ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೇ, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಗ್ರಾ.ಪಂ ಅಖಾಡದಲ್ಲಿ ಪತ್ರಿಕಾ ವಿತರಕ

ತಮ್ಮೂರಿನ ಗ್ರಾಮಪಂಚಾಯ್ತಿ ರಾಜಕೀಯದಿಂದ ಬೇಸತ್ತು ಗ್ರಾಮಾಭಿವೃದ್ದಿಯ ಕನಸು ಹೊತ್ತ ಪತ್ರಿಕಾ ಏಜೆಂಟ್ ತಾನೂ ಕೂಡ ಅಖಾಡಕ್ಕಿಳಿಯುವ ಮೂಲಕ ಮತದಾರರ ಗಮನ ಸೆಳೆದಿದ್ದಾರೆ. ಪ್ರತಿನಿತ್ಯ ದಿನಪತ್ರಿಕೆಗಳನ್ನು ಮನೆಮನೆಗೆ ಹಾಕುವ ಪೇಪರ್ ಬಾಯ್ ಕಮ್ ಪತ್ರಿಕಾ ಏಜೆಂಟ್ ಆಗಿರುವ 23 ವರ್ಷ ವಯಸ್ಸಿನ ಕೆ.ಸಿ.ಬಸವರಾಜು ಕೆಂಕೆರೆ 1 ನೇ ಬ್ಲಾಕ್ ನಿಂದ ಸಾಮಾನ್ಯ ಮೀಸಲು ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಹೋಬಳಿಯ ಕೆಂಕೆರೆ ಗ್ರಾಮ ಪಂಚಾಯಿತಿಯ ಅಖಾಡದಲ್ಲಿ ಪತ್ರಿಕಾ ವಿತರಕರನೊಬ್ಬ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು ಇದೇ ಮೊದಲು. ಗ್ರಾಮದಲ್ಲಿ ಕಳೆದ 5 ವರ್ಷದಿಂದ ಪತ್ರಿಕೆಯ ವಿತರಕರಾಗಿರುವ ಈತ ಅಣ್ಣಾಹಜಾರೆಯಿಂದ ಆದರ್ಶ ಹಾಗೂ ರಾಜಕೀಯದ ಗಂಧಗಾಳಿಯಿಲ್ಲದ ಕೇಜ್ರಿವಾಲ್ ರಿಂದ ಪ್ರೇರಿತನಾಗಿದ್ದು ಗ್ರಾಮದ ಅಭ್ಯುದಯಕ್ಕಾಗಿ ಚುನಾವಣೆಗೆ ನಿಲ್ಲಲ್ಲು ಮುಂದಾಗಿದ್ದು ತನ್ನ ಜನಪ್ರಿಯತೆಯನ್ನು ಓರೆಗೆ ಹಚ್ಚಲು ಇಚ್ಚಿಸಿದ್ದಾರೆ. ಘಟಾನುಘಟಿಗಳ ಅಭ್ಯರ್ಥಿಗಳ ಮಧ್ಯೆ ಈತನ ಸ್ಪರ್ಧೆ ಗ್ರಾಮದಲ್ಲಿ ಗಮನ ಸೆಳೆದಿದೆ. ಯಾವುದೇ ಹಣ ಹೆಂಡ ಹಂಚದೆ ಮತಯಾಚನೆಗೆ ಮುಂದಾಗಿರುವ ಈತ ವಾರ್ಡ್ ನ ಜನತೆ ಮತ ನೀಡಿ ಜಯ ತಂದು ಕೊಟ್ಟಲ್ಲಿ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವದಕ್ಕೆ ಪ್ರಥಮಾದ್ಯತೆ ನೀಡುವುದಾಗಿ ಹೇಳಿದ್ದಾರೆ.   

ಹುಳಿಯಾರು ಒಂದನೇ ಬ್ಲಾಕ್ : ಎಸ್.ಸಿ. ಮೀಸಲು ಕ್ಷೇತ್ರಕ್ಕೂ ಹಣಾಹಣಿ

ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ಎಸ್.ಸಿ ಮೀಸಲು ಕ್ಷೇತ್ರದಿಂದ ಬಿಡಿಗಾಸು ಖರ್ಚಿಲ್ಲದೆ ಗೆಲ್ಲಬಹುದು ಎಂದು ಹೇಳುತ್ತಾರೆ. ಆದರೆ ಇದಕ್ಕೆ ತದ್ವಿರುದ್ದ ಎನ್ನುವಂತೆ ಹುಳಿಯಾರಿನ ಒಂದನೇ ಬ್ಲಾಕ್ ನ ಎಸ್.ಸಿ ಮೀಸಲು ಕ್ಷೇತ್ರದ ಒಂದು ಸ್ಥಾನಕ್ಕೆ ತೀವ್ರ ಪೈಪೋಟಿಯಿದ್ದು ೧೦ ಮಂದಿ ಸ್ಪರ್ಧಿಸಿದ್ದಾರೆ. ಪಟ್ಟಣದ ಒಂದನೇ ಬ್ಲಾಕ್ ಗಾಂಧಿಪೇಟೆ ಬೀದಿಯ ಮನೆನಂ ೧ ರಿಂದ ೧೫೪ರ ವರೆಗಿದ್ದು ಇಲ್ಲಿ ಎಸ್.ಸಿ. ಸಮುದಾಯದ ಯಾರೊಬ್ಬರು ಇಲ್ಲ. ಆಗಿದ್ದು ಕೂಡ ಇಲ್ಲಿಗೆ ಎಸ್.ಸಿ. ಮೀಸಲು ಘೋಷಣೆಯಾಗಿದ್ದು ಪಟ್ಟಣದ ವಿವಿಧ ಬ್ಲಾಕ್ ನವರು ಇಲ್ಲಿ ಸ್ಪರ್ಧೆಗಿಳಿದಿದ್ದಾರೆ. ಹೆಚ್.ಬಿ.ಕೃಷ್ಣಯ್ಯ, ವಿಜಯನಗರ ಬಡಾವಣೆಯ ಅಂಜನಮೂರ್ತಿ, ಎಂ.ಗಣೇಶ್,ಮಾರುತಿನಗರದ ಅಂಜನಾಬೋವಿ, ಹರಿಶ್ ನಾಯ್ಕ, ಎ.ಕೆ.ಕಾಲೋನಿಯ ದುರ್ಗಯ್ಯ, ರಾಮಚಂದ್ರಯ್ಯ, ವಿನಾಯಕನಗರದ ದುರ್ಗರಾಜ,ಶಂಕರಪುರಬಡಾವಣೆಯ ಮೂರ್ತಿನಾಯ್ಕ,ಇಂದಿರಾನಗರದ ರಾಜನಾಯ್ಕ ಸೇರಿ ಒಟ್ಟು ೧೦ ಮಂದಿ ಸ್ಪರ್ಧಿಸಿದ್ದಾರೆ. ಇವರ ಪೈಕಿ ಹೆಚ್.ಬಿ.ಕೃಷ್ಣಯ್ಯ ಹುಳಿಯಾರು ಗ್ರಾ.ಪಂ.ಯ ಮಾಜಿ ಅಧ್ಯಕ್ಷರಾಗಿದ್ದು ರಾಜಕೀಯದಲ್ಲಿ ಸಕ್ರೀಯರಾಗಿದ್ದರು. ತಾವು ಈ ಹಿಂದೆ ಮಾಡಿದ ಕಾರ್ಯ ಹಾಗೂ ರಾಜಕೀಯ ಅನುಭವವನ್ನು ಮುಂದಿಟ್ಟುಕೊಂಡು ಈ ಬಾರಿ ಸ್ಪರ್ಧಿಸಿದ್ದಾರೆ. ದುರ್ಗಯ್ಯ ಹಾಗೂ ರಾಮಚಂದ್ರಯ್ಯ ಸಹ ಗ್ರಾ.ಪಂ. ಮಾಜಿ ಸದಸ್ಯರಾಗಿದ್ದರೆ , ಅಂಜನಾಬೋವಿ,ಗಣೇಶ್, ಹರೀಶ್ ನಾಯ್ಕ ಅವರುಗಳು ಈ ಹಿಂದೆ ನಡೆದ ಗ್ರಾ.ಪಂ. ಚುನಾವಣ

ಗ್ರಾ.ಪಂ.ಕಣದಲ್ಲಿ ಅತ್ತೆ-ಸೊಸೆ ಸ್ಪರ್ಧೆ

ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮ ಪಂಚಾಯ್ತಿಯ ಗೊಲ್ಲರಹಟ್ಟಿಯ ೪ ನೇ ಬ್ಲಾಕ್ ನಲ್ಲಿ ಸಾಮಾನ್ಯ ಮಹಿಳೆ ೧ ಸ್ಥಾನಕ್ಕೆ ಅತ್ತೆ-ಸೊಸೆ ಸೇರಿದಂತೆ ಒಟ್ಟು ೪ ಮಂದಿ ಸ್ಪರ್ಧಿಸಿದ್ದಾರೆ. ಗೊಲ್ಲರಹಟ್ಟಿಯ ರುದ್ರಪ್ಪ ಅವರ ಪತ್ನಿ ಮಂಗಳಮ್ಮ ಮತ್ತು ಸತೀಶ್ ಅವರ ಪತ್ನಿ ಮಂಜುಳಾ ಇವರಿಬ್ಬರು ಅತ್ತೆ-ಸೊಸೆಯಾಗಿದ್ದು ಚುನಾವಣಾ ಕಣದಲ್ಲಿದ್ದಾರೆ. ಇವರಿಗೆ ಸ್ಪರ್ಧೆ ನೀಡಲು ಅದೇ ಗ್ರಾಮದ ಕೊಟ್ಟುರಯ್ಯನವರ ಪತ್ನಿ ವೀಣಾ ಹಾಗೂ ನಟರಾಜ್ ಅವರ ಪತ್ನಿ ಪವಿತ್ರ ಕೂಡ ಸ್ಪರ್ಧೆಗೆ ಮುಂದಾಗಿದ್ದಾರೆ. ಅತ್ತೆ-ಸೊಸೆ ಹಾಗೂ ಸಂಬಂಧಿಕರೇ ಈರೀತಿ ನಾಮುಂದು ತಾಮುಂದು ಎಂದು ಸ್ಪರ್ಧಿಸಿರುವುದು ಮತದಾರರಲ್ಲಿ ಕುತೂಹಲ ಉಂಟುಮಾಡಿದೆ. ಈ ನಾಲ್ವರು ಸಹ ತಮ್ಮ ಗಂಡಂದಿರೊಂದಿದೆ ಬಿರುಸಿನ ಪ್ರಚಾರ ಸಹ ನಡೆಸಿದ್ದು ಇವರಲ್ಲಿ ವಿಜಯ ಮಾಲೆ ಯಾರಿಗೆ ಲಭಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

ಚುನಾವಣಾ ಜನಜಾಗೃತಿ ಜಾಥಾ

ಹುಳಿಯಾರು  ಹೋಬಳಿ ಕೆಂಕೆರೆ ಗ್ರಾಮದ ಸ್ವಯಂಸೇವಕ ಯುವಕ ಸಂಘದವರು ಗ್ರಾಮ ಪಂಚಾಯ್ತಿ ಚುನಾವಣೆ ಅಂಗವಾಗಿ ಶನಿವಾರದಂದು ಗ್ರಾಮದ ಬೀದಿಬೀದಿಗಳಲ್ಲಿ ಜಾಥಾ ನಡೆಸುವ ಮೂಲಕ ಚುನಾವಣಾ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು. ಗ್ರಾಮದ ಶ್ರೀಕಾಳಿಕಾಂಬದೇವಿ ದೇವಾಲಯದಿಂದ ಪ್ರಾರಂಭವಾದ ಜಾಥಾದಲ್ಲಿ ಸಂಘದ ಪದಾಧಿಕಾರಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, " ಎಲೆಕ್ಷನ್, ಇದು ನಿಮ್ಮ ಸೆಲೆಕ್ಷನ್" ಎಂಬ ಶಿರೋನಾಮೆಯ ಕರಪತ್ರವನ್ನು ಸಾರ್ವಜನಿಕರಿಗೆ ಹಂಚುವ ಮೂಲಕ ಜನಜಾಗೃತಿ ಉಂಟುಮಾಡಿದರು. ತಲೆಗೊಂದು ಓಟು ,ತೊಲಗಬೇಕು ನೋಟು, ನೋಟು ನೋಡಿ ಓಟು ಹಾಕಬೇಡಿ, ಹಣಹೆಂಡಕ್ಕೆ ಮಾರು ಹೋಗಿ ಗ್ರಾಮದ ಅಭಿವೃದ್ದಿಗೆ ಮಾರಕವಾಗಬೇಡಿ ಎಂದು ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕರಿಗೆ ಮತದಾನದ ಮಹತ್ವದ ಬಗ್ಗೆ ತಿಳಿಸಿದರು. ಗ್ರಾಮದ ಯುವಕರು ಸ್ವಯಂಪ್ರೇರಣೆಯಿಂದ ಜಾಗೃತಿ ಕಾರ್ಯಕ್ರಮ ಮಾಡುತ್ತಿದ್ದನ್ನು ಕಂಡವರು ಅಶ್ಚರ್ಯದಿಂದ ನೋಡುತ್ತಿದ್ದರು. ಈ ವೇಳೆ ಶರತ್,ರಂಗನಾಥ್, ಗಿರೀಶ್, ಅರುಣ್, ರಾಕೇಶ್, ನಾಗರಾಜ್, ಕಂಠೇಶ್, ಕೃಷ್ಣಸಿಂಗ್ ಸೇರಿದಂತೆ ಇತರರಿದ್ದರು.

ಕಾಮನಬಿಲ್ಲು ಫೌಂಡೇಶನ್ ನಿಂದ ಚುನಾವಣಾ ಜಾಗೃತಿ

 ಗ್ರಾಮ ಪಂಚಾಯ್ತಿ ಚುನಾವಣೆ ಹಿನ್ನಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹೋಬಳಿಯ ಕಾಮನಬಿಲ್ಲು ಫೌಂಡೇಶನ್ ನ ಸಂಚಾಲಕರು ಪಟ್ಟಣದಲ್ಲಿ ಚುನಾವಣಾ ಜನಜಾಗೃತಿ ಕಾರ್ಯಕ್ರಮ ನಡೆಸಿದರು. ಕಾಮನಬಿಲ್ಲು ಫೌಂಡೇಶನ್ ನ ಅಧ್ಯಕ್ಷ ಎಂ.ಚನ್ನಕೇಶವ ನೇತೃತ್ವದಲ್ಲಿ ಸಂಘದ ಸದಸ್ಯರುಗಳು ಪಟ್ಟಣದ ಮನೆ ಹಾಗೂ ಅಂಗಡಿಗಳಲ್ಲಿಗೆ ತೆರಳಿ ತಾವು ಸಿದ್ದಪಡಿಸಿದ ಕರಪತ್ರವನ್ನು ನೀಡುತ್ತಾ ಮತದಾರರಲ್ಲಿ ಜಾಗೃತಿ ಮೂಡಿಸಿದರು. "ಸ್ವಚ್ಚ ಅಭ್ಯರ್ಥಿ ಆರಿಸಿ , ಸ್ವಚ್ಚ ಸಮಾಜವನ್ನು ರೂಪಿಸಿ" ಎಂಬ ಕರಪತ್ರದಲ್ಲಿ ಮುದ್ರಿಸಿ ಹಂಚಿದರು. ಮತದಾರರು ಯಾವುದೇ ಹಣ,ಮದ್ಯದ ಆಮಿಷಕ್ಕೆ ಒಳಗಾಗಬೇಡಿ, ಇಂದು ನಿಮಗೆ ಹಣಕೊಟ್ಟವರು ಗೆದ್ದಮೇಲೆ ನಿಮ್ಮಿಂದಲೇ ಹಣ ದೋಚುತ್ತಾರೆ. ಉತ್ತಮ ವ್ಯಕ್ತಿತ್ವ ಹೊಂದಿದ ವ್ಯಕ್ತಿಯ ಆಯ್ಕೆ ಮುಖ್ಯ, ನಮ್ಮನ್ನು ಆಳುವವರು ಒಳ್ಳೆಯವರಾಗಿರಬೇಕು. ಯಾವುದೇ ಜಾತಿ,ಮತ ಭೇದವಿಲ್ಲದೆ ಆದರ್ಶ ವ್ಯಕ್ತಿಯ, ಭ್ರಷ್ಟ ವ್ಯವಸ್ಥೆಯ ವಿರುದ್ದ ಹೋರಾಡುವ ಮನೋಭಾವ ಹೊಂದಿರುವವರನ್ನು, ಮತದಾರರಿಗೆ ಅಗತ್ಯ ಬೇಕಾದ ಮೂಲಭೂತ ಸೌಕರ್ಯಗಳ ಬಗ್ಗೆ ಅರಿವಿರುವ ಅಭ್ಯರ್ಥಿಯ ಆಯ್ಕೆ ಮಾಡಬೇಕು. ಗ್ರಾಮದ ಏಳ್ಗೆಗೆ, ಜನಸಮುದಾಯದ ಒಳಿತಿಗಾಗಿ ಸಕ್ರಿಯವಾಗಿ ದುಡಿಯುವ ವಿದ್ಯಾವಂತರನ್ನು ಆಯ್ಕೆ ಮಾಡಿ ಎಂದು ಮುದ್ರಿಸಿ ಮತದಾರರಿಗೆ ವಿತರಿಸುತ್ತಾ ಜಾಗೃತಿ ಮೂಡಿಸಿದರು. ಈ ವೇಳೆ ಅಧ್ಯಕ್ಷ ಚನ್ನಕೇಶವ, ಉಪಾಧ್ಯಕ್ಷ ಪ್ರಕಾಶ್,ಕಾರ್ಯದರ್ಶಿ ವಿಜಯ

