ವಿಷಯಕ್ಕೆ ಹೋಗಿ

ಪ್ರತಿಭಾ ಕಾರಂಜಿಯಲ್ಲಿ ಮಿಂಚಿದ ಕೇಶವ ಶಾಲೆ ಮಕ್ಕಳು

          ಹುಳಿಯಾರು  ಪಟ್ಟಣದ ಕೇಶವ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಹೋಬಳಿ ಮಟ್ಟದ ಪ್ರತಿಭಾಕಾರಂಜಿಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿಜೇತರಾಗುವ ಮೂಲಕ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರತಿಭಾಕರಂಜಿ ಸ್ಪರ್ಧೆಯಲ್ಲಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿರುವ ಹುಳಿಯಾರಿನ ಕೇಶವ ವಿದ್ಯಾಸಂಸ್ಥೆ ಮಕ್ಕಳು.
         ಕಿರಿಯರ ವಿಭಾಗದ ಅಭಿನಯ ಗೀತೆಯಲ್ಲಿ ಸಂಜನ ,ಚಿತ್ರಕಲೆಯಲ್ಲಿ ಶೃತಿ,ಛದ್ಮವೇಷದಲ್ಲಿ ವಾಸು, ಗಾಯನದಲ್ಲಿ ಬಿಂದು ತಂಡದವರು ಪ್ರಥಮ ಸ್ಥಾನಗಳಿಸಿದರೆ, ಮಾನಸ ಲಘುಸಂಗೀತದಲ್ಲಿ ದ್ವಿತೀಯ ಹಾಗೂ ಧಾರ್ಮಿಕ ಪಠಣದಲ್ಲಿ ತೃತೀಯ ಸ್ಥಾನಪಡೆದಿದ್ದಾರೆ.

         ಹಿರಿಯರ ವಿಭಾಗದಲ್ಲಿ ದೇಶಭಕ್ತಿಗೀತೆಯಲ್ಲಿ ಕೀರ್ತನ್ ರಾವ್ ತಂಡದವರು ಪ್ರಥಮ , ಜಾನಪದನೃತ್ಯದಲ್ಲಿ ಪುರುಷೋತ್ತಮ್ ತಂಡದವರು ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಭಿನಯಗೀತೆಯಲ್ಲಿ ತೇಜಸ್ವಿನಿ ಧಾರ್ಮಿಕಪಠಣದಲ್ಲಿ ಅನುಷಾ ದ್ವಿತೀಯ ಸ್ಥಾನಗಳಿಸಿದರೆ, ಚಿತ್ರಕಲೆಯಲ್ಲಿ ಭಾವನಾ ತೃತೀಯ ಸ್ಥಾನಪಡೆದು ತಾಲ್ಲೂಕು ಮಟ್ಟಕೆ ಆಯ್ಕೆಯಾಗಿದ್ದಾರೆ. ಸಂಸ್ಥೆಯ ದಾಸಪ್ಪ,ಶ್ರೀಧರ್ ಅಂಬೇಕರ್,ಶಾಲಾ ಶಿಕ್ಷಕರು,ಸಿಬ್ಬಂದಿಯವರು ವಿಜೇತ ಮಕ್ಕಳನ್ನು ಅಭಿನಂದಿಸಿದ್ದಾರೆ.

ಕಾಮೆಂಟ್‌ಗಳು