ಹುಳಿಯಾರು ಸಮೀಪದ ಬರಗೀಹಳ್ಳಿ ಬೆಟ್ಟದ ಶ್ರೀ ಲಕ್ಷ್ಮಿನರಸಿಂಹಸ್ಚಾಮಿ ದೇವಾಲಯದಲ್ಲಿ ಎರಡು ದಿನಗಳಕಾಲ ಲಕ್ಷ್ಮಿನರಸಿಂಹಸ್ವಾಮಿಯ ೪೮ನೇ ವರ್ಷದ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಬರಗೀಹಳ್ಳಿ ಬೆಟ್ಟದ ಶ್ರೀ ಲಕ್ಷ್ಮಿನರಸಿಂಹಸ್ಚಾಮಿ |
ಜಯಂತಿ ಅಂಗವಾಗಿ ಶನಿವಾರ ಬೆಳಿಗ್ಗೆ ಸ್ವಾಮಿಗೆ ಪಂಚಾಮೃತಾಭಿಷೇಕ, ಸಹಸ್ರನಾಮಾರ್ಚನೆ, ಕುಂಕುಮಾರ್ಚನೆ ನಡೆದವಲ್ಲದೆ ನಂತರ ವಸಂತ ಸೇವೆ ಹಾಗೂ ಪ್ರಸಾದ ವಿತರಿಸಲಾಯಿತು. ಭಾನುವಾರದಂದು ಬೆಳಿಗ್ಗೆ ಅಷ್ಟೋತ್ತರ , ಶತನಾಮಪೂಜೆ, ಮಹಾ ನೈವೇದ್ಯದ ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಈ ವೇಳೆ ಶ್ರೀಲಕ್ಷ್ಮಿನರಸಿಂಹಸ್ವಾಮಿ ಸೇವಾ ಟ್ರಸ್ಟ್ ನ ರಂಗನಾಥರಾವ್, ಟ್ರಸ್ಟ್ ನ ಅತಿ ಹಿರಿಯ ಸದಸ್ಯ ೧೦೪ ವರ್ಷದ ವಿಶ್ವನಾಥ್ ರಾವ್, ಅರ್ಚಕ ಭಾಸ್ಕರ್ ಹಾಗೂ ಟ್ರಸ್ಟ್ ನ ಸದಸ್ಯರು ಸೇರಿದಂತೆ ಸುತ್ತಮುತ್ತಲ ಹತ್ತಾರು ಹಳ್ಳಿಯ ಗ್ರಾಮಸ್ಥರು ಆಗಮಿಸಿದ್ದು ಸ್ವಾಮಿಯ ದರ್ಶನ ಪಡೆದರು.ಸುಮಂಗಲಿಯರಿಂದ ನರಸಿಂಹದೇವರ ಸ್ತೋತ್ರ ಪಠಿಸಲಾಯಿತು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