ಗ್ರಾ.ಪಂ. ಚುನಾವಣಾ ಕಣದಲ್ಲಿ ಅತಿಥಿಉಪನ್ಯಾಸಕ

ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಹೊನ್ನಪ್ಪ( ಕಲ್ಲೇಶ್) ಹೋಬಳಿ ಕೆಂಕೆರೆ ಗ್ರಾಮ ಪಂಚಾಯತಿ ಚುನಾವಣಾ ಕಣದಲ್ಲಿ ಸ್ಪರ್ಧಿಸುವ ಮೂಲಕ ಗಮನಸೆಳೆದಿದ್ದಾರೆ. ಕೆಂಕೆರೆಯ ೨ ನೇ ಬ್ಲಾಕ್ ನ ಸಾಮಾನ್ಯ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಈತ ಕಳೆದ ಗ್ರಾ.ಪಂ.ಚುನಾವಣೆಯಲ್ಲೂ ಸಹ ಇದೇ ಬ್ಲಾಕ್ ನಿಂದಲೇ ಸ್ಪರ್ಧಿಸಿದ್ದು ಪರಾಜಿತರಾಗಿದ್ದರು. ಕಳೆದ ಚುನಾವಣೆಯ ಅನುಭವದ ಹಿನ್ನಲೆಯಲ್ಲಿ ಈ ಬಾರಿ ಮತ್ತೆ ಸ್ಪರ್ಧಿಸಿದ್ದು ಹೆಚ್ಚಿನ ಸ್ನೇಹಿತರ ಬೆಂಬಲದಿಂದ ಗೆಲ್ಲುವ ಭರವಸೆ ಹೊಂದಿದ್ದಾರೆ. ಈತ ಎಬಿವಿಪಿಯ ಸಂಚಾಲಕನಾಗಿದ್ದು ಹಲವು ಹೋರಾಟಗಳಲ್ಲಿ ಪಾಲ್ಗೊಂಡಿದ್ದರಲ್ಲದೆ ಮಹಾತ್ಮಗಾಂಧಿ ಯೋಜನೆಯಡಿ ಕೈಗೊಂಡಿದ್ದ ಕಾಮಗಾರಿಗಳಲ್ಲಿನ ಅವ್ಯವಹಾರದ ಬಗ್ಗೆ ಧ್ವನಿಎತ್ತಿದ್ದರು. ಮತದಾರರಿಗೆ ಯಾವುದೇ ಆಮಿಷವೊಡ್ಡದೆ ಮತಯಾಚನೆ ಮಾಡುತ್ತಿದ್ದು ಮತದಾರರು ತಮ್ಮನ್ನು ಒಪ್ಪಿ ಚುನಾಯಿಸುತ್ತಾರೆಂಬ ನಂಬಿಕೆಯಿದೆ ಎನ್ನುತ್ತಾರೆ.

ಹುಳಿಯಾರು : ಗ್ರಾ.ಪಂ. ಅಭ್ಯರ್ಥಿಗಳಿಗೆ ಗುರುತಿನ ಪತ್ರ ವಿತರಣೆ

ಜೂನ್ ೨ ರಂದು ೨ನೇ ಹಂತದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ನಡೆಯಲಿದ್ದು ಹುಳಿಯಾರು ಗ್ರಾ.ಪಂ.ಯ ೩೯ ಸ್ಥಾನಗಳ ಆಯ್ಕೆಗೆ ೧೬೨ ಮಂದಿ ಕಣದಲ್ಲಿದ್ದು ಅವರೆಲ್ಲರಿಗೂ ಗುರುತಿನ ಪತ್ರ ಹಾಗೂ ಏಣಿಕೆಯ ಏಜೆಂಟರ್ ಪತ್ರವನ್ನು ರಿಟರ್ನಿಂಗ್ ಆಫೀಸರ್ ಶಿವಾನಂದ್ ಶನಿವಾರ ವಿತರಿಸಿದರು. ಗ್ರಾ.ಪಂ. ಚುನಾವಣ ಕಣದಲ್ಲಿರುವ ಅಭ್ಯರ್ಥಿಗಳು ಚುನಾವಣೆಯ ದಿನದಂದು ಹಾಗೂ ಮತ ಏಣಿಕೆಯ ದಿನದಂದು ಈ ಗುರ್ತಿನ ಪತ್ರವನ್ನು ಕಡ್ಡಾಯವಾಗಿದೆ. ತಮ್ಮ ಬ್ಲಾಕ್ ನ ಮತ ಕೇಂದ್ರದ ಒಳ ಪ್ರವೇಶಕ್ಕೆ ಹಾಗೂ ಏಣಿಕೆ ಕೊಠಡಿಯ ಪ್ರವೇಶಕ್ಕೆ ಈ ಗುರ್ತಿನ ಪತ್ರ ಕಡ್ಡಾಯವಾಗಿದ್ದು ಅಭ್ಯರ್ಥಿಗಳು ತಪ್ಪದೇ ತರುವಂತೆ ಸೂಚಿಸಿದ್ದಾರೆ. ಯಾವ ಅಭ್ಯರ್ಥಿಗಳಿಗೆ ಗುರ್ತಿನ ಪತ್ರ ದೊರೆತಿರುವುದಿಲ್ಲ ಅಂತಹವರು ಗ್ರಾ.ಪಂ. ಕಛೇರಿಗೆ ಬಂದು ಪಡೆಯುವಂತೆ ತಿಳಿಸಿದ್ದಾರೆ.

ಗುಡುಗು ಸಿಡಿಲು ಸಹಿತ ಆಲಿಕಲ್ಲು ಮಳೆ ನಲುಗಿದ ದಾಳಿಂಬೆ, ಬಾಳೆ ಹಾಗೂ ಟೊಮೋಟೊ : ಆರ್ಥಿಕ ಸಂಕಷ್ಟದಲ್ಲಿ ರೈತ

ವರದಿ : ಡಿ.ಆರ್.ನರೇಂದ್ರ ಬಾಬು ------------- ಹುಳಿಯಾರು : ಹೋಬಳಿಯಾದ್ಯಂತ ಶುಕ್ರವಾರ ಸಂಜೆ ವರುಣನ ಅವಾಂತರ ಜೋರಾಗಿತ್ತು. ಗುಡುಗು,ಸಿಡಿಲು ಸಹಿತ ಒಂದು ಗಂಟೆಗಳ ಕಾಲ ಸುರಿದ ಆಲಿಕಲ್ಲು ಸಹಿತ ಮಳೆಗೆ ನೂರಾರು ಎಕರೆ ಪ್ರದೇಶದ ದಾಳಿಂಬೆ ಬೆಳೆ, ಬಾಳೆ ಹಾಗೂ ಟಮೋಟೊ ಬೆಳೆ ನಲುಗಿದ್ದು ಬೆಳೆಗಾರರನ್ನು ಕಂಗಾಲಾಗುವಂತೆ ಮಾಡಿದೆ. ಹೋಬಳಿಯ ಕೆಂಕೆರೆ, ಬಸವನಗುಡಿ, ಪುರದಮಠ, ಬರದಲೇಪಾಳ್ಯ, ಮೇಲನಹಳ್ಳಿ, ಗುರುವಾಪುರ, ದಸೂಡಿ,ದಬ್ಬಗುಂಟೆ, ರಂಗನಕೆರೆ, ಹೊಯ್ಸಳಕಟ್ಟೆ, ಎಣ್ಣೆಗೆರೆ, ಉಪ್ಪಿನಕಟ್ಟೆ , ಯಳನಡು ಸೇರಿದಂತೆ ಇನ್ನಿತರ ಪ್ರದೇಶದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಮುಂಗಾರು ಬೆಳೆ ಹೆಸರಿಗೆ ರೋಹಿಣಿ ಮಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ನಿನ್ನೆ ಸಂಜೆಯ ಮಳೆಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಯಿತು. ತೋಟಗಾರಿಕೆ ಬೆಳೆಗಳಾದ ಮಾವು, ದಾಳಿಂಬೆ, ಬಾಳೆ ಬೆಳೆಗಾರರಿಗೂ ಕೂಡ ಆಲಿಕಲ್ಲಿನ ಹೊಡೆತ ಅಪಾರ ನಷ್ಟಕ್ಕೀಡು ಮಾಡಿದೆ. ಬಾರಿ ಗಾಳಿಗೆ ಮಾವಿನಕಾಯಿ ಉದುರಿದ್ದು ಒಂದೆಡೆಯಾದರೆ ಮರದಲ್ಲಿನ ಕಾಯಿಗಳು ಆಲಿಕಲ್ಲಿನ ಹೊಡೆತಕ್ಕೆ ಸಿಕ್ಕಿದ್ದು ಮಾವು ಗುತ್ತಿಗೆದಾರರನ್ನು ಚಿಂತೆಗೀಡುಮಾಡಿದೆ. ದಾಳಿಂಬೆ : ದಾಳಿಂಬೆ ಕೃಷಿ ಮಾಡುವುದರಿಂದ ಉತ್ತಮ ಆದಾಯ ಬರುತ್ತದೆಂಬ ನಿರೀಕ್ಷೆಯಿಂದ ರೈತರು ವಾಣಿಜ್ಯ ಬೆಳೆಯಾದ ದಾಳಿಂಬೆಯನ್ನು ಈ ಭಾಗದಲ್ಲಿ ಹೆಚ್ಚು ಜನ ಕೃಷಿ ಮಾಡುತ್ತಿದ್ದು, ಬ್ಯಾಂಕ್ ಹಾಗೂ ಪರಿಚಯಸ್ಥರಿಂದ ಸಾ

ಜಿ.ಪಂ ಸದಸ್ಯೆಯ ಪತಿ ಗ್ರಾ.ಪಂ. ಚುನಾವಣೆಯಲ್ಲಿ

ಕಳೆದ ಹತ್ತು ವರ್ಷದಿಂದ ದಂಪತಿಗಳು ಗ್ರಾ.ಪಂ ಸದಸ್ಯತ್ವ , ಜಿ.ಪಂ.ಸದಸ್ಯತ್ವದ ಹೀಗೆ ಒಂದಲ್ಲೊಂದು ಸ್ಥಾನದ ಮೂಲಕ ರಾಜಕೀಯದಲ್ಲಿದ್ದು, ಸದ್ಯ ಪತ್ನಿ ಜಿ.ಪಂ.ಸದಸ್ಯೆಯಾಗಿದ್ದರೂ ಕೂಡ ಪತಿರಾಯ ಗ್ರಾ.ಪಂ ಚುನಾವಣೆಗೆ ಅಭ್ಯರ್ಥಿಯಾಗುವ ಮೂಲಕ ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಹುಳಿಯಾರು ಹೋಬಳಿ ಹೊಯ್ಸಳಕಟ್ಟೆ ಕ್ಷೇತ್ರದ ಜಿ.ಪಂ ಸದಸ್ಯೆಯಾಗಿರುವ ನಿಂಗಮ್ಮ ಅವರ ಪತಿ ಯರೆಕಟ್ಟೆಯ ವೈ.ಕೆ.ರಾಮಯ್ಯನವರು ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣಾ ಕಣಕ್ಕಿಳಿಯುವುದರ ಮೂಲಕ ಮತ್ತೆ ಎಲ್ಲರ ಗಮನ ಸೆಳೆದಿದ್ದಾರೆ. ಬರಕನಹಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವಂತ ಊರಾದ ಯರೇಕಟ್ಟೆ ಕ್ಷೇತ್ರದಿಂದ ಸಾಮಾನ್ಯ ಅಭ್ಯರ್ಥಿ ಮೀಸಲು ಸ್ಥಾನಕ್ಕೆ ಇವರು ಸ್ಪರ್ಧಿಸಿದ್ದು ಸ್ಪರ್ಧಿಸಿದ್ದು, ಈ ಹಿಂದೆ ಇದೇ ಕ್ಷೇತ್ರದಿಂದ 2 ಬಾರಿ ಸದಸ್ಯರಾಗಿ ಒಮ್ಮೆ ಗ್ರಾ.ಪಂ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಹಾಲಿ ಜಿ.ಪಂ ಸದಸ್ಯೆಯಾಗಿರುವ ಇವರ ಪತ್ನಿ ಕೂಡ ಈಮುನ್ನಾ ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದು ನಂತರ ಜಿ.ಪಂ ಗೆ ಸ್ಪರ್ಧಿಸಿ ವಿಜೇತರಾದ ಬಳಿಕ ಗ್ರಾ.ಪಂ. ಸದಸ್ಯೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮಡದಿ ಜಿ.ಪಂ.ಸದಸ್ಯೆಯಾಗಿರುವ ಅಧಿಕಾರವಿದ್ದರೂ ಸಹ ಗಂಡ ಗ್ರಾ.ಪಂ. ಚುನಾವಣೆಗೆ ಸ್ಪರ್ಧಿಸಿದ್ದಾರಲ್ಲ ಎಂಬುದು ಸಾರ್ವಜನಿಕರ ಮಾತಾಗಿದೆ.

