ದ ಶ್ರೀರಂಗನಾಥ ಲಿಕ್ಕರ್ ಶಾಪ್‍ನ ಸ್ಥಳಾಂತರಕ್ಕೆ ನಡೆದಿದ್ದ ಕಾನೂನು ಹೋರಾಟಗಳೆಲ್ಲಾ ಅಂತೂ ಕೊನೆಗೊಂಡಿದ್ದು ಇದೀಗ ಅಬಕಾರಿ ಉಪ ಆಯುಕ್ತರು ಸ್ಥಳಾಂತರಕ್ಕೆ ಅಂತಿಮ ಆದೇಶ ಹೊರಡಿಸಿದ್ದು, ಸ್ಥಳಾಂತರಕ್ಕೆ ಕ್ಷಣಗಣನೆ ನಡೆದಿದೆ.
      ಏನಿದು ವಿವಾದ : ಪಟ್ಟಣದ ಹುಳಿಯಾರಮ್ಮ ದೇವಾಲಯದ ಹತ್ತಿರದ ದಿಟೌನ್ ಕೋಪರೇಟಿವ್ ಸೊಸೈಟಿಯ ಕಟ್ಟಡದಲ್ಲಿ ಎನ್.ಜಿ.ನಾಗರಾಜರಾವ್ ಅವರಿಗೆ ಸೇರಿದ್ದ ಮದ್ಯದಂಗಡಿ ಕಳೆದ 40 ವರ್ಷಗಳಿಂದ ಇದ್ದು, ಅಬಕಾರಿ ನಿಯಮ ಉಲ್ಲಂಘಿಸಿ ಆಕ್ಷೇಪಣಾರ್ಹ ಸ್ಥಳದಲ್ಲಿರುವ ಇದನ್ನು ತೆರವುಗೊಳಿಸುವಂತೆ ಕಟ್ಟಡದ ಮಾಲೀಕರಾದ ಟೌನ್ ಕೋಅಪರೇಟಿವ್ ಸೊಸೈಟಿಯವರು 2002 ರಿಂದ ಕಾನೂನು ಹೋರಾಟ ನಡೆಸುತ್ತಾ ಬಂದಿದ್ದರು.
ಹುಳಿಯಾರು ಪಟ್ಟಣದಲ್ಲಿ ವಿವಾದಿತ ಸ್ಥಳದಲ್ಲಿರುವ ರಂಗನಾಥ ಲಿಕ್ಕರ್ ಶಾಪ್.
ಸನ್ನದು ಸ್ಥಳವು ಜನನಿಬಿಡ ಸ್ಥಳವಾಗಿದ್ದು,ಪಕ್ಕದಲ್ಲೇ ನಾಲ್ಕು ದೇವಾಲಯಗಳು,ಸಾರ್ವಜನಿಕ ಆಸ್ಪತ್ರೆ ಅಲ್ಲದೆ ಹೆದ್ದಾರಿಯು ಹಾದುಹೋಗಿದ್ದು ಅಬಕಾರಿ ನಿಯಮದ ಷರತ್ತುಗಳು ಉಲ್ಲಂಘಿಸಿ ಲಿಕ್ಕರ್ ಶಾಪ್ ನಡೆಯುತ್ತಿದ್ದು ಅದನ್ನು ಸ್ಥಳಾಂತರಿಸುವಂತೆ ಪಟ್ಟುಹಿಡಿದಿದ್ದರು.
       ಹುಳಿಯಾರಮ್ಮ ದೇವಸ್ಥಾನ ಸಮಿತಿ,ರಂಗನಾಥಸ್ವಾಮಿ ದೇವಾಲಯ ಟ್ರಸ್ಟ್,ಬೀರಲಿಂಗೇಶ್ವರ ದೇವಾಲಯ ಸಮಿತಿ , ಸೀತಾರಾಮ ಪ್ರತಿಷ್ಠಾನ ಟ್ರಸ್ಟ್, ಕರ್ನಾಟಕ ರಕ್ಷಣಾ ವೇದಿಕೆ ಘಟಕ,ಜಯಕರ್ನಾಟಕ ಘಟಕ, ರೈತಸಂಘದವರು, ಪಂಚಾಯ್ತಿ ಸದಸ್ಯರು ಸಹ ಸೊಸೈಟಿಯ ಹೋರಾಟಕ್ಕೆ ಕೈಜೋಡಿಸಿ ಲಿಕ್ಕರ್ ಶಾಪ್ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದರು.
ಅಬಕಾರಿ ನಿಯಮದ ಅನ್ವಯ ದೇವಾಲಯಗಳಿಂದ 100 ಮೀ ಒಳಗೆ ಹಾಗೂ ರಾಷ್ಟ್ರೀಯಹೆದ್ದಾರಿಯಿಂದ 220 ಮೀ ಒಳಗೆ ಯಾವುದೇ ಮದ್ಯದಂಗಡಿ ಇರಬಾರದೆಂಬ ನಿಯಮವನ್ನು ಎತ್ತಿ ಹಿಡಿದು ಸನ್ನದನ್ನೇ ರದ್ದು ಪಡಿಸಬೇಕೆಂದು ಅಬಕಾರಿ ಸಚಿವರವರೆಗೂ ಪ್ರಕರಣ ಸಾಗಿತ್ತು.
