ವಿಷಯಕ್ಕೆ ಹೋಗಿ

ಅನ್ನದಾತನ ಕೈಹಿಡಿದ ಹಿಂಗಾರುಬೆಳೆ ಸಾವೆ : ಹುಳಿಯಾರು ಎಪಿಎಂಸಿ ಸಾವೆಗೆ ಹೆಸರುವಾಸಿ

ಹುಳಿಯಾರು  ಹೋಬಳಿ ವ್ಯಾಪ್ತಿಯ ಸಾಕಷ್ಟು ರೈತರು ಹಿಂಗಾರು ಬೆಳೆಯಾದ ರಾಗಿಗೆ ಹೆಚ್ಚು ಪ್ರಾಶಸ್ತ್ಯ ಕೊಡುವ ಹಾಗೆ ಸಾವೆಗೂ ಅಷ್ಟೇ ಪ್ರಾಶಸ್ತ್ಯ ಕೊಟ್ಟು ಬೆಳೆಯುವ ಪರಿಪಾಟವಿದ್ದು, ಈ ಬಾರಿ ತಡವಾಗಿ ಮಳೆಯಾದ ಕಾರಣ ರಾಗಿ ಕೈಕೊಟ್ಟರೂ ಸಹ ಹಿಂಗಾರುಬೆಳೆಯಾಗಿ ಸಾವೆ ರೈತರಿಗೆ ನೆರವಾಗಿದೆ. ಹೋಬಳಿ ವ್ಯಾಪ್ತಿಯಲ್ಲಿ 300 ಹೆಕ್ಟೆರ್ ನಷ್ಟು ಸಾವೆ ಬಿತ್ತಲಾಗಿದ್ದು ಉತ್ತಮವಾಗಿ ಬೆಳೆ ಬಂದಿದ್ದು, ಭರದಿಂದ ಕಟಾವು ಸಾಗಿದ್ದು ಅನ್ನದಾತನ ಕೈಹಿಡಿದಿದೆ.
ಹುಳಿಯಾರಿ ಎಪಿಎಂಸಿಯ ಅಂಗಡಿಯೊಂದರಲ್ಲಿ ಸಾವೆ ಮಾರಾಟ ಮಾಡುತ್ತಿರುವ ರೈತ.
ರಾಗಿ,ಸಾವೆ, ನವಣೆ,ಸಜ್ಜೆ ಮುಂತಾದವುಗಳಲ್ಲಿ ಅಧಿಕ ಪೋಷ್ಟಿಕಾಂಶವಿದ್ದು ಸಿರಿಧಾನ್ಯವೆಂದು ಪರಿಗಣಿಸಿರುವ ಸಾವೆ ಎಲ್ಲಾ ಹಮಾನಕ್ಕೂ ಹೊಂದಿಕೊಂಡು ಬೆಳೆಯುವ, ಕೀಟಬಾಧೆಯಿಂದ ಮುಕ್ತವಾಗಿರುವ ಬೆಳೆಯಾಗಿದ್ದು, ಕಡಿಮೆ ಖರ್ಚಿನಲ್ಲಿ ಲಾಭದ ಬೆಳೆಯಾಗಿದೆ. ಇದನ್ನು ತಾಲ್ಲೂಕಿನ ಹುಳಿಯಾರು, ಶೆಟ್ಟಿಕೆರೆ ಹೋಬಳಿ ಸೇರಿದಂತೆ ಹೊಸದುರ್ಗ, ಕಡೂರು,ತಿಪಟೂರು,ಅರಸೀಕೆರೆ ಭಾಗದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ.
