ವಿಷಯಕ್ಕೆ ಹೋಗಿ

ಹುಳಿಯಾರು ಹೋಬಳಿ : ಗ್ರಾ.ಪಂಗಳ ಚುನಾವಣೆ ಮೀಸಲಾತಿ ಪಟ್ಟಿ ಪ್ರಕಟ

ರಾಜ್ಯಾದ್ಯಂತ ಎರಡು ಹಂತದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ನಡೆಯಲಿದ್ದು ವಿವಿಧ ಪಂಚಾಯ್ತಿ ವ್ಯಾಪ್ತಿಯ ಮೀಸಲಾತಿ ಪಟ್ಟಿ ಕೂಡ ಪ್ರಕಟವಾಗಿದೆ. ಹುಳಿಯಾರು ಹೋಬಳಿಯಲ್ಲಿ ೨ ನೇ ಹಂತದ ಮತದಾನದ ದಿನವಾದ ಜೂನ್ ೨ ರಂದು ಚುನಾವಣೆ ನಡೆಯಲಿದೆ.
ಜಿಲ್ಲೆಯ ಅತಿದೊಡ್ಡ ಗ್ರಾಮ ಪಂಚಾಯ್ತಿ ಎಂಬ ಹೆಗ್ಗಳಿಕೆಯ ಹುಳಿಯಾರು ಪಂಚಾಯ್ತಿಯಲ್ಲಿ ಸ್ಥಾನಗಳ ಹಂಚಿಕೆ ಹಾಗೂ ಮೀಸಲಾತಿ ಪಟ್ಟಿ ಹೀಗಿದೆ
ಹುಳಿಯಾರು ಗ್ರಾ.ಪಂ.ನ ೧೩ ಬ್ಲಾಕ್ ಗಳಲ್ಲಿ ಈ ಹಿಂದೆ ೩೩ ಸ್ಥಾನಗಳಿದ್ದು ಈ ಬಾರಿ ಆ ಸ್ಥಾನಗಳನ್ನು ಹೆಚ್ಚಿಸಲಾಗಿದ್ದು ಒಟ್ಟು ೩೯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ೧ನೇ ವಾರ್ಡ್ ನಲ್ಲಿ ೨ ಸ್ಥಾನ, ೨ನೇ ವಾರ್ಡ್ ನಲ್ಲಿ ೨ ಸ್ಥಾನ,೩ನೇ ವಾರ್ಡ್ ನಲ್ಲಿ ೩ ಸ್ಥಾನ,೪ನೇ ವಾರ್ಡ್ ನಲ್ಲಿ ೨ ಸ್ಥಾನ, ೫ನೇ ವಾರ್ಡ್ ನಲ್ಲಿ ೪ ಸ್ಥಾನ, ೬ನೇ ವಾರ್ಡ್ ನಲ್ಲಿ ೩ ಸ್ಥಾನ, ೭ನೇ ವಾರ್ಡ್ ನಲ್ಲಿ ೩ ಸ್ಥಾನ, ೮ನೇ ವಾರ್ಡ್ ನಲ್ಲಿ ೪ ಸ್ಥಾನ, ೯ ನೇ ವಾರ್ಡ್ ನಲ್ಲಿ ೪ ಸ್ಥಾನ, ೧೦ನೇ ವಾರ್ಡ್ ನಲ್ಲಿ ೪ ಸ್ಥಾನ, ೧೧ನೇ ವಾರ್ಡ್ ನಲ್ಲಿ ೨ ಸ್ಥಾನ, ೧೨ನೇ ವಾರ್ಡ್ ನಲ್ಲಿ ೨ ಸ್ಥಾನ, ೧೩ನೇ ವಾರ್ಡ್ ನಲ್ಲಿ ೪ ಸ್ಥಾನಗಳಂತೆ ಹಂಚಿಕೆಯಾಗಿದೆ.
ಹುಳಿಯಾರು ೧ : ಎಸ್.ಸಿ , ಸಾಮಾನ್ಯ , ಹುಳಿಯಾರು ೨ : ಸಾಮಾನ್ಯ , ಬಿಸಿಎಂ-ಎ ಮಹಿಳೆ, ಹುಳಿಯಾರು ೩ : ಎಸ್.ಸಿ ಮಹಿಳೆ, ಬಿಸಿಎಂ-ಎ ಮಹಿಳೆ, ಸಾಮಾನ್ಯ ಮಹಿಳೆ,ಹುಳಿಯಾರು ೪: ಬಿಸಿಎಂ-ಎ , ಸಾಮಾನ್ಯ ,ಹುಳಿಯಾರು:೫ ಎಸ್ ಟಿ ಮಹಿಳೆ, ಬಿಸಿಎಂ-ಎ, ಬಿಸಿಎಂ-ಎ ಮಹಿಳೆ, ಸಾಮಾನ್ಯ ಮಹಿಳೆ, ಹುಳಿಯಾರು ೬: ಬಿಸಿಎಂ-ಎ , ಸಾಮಾನ್ಯ ಮಹಿಳೆ, ಸಾಮಾನ್ಯ, ಹುಳಿಯಾರು ೭: ಬಿಸಿಎಂ-ಎ, ಸಾಮಾನ್ಯ, ಸಾಮಾನ್ಯ ಮಹಿಳೆ, ಹುಳಿಯಾರು ೮: ಸಾಮಾನ್ಯ, ಸಾಮಾನ್ಯ ಮಹಿಳೆ, ಬಿಸಿಎಂ-ಎ ಮಹಿಳೆ, ಬಿಸಿಎಂ-ಬಿ ಮಹಿಳೆ, ಹುಳಿಯಾರು ೯: ಬಿಸಿಎಂ-ಎ, ಬಿಸಿಎಂ-ಬಿ, ಸಾಮಾನ್ಯ, ಸಾಮಾನ್ಯ ಮಹಿಳೆ, ಹುಳಿಯಾರು ೧೦ ; ಎಸ್.ಸಿ.ಮಹಿಳೆ, ಬಿಸಿಎಂ-ಎ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆ, ಹುಳಿಯಾರು ೧೧ : ಸಾಮಾನ್ಯ,ಸಾಮಾನ್ಯ ಮಹಿಳೆ, ಹುಳಿಯಾರು ೧೨ : ಬಿಸಿಎಂ-ಎ, ಸಾಮಾನ್ಯ ಮಹಿಳೆ, ಹುಳಿಯಾರು ೧೩ : ಬಿಸಿಎಂ-ಎ ಮಹಿಳೆ, ಬಿಸಿಎಂ-ಬಿ ಮಹಿಳೆ, ಸಾಮಾನ್ಯ ೨ ಸ್ಥಾನಗಳನ್ನು ಮೀಸಲಿರಿಸಲಾಗಿದೆ.
ಹೋಬಳಿ ವ್ಯಾಪ್ತಿಯ ದಸೂಡಿ, ಹೊಯ್ಸಳಕಟ್ಟೆ, ಗಾಣಧಾಳು, ಕೆಂಕೆರೆ,ಯಳನಡು, ಕೋರಗೆರೆ,ದೊಡ್ಡಬಿದರೆ, ಬರಕನಹಾಲ್ ಹಾಗೂ ಹಂದನಕೆರೆ ಹೋಬಳಿಯ ದೊಡ್ಡಎಣ್ಣೆಗೆರೆ, ಹಂದನಕೆರೆ, ಚೌಳಕಟ್ಟೆ,ತಿಮ್ಲಾಪುರ ಪಂಚಾಯ್ತಿಗಳ ಸ್ಥಾನ ಹಂಚಿಕೆ ಇಂತಿದೆ.