ಕಾವೇರಿದ ಪ್ರಚಾರಕ್ಕೆ ತಂಪು ತಂದ ಮಳೆ

 ದಿನದಿಂದ ದಿನಕ್ಕೆ ಕಾವೇರುತ್ತಿದ್ದ ಚುನಾವಣಾ ಪ್ರಚಾರಕ್ಕೆ ಕೆಂಡದಂತ ಬಿಸಿಲಿನ ತಾಪಕೂಡ ಸೇರಿ ಅಭ್ಯರ್ಥಿಗಳು ಹೈರಾಣಾಗಿದ್ದ ಸಮಯದಲ್ಲಿ ಶುಕ್ರವಾರ ಸಂಜೆ ಬಂದ ತಂಪೆರೆದಿದೆ. ಕಳೆದೊಂದು ವಾರದಿಂದ ಬಿಸಿಲಿನ ತಾಪ ಜೋರಾಗಿದ್ದು ಸುಡುಬಿಸಿಲಿನಲ್ಲಿ ಪ್ರಚಾರ ಹೇಗಪ್ಪ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಸಮಯದಲ್ಲಿ ಬಂದಿರುವ ಮಳೆ ಇಳೆಯನ್ನು ತಂಪುಮಾಡಿದೆ. ಬಿಸಿಲ ದಗೆಯ ಹೆಚ್ಚಳ ಕಂಡ ಅಭ್ಯರ್ಥಿಗಳು ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ತಮ್ಮ ಪ್ರಚಾರ ನಡೆಸುವಂತಾಗಿತ್ತು ಇದೀಗ ಮಳೆ ಬಂದು ತಂಪು ವಾತಾವರಣದಿಂದಾಗಿ ದಿನಪೂರ್ತಿಯ ಪ್ರಚಾರಕಾರ್ಯಕ್ಕೆ ನೆರವಾಗಿದೆ. ಹೆಸರಿಗೆ ಸಹಕಾರಿ : ಕಳೆದ ಹತ್ತು ದಿನಗಳಿಂದ ಮಳೆಬಾರದೆ ಬಿಸಿಲ ಬೇಗೆಯಿಂದ ತತ್ತರಿಸಿ ಹೂ ಬಿಡುವ ಹಂತದಲ್ಲಿದ್ದ ಮುಂಗಾರು ಬೆಳೆ ಹೆಸರಿಗೆ ಶುಕ್ರವಾರ ಸಂಜೆ ಬಂದ ಸಹಕಾರಿಯಾಗಿದೆ. ಈ ಹಿಂದೆ ಬಂದ ಪೂರ್ವ ಮುಂಗಾರು ಮಳೆಗೆ ಹೋಬಳಿ ವ್ಯಾಪ್ತಿಯ ಹಲವು ಹಳ್ಳಿಯ ರೈತರು ಹೆಸರು ಬಿತ್ತಿದ್ದರು. ನಂತರ ಕಾಲಕಾಲಕ್ಕೆ ಬಂದ ಮಳೆಯಿಂದಾಗಿ ಹೆಸರು ಹುಲುಸಾಗಿ ಬೆಳೆದು ನಳನಳಿಸುತ್ತಿತ್ತು ಆದರೆ ಕಳೆದ ಹತ್ತನ್ನೈರಡು ದಿನಗಳಿಂದ ಬಿಸಿಲ ಝಳ ಹೆಚ್ಚಿತ್ತೆ ಹೊರತು ಒಂದು ಹನಿ ಮಳೆ ಬಾರದೆಯಿದ್ದು ಯಾವಾಗ ಮಳೆ ಬರುತ್ತದೆ ಎಂದು ರೈತರು ಮುಗಿಲು ನೋಡುಂತಾಗಿತ್ತು. ಹೆಸರು ಹೂಕಟ್ಟುವ ಸಮಯದಲ್ಲಿ ಒಂದು ಹದ ಮಳೆ ಬಂದರೆ ಸಾಕು ಎನ್ನುವ ನಿರೀಕ್ಷೆಯಲ್ಲಿದ್ದ ರೈತರಿಗೆ ಶುಕ್ರವಾರ ಬಂ

ಅವಿರೋಧಆಯ್ಕೆ

ಹುಳಿಯಾರು ಸಮೀಪದ ಬೆಳುಗುಲಿ ಗ್ರಾಮ ಪಂಚಾಯಿತಿಯ ಗೂಬೆಹಳ್ಳಿ ಕ್ಷೇತ್ರದ ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಜಯಲಕ್ಷ್ಮಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣೆಯಲ್ಲಿ ಯಾವುದೇ ಕಲಹಕ್ಕೆ ಆಸ್ಪದ ಕೊಡಬೇಡಿ

ಜೂನ್ ೨ ರಂದು ನಡೆಯಲಿರುವ ಚುನಾವಣೆಗೆ ಈಗಾಗಲೇ ಬಹಿರಂಗಪ್ರಚಾರ ನಡೆಯುತ್ತಿದ್ದು ಅಭ್ಯರ್ಥಿ ಹಾಗೂ ಅವರ ಬೆಂಬಲಿಗರು ತಮ್ಮತಮ್ಮಲ್ಲಿ ಯಾವುದೇ ರೀತಿಯ ಗಲಾಟೆ, ಗದ್ದಲಗಳನ್ನು ಮಾಡಿಕೊಂಡು ಕಲಹಕ್ಕೆ ದಾರಿ ಮಾಡಿಕೊಡದೆ ಶಾಂತಯುತವಾಗಿ ಚುನಾವಣಾ ಪ್ರಚಾರ ಮಾಡಿಕೊಳ್ಳಿ ಎಂದು ಚಿ.ನಾ.ಹಳ್ಳಿಯ ಸರ್ಕಲ್ ಇಸ್ಪೆಕ್ಟರ್ ಎ.ಮಾರಪ್ಪ ತಿಳಿಸಿದರು. ಹುಳಿಯಾರಿನ ದುರ್ಗಮ್ಮನ ದೇವಾಲಯದ ಆವರಣದಲ್ಲಿ ನಡೆದ ಚುನಾವಣಾ ಪೂರ್ವ ಶಾಂತಿ ಸಭೆಯಲ್ಲಿ ಸಿಪಿಐ ಮಾರಪ್ಪ ಮಾತನಾಡಿದರು. ಹುಳಿಯಾರಿನ ಶ್ರೀದುರ್ಗಾಪರಮೇಶ್ವರಿ ದೇವಾಲಯದ ಆವರಣದಲ್ಲಿ ಪೋಲಿಸ್ ಇಲಾಖೆವತಿಯಿಂದ ಹಮ್ಮಿಕೊಂಡಿದ್ದ ವಾರ್ಡ್ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಚುನಾವಣ ಸಮಯದಲ್ಲಿ ಶಾಂತಿ ಕಾಪಾಡುವ ಬಗ್ಗೆ ಮಾತನಾಡಿದರು. ಸ್ಥಳೀಯ ಸಂಸ್ಥೆ ಚುನಾವಣೆಗಳು ಇತರ ಚುನಾವಣೆಗಿಂತ ಭಿನ್ನವಾಗಿ ನಡೆಯುವುದಿದ್ದು ಸ್ಪರ್ಧಿಸಿದ ಪ್ರತಿಯೊಬ್ಬರು ನಾನು ಗೆಲ್ಲಬೇಕು ಎಂಬ ಹಂಬಲದಿಂದ ಮತದಾರರ ಓಲೈಕೆಗೆ ಮುಂದಾಗುತ್ತಾರೆ. ಇದಕ್ಕಾಗಿ ಇನ್ನಿಲ್ಲದ ಕಸರತ್ತು ಮಾಡಲು ಮುಂದಾಗಿ ಗಲಾಟೆ ಗದ್ದಲಗಳುಂಟಾಗುತ್ತವೆ ಎಂದರು. ಮತದಾರರಿಗೆ ಆಮಿಷವೊಡ್ಡುವುದು ಕಾನೂನು ಬಾಹಿರವಾಗಿದ್ದು ಅವರ ಮೇಲೆ ಶಿಸ್ತುಕ್ರಮ ಜರುಗಿಸಲಾಗುವುದೆಂದರು. ಮತದಾರರ ಬ್ಲಾಕ್ ಗಳಲ್ಲಿ ಹಣ, ಹೆಂಡ ಹಂಚುವುದು ಹಾಗೂ ಶಾಂತಿಗೆ ಧಕ್ಕೆತರುವಂತಹ ಘಟನೆಗಳು ಕಂಡುಬಂದಲ್ಲಿ ಠಾಣೆಯ ಗಮನಕ್ಕೆ ತರುವಂತೆ ತಿಳಿಸಿದರು. ಹುಳಿಯಾರು ಠಾಣೆಯ

ಸಿಡಿಲು ಬಡಿದು ವ್ಯಕ್ತಿ ಸಾವು

ಹುಳಿಯಾರು  ಹೋಬಳಿಯಾದ್ಯಂತ ಶುಕ್ರವಾರ ಸಂಜೆ ಉತ್ತಮ ಮಳೆಯಾಗಿದ್ದು ಮಳೆಯೊಂದಿಗೆ ಉಂಟಾದ ಸಿಡಿಲಿಗೆ ವ್ಯಕ್ತಿಯೊಬ್ಬ ಬಲಿಯಾದ ಘಟನೆ ಹೋಬಳಿ ಸೀಗೆಬಾಗಿಯಲ್ಲಿ ಘಟಿಸಿದೆ. ಹೊಳೆಬಸಪ್ಪ(೭೦) ಎಂಬಾತನಿಗೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈತ ಎಂದಿನಂತೆ ಕುರಿ ಮೇಯಿಸಿಕೊಂಡು ವಾಪಸ್ಸ್ ಮನೆಗೆ ಬರುವ ವೇಳೆ ಊರ ಸಮೀಪದ ಕೆರೆ ಬಳಿ ಬಂದಾಗ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪಿಎಸೈ ಪ್ರವೀಣ್ ಕುಮಾರ್ ಹಾಗೂ ಎಎಸ್ ಐ ರಾಜಣ್ಣ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸಿಬಿಎಸ್ ಸಿ : ವಿದ್ಯಾವಾರಿಧಿ ಸ್ಕೂಲ್ ಗೆ ಶೇ.೧೦೦ ಫಲಿತಾಂಶ

೨೦೧೪-೧೫ನೇ ಸಾಲಿನ ಸಿಬಿಎಸ್ ಸಿ ಫಲಿತಾಂಶ ಗುರುವಾರದಂದು ಪ್ರಕಟವಾಗಿದ್ದು ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ಗೆ ಶೇ. ೧೦೦ ರಷ್ಟು ಫಲಿತಾಂಶ ಬಂದಿರುವುದಾಗಿ ಸಂಸ್ಥೆಯ ಕಾರ್ಯದರ್ಶಿ ಕವಿತಾ ಕಿರಣ್ ಕುಮಾರ್ ತಿಳಿಸಿದ್ದಾರೆ. ಪರೀಕ್ಷೆಗೆ ಕುಳಿತಿದ್ದ ಒಟ್ಟು ೪೧ ವಿದ್ಯಾರ್ಥಿಗಳ ಪೈಕಿ ಎಲ್ಲರೂ ಉತ್ತೀರ್ಣರಾಗಿದ್ದು            ಟಿ.ಎನ್.ಪೃಥಿರಾಜ್, ಹೆಚ್.ಎ.ಸೌರಭ,ಆರ್.ರಂಜಿತ, ಎನ್.ಸುಪ್ರಿತಾ,ತಸ್ಮಿಯಾಖಾನಂ ವಿದ್ಯಾರ್ಥಿಗಳು ೧೦ ಪಾಯಿಂಟ್ ಗೆ ೧೦ ಪಾಯಿಂಟ್ ಗಳಿಸಿದ್ದಾರೆ.   ಲಾಂಚನ ಎಸ್(೯.೮ ಪಾಯಿಂಟ್),  ಅಕ್ಷರ,ಅಭಿಷೇಕ್,ನಿಖಿಲ್,ಮಧುಅವರುಗಳು ೯.೬ ಪಾಯಿಂಟ್, ಅಭಿಷೇಕ್,ಐಶ್ವರ್ಯ,ಪುನೀತ್,ಧನುಷ್ ವಿದ್ಯಾರ್ಥಿಗಳು ೯.೩ ಪಾಯಿಂಟ್ ಹಾಗೂ  ಕೆ.ವಿ.ಸ್ನೇಹ. ೯ ಪಾಯಿಂಟ್ ಗಳಿಸಿದ್ದು  ಶಾಲೆಗೆ ಕೀರ್ತಿ ತಂದಿದ್ದಾರೆ. ಹೆಚ್ಚು ಪಾಯಿಂಟ್ ಗಳನ್ನು ತೆಗೆಯುವ ಮೂಲಕ ಸಂಸ್ಥೆ, ಶಾಲೆ ಹಾಗೂ ಪೋಷಕರಿಗೆ ಕೀರ್ತಿತಂದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಕಿರಣ್ ಕುಮಾರ್, ಪ್ರಾಂಶುಪಾಲ ರವಿ ಹಾಗೂ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.

ಆಟೋ-ಟ್ರ್ಯಾಕ್ಟರ್ ಡಿಕ್ಕಿ : ಮೂವರಿಗೆ ಗಂಭೀರಗಾಯ

ಆಟೋ ಹಾಗೂ ಟ್ರ್ಯಾಕ್ಟರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಆಟೋದಲ್ಲಿದ್ದ ಮೂವರಿಗೆ ತೀವ್ರ ಗಾಯಗಳಾಗಿರುವ ಘಟನೆ ಹೋಬಳಿ ದಸೂಡಿ ಸಮೀಪದ ಮರೆನಡುಪಾಳ್ಯದ ಬಳಿ ಗುರುವಾರ ಮಧ್ಯಾಹ್ನ ೧೨ರ ಸಮಯದಲ್ಲಿ ಘಟಿಸಿದೆ. ಆಟೋ-ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡವರು ದಸೂಡಿ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಪರದಾಡುವಂತಾಗಿತ್ತು. ದಸೂಡಿಯಿಂದ ಹೊಯ್ಸಳಕಟ್ಟೆಗೆ ಮರೆನಡು ಮಾರ್ಗವಾಗಿ ಬರುತ್ತಿದ್ದ ಆಟೋ ಮರೆನಡುಪಾಳ್ಯದ ಸಮೀಪದ ರಸ್ತೆ ತಿರುವಿನಲ್ಲಿ ಎದುರಿನಿಂದ ಬಂದ ಟ್ಯ್ರಾಕ್ಟರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಟೋದಲಿದ್ದ ಶೇಷಪ್ಪನಹಳ್ಳಿಯ ರೇವಣ್ಣ ಹಾಗೂ ಮಾರಕ್ಕ ,ಬಲ್ಲಪ್ಪನಹಳ್ಳಿಯ ಜಯಮ್ಮ ಎಂಬುವರಿಗೆ ಕೈಕಾಲು, ತಲೆ ಹಾಗೂ ಮುಖದ ಭಾಗದಲ್ಲಿ ತೀವ್ರಗಾಯಗಳಾಗಿವೆ. ಇವರೊಂದಿಗೆ ಆಟೋದಲಿದ್ದ ಎಂಟು ಮಂದಿಗೆ ಸಣ್ಣಪುಟ್ಟಗಾಯಗಳಾಗಿವೆ. ಆಟೋಚಾಲಕ ಪರಾರಿಯಾಗಿದ್ದಾನೆ. ಗಾಯಗೊಂಡವರನ್ನು ಸ್ಥಳೀಯರೆಲ್ಲಾ ಸೇರಿ ದಸೂಡಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರಾದರೂ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಪರದಾಡುವಂತಾಗಿ ನಂತರ ಮಧ್ಯಾಹ್ನ ೨ ಗಂಟೆ ವೇಳೆಗೆ ಹುಳಿಯಾರಿನ ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಮಾಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಸಾರ್ವಜನಿಕರ ಅಕ್ರೋಶ : ದಸೂಡಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಇಲ್ಲಿಗೆ ಬರುವ ರೋಗಿಗಳು ಪರದಾ

ಕೆಂಕೆರೆ ೧೭ ಸ್ಥಾನಕ್ಕೆ ೫೬ ಅಭ್ಯರ್ಥಿ ಕಣದಲ್ಲಿ

ಹುಳಿಯಾರು  ಹೋಬಳಿಯ ಕೆಂಕೆರೆ ಗ್ರಾಮ ಪಂಚಾಯ್ತಿಯ ಒಟ್ಟು ೧೭ ಸ್ಥಾನದ ಆಯ್ಕೆ ೫೬ ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು ಪ್ರಚಾರದಲ್ಲಿ ತೊಡಗಿದ್ದಾರೆ. ೧ ಬ್ಲಾಕ್ ನ ೪ ಸ್ನಾನಕ್ಕೆ ೧೩ ಮಂದಿ , ೨ ನೇ ಬ್ಲಾಕ್ ನ ೩ ಸ್ಥಾನಕ್ಕೆ ೧೦ ಮಂದಿ , ೩ ಬ್ಲಾಕ್ ನ ೪ ಸ್ಥಾನಕ್ಕೆ ೧೧ ಮಂದಿ , ೪ ಬ್ಲಾಕ್ ನ ೨ ಸ್ಥಾನಕ್ಕೆ ೪ ಮಂದಿ ಹಾಗೂ ೫ ನೇ ಬ್ಲಾಕ್ ನ ೪ ಸ್ಥಾನಕ್ಕೆ ೧೮ ಮಂದಿ ಸ್ಪರ್ಧಿಸಿದ್ದಾರೆ. ಕೆಲ ವಿದ್ಯಾವಂತ ಯುವಕರು ಸಹ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ತಮ್ಮಲ್ಲೇ ಒಂದು ಗ್ರೂಪ್ ಮಾಡಿಕೊಂಡರೆ, ಕೆಲವರು ಒಬ್ಬಂಟಿಯಾಗಿ ಹಾಗೂ ಈ ಹಿಂದೆ ಗೆದಿದ್ದವರು ತಮ್ಮ ಬೆಂಬಲಿಗರ ಜೊತೆಯಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. 

