ವಿಷಯಕ್ಕೆ ಹೋಗಿ

ಗುಡುಗು ಸಿಡಿಲು ಸಹಿತ ಆಲಿಕಲ್ಲು ಮಳೆ ನಲುಗಿದ ದಾಳಿಂಬೆ, ಬಾಳೆ ಹಾಗೂ ಟೊಮೋಟೊ : ಆರ್ಥಿಕ ಸಂಕಷ್ಟದಲ್ಲಿ ರೈತ

ವರದಿ : ಡಿ.ಆರ್.ನರೇಂದ್ರ ಬಾಬು
-------------
ಹುಳಿಯಾರು : ಹೋಬಳಿಯಾದ್ಯಂತ ಶುಕ್ರವಾರ ಸಂಜೆ ವರುಣನ ಅವಾಂತರ ಜೋರಾಗಿತ್ತು. ಗುಡುಗು,ಸಿಡಿಲು ಸಹಿತ ಒಂದು ಗಂಟೆಗಳ ಕಾಲ ಸುರಿದ ಆಲಿಕಲ್ಲು ಸಹಿತ ಮಳೆಗೆ ನೂರಾರು ಎಕರೆ ಪ್ರದೇಶದ ದಾಳಿಂಬೆ ಬೆಳೆ, ಬಾಳೆ ಹಾಗೂ ಟಮೋಟೊ ಬೆಳೆ ನಲುಗಿದ್ದು ಬೆಳೆಗಾರರನ್ನು ಕಂಗಾಲಾಗುವಂತೆ ಮಾಡಿದೆ.


ಹೋಬಳಿಯ ಕೆಂಕೆರೆ, ಬಸವನಗುಡಿ, ಪುರದಮಠ, ಬರದಲೇಪಾಳ್ಯ, ಮೇಲನಹಳ್ಳಿ, ಗುರುವಾಪುರ, ದಸೂಡಿ,ದಬ್ಬಗುಂಟೆ, ರಂಗನಕೆರೆ, ಹೊಯ್ಸಳಕಟ್ಟೆ, ಎಣ್ಣೆಗೆರೆ, ಉಪ್ಪಿನಕಟ್ಟೆ , ಯಳನಡು ಸೇರಿದಂತೆ ಇನ್ನಿತರ ಪ್ರದೇಶದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ.
ಮುಂಗಾರು ಬೆಳೆ ಹೆಸರಿಗೆ ರೋಹಿಣಿ ಮಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ನಿನ್ನೆ ಸಂಜೆಯ ಮಳೆಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಯಿತು. ತೋಟಗಾರಿಕೆ ಬೆಳೆಗಳಾದ ಮಾವು, ದಾಳಿಂಬೆ, ಬಾಳೆ ಬೆಳೆಗಾರರಿಗೂ ಕೂಡ ಆಲಿಕಲ್ಲಿನ ಹೊಡೆತ ಅಪಾರ ನಷ್ಟಕ್ಕೀಡು ಮಾಡಿದೆ. ಬಾರಿ ಗಾಳಿಗೆ ಮಾವಿನಕಾಯಿ ಉದುರಿದ್ದು ಒಂದೆಡೆಯಾದರೆ ಮರದಲ್ಲಿನ ಕಾಯಿಗಳು ಆಲಿಕಲ್ಲಿನ ಹೊಡೆತಕ್ಕೆ ಸಿಕ್ಕಿದ್ದು ಮಾವು ಗುತ್ತಿಗೆದಾರರನ್ನು ಚಿಂತೆಗೀಡುಮಾಡಿದೆ.