ದಸೂಡಿ : ಒಟ್ಟು ೬ ಬ್ಲಾಕ್ ಗೆ ೨೦ ಸ್ಥಾನ, ಹೊಯ್ಸಳಕಟ್ಟೆ : ಒಟ್ಟು ೮ ಬ್ಲಾಕ್ ಗೆ ೨೦ ಸ್ಥಾನ, ಗಾಣದಾಳು : ಒಟ್ಟು ೭ ಬ್ಲಾಕ್ ಗೆ ೧೯ ಸ್ಥಾನ, ಕೆಂಕೆರೆ : ಒಟ್ಟು ೫ ಬ್ಲಾಕ್ ಗೆ ೧೭ ಸ್ಥಾನ, ಯಳನಡು : ಒಟ್ಟು ೬ ಬ್ಲಾಕ್ ಗೆ ೧೭ ಸ್ಥಾನ, ಕೋರಗೆರೆ : ಒಟ್ಟು ೭ ಬ್ಲಾಕ್ ಗೆ ೧೫ ಸ್ಥಾನ, ದೊಡ್ಡಎಣ್ಣೇಗೆರೆ : ಒಟ್ಟು ೧೦ ಬ್ಲಾಕ್ ಗೆ ೨೧ ಸ್ಥಾನ, ಹಂದನಕೆರೆ : ಒಟ್ಟು ೭ ಬ್ಲಾಕ್ ಗೆ ೧೮ ಸ್ಥಾನ, ಚೌಳಕಟ್ಟೆ : ಒಟ್ಟು ೬ ಬ್ಲಾಕ್ ಗೆ ೧೫ ಸ್ಥಾನ, ತಿಮ್ಲಾಪುರ : ಒಟ್ಟು ೭ ಬ್ಲಾಕ್ ಗೆ ೧೭ ಸ್ಥಾನ, ದೊಡ್ಡಬಿದರೆ : ಒಟ್ಟು ೮ ಬ್ಲಾಕ್ ಗೆ ೧೭ ಸ್ಥಾನ,ಬರಕನಹಾಲ್ : ಒಟ್ಟು ೭ ಬ್ಲಾಕ್ ಗೆ ೧೬ ಸ್ಥಾನಗಳು ಹಂಚಿಕೆಯಾಗಿವೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...