ಕೆಂಕೆರೆ : ಅವಿರೋಧಆಯ್ಕೆ

ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮ ಪಂಚಾಯ್ತಿಯ ೪ ನೇ ಬ್ಲಾಕ್ ನ ಬಿಸಿಎಂ ಎ ಗೆ ಮೀಸಲು ಕ್ಷೇತ್ರಕ್ಕೆ ಕೆಂಕೆರೆಗೊಲ್ಲರಹಟ್ಟಿಯ ಅಜ್ಜಗಯ್ಯ ಅವರ ಪತ್ನಿ ಕೆ.ಗಿರಿಜಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಸಿಎಂ-ಎ ವರ್ಗಕ್ಕೆ ಮೀಸಲಿರಿಸಿದ್ದ ಒಂದು ಸ್ಥಾನಕ್ಕೆ ಗಿರಿಜಮ್ಮ , ಭಾಗ್ಯಮ್ಮ , ಕರಿಯಮ್ಮ ಹಾಗೂ ಭಾಗ್ಯಮ್ಮ ನಾಮಪತ್ರ ಸಲ್ಲಿಸಿದ್ದು ಗಿರಿಜಮ್ಮನನ್ನು ಹೊರತುಪಡಿಸಿ ಉಳಿದ ಮೂವರು ನಾಮಪತ್ರ ಹಿಂಪಡೆದಿದ ಹಿನ್ನಲೆಯಲ್ಲಿ ಗಿರಿಜಮ್ಮ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಹಳ್ಳಿಹಳ್ಳಿಗಳಲ್ಲೂ ಹೆಚ್ಚಿದ ಪ್ರಚಾರದ ಕಾವು : ಬಾಡೂಟಕ್ಕೆ ಬಂತು ಡಿಮ್ಯಾಂಡ್

ಮತಯಾಚನೆಯಲ್ಲಿ ಗುರ್ತಿನ ಚಿಹ್ನೆಗೆ ಒತ್ತು --------- ವರದಿ: ಡಿ.ಆರ್.ನರೇಂದ್ರಬಾಬು --------- ಹುಳಿಯಾರು : ಹೋಬಳಿ ವ್ಯಾಪ್ತಿಯ ಎಲ್ಲಾ ಪಂಚಾಯ್ತಿಗಳಲ್ಲಿ ಚುನಾವಣೆ ರಂಗೇರಿದ್ದು ಪ್ರಚಾರ ಭರದಿಂದ ಸಾಗಿದೆ. ಪಂಚಾಯ್ತಿಯ ಚುನಾವಣೆಯ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ಹೆಸರು ಹಾಗೂ ಅವರ ಚಿಹ್ನೆಗಳನ್ನು ನೀಡಿದ್ದೆ ತಡ ಅಭ್ಯರ್ಥಿಗಳು ತಮ್ಮ ಭಾವಚಿತ್ರ ಹಾಗೂ ಚಿಹ್ನೆಯನ್ನೊಳಗೊಂಡ ಕರಪತ್ರ ಮುದ್ರಿಸಿಕೊಂಡು ತಮ್ಮತಮ್ಮ ಬ್ಲಾಕ್ ಗಳ ಮನೆಮನೆ ಬಾಗಿಲಿಗೆ ತೆರಳಿ ತಮಗೆ ಓಟು ಕೊಡಿ ಎಂದು ನಾಮೇಲು ತಾಮೇಲು ಎಂಬಂತೆ ಮತಯಾಚನೆ ಮಾಡುತ್ತಿದ್ದಾರೆ. ತಮ್ಮದೇ ಆದ ಲೆಕ್ಕಾಚಾರದಂತೆ ಸಂಬಂಧಪಟ್ಟ ಮತದಾರರ ಮನೆಗಳಿಗೆ ಎಡತಾಕುತ್ತಿರುವ ಅಭ್ಯರ್ಥಿಗಳು ಮತದಾರರ ಮನಗೆಲ್ಲಲ್ಲು ಹರಸಾಹಸ ಮಾಡುತ್ತಿದ್ದಾರೆ. ಹುಳಿಯಾರಿನಲ್ಲಿ ಅಭ್ಯರ್ಥಿಯೊಬ್ಬರು ಮುಂಜಾನೆಯೇ ಬಸ್ ನಿಲ್ದಾಣದಲ್ಲಿ ಪ್ರಚಾರದಲ್ಲಿ ತೊಡಗಿಕೊಂಡಿರುವುದು. ಪಟ್ಟಣದಲ್ಲಿ ಬೆಳಿಗ್ಗೆಯೇ ಪ್ರಚಾರ ಕೈಗೊಳ್ಳುತ್ತಿರುವ ಅಭ್ಯರ್ಥಿಗಳು ಕೈಯ್ಯಲ್ಲಿ ಮತದಾರರ ಪಟ್ಟಿ ಹಾಗೂ ಕರಪತ್ರ ಹಿಡಿದು ಮತದಾರರ ಭೇಟಿಯಲ್ಲಿ ತೊಡಗಿದ್ದಾರೆ. ಮತದಾರರ ಪಟ್ಟಿಯಂತೆ ಮನೆಯಲ್ಲಿರುವ ಎಲ್ಲರನ್ನೂ ಸಂಪರ್ಕಿಸುತ್ತಿದ್ದಾರೆ. ಹಳ್ಳಿಗಳಲ್ಲಿ ಜನ ಮಧ್ಯಾಹ್ನದ ವೇಳೆ ತೋಟದ ಕೆಲಸಗಳಿಗೆ ಹೋಗಿರುತ್ತಾರೆಂಬುದನ್ನು ಅರಿತ ಕೆಲ ಸದಸ್ಯರು ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಅವರುಗಳ ಮನೆಗಳಿಗೆ ತೆರಳಿ ಮತಯಾಚಿಸುತ್ತಿದ್ದಾರೆ ಜ

ಕವಿಕಾವ್ಯ ಗೋಷ್ಠಿಯಲ್ಲಿ ಸರ್ವಜ್ಞನ ಸಂದೇಶ

     ಹುಳಿಯಾರು ಹೋಬಳಿಯ ಚಿಕ್ಕಬಿದರೆಯ ಮಾಜಿ ಗ್ರಾ.ಪಂ.ಅಧ್ಯಕ್ಷ ಸಿ.ಎನ್.ಕೃಷ್ಣಪ್ಪ ಅವರ ನಿವಾಸದಲ್ಲಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಯೋಜಿಸಿದ್ದ ಮನೆಮನೆಗಳಲ್ಲಿ ಪಾಕ್ಷಿಕ ಕನ್ನಡ ಕವಿಕಾವ್ಯಗೋಷ್ಠಿ ಕಾರ್ಯಕ್ರಮದಲ್ಲಿ ಸರ್ವಜ್ಞನ ತ್ರಿಪದಿಗಳ ಸಂದೇಶ ಕುರಿತು ಉಪನ್ಯಾಸ ನಡೆಸಲಾಯಿತು. ನಿವೃತ್ತ ಶಿಕ್ಷಕ ಕೋಡಿಹಳ್ಳಿ ಸಿದ್ದರಾಮಯ್ಯ ಅಧ್ಯಕ್ಷತೆವಹಿಸಿ ಮಾತನಾಡಿ, ಸರ್ವಜ್ಞನ ವಚನಗಳನ್ನು ಹೇಳಿದರಲ್ಲದೆ ಕವಿಯ ಪ್ರತಿಭೆ ಹಾಗೂ ವ್ಯಕ್ತಿತ್ವದ ಬಗ್ಗೆ ತಿಳಿಸಿದರು.ಕನ್ನಡದ ಆಡುನುಡಿಯಲ್ಲಿ ನಮ್ಮ ಬದುಕಿಗೆ ಮಾರ್ಗದರ್ಶನ ನೀಡಿದ ಮಹಾನ್ ಕವಿ ಸರ್ವಜ್ಞನಾಗಿದ್ದಾನೆಂದು ಬಣ್ಣಿಸಿದರು. ಸಾಹಿತಿ ಹಾಗೂ ನಿವೃತ್ತ ಉಪನ್ಯಾಸಕರಾದ ಹುಳಿಯಾರಿನ ತ.ಶಿ.ಬಸವಮೂರ್ತಿ ಅವರು ತಮ್ಮ ಉಪನ್ಯಾಸದಲ್ಲಿ ಆಶುಕವಿ ಸರ್ವಜ್ಞ ಕುರಿತಂತೆ ವಿವರಗಳನ್ನು ತಿಳಿಸಿದರು. ವಿದ್ಯೆ,ಗುರು,ಗೃಹಸ್ಥ ಜೀವನ, ದಾನ,ಪರೋಪಕಾರ, ಕೃಷಿ,ಆರೋಗ್ಯ ಇತರೆ ವಿಷಗಳನ್ನು ಕುರಿತು ಸರ್ವಜ್ಞ ಹೇಳಿರುವ ವಚನಗಳನ್ನು ಉಲ್ಲೇಖಿಸಿ ಸರ್ವಜ್ಞನನ ಲೋಕಾನುಭವವನ್ನು ಸ್ಮರಿಸಿದರು. ಆಶ್ರಯದಾತ ಕೋಡಿಹಳ್ಳಿ ಸಿದ್ದರಾಮಯ್ಯ ಅವರು ಕುಮಾರವ್ಯಾಸ ಭಾರತದ ಪೀಠಿಕಾ ಸಂಧಿಯನ್ನು ಗಮಕವಾಚನ ಮಾಡಿದರು. ಈ ವೇಳೆ ಶಿಕ್ಷಕ ಉಮೇಶ್,ಮುಖ್ಯಶಿಕ್ಷಕ ಜಯಣ್ಣ, ನಾಗರಾಜು ಸೇರಿದಂತೆ ಇತರರಿದ್ದರು. ಚೈತ್ರ,ಸಹನ,ಗಗನ ಪ್ರಾರ್ಥಿಸಿದರು.

ಮತಯಾಚನೆಗೆ ಅಭ್ಯರ್ಥಿಗಳ ವಿವಿಧ ಕಸರತ್ತು ಫೇಸ್ ಬುಕ್ ನಲ್ಲೂ ಶುರುವಾಯ್ತು ಮತಯಾಚನೆ

ಎಂಎಲ್ ಎ ಹಾಗೂ ಎಂಪಿ ಚುನಾವಣೆಗಳಿಗಿಂತ ಗ್ರಾ.ಪಂ ಚುನಾವಣೆ ಹೆಚ್ಚು ಬಿರುಸಿನಿಂದ ನಡೆಯಲಿದ್ದು , ಇಲ್ಲಿ ಪ್ರತಿಯೊಂದು ಮತಕ್ಕು ಹೆಚ್ಚು ಮನ್ನಣೆಯಿದೆ. ಒಂದೊಂದು ಮತ ಪಡೆಯಲು ಅಭ್ಯರ್ಥಿಗಳು ವಿವಿಧ ಕಸರತ್ತುಗಳನ್ನು ಮಾಡುವಂತಾಗಿದೆ. ಜೂನ್ ೨ ರಂದು ನಡೆಯಲಿರುವ ಚುನಾವಣೆಗೆ ಮಂಗಳವಾರದಿಂದ ಮೂರ್ನಾಲ್ಕು ದಿನ ಬಹಿರಂಗ ಪ್ರಚಾರಕ್ಕೆ ಅವಕಾಶವಿದ್ದು ಕಣದಲ್ಲಿರುವ ಅಭ್ಯರ್ಥಿಗಳು ಮತದಾರರ ಮನವೊಲಿಸಲು ಮುಂದಾಗಿದ್ದಾರೆ. ಕೆಲ ಅಭ್ಯರ್ಥಿಗಳು ತಾವು ಈ ಹಿಂದೆ ಮಾಡಿದ ಕಾರ್ಯಗಳನ್ನು ಹೇಳುತ್ತಾ ಮತಯಾಚಿಸಿದರೆ, ಮತ್ತೆ ಕೆಲವರು ತಮ್ಮದೇ ಆದ ಧ್ಯೇಯಗಳನ್ನೊಳಗೊಂಡ ಕರಪತ್ರಗಳನ್ನು ಮಾಡಿಸಿ ಮತದಾರರಿಗೆ ನೀಡುವ ಮೂಲಕ ಮತಯಾಚಿಸುತ್ತಿದ್ದಾರೆ.ಇನ್ನುಳಿದ ಅಭ್ಯರ್ಥಿಗಳು ಸದಾ ತಮ್ಮ ಕೈಲಿ ಕರಪತ್ರಗಳನ್ನು ಹಿಡಿದು ತಮ್ಮ ಬ್ಲಾಕ್ ನವರು ಎಲ್ಲಾದರೂ ಕಂಡರೆ ಸಾಕು ತಮಗೊಂದು ಓಟು ಕೊಡಿ, ಮರೆಯಬೇಡಿ ನಮ್ಮ ಗುರುತು ಗೊತ್ತಲ್ಲ ಎಂದು ಕೇಳಿಕೊಳ್ಳುತ್ತಿದ್ದಾರೆ. ಹುಳಿಯಾರು ಗ್ರಾ.ಪಂ. ಚುನಾವಣೆಯಲ್ಲಿ ಫೇಸ್ ಬುಕ್ , ವಾಟ್ಸ್ ಅಪ್ ಕೂಡ ಬಳಕೆಯಾಗುತ್ತಿದ್ದು ಅಭ್ಯರ್ಥಿಗಳು ವಾಟ್ಸ್ ಅಪ್ ನಲ್ಲಿ ಮತಯಾಚನೆ ಮಾಡಿರುವ ಚಿತ್ರ. ಹುಳಿಯಾರಿನ ೭ ನೇ ಬ್ಲಾಕ್ ನ ಅಭ್ಯರ್ಥಿ ಬಿ.ಎಸ್.ಮೋಹನ್ ಅವರು ತಮ್ಮದೇ ಆದ ಧ್ಯೇಯಗಳನ್ನೊಳಗೊಂಡ ಕರಪತ್ರ ಮಾಡಿಸಿ , ಅದನ್ನು ಮತದಾರರಿಗೆ ನೀಡುವ ಮೂಲಕ ಮತಯಾಚನೆ ಮಾಡಿದ್ದಾರೆ. ಅವರು ಮಾಡಿಸಿರುವ ಕರಪತ್ರದಲ್ಲಿ

