ಹುಳಿಯಾರು ಪಟ್ಟಣದ ರೋಟರಿ ಕ್ಲಬ್ ವತಿಯಿಂದ ಪುಟ್ಟಮಕ್ಕಳಿಗಾಗಿ ಅಯೋಜಿಸಿದ್ದ ಕೃಷ್ಣ ವೇಷಭೂಷಣ ಪ್ರದರ್ಶನವನ್ನು ಭಾನುವಾರ ನಡೆಸಲಾಯಿತು. ಕೃಷ್ಣನ ವೇಷ ತೊಟ್ಟು ಬಂದಿದ್ದ ಪ್ರತ್ರಿಯೊಂದು ಮಗುವಿಗೆ ನೆನಪಿನಕಾಣಿಕೆ ನೀಡಿ ಪ್ರೋತ್ಸಾಹಿಸಲಾಯಿತು.
![]() |
ಹುಳಿಯಾರು ರೋಟರಿ ಸಂಸ್ಥೆಯವರು ಆಯೋಜಿಸಿದ್ದ ಕೃಷ್ಣವೇಷ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಕ್ಕಳಿಗೆ ನೆನಪಿನಕಾಣಿಕೆ ನೀಡಲಾಯಿತು. |
ರೋಟರಿ ಜೆಂಕ್ಷನ್ ಘಟಕದ ಅಧ್ಯಕ್ಷ ವಿಜಯ್ ಸಾರಫ್ ಮಾತನಾಡಿ, ಪುಟ್ಟಮಕ್ಕಳು ಕೃಷ್ಣನ ವೇಷಗಳನ್ನು ತೊಟ್ಟಿರುವುದು ನೋಡುವುದಕ್ಕೆ ಆನಂದದಾಯಕವಾಗಿದ್ದು , ಚಿಕ್ಕಂದಿನಲ್ಲಿ ಕೃಷ್ಣ ಆಡಿದ ಆಟಗಳನ್ನು ನೆನಪಿಸಿಕೊಳ್ಳುವಂತೆ ಮಾಡಿತು. ರೋಟರಿ ಜೆಂಕ್ಷನ್ ಘಟಕದ ಕಾರ್ಯದರ್ಶಿ ನವಾಲ್ ಸಾರಫ್ , ಗೌರವಾಧ್ಯಕ್ಷ ಬಿ.ಕೆ.ಕೃಷ್ಣಮೂರ್ತಿ, ರೋಟರಿ ಮೆಂಬರ್ ಶಿಪ್ ನ ನಿರ್ದೇಶಕ ಫ್ರಾಂಕ್, ಹುಳಿಯಾರು ರೋಟರಿ ಸಂಸ್ಥೆಯ ಅಧ್ಯಕ್ಷ ಈ.ರವೀಶ್, ನಿರ್ದೇಶಕರಾದ ಗಂಗಾಧರರಾವ್, ಮೆಡಿಕಲ್ ಚನ್ನಬಸವಯ್ಯ, ಚಿ.ನಾ.ಹಳ್ಳಿ ರೋಟರಿಯ ಅಶ್ವತ್ಥನಾರಾಯಣ,ದಾನಪ್ಪ,ವೈದ್ಯ ಸದಾಶಿವು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