ವಿಷಯಕ್ಕೆ ಹೋಗಿ

ಹುಳಿಯಾರು ಎಪಿಎಂಸಿಗೂ ತಟ್ಟಿದ ಚುನಾವಣೆ ಕಾವು : ವಹಿವಾಟು ವಿರಳ ಜುಲೈ ಪ್ರಾರಂಭದವರೆಗೂ ಇದೇ ಸ್ಥಿತಿ ಮುಂದುವರಿಕೆ

ವರದಿ:ಡಿ.ಆರ್.ನರೇಂದ್ರ ಬಾಬು
ಹುಳಿಯಾರು : ಸದ ಜನ ಜಂಗುಳಿಯಿಂದ ಕೂಡಿರುತ್ತಿದ್ದ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಗೂ ಚುನಾವಣೆ ಕಾವು ತಟ್ಟಿದ್ದು ಗ್ರಾಮ ರಾಜಕೀಯದಲ್ಲಿ ಬ್ಯುಸಿಯಾಗಿರುವ ರೈತಾಪಿ ಜನರು ಮಾರುಕಟ್ಟೆ ಕಡೆ ತಿರುಗಿ ನೋಡುತ್ತಿಲ್ಲವಾದ್ದರಿಂದ ವಹಿವಾಟು ವಿರಳವಾಗಿದ್ದು ಅಂಗಡಿದಾರರು ಗ್ರಾಹಕರಿಗಾಗಿ ಎದುರು ನೋಡುತ್ತಿದ್ದು, ಎಪಿಎಂಸಿ ಬಿಕೋ ಎನ್ನುತ್ತಿದೆ.
ಹುಳಿಯಾರು ಎಪಿಎಂಸಿಯಲ್ಲಿ ವಹಿವಾಟು ವಿರಳವಾಗಿದ್ದು ಬಿಕೋ ಎನ್ನುತಿರುವ ದೃಶ್ಯ.
ಪಟ್ಟಣದ ಮಾರುಕಟ್ಟೆ ಕಾಳು,ಕಡ್ಡಿ ಹಾಗೂ ಕೊಬ್ಬರಿಗೆ ಜಿಲ್ಲೆಯಲ್ಲೇ ಹೆಚ್ಚು ಪ್ರಸಿದ್ಧಿಯಾಗಿದ್ದು ಹುಳಿಯಾರು ಹೋಬಳಿ ಸೇರಿದಂತೆ ಸುತ್ತಮುತ್ತಲ ಹಂದನಕೆರೆ, ಕಂದಿಕೆರೆ ಹಾಗೂ ಹಿರಿಯೂರು ಹೋಬಳಿಯ ಹಳ್ಳಿಯ ರೈತರು ತಾವು ಬೆಳೆದ ಕೃಷಿ ಬೆಳೆಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಇದೀಗ ಮುಂಗಾರು ಹಂಗಾಮು ಪ್ರಾರಂಭಗೊಂಡಿರುವುದಲ್ಲದೆ, ಕಳೆದೊಂದು ತಿಂಗಳಿಂದ ಈ ಭಾಗದಲ್ಲಿ ಉತ್ತಮ ಹದಮಳೆಯಾಗಿದ್ದು ರೈತರು ಕೃಷಿ ಚಟುವಟಿಕೆಯಲ್ಲಿ ಸಕ್ರಿಯವಾಗಿರುವುದಲ್ಲದೆ ಹಳ್ಳಿ ರಾಜಕೀಯದ ಕಾರಣವೂ ಸೇರಿ ಎಪಿಎಂಸಿಗೆ ಬರುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ.
