ವಿಷಯಕ್ಕೆ ಹೋಗಿ

ಹುಳಿಯಾರು ಪಂಚಾಯ್ತಿ : ಅಖಾಡದಲ್ಲಿ ೧೬೧ ಅಭ್ಯರ್ಥಿಗಳು ೨೬ ಮಂದಿ ನಾಮಪತ್ರ ವಾಪಸ್ಸ್

ಸ್ಥಳೀಯ ಗ್ರಾ.ಪಂ.ಚುನಾವಣೆಗಳಲ್ಲಿ ಕುತೂಹಲ ಕೆರಳಿಸಿರುವ ಹುಳಿಯಾರು ಗ್ರಾ.ಪಂ ಯ ೩೯ ಸದಸ್ಯ ಸ್ಥಾನಗಳಿಗೆ ಒಟ್ಟು ೧೯೦ ಉಮೇದುವಾರಿಕೆ ಸಲ್ಲಿಕೆಯಾಗಿ, ೩ ನಾಮಪತ್ರ ತಿರಸ್ಕೃತವಾಗಿ ಉಳಿದಿದ್ದ ೧೮೭ ಆಕಾಂಕ್ಷಿಗಳ ಪೈಕಿ ಸೋಮವಾರ ೨೬ ಮಂದಿ ತಮ್ಮ ನಾಮಪತ್ರ ವಾಪಸ್ಸ್ ಪಡೆದಿದ್ದು ಅಂತಿಮವಾಗಿ ಒಟ್ಟು ೧೬೧ ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿದ್ದಾರೆ.
ಹುಳಿಯಾರು ಗ್ರಾ.ಪಂ. ಆವರಣದಲ್ಲಿ ಚಿಹ್ನೆ ಪಡೆಯಲು ಬೆಂಬಲಿಗರೊಂದಿಗೆ ಕಾದುನಿಂತಿದ್ದ ಅಭ್ಯರ್ಥಿಗಳು.
ಹರಸಾಹಸ: ಕಳೆದೆರಡು ದಿನಗಳಿಂದ ತಮ್ಮತಮ್ಮ ವಾರ್ಡ್ ಗಳಲ್ಲಿ ಗೆಲ್ಲಲು ಅಡ್ಡಿಯಾಗಿರುವ ಕೆಲವರ ನಾಮಪತ್ರ ವಾಪಸ್ಸ್ ತೆಗೆಯಲು ಹರಸಾಹಸ ನಡೆಸಿದ್ದ ಕೆಲ ಅಭ್ಯರ್ಥಿಗಳು. ಎದುರಾಳಿಗಳಿಗೆ ನಾನಾರೀತಿಯ ಅಮೀಷವೊಡ್ಡಿ, ಪ್ರಭಾವಿಗಳಿಂದ ಹೇಳಿಸಿ, ರಾಜಕೀಯ ನಾಯಕರುಗಳಿಂದ ಒತ್ತಡ ತರುವ ಮೂಲಕ ಮನವೊಲಿಸಿ ಇಂದು ಪಂಚಾಯ್ತಿಯಲ್ಲಿ ನಾಮಪತ್ರ ವಾಪಸ್ಸ್ ಪಡಿಸುವಂತೆ ಮಾಡುವಲ್ಲಿ ಸಫಲರಾದರು. ಅವರನ್ನು ಎಲ್ಲೂ ಹೋಗದಂತೆ ಕಾಯ್ದುಕೊಂಡಿದ್ದು ಇಂದು ಮಧ್ಯಾಹ್ನ ೩ರರೊಳಗೆ ನಾಮಪತ್ರ ವಾಪಸ್ಸ್ ತೆಗೆಸುವ ಮೂಲಕ ನಿಟ್ಟುಸಿರು ಬಿಟ್ಟರು. ನಾಮಪತ್ರ ವಾಪಸ್ಸ್ ಪಡೆಯುವ ಹಿನ್ನಲೆಯಲ್ಲಿ ಗ್ರಾ.ಪಂ.ಆವರಣ ಬಾರಿ ಜನಸ್ತೋಮದಿಂದ ತುಂಬಿತುಳುಕುತ್ತಿತ್ತು.