ಅಧಿಕ ಪೋಷ್ಠಿಕಾಂಶವಿರುವ ಸಾವೆ ಬಳಸಿದಲ್ಲಿ ಡಯಾಬಿಟಿಸ್, ಬಿಪಿ, ಬೊಜ್ಜು ಮುಂತಾದವುಗಳು ನಿಯಂತ್ರಣಕ್ಕೆ ಬರುತ್ತವೆ. "ಸಾವಕ್ಕಿ ಅನ್ನ ಉಂಡರೆ ಮೊಣಕಾಲು ನೋವು ಇಲ್ಲ " ಎಂಬ ಮಾತು ರೈತರಲ್ಲಿ ಚಾಲ್ತಿಯಲ್ಲಿದ್ದು , ಸಾವೆ ಬೆಳೆಯನ್ನು ಆಗಸ್ಟ್ ತಿಂಗಳಿನಲ್ಲಿ ಬಿತ್ತನೆ ಮಾಡಲಾಗುವುದಿದ್ದು , ಕಡಿಮೆ ಮಳೆಯಲ್ಲಿ ಬೆಳೆಯುವ ಇವು ಹೆಚ್ಚಿನ ಆರೈಕೆಯಿಲ್ಲದೆ, ರೋಗರುಜಿನಿ ಭಯವಿಲ್ಲದ ಬೆಳೆಯಾಗಿದೆ.
ಸದ್ಯ ಮಾರುಕಟ್ಟೆಯಲ್ಲಿ ರಾಗಿ ಪ್ರತಿಕ್ವಿಂಟಾಲ್ ಗೆ 1300 ರೂ ಹಾಗೂ ಸಾವೆ ಪ್ರತಿಕ್ವಿಂಟಾಲ್ ಗೆ 2300ರೂ ಇದ್ದು, ರಾಗಿಗಿಂತ ಸಾವೆಗೆ ಅಧಿಕ ಬೆಲೆಯಿದ್ದರೂ ಸಹ ಈ ಭಾಗದ ರೈತರು ಸಾವೆಗಿಂತ ಹೆಚ್ಚಾಗಿ ರಾಗಿ ಬೆಳೆಯತ್ತ ತಮ್ಮ ಒಲವು ತೋರುತ್ತಾರೆ. ರಾಗಿನಂತರ ನವಣೆ ಬದಲು ಸಾವೆಗೆ ಹೆಚ್ಚಿನ ಒತ್ತು ಕೊಡುತ್ತಿದ್ದಾರೆ. ಅಧಿಕ ಬೆಲೆ ಬಂದರೂ ಕೂಡ ಸಾವೆ ಬದಲು ರಾಗಿಗೆ ಒತ್ತುಕೊಡಲು ಕಾರಣ ಸಾವೆ ಹುಲ್ಲನ್ನು ರಾಸುಗಳಿಗೆ ಮೇವಾಗಿ ಹಾಕುವುದಿಲ್ಲ. ರಾಗಿಹುಲ್ಲಿನಜೊತೆ ಸೇರಿಸಿ ಹಾಕಬೇಕಿದೆ. ಇದರಿಂದ ಸಾವೆಗೆ ಹೆಚ್ಚು ಬೆಲೆಯಿದ್ದರೂ ರಾಸುಗಳ ಮೇವಿನ ದೃಷ್ಠಿಯಿಂದ ಈ ಭಾಗದಲ್ಲಿ ರಾಗಿಗೆ ಸಾವೆಗಿಂತ ಅಧಿಕ ಪ್ರಾಶಸ್ತ್ಯವಿದೆ.