       ಆ ದೂರಿನ ಅನ್ವಯ ವಿಚಾರಣೆಗಳೂ ಸಹ ನಡೆಯುತ್ತಾ ಸಾಗಿ, ವಿವಾದ ತಾರಕಕ್ಕೇರಿ ಅಬಕಾರಿ ಡಿಸಿಯವರೇ ಖುದ್ದು ಸ್ಥಳಕ್ಕೆ ಬಂದು ಆಳತೆ ಮಾಡಿ ಹೋಗುವಂತಾಗಿದ್ದರೂ ಸಹ ಒಂದಲ್ಲ ಒಂದು ತಕರಾರು ನಡೆದು ಸ್ಥಳಾಂತರ ಕಾರ್ಯ ನಡೆಯದೆ ಹಾಗೆಯೇ ಮುಂದೋಗುತ್ತಿತ್ತು.ಇದೀಗ ಕೊನೆಗೂ ವಿವಾದಿತ ಸ್ಥಳದಲ್ಲಿದ್ದ ಮದ್ಯದಂಗಡಿಗೆ ಕೊನೆಗಾಲ ಬಂದಿದೆ.
ಸನ್ನದನ್ನು ಸ್ಥಳಾಂತರಿಸುವಂತೆ ಹೊರಡಿಸಿರುವ ಆದೇಶ ಪ್ರತಿ.
         ದೂರು ಪ್ರತಿದೂರು, ಹೇಳಿಕೆ ಪ್ರತಿಹೇಳಿಕೆ ಇವುಗಳೆಲ್ಲಾ ವಿಚಾರಣೆ ನಡೆದು ತಹಸೀಲ್ದಾರ್ ವರದಿ, ತಾಲ್ಲೂಕು ಹಾಗೂ ಜಿಲ್ಲಾ ನೊಂದಣಾಧಿಕಾರಿಗಳ ವರದಿ, ಚಿ.ನಾ.ಹಳ್ಳಿ ಅಬಕಾರಿ ನಿರೀಕ್ಷಕರ ವರದಿ,ತಿಪಟೂರು ಅಬಕಾರಿ ಉಪಅಧೀಕ್ಷಕರ ವರದಿ, ಹೆದ್ದಾರಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ ಇವರುಗಳ ವರದಿ ಆದರಿಸಿ ಅಂತಿಮವಾಗಿ ಜಿಲ್ಲಾ ಅಬಕಾರಿ ಉಪ ಆಯುಕ್ತರು ಡಿಸೆಂಬರ್ 28ರ ಒಳಗೆ ಬೇರೊಂದು ನಿರಾಕ್ಷೇಪಣಾ ಸ್ಥಳಕ್ಕೆ ಸ್ಥಳಾಂತರಿಸಲು ಆದೇಶ ಹೊರಡಿಸಿದ್ದಾರೆ.
        ಸಾರ್ವಜನಿಕ ಸ್ಥಳದಲ್ಲಿದ್ದ ಮದ್ಯದಂಗಡಿ ತೆರವಿಗೆ ಅಬಕಾರಿ ಡಿಸಿಯವರು ಹೊರಡಿಸಿರುವ ಆದೇಶವನ್ನು ಪಟ್ಟಣದ ದೇವಾಲಯ ಸಮಿತಿಯವರು, ಸಂಘ ಸಂಸ್ಥೆಯವರು ,ಸಾರ್ವಜನಿಕರು ಶ್ಲಾಘಿಸಿದ್ದಾರೆ. ಅಬಕಾರಿ ನಿರೀಕ್ಷಕ ವಿಜಯ್ ಕುಮಾರ್, ಉಪನಿರೀಕ್ಷಕ ಜಗದೀಶ್ ಮತ್ತು ಸಿಬ್ಬಂದಿಯವರು ಶುಕ್ರವಾರ ಖುದ್ದಾಗಿ ಬಂದು ಲಿಖಿತ ಆದೇಶ ಪ್ರತಿಯನ್ನು ಜಾರಿ ಮಾಡಿ ಹೋಗಿದ್ದಾರೆ.
---------
       ವಿವಾದಿತ ಸ್ಥಳದಲ್ಲಿದ್ದ ಈ ಮದ್ಯದಂಗಡಿಯಿಂದ 46.4 ಮೀ ಅಂತರದಲ್ಲಿ ಗ್ರಾಮದೇವತೆ ಹುಳಿಯಾರಮ್ಮ ದೇವಿ ದೇವಾಲಯ, 96.3 ಮೀ ಅಂತರದಲ್ಲಿ ಮುಜರಾಯಿಗೆ ಸೇರಿದ ಪುರಾಣ ಪ್ರಸಿದ್ದ ಶ್ರೀರಂಗನಾಥಸ್ವಾಮಿ ಸನ್ನಿಧಿ, 93.7 ಮೀ ದೂರದಲ್ಲಿ ಬೀರಲಿಂಗೇಶ್ವರ ಸ್ವಾಮಿ ದೇವಾಲಯ ಹಾಗೂ 116 ಮೀ ಅಂತರದಲ್ಲಿ ಸರ್ಕಾರಿ ಆಸ್ಪತ್ರೆ ಹಾಗೂ ಬೀದರ್ ಶ್ರೀರಂಗಪಟ್ಟಣ ಹೆದ್ದಾರಿಯಿಂದ 116 ಮೀ ಅಂತರದಲ್ಲಿದ್ದು ಕರ್ನಾಟಕ ಅಬಕಾರಿ ಸನ್ನದುಗಳು 1967 ನಿಯಮ 5ರಂತೆ ಅಕ್ಷೇಪಣಾ ಸ್ಥಳದಲ್ಲಿರುತ್ತದೆ.

------------ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.