ಜಿಲ್ಲೆಯಲ್ಲಿಯೇ ದೊಡ್ಡ ಪಂಚಾಯ್ತಿ ಹಾಗೂ ಹೆಚ್ಚು ಸದಸ್ಯ ಸ್ಥಾನ ಹೊಂದಿರುವ ಖ್ಯಾತಿ ಹೊಂದಿರುವ ಹುಳಿಯಾರು ಗ್ರಾ.ಪಂ. ಚುನಾವಣೆ ಈ ಬಾರಿ ಜಿದ್ದಾಜಿದ್ದಿನಿಂದ ಕೂಡಿದೆ. ಇಂದು ಚಿಹ್ನೆ ಪಡೆದಿರುವ ಅಭ್ಯರ್ಥಿಗಳು ಕರಪತ್ರ ಮಾಡಿಸಲು ಮುಂದಾಗಿದ್ದು ಪ್ರಚಾರಕ್ಕೆ ಶುರುವಿಟ್ಟುಕೊಂಡಿದ್ದಾರೆ. ಪಟ್ಟಣದ ೧೩ ಬ್ಲಾಕ್ ಗಳಲ್ಲಿ ೩೯ ಸ್ಥಾನಕ್ಕೆ ೧ : ೪ ರ ಪ್ರಮಾಣದಲ್ಲಿ ಒಟ್ಟು ೧೬೧ ಅಭ್ಯರ್ಥಿಗಳು ಕಣದಲ್ಲಿದ್ದು ಮತದಾರರಲ್ಲಿ ಈ ಬಾರಿ ಯಾರು ಗೆಲ್ಲುತ್ತಾರೆಂಬ ಕುತೂಹಲಕ್ಕೆಡೆ ಮಾಡಿಕೊಟ್ಟಿದೆ.
ನಾಮಪತ್ರ ವಾಪಸ್ಸ್ ಪಡೆದವರು : ೧ ನೇ ಬ್ಲಾಕ್ ನಲ್ಲಿ ಇಬ್ಬರು ( ಜಗದೀಶ್ ಹಾಗೂ ಬಿ.ಎಸ್. ಮೋಹನ್) , ೨ ನೇ ಬ್ಲಾಕ್ ನಲ್ಲಿ ನಾಲ್ವರು (ತಬಸುಂ ಸುಲ್ತಾನ್,ಹೆಚ್.ಎಲ್.ನಾಗರಾಜನ್ ಹೆಚ್.ಪಿ.ರಾಘವೇಂದ್ರ,ರಿಜ್ವಾನ್ ಭಾನು),೩ ನೇ ಬ್ಲಾಕ್ ನಿಂದ ನೂರ್ಜಾನ್ ಬೀ, ೪ ನೇ ಬ್ಲಾಕ್ ನಲ್ಲಿ ಇಬ್ಬರು ( ಹೆಚ್.ಆರ್.ಓಂಕಾರಮೂರ್ತಿ,ಹೆಚ್.ಎನ್.ಗವಿರಂಗನಾಥ್), ೫ ನೇ ಬ್ಲಾಕ್ ನಲ್ಲಿ ಇಬ್ಬರು ( ಇನಾಯತ್, ಎಸ್.ಜಯಮ್ಮ),೬ ನೇ ಬ್ಲಾಕ್ ನಲ್ಲಿ ಮೂವರು( ಹೆಚ್.ಎನ್.ಕುಮಾರ್, ಹೆಚ್.ಎಸ್.ಮೋಹನ್ ಕುಮಾರ್,ಹೆಚ್.ಎಲ್.ನಾಗರಾಜನ್) , ೭ ನೇ ಬ್ಲಾಕ್ ನಲ್ಲಿ ಯಾವುದು ಇಲ್ಲ, ೮ ನೇ ಬ್ಲಾಕ್ ನಲ್ಲಿ ಆರು ಮಂದಿ ( ಗಂಗಮ್ಮ,ಜಯಮ್ಮ,ಫೈರೋಜ್,ಸಿದ್ದಗಂಗಮ್ಮ, ಸಯ್ಯದ್ ಮೊಹಿದ್ದೀನ್, ಸೈಯ್ಯದ್ ಮೆಹಬೂಬ್), ೯ ನೇ ಬ್ಲಾಕ್ ನಲ್ಲಿ ಮೂವರು ( ನಾಗೇಂದ್ರಪ್ಪ,ಮಲ್ಲಿಕ್ ಸಾಬ್, ಸೈಯ್ಯದ್ ಇಂತಾಜ್ ಪಾಷ),೧೦ ನೇ ಬ್ಲಾಕ್ ನಲ್ಲಿ ಇಬ್ಬರು ( ದಯಾಮಣಿ, ಮಹೇಶ್), ೧೧ ಮತ್ತು ೧೨ ನೇ ಬ್ಲಾಕ್ ನಲ್ಲಿ ಯಾವುದು ಇಲ್ಲ , ೧೩ ನೇ ಬ್ಲಾಕ್ ಸೈಯದ್ ಹಫೀಕ್ ಸೇರಿದಂತೆ ಒಟ್ಟು ೨೬ ಮಂದಿ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ.