ದಾಳಿಂಬೆ : ದಾಳಿಂಬೆ ಕೃಷಿ ಮಾಡುವುದರಿಂದ ಉತ್ತಮ ಆದಾಯ ಬರುತ್ತದೆಂಬ ನಿರೀಕ್ಷೆಯಿಂದ ರೈತರು ವಾಣಿಜ್ಯ ಬೆಳೆಯಾದ ದಾಳಿಂಬೆಯನ್ನು ಈ ಭಾಗದಲ್ಲಿ ಹೆಚ್ಚು ಜನ ಕೃಷಿ ಮಾಡುತ್ತಿದ್ದು, ಬ್ಯಾಂಕ್ ಹಾಗೂ ಪರಿಚಯಸ್ಥರಿಂದ ಸಾಲ ಪಡೆದು ಆ ಹಣವನ್ನೆಲ್ಲಾ ದಾಳಿಂಬೆಗೆ ಖರ್ಚು ಮಾಡಿದ್ದರು. ನಿನ್ನೆಯ ಮಳೆ ಈಗಾಗಲೇ ಹಣ್ಣಿಗೆಬಿಟ್ಟಿದ್ದ ದಾಳಿಂಬೆಗೂ ಮುಳುವಾಗಿದೆ. ದುಬಾರಿ ಕೂಲಿ, ಲೋಡ್ ಗಟ್ಟಲೆ ಗೊಬ್ಬರ ಹಾಕಿ ಮನೆಮಂದಿಯೆಲ್ಲಾ ತೋಟದಲ್ಲೆ ಕಾಲಕಳೆದು ದಾಳಿಂಬೆ ಗಿಡಗಳನ್ನು ಆರೈಕೆ ಮಾಡಿ ಬೆಳೆಸಿದ್ದು ಇದೀಗ ವ್ಯರ್ಥವಾಗಿ ಲಕ್ಷಾಂತರ ರೂಪಾಯಿ ನಷ್ಟಕ್ಕೆ ಕಾರಣವಾಗಿದೆ. ಆಲಿಕಲ್ಲು ಹೊಡೆತಕ್ಕೆ ಸಿಕ್ಕಿ ಹಣ್ಣೆಲ್ಲಾ ಬಾಯಿ ಬಿಟ್ಟು ನೆಲಕ್ಕೆ ಬಿದ್ದಿದ್ದರೆ, ಮತ್ತೆಕೆಲವೆಡೆ ದಾಳಿಂಬೆ ಗಿಡಗಳ ಕೊಂಬೆಗಳು ಮುರಿದುಕೊಂಡು ನೆಲಕಚ್ಚಿದ್ದು ಕೈಗೆ ಬಂದ ತುತ್ತುಬಾಯಿಗೆ ಬಾರದಂತಾಗಿದೆ.
ದಾಳಿಂಬೆಯನ್ನು ಹಣ್ಣಿಗೆ ಬಿಟ್ಟಿದ್ದು ಇನ್ನೊಂದು ವಾರದಲ್ಲಿ ಹಣ್ಣು ಬಿಡಿಸಬೇಕಾಗಿತ್ತು, ವ್ಯಾಪಾರಿಗಳು ಸಹ ಬಂದು ನೋಡಿಕೊಂಡು ಹೋಗಿದ್ದರು. ಇದೀಗ ಆಲಿಕಲ್ಲು ಮಳೆಗೆ ಸಿಕ್ಕಿ ನೂರಾರು ಕೆಜಿ ದಾಳಿಂಬೆ ನೆಲಕ್ಕೆ ಬಿದ್ದದ್ದೆ. ಗಿಡದಲ್ಲಿರುವ ದಾಳಿಂಬೆ ಹಣ್ಣನ್ನು ಮಾರೋಣ ಎಂದರೆ ಯಾರು ಕೇಳುತ್ತಿಲ್ಲ ನಾವು ಮಾಡಿದ್ದ ಖರ್ಚು ಸಹ ಸಿಗದಂತಾಗಿದೆ ಎನ್ನುತ್ತಾರೆ ದಾಳಿಂಬೆ ಬೆಳೆಗಾರ ಮೇಲನಹಳ್ಳಿ ಸಿದ್ದೇಗೌಡ.