ಕರ ಪತ್ರ ಮುದ್ರಣಕ್ಕೆ ಪ್ರಿಂಟಿಂಗ್ ಪ್ರೆಸ್ ಗೆ ಮುಗಿಬಿದ್ದ ಅಭ್ಯರ್ಥಿಗಳು

ಗ್ರಾ.ಪಂ.ಯ ಚುನಾವಣೆಯಲ್ಲಿ ಅಂತಿಮವಾಗಿ ಉಳಿದಿರುವ ಅಭ್ಯರ್ಥಿಗಳ ಪಟ್ಟಿ ಹಾಗೂ ಚಿಹ್ನೆಯನ್ನು ಚುನಾವಣಾಧಿಕಾರಿಗಳು ಸೋಮವಾರ ಪ್ರಕಟಗೊಳಿಸುತ್ತಿದ್ದಂತೆಯೆ ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕಾಗಿ ಕರಪತ್ರ ಮುದ್ರಿಸಲು ಪ್ರಿಂಟಿಂಗ್ ಪ್ರೆಸ್ ಗಳಲ್ಲಿಗೆ ಮುಗಿಬಿದಿದ್ದಾರೆ. ಹುಳಿಯಾರಿನ ಪ್ರಿಂಟಿಂಗ್ ಪ್ರೆಸ್ ಒಂದರ ಮುಂದೆ ಬೈಕ್ ಗಳು ಸಾಲುಗಟ್ಟಿ ನಿಂತಿರುವುದು. ಕಳೆದ ತಿಂಗಳೆಲ್ಲಾ ಮದುವೆ ಹಾಗೂ ಜಾತ್ರಾ ಆಹ್ವಾನ ಪತ್ರಿಕೆಗಳನ್ನು ಪುರುಸೊತ್ತಿಲ್ಲದೆ ಮುದ್ರಿಸಿದ್ದ ಪ್ರಿಂಟಿಂಗ್ ಪ್ರೆಸ್ ನವರಿಗೆ ಇದೀಗ ಬಂದ ಚುನಾವಣೆ ಹಬ್ಬವಾಗಿ ಮತ್ತೊಂದು ಅವಕಾಶ ಕಲ್ಪಿಸಿದೆ. ಕಳೆದೊಂದು ವಾರದಿಂದ ಚುನಾವಣಾ ಕಾವು ಏರುತ್ತಲೇ ಬಂದಿದ್ದರೂ ಸಹ ಗುರುತಿನ ಚಿಹ್ನೆ ಇರುವ ಕರಪತ್ರವಿಲ್ಲದೆ ಪ್ರಚಾರದ ಅಬ್ಬರ ಅಷ್ಟಾಗಿ ಕಂಡುಬಂದಿರಲಿಲ್ಲ. ಇದೀಗ ಚಿಹ್ನೆ ಕೈಗೆ ಸಿಗುತ್ತಿದ್ದಂತೆಯೆ ಸೋಮವಾರ ಸಂಜೆಯೇ ಅಭ್ಯರ್ಥಿಗಳು ಪ್ರೆಂಟಿಂಗ್ ಪ್ರೆಸ್ ಗೆ ಧಾವಿಸಿ ತಮ್ಮ ಹೆಸರು , ಚಿಹ್ನೆ ಹಾಗೂ ಪೋಟೋವನ್ನು ನೀಡಿ ಶೀಘ್ರವೇ ಸಿದ್ದಪಡಿಸಿಕೊಡುವಂತೆ ಪ್ರೆಸ್ ನವರ ಹಿಂದೆ ಬಿದಿದ್ದಾರೆ. ನಾಳೆವರೆಗೂ ಕಾಯಲು ತಯಾರಿಲ್ಲದ ಕೆಲ ಅಭ್ಯರ್ಥಿಗಳು ಹಣ ಎಷ್ಟಾದರೂ ಸರಿ ಈ ಕೂಡಲೇ ಮುದ್ರಿಸಿ ಕೊಡಿ ಎಂದು ದುಂಬಾಲು ಬಿದಿದ್ದು, ಪ್ರೆಸ್ ನವರಿಗೆ ತಲೆನೋವಾಗಿ ಪರಿಣಮಿಸಿದೆ. ಕರಪತ್ರ ಕೈಗೆ ಸಿಗುವುದು ತಡವಾದಲ್ಲಿ ಪ್ರಚಾರಕ್ಕೂ ಅಡಚಣೆಯಾಗುತ್ತದೆಂದು ಪಟ್ಟಣದ ಶ್ರೀ

ಫೇಲಾದವೆಂದು ಆತ್ಮಸ್ಥರ್ಯ ಕಳೆದುಕೊಳ್ಳಬೇಡಿ

ಎಸ್.ಎಸ್.ಎಲ್.ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ತಾವು ಫೇಲಾದೆ ಎಂದು ಆತ್ಮಸ್ಥೈರ್ಯ ಕಳೆದುಕೊಳ್ಳದೆ ಮತ್ತೊಮ್ಮೆ ಪೂರಕ ಪರೀಕ್ಷೆಗಳನ್ನು ತೆಗೆದುಕೊಂಡು ಚೆನ್ನಾಗಿ ಓದಿ ಹೆಚ್ಚು ಅಂಕಗಳಿಸುವಂತೆ ಬಸವೇಶ್ವರ ಪ್ರೌಢಶಾಲೆಯ ಮುಖ್ಯಶಿಕ್ಷಕ ಕೆ.ಎಸ್.ಈಶ್ವರಯ್ಯ ತಿಳಿಸಿದರು. ಹುಳಿಯಾರಿನ ಬಸವೇಶ್ವರಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಕೆ.ಎಸ್.ಈಶ್ವರಯ್ಯ ಮಾತನಾಡಿದರು. ಜಿಲ್ಲಾಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹುಳಿಯಾರಿನ ಬಸವೇಶ್ವರಪ್ರೌಢಶಾಲೆಯಲ್ಲಿ ಸೋಮವಾರ ಅಯೋಜಿಸಿದ್ದ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಯಾವೊಬ್ಬ ವಿದ್ಯಾರ್ಥಿಯೂ ಪರೀಕ್ಷೆಯಲ್ಲಿ ತಾನು ಫೇಲಾಗಲಿ ಎಂದು ಬರೆದಿರುವುದಿಲ್ಲ ಕೆಲ ಸಮಯ ಯಾವುದೋ ಒಂದು ವಿಷಯ ಕಠಿಣವೆಂದು ಅದರ ಬಗ್ಗೆ ಹೆಚ್ಚು ಆಸಕ್ತಿ ತೋರದೆ ಹೋದಾಗ ಫೇಲಾಗಿರುತ್ತಾರೆ ಎಂದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂಗ್ಲಿಷ್ ಹಾಗೂ ಗಣಿತವನ್ನು ಕಷ್ಟವೆಂದು ಹೆಚ್ಚು ಅಭ್ಯಾಸಿಸದೆ ಫೇಲಾಗಿದ್ದಾರೆ. ವಿದ್ಯಾರ್ಥಿಗಳು ಯಾವುದೇ ವಿಷಯವನ್ನು ಕಷ್ಟ ಎನ್ನದೆ, ತಮ್ಮ ಸಮಸ್ಯೆಯನ್ನು ಶಿಕ್ಷಕರ ಬಳಿ ಹೇಳಿಕೊಳ್ಳುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದರು. ವಿದ್ಯಾರ್ಥಿಗಳ

ಹುಳಿಯಾರು ಪಂಚಾಯ್ತಿ : ಅಖಾಡದಲ್ಲಿ ೧೬೧ ಅಭ್ಯರ್ಥಿಗಳು ೨೬ ಮಂದಿ ನಾಮಪತ್ರ ವಾಪಸ್ಸ್

ಸ್ಥಳೀಯ ಗ್ರಾ.ಪಂ.ಚುನಾವಣೆಗಳಲ್ಲಿ ಕುತೂಹಲ ಕೆರಳಿಸಿರುವ ಹುಳಿಯಾರು ಗ್ರಾ.ಪಂ ಯ ೩೯ ಸದಸ್ಯ ಸ್ಥಾನಗಳಿಗೆ ಒಟ್ಟು ೧೯೦ ಉಮೇದುವಾರಿಕೆ ಸಲ್ಲಿಕೆಯಾಗಿ, ೩ ನಾಮಪತ್ರ ತಿರಸ್ಕೃತವಾಗಿ ಉಳಿದಿದ್ದ ೧೮೭ ಆಕಾಂಕ್ಷಿಗಳ ಪೈಕಿ ಸೋಮವಾರ ೨೬ ಮಂದಿ ತಮ್ಮ ನಾಮಪತ್ರ ವಾಪಸ್ಸ್ ಪಡೆದಿದ್ದು ಅಂತಿಮವಾಗಿ ಒಟ್ಟು ೧೬೧ ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿದ್ದಾರೆ. ಹುಳಿಯಾರು ಗ್ರಾ.ಪಂ. ಆವರಣದಲ್ಲಿ ಚಿಹ್ನೆ ಪಡೆಯಲು ಬೆಂಬಲಿಗರೊಂದಿಗೆ ಕಾದುನಿಂತಿದ್ದ ಅಭ್ಯರ್ಥಿಗಳು. ಹರಸಾಹಸ: ಕಳೆದೆರಡು ದಿನಗಳಿಂದ ತಮ್ಮತಮ್ಮ ವಾರ್ಡ್ ಗಳಲ್ಲಿ ಗೆಲ್ಲಲು ಅಡ್ಡಿಯಾಗಿರುವ ಕೆಲವರ ನಾಮಪತ್ರ ವಾಪಸ್ಸ್ ತೆಗೆಯಲು ಹರಸಾಹಸ ನಡೆಸಿದ್ದ ಕೆಲ ಅಭ್ಯರ್ಥಿಗಳು. ಎದುರಾಳಿಗಳಿಗೆ ನಾನಾರೀತಿಯ ಅಮೀಷವೊಡ್ಡಿ, ಪ್ರಭಾವಿಗಳಿಂದ ಹೇಳಿಸಿ, ರಾಜಕೀಯ ನಾಯಕರುಗಳಿಂದ ಒತ್ತಡ ತರುವ ಮೂಲಕ ಮನವೊಲಿಸಿ ಇಂದು ಪಂಚಾಯ್ತಿಯಲ್ಲಿ ನಾಮಪತ್ರ ವಾಪಸ್ಸ್ ಪಡಿಸುವಂತೆ ಮಾಡುವಲ್ಲಿ ಸಫಲರಾದರು. ಅವರನ್ನು ಎಲ್ಲೂ ಹೋಗದಂತೆ ಕಾಯ್ದುಕೊಂಡಿದ್ದು ಇಂದು ಮಧ್ಯಾಹ್ನ ೩ರರೊಳಗೆ ನಾಮಪತ್ರ ವಾಪಸ್ಸ್ ತೆಗೆಸುವ ಮೂಲಕ ನಿಟ್ಟುಸಿರು ಬಿಟ್ಟರು. ನಾಮಪತ್ರ ವಾಪಸ್ಸ್ ಪಡೆಯುವ ಹಿನ್ನಲೆಯಲ್ಲಿ ಗ್ರಾ.ಪಂ.ಆವರಣ ಬಾರಿ ಜನಸ್ತೋಮದಿಂದ ತುಂಬಿತುಳುಕುತ್ತಿತ್ತು. ಜಿಲ್ಲೆಯಲ್ಲಿಯೇ ದೊಡ್ಡ ಪಂಚಾಯ್ತಿ ಹಾಗೂ ಹೆಚ್ಚು ಸದಸ್ಯ ಸ್ಥಾನ ಹೊಂದಿರುವ ಖ್ಯಾತಿ ಹೊಂದಿರುವ ಹುಳಿಯಾರು ಗ್ರಾ.ಪಂ. ಚುನಾವಣೆ ಈ ಬಾರಿ ಜಿದ್ದಾಜಿದ್ದಿನಿಂದ ಕೂಡಿದೆ

ಮದ್ಯದಂಗಡಿ ವಿವಾದ : ಅಬಕಾರಿ ಉಪ ಅಯುಕ್ತರ ಸಮ್ಮುಖದಲ್ಲೇ ಮತ್ತೊಮ್ಮೆ ಅಳತೆ ರಂಗನಾಥಸ್ವಾಮಿ ದೇವಾಲಯಕ್ಕೆ ೯೬.೩ ಮೀ ಅಂತರ

ಪಟ್ಟಣದ ಜನನಿಬಿಡ ಪ್ರದೇಶದಲ್ಲಿರುವ ಶ್ರೀ ರಂಗನಾಥ ಲಿಕ್ಕರ್ ಷಾಪ್ ತೆರವು ವಿವಾದದ ಹಿನ್ನಲೆಯಲ್ಲಿ ಸೋಮವಾರ ಬೆಳಿಗ್ಗೆ ತುಮಕೂರು ಜಿಲ್ಲಾ ಅಬಕಾರಿ ಅಯುಕ್ತರೇ ಖುದ್ದು ಸ್ಥಳಕ್ಕೆ ಬಂದು ಮತ್ತೊಮ್ಮೆ ಮರುಆಳತೆ ಮಾಡಿಸಿದ್ದಾರೆ. ಸಾರ್ವಜನಿಕ ಆಕ್ಷೇಪಣಾರ್ಹ ಸ್ಥಳದಲ್ಲಿನ ಮಧ್ಯದಂಗಡಿಯ ಮರುಅಳತೆ ಕಾರ್ಯ ಅಬಕಾರಿ ಉಪ ಆಯುಕ್ತೆ ಕೆ.ಕೆ.ಸುನಿತಾ ಅವರ ಸಮ್ಮುಖದಲ್ಲಿ ನಡೆಯಿತು.   ಕಳೆದ ಹಲವಾರು ವರ್ಷಗಳಿಂದ ದಿ ಟೌನ್ ಕೋಪರೇಟಿವ್ ಸೊಸೈಟಿಯ ಕಟ್ಟಡದಲ್ಲಿರುವ ಎನ್.ಜಿ. ನಾಗರಾಜ್ ಎಂಬುವರಿಗೆ ಸೇರಿದ್ದ ಶ್ರೀ ರಂಗನಾಥ ಲಿಕ್ಕರ್ ಷಾಪ್ ನಿಂದ ಪ್ರತಿನಿತ್ಯ ಇಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಹಾಗೂ ಇದಕ್ಕೆ ಹೊಂದಿಕೊಂಡಂತಿರುವ ದೇವಾಲಯಗಳಿಗೆ ಆಗಮಿಸುವ ಭಕ್ತಾಧಿಗಳಿಗೆ ತೊಂದರೆಯಾಗುತ್ತಿದ್ದು, ಇದನ್ನು ಮುಂದಿನ ಅವಧಿಗೆ ನವೀಕರಿಸದೆ ಸ್ಥಳಾಂತರಿಸಬೇಕೆಂದು ಸೊಸೈಟಿಯವರು, ಸಂಘ ಸಂಸ್ಥೆಯವರು ಹಾಗೂ ಸಾರ್ವಜನಿಕರು ಹೋರಾಟ ನಡೆಸುತ್ತಲೇ ಬಂದಿದ್ದರು. ಕಡೆಗೂ ಸಾರ್ವಜನಿಕರ ಒತ್ತಡಕ್ಕೆ ಮಣಿದ ಅಬಕಾರಿ ಇಲಾಖೆ ಅಬಕಾರಿ ಉಪಅಯುಕ್ತರ ಮೂಲಕ ಸ್ಥಳ ಪರಿಶೀಲನೆ ನಡೆಸಿ ಮದ್ಯದಂಗಡಿಯಿಂದ ವಿವಿಧ ದೇವಾಲಯಗಳಿಗೆ ಹಾಗೂ ರಾಜ್ಯ ಹೆದ್ದಾರಿಗೆ ಇರುವ ಅಂತರವನ್ನು ಅಳತೆ ಮಾಡಿಸಿದ್ದರು. ಸ್ಥಳಾಂತರಿಸಲು ಅದೇಶವಾಗಿದಾಗ್ಯೂ ಸಹ ಮದ್ಯದಂಗಡಿಯವರು ತಕರಾರು ಅರ್ಜಿ ಸಲ್ಲಿಸುತ್ತ ಹಾಗೂ ರಾಜಕೀಯ ಒತ್ತಡಗಳ ಮೂಲಕವೇ ಕಳೆದೊಂದು ವರ್ಷದಿಂದ ಲಿಕ್ಕರ್ ಶಾಪ್ ನಡೆಸು

ಹುಳಿಯಾರು ಎಪಿಎಂಸಿಗೂ ತಟ್ಟಿದ ಚುನಾವಣೆ ಕಾವು : ವಹಿವಾಟು ವಿರಳ ಜುಲೈ ಪ್ರಾರಂಭದವರೆಗೂ ಇದೇ ಸ್ಥಿತಿ ಮುಂದುವರಿಕೆ

