ವಿಷಯಕ್ಕೆ ಹೋಗಿ

ನವರಾತ್ರಿಯ ಬೊಂಬೆ ಹಬ್ಬದ ಸಂಭ್ರಮ

       ಮಹಾಲಯ ಅಮಾವಾಸ್ಯೆ ಮುಗಿದು ಆಶ್ವಿಜ ಮಾಸದ ಪಾಡ್ಯದಿಂದ ನವರಾತ್ರಿ ಸಂಭ್ರಮ ಶುರುವಾಗಲಿದೆ.ನಾಡಹಬ್ಬವಾಗಿ ದಸರಾದ ಆಚರಣೆಯ ಸಂತಸ ಒಂದೆಡೆಯಾದರೆ ಮನೆಗಳಲ್ಲಿ ಬೊಂಬೆ ಕೂರಿಸುವ ಸಡಗರ ಮತ್ತೊಂದೆಡೆ.ಮನೆಗಳಲ್ಲಿ ಬೊಂಬೆಗಳನ್ನು ಚೆಂದವಾಗಿ ಜೋಡಿಸಿ ಪೂಜಿಸುವುದು ಕೆಲವೊಂದು ಮನೆಗಳಲ್ಲಿ ಸಂಪ್ರದಾಯವಾಗಿದೆ.ಬೊಂಬೆಹಬ್ಬ ನವರಾತ್ರಿಯ ಒಂಬತ್ತು ದಿನಗಳು ನಡೆಯಲಿದ್ದು ಇದಕ್ಕಾಗಿ ಎರಡು ಮೂರು ದಿನಗಳಿಂದಲೆ ಬೊಂಬೆ ಜೋಡಿಸುವ ಕಾರ್ಯ ಆರಂಭವಾಗುತ್ತದೆ.
ಪಾಡ್ಯದಂದು ಆಚರಿಸುವ ಬೊಂಬೆಹಬ್ಬದ ಪ್ರಯುಕ್ತ ಹುಳಿಯಾರಿನ ಮನೆಯೊಂದರಲ್ಲಿ ಬೊಂಬೆ ಕೂರಿಸಿರುವುದು.
          ಬೊಂಬೆ ಹಬ್ಬವೆಂದರೆ ಪಟ್ಟದ ಬೊಂಬೆಯ ಜೊತೆಗೆ ಒಂದಷ್ಟು ಬೊಂಬೆಗಳನ್ನು ಇಟ್ಟು ಪೂಜಿಸುವುದು.ಸಂಗ್ರಹದಲ್ಲಿರುವ ಎಲ್ಲಾರೀತಿಯ ಬೊಂಬೆಗಳನ್ನು ಜೋಡಿಸುತ್ತರಾದರೂ ಪಟ್ಟದ ಬೊಂಬೆಗೆ ಪ್ರಥಮ ಪ್ರಾಶಸ್ತ್ಯ. ಪಟ್ಟದ ಬೊಂಬೆಯು ಚಂದನದಿಂದ ಕೆತ್ತಿದ ಗಂಡು ಹೆಣ್ಣಿನ ಜೋಡಿಯ ಸುಂದರವಾದ ಸಾಂರದಾಯಿಕ ಶೈಲಿಯ ಬೊಂಬೆಯಾಗಿದ್ದು ಇದನ್ನು ಶ್ರೀನಿವಾಸ ಪದ್ಮಾವತಿಯ ಪ್ರತೀಕವೆಂದು ಭಾವಿಸಲಾಗುತ್ತದೆ.ಹೆಚ್ಚಾಗಿ ತಿರುಪತಿಯಲ್ಲಿ ದೊರಕುವ ಈ ಬೊಂಬೆಗೆ ಯಾವಾಗಲೂ ಅಗ್ರ ಸ್ಥಾನ.ಪಟ್ಟದ ಬೊಂಬೆಗಳಿಗೆ ಸಾಂಪ್ರದಾಯಿಕ ಉಡುಗೆ ತೊಡಿಸಿ ಶೃಂಗಾರ ಮಾಡುವುದು ಕೂಡ ಒಂದು ಕಲೆಯಾಗಿದ್ದು ಎಲ್ಲರಿಗೂ ಬರುವಂತದಲ್ಲ. ಮದುವೆಯ ಸಮಯದಲ್ಲಿ ತಾಯಿ ಮನೆಯಿಂದ ಮಗಳಿಗೆ ಈ ಬೊಂಬೆ ಕೊಡುವುದು ವಾಡಿಕೆ.ಸುಖ ದಾಂಪತ್ಯದ ಪ್ರತೀಕವೆನ್ನುವ ಈ ಬೊಂಬೆಯನ್ನು ಈ ಸಮಯದಲ್ಲಿ ಮಾತ್ರ ಪ್ರದರ್ಶನಕ್ಕಿಟ್ಟು ನಂತರ ಜೋಪಾನವಾಗಿ ತೆಗೆದಿಡಲಾಗುತ್ತದೆ.
