ವಿಷಯಕ್ಕೆ ಹೋಗಿ

ವಿಸರ್ಜನೆ ಅಂಗವಾಗಿ ಹೋಮ ಹಾಗೂ ಅನ್ನಸಂತರ್ಪಣೆ

    ಹುಳಿಯಾರು  ಪಟ್ಟಣದ ಶ್ರೀಪಸನ್ನ ಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವ ನಂದಿರೂಢ ಬಾಲಗಣಪನ ವಿಸರ್ಜನಾ ಕಾರ್ಯ ಶುಕ್ರವಾರ ನಡೆಯಲಿದ್ದು, ಇದರ ಅಂಗವಾಗಿ ಬುಧವಾರದಂದು ಗಣಪತಿಗೆ ಹೋಮ ನಡೆಯಿತು.
ಹುಳಿಯಾರಿನ ಗಣಪತಿ ದೇವಾಲಯದಲ್ಲಿ ವಿಶೇಷ ಹೋಮ ನೆರವೇರಿತು.
        ಎಚ್.ಎಸ್.ಲಕ್ಷ್ಮಿನರಸಿಂಹಯ್ಯ ಮತ್ತು ರವಿ ಪೌರೋಹಿತ್ಯದಲ್ಲಿ ಗಣಪತಿಗೆ ನಾಂದಿ, ಪುಣ್ಯಾಹ, ಅರ್ಚನೆ, ಅಭಿಷೇಕ ಸಹಿತ ವಿವಿಧ ಪೂಜಾ ಕೈಂಕರ್ಯಗಳು ನಡೆಸಿದ್ದಲ್ಲದೆ, ನವಗ್ರಹ,ಮೃತ್ಯುಂಜಯ,ಮಹಾಲಕ್ಷ್ಮಿ,ಅಂಜನೇಯ ಹೋಮಗಳನ್ನು ನಡೆಸಲಾಯಿತು. ಮಹಾಮಂಗಳಾರತಿ ಹಾಗೂ ಪೂರ್ಣಾಹುತಿ ಅರ್ಪಿಸಿದ ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಸಲಾಯಿತು.
ಹುಳಿಯಾರಿನ ಶ್ರೀ ಗಣಪತಿ ದೇವಾಲಯದಲ್ಲಿ ಬುಧವಾರದಂದು ವಿಶೇಷ ಹೋಮಕಾರ್ಯ ನಡೆದು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಸಲಾಯಿತು.

        ವೆಂಕಟಾಚಲಪತಿಶೆಟ್ಟರು ಕುಟುಂಬ ವರ್ಗದವರಿಂದ ಪಾನಕಪನಿವಾರ ಸೇವೆ ನಡೆಯಿತು. ಈ ವೇಳೆ ದೇವಾಲಯ ಸಮಿತಿಯ ಅಧ್ಯಕ್ಷ ಮೋಹನ್ ಕುಮಾರ್, ತಾಂಡವಾಚಾರ್, ನಾಗಣ್ಣ, ಕಿರುತೆರೆ ಕಲಾವಿದ ಗೌಡಿ, ಸುದರ್ಶನ್, ದೇವಾಲಯ ಸಮಿತಿಯವರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತಾಧಿಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳು