ವಿಷಯಕ್ಕೆ ಹೋಗಿ

ನಡಿಗೆ ಮೂಲಕವೇ ಸಾಗಿ ಸಿದ್ದಲಿಂಗೇಶ್ವರ ದರ್ಶನ

ಭಕ್ತಿಗೆ ಹಲವಾರು ದಾರಿಗಳಿದ್ದು, ಇವರುಗಳು ಬರೋಬ್ಬರಿ 500 ಕಿ.ಮೀ ದೂರವನ್ನು ಸುದೀರ್ಘ ಪಾದಯಾತ್ರೆ ಮಾಡುವ ಮೂಲಕ ಯಡೆಯೂರು ಸಿದ್ದಲಿಂಗೇಶ್ವರನ ದರ್ಶನ ಮಾಡುತ್ತಾ ಭಕ್ತಿಯ ಪರಾಕಾಷ್ಠೆ ಮೆರೆಯುತ್ತಿದ್ದಾರೆ. ಕಳೆದ 39 ವರ್ಷದಿಂದ ಗದಗ, ಬಾಗಲಕೋಟೆ, ಧಾರವಾಡ,ಹಾವೇರಿ ಜಿಲ್ಲೆಗಳಿಂದ ಪಾದಯಾತ್ರೆ ಮೂಲಕ ಈ ಭಾಗದ ಭಕ್ತಾದಿಗಳು ಜಾತಿಮತ ಭೇದವಿಲ್ಲದೇ ಸಿದ್ದಲಿಂಗನ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.
ಹುಳಿಯಾರಿನ ಶ್ರೀವೀರಭದ್ರಸ್ವಾಮಿ ದೇವಸ್ಥಾನಕ್ಕೆ ಭಾನುವಾರ ಸಂಜೆ ಆಗಮಿಸಿದ್ದ ಉತ್ತರ ಕರ್ನಾಟಕ ಭಾಗದ ಎಡೆಯೂರು ಸಿದ್ಧಲಿಂಗೇಶ್ವರನ ದರ್ಶನ ಪಾದಯಾತ್ರೆಗಳು ಪ್ರವಚನ ಆಲಿಸುತ್ತಿರುವುದು.
ಧೋತಿ, ತಲೆಗೆ ಟೋಪಿ, ಕೊರಳಿಗೆ ಕೆಂಪು ವಸ್ತ್ರ ಧರಿಸಿ ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿಯ ಪದಗಳನ್ನು ತಾಳ ಹಾಕಿ ಹಾಡುತ್ತಾ, ಸಿದ್ಧಲಿಂಗೇಶ್ವರನ ಪೆÇೀಟೋ ಹಿಡಿದು, ವೃದ್ದರು,ವಯಸ್ಕರು ಎನ್ನದೆ ಉತ್ತರ ಕರ್ನಾಟಕದ ಹಲವು ಪ್ರದೇಶಗಳ 500ರಕ್ಕೂ ಹೆಚ್ಚು ಪಾದಯಾತ್ರಿಗಳು ಲೋಕಕಲ್ಯಾಣದ ಸದುದ್ದೇಶದ ಸಂಕಲ್ಪ ಹೊಂದಿ ಪಾದಯಾತ್ರೆ ಮಾಡುತ್ತಿದ್ದಾರೆ.
ನವಲಗುಂದದ ಶಲವಡಿ,ದಾಟನಾಳದಿಂದ ಇದೇ ನವಂಬರ್ 5 ರಿಂದ ಪ್ರಾರಂಭವಾಗಿರುವ ಪಾದಯಾತ್ರೆ ನವಂಬರ್ 19 ರಂದು ತುಮಕೂರು ಜಿಲ್ಲೆಯ ಯಡೆಯೂರು ತಲುಪಿ, ನವಂಬರ್ 22 ರಂದು ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿಯ ಕಾರ್ತಿಕ ಮಾಸದ ಲಕ್ಷ ದೀಪೆÇೀತ್ಸವದಲ್ಲಿ ಭಾಗವಹಿಸುವುದರ ಮೂಲಕ ಕೊನೆಗೊಳ್ಳಲಿದ್ದು,ಸುಮಾರು 500 ಕಿ.ಮೀ ದೂರದ್ದಾಗಿದೆ.