       ಬೊಂಬೆ ಜೋಡಿಸುವುದು ಸುಮ್ಮನೆಯ ಮಾತಲ್ಲ.ಕಲ್ಪನೆಯಂತೆ ಎಲ್ಲಾ ರೀತಿಯ ಬೊಂಬೆಗಳನ್ನು ಅವುಗಳ ಗಾತ್ರ,ಆಧಾರದ ಮೇಲೆ ಅಂದವಾಗಿ ಮೆಟ್ಟಿಲು ಮೆಟ್ಟಿಲಾಗಿ ಇಟ್ಟು ಜೋಡಿಸುವುದಕ್ಕೆ ಮತ್ತೊಬ್ಬರ ಸಹಕಾರ ಅಗತ್ಯ.ಮಕ್ಕಳಾಡುವ ಬೊಂಬೆಗಳಿಂದ ಹಿಡಿದು ಎಲ್ಲಾ ರೀತಿಯ ವೈವಿಧ್ಯಮಯ ಬೊಂಬೆಗಳನ್ನೂ ಕೂರಿಸುವುದಕ್ಕೆ ರೂಢಿ. ಆಡುಗೆ ಮನೆ ಸೆಟ್ಟು,ಹೊಲಗದ್ದೆ,ಅರಣ್ಯದಲ್ಲಿ ಕಾಡುಪ್ರಾಣಿಗಳು,ಮದುವೆ,ಡುಮ್ಮಡುಮ್ಮಿ,ಸೈನಿಕರುಆನೆಗಳು,ದೇಶಪ್ರೇಮದ ಬೊಂಬೆಗಳು ಹೆಚ್ಚಿನದಾಗಿ ಎಲ್ಲರ ಮನೆಯಲ್ಲೂ ಕಾಣಸಿಗುವ ಬೊಂಬೆಗಳಾಗಿವೆ
      ಸಾಮಾನ್ಯವಾಗಿ ಆಶ್ವೀಜದ ಪಾಡ್ಯದಿಂದ ದಶಮಿಯವರೆಗೂ ಬೊಂಬೆ ಕೂರಿಸುವುದಿದ್ದು ಕೆಲವರು ಶಾರದೆ ಹಬ್ಬದಂದು ಕೂಡ ಕೂರಿಸುವ ಪರಿಪಾಠವಿದೆ.ಬರಿ ಬೊಂಬೆ ಇಟ್ಟರೆ ಇದು ಮುಗಿಯುವುದಿಲ್ಲ. ಪ್ರತಿದಿನ ಸಂಜೆ ಆರತಿ ಮಾಡಿ ಬೊಂಬೆ ನೋಡಲು ಬರುವ ಮಕ್ಕಳಿಗೆ ಬೊಂಬೆ ಬಾಗಿನ ಕೊಡುವ ಸಂಪ್ರದಾಯವಿದೆ.
        ಒತ್ತಡದ ಬದುಕಿನಲ್ಲಿ ಬೊಂಬೆ ಹಬ್ಬಕ್ಕೆ ವ್ಯವಧಾನವಿಲ್ಲದವರೂ ಬೊಂಬೆ ಜೋಡಿಸಿದ ಶೋಕೇಸ್ ಕೆಳಗೆ ಪಟ್ಟದ ಬೊಂಬೆ ಇಟ್ಟು ಪೂಜಿಸುವ ಮೂಲಕವಾದರೂ ಹಬ್ಬವನ್ನು ಆಚರಿಸಿದ ಸಂತೃಪ್ತಿ ಪಡೆಯುತ್ತಾರೆ. ದಶಮಿಯಂದು ಪಟ್ಟದ ಬೊಂಬೆಗಳನ್ನು ಮಲಗಿಸಿ ವಿಸರ್ಜಿಸುವ ಮೂಲಕ ಬೊಂಬೆ ಹಬ್ಬಕ್ಕೆ ತೆರೆ ಬೀಳುತ್ತದೆ.

