ವಿಷಯಕ್ಕೆ ಹೋಗಿ

ಅನ್ನದಾತನ ಕೈಹಿಡಿದ ಹಿಂಗಾರುಬೆಳೆ ಸಾವೆ : ಹುಳಿಯಾರು ಎಪಿಎಂಸಿ ಸಾವೆಗೆ ಹೆಸರುವಾಸಿ

ಹುಳಿಯಾರು  ಹೋಬಳಿ ವ್ಯಾಪ್ತಿಯ ಸಾಕಷ್ಟು ರೈತರು ಹಿಂಗಾರು ಬೆಳೆಯಾದ ರಾಗಿಗೆ ಹೆಚ್ಚು ಪ್ರಾಶಸ್ತ್ಯ ಕೊಡುವ ಹಾಗೆ ಸಾವೆಗೂ ಅಷ್ಟೇ ಪ್ರಾಶಸ್ತ್ಯ ಕೊಟ್ಟು ಬೆಳೆಯುವ ಪರಿಪಾಟವಿದ್ದು, ಈ ಬಾರಿ ತಡವಾಗಿ ಮಳೆಯಾದ ಕಾರಣ ರಾಗಿ ಕೈಕೊಟ್ಟರೂ ಸಹ ಹಿಂಗಾರುಬೆಳೆಯಾಗಿ ಸಾವೆ ರೈತರಿಗೆ ನೆರವಾಗಿದೆ. ಹೋಬಳಿ ವ್ಯಾಪ್ತಿಯಲ್ಲಿ 300 ಹೆಕ್ಟೆರ್ ನಷ್ಟು ಸಾವೆ ಬಿತ್ತಲಾಗಿದ್ದು ಉತ್ತಮವಾಗಿ ಬೆಳೆ ಬಂದಿದ್ದು, ಭರದಿಂದ ಕಟಾವು ಸಾಗಿದ್ದು ಅನ್ನದಾತನ ಕೈಹಿಡಿದಿದೆ.
ಹುಳಿಯಾರಿ ಎಪಿಎಂಸಿಯ ಅಂಗಡಿಯೊಂದರಲ್ಲಿ ಸಾವೆ ಮಾರಾಟ ಮಾಡುತ್ತಿರುವ ರೈತ.
ರಾಗಿ,ಸಾವೆ, ನವಣೆ,ಸಜ್ಜೆ ಮುಂತಾದವುಗಳಲ್ಲಿ ಅಧಿಕ ಪೋಷ್ಟಿಕಾಂಶವಿದ್ದು ಸಿರಿಧಾನ್ಯವೆಂದು ಪರಿಗಣಿಸಿರುವ ಸಾವೆ ಎಲ್ಲಾ ಹಮಾನಕ್ಕೂ ಹೊಂದಿಕೊಂಡು ಬೆಳೆಯುವ, ಕೀಟಬಾಧೆಯಿಂದ ಮುಕ್ತವಾಗಿರುವ ಬೆಳೆಯಾಗಿದ್ದು, ಕಡಿಮೆ ಖರ್ಚಿನಲ್ಲಿ ಲಾಭದ ಬೆಳೆಯಾಗಿದೆ. ಇದನ್ನು ತಾಲ್ಲೂಕಿನ ಹುಳಿಯಾರು, ಶೆಟ್ಟಿಕೆರೆ ಹೋಬಳಿ ಸೇರಿದಂತೆ ಹೊಸದುರ್ಗ, ಕಡೂರು,ತಿಪಟೂರು,ಅರಸೀಕೆರೆ ಭಾಗದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ.