ವರದಿ:ಡಿ.ಆರ್.ನರೇಂದ್ರ ಬಾಬು ಹುಳಿಯಾರು : ಸದ ಜನ ಜಂಗುಳಿಯಿಂದ ಕೂಡಿರುತ್ತಿದ್ದ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಗೂ ಚುನಾವಣೆ ಕಾವು ತಟ್ಟಿದ್ದು ಗ್ರಾಮ ರಾಜಕೀಯದಲ್ಲಿ ಬ್ಯುಸಿಯಾಗಿರುವ ರೈತಾಪಿ ಜನರು ಮಾರುಕಟ್ಟೆ ಕಡೆ ತಿರುಗಿ ನೋಡುತ್ತಿಲ್ಲವಾದ್ದರಿಂದ ವಹಿವಾಟು ವಿರಳವಾಗಿದ್ದು ಅಂಗಡಿದಾರರು ಗ್ರಾಹಕರಿಗಾಗಿ ಎದುರು ನೋಡುತ್ತಿದ್ದು, ಎಪಿಎಂಸಿ ಬಿಕೋ ಎನ್ನುತ್ತಿದೆ. ಹುಳಿಯಾರು ಎಪಿಎಂಸಿಯಲ್ಲಿ ವಹಿವಾಟು ವಿರಳವಾಗಿದ್ದು ಬಿಕೋ ಎನ್ನುತಿರುವ ದೃಶ್ಯ. ಪಟ್ಟಣದ ಮಾರುಕಟ್ಟೆ ಕಾಳು,ಕಡ್ಡಿ ಹಾಗೂ ಕೊಬ್ಬರಿಗೆ ಜಿಲ್ಲೆಯಲ್ಲೇ ಹೆಚ್ಚು ಪ್ರಸಿದ್ಧಿಯಾಗಿದ್ದು ಹುಳಿಯಾರು ಹೋಬಳಿ ಸೇರಿದಂತೆ ಸುತ್ತಮುತ್ತಲ ಹಂದನಕೆರೆ, ಕಂದಿಕೆರೆ ಹಾಗೂ ಹಿರಿಯೂರು ಹೋಬಳಿಯ ಹಳ್ಳಿಯ ರೈತರು ತಾವು ಬೆಳೆದ ಕೃಷಿ ಬೆಳೆಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಇದೀಗ ಮುಂಗಾರು ಹಂಗಾಮು ಪ್ರಾರಂಭಗೊಂಡಿರುವುದಲ್ಲದೆ, ಕಳೆದೊಂದು ತಿಂಗಳಿಂದ ಈ ಭಾಗದಲ್ಲಿ ಉತ್ತಮ ಹದಮಳೆಯಾಗಿದ್ದು ರೈತರು ಕೃಷಿ ಚಟುವಟಿಕೆಯಲ್ಲಿ ಸಕ್ರಿಯವಾಗಿರುವುದಲ್ಲದೆ ಹಳ್ಳಿ ರಾಜಕೀಯದ ಕಾರಣವೂ ಸೇರಿ ಎಪಿಎಂಸಿಗೆ ಬರುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಸದ್ಯ ಮಾರುಕಟ್ಟೆಯಲ್ಲಿ ಹುಣಸೆಹಣ್ಣು ಹಾಗೂ ಹುಣಸೆ ಬೀಜದ ವ್ಯಾಪಾರ ವಿರಳವಾಗಿ ನಡೆಯುತ್ತಿರುವುದು ಬಿಟ್ಟರೆ ಯಾವುದೇ ರೀತಿಯ ವಹಿವಾಟಿಲ್ಲದಂತಾಗಿದ್ದು ಅಂಗಡಿದಾರರು ಕಾದುಕೂರುವಂತಾಗಿದೆ. ಹುಣಸೆಹಣ್ಣು ಪ್ರತಿ ಕ್ವಿ

ಹುಳಿಯಾರು ೩೯ ಸ್ಥಾನಕ್ಕೆ ಬರೋಬರಿ ೧೯೧ ಉಮೇದುವಾರಿಕೆ ಸಲ್ಲಿಕೆ

ಆಯ್ಕೆಗೆ ನಾನಾ ರೀತಿಯ ಕಸರತ್ತು              ಜಿಲ್ಲೆಯ ದೊಡ್ಡ ಗ್ರಾಮ ಪಂಚಾಯ್ತಿಯೆಂದೆ ಹೆಗ್ಗಳಿಕೆ ಹೊಂದಿರುವ ಹುಳಿಯಾರು ಗ್ರಾ.ಪಂ ಚುನಾವಣೆಗೆ ರಂಗೇರಿದ್ದು ೩೯ ಸ್ಥಾನಗಳ ಪಂಚಾಯ್ತಿಗೆ ಒಟ್ಟು ೧೯೦ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಲು ಕಡೆ ಕ್ಷಣದಲ್ಲಿ ಕಂಡುಬಂದ ಅಭ್ಯರ್ಥಿಗಳು.          ಹುಳಿಯಾರಿನಲ್ಲಿ ಜೂನ್ ೨ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು ನಾಮಪತ್ರಸಲ್ಲಿಕೆಗೆ ಆಕಾಂಕ್ಷಿಗಳ ಮಹಾ ಪೂರವೇ ಕಂಡುಬಂದು ಪಂಚಾಯ್ತಿ ಆವರಣ ಅಭ್ಯರ್ಥಿಗಳ ಹಾಗೂ ಬೆಂಬಲಿಗರಿಂದಲೇ ತುಂಬಿತುಳುಕುತ್ತಿತ್ತು. ಕಳೆದ ೧೫ ರಿಂದ ಪ್ರಾರಂಭವಾಗಿದ್ದ ನಾಮಪತ್ರಸಲ್ಲಿಕೆಗೆ ಕಡೆ ದಿನವಾದ ಶುಕ್ರವಾರವೂ ಸೇರಿ ನಿರೀಕ್ಷೆಗೂ ಮೀರಿ ಬರೋಬರಿ ೧೯೦ ಉಮೇದುವಾರಿಕೆಗಳು ಸಲ್ಲಿಕೆಯಾಗಿರುವುದು ಚುನಾವಣೆಯ ತೀವ್ರತೆಗೆ ಸಾಕ್ಷಿಯಾಗಿದೆ.                          ಇಲ್ಲಿನ ಚುನಾವಣೆ ಎಂದರೆ ರಾಜಕೀಯ ನಾಯಕರುಗಳಿಗೆ ಪ್ರತಿಷ್ಠೆಯ ವಿಚಾರವಾಗಿದ್ದು ಹೇಗಾದರೂ ಸರಿ , ಯಾವ ದಾರಿಯಲ್ಲಾದರೂ ಸರಿ ಅಧಿಕಾರದ ಗದ್ದುಗೆ ಏರಬೇಕೆಂಬ ತಹತಹಿಕೆಯಿಂದ ನಾನಾರೀತಿಯ ಕಸರತ್ತಿಗೆ ದಾರಿ ಮಾಡಿಕೊಟ್ಟಿದೆ.ಹಿಂದಿನ ಚುನಾವಣೆಗಳಲ್ಲಿ ಪಂಚಾಯ್ತಿ ಅಧ್ಯಕ್ಷ ಗದ್ದುಗೆ ಏರುವವರಿಗೆ ಬೆಂಬಲಿಸುವ ಸದಸ್ಯರಿಗೆ ಶುಕ್ರದೆಸೆ ತಿರುಗಿದ್ದರೆ, ಅಧ್ಯಕ್ಷ ಸ್ಥಾನದವರಿಗೆ ಲಕ್ಷಾಂತರ ರೂ ವೆಚ್ಚಕ್ಕೆ ದಾರಿ ಮಾಡಿಕೊಟ್ಟಿತ್ತು. ಸದಸ್ಯರಾದವರಿಗೆ ನಾನಾರ

ಹುಳಿಯಾರಿನಲ್ಲಿ ರಾಜೀವ್ ಗಾಂಧಿ ಪುಣ್ಯಸ್ಮರಣೆ

         ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಚಿ.ನಾ.ಹಳ್ಳಿ ತಾಲ್ಲೂಕ್ ಯೂತ್ ಕಾಂಗ್ರೆಸ್ ವತಿಯಿಂದ ಗುರುವಾರ ರಾಜೀವ್ ಗಾಂಧಿ ಅವರ ೨೪ನೇ ವರ್ಷದ ಪುಣ್ಯಸ್ಮರಣೆ ಆಚರಿಸಲಾಯಿತು.              ಈ ವೇಳೆ ತಾಲ್ಲೂಕು ಯೂತ್ ಕಾಂಗ್ರೆಸ್ ನ ಅಧ್ಯಕ್ಷ ಹೊಸಹಳ್ಳಿ ಅಶೋಕ್ ಮಾತನಾಡಿ , ಧೀಮಂತ ನಾಯಕರಾಗಿದ್ದ ರಾಜೀವ್ ಗಾಂಧಿ ಪ್ರಧಾನಮಂತ್ರಿಯಾಗಿದ್ದ ಅವಧಿಯಲ್ಲಿ ಹಲವು ಜನಪರಯೋಜನೆಗಳನ್ನು ಜಾರಿಗೆ ತಂದು ಉತ್ತಮ ಆಡಳಿತನ ನಡೆಸಿದ್ದರು. ಆಡಳಿತದ ಜೊತೆಗೆ ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಸಹ ಮಾಡಿದ್ದರು ಎಂದರು. ಅಂತೆಯೇ ಪ್ರಸ್ತುತದಲ್ಲಿ ರಾಹುಲ್ ಗಾಂಧಿಯವರು ಸಹ ಪಕ್ಷ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಪ್ರಧಾನಮಂತ್ರಿ ಹುದ್ದೆಗೇರಲಿ ಅದಕ್ಕೆ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಬೆಂಬಲವಿದೆ ಎಂದು ಆಶಿಸಿದರು.                   ಹುಳಿಯಾರಿನ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ತಾಲ್ಲೂಕ್ ಯೂತ್ ಕಾಂಗ್ರೆಸ್ ವತಿಯಿಂದ ರಾಜೀವ್ ಗಾಂಧಿ ಅವರ ೨೪ನೇ ವರ್ಷದ ಪುಣ್ಯಸ್ಮರಣೆ ಆಚರಿಸಲಾಯಿತು.  ತಾಲ್ಲೂಕು ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಶ್ರೀಧರ್, ಚಿ.ನಾ.ಹಳ್ಳಿ ಪಿಎಲ್.ಡಿ ಬ್ಯಾಂಕ್ ನಿರ್ದೇಶಕ ಕೆಂಕೆರೆ ಶಿವಕುಮಾರ್, ಕಾಂಗ್ರೆಸ್ ಮುಖಂಡರಾದ ಪಟೇಲ್ ರಾಜ್ ಕುಮಾರ್, ಸೀಗೆಬಾಗಿ ಸಿದ್ರಾಮಣ್ಣ, ವೆಂಕಟೇಶ್, ಹಮೀದ್ ,ಕೆಂಕೆರೆ ಈಶ್ವರಯ್ಯ,ಈರುಳ್ಳಿ ಮಂಜು, ಪೋನ್ ರೇಣುಕಮೂರ್ತಿ,ಮೋಹನ್,ವಿನೋದ್ ಸೇರಿದಂತೆ ಇತರ

ಕಾವೇರಿದ ಹುಳಿಯಾರು ಗ್ರಾ.ಪಂ. ಚುನಾವಣೆ

ಸ್ಥಳೀಯ ಗ್ರಾಮ ಪಂಚಾಯ್ತಿ ಚುನಾವಣೆಗೆ ದಿನಗಣನೆ ನಡೆಯುತ್ತಿದ್ದು ಚುನಾವಣಾ ಕಾವು ಹೆಚ್ಚಾಗಿರುವುದು ಪಟ್ಟಣದೆಲ್ಲೆಡೆ ಕಂಡುಬರುತ್ತಿದೆ. ಹುಳಿಯಾರಿನಲ್ಲಿ ಗ್ರಾ.ಪಂ. ಚುನಾವಣೆ ಕಾವು ಹೆಚ್ಚಿದ್ದು, ನಾಮಪತ್ರ ಸಲ್ಲಿಸಲು ಹೆಚ್ಚು ಜನ ಪಂಚಾಯ್ತಿಯಲ್ಲಿಗೆ ಆಗಮಿಸಿರುವುದು. ಪಟ್ಟಣದ ೧೩ ಬ್ಲಾಕ್ ಗಳಿಗೆ ೩೯ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಹೆಚ್ಚು ಜನ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಲು ಮುಗಿಬಿದಿದ್ದಾರೆ. ನಾಮಪತ್ರ ಅರ್ಜಿ ವಿತರಣೆಯ ಪ್ರಾರಂಭದ ದಿನವೇ ಸುಮಾರು ೬೦ ರಿಂದ ೭೦ ಮಂದಿ ನಾಮಪತ್ರದ ಅರ್ಜಿಗಳನ್ನು ಪಡೆದಿದ್ದು. ಪ್ರಾರಂಭದ ದಿನ ೩ ನಾಮಪತ್ರ ಸಲ್ಲಿಕೆಯಾಗಿದ್ದು ನಂತರದ ದಿನೇ ದಿನೇ ನಾಮಪತ್ರ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದ್ದು ಬುಧವಾರ ಒಂದೇ ದಿನ ೬೫ ನಾಮಪತ್ರಗಳು ಸಲ್ಲಿಕೆಯಾಗಿವೆ. ಕೆಲ ಅಭ್ಯರ್ಥಿಗಳು ಒಬ್ಬರೇ ಬಂದು ನಾಮಪತ್ರ ಸಲ್ಲಿಸಿದರೆ ಕಳೆದ ಬಾರಿ ಸದಸ್ಯರಾಗಿದ್ದವರು ಈ ಬಾರಿಯೂ ನಾಮಪತ್ರ ಸಲ್ಲಿಸಲು ತಮ್ಮ ನೂರಾರು ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ. ಈ ಬಾರಿ ಹುಳಿಯಾರು ಪಟ್ಟಣ ಪಂಚಾಯ್ತಿಯಾಗುತ್ತದೆ ಎಂದುಕೊಂಡು ಕೆಲವರು ಚುನಾವಣೆಯ ಸಹವಾಸ ಬೇಡ ಎಂದುಕೊಂಡವರು ಸಹ ಪ.ಪಂ. ಆಗಿಲ್ಲ ಈ ಬಾರಿಯೂ ಗ್ರಾ.ಪಂ. ಆಗಿಯೇ ಇರುತ್ತದೆ ಎಂದು ನಾಮುಂದು ತಾಮುಂದು ಎಂದು ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಕೆಲವರು ಚುನಾವಣ ಪಕ್ಷಗಳ ಹೆಸರನ್ನೇಳಿಕೊಂಡು ಮತ ಪಡೆಯುವ ಉಪಾಯ

ಸೈಕಲ್ ರಿಪೇರಿಯಾತನ ಮಗಳು ಶೇ.೮೪

ಹುಳಿಯಾರು ಪಟ್ಟಣದಲ್ಲಿ ಸಣ್ಣದಾದ ಸೈಕಲ್ ಶಾಪ್ ಇಟ್ಟುಕೊಂಡು ಜೀವನ ನಡೆಸುತ್ತಿರುವ ಮಹಮದ್ ಖಲಂದರ್ ಸಾಬ್ ಅವರ ಮಗಳು ಸಿಮ್ರಾನ್ ಎಂಬಾಕೆ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ೫೨೮ ಅಂಕ (ಶೇ.೮೪.೪) ಗಳಿಸಿದ್ದಾಳೆ. ಈಕೆ ವಾಸವಿ ವಿದ್ಯಾಸಂಸ್ಥೆಯ ಟಿ.ಆರ್.ಎಸ್.ಆರ್ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ಮನೆಯ ಕಷ್ಟದ ನಡುವೆಯೂ ಸಹ ಉತ್ತಮ ಅಭ್ಯಾಸ ಮಾಡಿ ಹೆಚ್ಚಿನ ಅಂಕಗಳಿಸಿದ್ದಾಳೆ. ಮಗಳ ಈ ಸಾಧನೆ ಪೋಷಕರಿಗೆ ಸಂತಸ ತಂದಿದ್ದು, ಪಿಯುಸಿಯಲ್ಲಿ ವಾಣಿಜ್ಯ ವಿಭಾಗ ಪಡೆಯುವ ಮೂಲಕ ಹಂಬಲ ಹೊಂದಿದ್ದಾಳೆ.

