ಹುಳಿಯಾರು ಪಟ್ಟಣದ ವಸಂತನಗರ ಬಡಾವಣೆಯ ಶ್ರೀಕಾಳಿಕಾಂಭ ದೇವಿ ದೇವಾಲಯದಲ್ಲಿ ಮಂಗಳವಾರ ಸಂಜೆ ವಿಶ್ವಕರ್ಮ ಸಮುದಾಯದವರಿಂದ ಕಡೇ ಕಾರ್ತಿಕದ ದೀಪೋತ್ಸವ ಕಾರ್ಯ ನಡೆಯಿತು.
![]() |
| ಹುಳಿಯಾರಿನ ಶ್ರೀಕಾಳಿಕಾಂಭ ದೇವಿ ದೇವಾಲಯದಲ್ಲಿ ವಿಶ್ವಕರ್ಮ ಸಮುದಾಯದವರಿಂದ ದೀಪೋತ್ಸವ ನಡೆಯಿತು. |
ಕಾಳಿಕಾಂಭದೇವಿಗೆ ಮಂಗಳವಾರ ಮುಂಜಾನೆ ಅಭಿಷೇಕ,ಅರ್ಚನೆ ನಡೆಸಿ, ಸಂಜೆ ವೇಳೆಗೆ ದೇವಾಲಯದಲ್ಲಿನ ಅಗ್ನಿಕುಂಡದ ಸುತ್ತ ದೀಪಗಳನ್ನು ಹಚ್ಚಿ, ರಂಗೋಲಿಯಿಟ್ಟು ಅಲಂಕರಿಸಲಾಗಿತ್ತು. ಉತ್ಸವಮೂರ್ತಿ ದೇವಿಯನ್ನು ಸಕಲ ವಾದ್ಯ ಸಮೇತ ಹೊರಡಿಸಿ ದೀಪವನ್ನು ಅರ್ಧಕ್ಕೆ ಇಳಿಸಿ ಮಹಾಮಂಗಳಾರತಿ ನಡೆಸಲಾಯಿತು. ಈ ವೇಳೆ ಅಧ್ಯಕ್ಷರಾದ ಅಚಾರ್ ರಮೇಶಣ್ಣ,ಭಗವಂತಾಚಾರ್, ಚಂದ್ರಶೇಖರಾಚಾರ್,ಮೂರ್ತಿ,ಲಕ್ಷ್ಮಿನಾರಾಯಣ, ನಟೇಶ್, ವಸಂತನಗರ ಬಡಾವಣೆಯ ನಿವಾಸಿಗಳು ಸೇರಿದಂತೆ ವಿಶ್ವಕರ್ಮ ಸಮುದಾಯದ ಅಪಾರ ಸಂಖ್ಯೆ ಭಕ್ತಾದಿಗಳು ಆಗಮಿಸಿದ್ದು ಅಲಂಕೃತ ದೇವಿಯ ದರ್ಶನ ಪಡೆದರು. ವಿಶ್ವಕರ್ಮ ಸಮುದಾಯದವರು ಭಕ್ತರಿಗಾಗಿ ಪ್ರಸಾದ ವಿನಿಯೋಗ ನಡೆಸಿದರು.
.jpg)
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