ಸದ್ಯ ಮಾರುಕಟ್ಟೆಯಲ್ಲಿ ಹುಣಸೆಹಣ್ಣು ಹಾಗೂ ಹುಣಸೆ ಬೀಜದ ವ್ಯಾಪಾರ ವಿರಳವಾಗಿ ನಡೆಯುತ್ತಿರುವುದು ಬಿಟ್ಟರೆ ಯಾವುದೇ ರೀತಿಯ ವಹಿವಾಟಿಲ್ಲದಂತಾಗಿದ್ದು ಅಂಗಡಿದಾರರು ಕಾದುಕೂರುವಂತಾಗಿದೆ. ಹುಣಸೆಹಣ್ಣು ಪ್ರತಿ ಕ್ವಿಂಟಾಲ್ ೪೫೦೦ ರಿಂದ ೫೦೦೦ ಹಾಗೂ ಹುಣಸೆಬೀಜ ಪ್ರತಿ ಕ್ವಿಂಟಾಲ್ ೧೪೫೦ರಿಂದ ೧೫೦೦ ರೂ ಇದೆ. ಈ ಭಾಗದ ಮುಂಗಾರಿನ ಪ್ರಮುಖ ವಾಣಿಜ್ಯ ಬೆಳೆಯಾದ ಹೆಸರು ಪ್ರತಿ ಕೆಜಿ ೭೦ ರಿಂದ ೮೦ರೂ ಇದ್ದರೂ ಸಹ ಮಾರಲು ಯಾವುದೇ ರೈತರು ಮಾರುಕಟ್ಟೆ ಬರುತ್ತಿಲ್ಲ. ಅಲಸಂದೆ ಕ್ವಿಂಟಾಲ್ ಗೆ ೪೦೦೦ ದಿಂದ ೪೫೦೦ರೂ, ತೊಗರಿ ಕ್ವಿಂಟಾಲ್ ಗೆ ೫೦೦೦ರೂ, ರಾಗಿ ೧೨೦೦ರಿಂದ ೧೪೭೦ ಹಾಗೂ ಸಾವೆ ೨೦೦೦ ದಿಂದ ೨೮೦೦ ರೂಯಿದ್ದರೂ ವಹಿವಾಟು ಮಾತ್ರ ವಿರಳವಾಗಿದೆ. ಇನ್ನೂ ಜುಲೈ ಪ್ರಾರಂಭದವರೆಗೂ ಇದೇ ರೀತಿ ಪರಿಸ್ಥಿತಿ ಇರುವುದಾಗಿ ಸಪ್ತಗಿರಿ ಟ್ರೇಡರ್ಸ್ ನ ಮಾಲೀಕ ಎಲ್.ಆರ್. ಬಾಲಾಜಿ ತಿಳಿಸುತ್ತಾರೆ.
ಮುಂಗಾರು ಪ್ರಾರಂಭವಾಯಿತೆಂದರೆ ರೈತರು ಹೊಲದ ಕೆಲಸಗಳತ್ತ ಮುಖಮಾಡಿ ಮಾರುಕಟ್ಟೆಯತ್ತ ಬರುತ್ತಿಲ್ಲ ಈಗ ಏನಿದ್ದರೂ ಗೊಬ್ಬರದ ಅಂಗಡಿಯವರಿಗೆ ಹೆಚ್ಚಿನ ಡಿಮ್ಯಾಂಡಿದ್ದು ಪಟ್ಟಣದ ಗೊಬ್ಬರದ ಅಂಗಡಿಗಳಲ್ಲಿ ರೈತರು ಹೆಚ್ಚು ಕಂಡುಬರುತ್ತಿದ್ದಾರೆ. ಹೆಸರುಕಾಳು ಬೆಳೆ ಚೆನ್ನಾಗಿ ಬಂದು ರೈತರ ಕೈಸೇರಿದ ನಂತರ ಹೆಸರುಕಾಳು ಮಾರಲು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಎಪಿಎಂಸಿಯತ್ತ ಧಾವಿಸುತ್ತಾರೆ.