        ಇಂತಹ ಹಬ್ಬ ಕಾಲನ ಸುಳಿಗೆ ಸಿಕ್ಕು ಮರೆಯಾಗುತ್ತಿರುದು ವಿಷಾದನೀಯ.ಟಿವಿ.ಕಂಪ್ಯೂಟರ್ ನಲ್ಲೆ ಕಾಲ ಕಳೆಯುವ ಇಂದಿನ ಮಕ್ಕಳಿಗೆ ಈ ಬೊಂಬೆಹಬ್ಬ ಪದವೆ ವಿಚಿತ್ರವಾಗಿ ಕೇಳಿಬಂದರೂ ಆಶ್ಚರ್ಯವಿಲ್ಲ.ಬೊಂಬೆ ಅಂದರೆ ಬಾರ್ಬಿ ಮಾತ್ರ ಎನ್ನುವ ಕಲ್ಪನೆ ಮೂಡಿರುವ ಮಕ್ಕಳಲ್ಲಿ ಬೊಂಬೆಹಬ್ಬದ ಮಹತ್ವದ ಬಗ್ಗೆ ತಿಳಿಹೇಳಬೇಕಿದೆ. ಇದೊಂದು ಸಂಪ್ರದಾಯ ಎನ್ನುವ ಕಾರಣದಿಂದ ಉಳಿದು ಬಂದಿರುವ ಈ ಹಬ್ಬದ ಬಗ್ಗೆ ಅರಿವು ಮೂಡಿಸಬೇಕಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಸಂಕಷ್ಟದಲ್ಲಿದ್ದ ಬುದ್ಧಿಮಾನ್ಯ ಯುವಕನಿಗೆ ಇಮ್ರಾಜ್ ಬಳಗದಿಂದ ಆಸರೆ; ಮಾನವೀಯತೆ ಮೆರೆದ ಯುವಕರು

ಹುಳಿಯಾರು : " ಮಾನವೀಯತೆ ಎಲ್ಲಕ್ಕಿಂತ ದೊಡ್ಡದು " ಎಂಬ ಮಾತನ್ನು ಹುಳಿಯಾರಿನ ಯುವಕರ ತಂಡವೊಂದು ನಿಜ ಮಾಡಿ ತೋರಿಸಿದೆ.               ಇಲ್ಲಿನ ಎಪಿಎಂಸಿ ಆವರಣದಲ್ಲಿ ದಿಕ್ಕುತೋಚದೆ, ಅಸಹಾಯಕ ಸ್ಥಿತಿಯಲ್ಲಿದ್ದ ಬುದ್ಧಿಮಾನ್ಯ ಯುವಕನೊಬ್ಬನಿಗೆ ಆಸರೆಯಾಗುವ ಮೂಲಕ ಸ್ಥಳೀಯ ಯುವಕರು ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆ :ಹುಳಿಯಾರಿನ ಎಪಿಎಂಸಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬುದ್ಧಿಮಾನ್ಯ ಯುವಕನೊಬ್ಬ ಒಂಟಿಯಾಗಿ ಅಲೆಯುತ್ತಿದ್ದನು. ಸರಿಯಾದ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಆತ ತೀವ್ರ ಸಂಕಷ್ಟದಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಯುವಕ ಇಮ್ರಾಜ್ ಮತ್ತು ಅವರ ಸ್ನೇಹಿತರ ಬಳಗವು ತಕ್ಷಣವೇ ಆತನ ನೆರವಿಗೆ ಧಾವಿಸಿತು. ಸಕಾಲಿಕ ಸ್ಪಂದನೆ :ಯುವಕನ ಸ್ಥಿತಿಯನ್ನು ಕಂಡು ಮನನೊಂದ ಸ್ನೇಹಿತರಾದ ಇಮ್ರಾಜ್, ಜಬಿ ಉಲ್ಲಾಖಾನ್ ಫರ್ಮಾನ್, ಅಬ್ದುಲ್ಲಾ, ನವಾ ಶರೀಫ್, ಜಿಶನ್ ಹಾಗೂ ಫಯಾಜ್ ಅವರು ಮೊದಲು ಆತನಿಗೆ ಆಹಾರದ ವ್ಯವಸ್ಥೆ ಮಾಡಿದರು. ನಂತರ ಆತನ ಸುರಕ್ಷತೆಗಾಗಿ ಕ್ರಮ ಕೈಗೊಂಡರು. ಇಲಾಖೆಯ ಸುಪರ್ದಿಗೆ: ಯುವಕರ ಮನವಿಗೆ ಸ್ಪಂದಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, "ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ನಾವು ಇಲ್ಲಿಗೆ ಬಂದಿದ್ದು, ...