ಶನೇಶ್ವರಸ್ವಾಮಿ ಉತ್ಸವ

ಹುಳಿಯಾರಿನ ಶನೇಶ್ವರಸ್ವಾಮಿಯ ಕುಂಭಾಭಿಷೇಕದ ಅಂಗವಾಗಿ ಸ್ವಾಮಿಯ ರಾಜಬೀದಿ ಉತ್ಸವ ನಡೆಸಲಾಯಿತು.

ರಂಗನಾಥಸ್ವಾಮಿಗೆ ಪುಷ್ಪಾಲಂಕಾರ

ಹುಳಿಯಾರು  ಪಟ್ಟಣದ ಪುರಾಣ ಪ್ರಸಿದ್ದ ಶ್ರೀಅನಂತಶಯನ ರಂಗನಾಥಸ್ವಾಮಿಯ ದೇವಾಲಯದಲ್ಲಿ ಅಮವಾಸ್ಯೆ ಅಂಗವಾಗಿ ಸ್ವಾಮಿಗೆ ಪುಷ್ಪದ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಎಸ್.ಆರ್.ಎಸ್.ದಯಾನಂದ್, ಕೆ.ಎಂ.ಎಲ್.ಮೂರ್ತಿ,ಎಂ. ಅಶೋಕ್ ಬಾಬು ,ಎಸ್.ಎಲ್.ಆರ್. ಬಸ್ ನ ಹೆಚ್.ಎನ್.ಪ್ರದೀಪ್ ಅವರ ಸೇವಾರ್ಥದಲ್ಲಿ ಅಲಂಕಾರ ಸೇವೆ ಹಾಗೂ ಪೂಜಾ ಕೈಂಕರ್ಯಗಳು ನಡೆದವು. ನಂತರ ಮಾರುತಿ ಮುಖ್ಯಪ್ರಾಣ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆದು ಆಗಮಿಸಿದ ಭಕ್ತಾಧಿಗಳಿಗೆ ಪ್ರಸಾದ ವಿತರಿಸಲಾಯಿತು.

ಹುಳಿಯಾರು-ಕೆಂಕೆರೆ ಪಿಯು ಕಾಲೇಜಿಗೆ ಶೇ. ೭೬ ಫಲಿತಾಂಶ

ಇಲ್ಲಿನ ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 76 ರಷ್ಟು ಫಲಿತಾಂಶ ಬಂದಿರುವುದಾಗಿ ಕಾಲೇಜಿನ ಪ್ರಾಚಾರ್ಯ ನಟರಾಜು ತಿಳಿಸಿದ್ದಾರೆ. ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶಬ್ರಿನ್ ತಾಜ್ ೫೨೬ ಅಂಕ(ಶೇ.೮೭.೬), ಎಲ್.ಜಿ. ಯಮುನ ೫೨೫ ಅಂಕ (ಶೇ.೮೭.೬), ಅರ್ಪಿತ ೫೨೨ ಅಂಕ (ಶೇ.೮೭),ಎ.ಎನ್.ಮಣಿಕಂಠ ೫೨೨ ಅಂಕ (ಶೇ.೮೭) ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಪರೀಕ್ಷೆಗೆ ಕುಳಿತಿದ್ದ ಒಟ್ಟು ೧೯೭ ವಿದ್ಯಾರ್ಥಿಗಳ ಪೈಕಿ ೧೪೯ ಮಂದಿ ತೇರ್ಗಡೆಯಾಗಿದ್ದಾರೆ. ನಾಲ್ವರು ಅತ್ಯುತ್ತಮ ಶ್ರೇಣಿ ,೭೬ ಮಂದಿ ಪ್ರಥಮ, ೩೪ ಮಂದಿ ದ್ವಿತೀಯ ಹಾಗೂ ೩೫ ಮಂದಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಶಬ್ರಿನ್ ತಾಜ್ ೫೨೬ ಅಂಕ(ಶೇ.೮೭.೬), ಹೆಚ್.ಆರ್.ಅರ್ಪಿತ ೫೨೨ ಅಂಕ (ಶೇ.೮೭) ಹಾಗೂ ವಾಣಿಜ್ಯ ವಿಭಾಗದಲ್ಲಿ ಎಲ್.ಜಿ. ಯಮುನ ೫೨೫ ಅಂಕ (ಶೇ.೮೭.೬), ಎ.ಎನ್.ಮಣಿಕಂಠ ೫೨೨ ಅಂಕ (ಶೇ.೮೭) ಗಳಿಸುವ ಮೂಲಕ ಅತ್ಯುತ್ತಮ ಶ್ರೇಣಿ ಪಡೆದಿದ್ದಾರೆ. ಎ.ಎನ್.ಮಣಿಕಂಠ ಇತಿಹಾಸ ವಿಷಯದಲ್ಲಿ ೯೯ ಅಂಕ, ಲೆಕ್ಕಶಾಸ್ತ್ರದಲ್ಲಿ ೯೭ ಅಂಕ, ಖತೀಜಾ ಲೆಕ್ಕಶಾಸ್ತ್ರದಲ್ಲಿ ೯೮ ಅಂಕ,ಯತೀಶ ಜೀವಶಾಸ್ತ್ರದಲ್ಲಿ ೯೮ ಅಂಕ, ವಿಜ್ಞಾನ ವಿಭಾಗದಲ್ಲಿ ನವೀನ್ ಎಂ.ಎಸ್. ೪೯೮ (ಶೇ.೮೩) ಅಂಕಗಳಿಸಿದ್ದಾರೆ. ಹೆಚ್ಚು ಅಂಕಗಳಿಸುವ ಮೂ

ನಾಗಾಭರಣ ಉತ್ಸವ

ಶಿರಾ ಟೌನ್ ಕೋ ಆಪರೇಟೀವ್ ಬ್ಯಾಂಕ್-ಹುಳಿಯಾರು ಶಾಖೆಯ ಮ್ಯಾನೇಜರ್ ಕುಮಾರಸ್ವಾಮಿಯವರು ಮಾಗೋಡಿನ ಶ್ರೀಕಂಬದ ರಂಗನಾಥಸ್ವಾಮಿಗೆ ನಾಗಾಭರಣ ಪೀಠವನ್ನು ನೀಡಿ ಅದರ ಉತ್ಸವ ನಡೆಸಿದರು.

ಅತ್ಯುನ್ನತ ಶ್ರೇಣಿ ಪಡೆದ ವಿದ್ಯಾರ್ಥಿನಿಯರು

ಹುಳಿಯಾರಿನ ಬಾಲಕಿಯರ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ೧) ಮಂಜುಳಾ ೫೩೨ ಅಂಕ (ಶೇ.೮೮.೬) ಮತ್ತು ೨) ಚೇತನ ೫೨೦ಅಂಕ(ಶೇ.೮೬.೬) ೩) ವೇದಾವತಿ ೫೧೯ ಅಂಕ(ಶೇ.೮೬.೫) ಹಾಗೂ ಕಲಾ ವಿಭಾಗದ ೪) ನೇತ್ರಾವತಿ ೫೧೬ ಅಂಕ (ಶೇ.೮೬) ಗಳಿಸುವ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 

ಮಸೀದಿಗೋಪುರ ಬೀಳಲು ಕಳಪೆ ಕಾಮಗಾರಿ ಕಾರಣ

ಮಸೀದಿಯನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸದ ಕಾರಣದಿಂದಾಗಿ ಸೋಮವಾರ ಸಂಜೆ ಬೀಸಿದ ಮಳೆಗಾಳಿಯ ಹೊಡೆತಕ್ಕೆ ಅದರ ಗೋಪುರಗಳು ಬೀಳುವಂತಾಗಿದೆ. ಇದಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳುವುದಾಗಿ ತುಮಕೂರು ಜಿಲ್ಲಾ ವಕ್ಫ್ ಸಲಹಾಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ತಿಳಿಸಿದರು. ಮಳೆಗಾಳಿಗೆ ಸಿಕ್ಕಿ ನೆಲಕ್ಕುರುಳಿದ ಹುಳಿಯಾರು ಹೋಬಳಿ ಕಂಪನಹಳ್ಳಿಯ ಮಸೀದಿಯನ್ನು ಜಿಲ್ಲಾ ವಕ್ಫ್ ಸಲಹಾಸಮಿತಿಯ ಅಧ್ಯಕ್ಷ ಇಕ್ಬಾಲ್ ಅಹಮದ್ ವೀಕ್ಷಿಸಿದರು. ಹುಳಿಯಾರು ಹೋಬಳಿಯ ಕಂಪನಹಳ್ಳಿ(ಕರಡಿಸಾಬರಪಾಳ್ಯ)ದಲ್ಲಿ ಕಳೆದ ೨ ವರ್ಷದ ಹಿಂದ ನಿರ್ಮಿಸಿದ್ದ ಮಸೀದಿಯ ಗೋಪುರಗಳು ಸೋಮವಾರ ಸಂಜೆ ಬೀಸಿದ ಗಾಳಿಗೆ ಸಿಲುಗಿ ಧರೆಗುರುಳಿದ್ದನ್ನು ವೀಕ್ಷಿಸಲು ಮಂಗಳವಾರ ಆಗಮಿಸಿದ್ದ ಅವರು ಶಿಥಿಲಗೊಂಡಿದ್ದ ಮಸೀದಿಯ ವಸ್ತು ಸ್ಥಿತಿಯನ್ನು ವೀಕ್ಷಿಸಿ ಮಾತನಾಡಿದರು. ಮಸೀದಿ ನಿರ್ಮಿಸಲು ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ ಅದರ ಪ್ಲಾನ್ ಅನ್ನು ಇಂಜಿನಿಯರ್ ಅವರಿಂದ ಪರಿಶೀಲಿಸದೆ ತನ್ನಿಷ್ಟದಂತೆ ನಿರ್ಮಿಸಿದ್ದಾನೆ. ಇದಕ್ಕೆ ಬಳಸಿರುವ ವಸ್ತುಗಳು ಸಹ ಕಳಪೆಯಿಂದ ಕೂಡಿದ್ದರ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದರು. ಈ ಬಗ್ಗೆ ಚಿ.ನಾ.ಹಳ್ಳಿ ತಹಸೀಲ್ದಾರ್ ಅವರನ್ನು ಭೇಟಿ ಮಾಡಿ ಪರಿಹಾರ ನೀಡುವಂತೆ ಮನವಿ ಮಾಡುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ಮಸೀದಿಗಳ ನಿರ್ಮಾಣದ ಪ್ಲಾನನ್ನು ಎಂಜಿನೀಯರ್ ಅವರಿಂದ ಪರಿಶೀಲಿಸಿ ನಂತರ ಕಾಮಗಾರಿ ಮಾಡಿಸುವಂತೆ ತಿ

ಹುಳಿಯಾರು ಸುತ್ತಮುತ್ತ ಬಾರಿ ಗಾಳಿ ಸಹಿತ ಮಳೆ

ಹುಳಿಯಾರು : ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಸೋಮವಾರ ಸಂಜೆ ಬಾರಿ ಗಾಳಿ ಸಹಿತ ಉತ್ತಮ ಮಳೆಯಾಗಿದ್ದು, ರಸ್ತೆ ಬದಿಯ ಗುಂಡಿ, ತೋಟ ತುಡಿಕೆಗಳಲ್ಲಿ ನೀರು ತುಂಬಿಕೊಂಡಿದ್ದು, ಕೆಲವೆಡೆ ತೆಂಗಿನ ಮರ, ಲೈಟ್ ಕಂಬಗಳು ಧರೆಗುರುಳಿವೆ.  ಹುಳಿಯಾರಿನ ಗಾಂಧಿಪೇಟೆಯ ಪಶುಆಸ್ಪತ್ರೆಯ ಪಕ್ಕದ ಮನೆಯೊಂದರ ಮೇಲೆ ಬುಡ ಸಮೇತ ಬಿದ್ದಿರುವ ಮರ. ಅದರಡಿ ಸಿಲುಕಿರುವ ಸ್ವೀಟ್ ಗಾಡಿ. ಸೋಮವಾರ ಬೆಳಿಗ್ಗಿನಿಂದ ಬಿಸಿಲ ಝಳ ಹೆಚ್ಚಿ ಸೆಕೆಯುಂಟಾಗಿತ್ತು ಮಧ್ಯಾಹ್ನದ ನಂತರ ದಟ್ಟ ಮೋಡ ಉಂಟಾಗಿ ಸಂಜೆ ವೇಳೆಗೆ ಬಾರಿಗಾಳಿ ಸಹಿತ ಮಳೆ ಸುರಿಯಲಾರಂಭಿಸಿತು. ಗಾಳಿಯ ಅರ್ಭಟ ಹೆಚ್ಚಿದ್ದು ಜನರಲ್ಲಿ ಆತಂಕವನ್ನುಂಟು ಮಾಡಿತ್ತು. ಪಟ್ಟಣದ ಗಾಂಧಿಪೇಟೆಯ ಪಶು ಆಸ್ಪತ್ರೆಯ ಕಾಂಪೌಂಡ್ ನ ಹೊರ ಭಾಗದಲಿದ್ದ ಬಾರಿ ಮರವೊಂದು ಕೆಂಕೆರೆಯ ರವಿ ಅವರಿಗೆ ಸೇರಿದ ಮನೆಯ ಮೇಲೆ ಬಿದ್ದಿದೆ. ಆ ಮನೆಯಲ್ಲಿ ಅಶೋಕ್ , ಮಂಜುನಾಥ್ ಹಾಗೂ ಮುನಿಸ್ವಾಮಿ ಎಂಬುವರಿಗೆ ಬಾಡಿಗೆಗಿದ್ದರು. ಮನೆ ಮುಂದೆಯೇ ಇದ್ದ ಮರ ಗಾಳಿಯ ರಭಸಕ್ಕೆ ಬುಡ ಸಮೇತ ಮನೆ ಮೇಲೆ ಉರುಳಿದ್ದು ಮನೆಯ ಛಾವಣಿಗೆ ಹಾಕಿದ್ದ ಸಿಮೆಂಟ್ ಶೀಟ್ ಗಳು ಜಖಂಗೊಂಡಿದೆ. ಅಶೋಕ್ ಅವರು ಸ್ವೀಟ್ ವ್ಯಾಪಾರ ಮಾಡಲು ಬಳಸುತ್ತಿದ್ದ ತಳ್ಳುಗಾಡಿ ಮರದ ಬುಡಕ್ಕೆ ಸಿಕ್ಕಿ ಜಖಂ ಆಗಿದೆ. ಮುನಿಸ್ವಾಮಿ ಹಾಗೂ ಮಂಜುನಾಥ್ ಅವರ ಮನೆಯೊಳಗೆ ನೀರು ನುಗ್ಗಿದ್ದು, ಅದೃಷ್ಠವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಂಪನಹಳ್ಳಿಯ ಮಸೀದಿಯ

ಹುಳಿಯಾರು ಬಾಲಕಿಯರ ಕಾಲೇಜು ಶೇ.೭೮ ಫಲಿತಾಂಶ

ರಾಜ್ಯಾದ್ಯಂತ ಸೋಮವಾರ ಮಧ್ಯಾಹ್ನ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಪಟ್ಟಣದ ಬಾಲಕಿಯರ ಸ್ವತಂತ್ರ ಪದವಿ ಪೂರ್ವ ಕಾಲೇಜಿಗೆ ಪ್ರಸಕ್ತ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.೭೮ ರಷ್ಟು ಫಲಿತಾಂಶ ಬಂದಿರುವುದಾಗಿ ಕಾಲೇಜಿನ ಪ್ರಾಂಶುಪಾಲ ಬಾಲಾಜಿ ತಿಳಿಸಿದ್ದಾರೆ. ಕಾಲೇಜಿನ ಕಲಾ ವಿಭಾಗ, ವಾಣಿಜ್ಯ ವಿಭಾಗ ಹಾಗೂ ವಿಜ್ಞಾನ ವಿಭಾಗದಿಂದ ಒಟ್ಟು ೧೬೫ ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದು, ಅದರಲ್ಲಿ ೧೧೯ ಮಂದಿ ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಮಂಜುಳಾ ೫೩೨ ಅಂಕ (ಶೇ.೮೮.೬) ಮತ್ತು ವೇದಾವತಿ ೫೧೯ ಅಂಕ(ಶೇ.೮೬.೫) ಹಾಗೂ ಕಲಾ ವಿಭಾಗದ ದೊಡ್ಡಬಿದರೆಯ ನೇತ್ರಾವತಿ ೫೧೬ ಅಂಕ (ಶೇ.೮೬) ಗಳಿಸುವ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಸಾನಿಯಾ ೪೩೯ ಅಂಕ( ಶೇ.೭೩) ಗಳಿಸಿದ್ದಾರೆ. ಒಟ್ಟು ೩ ಅತ್ಯುತ್ತಮ, ೬೭ ಪ್ರಥಮ, ೪೦ ದ್ವಿತೀಯ ಹಾಗೂ ೯ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅಧಿಕ ಅಂಕಗಳಿಸಿ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತಂದ ವಿದ್ಯಾರ್ಥಿನಿಯರನ್ನು ಶಾಲಾ ಸಿಬ್ಬಂದಿಯವರು ಅಭಿನಂಧಿಸಿದ್ದಾರೆ.