ಇದೀಗ ಹಣ್ಣು ಬಿಡಿಸುವ ಸಮಯದಲ್ಲಿ ನಿರೀಕ್ಷಿಸದ ರೀತಿಯಲ್ಲಿ ಮಳೆಗೆ ಸಿಕ್ಕಿದ್ದು ಮುಂದೇನೆಂದು ದಾರಿ ತೋಚದಾಗಿದೆ. ಈಗಿನ ಸ್ಥಿತಿಯಲ್ಲಿ ಮಾಡಿದ ಸಾಲವನ್ನು ತೀರಿಸುವುದೇಗೆ. ಈ ಬಗ್ಗೆ ಸರ್ಕಾರ ಗಮನಹರಿಸಿ ದಾಳಿಂಬೆ ಬೆಳೆಗಾರರಿಗೆ ಆಗಿರುವ ನಷ್ಟಕ್ಕೆ ಪರಿಹಾರ ಕಲ್ಪಿಸಿಕೊಟ್ಟರೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಉಪ್ಪಿನಕಟ್ಟೆಯ ದಾಳಿಂಬೆ ಬೆಳೆಗಾರ ಬಸವರಾಜು ಅಲವತ್ತು ಕೊಳ್ಳುತ್ತಾರೆ.
ನೆಲಕಚ್ಚಿದ ಟಮೋಟೊ : ಹೋಬಳಿಯ ಪುರದಮಠದ ಕೆ.ಎಸ್.ವೀರೇಶ್ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಹಾಕಿದ್ದ ೬ ಸಾವಿರ ಟಮೋಟೊ ಗಿಡಗಳು ಆಲಿಕಲ್ಲು ಮಳೆಗೆ ಸಿಕ್ಕಿ ನೆಲಕಚ್ಚಿದ್ದು ಸಾವಿರಾರು ರೂಪಾಯಿ ಲುಕ್ಸಾನಾಗಿದೆ. ಇನ್ನೇನ್ನು ಫಸಲು ಬಿಡಲು ಹಂತದಲ್ಲಿದ್ದ ಟಮೋಟ ಗಿಡ ಶುಕ್ರವಾರ ಬಂದ ಮಳೆಗೆ ಬುಡಮೇಲಾಗಿ ಬಿದ್ದಿದೆ. ಸದ್ಯ ಮಾರುಕಟ್ಟೆಯಲ್ಲಿ ಟಮೋಟೋ ಕೆಜಿಗೆ ೩೦ರೂ ನಂತೆ ಮಾರಾಟವಾಗುತ್ತಿದ್ದ ಸಮಯದಲ್ಲಿ ಹೇಗೋ ಈ ಬಾರಿ ಟಮೋಟೋಗೆ ಉತ್ತಮ ಬೆಲೆ ಬಂತಲ್ಲ ಎನ್ನುವಷ್ಟರಲ್ಲಿ ಈ ರೀತಿಯಾಗಿದೆ ಎಂದು ವಿರೇಶ್ ಮಮ್ಮಲಮರುಗಿದರು.
ಒಟ್ಟಾರೆ ಶುಕ್ರವಾರ ಸಂಜೆ ಬಂದ ಮಳೆಯಿಂದ ಹೆಸರು ಬೆಳೆಗೆ ಅನುಕೂಲವಾದರೆ ದಾಳಿಂಬೆ ಬೆಳೆಗಾರರನ್ನು ಕಂಗಾಲಾಗುವಂತೆ ಮಾಡಿದ್ದು, ಒಂದೆಡೆ ಮಳೆ ಬರಲಿಲ್ಲವಲ್ಲ ಬೆಳೆ ನಾಶವಾಯ್ತು ಎನ್ನುತ್ತಿದ್ದ ರೈತರು ಈಗ ಮಳೆ ಬಂದು ಬೆಳೆ ನಾಶವಾಯ್ತಲ್ಲ ಎನ್ನುತ್ತಾ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.