ಅಧಿಕ ಪೋಷ್ಠಿಕಾಂಶವಿರುವ ಸಾವೆ ಬಳಸಿದಲ್ಲಿ ಡಯಾಬಿಟಿಸ್, ಬಿಪಿ, ಬೊಜ್ಜು ಮುಂತಾದವುಗಳು ನಿಯಂತ್ರಣಕ್ಕೆ ಬರುತ್ತವೆ. "ಸಾವಕ್ಕಿ ಅನ್ನ ಉಂಡರೆ ಮೊಣಕಾಲು ನೋವು ಇಲ್ಲ " ಎಂಬ ಮಾತು ರೈತರಲ್ಲಿ ಚಾಲ್ತಿಯಲ್ಲಿದ್ದು , ಸಾವೆ ಬೆಳೆಯನ್ನು ಆಗಸ್ಟ್ ತಿಂಗಳಿನಲ್ಲಿ ಬಿತ್ತನೆ ಮಾಡಲಾಗುವುದಿದ್ದು , ಕಡಿಮೆ ಮಳೆಯಲ್ಲಿ ಬೆಳೆಯುವ ಇವು ಹೆಚ್ಚಿನ ಆರೈಕೆಯಿಲ್ಲದೆ, ರೋಗರುಜಿನಿ ಭಯವಿಲ್ಲದ ಬೆಳೆಯಾಗಿದೆ.
ಸದ್ಯ ಮಾರುಕಟ್ಟೆಯಲ್ಲಿ ರಾಗಿ ಪ್ರತಿಕ್ವಿಂಟಾಲ್ ಗೆ 1300 ರೂ ಹಾಗೂ ಸಾವೆ ಪ್ರತಿಕ್ವಿಂಟಾಲ್ ಗೆ 2300ರೂ ಇದ್ದು, ರಾಗಿಗಿಂತ ಸಾವೆಗೆ ಅಧಿಕ ಬೆಲೆಯಿದ್ದರೂ ಸಹ ಈ ಭಾಗದ ರೈತರು ಸಾವೆಗಿಂತ ಹೆಚ್ಚಾಗಿ ರಾಗಿ ಬೆಳೆಯತ್ತ ತಮ್ಮ ಒಲವು ತೋರುತ್ತಾರೆ. ರಾಗಿನಂತರ ನವಣೆ ಬದಲು ಸಾವೆಗೆ ಹೆಚ್ಚಿನ ಒತ್ತು ಕೊಡುತ್ತಿದ್ದಾರೆ. ಅಧಿಕ ಬೆಲೆ ಬಂದರೂ ಕೂಡ ಸಾವೆ ಬದಲು ರಾಗಿಗೆ ಒತ್ತುಕೊಡಲು ಕಾರಣ ಸಾವೆ ಹುಲ್ಲನ್ನು ರಾಸುಗಳಿಗೆ ಮೇವಾಗಿ ಹಾಕುವುದಿಲ್ಲ. ರಾಗಿಹುಲ್ಲಿನಜೊತೆ ಸೇರಿಸಿ ಹಾಕಬೇಕಿದೆ. ಇದರಿಂದ ಸಾವೆಗೆ ಹೆಚ್ಚು ಬೆಲೆಯಿದ್ದರೂ ರಾಸುಗಳ ಮೇವಿನ ದೃಷ್ಠಿಯಿಂದ ಈ ಭಾಗದಲ್ಲಿ ರಾಗಿಗೆ ಸಾವೆಗಿಂತ ಅಧಿಕ ಪ್ರಾಶಸ್ತ್ಯವಿದೆ.