ಹುಳಿಯಾರು ಮಾರುಕಟ್ಟೆ ಸಾವೆಗೆ ಹೆಸರುವಾಸಿಯಾಗಿದ್ದು ರಾಗಿಯಷ್ಟೇ ಬೇಡಿಕೆ ಸಾವೆಗಿದ್ದು ರಾಗಿಗಿಂತಲೂ ಅಧಿಕ ಬೆಲೆ ಸಾವೆಗೆ ಸಿಗುತ್ತಿದೆ.ಕಳೆದೊಂದು ವಾರದಿಂದ ಮಾರುಕಟ್ಟೆಗೆ ಸಾವೆ ಆವಕ ಆರಂಭವಾಗಿದ್ದು , ಸುಮಾರು 900 ಕ್ವಿಂಟಾಲ್ ಸಾವೆ ಮಾರಾಟವಾಗಿದ್ದು, ಗರಿಷ್ಠ 2500, ಕನಿಷ್ಠ 2300 ಬೆಲೆಯಲ್ಲಿ ವಹಿವಾಟು ನಡೆಯುತ್ತಿದೆ. ಡಿಸೆಂಬರ್ ನಿಂದ ಪ್ರಾರಂಭವಾಗಿ ಫೆಬ್ರವರಿ,ಮಾರ್ಚ್‍ವರೆಗೆ ಸಾವೆಯ ಆವಕ ಹೆಚ್ಚಿರುತ್ತದೆ ಎನ್ನುತ್ತಾರೆ ಇಲ್ಲಿನ ರವಾನೆದಾರರಾದ ಸಪ್ತಗಿರಿ ಟ್ರೇಡರ್ಸ್ ನ ಮಾಲೀಕ ಎಲ್.ಆರ್. ಬಾಲಾಜಿ.ಮಾರುಕಟ್ಟೆಯಲ್ಲಿ 12 ರಿಂದ 15 ಮಂದಿ ಸಾವೆ ಖರೀದಿದಾರರಿದ್ದು , ಒಬ್ಬ ರವಾನೆದಾರರಿದ್ದು ಇಲ್ಲಿ ಖರೀದಿಯಾಗುವ ಬೆಳೆ ಪ್ರಮುಖವಾಗಿ ಕೊಲ್ಲಾಪುರ,ಪೂನಾ,ಶಹಾಪುರ,ನಾಸಿಕ್, ತಮಿಳುನಾಡಿನ ಥೇಣಿ ಭಾಗಕ್ಕೆ ರವಾನೆಯಾಗುತ್ತದೆ.
ಒಟ್ಟಾರೆ ಈ ಭಾಗದಲ್ಲಿ ಸಾಂಪ್ರದಾಯಕ ಬೆಳೆಯಾದ ರಾಗಿ ಬದಲು ದುಪ್ಪಟ್ಟು ಬೆಲೆಯ ಸಾವೆ ಬೆಳೆಯುವಂತೆ ರೈತರನ್ನು ಪ್ರೋತ್ಸಾಹಿಸುವ ಕಾರ್ಯ ನಡೆದಲ್ಲಿ , ಮಳೆಯಿಲ್ಲದಿದ್ದರೂ ಬೆಳೆ ನಷ್ಟವಿಲ್ಲದೆ ಕೈಹತ್ತುವ ಸಾವೆ ರೈತರನ್ನು ಕೃಹಿಡಿಯಲಿದೆ.
------------

ಸಾವೆ ಬಗ್ಗೆ ರೈತರಲ್ಲಿ ಅರಿವು ಮೂಡಿಸಿದ್ದು ತಿಮ್ಲಾಪುರ ಸೇರಿದಂತೆ ಹೋಬಳಿಯ ಇತರೆಡೆ 50 ಹೆಕ್ಟೇರ್ ಪ್ರದೇಶಕ್ಕಾಗುವಷ್ಟು ಸಾವೆಯನ್ನು ಪ್ರಾತ್ಯಕ್ಷಿಕೆ ಮೂಲಕ ನೀಡಿ ಸಾವೆ ಬೆಳೆಯುವಂತೆ ರೈತರನ್ನು ಕೃಷಿ ಇಲಾಖೆ ಮೂಲಕ ಉತ್ತೇಜಿಸಲಾಗಿದೆ : ತಿಪ್ಪೇಸ್ವಾಮಿ, ಸಹಾಯಕ ಕೃಷಿ ಅಧಿಕಾರಿ.