ಬೆಲೆಗಳಲ್ಲಿ ಏರಿಳಿತ ; ರೈತರು ತಾವು ಬೆಳೆಯುವ ಬೆಳೆಗೆ ಉತ್ತಮ ಬೆಲೆ ಸಿಗುತ್ತಿಲ್ಲವೆಂದು ಗೊಣಗುತ್ತಾರೆ. ಆದರೆ ಇದೀಗ ಉತ್ತಮ ಬೆಲೆಯಿದ್ದರೂ ಸಹ ಮಾರಲು ರೈತರ ಬಳಿ ದಾಸ್ತಾನು ಇಲ್ಲದಂತಾಗಿದೆ. ರೈತರು ತಾವು ಬೆಳೆದ ಬೆಳೆಗಳನ್ನು ಒಮ್ಮೆಲೇ ಮಾರುಕಟ್ಟೆ ತಂದು ಮಾರಲು ಮುಂದಾಗುವುದರಿಂದ ಸ್ವಾಭಾವಿಕವಾಗಿ ಬೆಲೆ ಕುಸಿತಗೊಂಡು ರೈತರ ಪರಿಶ್ರಮಕ್ಕೆ ತಕ್ಕಪ್ರತಿಫಲ ಇಲ್ಲದಂತಾಗುತ್ತದೆ. ಇದೀಗ ಮಾತ್ರ ಬೆಲೆ ಹೆಚ್ಚಳವಿದರೂ ಸಹ ರೈತರ ಬಳಿ ಮಾಲು ಇಲ್ಲದೆ ಕಣ್ ಕಣ್ ಬಿಡುವಂತಾಗಿದೆ. ಸದ್ಯ ಹೆಸರುಕಾಳು ಪ್ರತಿ ಕೆಜಿ ೭೦ ರಿಂದ ೮೦ರೂಗೆ ಮಾರಾಟವಾಗುತ್ತಿದ್ದು ಈಬಾರಿಯ ಮುಂಗಾರು ಬೆಳೆಬಂತು ಅನುವಷ್ಟರಲ್ಲಿ ಬೆಲೆಯಲ್ಲಿ ಕುಸಿತ ಕಂಡು ೨೦ರಿಂದ ೩೦ರೂಗೆ ಬಂದರೂ ಬರುವ ಸಾಧ್ಯತೆ ಹೆಚ್ಚಿದೆ.
ಈ ಮಾರುಕಟ್ಟೆಯಲ್ಲಿ ಹತ್ತಾರು ಜನ ಹಮಾಲಿಗಳು ಕೂಲಿ ಕೆಲಸ ಮಾಡಿಕೊಂಡು ತಮ್ಮ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿನ ಅಂಗಡಿಗಳಿಗೆ ರೈತರು ಕಾಳುಕಡ್ಡಿ ತುಂಬಿದ ಚೀಲಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಹಾಕುವ, ತೂಕ ಮಾಡುವ ಮೂಲಕ ಕೂಲಿ ಸಂಪಾದಿಸುತ್ತಿದ್ದರೆ. ಇದೀಗ ಬರುವ ಮಾಲು ಕಡಿಮೆಯಾಗಿದ್ದು ಹಮಾಲಿಗಳು ಸಹ ಸುಮ್ಮನೆ ಕೈಕಟ್ಟಿ ಕೂರುವಂತಾಗಿದೆ.
ಎಪಿಎಂಸಿಗೆ ಬರುತ್ತಿರುವ ಅವಕ ಇಳಿಮುಖವಾಗುವದರೊಂದಿಗೆ ಕೂಲಿಗಳ ಅನ್ನಕ್ಕೂ ತತ್ವಾರವಾಗಿರುವುದು ಶೋಚನೀಯವಾಗಿದೆ.
--------------------

ಈ ಭಾಗದಲ್ಲಿ ಒಳ್ಳೆ ಮಳೆಯಾಗಿರುವುದರಿಂದ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದೇವೆ.ಹೆಸರು,ಅಲಸಂದೆ,ಎಳ್ಳಿಗೆ ಈ ಮಾರುಕಟ್ಟೆಯಲ್ಲಿ ಬೇಡಿಕೆಯಿದ್ದು ಜುಲೈ ಪ್ರಾರಂಭದಿಂದಲೆ ದಾಖಲೆ ವಹಿವಾಟು ನಡೆಯುವ ನಂಬಿಕೆಯಿದೆ :ಗಜಣ್ಣ,ವರ್ತಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...