ನಾಮಪತ್ರ ವಾಪಸ್ಸ್ ಪಡೆದು ಉಳಿದ ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ವಿಂಗಡಿಸಲಾಯಿತು.
ಯಾವ ಚಿಹ್ನೆಗೆ ಹೆಚ್ಚು ಬೇಡಿಕೆ : ಸೂಚನಾ ಫಲಕದಲ್ಲಿ ೮೦ಕ್ಕೂ ಅಧಿಕ ಚಿಹ್ನೆಗಳನ್ನು ಹಾಕಿದ್ದರೂ ಸಹ ಕೆಲ ಚಿಹ್ನೆಗಳ ಬೇಡಿಕೆ ಹೆಚ್ಚಿದ್ದು ಕಂಡುಬಂತು. ಆಟೋ, ಟಿವಿ, ಗ್ಯಾಸ್ ಸಿಲಿಂಡರ್,ತೆಂಗಿನಕಾಯಿ, ಹಣ್ಣಿನ ಬುಟ್ಟಿ, ಫ್ರೆಶರ್ ಕುಕ್ಕರ್ ಚಿಹ್ನೆಗಳನ್ನೇ ಹೆಚ್ಚು ಅಭ್ಯರ್ಥಿಗಳು ಸೂಚಿಸಿದ್ದರು.

ಒಟ್ಟಾರೆ ಹುಳಿಯಾರು ಗ್ರಾ.ಪಂ. ಚುನಾವಣೆ ಎಲ್ಲರಲ್ಲೂ ಕುತೂಹಲ ಕೆರಳಿಸಿದ್ದು, ಅಭ್ಯರ್ಥಿಗಳಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಇದೀಗ ಚುನಾವಣೆ ಕಾವು ಹೆಚ್ಚಾಗಿ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿನಿಂದ ಕೂಡಿದ್ದು ಯಾರುಯಾರು ಗ್ರಾ.ಪಂ. ಸದಸ್ಯ ಸ್ಥಾನವನ್ನು ತಮ್ಮದಾಗಿಸಿಕೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಮಾಡಾಳು ಶ್ರೀಗಳಿಂದ ಹುಳಿಯಾರಿನಲ್ಲಿ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆ

ಹುಳಿಯಾರು : ತಿರುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಯಾರು ತಿಮ್ಲಾಪುರ ಗೇಟ್ ಸಮೀಪ ಭಾರತ್‌ ಪೆಟ್ರೋಲಿಯಂ ಅವರ "ತಿರುಮಲ ಫ್ಯೂಯಲ್ಸ್"  ನೂತನ‌ ಪೆಟ್ರೋಲ್ ಬಂಕ್‌ಗೆ ಅರಸೀಕೆರೆ ತಾಲೂಕು ಮಾಡಾಳಿನ ಶ್ರೀ ನಿರಂಜನ ಪೀಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಚಾಲನೆ ನೀಡಿದರು.                    ಪೆಟ್ರೋಲ್ ಪಂಪ್‌ಗೆ ಚಾಲನೆ ನೀಡಿ  ಮಾತನಾಡಿದ ಅವರು ನೂತನವಾಗಿ ಪೆಟ್ರೋಲ್ ಬಂಕ್ ನಿರ್ಮಾಣವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದ್ದು ಅವರುಗಳಿಗೆ ಹತ್ತಿರದಲ್ಲಿಯೇ ಪೆಟ್ರೋಲ್ ಬಂಕ್ ಸ್ಥಾಪನೆಯಾಗಿರುವುದು ಅನುಕೂಲಕರವಾಗಿದ್ದು ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವವರ ಮೂಲಕ ಬಂಕ್ ಲಾಭದಾಯಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಶುಭ ಹಾರೈಸಿದರು.                         ಈ ಸಂದರ್ಭದಲ್ಲಿ ಬಂಕ್ ಮಾಲೀಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು ಆಗಿರುವ ಬೇಕರಿ ಪ್ರಕಾಶ್, ಕರವೇ ಹುಳಿಯಾರು ಘಟಕದ ಅಧ್ಯಕ್ಷ ಗೌಡಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಕರವೇ ಗೌರವಾಧ್ಯಕ್ಷ ಗುರುಮೂರ್ತಿ, ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...