 ಬಿತ್ತನೆ ಮಾಡುವಾಗ ಮಳೆ ಕೈಕೊಟ್ಟಿದ್ದರಿಂದ ರಾಗಿ ಕೈ ಕೊಡ್ತು, ಆದರೆ ಅಪತ್ಕಾಲದಲ್ಲಿ ಸಾವೆ ನಮ್ಮ ಕೈಹಿಡಿತು. ಇದರಿಂದ ಉತ್ತಮ ಆದಾಯದ ಜೊತೆಗೆ ಹುಲ್ಲು ಸಾಕಷ್ಟು ಸಿಕ್ಕಿದೆ. ಸಾವೆಗೆ ಯಾವತ್ತೂ ಉತ್ತಮ ಬೆಲೆ ಇದ್ದೇ ಇದೆ : ಯೋಗೀಶ್ ಕಂಪನಹಳ್ಳಿ , ರೈತ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಸಂಕಷ್ಟದಲ್ಲಿದ್ದ ಬುದ್ಧಿಮಾನ್ಯ ಯುವಕನಿಗೆ ಇಮ್ರಾಜ್ ಬಳಗದಿಂದ ಆಸರೆ; ಮಾನವೀಯತೆ ಮೆರೆದ ಯುವಕರು

ಹುಳಿಯಾರು : " ಮಾನವೀಯತೆ ಎಲ್ಲಕ್ಕಿಂತ ದೊಡ್ಡದು " ಎಂಬ ಮಾತನ್ನು ಹುಳಿಯಾರಿನ ಯುವಕರ ತಂಡವೊಂದು ನಿಜ ಮಾಡಿ ತೋರಿಸಿದೆ.               ಇಲ್ಲಿನ ಎಪಿಎಂಸಿ ಆವರಣದಲ್ಲಿ ದಿಕ್ಕುತೋಚದೆ, ಅಸಹಾಯಕ ಸ್ಥಿತಿಯಲ್ಲಿದ್ದ ಬುದ್ಧಿಮಾನ್ಯ ಯುವಕನೊಬ್ಬನಿಗೆ ಆಸರೆಯಾಗುವ ಮೂಲಕ ಸ್ಥಳೀಯ ಯುವಕರು ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆ :ಹುಳಿಯಾರಿನ ಎಪಿಎಂಸಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬುದ್ಧಿಮಾನ್ಯ ಯುವಕನೊಬ್ಬ ಒಂಟಿಯಾಗಿ ಅಲೆಯುತ್ತಿದ್ದನು. ಸರಿಯಾದ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಆತ ತೀವ್ರ ಸಂಕಷ್ಟದಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಯುವಕ ಇಮ್ರಾಜ್ ಮತ್ತು ಅವರ ಸ್ನೇಹಿತರ ಬಳಗವು ತಕ್ಷಣವೇ ಆತನ ನೆರವಿಗೆ ಧಾವಿಸಿತು. ಸಕಾಲಿಕ ಸ್ಪಂದನೆ :ಯುವಕನ ಸ್ಥಿತಿಯನ್ನು ಕಂಡು ಮನನೊಂದ ಸ್ನೇಹಿತರಾದ ಇಮ್ರಾಜ್, ಜಬಿ ಉಲ್ಲಾಖಾನ್ ಫರ್ಮಾನ್, ಅಬ್ದುಲ್ಲಾ, ನವಾ ಶರೀಫ್, ಜಿಶನ್ ಹಾಗೂ ಫಯಾಜ್ ಅವರು ಮೊದಲು ಆತನಿಗೆ ಆಹಾರದ ವ್ಯವಸ್ಥೆ ಮಾಡಿದರು. ನಂತರ ಆತನ ಸುರಕ್ಷತೆಗಾಗಿ ಕ್ರಮ ಕೈಗೊಂಡರು. ಇಲಾಖೆಯ ಸುಪರ್ದಿಗೆ: ಯುವಕರ ಮನವಿಗೆ ಸ್ಪಂದಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, "ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ನಾವು ಇಲ್ಲಿಗೆ ಬಂದಿದ್ದು, ...