ಹುಳಿಯಾರು ಮಾರುಕಟ್ಟೆ ಸಾವೆಗೆ ಹೆಸರುವಾಸಿಯಾಗಿದ್ದು ರಾಗಿಯಷ್ಟೇ ಬೇಡಿಕೆ ಸಾವೆಗಿದ್ದು ರಾಗಿಗಿಂತಲೂ ಅಧಿಕ ಬೆಲೆ ಸಾವೆಗೆ ಸಿಗುತ್ತಿದೆ.ಕಳೆದೊಂದು ವಾರದಿಂದ ಮಾರುಕಟ್ಟೆಗೆ ಸಾವೆ ಆವಕ ಆರಂಭವಾಗಿದ್ದು , ಸುಮಾರು 900 ಕ್ವಿಂಟಾಲ್ ಸಾವೆ ಮಾರಾಟವಾಗಿದ್ದು, ಗರಿಷ್ಠ 2500, ಕನಿಷ್ಠ 2300 ಬೆಲೆಯಲ್ಲಿ ವಹಿವಾಟು ನಡೆಯುತ್ತಿದೆ. ಡಿಸೆಂಬರ್ ನಿಂದ ಪ್ರಾರಂಭವಾಗಿ ಫೆಬ್ರವರಿ,ಮಾರ್ಚ್‍ವರೆಗೆ ಸಾವೆಯ ಆವಕ ಹೆಚ್ಚಿರುತ್ತದೆ ಎನ್ನುತ್ತಾರೆ ಇಲ್ಲಿನ ರವಾನೆದಾರರಾದ ಸಪ್ತಗಿರಿ ಟ್ರೇಡರ್ಸ್ ನ ಮಾಲೀಕ ಎಲ್.ಆರ್. ಬಾಲಾಜಿ.ಮಾರುಕಟ್ಟೆಯಲ್ಲಿ 12 ರಿಂದ 15 ಮಂದಿ ಸಾವೆ ಖರೀದಿದಾರರಿದ್ದು , ಒಬ್ಬ ರವಾನೆದಾರರಿದ್ದು ಇಲ್ಲಿ ಖರೀದಿಯಾಗುವ ಬೆಳೆ ಪ್ರಮುಖವಾಗಿ ಕೊಲ್ಲಾಪುರ,ಪೂನಾ,ಶಹಾಪುರ,ನಾಸಿಕ್, ತಮಿಳುನಾಡಿನ ಥೇಣಿ ಭಾಗಕ್ಕೆ ರವಾನೆಯಾಗುತ್ತದೆ.
ಒಟ್ಟಾರೆ ಈ ಭಾಗದಲ್ಲಿ ಸಾಂಪ್ರದಾಯಕ ಬೆಳೆಯಾದ ರಾಗಿ ಬದಲು ದುಪ್ಪಟ್ಟು ಬೆಲೆಯ ಸಾವೆ ಬೆಳೆಯುವಂತೆ ರೈತರನ್ನು ಪ್ರೋತ್ಸಾಹಿಸುವ ಕಾರ್ಯ ನಡೆದಲ್ಲಿ , ಮಳೆಯಿಲ್ಲದಿದ್ದರೂ ಬೆಳೆ ನಷ್ಟವಿಲ್ಲದೆ ಕೈಹತ್ತುವ ಸಾವೆ ರೈತರನ್ನು ಕೃಹಿಡಿಯಲಿದೆ.
------------

ಸಾವೆ ಬಗ್ಗೆ ರೈತರಲ್ಲಿ ಅರಿವು ಮೂಡಿಸಿದ್ದು ತಿಮ್ಲಾಪುರ ಸೇರಿದಂತೆ ಹೋಬಳಿಯ ಇತರೆಡೆ 50 ಹೆಕ್ಟೇರ್ ಪ್ರದೇಶಕ್ಕಾಗುವಷ್ಟು ಸಾವೆಯನ್ನು ಪ್ರಾತ್ಯಕ್ಷಿಕೆ ಮೂಲಕ ನೀಡಿ ಸಾವೆ ಬೆಳೆಯುವಂತೆ ರೈತರನ್ನು ಕೃಷಿ ಇಲಾಖೆ ಮೂಲಕ ಉತ್ತೇಜಿಸಲಾಗಿದೆ : ತಿಪ್ಪೇಸ್ವಾಮಿ, ಸಹಾಯಕ ಕೃಷಿ ಅಧಿಕಾರಿ.
 ಬಿತ್ತನೆ ಮಾಡುವಾಗ ಮಳೆ ಕೈಕೊಟ್ಟಿದ್ದರಿಂದ ರಾಗಿ ಕೈ ಕೊಡ್ತು, ಆದರೆ ಅಪತ್ಕಾಲದಲ್ಲಿ ಸಾವೆ ನಮ್ಮ ಕೈಹಿಡಿತು. ಇದರಿಂದ ಉತ್ತಮ ಆದಾಯದ ಜೊತೆಗೆ ಹುಲ್ಲು ಸಾಕಷ್ಟು ಸಿಕ್ಕಿದೆ. ಸಾವೆಗೆ ಯಾವತ್ತೂ ಉತ್ತಮ ಬೆಲೆ ಇದ್ದೇ ಇದೆ : ಯೋಗೀಶ್ ಕಂಪನಹಳ್ಳಿ , ರೈತ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್...

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...