ಹುಳಿಯಾರು ಪಟ್ಟಣದ ಶ್ರೀ ಬೀರಲಿಂಗೇಶ್ವರಸ್ವಾಮಿಯ ಪಟ್ಟದ ಬಸವ ಮಂಗಳವಾರ ಮೃತಪಟ್ಟಿದ್ದು, ಬುಧವಾರದಂದು ಮೃತ ಬಸವನ ಪಾರ್ಥಿವ ಶರೀರವನ್ನು ಗ್ರಾಮದ ಮುಖ್ಯಸ್ಥರೆಲ್ಲಾ ಸೇರಿ ಉತ್ಸವ ನಡೆಸಿ ಬೀರದೇವರ ಮೂಲಸ್ಥಾನ ಬೀರದೇವರಕಟ್ಟೆ ಹತ್ತಿರ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ನಡೆಸಿದರು.
![]() |
ಹುಳಿಯಾರಿನ ಶ್ರೀಬೀರಲಿಂಗೇಶ್ವರಸ್ವಾಮಿಯ ಪಟ್ಟದ ಬಸವ ಮೃತಪಟ್ಟ ಹಿನ್ನಲೆಯಲ್ಲಿ ಅದರ ಪಾರ್ಥಿವ ಶರೀರವನ್ನು ಟ್ರ್ಯಾಕ್ಟರ್ ನಲ್ಲಿ ಮೆರವಣಿಗೆ ಮಾಡಲಾಯಿತು. |
ಕಳೆದ ಹತ್ತದಿನೈದು ವರ್ಷಗಳ ಹಿಂದೆ ಈ ಬಸವನನ್ನು ಬೀರಲಿಂಗೇಶ್ವರಸ್ವಾಮಿಯ ಪಟ್ಟದ ಬಸವವಾಗಿ ಬಿಟ್ಟಿದ್ದು ಜಾತ್ರೆ, ಕಾರ್ತೀಕ ಸಮಯದಲ್ಲಿ ಈ ಬಸವನಿಗೆ ನಗಾರಿ ಹಾಕಲಾಗುತ್ತಿತ್ತು. ಅಲ್ಲದೆ ಈ ಬಸವವನ್ನು ಬೀರಲಿಂಗೇಶ್ವರಸ್ವಾಮಿಯ ಪ್ರತಿರೂಪವೆಂದು ಜನ ಆರಾಧಿಸುತ್ತಿದ್ದರು. ಬಸವನಿಗೆ ವಯಸ್ಸಾಗಿದ್ದ ಕಾರಣ ಮೃತಪಟ್ಟಿದ್ದು, ಬಸವನನ್ನು ಕೆ.ಸಿ.ಪಾಳ್ಯ,ಲಿಂಗಪ್ಪನಪಾಳ್ಯ ಹಾಗೂ ಹುಳಿಯಾರಿನಲ್ಲಿ ಮೆರವಣಿಗೆ ಮಾಡಿದರು ಈ ವೇಳೆ ಬೀರಲಿಂಗೇಶ್ವರಸ್ವಾಮಿ ದೇವಾಲಯ ಸಮಿತಿಯವರು,ಗುಡಿಗೌಡರು,ಭಂಡಾರಿಗಳು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