ಪಟ್ಟಣದ ಒಣಕಾಲುವೆ ಬಳಿಯ ರಂಗನಾಥ ಶೆಟ್ರು ಅವರಿಗೆ ಸೇರಿದ್ದ ಕಲ್ಪತರು ಬ್ರಿಕ್ಸ್ ಅಂಡ್ ಟೈಲ್ಸ್ ಕಾರ್ಖಾನೆಯಲ್ಲಿ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಬುಧವಾರ ಮಧ್ಯಾಹ್ನ ಮೂರು ಗಂಟೆ ಸಮಯದಲ್ಲಿ ನಡೆದಿದ್ದು ಕುಪಿತರಾದ ಸಾರ್ವಜನಿಕರು ಹಾಗೂ ಮೃತನ ಸಂಬಂಧಿಕರು ಕಾರ್ಖಾನೆಯ ಬಾಗಿಲಲ್ಲಿ ಶವವಿಟ್ಟು ಹೆದ್ದಾರಿ ತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದ್ದು , ರಾತ್ರಿಯಾದರೂ ಮುಂದುವರೆದಿದೆ. ಹುಳಿಯಾರು ಪಟ್ಟಣದ ಕಲ್ಪತರು ಟೈಲ್ಸ್ ಅಂಡ್ ಬ್ರಿಕ್ಸ್ ಕಾರ್ಖಾನೆಯೆದುರು ಶಾಮಿಯಾನ ಹಾಕಿ ಪ್ರತಿಭಟನೆ ನಡೆಸುತ್ತಿರುವುದು. ಮೃತ ವ್ಯಕ್ತಿಯ ಶವವನ್ನು ಕಾರ್ಖಾನೆಯ ಮುಖ್ಯದ್ವಾರದಲ್ಲಿಟ್ಟಿರುವುದು. ಕೆರೆಸೂರಗೊಂಡನ ಹಳ್ಳಿಯ ರವಿ ಎಂಬಾತ ಮೃತಪಟ್ಟ ದುರ್ದೈವಿಯಾಗಿದ್ದು, ಈತ ಕೆಲಸ ಮಾಡುವ ವೇಳೆ ವಿದ್ಯುತ್ ತಗುಲಿದ್ದ ಪರಿಣಾಮ ಮೃತ ಪಟ್ಟಿದ್ದು , ಆ ಸಮಯದಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದನ್ನು ಬಿಟ್ಟರೆ ಮಾಲೀಕರು ಬಂದು ಏನಾಯಿತು ಎಂಬುದನ್ನು ವಿಚಾರಿಸಿಲ್ಲವೆಂದು ಮೃತ ವ್ಯಕ್ತಿಯ ಗ್ರಾಮದವರು, ಸಂಬಂಧಿಕರು ಸೇರಿ ಮೃತ ವ್ಯಕ್ತಿಯ ಶವವನ್ನು ಆಸ್ಪತ್ರೆಯಿಂದ ಕಾರ್ಖಾನೆಯಲ್ಲಿಗೆ ಕೊಂಡೈದು ಮುಖ್ಯದ್ವಾರದಲ್ಲಿಟ್ಟು ಪ್ರತಿಭಟಿಸಿ ಸ್ಥಳಕ್ಕೆ ಮಾಲೀಕರು ಬರುವವರೆಗೂ ಶವತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಕಾರ್ಖಾನೆಯ ಕಾರ್ಮಿಕ ಮೃತಪಟ್ಟರು ಮಾಲೀಕರು ಸ್ಥಳಕ್ಕೆ ಬಾರದೆ ಪೋಲೀಸರ...
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070