ಶಲವಡಿಯ ಶ್ರಿಶೈಲಪ್ಪ ದಿವಂಗತ ಶಿರೋಳ ಅವರ ನೇತೃತ್ವದಲ್ಲಿ ಎಂಟತ್ತು ಮಂದಿಯಿದ್ದ ಪ್ರಾರಂಗೊಂಡ ಪಾದಯಾತ್ರೆ ಇಂದು 500 ರಕ್ಕೂ ಹೆಚ್ಚು ಪಾದಯಾತ್ರಿಗಳನೊಂದಿ ಎಡೆಯೂರಿನ ಸಿದ್ಧಲಿಂಗಸ್ವಾಮಿ ಕ್ಷೇತ್ರದ ಕಾರ್ತಿಕ ಲಕ್ಷದೀಪೆÇೀತ್ಸವ ಕಾರ್ಯಕ್ರಮಕ್ಕೆ ಹೋಗುತ್ತಿರುವುದು ಅವಿಸ್ಮರಣೀಯ. ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ ಗದಗಿನಲ್ಲಿದ್ದು ಅಲ್ಲಿಂದ ಎಡೆಯೂರಿನ ಸಿದ್ಧಲಿಂಗಸ್ವಾಮಿ ಕ್ಷೇತ್ರದ ಕಾರ್ತಿಕ ಲಕ್ಷದೀಪೆÇೀತ್ಸವ ಕಾರ್ಯಕ್ರಮಕ್ಕೆ ಶರಣ ಸಮೂಹದೊಂದಿಗೆ ಪಾದಯಾತ್ರೆ ಮೂಲಕ ಆಗಮಿಸುವುದು ಹಿಂದಿನಿಂದ ನಡೆದು ಬಂದಿರುವ ಸಂಪ್ರದಾಯ.
ಯಡಿಯೂರಿನಲ್ಲಿ ನಿರ್ವಿಕಲ್ಪ ಸಮಾಧಿಗೊಂಡಿರುವ ಸಿದ್ದಲಿಂಗೇಶ್ವರರು ಈಗಲೂ ಅಲ್ಲಿ ಚೇತನ ಸ್ವರೂಪಿಗಳಾಗಿದ್ದಾರೆಂಬ ನಂಬಿಕೆಯೆ ಈ ಕ್ಷೇತ್ರದ ಪ್ರಭಾವ ಹೆಚ್ಚಲು ಕಾರಣ ಎನ್ನಲಾಗಿದೆ.ಶಲವಡಿಯ ಪೂಜ್ಯರಾದ ಶ್ರಿಶೈಲಪ್ಪ ಶಿರೂಳ ಅವರು ಯಡಿಯೂರು ಕ್ಷೇತ್ರಕ್ಕೆ ಪಾದಯಾತ್ರೆ ಪರಂಪರೆಗೆ ಚಾಲನೆ ನೀಡಿದವರಾಗಿದ್ದು ಇಂತಹ ಸುಕ್ಷೇತ್ರಕ್ಕೆ ಕಳೆದ 39 ವರ್ಷಗಳಿಂದಲೂ ನಿರಂತರವಾಗಿ ಪಾದ ಯಾತ್ರೆ ನಡೆಸುತ್ತಿರುವ ಭಕ್ತಪಡೆಯ ಕಾರ್ಯ ಅಭಿನಂದನೀಯ.
ಪಾದಯಾತ್ರೆಯ ಯಾತ್ರಿಗಳು ನಿತ್ಯ 35 ರಿಂದ 40 ಕಿ.ಮೀ. ಕ್ರಮಿಸಿ, ಸಂಜೆ ನಂತರ ಮೊದಲೇ ನಿಗದಿಯಾದ ಸ್ಥಳಗಳಲ್ಲಿ,ದೇವಾಲಯಗಳಲ್ಲಿ ತಂಗುತ್ತಾರೆ. ವಿಶ್ರಮಿಸಿಕೊಂಡು, ಭಜನೆಯನ್ನು ನಡೆಸಿ,ಭಕ್ತಾಧಿಗಳು ನೀಡುವ ಪ್ರಸಾದವನ್ನು ಸ್ವೀಕರಿಸಿ, ಮರುದಿನ ಮುಂಜಾನೆ ತಮ್ಮ ಪಾದಯಾತ್ರೆಯನ್ನು ಮುಂದುವರೆಸುತ್ತಾರೆ.