ಸರಿಯಾದ ಪರಿಹಾರ ನೀಡಿ : ಮಳೆಯಿಂದಾಗುವ ಬೆಳೆ ಹಾನಿಯನ್ನು ಪರಿಶೀಲಿಸಿ ಪರಿಹಾರ ನೀಡಬೇಕಾಗಿದ್ದ ತೋಟಗಾರಿಕೆ ಇಲಾಖೆಯೇ ಈ ಕಡೆ ತಲೆ ಹಾಕದಿರುವುದು ಬೆಳೆಗಾರರಿಗೆ ಚಿಂತೆಗೀಡು ಮಾಡಿದೆ. ಬಿರುಗಾಳಿ ಸಹಿತ ಮಳೆಯಿಂದ ಪ್ರತಿವರ್ಷ ನಷ್ಟಕೀಡಾಗುತ್ತಿದ್ದರೂ ಇದುವರೆಗೂ ಇಲಾಖೆಯಿಂದ ವೈಜ್ಞಾನಿಕ ಪರಿಹಾರ ಸಿಕ್ಕಿಲ್ಲ ಎನ್ನುವುದು ರೈತರ ಅಳಲಾಗಿದೆ.ಅವೈಜ್ಞಾನಿಕವಾಗಿ ಪರಿಹಾರ ನೀಡುತ್ತಿರುವ ಬಗ್ಗೆ ಬೇಸತ್ತಿರುವ ರೈತರು ದುಬಾರಿ ಗೊಬ್ಬರ ಹಾಗೂ ಕೂಲಿ ತೆತ್ತು ಬೆಳೆದ ಬೆಳೆಗೆ ಪರಿಹಾರವೆಂದು ನೀಡುವ ಪುಡಿಗಾಸಿಗೆ ಅಲೆದಾಡುವ ಬದಲು ಸುಮ್ಮನಿರುವುದೇ ಲೇಸೆನ್ನುತ್ತಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ತುರ್ತು ಪರಿಹಾರ ನಿಧಿಯಿಂದ ಪರಿಹಾರ ಬಿಡುಗಡೆಗೊಳ್ಳಲಿದ್ದು ಈ ಬಗ್ಗೆ ಕಂದಾಯ ಹಾಗೂ ತೋಟಗಾರಿಕಾ ಇಲಾಖೆಗೆ ಸೇರಿದ ತಂಡ ಬೆಳೆಹಾನಿ ಬಗ್ಗೆ ಮಾಹಿತಿ ಪಡೆದು ತುರ್ತಾಗಿ ವರದಿ ನೀಡುವ ಅವಶ್ಯಕತೆಯಿದೆ.
---------
ನಮ್ಮ ಭಾಗದಲ್ಲಿ ಹೆಚ್ಚು ಜನ ದಾಳಿಂಬೆ ಮಾಡಿದ್ದನ್ನು ಕಂಡು ನಾನು ಸಹ ಮೊದಲು ಒಂದೆರಡು ಎಕರೆಯಲ್ಲಿ ದಾಳಿಂಬೆ ಮಾಡಿದೆ. ಉತ್ತಮ ಆದಾಯಬಂದಿತ್ತು ಆದರೆ ಈ ಸಲ ೨ ಲಕ್ಷಕ್ಕೂ ಹೆಚ್ಚಿನ ಹಣ ಖರ್ಚುಮಾಡಿದ್ದೆ, ಮಳೆಯಿಂದಾಗಿ ಅದರಲ್ಲಿ ಒಂದು ರೂಪಾಯಿಯೂ ವಾಪಸ್ಸ್ ಕೈಗೆ ಬರದಂತಾಗಿದೆ : ದಾಳಿಂಬೆ ಬೆಳೆಗಾರ ಬಳ್ಳಿಚಂದ್ರು.ಕೆಂಕೆರೆ.