ಅರ್ಧಕ್ಕೆ ನಿಂತ ಚರಂಡಿ ಕಾಮಗಾರಿ : ಸಂಚಾರಕ್ಕೆ ತೊಂದರೆ

ಹುಳಿಯಾರು : ಪಟ್ಟಣದ ವಿವೇಕಾನಂದ ರಸ್ತೆ ಮೂಲಕ ಮಾಜಿ ಛೇರ್ಮನ್ ವೆಂಕಟಾಛಲಪತಿ ಶೆಟ್ಟಿ ಅವರ ಮನೆ ಬೀದಿಯಿಂದ ಗಾಂಧಿಪೇಟೆಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಚರಂಡಿ ದುರಸ್ಥಿ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ. ಹುಳಿಯಾರಿನ ಮಸೀದಿ ರಸ್ತೆಯಿಂದ ಗಾಂಧಿಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅರ್ಧಕ್ಕೆ ನಿಂತಿರುವ ಚರಂಡಿ ಕಾರ್ಯ. ಈ ರಸ್ತೆಯಲ್ಲಿನ ಚರಂಡಿಯಲ್ಲಿ ಹೂಳು ತುಂಬಿಕೊಂಡು ನೀರು ಸರಿಯಾಗಿ ಹರಿಯದೆ ಶೇಖರಣೆಯಾಗುತ್ತಿತ್ತಲ್ಲದೆ ಚರಂಡಿ ಮೇಲೆ ಹಾಕಿದ್ದ ಕೆಲ ಚಪ್ಪಡಿಕಲ್ಲುಗಳು ಸಹ ಮುರಿದು ಬಿದ್ದು ವಾಹನ ಸಂಚಾರಕ್ಕೆ ತೊಡಕಾಗಿತ್ತು. ಈ ಬಗ್ಗೆ ಪಂಚಾಯ್ತಿಯವರ ಗಮನಕ್ಕೆ ತಂದ ಕೆಲ ದಿನಗಳನಂತರ ಕೆಲಸ ಪ್ರಾರಂಭಿಸಿ, ಚರಂಡಿ ಮೇಲಿದ್ದ ಕಲ್ಲುಗಳನ್ನು ಹೊರತೆಗೆದು ಹಾಕಿ, ಚರಂಡಿಯ ಎರಡು ಬದಿ ಸೈಜ್ ಕಲ್ಲಿನಿಂದ ಗೋಡೆ ಕಟ್ಟಿರುವುದನ್ನು ಬಿಟ್ಟರೆ ಮತ್ಯಾವುದೇ ಕಾರ್ಯ ಮಾಡದೆ ಅರ್ಥಕ್ಕೆ ಕೈ ಬಿಟ್ಟಿದ್ದಾರೆ. ಇದರಿಂದಾಗಿ ಸಂಚಾರಕ್ಕೆ ತೊಂದರೆಯಾಗಿರುವುದಲ್ಲದೆ ಕೊಳಚೆ ನೀರು ನಿಂತು ಸೊಳ್ಳೆ ಹೆಚ್ಚಾಗುವಂತೆ ಮಾಡಿದೆ. ಸದ್ಯ ಕಟ್ಟಿರುವ ಗೋಡೆಯು ಸಹ ಕಳಪೆಯಿಂದ ಕೂಡಿದ್ದು ಅದರ ಮೇಲೆ ದಪ್ಪ ಚಪ್ಪಡಿಕಲ್ಲುಗಳನ್ನು ಹಾಕಿದರೆ ಕೆಲ ದಿನಗಳಲೇ ಕುಸಿಯುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಗ್ರಾ.ಪಂ. ಪಿಡಿಓ ಅವರು ಶೀಘ್ರ ಗಮನ ಹರಿಸಿ ಉತ್ತಮ ಗುಣಮಟ್ಟದಲ್ಲಿ ಕಾಮಗಾರಿ ನಡೆಸುವ

ಶ್ರದ್ದಾಭಕ್ತಿಯಿಂದ ನಡೆದ ಶನೇಶ್ವರಸ್ವಾಮಿ ಕುಂಭಾಭಿಷೇಕ

ಹುಳಿಯಾರು ಪಟ್ಟಣದ ಶ್ರೀಜ್ಯೋತಿಪಣ ಗಾಣಿಗರ ಸಂಘ ಹಾಗೂ ಭಕ್ತಾಧಿಗಳ ಸಹಯೋಗದಲ್ಲಿ ಗಾಂಧಿಪೇಟೆಯ ಶ್ರೀ ಶನೇಶ್ವರಸ್ವಾಮಿಯ ೧೧ ನೇ ವರ್ಷದ ಮಹಾಕುಂಭಾಭಿಷೇಕ ಹಾಗೂ ಹೋಮ ಕಾರ್ಯ ಸೋಮವಾರ ಶ್ರದ್ದಾಭಕ್ತಿಯಿಂದ ಜರುಗಿತು. ಹುಳಿಯಾರಿನ ಶ್ರೀ ಶನೇಶ್ವರಸ್ವಾಮಿ ದೇವಾಲಯದಲ್ಲಿ ಕುಂಭಾಭಿಷೇಕದ ಅಂಗವಾಗಿ ನಡೆದ ಹೋಮಕ್ಕೆ ಪೂರ್ಣಾಹುತಿ ಸಮರ್ಪಿಸುತ್ತಿರುವುದು. ಕುಂಭಾಭಿಷೇಕದ ಅಂಗವಾಗಿ ಭಾನುವಾರ ಸಂಜೆ ಹುಳಿಯಾರಿನ ಗ್ರಾಮದೇವತೆ ದುರ್ಗಮ್ಮ, ಹುಳಿಯಾರಮ್ಮ ಹಾಗೂ ಆಂಜನೇಯಸ್ವಾಮಿಯನ್ನು ಕರೆತಂದು, ಪುಣ್ಯಾಹ,ದೇವನಾಂದಿ, ಮಂಡಲ ಸ್ಥಾಪನೆ, ಭಕ್ತಾಧಿಗಳಿಗೆ ಕೊಡುವ ಕಳಸ ಸ್ಥಾಪನೆ. ಶ್ರೀಪ್ರಧಾನ ಕಳಸ ಮತ್ತು ನವಗ್ರಹಗಳ ಸ್ಥಾಪನೆ ಮಾಡಿದ್ದರು. ಸೋಮವಾರ ಮುಂಜಾನೆ ಎಚ್.ಎಸ್..ಲಕ್ಷ್ಮಿನರಸಿಂಹಯ್ಯ ಹಾಗೂ ಗುಂಡಣ್ಣ ಅವರ ಪೌರೋಹಿತ್ಯದಲ್ಲಿ ನವಗ್ರಹ,ಗಣಪತಿ,ಮೃತ್ಯುಂಜಯ,ಶನೇಶ್ವರ ಹೋಮ, ನವಗ್ರಹ ಆರಾಧನೆ, ಸ್ವಾಮಿಗೆ ಪಂಚಾಮೃತಾಭಿಷೇಕ ನಡೆದು ಮಧ್ಯಾಹ್ನ ೧೨ಕ್ಕೆ ಪೂರ್ಣಾಹುತಿ ಅರ್ಪಿಸಿಸಲಾಯಿತು. ಮಹಾಮಂಗಳಾರತಿ ನಂತರ ಕಳಸಕ್ಕೆ ಕುಂಭಾಭಿಷೇಕ ನಡೆಸಲಾಯಿತು. ಆಗಮಿಸಿದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಈ ವೇಳೆ ದೇವಾಲಯ ಸಮಿತಿಯವರು, ಶ್ರೀಜ್ಯೋತಿಪಣ ಗಾಣಿಗರ ಸಂಘದವರು ಸೇರಿದಂತೆ ಸುತ್ತಮುತ್ತಲ ಹಳ್ಳಿಯ ಭಕ್ತಾಧಿಗಳು ಆಗಮಿಸಿದ್ದು ಸ್ವಾಮಿಯ ಕುಂಭಾಭಿಷೇಕವನ್ನು ಕಣ್ತುಂಬಿಕೊಂಡರು.

ದಸೂಡಿ, ದಬ್ಬಗುಂಟೆ ಭಾಗದಲ್ಲಿ ಉತ್ತಮ ಮಳೆ

ಹುಳಿಯಾರು ಹೋಬಳಿ ದಸೂಡಿ, ದಬ್ಬಗುಂಟೆ ಭಾಗದಲ್ಲಿ ಶುಕ್ರವಾರ ಹಾಗೂ ಶನಿವಾರದಂದು ಹದ ಮಳೆಯಾಗಿದ್ದು, ತೋಟ ತುಡಿಕೆ ತುಂಬಿ ಕೆರೆಗಳಿಗೆ ನೀರು ಬಂದಿರುವುದಲ್ಲದೆ, ಮಳೆಯಿಂದಾಗಿ ಮುಂಗಾರು ಬೆಳೆ ಹೆಸರು ನಳನಳಿಸುತ್ತಿದ್ದು ರೈತರ ಮೊಗದಲ್ಲಿ ಹರ್ಷವನ್ನುಂಟು ಮಾಡಿದೆ. ಶನಿವಾರ ರಾತ್ರಿ ಬಂದ ಮಳೆಯಿಂದಾಗಿ ಹುಳಿಯಾರು ಹೋಬಳಿ ರಂಗನಕೆರೆಯ ಸಮೀಪದ ಒಡ್ಡು ತುಂಬಿ ಹರಿಯುತ್ತಿರುವುದು. ಶುಕ್ರವಾರ ಹೋಬಳಿಯ ಕೆಂಕೆರೆ, ದಸೂಡಿ,ದಬ್ಬಗುಂಟೆ, ಹೊಯ್ಸಳಕಟ್ಟೆ ಈ ಭಾಗದಲ್ಲಿ ಮಳೆಯಾಗಿತ್ತು. ಶನಿವಾರ ಹುಳಿಯಾರು ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಮಳೆಯಾಗಿದೆ. ಕಳೆದೊಂದು ವಾರದಿಂದ ಮಳೆ ಬಾರದೆ ಚಿಗುರೊಡೆದಿದ್ದ ಹೆಸರು ಬಿಸಿಲ ಝಳಕ್ಕೆ ತತ್ತರಿಸಿ ಇನ್ನೇನು ಒಣಗಿ ಹೋಗಿತು ಎನ್ನುವಂತ ಸ್ಥಿತಿ ತಲುಪಿದ್ದ ಸಮಯದಲ್ಲಿ ವರುಣ ಕೃಪೆ ತೋರಿದ್ದಾನೆ. ಈಗ ಮತ್ತೆ ಹೆಸರು ಗಿಡಗಳು ಅಚ್ಚ ಹಸಿರಿನಿಂದ ಕಂಗೊಳಿಸುವಂತಾಗಿದೆ. ಈ ಮಳೆ ಹೆಸರು ಗಿಡಗಳು ಹೂ ಬಿಡಲು ಸಹಕಾರಿಯಾಗಿದ್ದು ಮುಂದೆಯೂ ಸಹ ಮಳೆ ಬಂದರೆ ಹೆಸರು ಉತ್ತಮವಾಗಿ ಕಾಯಿ ಕಟ್ಟುತ್ತದೆ ಎಂಬ ನಂಬಿಕೆ ರೈತರದ್ದಾಗಿದೆ. ಸಿಡಿಲಿಗೆ ಮಹಿಳೆ ಬಲಿ : ಶನಿವಾರ ರಾತ್ರಿ ಮಳೆಯೊಂದಿಗೆ ಉಂಟಾದ ಸಿಡಿಲಿಗೆ ದಬ್ಬಗುಂಟೆ ಗ್ರಾಮದ ಕರಿಯಮ್ಮ(೫೮) ಎಂಬಾಕೆ ಮೃತಪಟ್ಟಿದ್ದಾರೆ. ಮನೆಯ ಒಪ್ಪಾರಿನಲ್ಲಿ ಕುಳಿತಿದ್ದ ಕರಿಯಮ್ಮನಿಗೆ ಸಿಡಿಲ ಜ್ವಾಲೆ ಬಡಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಮನೆಯ

ನೇಶ್ವರಸ್ವಾಮಿ ಕುಂಭಾಭಿಷೇಕ

ಹುಳಿಯಾರು: ಪಟ್ಟಣದ ಶ್ರೀಜ್ಯೋತಿಪಣ ಗಾಣಿಗರ ಸಂಘ ಹಾಗೂ ಭಕ್ತಾಧಿಗಳ ಸಹಯೋಗದಲ್ಲಿ ಗಾಂಧಿಪೇಟೆಯ ಶ್ರೀ ಶನೇಶ್ವರಸ್ವಾಮಿಯ ೧೧ ನೇ ವರ್ಷದ ಮಹಾಕುಂಭಾಭಿಷೇಕ ಕಾರ್ಯ (ತಾ.೧೮) ಸೋಮವಾರ ಮಧ್ಯಾಹ್ನ ನಡೆಯಲಿದೆ. ಕುಂಭಾಭಿಷೇಕ ಕಾರ್ಯದ ಅಂಗವಾಗಿ ಭಾನುವಾರ ಹುಳಿಯಾರಿನ ಗ್ರಾಮದೇವತೆ ದುರ್ಗಮ್ಮ, ಹುಳಿಯಾರಮ್ಮನವರನ್ನು ಕರೆತಂದು, ಪುಣ್ಯಾಹ,ದೇವನಾಂದಿ, ಮಂಡಲ ಸ್ಥಾಪನೆ, ಭಕ್ತಾಧಿಗಳಿಗೆ ಕೊಡುವ ಕಳಸ ಸ್ಥಾಪನೆ. ಶ್ರೀಪಧಾನ ಕಳಸ ಮತ್ತು ನವಗ್ರಹಗಳ ಸ್ಥಾಪನೆ ಕಾರ್ಯ ನಡೆಸಲಾಯಿತು. ಸೋಮವಾರ ಬೆಳಿಗ್ಗೆ ನವಗ್ರಹ,ಗಣಪತಿ,ಮೃತ್ಯುಂಜಯ,ಶನೇಶ್ವರ ಹೋಮ, ನವಗ್ರಹ ಆರಾಧನೆ, ಸ್ವಾಮಿಗೆ ಪಂಚಾಮೃತಾಭಿಷೇಕ ನಡೆದ ನಂತರ ಮಧ್ಯಾಹ್ನ ೧೨ಕ್ಕೆ ಪೂರ್ಣಾಹುತಿ, ಬಲಿಪ್ರಧಾನ, ಮಹಾಮಂಗಳಾರತಿ ನಡೆದು ಕಳಸಕ್ಕೆ ಕುಂಭಾಭಿಷೇಕ ಕಾರ್ಯ ಜರುಗಲಿದೆ. ಆಗಮಿಸಿದ ಭಕ್ತಾಧಿಗಳಿಗೆ ಅನ್ನಸಂತರ್ಪಣೆಯಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಮಿತಿಯವರು ಕೋರಿದ್ದಾರೆ. ಇದೇ ದಿನ ರಾತ್ರಿ ಸ್ವಾಮಿಯ ರಾಜಬೀದಿ ಉತ್ಸವ ನಡೆಯಲಿದೆ.