ಭಕ್ತಿಯಿಂದ ನೆನೆಸಿಕೊಂಡೆ ಬಡತನ ನೀಗುತ್ತದೆ, ಇಷ್ಟಾರ್ಥ ಸಿದ್ದಿಯಾಗುತ್ತದೆ ಎನ್ನುತ್ತಾರೆ 79 ವರ್ಷದ ಹಿರಿಯ ಬೂದಪ್ಪ ನಾಯ್ಕರ್.
ಪಾದಯಾತ್ರೆಗೆ ಅವರವರೆ ತಮ್ಮ ಸ್ವಯಿಚ್ಚೆಯಿಂದ ಎಡೆಯೂರು ಸಿದ್ಧಲಿಂಗನ ಮೇಲಿನ ಭಕ್ತಿಯಿಂದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ನೆಡಿಗೆಯಿಂದ ದೇಹದಲ್ಲಿನ ಕಲ್ಮಶದ ಕರಗಿ ದೇಹ ಹಗುರಾಗುತ್ತದೆ ಎನ್ನುತ್ತಾರೆ ಸತತ 39 ವರ್ಷದ ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ ಮಂಡಳಿಯ ಚೇರಮನ್ನರಾದ ಚಂದ್ರಶೇಖರ ಗಡಾದ.
ನವಲಗುಂದ ಶಲವಡಿಯಿಂದ ಪ್ರಾರಂಭಗೊಂಡ ಪಾದಯಾತ್ರೆಯಲ್ಲಿ ದಾಟನಾಳ,ಶಾನವಾಡ,ಪಡೇಸೂರ,ಖನ್ನೂರ,ನಾಯ್ಕನೂರ,ಯಾವಗಲ್ಲ,ಕೋತಬಾಳ ಬೆಳವಣಕಿ, ಇಂಗಳಹಳ್ಳಿ,ಹೆಬ್ಬಾಳ, ನಿರಲಗಿ,ಬನ್ನಿಕೊಫ್ಫ,ಇಬ್ರಾಹಿಮಪೂರ,ಅಳಗವಾಡಿ,ಅಕ್ಕಿಗುಂದ,ಬಟ್ಟೂರ,ಗದಗ,ಬಾವನೂರ,ಬಾಗಲಕೋಟೆ,ಅರಕೇರಿ,ನೆಲವಡಿ,ಕಂಗವಳ್ಳಿ, ಹಾಗಲಕೇರಿ,ಮೇವುಂಡಿ ಸ್ಥಳಗಳ ಯಾತ್ರಿಕರಿದ್ದಾರೆ.
ಹೊಸದುರ್ಗದ ಕೆಲ್ಲೋಡಿನ ಮಾರ್ಗವಾಗಿ ಹುಳಿಯಾರಿಗೆ ಭಾನುವಾರ ಸಂಜೆ ಶ್ರೀವೀರಭದ್ರಸ್ವಾಮಿ ದೇವಾಲಯದಲ್ಲಿಗೆ ಪಾದಯಾತ್ರಿಗಳು ಆಗಮಿಸಿದರು.

ಬ್ಯಾಂಕ್ ಮರುಳಯ್ಯ ದಂಪತಿಗಳು, ಜಲ್ಲಿಗೌಡರ ರುದ್ರಯ್ಯ, ಶಿಕ್ಷಕ ಜಗದೀಶ್,ಚನ್ನಬಸಪ್ಪ, ಯೋಗಮೂರ್ತಿ ಇತರರರು ಪಾದಯಾತ್ರಿಕರನ್ನು ಸತ್ಕರಿಸಿದರು. ಪಂಚಾಕ್ಷರಿ ಹಿರೇಮಠ್ ಅವರಿಂದ ಜ್ಞಾನದಾಸೋಹ ನಡೆಯಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...