---------

ಬಾಳೆ ಬೆಳೆಗೆ ಹಾನಿ : ಮೇಲನಹಳ್ಳಿಯ ಎಂ.ಟಿ.ಸಣ್ಣಕರಿಯಪ್ಪನವರಿಗೆ ಸೇರಿದ 800 ಬಾಳೆಗಿಡ, ಚಂದ್ರಯ್ಯನವರಿಗೆ ಸೇರಿದ 800 ಬಾಳೆಗಿಡ, ಭದ್ರಯ್ಯನವರಿಗೆ ಸೇರಿದ 400 ಬಾಳೆ, ಕರಿಯಪ್ಪನವರಿಗೆ ಸೇರಿದ 300 ಬಾಳೆ, ಸಣ್ಣಕರಿಯಪ್ಪನವರಿಗೆ ಸೇರಿದ 500 ಬಾಳೆಗಿಡ ಮಳೆಯ ಆರ್ಭಟಕ್ಕೆ ನಲುಗಿದೆ. ಗುರುವಾಪುರ ಮಲ್ಲಯ್ಯನವರ ತೋಟದಲ್ಲಿ ಸಿಡಲಿಗೆ 2 ತೆಂಗಿನಮರ, ದಾಳಿಂಬೆ, ಬಾಳೆತೋಟ ಹಾಳಾದರೆ ರೇಣುಕಪ್ರಸಾದ್ ಅವರ 600 ಬಾಳೆಗಿಡ , ಜಿ.ಎಸ್.ಶ್ರೀನಿವಾಸ್ ಅವರ 750 ದಾಳಿಂಬೆಗಿಡವೂ ಹಾಳಾಗಿ ಅಪಾರ ನಷ್ಟ ಸಂಭವಿಸಿದೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಸಂಕಷ್ಟದಲ್ಲಿದ್ದ ಬುದ್ಧಿಮಾನ್ಯ ಯುವಕನಿಗೆ ಇಮ್ರಾಜ್ ಬಳಗದಿಂದ ಆಸರೆ; ಮಾನವೀಯತೆ ಮೆರೆದ ಯುವಕರು

ಹುಳಿಯಾರು : " ಮಾನವೀಯತೆ ಎಲ್ಲಕ್ಕಿಂತ ದೊಡ್ಡದು " ಎಂಬ ಮಾತನ್ನು ಹುಳಿಯಾರಿನ ಯುವಕರ ತಂಡವೊಂದು ನಿಜ ಮಾಡಿ ತೋರಿಸಿದೆ.               ಇಲ್ಲಿನ ಎಪಿಎಂಸಿ ಆವರಣದಲ್ಲಿ ದಿಕ್ಕುತೋಚದೆ, ಅಸಹಾಯಕ ಸ್ಥಿತಿಯಲ್ಲಿದ್ದ ಬುದ್ಧಿಮಾನ್ಯ ಯುವಕನೊಬ್ಬನಿಗೆ ಆಸರೆಯಾಗುವ ಮೂಲಕ ಸ್ಥಳೀಯ ಯುವಕರು ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆ :ಹುಳಿಯಾರಿನ ಎಪಿಎಂಸಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬುದ್ಧಿಮಾನ್ಯ ಯುವಕನೊಬ್ಬ ಒಂಟಿಯಾಗಿ ಅಲೆಯುತ್ತಿದ್ದನು. ಸರಿಯಾದ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಆತ ತೀವ್ರ ಸಂಕಷ್ಟದಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಯುವಕ ಇಮ್ರಾಜ್ ಮತ್ತು ಅವರ ಸ್ನೇಹಿತರ ಬಳಗವು ತಕ್ಷಣವೇ ಆತನ ನೆರವಿಗೆ ಧಾವಿಸಿತು. ಸಕಾಲಿಕ ಸ್ಪಂದನೆ :ಯುವಕನ ಸ್ಥಿತಿಯನ್ನು ಕಂಡು ಮನನೊಂದ ಸ್ನೇಹಿತರಾದ ಇಮ್ರಾಜ್, ಜಬಿ ಉಲ್ಲಾಖಾನ್ ಫರ್ಮಾನ್, ಅಬ್ದುಲ್ಲಾ, ನವಾ ಶರೀಫ್, ಜಿಶನ್ ಹಾಗೂ ಫಯಾಜ್ ಅವರು ಮೊದಲು ಆತನಿಗೆ ಆಹಾರದ ವ್ಯವಸ್ಥೆ ಮಾಡಿದರು. ನಂತರ ಆತನ ಸುರಕ್ಷತೆಗಾಗಿ ಕ್ರಮ ಕೈಗೊಂಡರು. ಇಲಾಖೆಯ ಸುಪರ್ದಿಗೆ: ಯುವಕರ ಮನವಿಗೆ ಸ್ಪಂದಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, "ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ನಾವು ಇಲ್ಲಿಗೆ ಬಂದಿದ್ದು, ...