ಹುಳಿಯಾರು : ಪಟ್ಟಣದ ಬಸ್ ನಿಲ್ದಾಣದ ಕೆರೆ ಅಂಗಳದಲ್ಲಿನ ಅಂಗಡಿದಾರರಿಗೆ ಅಂಗಡಿ ತೆರವುಗೊಳಿಸುವಂತೆ ನೋಟೀಸ್ ನೀಡಿದ್ದು ಒಂದೆಡೆಯಾದರೆ , ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ಶ್ರೀಅನಂತಶಯನ ರಂಗನಾಥಸ್ವಾಮಿ ದೇವಾಲಯದ ಹತ್ತಿರದ ಅಂಗಡಿಗಳಿಗೂ ಸಹ ನೋಟೀಸ್ ನೀಡಿ ಫೆ.೧ರ ಒಳಗಾಗಿ ತೆರವುಗೊಳಿಸುವಂತೆ ತಿಳಿಸಿರುವುದು ಗೊಂದಲಕ್ಕೆಡೆ ಮಾಡಿದೆ. ರಂಗನಾಥಸ್ವಾಮಿ ದೇವಾಲಯಕ್ಕೆ ಹೊಂದಿಕೊಂಡಂತೆ ಇರುವ ಅಂಗಡಿಗಳು. ಕಳೆದೆರಡು ಮೂರು ತಿಂಗಳಿನಿಂದ ಕೆರೆ ಒತ್ತುವರಿ ಸಂಬಂಧಿಸಿದಂತೆ ಮನೆಗಳು ಹಾಗೂ ಅಂಗಡಿಗಳ ಪಟ್ಟಿ ಮಾಡಿ ತೆರವುಗೊಳಿಸಲು ಸೂಚಿಸಲಾಗಿತ್ತು. ನಿವಾಸಿಗಳು ಹಾಗೂ ಅಂಗಡಿದಾರರು ಸಂಸದರು ಹಾಗೂ ಸಚಿವರ ಮೂಲಕ ಒತ್ತಡ ತಂದ ಪರಿಣಾಮ ಜನವರಿ ೩೧ಕ್ಕೆ ಅಂತಿಮ ಗಡುವು ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಕೆರೆಗೆ ಹೊಂದಿಕೊಂಡಂತೆ ಇರುವ ಅಂಗಡಿದಾರರ ಪಟ್ಟಿ ಮಾಡಿದಂತೆ ಅವರುಗಳಿಗೆ ನೋಟೀಸ್ ನೀಡುವ ಕಾರ್ಯ ಗುರುವಾರ ಜರುಗಿತು. ಕೆರೆ ಒತ್ತುವರಿ ಮಾಡಿರುವ ಅಂಗಡಿಯವರಿಗೆ ಮಾತ್ರ ನೋಟೀಸ್ ಜಾರಿ ಮಾಡಬೇಕಾಗಿದ್ದ ಅಧಿಕಾರಿಗಳು ಇದೀಗ ಹೊಸ ನೆಪವೊಡ್ಡಿ ಇದರೊಂದಿಗೆ ಪಟ್ಟಣದ ಮುಜುರಾಯಿ ಇಲಾಖೆಗೆ ಸೇರಿದ ರಂಗನಾಥಸ್ವಾಮಿ ದೇವಾಲಯಕ್ಕೆ ಹೊಂದಿಕೊಂಡಂತಿರುವ ಅಂಗಡಿದಾರರಿಗೂ ನೋಟೀಸ್ ಜಾರಿ ಮಾಡಿದ್ದಾರೆ. ದೇವಾಲಯದ ಬಳಿ ಇರುವ ಪೆಟ್ಟಿಗೆ ಅಂಗಡಿದಾರರಿಗೆ ಫೆ.೧ರ ಒಳಗಾಗಿ ತಮ್ಮ ಅಂಗಡಿಗಳನ್ನು ತೆರವುಗೊಳಿಸುವಂತೆ ನೋಟೀಸ್ ನೀಡಿದ್ದು ಈ ಅಂಗಡಿದಾರರಲ್ಲಿ...
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070